#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ
ಚಿಕ್ಕಬಳ್ಳಾಪುರ
ಮೈಕ್ರೋ ಪೈನಾನ್ಸ್ ಕಚೇರಿಗೆ ಎಚ್ಚರಿಕೆ ನೋಟಿಸ್ ನೀಡಿವ ಮೂಲಕ ರೈತ ಸಂಘ ಪ್ರತಿಭಟನೆ: ರೈತ ಸಂಘದ ಅಧ್ಯಕ್ಷ ಲಕ್ಷ್ಮಿ ನಾರಾಯಣ್

ಸಾಲ ತೀರಿಸಲು ಮತ್ತೊಂದು ಸಾಲಕ್ಕೆ ಮೊರೆ ಹೋಗುವುದು ಸಾಮಾನ್ಯವಾಗಿದೆ

ಜೈಲ್ ಭರೊ ಚಳುವಳಿ ಬಾರುಕೋಲು ಚಳಿವಳಿ ಬಂಡಿಯಾತ್ರೆ ನಗುವ ಚಳುವಳಿ ಮೂಲಕ  ರೈತರನ್ನು ಬಡಿದೆಬ್ಬಿಸಿದರು. ಮಾಜಿ ಮುಖ್ಯಮಂತ್ರಿ ದಿ.ಎಂ.ಎಸ್.ಕೃಷ್ಣ ಅಧಿಕಾರಿದಲ್ಲಿ ರೈತರಿಗೆ 14 ಗಂಟೆ ಹಗಲು ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸಲು ಧರಣಿ ಮಾಡಿ ರೈತರಿಗೆ ಹೊಸ ಬಾಳು ರೂಪಿಸಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು

Chikkaballapur News: ಬಾಲ್ಯ ವಿವಾಹ ಶಿಕ್ಷರ್ಹಾ ಅಪರಾಧ : 18 ವರ್ಷಕ್ಕೂ ಮೊದಲು ಮದುವೆ ಮಾಡಬಾರದು : ಜಿ.ಸೋಮಯ್ಯ

ವಿದ್ಯಾರ್ಥಿಗಳು ಮೊದಲು ಶಿಕ್ಷಣದ ಕಡೆ ಹೆಚ್ಚಿನ ಗಮನ ನೀಡಬೇಕು

ವಿದ್ಯಾರ್ಥಿಗಳು ಮೊದಲು ಶಿಕ್ಷಣದ ಕಡೆ ಹೆಚ್ಚಿನ ಗಮನ ನೀಡಬೇಕು, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾ ಧವಾಗಿದ್ದು, ಹೆಣ್ಣು ಮಕ್ಕಳಿಗೆ ೧೮ ವರ್ಷ, ಗಂಡು ಮಕ್ಕಳಿಗೆ ೨೧ ವರ್ಷ ತುಂಬಿದ ನಂತರ ಮದುವೆ ಮಾಡಿಕೊಳ್ಳಬೇಕು, ಯಾರಾದರೂ ಕಾನೂನು ಮೀರಿ ಮದುವೆ ಮಾಡಿದರೆ ಕುಟುಂಬ ಸಮೇತ  ಹಾಗೂ ಮದುವೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶಿಕ್ಷೆಯಾಗುತ್ತದೆ ಎಂದು ವಿದ್ಯಾರ್ಥಿ ಗಳಿಗೆ ತಿಳಿಸಿದರು

ಫೆ.15ರಂದು ಏಕಲವ್ಯ ವಸತಿಯ ೬ನೇ ತರಗತಿ ಪ್ರವೇಶ ಪರೀಕ್ಷೆ ಶಿಷ್ಟಾಚಾರದಂತೆ ನಡೆಯಬೇಕು: ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್

ಏಕಲವ್ಯ ವಸತಿ ಶಾಲೆಯ ೬ನೇ ತರಗತಿ ಪ್ರವೇಶಾತಿ ಪರೀಕ್ಷೆ

ಪರೀಕ್ಷಾ ದಿನದಂದು ಪರೀಕ್ಷೆಗೆ ಹಾಜರಾಗುವ ಮತ್ತು ಗೈರು ಹಾಜರಾಗುವ ಅಭ್ಯರ್ಥಿಗಳ ವಿವರ ಗಳನ್ನು ಆನ್ಲೈನ್ ಮೂಲಕ ದಾಖಲಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಪರೀಕ್ಷಾ ಕೊಠಡಿಯ ಆಸನ  ವ್ಯವಸ್ಥೆಯ ಮಾಹಿತಿಯನ್ನು ಕಾಲೇಜಿನ ಆವರಣದಲ್ಲಿನ ೩ ರಿಂದ ೪ ಕಡೆ ಸೂಚನಾ ಫಲಕಗಳನ್ನು ಸ್ಥಾಪಿಸಿ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳು ಒಂದೇ ಕಡೆ ಗುಂಪು ಸೇರುವುದನ್ನ  ನಿವಾರಿಸಬೇಕು ಎಂದರು

