ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಚಿಕ್ಕಬಳ್ಳಾಪುರ
Chikkaballapur News: ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ "ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ" ಉದ್ಘಾಟಿಸಿ ಹೇಳಿಕೆ

ಪ್ರತಿಯೊಬ್ಬ ಗ್ರಾಹಕರಿಗೂ ಉತ್ಪನ್ನಗಳ ಮಾಹಿತಿ ಸಿಗಲಿ

ಗ್ರಾಹಕ ಯಾವುದೇ ವಸ್ತು,ಉತ್ಪನ್ನಗಳ ಖರೀದಿ ಮಾಡುವಾಗ, ಅಥವಾ ಸೇವೆ ಪಡೆದಾಗ ಅದರ ಗುಣಮಟ್ಟ ಸೇರಿದಂತೆ ಯಾವುದೇ ವಿಚಾರದಲ್ಲಿ ಪ್ರಶ್ನಿಸುವ ಹಕ್ಕು ಅವರಿಗಿದೆ.ವಸ್ತು ಅಥವಾ ಸೇವೆಯಲ್ಲಿ ಕೊರತೆ,ದೋಷ ಅಥವಾ ಲೋಪಗಳು ಇರಬಾರದು. ಒಂದು ವೇಳೆ ಗ್ರಾಹಕ ವಂಚ ನೆಗೆ ಒಳಗಾದರೆ ತನಗೆ ಕಾನೂನಾತ್ಮಕವಾಗಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಸೂಕ್ತ ನ್ಯಾಯ ಪಡೆಯಬಹುದು ಎಂದರು

Chikkaballapur News: ಇಫ್ತಿಯಾರ್ ಕೂಟದಲ್ಲಿ ಭಾಗಿಯಾದ ಎಸ್ಪಿ ಕುಶಾಲ್ ಚೌಕ್ಸೆ: ಶಾಂತಿ ಕಾಪಾಡಲು ಮುಖಂಡರಲ್ಲಿ ಮನವಿ

ಎಲ್ಲಾ ಹಬ್ಬಗಳ ಸಾರ ಭಾವೈಕ್ಯತೆ, ಧಾರ್ಮಿಕ ಸಾಮರಸ್ಯವೇ ಆಗಿದೆ

ನಗರದ ಬಿಬಿ ರಸ್ತೆಯಲಿರುವ ಉಸೇನಿಯಾ ದರ್ಗಾಕ್ಕೆ ಭೇಟಿ ನೀಡಿದ್ದ ಎಸ್ಪಿ ಕುಶಾಲ್ ಚೌಕ್ಸೆ ಮುಸ್ಲಿಂ ಬಾಂಧವರು ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲ ಭಾಗಿಯಾಗಿ ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿದ್ದು ಅದಕ್ಕೆ ಗೌರವ ಕೊಡುವುದನ್ನು ಕಲಿಯಬೇಕಿದೆ. ರಂಜಾನ್ ಹಬ್ಬ ವೂ ಸೇರಿದಂತೆ ಎಲ್ಲಾ ಹಬ್ಬಗಳ ಸಾರ ಭಾವೈಕ್ಯತೆ, ಧಾರ್ಮಿಕ ಸಾಮರಸ್ಯವೇ ಆಗಿದೆ.

MLA K H Puttaswamy Gowda: ನನ್ನ ಅವಧಿಯಲ್ಲಿ ತಾಲೂಕನ್ನು ಮಾದರಿಯಾಗಿ ರೂಪಿಸುವ ಸಂಕಲ್ಪ ಮಾಡಿದ್ದೇನೆ

ವಿವಿಧ ಕಾಮಗಾರಿಗಳಿಗೆ ಶಾಸಕ ಪುಟ್ಟಸ್ವಾಮಿಗೌಡ ಚಾಲನೆ

ಗೌರಿಬಿದನೂರು ನಗರ ವ್ಯಾಪ್ತಿಯ ಕೆ.ಇ.ಬಿ.ವಾರ್ಡ್, ಗೊಟಕನಾಪುರ,ಹಾಗೂ ಕೋಟೆ ಶಾಲೆ ಯ ಬಳಿ ಉರ್ದು ಶಾಲೆಯ ಬಳಿ ನೂತನವಾಗಿ ನಿರ್ಮಿಸಲಾಗಿದ್ದ ಶಾಲಾ ಕೊಠಡಿಗಳನ್ನು ಉದ್ಘಾಟಿ ಸಲಾಯಿತು. ಅಲ್ಲೀಪುರ ಹುಣಸೇಕುಂಟೆ ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದರು.

