ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಿಕ್ಕಬಳ್ಳಾಪುರ

CET Exam: ಸಿಇಟಿ ಪರೀಕ್ಷೆ; ಚಿಕ್ಕಬಳ್ಳಾಪುರದಲ್ಲೂ ಜನಿವಾರ ತೆಗೆಸಿದ ಸಿಬ್ಬಂದಿ, 12 ದಿನದ ಹಿಂದೆ ಉಪನಯನವಾಗಿದ್ದ ವಿದ್ಯಾರ್ಥಿ

ಸಿಇಟಿ; ಚಿಕ್ಕಬಳ್ಳಾಪುರದಲ್ಲೂ ವಿದ್ಯಾರ್ಥಿಯ ಜನಿವಾರ ತೆಗೆಸಿದ ಸಿಬ್ಬಂದಿ

ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ವಿದ್ಯಾರ್ಥಿ ಸುಪ್ರೀತ್ ಎಂಬಾತನ ಜನಿವಾರವನ್ನು ಸಿಬ್ಬಂದಿ ತೆಗೆಸಿದ್ದಾರೆ. ಮೊದಲ ದಿನ ಪರೀಕ್ಷೆಗೆ ಬಂದಾಗ ಜನಿವಾರ ತೆಗೆಸಿ ಕತ್ತರಿಸಿರುವ ಆರೋಪ ಕೇಳಿ ಬಂದಿದ್ದು, ಸಿಬ್ಬಂದಿ ನಡೆಗೆ ಸುಪ್ರೀತ್ ಆಕ್ಷೇಪ ವ್ಯಕ್ತಪಡಿಸಿದ್ದ.

Chikkaballapur News: ಶಾಸಕರ ವಿರುದ್ಧ ಮಾತನಾಡುವವರಿಗೆ ಕಠಿಣ ಕ್ರಮವಾಗಲಿ: ನಾಗಭೂಷಣ್ ಒತ್ತಾಯ

ಶಾಸಕರ ವಿರುದ್ಧ ಮಾತನಾಡುವವರಿಗೆ ಕಠಿಣ ಕ್ರಮವಾಗಲಿ

ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಆಯ್ಕೆಯಾದ ಸಂದರ್ಭದಲ್ಲಿ ನಡೆದ ಮೊದಲ ಸಭೆಯಲ್ಲಿ ಭರಣಿ ವೆಂಕಟೇಶ್ ಭಾಗಿಯಾಗಿದ್ದರು. ಆಗಲೇ ಟಿಎಪಿಸಿಎಂಎಸ್ ಚುನಾವಣೆ ಬಂದಿತ್ತು. ಅವುಲ ರೆಡ್ಡಿ ಕೂಡ ಇದ್ದರು. ಚುನಾವಣೆಗೆ ಎಷ್ಟು ಖರ್ಚಾಗಬಹುದು ಎಂದು ಕೇಳಿದವರು, ಅದೇ ಮೊದಲು ಅದೇ ಕೊನೆ ಅವರು ಈ ಕಡೆ ಬರಲೇಯಿಲ್ಲ. ಆವುಲರೆಡ್ಡಿ ಕೂಡ ಬರಲಿಲ್ಲ. ಈಗ ನೋಡಿದರೆ ಯಾವ ಅಭ್ಯರ್ಥಿ ಯನ್ನು ಗೆಲ್ಲಿಸಲಿಲ್ಲ, ಎಂಎಲ್‌ಎ ಇಂದಾಗಿ ಸೋತರು ಎಂದು ಮಾತನಾಡುತ್ತಾರೆ

Students honored: ಎಸ್.ಎಸ್.ಎಲ್.ಸಿ ಫಲಿತಾಂಶ : ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಎಸ್.ಎಸ್.ಎಲ್.ಸಿ ಫಲಿತಾಂಶ : ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ತಾಲೂಕಿನ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  ಸತತ ಎರಡನೇ ವರ್ಷವೂ ಶೇ.100ರಷ್ಟು ಫಲಿತಾಂಶದ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 14 ವಿದ್ಯಾರ್ಥಿ ಗಳಲ್ಲಿ ಒಬ್ಬ ವಿದ್ಯಾರ್ಥಿನಿ ಅತ್ಯುನ್ನತ ದರ್ಜೆಯಲ್ಲಿ, 11 ವಿದ್ಯಾರ್ಥಿಗಳು ಪ್ರಥಮ ದರ್ಜೆ ಯಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

