ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಿಕ್ಕಬಳ್ಳಾಪುರ

ಆರೋಗ್ಯದ ಸಮಗ್ರ ಪರಿಕಲ್ಪನೆಗೆ ಯೋಗವೇ ಮಾರ್ಗ: ನ್ಯಾಯಮೂರ್ತಿ ಡಾ.ವಿ.ಶ್ರೀಶಾನಂದ

ಆರೋಗ್ಯದ ಸಮಗ್ರ ಪರಿಕಲ್ಪನೆಗೆ ಯೋಗವೇ ಮಾರ್ಗ

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದ ಅವರು, ಆಯುರ್ವೇದದ ಪ್ರಕಾರ ಮನುಷ್ಯನ ದೇಹವು ವಾತ, ಪಿತ್ತ ಮತ್ತು ಕಫ ಎಂಬ ಮೂರು ಮೂಲ ಧಾತುಗಳ ಮೇಲೆ ನಿಂತಿದೆ

Chinthamani News: ವಯೋನಿವೃತ್ತ ವೆಂಕಟಚಲಪತಿ ಎನ್.ದಂಪತಿಗೆ ಗಣ್ಯರಿಂದ ಆತ್ಮೀಯ ಸನ್ಮಾನ

ಮೂರು ದಶಕಗಳ ಸಾರ್ಥಕ ಸೇವೆಗೆ ಗೌರವದ ವಿದಾಯ

1986ರಿಂದ 1992ರವರೆಗೆ ದಿನಸಿ ಅಂಗಡಿ ಹಾಗೂ ಕಡಲೆಕಾಯಿ ವ್ಯಾಪಾರ ನಡೆಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಅವರು, 1992ರ ಆಗಸ್ಟ್ 29ರಂದು ಶಿಡ್ಲಘಟ್ಟ ತಾಲೂಕಿನ ಕ್ಯಾಸಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸರ್ಕಾರಿ ಸೇವೆಗೆ ಸೇರ್ಪಡೆಯಾದರು. 1998ರ ಜೂನ್ 22ರಂದು ಬುರುಡಗುಂಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಸೇವೆ ಮುಂದು ವರಿಸಿದರು.

Chikkaballapur News: ದೇಶದ ಮೊದಲ ಅಂತಾರಾಷ್ಟ್ರೀಯ ಎಂಡೋಸ್ಕೋಪಿಕ್–ರೋಬೋಟಿಕ್ ಶಸ್ತ್ರಚಿಕಿತ್ಸಾ ಸಮ್ಮೇಳನಕ್ಕೆ ಚಾಲನೆ

ಪರೋಪಕಾರ ಸೇವೆಗೆ ಶ್ರೀ ಮಧುಸೂಧನ್ ಸಾಯಿ ಆಸ್ಪತ್ರೆ ಮಾದರಿ

ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಆಶ್ರಯದಲ್ಲಿ, ಮಣಿಪಾಲ್ ಆಸ್ಪತ್ರೆ ಹಾಗೂ ಎಸ್‌ಎಸ್ ಇನ್ನೋ ವೇಷನ್ಸ್ ಸಹಯೋಗದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಭಾರತ, ಗ್ರೀಸ್, ಅಮೆರಿಕ, ಚೀನಾ, ಬ್ರೆಜಿಲ್, ಉಕ್ರೇನ್, ಜರ್ಮನಿ ಹಾಗೂ ವಿಯೆಟ್ನಾಂ ಸೇರಿದಂತೆ ಹಲವು ರಾಷ್ಟ್ರಗಳ ಹೃದಯ ಶಸ್ತ್ರ ಚಿಕಿತ್ಸಾ ತಜ್ಞರು, ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು

Actress Haripriya & Actor Vashishta Simha: 18ನೇ ಈಶ ಗ್ರಾಮೋತ್ಸವಕ್ಕೆ ಹರಿಪ್ರಿಯಾ, ವಸಿಷ್ಠ ಸಿಂಹ ಹಾಗೂ ಆರ್‌ಜೆ ಅಮಿತ್ ಚಾಲನೆ