ಬಿಎಸ್‌ಎಸ್ ಮೈಕ್ರೋಫೈನಾನ್ಸ್ ವತಿಯಿಂದ ಜಿಲ್ಲೆಯ ಸರ್ಕಾರಿ ಶಾಲಾ ಕಾಲೇಜಿನ 250 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಕೆಲಸ

ಒಂದು ಕಡೆ ಮೈಕ್ರೋಫೈನಾನ್ಸ್ ಕಂಪನಿಗಳು ಸಾಲ ಮರುಪಾವತಿಗೆ ಕಿರುಕುಳ ಮಾಡುವ ಘಟನೆಗಳು ನಡೆಯುತ್ತಿವೆ ಇದರ ನಡುವೆ ಬಿಎಸ್‌ಎಸ್ ಮೈಕ್ರೋಫೈನಾನ್ಸ್ ಲಿಮಿಟೆಡ್ ಸಾಮಾ ಜಿಕ ಜವಾಬ್ದಾರಿ ಹೊತ್ತು ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ.ಶಿಕ್ಷಣಕ್ಕೆ ನೆರವು ಯಾರೇ ನೀಡಿದರೂ ಅದನ್ನು ಸ್ವಾಗತಿಸುತ್ತೇವೆ

Chikkaballapur News: ಜಿಲ್ಲಾಧಿಕಾರಿಗಳ ನ್ಯಾಯಾಲಯ ನೀಡಿದ್ದ ಅನರ್ಹತೆ ಆದೇಶಕ್ಕೆ ಹೈಕೋರ್ಟಿಂದ ತಡೆ

ದಿನಗಳ ಕಾಲ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟಿನ ಏಕಸದಸ್ಯ ಪೀಠ

ನಾಲ್ಕು ತಿಂಗಳ ಹಿಂದೆ ನಡೆದಿದ್ದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಫ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದ ನೇತ್ರಾವತಿ, ನಿರ್ಮಲಾ ಪ್ರಭು, ಸತೀಶ್, ಸ್ವಾತಿ ಮಂಜುನಾಥ್, ಅಂಬಿಕಾ ಮತ್ತು ರತ್ನಮ್ಮ ಅವರನ್ನು ಜಿಲ್ಲಾಧಿಕಾರಿ ಗಳ ನ್ಯಾಯಾಲಯ ಅನರ್ಹಗೊಳಿಸಿ ಆದೇಶ ನೀಡಿದ್ದರಿಂದ,ಇವರ ಬೆಂಬಲದಲ್ಲಿ ಅಧಿಕಾರಕ್ಕೆ ಏರಿದ್ದ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜ್ ಅವರ ಆಡಳಿತದ ಮೇಲೆ ಕಾರ್ಮೋಡ ಕವಿದಿತ್ತು

Dr M C Sudhakar: ಕೆಲವರು ಸುಲಭವಾಗಿ ಹಣ ಗಳಿಸಲು ಇದನ್ನು ದಂಧೆ ಮಾಡಿಕೊಂಡಿದ್ದಾರೆ

ಹನಿಟ್ರಾಪ್ ನಿರ್ಬಂಧಕ್ಕೆ ಕಾನೂನು ಬೇಕಿದೆ : ಡಾ.ಎಂ.ಸಿ.ಸುಧಾಕರ್

ದುರಾದೃಷ್ಟ ಸಂಗತಿ ಏನೆಂದರೆ ನಮ್ಮ ವಿರೋಧ ಪಕ್ಷದವರು ಅವರ ಸರಕಾರ ಇದ್ದಾಗ, ಅವರ ಸಚಿವ ಸಂಪುಟದಲ್ಲಿದ್ದ ಮಂತ್ರಿಗಳೇ ಕೋರ್ಟಿಗೆ ಹೋಗಿ ಮಾಧ್ಯಮದಲ್ಲಿ ಹನಿ ಟ್ರಾಪ್ ಸಂಬಂಧದ ವಿಡಿಯೋಗಳನ್ನು ಟಿವಿ ಮಾಧ್ಯಮದಲ್ಲಿ, ಸೋಷಿಯಲ್ ಮೀಡಿಯಾ ದಲ್ಲಿ ಅದನ್ನು ಬಿತ್ತರಿಸಬಾರದು ಎಂದು ನಿರ್ಬಂಧಕ ಆದೇಶ ತಂದಿದ್ದಾರೆ