CHIMUL: ನೂತನ ಒಕ್ಕೂಟ ಚಿಮುಲ್ ಪ್ರಸ್ತುತ 70 ಕೋಟಿ ಲಾಭದಲ್ಲಿದೆ : ಚಿಮುಲ್ ಅಧ್ಯಕ್ಷ ಮಂಜುನಾಥರೆಡ್ಡಿ ಹರ್ಷ

ನೂತನ ಒಕ್ಕೂಟ ಚಿಮುಲ್ ಪ್ರಸ್ತುತ 70 ಕೋಟಿ ಲಾಭದಲ್ಲಿದೆ

ಕೋಲಾರದಿಂದ ಒಕ್ಕೂಟ ಬೇರ್ಪಟ್ಟಾಗ ಹಾಳಾಗುತ್ತದೆ ಎಂದವರು ಕೂಡ ಇದ್ದಾರೆ. ನಮ್ಮ ಒಕ್ಕೂಟ ದಲ್ಲಿ 60/70 ಕೋಟಿ ಹಣ ಇದೆ.ಉಸ್ತುವಾರಿ ಸಚಿವರಾದಿಯಾಗಿ ಎಲ್ಲರೂ ಇದರ ಬೆಳವಣಿಗೆಗೆ ಶ್ರಮಿಸು ತ್ತಿದ್ದಾರೆ. ಇಡೀ ರಾಜ್ಯದಲ್ಲಿಯೇ 36.90 ಪೈಸೆ ರೈತರ ಖಾತೆಗೆ ಜಮಾ ಮಾಡುತ್ತಿರುವ ಏಕೈಕ ಒಕ್ಕೂಟ ನಮ್ಮದು. ನಮ್ಮನ್ನು ನೋಡಿ ಕೋಲಾರ ಸೇರಿ ಉಳಿದ ಒಕ್ಕೂಟಗಳು ಬೆಲೆ ಏರಿಸಲು ಮುಂದಾಗಿದ್ದಾರೆ.

ಡಾ.ರಾಜ್ ಕುಮಾರ್ ರವರ ಸರಳ ಜೀವನ ಶೈಲಿ, ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು: ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್*

ಡಾ.ರಾಜ್ ರವರ ಸರಳ ಜೀವನ ಶೈಲಿ, ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು

ಡಾ. ರಾಜಕುಮಾರ್ ಅವರು ನಟಿಸಿದ ಚಿತ್ರ ಕಥೆಗಳು ಸಾಮಾಜಿಕ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಸಂದೇಶಗಳುನ್ನು ನೀಡುವ ರೀತಿಯಲ್ಲಿ ಮೂಡಿ ಬರುತ್ತಿದ್ದವು. ಅಭಿನಯ ವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಅವರು ಯಾವುದೇ ರೀತಿಯ ಪಾತ್ರ ನೀಡಿ ದರೂ ಸಹ ನೋಡುಗರಿಗೆ ಮನಮುಟ್ಟುವ ಹಾಗೆ ತಲುಪಿಸುವ ಕಲೆ ಅವರಲ್ಲಿತ್ತು

ಸಾಯಿ ಪ್ರೇಮ ಫೌಂಡೇಶನ್ ಟ್ರಸ್ಟಿಗಳಿಗೆ ಫಿಜಿ ಸರ್ಕಾರದ ರಾಷ್ಟ್ರೀಯ ಪ್ರಶಸ್ತಿ

ಶ್ರೀ ಮಧುಸೂದನ ಸಾಯಿ ಸೇವಾ ಮಿಷನ್‌ನ ಮಾನವೀಯ ಕಾರ್ಯಗಳಿಗೆ ಶ್ಲಾಘನೆ

ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಪೌಷ್ಠಿಕತೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಉಚಿತ ವಾಗಿ ನೀಡುತ್ತಿರುವ ಈ ಮಿಷನ್ ಕಾರ್ಯ ಶ್ಲಾಘನೀಯವೆಂದು ಅವರು ಹೇಳಿದರು. 2025ರ ಗ್ಲೋಬಲ್ ಕಲ್ಚರಲ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದುದನ್ನೂ, ಕರ್ನಾಟಕದ ಮುದ್ದೇನಹಳ್ಳಿ ಯಲ್ಲಿರುವ ಸಂಸ್ಥೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅನುಭವವನ್ನೂ ಅವರು ಸ್ಮರಿಸಿದರು. ಫಿಜಿ ಹಾಗೂ ಪೆಸಿಫಿಕ್ ಪ್ರದೇಶ ದಲ್ಲಿ ಇಂತಹ ಸೇವೆಗಳನ್ನು ವಿಸ್ತರಿಸಲು ತಮ್ಮ ಬೆಂಬಲ ಮುಂದುವರಿಯಲಿದೆ