ಈಶ ಗ್ರಾಮೋತ್ಸವದಲ್ಲಿ ಭಾಗಿ: ಶಾಲಾ ದಿನಗಳ ಸ್ಮರಿಸಿದ ನಟಿ ಹರಿಪ್ರಿಯಾ

ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈಶ ಗ್ರಾಮೋತ್ಸವವು ಅತ್ಯುತ್ತಮ ಉಪಕ್ರಮವಾಗಿದ್ದು, ಕ್ರೀಡೆಯ ಮೂಲಕ ಗ್ರಾಮೀಣ ಸಮಾಜದಲ್ಲಿ ಆತ್ಮವಿಶ್ವಾಸ ಮತ್ತು ಒಗ್ಗಟ್ಟನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಭಾಗವಹಿಸುವ ಪ್ರತಿಯೊಬ್ಬರೂ ವಿಜೇತರೇ. ಎಲ್ಲ ತಂಡಗಳಿಗೂ ಶುಭವಾಗಲಿ ಎಂದು ಹರಿಪ್ರಿಯಾ ಹಾರೈಸಿದರು.

SIR: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಭಾಗವಹಿಸಿ: ನಾಗಮಣಿ ಎಂ.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಭಾಗವಹಿಸಿ

ಜೂನ್ 30ರಿಂದ ಆರಂಭಗೊಂಡಿರುವ ಎಸ್‌ಐಆರ್ ಪ್ರಕ್ರಿಯೆಯು ಜು.29ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಹೊಸ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಹಾಗೂ ಹೆಸರು ಕೈಬಿಡುವಿಕೆ ಸೇರಿದಂತೆ ವಿವಿಧ ಸೇವೆಗಳಿಗೆ ಮತದಾರರು ಬಿಎಲ್ಒಗಳ ಮೂಲಕ ಮೂಲಕ ಅರ್ಜಿ ಸಲ್ಲಿಸಬಹುದು

Chikkaballapur News: ವಿದ್ಯಾರ್ಥಿಗಳಿಗೆ ವಿವಿಧ ಕಾನೂನುಗಳ ಕುರಿತು ಅರಿವು ಮೂಡಿಸಿದ ಕಾನೂನು ಅಭಿರಕ್ಷಕರು

ವಿದ್ಯಾರ್ಥಿಗಳಿಗೆ ವಿವಿಧ ಕಾನೂನುಗಳ ಕುರಿತು ಅರಿವು

ಯಾರಾದರೂ ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದರೆ, ಬೆದರಿಕೆ ಹಾಕಿದರೆ ಅಥವಾ ಯಾವುದೇ ರೀತಿಯ ಲೈಂಗಿಕ ಕಿರುಕುಳ ನೀಡಿದರೆ ಅದನ್ನು ಮರೆಮಾಚದೆ ಪೋಷಕರು, ಶಿಕ್ಷಕರು, ಶಾಲಾ ಮುಖ್ಯೋಪಾಧ್ಯಾಯರು, ಮಕ್ಕಳ ಸಹಾಯವಾಣಿ 1098 ಅಥವಾ ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡಬೇಕು

CITU: ಸಾವಿರಾರು ನೌಕರರ ಪ್ರತಿಭಟನೆ; ಸಮಾನ ವೇತನ, ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಮನವಿ

ಕರಾಳ ದಿನಾಚರಣೆಯಲ್ಲಿ ಸ್ಕೀಂ ನೌಕರರ ಆಕ್ರೋಶ

ಸಮಾನ ಕೆಲಸಕ್ಕೆ ಸಮಾನ ವೇತನ, ಗೌರವಧನ ಹೆಚ್ಚಳ, ಅಂಗನವಾಡಿ ಮತ್ತು ಅಕ್ಷರ ದಾಸೋಹ ಯೋಜನೆಗಳಿಗೆ ಸಮರ್ಪಕ ಅನುದಾನ, ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಪ್ರಸ್ತಾವ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಪ್ರತಿಭಟನಾ ಕಾರರು, ಜಿಲ್ಲಾಡಳಿತದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.

