ಮಂಡ್ಯ ನಗರ ಸಾರಿಗೆ ಇಲ್ಲದೇ ಜನತೆ ಹೈರಾಣ !
ನಗರದಲ್ಲಿನ ಬಡ ಕಾಲೇಜು ವಿದ್ಯಾರ್ಥಿಗಳು, ನಾಗರೀಕರು, ವೃದ್ಧರು ಖಾಸಗಿ ವ್ಯವಸ್ಥೆಯನ್ನೇ ಅವಲಂಬಿ ಸುವಂತೆ ಪರಿಸ್ಥಿತಿ ನಿರ್ಮಿಸಲಾಗಿದೆ. ಇದಕ್ಕೆ ನಗರದಲ್ಲಿದ್ದ “ಮಿಡಿ ಬಸ್" ವ್ಯವಸ್ಥೆಯನ್ನು ಸ್ಥಗಿತ ಗೊಳಿಸಿರುವುದೇ ಕಾರಣ. ಕೋವಿಡ್ ಸಂದರ್ಭಕ್ಕೂ ಮೊದಲು ನಗರದ ಬಡವಾಸಿಗಳಿಗೆ ಅನುಕೂಲ ವಾಗುವಂತೆ ಸಾಮಾನ್ಯ ಗಾತ್ರಕ್ಕಿಂತ ಸಣ್ಣ ಗಾತ್ರದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.