ವಿದ್ಯಾರ್ಥಿನಿಯರು ತಮ್ಮ ಜೀವನಕ್ಕೆ ಅತೀ ಅವಶ್ಯಕವಾದ ಕೌಶಲ್ಯಗಳನ್ನು ಕಾಲೇಜಿನ ದಿನಗಳಲ್ಲೇ ಅಳವಡಿಸಿಕೊಳ್ಳಬೇಕು: ಎನ್.ಎಂ.ಜಗದೀಶ್ ಸಲಹೆ

ಶಿಸ್ತಿನಂತಹ ಮೌಲ್ಯಾಧರಿತ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಮುಖ್ಯ

ಜೀವನ ಮೌಲ್ಯಗಳನ್ನು ಗುರು ಹಿರಿಯರಿಗೆ ಗೌರವ ನೀಡುವ ಮೂಲಕ ಮೈಗೂಡಿಸಿಕೊಳ್ಳಬೇಕು ಹಾಗೂ ಯಶಸ್ವಿ ಜೀವನಕ್ಕಾಗಿ ಸಮಯ ನಿರ್ವಹಣೆ, ಸಮಸ್ಯೆ ಪರಿಹಾರ, ಸಂವಹನ, ತೀರ್ಮಾನ ತೆಗೆದುಕೊಳ್ಳು ವುದು, ತಾಳ್ಮೆ, ಸಹಕಾರ, ಆತ್ಮವಿಶ್ವಾಸ, ಆಲೋ ಚನೆ, ನೈತಿಕತೆ ಮತ್ತು ಶಿಸ್ತಿನಂತಹ ಮೌಲ್ಯಾಧಾರಿತ ಕೌಶಲ್ಯಗಳನ್ನು ಬೆಳೆಸಿ ಕೊಳ್ಳವುದು ಮುಖ್ಯ ಎಂದು ಸಲಹೆ ನೀಡಿದರು.

Chikkaballapur Breaking: ಪಶುಸಂಗೋಪನೆ ಇಲಾಖೆ ನೆರವು ನೀಡುವ ಮೂಲಕ ರೈತರ ಕೈಹಿಡಿಬೇಕಿದೆ

ಟ್ರಾನ್ಸ್ ಫಾರ್ಮರ್ ಬೆಂಕಿ ಹುಲ್ಲಿನ ಬಣವೆಗೆ ತಾಗಿ ಭಸ್ಮ: ಕಂಗಾಲಾದ ರೈತ

ರಂಗಪ್ಪ ಆರು ಸೀಮೆ ಹಸುಗಳನ್ನು ಸಾಕಿಕೊಂಡು,ಅವುಗಳ ನಿರ್ವಹಣೆ ಮಾಡಿ,ಅವು ನೀಡುವ ಹಾಲಿ ನಿಂದ ಬಂದ ಹಣದಿಂದ ಕುಟುಂಬ ಸಾಗಿಸುತ್ತಿದ್ದರು.ಬೇಸಿಗೆಯಲ್ಲಿ ಹುಲ್ಲಿಗೆ ಬರ ವಿರಬಾರದು ಎಂದು ಮುಂದಾಲೋಚನೆಯಿAದ ಹುಲ್ಲು ಕೊಂಡು ಬಣವೆ ಮಾಡಿದ್ದರು. ತಮ್ಮ ಆರು ಸೀಮೆ ಹಸುಗಳಿಗಾಗಿ ಸುಮಾರು ೫೦ ಸಾವಿರ ಬೆಲೆ ಬಾಳುವ ಒಣ ಹುಲ್ಲನ್ನು ಸಂಗ್ರಹಿಸಿ ತಮ್ಮ ಜಮೀನಿನ ಬಳಿ ಬಣವೆ ಹಾಕಿಕೊಂಡಿದ್ದರು

Chikkaballapur News: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ವಾತ್ಸಲ್ಯ” ಮನೆ ಹಸ್ತಾಂತರ