Chinthamani News: ಮನೆಯಿಂದ ಹೋದ ಬಾಲಕ ಮರಳಿ ವಾಪಸ್ ಬರಲಿಲ್ಲ: ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು

ಮನೆಯಿಂದ ಹೋದ ಬಾಲಕ ಮರಳಿ ವಾಪಸ್ ಬರಲಿಲ್ಲ

ಸಂಜೆಯಾದರೂ ಮನೆಗೆ ಬಾರದೇ ಇರುವ ಕಾರಣಕ್ಕೆ ಅವರ ತಂದೆ ತಾಯಿ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸುಳಿವು ಸಿಗದೇ ಇರುವ ಕಾರಣಕ್ಕೆ ಇಂದು ಅವರ ಅಣ್ಣ ಹಿದಾಯತ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ

Chinthamani News: ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಕೂಡ ಉತ್ತಮ ಕಾರ್ಯ: ಆರ್.ನರಸಿಂಹಮೂರ್ತಿ

ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಕೂಡ ಉತ್ತಮ ಕಾರ್ಯ

ಗ್ರಾ ಪಂ. ಮಾಜಿ ಅಧ್ಯಕ್ಷ ಎಸ್.ಅಂಜನಪ್ಪನವರು ಮಾತನಾಡಿ, ಶ್ರೀಯುತ ನರಸಿಂಹಮೂರ್ತಿ ರವರು ಇದೇ ಗ್ರಾಮದಲ್ಲಿ ಹುಟ್ಟಿದವರಾಗಿದ್ದು, ತನ್ನ ಹುಟ್ಟೂರಿನ ಬಗ್ಗೆ ಹೆಚ್ಚಿನ ಅಭಿಮಾನ ಹೊಂದಿದ್ದಾರೆ ಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳಿಗೆ ,ದೇಗುಲಗಳಿಗೆ, ಶಾಲೆಗಳಿಗೆ, ಬಡ ಬಗ್ಗರಿಗೆ ಹಾಗೂ ಇತರೆ ಸೇವಾ ಕಾರ್ಯಗಳಿಗೆ ವಿಶೇಷ ಕೊಡುಗೆ ನೀಡಿದ್ದಾರೆಂದು ತಿಳಿಸಿ ಅವರ ಸೇವಾ ಭಾವನೆಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರವಿನ್ನು ವಿಶ್ವಬಳ್ಳಾಪುರ: ಮಧುಸೂದನ ಸಾಯಿ

ಚಿಕ್ಕಬಳ್ಳಾಪುರವಿನ್ನು ವಿಶ್ವಬಳ್ಳಾಪುರ: ಮಧುಸೂದನ ಸಾಯಿ

ಚಿಕ್ಕಬಳ್ಳಾಪುರ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವರ್ಷಗಳ ಹಿಂದೆ ಉದ್ಘಾಟಿಸಿದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯು ಬಿಲ್ಲಿಂಗ್ ಕೌಂಟರ್‌ಗಳಿಲ್ಲದೆ ಎಲ್ಲ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಆರೈಕೆ ನೀಡುತ್ತಿದ್ದು ಇಂತಹ ಸೌಲಭ್ಯ ನೀಡುವ ವಿಶ್ವದ ಏಕೈಕ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಗುರುತಿಸಿಕೊಂಡಿದೆ.