ಬಡ ಮುಸ್ಲಿಂ ಕುಟುಂಬ ಗಳಿಗೆ ಉಚಿತವಾಗಿ ದಿನಸಿ ಕಿಟ್‌ಗಳ ವಿತರಣೆ

ಸೌಹಾರ್ಧತೆಯ ಬುನಾದಿ ಗಟ್ಟಿಗೊಳಿಸೋಣ :  ಕೆ.ಎಂ ನಾಗರಾಜ್

ರಂಜಾನ್ ಹಬ್ಬವು ಮುಸ್ಲಿಂ ಸಮುದಾಯದವರ ಪವಿತ್ರ ಹಬ್ಬವಾಗಿದೆ. ಹಾಗೆಯೇ, ದಾನ, ಧರ್ಮದ ಸಂಕೇತ.ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಸೀಮಿತ ಮಾಡದೇ, ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಕಾಣಬೇಕು. ಯಾರೊಬ್ಬರೂ ಸಹ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಸಾಮಾಜಿಕ ಸೇವೆಗಳ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆಲವು ಮಂದಿ ಆರ್ಥಿಕವಾಗಿ ಸದೃಢರಾಗಿರದ ಕುಟುಂಬಗಳಿಗೆ ಹಬ್ಬದ ಆಚರಣೆಗಾಗಿ ದಿನಸಿ ಕಿಟ್ ವಿತರಣೆ ಮಾಡಲಾ ಗಿದೆ

Chikkaballapur News: ಬಲಿಜ ಕುಲ ಬಾಂಧವರು ಸಂಘಟಿತರಾಗಬೇಕು : ವೆಂಕಟೇಶ್

ಕೈವಾರ ನಾರಾಯಣಪ್ಪ ತಾತನವರ 299ನೇ ಜಯಂತಿ ಕಾರ್ಯಕ್ರಮ

ತಾತಯ್ಯನವರ ಕಾಲ ಜ್ಙಾನ ಎಂದೆಂದಿಗೂ ಪ್ರಸ್ತುತ. ಸಮಾಜದಲ್ಲಿನ ಅಂಕು ಡೊಂಕು ಗಳನ್ನು ಸರಿಪಡಿಸಲು ಆಕಾಲದಲ್ಲಿ ತಾತಯ್ಯನವರು ಅವರ ಬರವಣಿಗೆಯ ಮೂಲಕ ಪ್ರಯತ್ನಿಸಿ ದರು. ಈ ಪುಟ್ಟ ಗ್ರಾಮದಲ್ಲಿ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ವಾಗಲು ನಾಗರೀಕರು ಬಲಿಜ ಕುಲಬಾಂಧವರು ಸಹಕಾರ ನೀಡಿದ್ದಾರೆ

Chikkaballapur News: ಕೈವಾರ ತಾತಯ್ಯನವರು ಸಮಾಜ ಸುಧಾರಕರಾಗಿದ್ದರು: ತಹಸೀಲ್ದಾರ್ ಸುದರ್ಶನ್ ಯಾದವ್

ಕೈವಾರ ತಾತಯ್ಯನವರ 299ನೇ ಜಯಂತಿ ಅರ್ಥಪೂರ್ಣವಾಗಿ ಆಚರಣೆ

ಪ್ರಪಂಚದಲ್ಲಿಯೇ ಮುಂದೊಂದು ದಿನ ನಡೆಯಬಹು ದಾದ ಪಾಪ ಕೃತ್ಯಗಳ ಪ್ರಾಬಲ್ಯ, ಪ್ರಳಯ ಸಂಪತ್ತಿನ ವಿನಾಶ, ಘೋರ ವೈಪರಿತ್ಯಗಳು, ಭ್ರಷ್ಟಾಚಾರ, ದೌರ್ಜನ್ಯ, ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ನಡೆಯುವ ಅನ್ಯಾಯದ ಘಟನೆಗಳನ್ನು ಶ್ರೀ ಯೋಗಿ ನಾರೇ ಯಣ ಯತೀಂದ್ರ ಅವರು ಕಾಲಜ್ಞಾನದಲ್ಲಿ ತಿಳಿಸಿದ್ದಾರೆ

Chikkaballapur News: ಓಣಿ ತೆರವು ಗೊಳಿಸುವ ವಿಚಾರಕ್ಕೆ ರೈತರ ಹಾಗೂ ಅಧಿಕಾರಿಗಳ ಮಧ್ಯೆ ಜಟಾಪಟಿ