ಮಾತೋಶ್ರೀ ಅಮ್ಮ ನವರ ಆಶಯದಂತೆ ವಾತ್ಸಲ್ಯ ಮನೆ ರಚನೆ

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಕ್ಷೇತ್ರ ಅನೇಕ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿದೆ. ಸಮಾಜದ ಬಗ್ಗೆ ಅಪಾರ ಕಾಳಜಿ ವಹಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಾಡುವ ಕಾರ್ಯ ನಮ್ಮೆಲ್ಲರಿಗೂ ಪ್ರೇರಣೆ ಮತ್ತು ಮಾದರಿಯಾಗಿದೆ ಸೂರು ಇಲ್ಲದವರಿಗೆ ಮನೆ ನೀಡುತ್ತಿರುವುದು ಬಹಳ ಸಂತೋಷ. ಇಂತಹ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು

Chikkaballapur News: ಲೋಕಸಭೆ, ನಗರಸಭೆ ನಂತರ ಈಗ ಪಿಎಲ್‌ಡಿ ಬ್ಯಾಂಕ್‌ನಲ್ಲೂ ಮೇಲುಗೈ

ಎನ್‌ಡಿಎ ಬೆಂಬಲಿತ ಒಟ್ಟು 10 ನಿರ್ದೇಶಕರು ಬ್ಯಾಂಕ್‌ಗೆ ಆಯ್ಕೆ

ಚಿಕ್ಕಬಳ್ಳಾಪುರ ತಾಲ್ಲೂಕು ಪಿಎಲ್‌ಡಿ ಬ್ಯಾಂಕ್‌ನಲ್ಲಿ ಸಂಸದ ಡಾ.ಕೆ.ಸುಧಾಕರ್ ಬಣಕ್ಕೆ ಭರ್ಜರಿ ಗೆಲುವು, ಎನ್‌ಡಿಎ ಬೆಂಬಲಿತ ೭ ಅಭ್ಯರ್ಥಿಗಳಿಗೆ ಜಯ, ಚಿಕ್ಕಬಳ್ಳಾಪುರ ವಿಧಾನಸಭೆ ಚುನಾವಣೆ ಸೋಲಿನ ನಂತರ ಮತ್ತೆ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ ಡಾ.ಕೆ.ಸುಧಾಕರ್.

Chikkaballapur News: ನಮ್ಮ ಸಂಸ್ಕೃತಿಯ ಕುರುಹಗಳನ್ನು ರಕ್ಷಿಸುತ್ತಾ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದದ್ದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ

ಪ್ರಾಚೀನ ದೇವಾಲಯಗಳು, ಸ್ಮಾರಕ ನಮ್ಮ ಸಂಸ್ಕೃತಿಯ ಕುರುಹುಗಳು

‘ನಮ್ಮಲ್ಲಿ ಲಭ್ಯವಿರುವ ಪುರಾತನ ವಸ್ತುಗಳು, ಶಿಲಾ ಶಾಸನಗಳು, ತಾಮ್ರಪಟಗಳು, ಕಟ್ಟಡಗಳು, ಪುರಾ ತನ ಕಡತಗಳು, ನಾಣ್ಯಗಳು ಗತ ಇತಿಹಾಸವನ್ನು ಹೇಳುತ್ತವೆ. ಇಂತಹ ಅಮೂಲ್ಯ ಪುರಾತನ ಉಳಿಕೆಗಳು ಕಾಲಕಾರಣವಾಗಿ ಅಥವಾ ಮಾನವ ನಿರ್ಲಕ್ಷ್ಯದಿಂದ ನಾಶವಾಗದಂತೆ ರಕ್ಷಿಸುವ ಜಾಗೃತಿ ಮೂಡಿಸುವ ಕಾರ್ಯಕ್ರಮವೇ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವಾಗಿದೆ ಎಂದು ಹೇಳಿದರು

Chikkaballapur News: ವಿಜಯನಗರ ಸಾಮ್ರಾಜ್ಯದ ಅರಸ ಶ್ರೀ ಕೃಷ್ಣದೇವರಾಯ ಬಲಿಜ ಸಮುದಾಯದ ಕೀರ್ತಿ: ಅನಂತರಾಜು ಬಣ್ಣನೆ