National Panchayat Raj Day: ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ, ಉತ್ತಮ ಸಾಧನೆ ತೋರಿದ ಗ್ರಾ.ಪಂ.ಗಳ ಅಧಿಕಾರಿ ಸಿಬ್ಬಂದಿಗೆ ಸನ್ಮಾನ

ಗ್ರಾಮ ಪಂಚಾಯ್ತಿಗಳ ಅಧಿಕಾರಿ ಸಿಬ್ಬಂದಿಗೆ ಸನ್ಮಾನ

ಲಕ್ಷಾಂತರ ಸ್ವಾತಂತ್ರ‍್ಯ ಹೋರಾಟಗಾರರ ಬಲಿದಾನದಿಂದ ನಾವು ಮುಕ್ತವಾಗಿ ಸ್ವಾತಂತ್ರ‍್ಯದ ಜೀವನ ವನ್ನು ಸಾಗಿಸುತ್ತಿದ್ದೇವೆ, “ಮುಕ್ತವಾದ ಅವಕಾಶಗಳು ಎಲ್ಲರಿಗೂ ಸಿಗಬೇಕು ಎಂಬುದು ಬಲಿದಾನಿಗಳ ಆಶಯವಾಗಿತ್ತು”. ಆ ನಿಟ್ಟಿನಲ್ಲಿ ಪಂಚಾಯತ್ ರಾಜ್ ಕಾಯ್ದೆ(Panchayat Raj Act)ಯಡಿ ಅನುಷ್ಠಾನ ವಾಗುತ್ತಿರುವ ಕೆಲಸಗಳು ಮೌಲ್ಯಯುತವಾಗಿವೆ.

IISC: ಜ್ಞಾನಾಧಾರಿತ ತಂತ್ರಜ್ಞಾನವು ಜ್ಞಾನದ ಸೃಷ್ಟಿ ಮತ್ತು ಹುಡುಕಾಟದ ಮಹಾಮನೆಯಾಗಬೇಕಿದೆ: ಐಐಎಸ್ಸಿ ಸೀನಿಯರ್ ಪ್ರೊ.ನರಹರಿ ಅಭಿಮತ

ಜ್ಞಾನಾಧಾರಿತ ತಂತ್ರಜ್ಞಾನವು ಜ್ಞಾನದ ಸೃಷ್ಟಿಯ ಮಹಾಮನೆಯಾಗಬೇಕಿದೆ

ಎ.ಐ.ತಂತ್ರಜ್ಞಾನದಿಂದಾಗಿ ಸಮಾಜಕ್ಕೆ ಜನಸಮುದಾಯಗಳಿಗೆ ಸಾಕಷ್ಟು ಅನುಕೂಲವಾಗಿ ಅವಕಾಶ ಗಳು ಹೆಚ್ಚಾಗಲಿವೆ. ಇಂತಹ ಸೂಕ್ಷ್ಮ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಐಇಇಇ(IEEE) ಅಂತರಾಷ್ಟ್ರೀಯ ವಿಚಾರ ಸಂಕಿರಣಗಳು ನೆರವಾಗಲಿವೆ. ಇದನ್ನು ಬಳಸಿಕೊಳ್ಳುವ ಕೆಲಸ ಆಗಬೇಕಿದೆ. ದೇಶವಿದೇಶಗಳ 13ಕ್ಕೂ ಹೆಚ್ಚು ದೇಶ ಗಳ 365ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಭಾಗಿಯಾಗುತ್ತಿರುವುದೇ ಸಂತೋಷ

ಒಡೆದ ಮನೆಯಂತಾದ ಕಾಂಗ್ರೆಸ್ : ಸಂಚಲನಕ್ಕೆ ಕಾರಣವಾದ ಕೆಪಿಸಿಸಿ ನೋಟೀಸು

ಶಿಸ್ತುಕ್ರಮಕ್ಕೆ ಆಗ್ರಹಿಸಿ ಪತ್ರ ಬರೆದ ಬ್ಲಾಕ್ ಕಾಂಗ್ರೆಸ್

ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ನಡೆಯ ವಿರುದ್ದ ಬಹಿರಂಗವಾಗಿ ಟೀಕೆ ಟಿಪ್ಪಣಿ ಮಾಡಿದ್ದ ಚಿಮುಲ್ ನಿರ್ದೇಶಕರಾದ ಭರಣಿ ವೆಂಕಟೇಶ್, ಕಾಕಲಚಿಂತೆ ರಾಜಣ್ಣ, ಮಿಲ್ಟನ್ ವೆಂಕಟೇಶ್ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಕಾರಣ ಕೇಳಿ ನೀಡಿರುವ ನೋಟೋಸು ಭಾರೀ ಸಂಚಲವನ್ನು ಉಂಟು ಮಾಡಿದೆ.

