ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಿಕ್ಕಬಳ್ಳಾಪುರ

Yelahanka MLA Vishwanath: ಹೆಚ್.ಎನ್.ವ್ಯಾಲಿ ನೀರು ವಿಷಕನ್ಯೆಯ ರೀತಿ ಬಳಕೆಗೆ ಬಂದವರ ಮುಗಿಸುತ್ತದೆ: ಯಲಹಂಕ ಶಾಸಕ ವಿಶ್ವನಾಥ್ ಅಭಿಮತ

ಹೆಚ್.ಎನ್.ವ್ಯಾಲಿ ನೀರು ವಿಷಕನ್ಯೆಯ ರೀತಿ ಬಳಕೆಗೆ ಬಂದವರ ಮುಗಿಸುತ್ತದೆ

ರಾಜರ ಆಳ್ವಿಕೆಯಲ್ಲಿ ಶತೃಗಳನ್ನು ಸಂಹರಿಸಲು ವಿಷಕನ್ಯೆಯ ಬಳಸುತ್ತಿದ್ದರು. ಆದರೆ ಸ್ವಾತಂತ್ರ್ಯ ನಂತರದ ಪ್ರಜಾಪ್ರಭುತ್ವದಲ್ಲಿ ನಮ್ಮನ್ನಾಳುವ ಸರಕಾರಗಳು, ಜನತೆ ಕುಡಿಯಲು ಶುದ್ಧ ನೀರು ಕೊಡಿ ಎಂದು ಕೇಳಿದರೆ, ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸುತ್ತಿವೆ. ಅದನ್ನೂ ಕೂಡ ಪರಿಪೂರ್ಣವಾಗಿ ಮಾಡದ ಕಾರಣ ವಿಷದ ನೀರು ಕರೆಗಳಿಗೆ ಬಂದು ತುಂಬಿದೆ

Bagepally News: ಒಕ್ಕೂಟದ ಅಭಿವೃದ್ದಿಗೆ ಹಾಲು ಉತ್ಪಾಧಕರು ಕೈಜೋಡಿಸಿ: ಚಿಮುಲ್ ಅಧ್ಯಕ್ಷ ವಿ.ಮಂಜುನಾಥರೆಡ್ಡಿ

ಒಕ್ಕೂಟದ ಅಭಿವೃದ್ದಿಗೆ ಹಾಲು ಉತ್ಪಾಧಕರು ಕೈಜೋಡಿಸಿ

ಬಾಗೇಪಲ್ಲಿ ತಾಲೂಕಿನ ನಲ್ಲಪರೆಡ್ಡಿಪಲ್ಲಿ ಹಾಲು ಉತ್ಪಾಧಕರ ಸಹಕಾರ ಸಂಘ ಆವರಣ ದಲ್ಲಿ ಅಯೋಜಿಸಿದ್ದ ನೂತನ ಚಿಮುಲ್ ಅಧ್ಯಕ್ಷರಾಗಿ ಅಯ್ಕೆಗೊಂಡಿರುವ ವಿ.ಮಂಜುನಾಥ ರೆಡ್ಡಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಹಾಲು ಉತ್ಪಾದಕರಿಗೆ ಉಚಿತ ಹಾಲಿನ ಕ್ಯಾನುಗಳ ವಿತರಣೆ ಕಾರ್ಯಕ್ರಮವನ್ನು ವಿವಿಧ ಗಣ್ಯರು ಉದ್ಘಾಟಿಸಿದರು.

Chikkaballapur News: ಕೆಐಎಡಿಬಿ ವಿರೋಧಿ ಹೋರಾಟ ಸಮಿತಿಗಳ ಮಹಾಪೋಷಕರೇ ಸಮಾಜ ಸೇವಕರ ಮುಖವಾಡ ಹೊತ್ತ ರಾಜೀವ್‌ಗೌಡ: ರಾಮಾಂಜಿ ಆರೋಪ