ಇದು ಬಲಿಜ ಸಮುದಾಯಕ್ಕೆ ಹೆಮ್ಮೆ ತರುವ ವಿಚಾರ

ಬಿಜಾಪುರದ ಬಹುಮನೀ ಸುಲ್ತಾನರಿಗೆ ಸಂಹಸ್ವಪ್ನರಾಗಿದ್ದ ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ವಿಜಯ ನಗರ ರಾಜ್ಯ ಸಂಪದ್ಭರಿತವಾಗಿತ್ತು ಎಂದು ತಿಳಿಸಿದರು. ರಾಜ್ಯ ಹೆದ್ದಾರಿಯಲ್ಲಿ ವೃತ್ತಕ್ಕೇ ಈಗಾಗಲೇ ಶ್ರೀಕೃಷ್ಣದೇವರಾಯರ ಹೆಸರಿಡಲಾಗಿದೆ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು, ಜನರ ಸಹಕಾರ ದೊಂದಿಗೆ ಅಭಿವೃದ್ದಿ ಪಡಿಸಲಾಗುವುದು ಎಂದು ತಿಳಿಸಿದರು

ಹುಣ್ಣಿಮೆ ಅಂಗವಾಗಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯ ಬ್ರಹ್ಮರಥೋತ್ಸವ

ಹುಣ್ಣಿಮೆ ಅಂಗವಾಗಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯ ಬ್ರಹ್ಮರಥೋತ್ಸವ

ನಗರದ ವಾಸವಿ ರಸ್ತೆಯಲ್ಲಿರುವ  ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯ ಬ್ರಹ್ಮ ರಥೋತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ಶ್ರದ್ದಾಭಕ್ತಿಯಿಂದ ನೆರವೇರಿತು. ಮಾಘ ಶುದ್ದ ಹುಣ್ಣಿಮೆ ಪ್ರಯುಕ್ತ ಬುಧವಾರ ಮುಂಜಾನೆಯಿಂದಲೇ ಹೋಮ ಹವನ ಮುಂತಾದ ದೇವತಾ ಕಾರ್ಯಗಳನ್ನು ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ.ಮುರಳೀಧರ ಅವರ ನೇತೃತ್ವ ದಲ್ಲಿ ಸಾಂಗವಾಗಿ ನೆರವೇರಿದವು. ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಮಧ್ಯಾಹ್ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವನ್ನು ನೆರವೇರಿಸ ಲಾಯಿತು.

Chikkaballapur News: ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ಆಚರಣೆ

ವಿಜೃಂಭಣೆಯಿಂದ ನಡೆದ ಶ್ರೀ ವೀರಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವ

ಶ್ರೀ ವೀರಾಂಜನೇಯ ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪೂಜಿ ಗಳನ್ನು ಭಕ್ತರ ಸಮ್ಮುಖ ದಲ್ಲಿ ಸಲ್ಲಿಸಲಾಗಿತ್ತು.ಸಂಪ್ರದಾಯದಂತೆ ಜಾತ್ರೋತ್ಸವದಲ್ಲಿ ಪಾಲ್ಗೊಂ ಡಿದ್ದ ಭಕ್ತರು ಗೋವಿಂದ ಗೋವಿಂದ ಎನ್ನುವ ವೇದಘೋಷಗಳೊಂದಿಗೆ ರಥದ ಹಗ್ಗ ಹಿಡಿದು ಎಳೆದು ಪುನೀತರಾದರು. ಎಂದಿ ನಂತೆ ಹರಕೆಹೊತ್ತವರು ರಥಕ್ಕೆ ಬಾಳೆಹಣ್ಣು ದವನ ಎಸೆದು ಹರಕೆ ತೀರಿದ ಭಾವದಲ್ಲಿ ಪುಳಕಿತ ರಾದ ದೃಶ್ಯಗಳು ಸಮಾನ್ಯವಾಗಿದ್ದವು

Chikkaballapur News: ಆರೋಗ್ಯವಂತ ಸಮಾಜವು ದೇಶದ ಆರ್ಥಿಕ ಪ್ರಗತಿಗೆ ಪೂರಕ : ಗ್ರಾ.ಪಂ.ಮಾಜಿ ಅಧ್ಯಕ್ಷ ಅಮರನಾಥ್