CET Exam: ವಿದ್ಯಾರ್ಥಿನಿಯರ ಮೂಗಿಗೆ ಗಮ್‌ ಟೇಪ್‌ ಅಂಟಿಸಿದ ಭದ್ರತಾ ಸಿಬ್ಬಂದಿ; ಚಿಕ್ಕಮಗಳೂರಲ್ಲಿ ಅಚ್ಚರಿಯ ದೃಶ್ಯ

ವಿದ್ಯಾರ್ಥಿನಿಯರ ಮೂಗಿಗೆ ಗಮ್‌ ಟೇಪ್‌ ಅಂಟಿಸಿದ ಭದ್ರತಾ ಸಿಬ್ಬಂದಿ

ರಾಜ್ಯಾದ್ಯಂತ ಎಂಜಿನಿಯರಿಂಗ್, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತಿದೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಮೂಗುತಿ ಧರಿಸಿ ಬಂದ ವಿದ್ಯಾರ್ಥಿನಿಯರ ಮೂಗಿಗೆ ಭದ್ರತಾ ಸಿಬ್ಬಂದಿ ಗಮ್ ಟೇಪ್ ಅಂಟಿಸಿದ್ದಾರೆ.

ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ : ಸಂಘದ ಅಧ್ಯಕ್ಷೆ ಪದ್ಮ ಅಭಿಮತ

ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ : ಸಂಘದ ಅಧ್ಯಕ್ಷೆ ಪದ್ಮ ಅಭಿಮತ

ಕಾರ್ಯಕ್ರಮದಲ್ಲಿ 2026ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95.4 ಅಂಕ  ಪಡೆದಿರುವ ನಗರಸಭೆ ಸದಸ್ಯೆ ಸುಬ್ಬಮ್ಮ ಮೊಮ್ಮಗ ಹಾಗೂ ಶ್ರೀನಿವಾಸ ಹಾಗೂ ಭಾರತಿ ದಂಪತಿ ಪುತ್ರ ಪುನೀತ್ ಅವರನ್ನು ಸನ್ಮಾನಿಸಲಾಯಿತು.  ಜೀವನದ ಸವಾಲನ್ನು ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸಾಧನೆಯ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿರಬೇಕು. ನಮ್ಮ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು

ನಿಮ್ಮನ್ನು ಗೆಲ್ಲಿಸಿ ತಪ್ಪು ಮಾಡಿದೆವು : ಜನರನ್ನು ಮರುಳು ಮಾಡಿದ ನೀವು ಷ್ಟಾಚಾರದ ಪಿತಾಮಹ: ಮಿಲ್ಟನ್ ವೆಂಕಟೇಶ್ ಆಕ್ರೋಶ

ಜನರನ್ನು ಮರುಳು ಮಾಡಿದ ನೀವು ಭ್ರಷ್ಟಾಚಾರದ ಪಿತಾಮಹ

ಕೈಯಲ್ಲಿ ಬಿಡಿಗಾಸು ಇಲ್ಲದೆ ಕ್ಷೇತ್ರಕ್ಕೆ ಬಂದ ನಿಮಗೆ ನಾವೆಲ್ಲಾ ಹಣ ಖರ್ಚು ಮಾಡಿಕೊಂಡು ಕೆಲಸ ಮಾಡಿದ್ದೇವೆ. ಕೈಯಲ್ಲಿ ಅಂಬೇಡ್ಕರ್ ಪೋಟೋ ಹಿಡಿದು ಕಾಲೋನಿಗಳಿಗೆ ಹೋಗಿ ಅಮ್ಮಾ ನಾನು ಅನಾಥ, ನನ್ನ ಕೈಹಿಡಿದು ನಡೆಸಿ ಎಂದು ಗೋಗರೆದೆ. ಅವರೊಟ್ಟಿಗೆ ಕುಳಿತು ಅನ್ನ ತಿಂದು ಪ್ರಾಮಾ ಣಿಕವಾಗಿ ಕೆಲಸ ಮಾಡುವ ಮಾತಾಡಿದೆ.