ಅಭಿವೃದ್ಧಿ ಮುಖ್ಯವಾಗುವುದಾದರೆ ಮೊದಲು ನಿಮ್ಮ ನವರಂಗಿ ಆಟ ನಿಲ್ಲಿಸಿ

ರಾಜೀವ್ ಗೌಡರೇ ನಿಮಗೆ ಶಿಡ್ಲಘಟ್ಟ ಕ್ಷೇತ್ರದ ಅಭಿವೃದ್ಧಿ ಮುಖ್ಯವಾಗುವುದಾದರೆ ಮೊದಲು ನಿಮ್ಮ ನವರಂಗಿ ಆಟ ನಿಲ್ಲಿಸಿ. ನೀವೊಬ್ಬ ಪ್ರಭಾವಿ ಮುಖಂಡರೇ ಆಗಿದ್ದಲ್ಲಿ ಕೆಐಎಡಿಬಿ ಪ್ರಾಥಮಿಕ ಅಧಿಸೂಚನೆ ಹೊಡಿಸುವ ಮೊದಲೇ ಅದನ್ನು ನಿಲ್ಲಿಸಲು ಮುಂದಾಗಬಹುದಿತ್ತು ಅಲ್ಲವೆ. ನಿಮಗೆ ಆ ಸಾಮರ್ಥ್ಯ ಇಲ್ಲ. ಸುಮ್ಮನೆ ಇಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ದೊಡ್ಡ ಸಮಾಜ ಸೇವಕ ಎಂದು ಬಿಂಬಿಸಿಕೊಂಡಿದ್ದೀರಿ.

ಸತ್ಯದ ಅನುಭವ ಬೋಧಿಸಿರುವ ಸಂತರ ಮಾರ್ಗ ಸಾಧನೆಗೆ ಸೋಪಾನ: ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್

ಸತ್ಯದ ಅನುಭವ ಬೋಧಿಸಿರುವ ಸಂತರ ಮಾರ್ಗ ಸಾಧನೆಗೆ ಸೋಪಾನ

ಕೈವಾರ ತಾತಯ್ಯನವರು ಸತ್ಯಶೋಧಕರು. ಮಾನವ ಜನ್ಮದ ಶ್ರೇಷ್ಠತೆ ಏನು ಎಂಬುದನ್ನು ಬಹಳವಾಗಿ ಅರಿತು ಯೋಗ ಸಾಧಕರಾಗಿ ಯೋಗಿಗಳಾದವರು. “ಜಂಟಗಾ ವಚ್ಚಿಂದಿ ಜಾಲಿ ಮಾಲಿಮಿ ಜೇಸಿ, ಒಂಟಿ ಜೇಸಿ ಪೋವುನು ತುಂಟ ಬೊಂದಿ,ನಮ್ಮರಾನಿ ಬೊಂದಿ ನಮ್ಮಿವುನ್ನಾ ರಯಾ..” ಶರೀರ ಮತ್ತು ಆತ್ಮ (ಜೀವಾತ್ಮ) ಜೊತೆಗೂಡಿ ಒಟ್ಟಾಗಿ ಭೂಮಿಗೆ ಬರುತ್ತದೆ.

Chikkaballapura Bandh: ಹೆಚ್.ಎನ್.ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕಾಗಿ ಒತ್ತಾಯಿಸಿ ಕರೆ ನೀಡಿದ್ದ ಚಿಕ್ಕಬಳ್ಳಾಪುರ ಬಂದ್ ಸಂಪೂರ್ಣ ಯಶಸ್ವಿ

ಚಿಕ್ಕಬಳ್ಳಾಪುರ ಬಂದ್ ಸಂಪೂರ್ಣ ಯಶಸ್ವಿ

ಬೆಂಗಳೂರಿನ ಹೆಬ್ಬಾಳ, ನಾಗವಾರದ ತ್ಯಾಜ್ಯ ನೀರನ್ನು ಕೆ.ಸಿ, ಹೆಚ್.ಎನ್ ವ್ಯಾಲಿಯಾಗಿ ಎರಡು ಹಂತಗಳಲ್ಲಿ ಶುದ್ದೀಕರಿಸಿ ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಹಲವು ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಆದರೆ ತ್ಯಾಜ್ಯ ನೀರನ್ನು ಮೂರನೇ ಹಂತದಲ್ಲಿ ಶುದ್ದೀಕರಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.