'ಮಾನವ ಸೇವೆಯೇ ಮಾಧವ ಸೇವೆ'; ಆರೋಗ್ಯ, ಶಿಕ್ಷಣ ವ್ಯಾಪಾರವಾಗಬಾರದು: ಸತ್ಯಸಾಯಿ ಗ್ರಾಮದಲ್ಲಿ ಮಾಧ್ಯಮ ಸಂವಾದ

ಶಕ್ತಿ–ಸಾಮರ್ಥ್ಯ ಇದ್ದಾಗ ಸಮಾಜಕ್ಕೆ ನೆರವಾಗಬೇಕು

ತಾಲೂಕಿನ ಮುದ್ದೇನಹಳ್ಳಿ ಸಮೀಪದ ಸತ್ಯಸಾಯಿ ಗ್ರಾಮದಲ್ಲಿ ಗುರುವಾರ ನಡೆದ ಮಾಧ್ಯಮ ಮಿತ್ರರೊಂದಿಗೆ ಸೌಹಾರ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮಾನವ ಸೇವೆಯೇ ಮಾಧವ ಸೇವೆ ಎಂಬ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಪರಿವರ್ತನೆ ಸಾಧ್ಯ

Chinthamani News: ಜು.11ರಂದು ಬೆಂಗಳೂರಿಗೆ ಚಿಂತಾಮಣಿಯಿಂದ ಬಸ್ ವ್ಯವಸ್ಥೆ; ಸರ್ಕಾರಿ ನೌಕರರಿಗೆ ಆರ್. ಅಶೋಕ್ ಕುಮಾರ್ ಕರೆ

'ನಮ್ಮ ಅಭಿಮಾನದ ಅಭಿನಂದನೆ' ಕಾರ್ಯಕ್ರಮ ಯಶಸ್ವಿಗೊಳಿಸಿ

ಜು.11ರಂದು ಬೆಳಗ್ಗೆ 7 ಗಂಟೆಗೆ ಚಿಂತಾಮಣಿ ನಗರದ ಸರ್ಕಾರಿ ಭವನದ ಮುಂಭಾಗದಿಂದ ಬೆಂಗಳೂರಿಗೆ ತೆರಳಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕಿನ ಎಲ್ಲಾ ಸರ್ಕಾರಿ ನೌಕರರು, ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಈ ಸೌಲಭ್ಯವನ್ನು ಬಳಸಿ ಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಗುಡಿಬಂಡೆಯಲ್ಲಿ ವಿಶೇಷ ಮೊಹರಂ ಆಚರಣೆ: ಭಾವೈಕ್ಯದ ಸಂದೇಶ ಸಾರಿದ ಮೆರವಣಿಗೆ

ಗುಡಿಬಂಡೆಯಲ್ಲಿ ವಿಶೇಷ ಮೊಹರಂ ಆಚರಣೆ

ಮೆರವಣಿಗೆಗೆ ಮುನ್ನ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಮೌಲಾನಾಗಳು ಹಸನ್-ಹುಸೇನ್ ಅವರ ತ್ಯಾಗ, ಮಹತ್ವ ಹಾಗೂ ಮೊಹರಂ ಆಚರಣೆಯ ಧಾರ್ಮಿಕ ಹಿನ್ನೆಲೆಯ ಕುರಿತು ಉಪನ್ಯಾಸ ನೀಡಿದರು. ಬಳಿಕ ಜಾಮಿಯಾ ಮಸೀದಿ ಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