Chikkaballapur News: ನನ್ನ ವಿರುದ್ಧ ನಿಂತು ಜಿಲ್ಲಾ ಪಂಚಾಯಿತಿ ಸ್ಥಾನ ಗೆಲ್ಲಲಿ ನೋಡೋಣ : ಕಾಕಲ ಚಿಂತೆ ರಾಜಣ್ಣ ಸವಾಲು

ನನ್ನ ವಿರುದ್ಧ ನಿಂತು ಜಿಲ್ಲಾ ಪಂಚಾಯಿತಿ ಸ್ಥಾನ ಗೆಲ್ಲಲಿ ನೋಡೋಣ

ನೀವೊಬ್ಬ ಎಂಎಲ್‌ಎ ಆಗಿ ಚಿಮುಲ್ ಚುಕ್ಕಾಣಿ ಹಿಡಿಯಬೇಕಾದರೆ ಅಭ್ಯರ್ಥಿ ಹಾಕಿಸಬೇಕಿತ್ತು. ಯಾಕೆ ನಿಮಗೆ ಅರ್ಹ ಅಭ್ಯರ್ಥಿಗಳು ಯಾರೂ ಸಿಗಲಿಲ್ಲವಾ? ಯಾಕೆ ಹಾಕಿಸಲಿಲ್ಲ? ಎಂದ ಅವರು ನಿಮಗೆ ಯೋಗ್ಯತೆಯಿಲ್ಲ ಎಂಬುದನ್ನು ಅರಿತು, ಇಡೀ ಜಿಲ್ಲೆಯಲ್ಲಿ ಪೆರೇಸಂದ್ರದಲ್ಲಿ ಮಾತ್ರ ಯುನಾನಿಮಸ್ ಆಯ್ಕೆಯಾದರೆ ಪಕ್ಷಕ್ಕೆ ಮರ್ಯಾದೆ ಇರಲ್ಲ ಎಂದು ಭಾವಿಸಿ ಜಿಲ್ಲಾ ಉಸ್ತುವಾರಿ ಸಚಿವರು ನನ್ನನ್ನು ಅಭ್ಯರ್ಥಿ ಮಾಡಿದರು.ನೀವು ಶಾಸಕರಾಗಿ ನನ್ನ ಪರವಾಗಿ ಕೆಲಸ ಮಾಡಬೇಕಿತ್ತು ಮಾಡಿದಿರಾ?

ಏ.24ರಂದು ವರನಟ ಡಾ|| ರಾಜ್ ಕುಮಾರ್ ಜನ್ಮ ದಿನಾಚರಣೆ

ಏ.24ರಂದು ವರನಟ ಡಾ|| ರಾಜ್ ಕುಮಾರ್ ಜನ್ಮ ದಿನಾಚರಣೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ವರನಟ ಡಾ|| ರಾಜ್ ಕುಮಾರ್ ಜನ್ಮ ದಿನಾಚರಣೆಯನ್ನು ಏ.24ರಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ೨ನೇ ಮಹಡಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ

ಹಿಂದೂ ಧರ್ಮದಲ್ಲಿ ಆದಿ ಗುರು ಶಂಕರಾಚಾರ್ಯರಿಗೆ ವಿಶೇಷ ಸ್ಥಾನವಿದೆ, ಜಿಲ್ಲಾಡಳಿತದಿಂದ ಶ್ರೀ ಶಂಕರಚಾರ್ಯರ ಜಯಂತಿ ಆಚರಣೆ : ಜಿಲ್ಲಾಧಿಕಾರಿ ಜಿ.ಪ್ರಭು