Shidlaghatta News: ಮಳ್ಳೂರು ಗ್ರಾಮದಲ್ಲಿ ರಂಗನಾಥಸ್ವಾಮಿ ದೇವಾಲಯದ 13ನೇ ವರ್ಷದ ವಾರ್ಷಿಕೋತ್ಸವ ಭಕ್ತಿ ಸಂಭ್ರಮ

ರಂಗನಾಥಸ್ವಾಮಿ ದೇವಾಲಯದ 13ನೇ ವರ್ಷದ ವಾರ್ಷಿಕೋತ್ಸವ ಭಕ್ತಿ ಸಂಭ್ರಮ

ತಾಲ್ಲೂಕು ಜಂಗಮಕೋಟೆ ಹೋಬಳಿ ಮಳ್ಳೂರು ಗ್ರಾಮದ ಬಸ್‌ಸ್ಟ್ಯಾಂಡ್ ಸಮೀಪದ ರಂಗನಾಥಸ್ವಾಮಿ ದೇವಾಲಯದ 13ನೇ ವರ್ಷದ ವಾರ್ಷಿಕೋತ್ಸವವನ್ನು ಭಕ್ತಿ ಸಂಭ್ರಮ ದಿಂದ ಆಚರಿಸಲಾಯಿತು. ವಾರ್ಷಿಕ ಮಹೋತ್ಸವದ ಅಂಗವಾಗಿ ಮಾಜಿ ಶಾಸಕ ರಾಜಣ್ಣ ಅವರು ತಮ್ಮ ಕುಟುಂಬ ಸಮೇತ ದೇವಾಲಯಕ್ಕೆ ಆಗಮಿಸಿ ತಮ್ಮ ಮನೆದೇವರಾದ ರಂಗನಾಥ ಸ್ವಾಮಿ ದೇವರಿಗೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ಕಳಸಗಳನ್ನು ಹೊತ್ತರು.

Chikkaballapura bandh today: ಇಂದು ಚಿಕ್ಕಬಳ್ಳಾಪುರ ಬಂದ್: ಸಂಘಟನೆಗಳ ಬೃಹತ್ ಬೆಂಬಲ

ಇಂದು ಚಿಕ್ಕಬಳ್ಳಾಪುರ ಬಂದ್: ಸಂಘಟನೆಗಳ ಬೃಹತ್ ಬೆಂಬಲ

ಭಾನುವಾರ ಅಂಬೇಡ್ಕರ್ ವೃತ್ತದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಯಲಹಂಕ ಶಾಸಕ ವಿಶ್ವನಾಥ್ ಭಾಗಿಯಾಗಲಿದ್ದು ಹೆಚ್.ಎನ್. ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಲಿದ್ದಾರೆ. ಚಿಕ್ಕಬಳ್ಳಾಪುರ ನಗರದ ಆಟೋ ಚಾಲಕರ ಸಂಘ, ಕನ್ನಡಪರ ಸಂಘಟನೆ ಗಳ ಮುಖಂಡರು, ರೈತ ಸಂಘದ ಮುಖಂಡರು, ಶಾಶ್ವತ ನೀರಾವರಿ ಹೋರಾಟ ಸಮಿತಿ ಸೇರಿದಂತೆ ಹಲವಾರು ಸಂಘಟನೆಗಳು , ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.

Chikkaballapur News: ಯುದ್ಧ ನಿಲ್ಲಿಸಲು ಆಗ್ರಹಿಸಿ ಕೆಪಿಆರ್‌ಎಸ್ ಸಂಘಟನೆ ವತಿಯಿಂದ ನಗರದಲ್ಲಿ ಪ್ರತಿಭಟನೆ

ಯುದ್ಧ ನಿಲ್ಲಿಸಲು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ

ಅಮೆರಿಕಾ ಇರಾನ್ ದೇಶದ ಯುದ್ಧದಿಂದ ಭಾರತ ದೇಶದಲ್ಲಿ ಅಡುಗೆ ಅನಿಲ ಮತ್ತು ಪೆಟ್ರೋಲ್, ಡಿಸೇಲ್ ಮೇಲೆ ವ್ಯತೀರಿಕ್ತ ಪರಿಣಾಮ ಬೀರುತ್ತಿದೆ. ಅಡುಗೆ ಅನಿಲ ಬುಕ್ಕಿಂಗ್ ತಗೆದುಕೊಳ್ಳು ತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಹಾಸ್ಟೇಲ್, ಶಾಲಾ ಕಾಲೇಜು ಗಳನ್ನು ಮುಚ್ಚಿದ್ದಾರೆ. ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪಿಜಿಗಳಲ್ಲಿ ವಾಸ ಮಾಡುತ್ತಿದ್ದು, ಊಟವಿಲ್ಲದ ಪರಿಸ್ಥಿತಿ ನಿರ‍್ಮಾಣವಾಗಿದೆ.