ಉಚಿತ ಆರೋಗ್ಯ ತಪಾಸಣೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ

ಸರಕಾರಗಳು ಕಾಲಕಾಲಕ್ಕೆ ಇತ್ತ ಗಮನ ಹರಿಸಿ ಪಂಚಾಯಿತಿ, ಹೋಬಳಿ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಬೇಕಿದೆ.ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಘನತೆ ಉಳಿಸಿಕೊಂಡಿ ರುವ ನಾಗಾರ್ಜುನ ಕಾಲೇಜು,ಆರೋಗ್ಯ ಕ್ಷೇತ್ರದಲ್ಲಿ ಬದ್ಧತೆ ಉಳಿಸಿಕೊಂಡಿರುವ ಆಕಾಶ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸಿರುವುದು ಸಂತೋಷ ತಂದಿದೆ

Chikkaballapur News: ಜನಸೇವೆ ಮಾಡಲು ಅಧಿಕಾರಕ್ಕಿಂತ ಒಳ್ಳೆಯ ಮನಸ್ಸಿದ್ದರೆ ಸಾಕು : ಸಂದೀಪ್‌ಬಿ.ರೆಡ್ಡಿ ಅಭಿಮತ

ನಾನು ಕ್ಷೇತ್ರದ ಜನರೊಟ್ಟಿಗೆ ಇರಲು ಬಯಸಿದ್ದೇನೆ

ನಾನು ಕ್ಷೇತ್ರದ ಜನರೊಟ್ಟಿಗೆ ಇರಲು ಬಯಸಿದ್ದೇನೆ. ಈ ದಿಸೆಯಲ್ಲಿ ನನ್ನ ಕೈಲಾದ ಮಟ್ಟಿಗೆ ಸಮಾಜ ಸೇವೆ ಮಾಡುತ್ತಿದ್ದೇನೆ.ರಾಜಕೀಯ ಅಧಿಕಾರ ಇದ್ದರೆ ದೊಡ್ಡ ಪ್ರಮಾಣದಲ್ಲಿ ಜನಸೇವೆ ಮಾಡ ಬಹುದು. ನಿಜ ಹೇಳಬೇಕೆಂದರೆ ಜನರ ಕಷ್ಟ ಸುಖಗಳಿಗೆ ನೆರವಾಗಲು ಅಧಿಕಾರ ಇರಲೇಬೇಕು ಎಂದಿಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು ಪ್ರಕೃತಿಯೇ ನಮ್ಮನ್ನು ಕೈಹಿಡಿದು ನಡೆಸಲಿದೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆಯ್ಕೆಗೆ ತಾತ್ಕಾಲಿಕ ತಡೆ; ಸಂಸದ ಸುಧಾಕರ್ ವಿರುದ್ಧ ಸಂದೀಪ್ ರೆಡ್ಡಿ ಕೆಂಡಾಮಂಡಲ

ಸಂಸದ ಸುಧಾಕರ್ ವಿರುದ್ಧ ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಕೆಂಡಾಮಂಡಲ

ಸಂದೀಪ್ ಬಿ. ರೆಡ್ಡಿ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ, ಇವರ ಆಯ್ಕೆಗೆ ಸಂಸದ ಡಾ.ಕೆ. ಸುಧಾಕರ್ ವಿರೋಧಿಸಿದ್ದರು. ಹೀಗಾಗಿ ಹೈಕಮಾಂಡ್ ಮೂಲಕ ತಡೆ ತಂದಿದ್ದಾರೆ ಎಂದು ಸಂಸದರ ವಿರುದ್ಧ ಬಿಜೆಪಿ ಮುಖಂಡ ಸಂದೀಪ್ ಬಿ. ರೆಡ್ಡಿ ಗರಂ ಆಗಿದ್ದಾರೆ.

Chikkaballapur News: ಸಂಸದರ ನಿಧಿಯಿಂದ ಜಿಲ್ಲಾ ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಿಸಲು ಕ್ರಮ : ನಗರಸಭೆ ಅಧ್ಯಕ್ಷ ಎ.ಗಜೇಂದ್ರ

ಶ್ರೀಸವಿತಾ ಮಹರ್ಷಿ ಜಯಂತಿ ಆಚರಣೆಗೆ ಚಾಲನೆ ನೀಡಿ ಹೇಳಿಕೆ

ಸಂಗೀತ ಕ್ಷೇತ್ರ ಹಾಗೂ ಸೌಂದರ್ಯ ವರ್ಧಕ ಕ್ಷೇತ್ರದಲ್ಲಿ ಸವಿತಾ ಸಮುದಾಯದವರ ಕೊಡುಗೆ ಅಮೂ ಲ್ಯವಾದದ್ದು, ಇಂದಿಗೂ ಪ್ರಖ್ಯಾತಿಯನ್ನು ಪಡೆದಿರುವ ಗಾಯಿತ್ರಿ ಮಂತ್ರದ ರಚನೆಯಲ್ಲಿ ಸವಿತಾ ಮಹರ್ಷಿಗಳ ಪಾತ್ರವಿದೆ. ಅಂತಹ ಮಾಹಾನ್ ಸಾಧಕರ ಆದರ್ಶಗಳನ್ನು ನಾವೇಲ್ಲರೂ ಪಾಲಿಸಬೇಕು ಎಂದು ಕರೆ ನೀಡಿದರು