SIR: ಎಸ್‌ಐಆರ್ ಚುನಾವಣಾ ಆಯೋಗದ ನಿಯಮಿತ ಪ್ರಕ್ರಿಯೆ; ಸಹಕಾರ ನೀಡಬೇಕು: ದತ್ತಾತ್ರಿ

ಇದು ಬಿಜೆಪಿ ಅಥವಾ ಕೇಂದ್ರ ಸರ್ಕಾರದ ಸಂಚು ಅಲ್ಲ

ಮತದಾರರ ಪಟ್ಟಿಯನ್ನು ಶುದ್ಧೀ ಕರಿಸಿ, ಅನರ್ಹ ಹಾಗೂ ನಕಲಿ ಮತದಾರರ ಹೆಸರನ್ನು ತೆಗೆದುಹಾಕಿ ಅರ್ಹ ಮತದಾರರ ಹೆಸರನ್ನು ಖಚಿತಪಡಿಸುವ ಉದ್ದೇಶದಿಂದ ಚುನಾವಣಾ ಆಯೋಗವು ಕಾಲಕಾಲಕ್ಕೆ ಈ ಪ್ರಕ್ರಿಯೆಯನ್ನು ಕೈಗೊಳ್ಳುತ್ತದೆ. ಜನರು ಯಾವುದೇ ಗೊಂದಲಕ್ಕೆ ಒಳಗಾಗದೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಚುನಾವಣಾ ಆಯೋಗಕ್ಕೆ ಸಂಪೂರ್ಣ ಸಹಕಾರ ನೀಡಬೇಕು

Protest: ಮಾರುಕಟ್ಟೆಯಲ್ಲಿ ಗಲಾಟೆ: ಹಮಾಲಿ ಕಾರ್ಮಿಕರ ಮೇಲೆ ಟೊಮೆಟೊ ಲಾರಿ ಡ್ರೈವರ್ ದೌರ್ಜನ್ಯ, ವ್ಯಾಪಾರಿಗಳ ಆಕ್ರೋಶ.

ಹಮಾಲಿ ಕಾರ್ಮಿಕರ ಮೇಲೆ ಟೊಮೆಟೊ ಲಾರಿ ಡ್ರೈವರ್ ದೌರ್ಜನ್ಯ

ಗೇಟ್ ನಂ 1 ಮತ್ತು 2 ರಲ್ಲಿ ಅಕ್ಕಿ ಮತ್ತಿತರ ಧವಸಧಾನ್ಯಗಳು ವ್ಯಾಪಾರಿಗಳೇ ಹೆಚ್ಚಾಗಿದ್ದಾರೆ.ಅಕ್ಕಿ ತರುವ ಲಾರಿಗಳು 2-3 ದಿನ ರಸ್ತೆಯಲ್ಲೇ ನಿಲ್ಲಬೇಕಾಗಿರುವುದು ಸಮಸ್ಯೆ ಆಗಿದೆ. ರಸ್ತೆಯಲ್ಲೇ ವಾಹನಗಳು ನಿಂತಿರುತ್ತವೆ,ಬಾಕ್ಸ್ ಗಳನ್ನು ರಸ್ತೆಯಲ್ಲೇ ಇಟ್ಟುಕೊಂಡಿರುತ್ತಾರೆ.ಕೇಳಿದರೆ ಗಲಾಟೆ ಮಾಡಲು ಬರುತ್ತಾರೆ. ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಎಂ ಜಿ ರಮೇಶಬಾಬು ದೂರಿದರು.

Gudibande News: ನೈಜ ಚುನಾವಣೆಯ ಅನುಭವ ಪಡೆದ ವಿದ್ಯಾರ್ಥಿಗಳು; ಪ್ರಜಾಪ್ರಭುತ್ವ ಮೌಲ್ಯಗಳ ಅರಿವು

ಹಬ್ಬದ ಸಂಭ್ರಮದಲ್ಲಿ ಮಾಚಹಳ್ಳಿ ಶಾಲಾ ಸಂಸತ್ ಚುನಾವಣೆ

ಅಭ್ಯರ್ಥಿಗಳ ಪ್ರಚಾರ, ಪರ–ವಿರೋಧ ಪಕ್ಷಗಳ ಆರೋಪ–ಪ್ರತ್ಯಾರೋಪ, ಮತದಾರರ ಓಲೈಕೆ, ಮತಗಟ್ಟೆ ಮುಂದೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವಿದ್ಯಾರ್ಥಿಗಳು ಹಾಗೂ ಫಲಿತಾಂಶ ಕ್ಕಾಗಿ ಕಾತರದಿಂದ ಕಾಯುತ್ತಿದ್ದ ಅಭ್ಯರ್ಥಿಗಳ ಸಂಭ್ರಮ ಸಾಮಾನ್ಯ ಚುನಾವಣೆಯನ್ನೇ ನೆನಪಿಸು ವಂತಿತ್ತು. ಮತದಾನಕ್ಕೂ ಮುನ್ನ ಎಲ್ಲ ವಿದ್ಯಾರ್ಥಿಗಳು ಮತದಾರರ ಪ್ರತಿಜ್ಞೆ ಸ್ವೀಕರಿಸಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದರು.