3ನೇ ಹಂತದ ಶುದ್ಧೀಕರಣ ಆಗದಿರಲು ಕೇಂದ್ರ ಸರಕಾರವೇ ಹೊಣೆಯಾಗಿದೆ: ಬಿ.ಎಸ್.ರಫಿವುಲ್ಲಾ ಆರೋಪ

3ನೇ ಹಂತದ ಶುದ್ಧೀಕರಣ ಆಗದಿರಲು ಕೇಂದ್ರ ಸರಕಾರವೇ ಹೊಣೆಯಾಗಿದೆ

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ನೇತೃತ್ವದ ಎನ್.ಡಿ.ಎ.ಸರ್ಕಾರ ರಾಜ್ಯಕ್ಕೆ ನ್ಯಾಯೋಚಿತವಾಗಿ ಸಲ್ಲಬೇಕಾದ ಜಿಎಸ್‌ಟಿ (GST)ನೀಡದೆ ಇರುವುದು ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾಗಿದ್ದ ಸುಮಾರು 10 ಸಾವಿರ ಕೋಟಿ ಜಿಎಸ್‌ಟಿ ಹಣ ತಾರತಮ್ಯ ಇಲ್ಲದೆ ನೀಡಿದ್ದರೆ ಆರ್ಥಿಕ ಸೌಲಭ್ಯ ದೊರೆಯುತ್ತಿತ್ತು

Chikkaballapur News: ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ, ಬೆಲೆ ಏರಿಕೆ ವಿರೋಧಿಸಿ ಬ್ಲಾಕ್ ಮತ್ತು ಯುವ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ

ನಮ್ಮ ನೆರೆಹೊರೆ ದೇಶಗಳಲ್ಲಿ ನಡೆಯುವ ಯುದ್ಧ ಯುದ್ಧದಲ್ಲಿ ಭಾಗಿಯಾಗದ ತಟಸ್ಥ ದೇಶ ಗಳ ಮೇಲೂ ಪರಿಣಾಮ ಬೀರುತ್ತದೆ. ಎಲ್ಲ ಸಮಸ್ಯೆಗಳಿಗೂ ಯುದ್ಧವೇ ಪರಿಹಾರವಲ್ಲ. ಮಹಾತ್ಮ ಗಾಂಧೀಜಿ ಅವರು ತಿಳಿಸಿದ ಶಾಂತಿಯ ಮಾರ್ಗವನ್ನು ಅನುಸರಿಸಿದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ. ಹೀಗಾಗಿ ನಾವು ಗಾಂಧೀಜಿ ಅವರ ತತ್ವಗಳನ್ನು ವಿಶ್ವಕ್ಕೆ ತಿಳಿಸಬೇಕಾಗಿದೆ

Lok Adalat: ಲೋಕ ಅದಾಲತ್‌ನಲ್ಲಿ ಪ್ರಕರಣಗಳಿಗೆ ಶೀಘ್ರ ಮುಕ್ತಿ ದೊರೆಯುತ್ತದೆ: ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಕಳವಳ

ಲೋಕ ಅದಾಲತ್‌ನಲ್ಲಿ ಪ್ರಕರಣಗಳಿಗೆ ಶೀಘ್ರ ಮುಕ್ತಿ ದೊರೆಯುತ್ತದೆ

ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳಿದ್ದವು. ಕುಟುಂಬದಲ್ಲಿದ್ದ ಅಜ್ಜ, ಅಜ್ಜಿ ಹಾಗೂ ಇನ್ನಿತರ ಹಿರಿಯ ಸದಸ್ಯರಿಂದ ಮಕ್ಕಳು ಅಥವಾ ಮೊಮ್ಮಕ್ಕಳು ತಪ್ಪು ಮಾಡಿದಾಗ ಮೂಲದಲ್ಲೇ ತಿದ್ದಿ ಸರಿ ಮಾಡುವ ಕೆಲಸ ಆಗುತ್ತಿತ್ತು. ಇಂದಿನ ದಿನಮಾನದಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚಾಗಿ ಇರುವುದರಿಂದ ಸಣ್ಣ ಸಣ್ಣ ಜಗಳಕ್ಕೂ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸುತ್ತಿರುವುದು ಕಳವಳಕಾರಿ ವಿಚಾರ