ಹಿಂದೂ ಧರ್ಮದಲ್ಲಿ ಆದಿ ಗುರು ಶಂಕರಾಚಾರ್ಯರಿಗೆ ವಿಶೇಷ ಸ್ಥಾನವಿದೆ

ಶ್ರೀ ಶಂಕರಾಚಾರ್ಯ ತಮ್ಮದೇ ಆದ ಅದ್ವೈತ ಸಿದ್ದಾಂತವನ್ನು ಭಾರತಾದ್ಯಂತ ಪ್ರಚುರ ಪಡಿಸುವ ಮೂಲಕ ಹಿಂದೂ ಧರ್ಮಕ್ಕೆ ನೀಡಿದ ಕೊಡುಗೆಯು ಅಪಾರವಾದುದು ಅವರು ಚಿಕ್ಕ ವಯಸ್ಸಿನಲ್ಲಿಯೇ 4 ವೇದಗಳನ್ನು ಅಧ್ಯಯನ ಮಾಡಿ ಎಲ್ಲಾ ಶಾಸ್ತ್ರಗಳಲ್ಲಿ ಜ್ಞಾನ ಪಡೆದಿದ್ದರು. ಬಜಗೋವಿಂದಂ, ವಿವೇಕ ಚೂಡಾಮಣಿ ಇನ್ನು ಮುಂತಾದ ಪುಸ್ತಕಗಳನ್ನು ರಚಿಸಿ ಮಹಾನ್ ತತ್ವಜ್ಞಾನವನ್ನು ಪ್ರಸಾರ ಮಾಡಿದ್ದಾರೆ.

e-property: ಇ-ಸ್ವತ್ತಿನೊಂದಿಗೆ ಹಕ್ಕುಪತ್ರ ನೀಡಿ: ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ

ಇ-ಸ್ವತ್ತಿನೊಂದಿಗೆ ಹಕ್ಕುಪತ್ರ ನೀಡಿ: ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ

ಆಶ್ರಯ ಯೋಜನೆಗಳಿಗೆ ಫಲಾನುಭವಿಗಳನ್ನು ಗ್ರಾಮ ಸಭೆಗಳ ಮೂಲಕ ನಿಯಮಾವಳಿ ರೀತ್ಯ ಸಮರ್ಪಕವಾಗಿಯೇ ಆಯ್ಕೆ ಮಾಡಿ  ಅರ್ಹರಿಗೆ ವಿತರಣೆ ಆಗಬೇಕು ಈ ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದೆ. ಮಂಜೂರಾತಿ ಆಗಿರುವ ಜಮೀನಿನಲ್ಲಿ ನಿವೇಶನಗಳು ಅರ್ಹ ಫಲಾನುಭವಿಗಳಿಗೆ ಸಿಗು ವಂತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ತ್ವರಿತ ಉಪಕ್ರಮಗಳನ್ನು ಕೈಗೊಳ್ಳಬೇಕು

ಏ.23ರಂದು ಅಂಬೇಡ್ಕರ್ ಭವನದಲ್ಲಿ ಶ್ರೀ ಭಗೀರಥ ಜಯಂತಿ

ಏ.23ರಂದು ಅಂಬೇಡ್ಕರ್ ಭವನದಲ್ಲಿ ಶ್ರೀ ಭಗೀರಥ ಜಯಂತಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಭಗೀರಥ ಜಯಂತಿಯನ್ನು ಏ.23ರಂದು ಬೆಳಿಗ್ಗೆ 11 ಗಂಟೆಗೆ ನಗರದ ಡಾ|| ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖರೀದಿಗೆ ಚೀಟಿ ಕೊಡುವಂತಿಲ್ಲ: ಜಿಲ್ಲಾಧಿಕಾರಿ ಜಿ.ಪ್ರಭು

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖರೀದಿಗೆ ಚೀಟಿ ಕೊಡುವಂತಿಲ್ಲ

ನಾಯಿ ಕಡಿತ, ಹಾವು ಕಡಿತ ಸೇರಿದಂತೆ ಆರೋಗ್ಯ ಸೇವೆಗಳಿಗೆ ಅಗತ್ಯವಾಗಿ ಬೇಕಿರುವ ಎಲ್ಲಾ ಔಷಧಿಗಳ ಪೂರೈಕೆಯು ಸಾಕಷ್ಟು ಜಿಲ್ಲೆಯಲ್ಲಿ ಲಭ್ಯವಿದೆ. ಸರ್ಕಾರದಿಂದ ಉಚಿತವಾಗಿ ಸಿಗಬೇಕಿ ರುವ ಆರೋಗ್ಯ ತಪಾಸಣೆ, ಚಿಕಿತ್ಸೆ, ಔಷಧಿ ವಿತರಣೆಯ ಎಲ್ಲ ಆರೋಗ್ಯ ಸೇವೆಗಳು ಉಚಿತವಾಗಿ ಜನರಿಗೆ ದೊರಕಬೇಕು. ಗೌರಿಬಿದನೂರು ತಾಯಿ ಮಕ್ಕಳ ಆಸ್ಪತ್ರೆಗೆ ತಿಂಗಳಿಗೆ ಸರಾಸರಿ 15000 ಹೊರ ರೋಗಿಗಳು ಮತ್ತು 500 ಒಳರೋಗಿಗಳು ದಾಖಲಾಗಿ ಆರೋಗ್ಯ ಸೇವೆ ಪಡೆಯುತ್ತಿದ್ದಾರೆ.