ಎರಡನೇ ಬಾರಿ ಸರ್ವೆ ಮಾಡಲು ಫೀಲ್ಡಿಗೆ ಇಳಿದ ಅಧಿಕಾರಿಗಳು

ಓಣಿ ಗುರುತಿಸಿ ತೆರವುಗೊಳಿಸುವ ವಿಚಾರಕ್ಕೆ ರೈತರ ಹಾಗೂ ಸರ್ವೆಯರ್ ಮತ್ತೆ ಜಟಾಪಟಿ ನಡೆದು ಕೊನೆಗೆ ಪೊಲೀಸ್ ಸೂಕ್ತ ಬಂದೋಬಸ್ತ್ ನಲ್ಲಿ ತೆರವುಗೊಳಿಸಿದ ಘಟನೆ ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿ ಉಪ್ಪರಪೇಟೆ ಗ್ರಾಮ ಪಂಚಾ ಯತಿ ವ್ಯಾಪ್ತಿಯ ರಾಯ ಪಲ್ಲಿ ಗ್ರಾಮದಲ್ಲಿ ನಡೆದಿದೆ

Chikkaballapur News: ಹಳ್ಳಿಗಳ ಹೆಸರುಗಳ ಸ್ಪಷ್ಟ ಉಚ್ಚಾರಣೆಗೆ ಕಂದಾಯ ಇಲಾಖೆ, ಗೂಗಲ್ ಸಹಯೋಗದಲ್ಲಿ ಹೊಸ ಯೋಜನೆಗೆ ಕ್ರಮ : ಡಾ.ಪುರುಷೋತ್ತಮ ಬಿಳಿಮಲೆ

ಕನ್ನಡ ಭಾಷೆ ಕಲಿಸಲು ತರಬೇತಿ ಕಾರ್ಯಕ್ರಮ ಆಯೋಜನೆಗೆ ಕ್ರಮ

ರಾಜ್ಯದ 72 ಸಾವಿರ ಹಳ್ಳಿಗಳ ಹೆಸರುಗಳನ್ನು ಈಗಾಗಲೇ ಧ್ವನಿಮುದ್ರಣ ಮಾಡಿ, ಹೇಗೆ ಊರುಗಳ ಹೆಸರುಗಳನ್ನು ಸ್ಪಷ್ಟವಾಗಿ ಉಚ್ಚರಿಸಬೇಕೆಂದು ಮಾಹಿತಿ ಸಿದ್ದಪಡಿಸಲಾಗಿದೆ. ತಂತ್ರಜ್ಞಾನ ಮುಂದುವರೆದಂತೆ ಇಂದು ಪ್ರತಿಯೊಬ್ಬರೂ ಗೂಗಲ್ ಮ್ಯಾಪ್ ಅನ್ನು ಅನೇಕ ಸಂದರ್ಭಗಳಲ್ಲಿ ಬಳಸಿ ಅದರ ಮೇಲೆ ಹೆಚ್ಚು ಅವಲಂಬಿತರೂ ಆಗಿದ್ದಾರೆ. ಆದರೆ, ಗೂಗಲ್ ಮ್ಯಾಪ್‌ನ ಧ್ವನಿಯಲ್ಲಿ ಹಳ್ಳಿ ಅಥವಾ ಊರುಗಳ ಹೆಸರು ತಪ್ಪು ತಪ್ಪಾಗಿ ಉಚ್ಚಾ ರಣೆಯಾಗಿ ಬಳಕೆದಾರರಿಗೆ ಗೊಂದಲ ಮತ್ತು ಸಮಸ್ಯೆಯಾಗುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ

Chikkaballapur News: ಕ್ಷಯ ರೋಗ ನಿಯಂತ್ರಣದಲ್ಲಿ ರಾಜ್ಯಕ್ಕೆ ಚಿಕ್ಕಬಳ್ಳಾಪುರ ಪ್ರಥಮ: ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ

23 ಗ್ರಾ. ಪಂಗಳ ಕ್ಷಯಮುಕ್ತ ಗ್ರಾಮ ಪಂಚಾಯಿತಿಗಳನ್ನಾಗಿ ಘೋಷಣೆ

ವಿಶ್ವ ಕ್ಷಯರೋಗ ನಿರ್ಮೂಲನೆಗಾಗಿ ಕಳೆದ 5 ವರ್ಷಗಳಲ್ಲಿ ಕೈಗೊಂಡಿರುವ ಕ್ರಮಗಳ ವಿವಿಧ ಸೂಚ್ಯಂಕಗಳನ್ನು ರಾಜ್ಯ ಮಟ್ಟದಲ್ಲಿ ಪರಿಶೀಲಿಸಿ ಈ ಸ್ಥಾನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಅಯ್ಕೆ ಯಾಗಿದೆ. ಮರಣ ಪ್ರಮಾಣ ಇಳಿಕೆ, ಕ್ಷಯರೋಗಗಳ ಪ್ರಕರಣಗಳ ಇಳಿಕೆ, ಪತ್ತೆಹಚ್ಚುವಿಕೆ, ಚಿಕಿತ್ಸಾ ವಿಧಾನ ಸೇರಿದಂತೆ 12 ರೀತಿಯ ಮಾನದಂಡಗಳಲ್ಲಿ ಪರಿಶೀಲಿಸಿ ಈ ಸ್ಥಾನವನ್ನು ಚಿಕ್ಕಬಳ್ಳಾಪುರ ಗಳಿಸಿದೆ