Chinthamani News: ಚಿಂತಾಮಣಿ ಡಿಸಿಸಿ ಬ್ಯಾಂಕ್‌ನಲ್ಲಿ 11 ಕೋಟಿ ರೂ.ಅವ್ಯವಹಾರ: ಸಿಐಡಿ ಅಧಿಕಾರಿಗಳ ದಿಢೀರ್ ದಾಳಿ!

ಚಿಂತಾಮಣಿ ಡಿಸಿಸಿ ಬ್ಯಾಂಕ್‌ನಲ್ಲಿ 11 ಕೋಟಿ ರೂ.ಅವ್ಯವಹಾರ

ದೂರಿನ ಬೆನ್ನಲ್ಲೇ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಡಿವೈಎಸ್ಪಿ ಹಾಗೂ ಸಿಬ್ಬಂದಿ ಚಿಂತಾಮಣಿ ಡಿಸಿಸಿ ಬ್ಯಾಂಕ್‌ಗೆ ಆಗಮಿಸಿ,ದೂರುದಾರ ಪ್ರತಾಪ್ ಕುಮಾರ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಮಹಜರು ಪ್ರಕ್ರಿಯೆ ನಡೆಸಿದರು.ತದನಂತರ ಆರೋಪ ಕೇಳಿಬಂದಿರುವ ವಿವಿಧ ವಿಎಸ್‌ಎಸ್‌ಎನ್ ಸೊಸೈಟಿಗಳ ಕಾರ್ಯದರ್ಶಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು

Chikkaballapur News: ರೈತರ ಭೂಮಿ ವಿವಾದ: ಜು.13ಕ್ಕೆ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ: ಕೆ.ಸಿ.ರಾಜಾಕಾಂತ್

ಜು.13ಕ್ಕೆ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ

1972–73ರಲ್ಲಿ ಕಂದಾಯ ಇಲಾಖೆಯೇ ಸರ್ವೆ ನಂಬರ್ 67ರಲ್ಲಿ ಸಿಂಗಾಟಿಕದಿರೇನಹಳ್ಳಿ,ಕಣಿವೆ ನಾರಾ ಯಣಪುರ, ಸುದ್ದಹಳ್ಳಿಯ ಪ್ರತಿಫಲಾನುಭವಿಗೆ 2 ರಿಂದ 3 ಎಕರೆ ಭೂ ಮಂಜೂರಾತಿ ಮಾಡಿ ಇವರ ಹೆಸರಿಗೆ ಖಾತೆ ಪಹಣಿ ಸೇರಿ ಎಲ್ಲಾ ದಾಖಲೆಗಳನ್ನು ವಿತರಣೆ ಮಾಡಿದೆ.ಇದರಲ್ಲಿ ಬೆಳೆ ಬೆಳದುಕೊಂಡು ಸ್ವಾಧೀನದಲ್ಲಿರುತ್ತಾರೆ.