ಸ್ವ ಪಕ್ಷದ ಶಾಸಕರ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ: ಜಿ.ಪಂ ಮಾಜಿ ಸದಸ್ಯ ಕೆ.ಎಂ.ಮುನೇಗೌಡ

ಸ್ವ ಪಕ್ಷದ ಶಾಸಕರ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ

ಶಾಸಕರ ವಿರುದ್ಧ ಆರೋಪ ಮಾಡುವವರು ತಮ್ಮಿಂದ ಪಕ್ಷಕ್ಕೆ ಎಷ್ಟು ಲಾಭವಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಳೆದ ಮೂರು ವರ್ಷಗಳಲ್ಲಿ ನಡೆದ ಚುನಾವಣೆಯಲ್ಲಿ ಶಾಸಕರು ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಆರೋಪ ಮಾಡುವವರು ಎಷ್ಟು ಬಾರಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ ಎಂಬುದನ್ನು ತಿಳಿಸಿ ಎಂದು ಸವಾಲು ಹಾಕಿದರು.

ಭೂಮಿ ಜೀವ ಸಂಕುಲ ಹೊಂದಿರುವ ಏಕೈಕ ಗ್ರಹ. ಭೂಮಿಯ ಆರೋಗ್ಯ ಕಾಪಾಡಿಕೊಳ್ಳುವುದು ಅನಿವಾರ್ಯ

ಭೂಮಿಯ ಆರೋಗ್ಯ ಕಾಪಾಡಿಕೊಳ್ಳುವುದು ಅನಿವಾರ್ಯ

1970ರಲ್ಲಿ ಮೊದಲ ಪ್ರಾರಂಭವಾದ ವಿಶ್ವ ಭೂದಿನ ಆಚರಣೆ ಇಂದು ವಿಶ್ವದೆಲ್ಲೆಡೆ ಆಚರಿಸ ಲಾಗುತ್ತಿದೆ. ನಮ್ಮ ದೇಶದಲ್ಲಿ ಭೂಮಿಯ ಬಗ್ಗೆ ಪೂಜ್ಯ ಭಾವನೆ ಹೊಂದಿದ್ದು, ಮಾತೃ ಸ್ಥಾನ ನೀಡಿದ್ದೇವೆ.  ನಮ್ಮ ಸುತ್ತಮುತ್ತಲಿನ ಮಣ್ಣು, ನೀರು ಮತ್ತು ಗಾಳಿ ಸಂರಕ್ಷಣೆ ಮಾಡಬೇಕಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ನಮ್ಮಲ್ಲರ ಕರ್ತವ್ಯ

Gauribidanur News: ರಕ್ತದಾನ ಜೀವದಾನಕ್ಕೆ ಸಮಾನ: ಬಿ.ಆರ್.ಶ್ರೀನಿವಾಸ್ ಮೂರ್ತಿ

ರಕ್ತದಾನ ಜೀವದಾನಕ್ಕೆ ಸಮಾನ: ಬಿ.ಆರ್.ಶ್ರೀನಿವಾಸ್ ಮೂರ್ತಿ

ರಕ್ತದಾನ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುವುದಿಲ್ಲ. ಕೇವಲ ಹತ್ತು ನಿಮಿಷಗಳಲ್ಲಿ ರಕ್ತದಾನ ಮಾಡಬಹುದು ,ಇಪ್ಪತ್ತು ನಿಮಿಷಗಳಲ್ಲಿ ಚೇತರಿಸಿಕೊಳ್ಳಬಹುದು , ಆರೋಗ್ಯವಂತ ವ್ಯಕ್ತಿಗಳು ಕಾಲ ಕಾಲಕ್ಕೆ ರಕ್ತದಾನ ಮಾಡುವುದರಿಂದ ಹೃದಯ ರಕ್ತ ನಾಳಗಳು ಶುದ್ಧಗೊಳ್ಳುವುದು, ಮಧುಮೇಹ ಕಡಿವಾಣ ಸೇರಿದಂತೆ ಅನೇಕ ಆರೋಗ್ಯದ ಲಾಭಗಳಿವೆ.