Nandi Hills: ಇಂದಿನಿಂದ ನಂದಿ ಗಿರಿಧಾಮ ಒಂದು ತಿಂಗಳು ಬಂದ್‌

ಇಂದಿನಿಂದ ನಂದಿ ಗಿರಿಧಾಮ ಒಂದು ತಿಂಗಳು ಬಂದ್‌

ಪ್ರವಾಸಿಗರ ಹಿತದೃಷ್ಟಿಯಿಂದ ವೀಕೆಂಡ್ ಶುಕ್ರವಾರ ಸಂಜೆ 6.30ರಿಂದ ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಮಾತ್ರವೇ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಇನ್ನುಳಿದಂತೆ ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರದಂದು ವಾಹನಗಳ ಸಂಚಾರವನ್ನು ಬಂದ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Chikkaballapur News: ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆಯುತ್ತಿದ್ದರೂ ಇಲ್ಲೊಂದು ಗ್ರಾಮಕ್ಕೆ ಇದುವರೆಗೂ ರಸ್ತೆ ಸೌಲಭ್ಯ ಇಲ್ಲ

ಮಕ್ಕಳು ಕಾಲ್ನಡಿಗೆ ಮೂಲಕ ಪರೀಕ್ಷಾ ಕೇಂದ್ರ ತಲುಪುವುದು ಅನಿವಾರ್ಯ

ಬಾಗೇಪಲ್ಲಿ ತಾಲೂಕಿನ ಕಾನಗಮಾಕಲಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದೇಶಮಾರ ತಾಂಡ ಗ್ರಾಮವಿದ್ದು, ಈ ಗ್ರಾಮದಲ್ಲಿ ಲಂಬಾಣಿ ಜನಾಂಗಕ್ಕೆ ಸೇರಿದ 25 ಕುಟುಂಬಗಳು ಕೃಷಿ ಅವಲಂಬಿತರಾ ಗಿದ್ದಾರೆ. ಈ ಗ್ರಾಮದಲ್ಲಿ ಶಾಲಾ, ಕಾಲೇಜುಗಳಿಗೆ ಹೋಗುವ 19 ಮಕ್ಕಳು ಸೇರಿ 100 ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ.  3 ರಿಂದ 5 ವರ್ಷದ ಮಕ್ಕಳು 9 ಜನ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜು ವ್ಯಾಸಂಗ ಮಾಡುತ್ತಿರುವ ಮಕ್ಕಳು 10 ಕ್ಕೂ ಹೆಚ್ಚು ಜನ ಇದ್ದಾರೆ.

ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ರೈತ ಸಂಘ ಸದಸ್ಯತ್ವ ಅಭಿಯಾನ ರೈತರ ಬೆಳೆಗೆ ಬೆಂಬಲ ಬೆಲೆ ನೀಡಲು ಸರ್ಕಾರ ವಿಫಲ : ಜಿಲ್ಲಾ ಸಂಚಾಲಕ ಚನ್ನರಾಯಪ್ಪ

ಸೈನಿಕರು ಎಷ್ಟು ಪ್ರಧಾನವೋ ದೇಶಕ್ಕೆ ರೈತ ಬಾಂಧವರ ಶ್ರಮ ಅಷ್ಟೇ ಮುಖ್ಯ

ಎಲ್ಲಂಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುರಾಲುದಿನ್ನೆ ಹಾಗೂ ನೀರಿಗಟ್ಟಿಪಲ್ಲಿ ಗ್ರಾಮದ ರೈತರ ಹೊಲಗಳಿಗೆ ಬಳಿ ಹೋಗಿ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ  ಸಂಘಸ ಸದಸ್ಯತ್ವ ಅಭಿಯಾ ನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶವನ್ನು ಕಾಯುವ ಸೈನಿಕರು ಎಷ್ಟು ಪ್ರಧಾನವೋ ದೇಶಕ್ಕೆ ರೈತ ಬಾಂಧವರ ಶ್ರಮ ಅಷ್ಟೇ ಮುಖ್ಯವಾಗಿದೆ