Chikkaballapur News: ಜೀತ ಪದ್ಧತಿ ಶಿಕ್ಷಾರ್ಹ ಅಪರಾಧವಾಗಿದ್ದರೂ ಜೀವಂತವಿರುವುದು ಬೇಸರದ ಸಂಗತಿ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಗಾರಕ್ಕೆ ಚಾಲನೆ

ಜೀತಪದ್ದತಿಯು ಇಂದಿಗೂ ಜೀವಂತವಿರುವ ಒಂದು ಅನಿಷ್ಟ ಪದ್ದತಿಯಾಗಿದೆ. ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ ಮೈಸೂರು, ಚಿಕ್ಕಮಗಳೂರು, ಬೆಳಗಾವಿ. ಬಾಗಲಕೋಟೆ, ರಾಮ ನಗರ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಜೀತ ಪದ್ಧತಿಯ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಬಾಲ ಕಾರ್ಮಿಕನಾಗಿ ಕೆಲಸ ಮಾಡುವವರು ಮುಂದೆ ಜೀತಗಾರರಾಗಿ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ

Chikkabalapur News: ಶಾಲಾ ಕಾಲೇಜು ಮಕ್ಕಳ ಗಮನ ಸೆಳೆದ ಫಲಪುಷ್ಪ ಪ್ರದರ್ಶನ

ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಜನರ ಕಣ್ಮನ ತಣಿಸುತ್ತಿದೆ

ಸಜ್ಜೆ, ನವಣೆ, ಸಾಮೆ ಸೇರಿದಂತೆ ವಿವಿಧ ತಳಿಯ ಧಾನ್ಯಗಳು, ರಾಗಿ, ಭತ್ತ, ನೆಲಗಡಲೆ, ಅವರೆ ಸೇರಿದಂತೆ ವಿವಿಧ ಧಾನ್ಯಗಳನ್ನು ಪ್ರದರ್ಶಿಸಲಾಗಿತ್ತು. ಕೃಷಿ ಯಂತ್ರಗಳಾದ ನೇಗಿಲು, ಕೊಡಲಿ, ಕುಡುಗೋಲು, ತೂಕದ ಕಲ್ಲು, ಮಡಿಕೆಯಲ್ಲಿ ಮೊಸರು ಸಂಗ್ರಹಿಸುವ ದೊತ್ತಿ, ಎತ್ತಿನಬಂಡಿ, ಕೃಷಿ ಉಪಕರಣಗಳು, ಜಾನುವಾರುಗಳ ಮೇವು, ರಸಗೊಬ್ಬರ, ಭಿತ್ತನೆ ಬೀಜಗಳನ್ನು ಪ್ರದರ್ಶನ ಮಾಡ ಲಾಗಿತ್ತು

Chikkaballapur News: ಟೆಂಟ್ ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದು ನಮ್ಮ ಮೊದಲ ಆದ್ಯತಾ ಗುರಿಯಾಗಿದೆ

ಟೆಂಟ್ ಮುಕ್ತ ಕರ್ನಾಟಕ ನಮ್ಮ ಗುರಿ: ಜಿ.ಪಲ್ಲವಿ

ಕೆಲವೆಡೆ ಅಲೆಮಾರಿ ಜನಾಂಗದವರು ವಾಸಿಸುವಲ್ಲಿ ಅಂಗನವಾಡಿ, ಬಸ್ ನಿಲ್ದಾಣದ ವ್ಯವಸ್ಥೆಗೆ ಬೇಡಿಕೆ ಸಲ್ಲಿಸಿದ್ದಾರೆ. ಗಂಜಿಕುಂಟೆ ಗ್ರಾಮದಲ್ಲಿ ವಾಸಿಸುವ ಹಕ್ಕಿಪಿಕ್ಕಿ ಜನಾಂಗದವರು ತಾವು ಉಳುಮೆ ಮಾಡುತ್ತಿರುವ 414 ಎಕರೆ ಭೂಮಿಯನ್ನು ಹದ್ದುಬಸ್ತು ಮಾಡಿಸಿ ಕೊಡಲು ಕೋರಿದ್ದಾರೆ.