ಸಾರ್ವಜನಿಕ ಕೊಳವೆ ಬಾವಿ ಅತಿಕ್ರಮಣ ಆರೋಪ: ಕಾಂಪೌಂಡ್ ತೆರವಿಗೆ ಅಧಿಕಾರಿಗಳ ಸೂಚನೆ

ಸರ್ಕಾರಿ ಜಾಗವೆಂದು ದೃಢಪಟ್ಟರೆ ಬಿಟ್ಟು ಕೊಡಲು ಸಿದ್ಧ

ಪೋಲಂಪಲ್ಲಿ ಮತ್ತು ಜಂಗಾಲಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಹಲವು ವರ್ಷಗಳ ಹಿಂದೆ ಈ ಕೊಳವೆಬಾವಿ ಕೊರೆಸಲಾಗಿತ್ತು. ಇದಕ್ಕೆ ಪ್ರತ್ಯೇಕ ವಿದ್ಯುತ್ ಟ್ರಾನ್ಸ್ಫಾರ್ಮರ್ ಕೂಡ ಅಳವಡಿಸಲಾಗಿತ್ತು.

Gudibande News: ಎಲ್ಲವನ್ನೂ ನೀಡುವ ಭೂ ತಾಯಿಯನ್ನು ನಾವು ಸಂರಕ್ಷಿಸೋಣ : ನಾಗಮಣಿ

ಎಲ್ಲವನ್ನೂ ನೀಡುವ ಭೂ ತಾಯಿಯನ್ನು ನಾವು ಸಂರಕ್ಷಿಸೋಣ : ನಾಗಮಣಿ

ಇಂದು ಭೂಮಿ ನಮಗೆ ಸಾಕಷ್ಟು ನೀಡಿದೆ. ಆದರೆ ನಾವು ಭೂಮಿಯನ್ನು ನಾಶ ಮಾಡುತ್ತಿದ್ದೇವೆ. ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಭೂಮಿ ಹಂತ ಹಂತವಾಗಿ ನಾಶವಾಗುತ್ತಿದೆ. ಭೂಮಿ ಇಲ್ಲ ಅಂದರೇ ಇಡೀ ವಿಶ್ವವೇ ನಾಶವಾಗುತ್ತದೆ. ಆದ್ದರಿಂದ ನಾವೆಲ್ಲರೂ ಭೂಮಿಯನ್ನು ಕಾಪಾಡು ವಂತಹ ಕೆಲಸ ಮಾಡಬೇಕು. ಇದೀಗ ಉಪ್ಪಾರಹಳ್ಳಿ ಗ್ರಾಮದಲ್ಲಿ ಪುರಾತನ ಕಲ್ಯಾಣಿಯನ್ನು ಸ್ವಚ್ಛ ಗೊಳಿಸಲಾಗಿದೆ.

ಏ.24, 25ರಂದು ಸಮ್ಮೇಳನ: ದೇಶವಿದೇಶಗಳ 365 ಪ್ರಬಂಧ ಮಂಡನೆ, ಚುಂಚಶ್ರೀಗಳಿಂದ ಉದ್ಘಾಟನೆ

ಏ.24, 25ರಂದು ಸಮ್ಮೇಳನ: ದೇಶವಿದೇಶಗಳ 365 ಪ್ರಬಂಧ ಮಂಡನೆ

ನಮ್ಮ ಕಾಲೇಜಿನ ಕ್ಯಾಂಪಸ್ ಆದಿಚುಂಚನಗಿರಿ ಸಭಾಂಗಣದಲ್ಲಿ 4ನೇ ವರ್ಷದ  ಐಇಇಇ ನಾಲೆಡ್ಜ್ ಇಂಜನಿಯರಿಂಗ್ ಮತ್ತು ಕಮ್ಯುನಿಕೇಷನ್ ಸಿಸ್ಟಮ್ ಎಂ ವಿಷಯದ ಮೇಲೆ ಅಂತರಾಷ್ಟ್ರೀಯ ಸಮ್ಮೇ ಳನವನ್ನು ಏ.24 ಮತ್ತು 25ರಂದು ಐಇಇಇ ಸ್ಟುಡೆಂಟ್ ಚಾಪ್ಟರ್ ಎಸ್‌ಜೆಸಿಐಟಿ ಮತ್ತು ಐಇಇಇ ಕಮ್ಯುನಿಕೇಷನ್ ಸೊಸೈಟಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ದೇಶ ವಿದೇಶಗಳ 13ಕ್ಕೂ ಹೆಚ್ಚು ದೇಶಗಳ 365ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಭಾಗಿಯಾಗುತ್ತಿದ್ದಾರೆ

Loading...