Chikkaballapur News: ಕಲ್ಲೂಡಿ ವಿಎಸ್ಎಸ್ಎನ್ ಸೊಸೈಟಿ ಶಾಸಕರ ಬೆಂಬಲಿಗರ ಪಾಲು

ಕಲ್ಲೂಡಿ ವಿಎಸ್ಎಸ್ಎನ್ ಸೊಸೈಟಿ ಶಾಸಕರ ಬೆಂಬಲಿಗರ ಪಾಲು

ತೀವ್ರ ಪೈಪೋಟಿಯಿಂದ ಕೂಡಿದ ಕಲ್ಲೂಡಿ ಸೊಸೈಟಿಯ ಚುನಾವಣೆಯಲ್ಲಿ ನಮ್ಮ ಕೆಎಚ್ಪಿ ಬಣದ ಮುಖಂಡರು ಹಾಗೂ ಕಾರ್ಯಕರ್ತರು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ ಪರಿಣಾಮ ಎಲ್ಲಾ ಹನ್ನೆ ರಡು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.

ದೇಶ ವಿದೇಶಗಳು ಬೆಂಗಳೂರಿನತ್ತ ತಿರುಗಿ ನೋಡಲು ಕೆಂಪೇಗೌಡರು ಕಾರಣ : ಶ್ರೀ ಮಂಗಳಾನಂದನಾಥ ಸ್ವಾಮೀಜಿ

ಚಿಂತಾಮಣಿಯಲ್ಲಿ ಕರ್ನಾಟಕ ಕೆಂಪೇಗೌಡ ಒಕ್ಕಲಿಗರ ಸಂಘಕ್ಕೆ ಚಾಲನೆ ನೀಡಿ ಹೇಳಿಕೆ

ಕೆಂಪೇಗೌಡರು ಕೇವಲ ಒಕ್ಕಲಿಗರ ನಾಯಕರಾಗಿರಲಿಲ್ಲವೆಂದು ಅವರು ಕೈಗೊಂಡ ಆಡಳಿತ ಕ್ರಮ ಗಳಿಂದ ಎಲ್ಲರಿಗೂ ತಿಳಿಯುತ್ತದೆ. ಶತಶತಮಾನಗಳು ಕಳೆದರೂ ನಾಡಿನ ಜನರು ಮೆಲುಕು ಹಾಕುವ ರೀತಿಯಲ್ಲಿ ಕೆಂಪೇಗೌಡರು ಸುಮಾರು 48 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು.ಅವರ ಆಡಳಿತ ಮತ್ತು ದೂರದೃಷ್ಟಿ ಇಂದಿನ ಆಡಳಿತ ವ್ಯವಸ್ಥೆಗೆ ಮಾದರಿಯಾಗಿದೆ

CM Siddaramaiah: ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನ ಹೈಕಮಾಂಡ್‌ ಅಂತೆ! ಹೀಗಂದಿದ್ದು ಯಾರು ಗೊತ್ತಾ?

ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನ ಹೈಕಮಾಂಡ್‌ ಅಂತೆ!

ಶಿಡ್ಲಘಟ್ಟ ಕ್ಷೇತ್ರಕ್ಕೆ ಶಾಸಕ ರವಿಕುಮಾರ್ (JDS MLA Ravikumar) ಪ್ರತಿಕ್ರಿಯೆ ನೀಡಿದ್ದು, ಸಿಎಂ ಸಿದ್ದರಾಮಯ್ಯ (CM Siddaramaiah) ಪರ ಬ್ಯಾಟಿಂಗ್ ಮಾಡಿದ್ದು, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಹೈಕಮ್ಯಾಂಡ್ ಇದ್ದಂತೆ, ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Chikkaballapur News: ಇಪ್ತಿಯಾರ್ ಕೂಟದಲ್ಲಿ ಭಾಗಿಯಾಗಿ ಇಸ್ಲಾಂ ಬಾಂಧವರಿಗೆ ಶುಭ ಕೋರಿದ ಸಂದೀಪ್.ಬಿ.ರೆಡ್ಡಿ