Chikkaballapur News: ಬಡವರ ಆಹಾರವಾಗಿದ್ದ ಸಿರಿಧಾನ್ಯಗಳು ಇಂದು ಶ್ರೀಮಂತರ ಆಹಾರವಾಗಿವೆ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಮತ

ಸಿರಿಧಾನ್ಯಗಳ ಬಳಸುತ್ತಿದ್ದ ನಮ್ಮ ಪೂರ್ವಜರು ಆರೋಗ್ಯವಂತರಾಗಿದ್ದರು

ಬಡವರ ಆಹಾರವಾಗಿರುವಂತಹ ಸಿರಿಧಾನ್ಯಗಳು ಇಂದು ಶ್ರೀಮಂತರ ಆಹಾರ ಆಗಿರುವುದು ಕಂಡು ಬರುತ್ತಿದೆ. ಸಿರಿಧಾನ್ಯಗಳಿಗೆ ಹಿಂದಿನಿಂದ ನಮ್ಮ ಪೂರ್ವಿಕರು ಹೆಚ್ಚು ಒತ್ತು ನೀಡುತ್ತಿದ್ದರು. ಇಂದು ಅದನ್ನು ನಾವು ಕೈಬಿಟ್ಟಿದ್ದೇವೆ. ಇಂದು ಸೂಪರ್ ಫುಡ್‌ಗಳ ಪಟ್ಟಿಯಲ್ಲಿ ಸಿರಿಧಾನ್ಯಗಳು ಸೇರುತ್ತಿವೆ

Chikkaballapur News: ಜಿಲ್ಲಾಡಳಿತದಿಂದ ಕಾಯಕ ಶರಣರ ಜಯಂತಿ ಆಚರಣೆ

ಕಾಯಕಕ್ಕೆ ಶರಣರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು

ವಚನಗಳಲ್ಲಿ ಸಮಾನತೆ, ಸಾಮಾಜಿಕ ಸಾಮರಸ್ಯ ಅಡಗಿದ್ದು, ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಪಾಲಿಸಬೇಕು 12ನೇ ಶತಮಾನ ಎಂಬುದು ಕನ್ನಡ ನಾಡಿನ ಒಂದು ಸಾಹಿತ್ಯದ ಸುವರ್ಣ ಯುಗವಾ ಗಿದ್ದು, ಬಸವಣ್ಣನವರು ಸೇರಿದಂತೆ ಅನೇಕ ವಚನಕಾರರು ಸಾಮಾಜಿಕ ಕ್ರಾಂತಿಕಾರಿ ಬದಲಾವಣೆಗೆ ಶ್ರಮಿಸಿದರು

Chikkaballapur News: ವಿಶ್ವದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ರಚಿತವಾದ ಆಡಳಿತ ನೀಡಿದವರು ಶ್ರೀಕೃಷ್ಣದೇವರಾಯರು

ಶ್ರೀಕೃಷ್ಣ ದೇವರಾಯರ ಜಯಂತ್ಯುತ್ಸವದ ಅಂಗವಾಗಿ ನಾಳೆ ರಥೋತ್ಸವ ಆಗಮನ

ಮಂಗಳವಾರ ಸಂಜೆ ೩.೩೦ಕ್ಕೆ ಎಂ.ಜಿ ರಸ್ತೆಯ ಮರಳು ಸಿದ್ಧೇಶ್ವರ ದೇವಾಲಯದ ಬಳಿ ಶ್ರೀಕೃಷ್ಣ ದೇವ ರಾಯರ ರಥವನ್ನು ಆಹ್ವಾನಿಸಲಿದ್ದು, ಅಲ್ಲಿಂದ ಶ್ರೀ ಯೋಗಿನಾರೇಯಣ ಯತೀಂದ್ರರ ದೇವಾಲಯಕ್ಕೆ ಕರೆದೊಯ್ದು, ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ವಿವಿಧ ಕಲಾತಂಡಗಳೊಂದಿಗೆ ನಗರದಲ್ಲಿ ರಥ ಸಂಚರಿಸ ಲಿದೆ.