ಆತ್ಮತೃಪ್ತಿಯ ದುಡಿಮೆಯ ಹಣದಿಂದ ಸಮಾಜ ಸೇವೆ ಮಾಡಿದರೆ ಭಗವಂತನಿಗೆ ಅರ್ಪಣೆ : ವಕೀಲ ಮಟಮಪ್ಪ ಅಭಿಮತ

ಆತ್ಮತೃಪ್ತಿಯ ದುಡಿಮೆಯ ಹಣದಿಂದ ಸಮಾಜ ಸೇವೆ ಮಾಡಿದರೆ ಭಗವಂತನಿಗೆ ಅರ್ಪಣೆ

"ಮಕ್ಕಳು ತಮ್ಮ ಬೇರುಗಳನ್ನು ಮರೆಯಬಾರದು. ತಂದೆ-ತಾಯಿಯ ಮಾತಿಗೆ ಗೌರವ ನೀಡಿ, ಗುರುಗಳ ಮಾರ್ಗದರ್ಶನವನ್ನು ತಪ್ಪದೆ ಅನುಸರಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ತಲೆ ಬಗ್ಗಿಸಿ ಓದಿದರೆ, ಭವಿಷ್ಯದಲ್ಲಿ ತಲೆಯೆತ್ತಿ ನಡೆಯಬಹುದು. ಕಷ್ಟಗಳಿಗೆ ಹೆದರದೆ ಗುರಿಯತ್ತ ದೃಷ್ಟಿನೆಟ್ಟರೆ ಯಶಸ್ಸು ನಿಮ್ಮದಾಗುತ್ತದೆ. ಪುಸ್ತಕಗಳಿಗೆ ಮಾಡುವ ವೆಚ್ಚ ಎಂದಿಗೂ ವ್ಯರ್ಥ ವಾಗುವುದಿಲ್ಲ. ಪುಸ್ತಕದ ಜ್ಞಾನವೇ ಉತ್ತಮ ಸಮಾಜ ಮತ್ತು ಭವ್ಯ ಭಾರತದ ನಿರ್ಮಾಣಕ್ಕೆ ಅಡಿಪಾಯ"

Chikkaballapur News: ನಮ್ಮದು ನುಡಿದಂತೆ ನಡೆದ ಸರಕಾರ: ಜಿಲ್ಲೆಯಲ್ಲಿ 7845 ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ : ಯಲುವಳ್ಳಿ ಎನ್.ರಮೇಶ್

ನಮ್ಮದು ನುಡಿದಂತೆ ನಡೆದ ಸರಕಾರ

ವಿದ್ಯಾರ್ಥಿ (ಪುರುಷ)ಗಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಉಚಿತ ಬಸ್ ಪಾಸ್ ಯೋಜನೆ ಯನ್ನೂ ಸರ್ಕಾರ ಇತ್ತೀಚಿಗೆ ಜಾರಿಗೆ ತಂದಿದೆ.ಗAಡು ಮಕ್ಕಳ ಶಿಕ್ಷಣ ಪ್ರಗತಿಗಾಗಿ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 7845 ವಿದ್ಯಾರ್ಥಿಗಳಿಗೆ ಇದುವರೆಗೆ ಉಚಿತ ಬಸ್ ಪಾಸ್ ಗಳನ್ನು ಕಳೆದ 15 ದಿನಗಳಲ್ಲಿ ವಿತರಿಸಲಾಗಿದೆ ಎಂದು ತಿಳಿಸಿದರು.

Gaubidanur News: ವಿದ್ಯಾರ್ಥಿ ಜೀವನದಲ್ಲಿ ಸಮಯದ ಅಪಮೌಲ್ಯ ಸಲ್ಲದು : ಶ್ರೀಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ

ವಿದ್ಯಾರ್ಥಿ ಜೀವನದಲ್ಲಿ ಸಮಯದ ಅಪಮೌಲ್ಯ ಸಲ್ಲದು

ಕೆಎಚ್‌ಪಿ ಫೌಂಡೇಶನ್ ವತಿಯಿಂದ ಕಳೆದ ಆರು ವರ್ಷಗಳಿಂದ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸುಮಾರು 40 ಲಕ್ಷ ವೆಚ್ಚದಲ್ಲಿ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಲಾಗಿದ್ದು, ಕುಡಿ ಯುವ ನೀರು, ಶೌಚಾಲಯ ಹಾಗೂ ಆಟದ ಮೈದಾನ ಸೇರಿದಂತೆ ಮೂಲಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ

Gudibande News: ದಲಿತರ ಭೂಮಿಯಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ; ಸಂತ್ರಸ್ಥರ ಅನಿರ್ದಿಷ್ಟಾವಧಿ ಮೌನ ಸತ್ಯಾಗ್ರಹ

ದಲಿತರ ಭೂಮಿಯಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ; ಮೌನ ಸತ್ಯಾಗ್ರಹ

ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರ ವೆಂಕಟೇಶ್ ಮಾತನಾಡಿ, ಗೋಮಾಳ ಹಾಗೂ ಪರಿಶಿಷ್ಟ ಸಮುದಾಯದ ಭೂಮಿಯಲ್ಲಿ ಸೋಲಾರ್ ಪ್ಲಾಂಟ್ ನಿರ್ಮಿಸಿರುವುದರಿಂದ ಹಲವು ರೈತರಿಗೆ ಅನ್ಯಾಯವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ

Gubbi News: ಎಸ್ಐಆರ್ ಜಾರಿಗೆ ತಂದ ಬಿಜೆಪಿಯಿಂದಲೇ ವಿರೋಧ..! : ಎಸ್.ಆರ್.ಶ್ರೀನಿವಾಸ್

ಎಸ್ಐಆರ್ ಜಾರಿಗೆ ತಂದ ಬಿಜೆಪಿಯಿಂದಲೇ ವಿರೋಧ..!

ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆ ಬಿಜೆಪಿಗೆ ಬಾರದ ಮತಗಳನ್ನು ಕಿತ್ತು ಹಾಕಲು ನಮ್ಮಲ್ಲಿ ಆಗುತ್ತಿಲ್ಲ ಎಂದು ನೋವು ಪಡುತ್ತಿರುವ ಬಿಜೆಪಿ ಪಕ್ಷದವರು ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣವನ್ನೇ ಮುಂದಿಟ್ಟುಕೊಂಡು ಸಲ್ಲದ ಆರೋಪಕ್ಕೆ ಮುಂದಾಗಿದೆ. ಕಾಂಗ್ರೆಸ್ ಕಾರ್ಯ ಕರ್ತರು ಎಲ್ಲೆಡೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಪಕ್ಷದ ಬಿಎಲ್ಎ 2 ಕೆಲಸ ಮಾಡಬೇಕಿದೆ

Gudibande News: ಜನಪದ ಸಂಸ್ಕೃತಿ ಹಾಗೂ ಕಲೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ : ರಂಗಭೂಮಿ ಹಿರಿಯ ಕಲಾವಿದ ಪ್ರಭಾಕರ್ ರಾವ್

ಜನಪದ ಸಂಸ್ಕೃತಿ ಹಾಗೂ ಕಲೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾ

ಇತ್ತೀಚಿನ ದಿನಗಳಲ್ಲಿ ಯುವಜನತೆ ಪಾಶ್ಚಾತ್ಯ ಸಂಸ್ಕೃತಿಯತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಹಿನ್ನೆಲೆ ಯಲ್ಲಿ ನಮ್ಮ ದೇಶೀಯ ಕಲೆ, ಸಂಸ್ಕೃತಿ, ಕ್ರೀಡೆ ಹಾಗೂ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಅಗತ್ಯ ವಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಲೆಗಳು ಕೇವಲ ಮನರಂಜನೆಗೆ ಸೀಮಿತವಾಗದೇ, ಸಮಾಜ ದಲ್ಲಿ ಸಾಮರಸ್ಯ, ಸೌಹಾರ್ದತೆ ಹಾಗೂ ಮಾನಸಿಕ ನೆಮ್ಮದಿಯನ್ನು ಬೆಳೆಸುವ ಶಕ್ತಿಯನ್ನು ಹೊಂದಿವೆ

Loading...