ಸರ್ವ ಸಮುದಾಯಗಳ ಜತೆಗೆ ದೇಶದ ಅಭಿವೃದ್ಧಿಯೆ ಪಕ್ಷದ ಮೂಲ ಉದ್ದೇಶ

ಇನ್ನು ಸಾಮಾಜಿಕ ಸೇವೆಯೆ ಬೇರೆ, ರಾಜಕಾರಣವೇ ಬೇರೆ, ಯಾವುದೇ ರಾಜಕೀಯ ಲಾಭಕ್ಕಾಗಿ ನಾನು ಸಮಾಜಸೇವೆ ಅಥವಾ ಜನರ ಮೆಚ್ಚುಗೆಗಳಿಸಲು ಮುಂದಾಗುವುದಿಲ್ಲ. ಹಲವಾರು ವರ್ಷ ಗಳಿಂದ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿರುವೆ. ಸಮುದಾಯಗಳೊಂದಿಗೆ ರಾಜಕೀಯ ಮಾಡಲ್ಲ. ಇನ್ನು ಇಫ್ತಿಯಾರ್ ಕೂಟದ ಆಯೋಜನೆ ಇದೆ ಮೊದಲಲ್ಲ. ನನ್ನ ಸ್ವಗ್ರಾಮ ಪೆರೇಸಂದ್ರ ದಲ್ಲಿ ನಿರಂತರವಾಗಿ ಆಯೋಜಿಸಲಾಗುತ್ತಿದೆ

Chikkaballapur News: ಪ್ರೇಕ್ಷಕರನ್ನು ಸೆಳೆಯುವ ಜನಪ್ರಿಯ ನಾಟಕಗಳು ಮೂಡಿಬರಬೇಕಿದೆ : ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಟಿವಿ ಸಿನಿಮಾ ಇಲ್ಲದ ಕಾಲದಲ್ಲಿ ಜನರಿಗೆ ಮನರಂಜನೆ ನೀಡುತ್ತಿದ್ದವು

ಜೀವನವೇ ಒಂದು ನಾಟಕ ಶಾಲೆ. ನಾಟಕಗಳು ಅನಾದಿಕಾಲದಿಂದ ಬಂದಿರುವ ರಂಗಬಳುವಳಿ ಯಾಗಿವೆ. ಸಮಾಜದ ಸ್ಥಿತ್ಯಂತರಗಳನ್ನು, ಅಂಕುಡೊಂಕುಗಳನ್ನು ಐತಿಹಾಸಿಕ ಪೌರಾಣಿಕ, ಸಾಮಾ ಜಿಕ ನಾಟಕಗಳ ಮೂಲಕ ಜನರಿಗೆ ತಲುಪುತ್ತಿದ್ದವು. ಪ್ರತಿಭಾವಂತ ನಾಟಕಕಾರ ಕೃತಿಯನ್ನು ಬರೆಯಬ ಹುದು, ನಿರ್ದೇಶನ ಮಾಡಬಹುದು, ಅದರಲ್ಲಿ ನಟಿಸಲೂಬಹುದು

Chikkaballapur News: ಮಕ್ಕಳಿಗೆ ಅವರಿಷ್ಟದ ಕ್ಷೇತ್ರದಲ್ಲಿ ಬೆಳೆಯಲು ಬಿಟ್ಟರೆ ಸಮಾಜಕ್ಕೆ ಆಸ್ತಿಯಾಗುತ್ತಾರೆ

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ರಂಗಶಿಕ್ಷಣ ಅಗತ್ಯವಿದೆ

ಪೋಷಕರು ನಿಮ್ಮ ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಮುನ್ನುಗ್ಗಲು ಪ್ರೇರ ಣೆ ನೀಡಿ. ಬದಲಿಗೆ ನಮ್ಮ ದೊಡ್ಡಪ್ಪನ ಮನ ಡಾಕ್ಟರ್, ಇಂಜನಿಯರ್ ಆಗಿದ್ದಾರೆ. ನೀವೂ ಅದೇ ಆಗಬೇಕು ಎಂದು ನಿಮ್ಮ ಆಸೆಗಳನ್ನು ಅವರ ಮೇಲೆ ಹೊರಿಸಬೇಡಿ. ಬದಲಿಗೆ ಅವರಿಷ್ಟದ ಕ್ಷೇತ್ರ ದಲ್ಲಿ ಬೆಳೆಯಲು ಬಿಟ್ಟರೆ ಸಮಾಜಕ್ಕೆ ಆಸ್ತಿಯಾಗುತ್ತಾರೆ ಎಂದರು

Chikkaballapur News: ಹೊರಾಂಗಣ ಕ್ಕೆ ಕಾಂಕ್ರಿಟ್ ಮಾಡಿಸಲು ನನ್ನ ಸ್ವಂತ ಖರ್ಚನಲ್ಲಿ ಕಾಮಗಾರಿ ಮಾಡಿಸಿದ್ದೇನೆ