ಕಿಸಾನ್ ಸಮ್ಮಾನ್ ಯೋಜನೆಯಡಿ 4 ಸಾವಿರ ಕೊಡಿ: ಕುರುಬೂರು ಶಾಂತಕುಮಾರ್ ಆಗ್ರಹ

ಹಾಲಿನ ಪ್ರೋತ್ಸಾಹಧನ 10 ರೂಗಳಿಗೆ ಹೆಚ್ಚಿಸಿ, ಬಾಕಿ ಹಣ ಬಿಡುಗಡೆ ಮಾಡಿ

ರಾಜ್ಯದ 34 ಸಾವಿರ ಹೈನು ರೈತರಿಗೆ ಕಳೆದ 10 ತಿಂಗಳಿಂದ ಹಾಲಿನ ಪ್ರೋತ್ಸಾಹಧನ 1 ಸಾವಿರ ಕೋಟಿ ಹಣ ಬಾಕಿ ಉಳಿಸಿಕೊಂಡಿರುವ ಸರ್ಕಾರ ಹೈನು ರೈತರಿಗೆ ತೀವ್ರ ಸಂಕಷ್ಟ ನೀಡುತ್ತಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೂ ಮುನ್ನ ಹಾಲಿನ ಪ್ರೋತ್ಸಾಹಧನ ನೀಡ ಬೇಕು, ಇಲ್ಲದಿದ್ದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು

ಬಂಡಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲದ ಗೋಡೆ ಧ್ವಂಸ : ಕಿಡಿಗೇಡಿಗಳ ಬಂಧನಕ್ಕೆ ಗ್ರಾಮಸ್ಥರ ಆಗ್ರಹ

ಸ್ಥಳಕ್ಕೆ ನಂದಿ ಪೊಲೀಸರ ಭೇಟಿ, ಪರಿಶೀಲನೆ: ಕಿಡಿಗೇಡಿಗಳ ಬಂಧಿಸುವ ಭರವಸೆ

ಬಾಬಾ ಸಾಹೇಬ ಅಂಬೇಡ್ಕರ್ ನೀಡಿರುವ ಸಂವಿಧಾನದ ಫಲವಾಗಿ ದೇಶವು ಅಭಿವೃದ್ಧಿಯತ್ತ ಸಾಗು ತ್ತಿದ್ದರೆ, ಗ್ರಾಮ ಭಾರತದಲ್ಲಿ ಜಾತಿಯ ಅಟ್ಟಹಾಸ, ಅಂಬೇಡ್ಕರ್ ಪುತ್ಥಳಿಗೆ ಅಪಮಾನ,ದಲಿತ ಶೋಷಿತ ಸಮುದಾ ಯಗಳ ಮೇಲೆ ನಿರಂತರ ದಬ್ಬಾಳಿಕೆಯನ್ನು ಮೇಲ್ವರ್ಗಗಳು ಮಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಭರ್ಜರಿ ಸಿದ್ಧತೆ ಪರಿಶೀಲಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಾವೀದ್ ನಸೀಮ್ ಖಾನಂ

ಇಂದು ಜಿಲ್ಲಾ ಮಟ್ಟದ ಸಿರಿಧಾನ್ಯ, ಸಾವಯವ ಹಾಗೂ ಫಲಪುಷ್ಪ ಪ್ರದರ್ಶನ

ಹಳ್ಳಿ ಸೊಗಡು ಮಾದರಿಯಲ್ಲಿ ಸಾಂಪ್ರದಾಯಿಕ ಹೂವು ಹಾಗು ಸಿರಿಧಾನ್ಯಗಳಿಂದ ಅಲಂಕೃತಗೊಂಡ ನಂದಿ ವಿಗ್ರಹ, ವೀಣೆ, ಜೈ ಕಿಸಾನ್ ಜೈ ಜವಾನ್ ,ಕರ್ನಾಟಕ ನಕ್ಷೆ ಹಾಗೂ ದೇಸಿ ತಳಿ ಬೀಜಗಳ ಪ್ರದ ರ್ಶನ, ದಿಬ್ಬದಿಂದ ಕಣಿವವರೆಗೂ ಜಲಾನಯನ ಪ್ರದೇಶ, ಕೃಷಿಭಾಗ್ಯ, ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳ ಮಾದರಿಗಳ ಪ್ರದರ್ಶನ, ಕೃಷಿ ಮತ್ತು ಸಂಬಂಧಿತ ಇಲಾಖೆಗಳಿಂದ ಮಳಿಗೆಗಳನ್ನು ತೆರೆಯಲಾಗುವುದು