70 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ : ಶಾಸಕ ಪುಟ್ಟಸ್ವಾಮಿಗೌಡ

ಬೀದಿ ದೀಪಗಳ ಅಳವಡಿಕೆಯಿಂದ ರಾತ್ರಿ ವೇಳೆ ಸಾಕಷ್ಟು ಬೆಳಕು ಇರುವುದರಿಂದ ಅಪರಾಧಗಳಿಗೆ ಕಡಿ ವಾಣ ಮತ್ತು ಅಪಘಾತಗಳಿಗೆ ನಡೆಯದೆ ಇರುತ್ತದೆ. ನಗರದ ಜಾಮಿಯಾ ಮಸೀದಿ ಹೊರಾಂಗಣಕ್ಕೆ ಕಾಂಕ್ರಿಟ್ ಮಾಡಿಸಲು ನನ್ನ ಸ್ವಂತ ಖರ್ಚನಲ್ಲಿ ಕಾಮಗಾರಿ ಮಾಡಿಸಿದ್ದೇನೆ

Chikkaballapur News: ದೂರು ದಾಖಲಿಸಿದ್ದ ಕಾಂಗ್ರೆಸ್ ಮತ್ತು ಪ್ರತಿವಾದಿ ನಗರಸಭಾ ಸದಸ್ಯರ ನಡುವೆ ವಾದ ಪ್ರತಿ ವಾದ

ಪಕ್ಷಾಂತರ ಮಾಡಿದ್ದ ನಗರಸಭಾ ಸದಸ್ಯರ ಅನರ್ಹತೆಯ ಆದೇಶ ಬಾಕಿ

ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ, ಮಾತೃಪಕ್ಷಕ್ಕೆ ಕೈ ಕೊಟ್ಟಿದ್ದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನ 6 ಸದಸ್ಯರ ಅನರ್ಹತೆಯ ಪ್ರಕರಣವು ಅಂತಿಮ ಘಟ್ಟಕ್ಕೆ ಬಂದಿದ್ದು ಇನ್ನೂ ಕಾಯ್ದಿರಿಸಿದ ಆದೇಶದ ಅಧಿಕೃತ ಘೋಷಣೆ ಯಷ್ಟೇ ಬಾಕಿ ಇದೆ. ಈಗಾಗಲೇ ದೂರು ದಾಖಲಿಸಿದ್ದ ಕಾಂಗ್ರೆಸ್ ಮತ್ತು ಪ್ರತಿವಾದಿ ನಗರಸಭಾ ಸದಸ್ಯರ ನಡುವೆ ಎಲ್ಲ ವಾದ ಪ್ರತಿ ವಾದವು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮುಗಿದಿದೆ. ಆದೇಶ ಘೋಷಣೆ ಬಾಕಿ ಇದೆ

Chikkaballapur News: ಪೂಜ್ಯ ಸಪ್ತ ಋಷಿಗಳೇ ಆರತಿಯನ್ನು ಅರ್ಪಿಸಲು ಬರುತ್ತಾರೆ ಎಂಬ ನಂಬಿಕೆಯಿದೆ

ಈಶ ಸನ್ನಿಧಿಯಲ್ಲಿ ಕಾಶಿಯ ಸಪ್ತ ಋಷಿ ಆವಾಹನಂ

ಪ್ರಪಂಚದಾದ್ಯಂತ ಆಧ್ಯಾತ್ಮಿಕ ಮೂಲಸೌಕರ್ಯಗಳನ್ನು ನಿರ್ಮಿಸಿ ಸಂಪೂರ್ಣ ಮಾನವೀಯತೆಗೆ ಆಧ್ಯಾತ್ಮಿಕತೆಯ ಒಂದು ಹನಿಯನ್ನು ನೀಡುವ ಸದ್ಗುರುಗಳ ಆಶಯದ ಒಂದು ಭಾಗವಾಗಿದೆ. ಈ ಸ್ಥಳವು ಜನರಲ್ಲಿ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಇದು ಮನ ಸ್ಸು, ದೇಹ, ಭಾವನೆ ಮತ್ತು ಶಕ್ತಿಗಳಿಗೆ ಸಾಮರಸ್ಯವನ್ನು ತರಲು ನಮ್ಮ ಪರಂಪರೆಯಾದ ಯೋಗ ವಿಜ್ಞಾನ ದಿಂದ ಹಲವಾರು ಸಾಧನಗಳು ಮತ್ತು ತಂತ್ರಜ್ಞಾನಗಳನ್ನು ಅರ್ಪಿಸುತ್ತದೆ.