SSD: ಎಸ್‌ಎಸ್‌ಡಿ ರಾಜ್ಯಾಧ್ಯಕ್ಷರಾಗಿ ಜಿ.ಸಿ.ವೆಂಕಟರೋಣಪ್ಪ ಆಯ್ಕೆ: ಕಾರ್ಯಕರ್ತರ ಸಂತಸ

ಎಸ್‌ಎಸ್‌ಡಿ ರಾಜ್ಯಾಧ್ಯಕ್ಷರಾಗಿ ಜಿ.ಸಿ.ವೆಂಕಟರೋಣಪ್ಪ ಆಯ್ಕೆ

ವೆಂಕಟರೋಣಪ್ಪ ಅವರು ಬೆಂಗಳೂರಿನ ಗಾಂಧಿನಗರ ದಲ್ಲಿರುವ ಹೋಟೆಲ್ ಚೇತನ್ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಚುನಾವಣೆಯಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಕ್ಯಾಪ್ಟನ್ ಅಶೋಕ್ ಖಾನ್ನಡೆ ಅವರ ಅಧ್ಯಕ್ಷತೆಯಲ್ಲಿ ಜಿ.ಸಿ.ವೆಂಕಟ ರಮಣಪ್ಪ ಆದ ನನ್ನನ್ನು ರಾಜ್ಯ ಅಧ್ಯಕ್ಷ ರಾಗಿ ಆಯ್ಕೆ ಮಾಡಿರುತ್ತಾರೆ

ಪ್ರೀತಿ, ಬಾಂಧವ್ಯದ ಜತೆ ಸಹೋದರ ಭಾವನೆಯನ್ನು ಬೆಸೆಯುವುದೇ ಇಫ್ತಿಯಾರ್ ಕೂಟದ ಉದ್ದೇಶ : ನಗರಸಭೆ ಸದಸ್ಯ ನರಸಿಂಹಮೂರ್ತಿ

ಸಹೋದರ ಭಾವನೆ ಬೆಸೆಯುವುದೇ ಇಫ್ತಿಯಾರ್ ಕೂಟದ ಉದ್ದೇಶ

ಸಾಮಾಜಿಕ ಜೀವನದಲ್ಲಿ ಸೌಹಾರ್ದಯುತವಾಗಿ ಬದುಕುವುದು ಹೇಗೆ ಎಂಬುದನ್ನು ಇಫ್ತಿಯಾರ್ ಕೂಟ ಕಲಿಸಿ ಕೊಡಲಿದೆ. ಇಲ್ಲಿ ಬರುವ ಎಲ್ಲರೂ ಪರಸ್ಪರ ಪ್ರೀತಿ, ಬಾಂಧವ್ಯ, ಭ್ರಾತೃತ್ವ ಭಾವನೆ ಹೊಂದುವ ಮೂಲಕ ದೇವರ ಕೃಪೆಗೆ ಪಾತ್ರ ವಾಗುತ್ತಾರೆ ಎಂದು ನಗರಸಭಾ ಸದಸ್ಯ ನರಸಿಂಹಮೂರ್ತಿ ತಿಳಿಸಿದರು. ನಗರದ 20ನೇ ವಾರ್ಡಿನಲ್ಲಿ ರಂಜಾನ್ ಹಬ್ಬದ ಅಂಗವಾಗಿ ಉಪವಾಸವಿರುವ ಮುಸ್ಲಿಂ ಬಾಂಧವರಿಗಾಗಿ ಏರ್ಪಡಿಸಿದ್ದ ಸಾಮೂಹಿಕ ಇಪ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

Chikkaballapur News: ಜಾತಿ ಮುಕ್ತ ಮತ್ತು ಹಸಿವು ಮುಕ್ತ ಸಮಾಜ ನಿರ್ಮಾಣದಲ್ಲಿ ದಸಂಸ ಕೊಡುಗೆ ಆಪಾರ: ರಾಜ್ಯ ಮುಖಂಡ ಕೆ.ಸಿ.ರಾಜಾಕಾಂತ್

ಹಸಿವು ಮುಕ್ತ ಸಮಾಜ ನಿರ್ಮಾಣದಲ್ಲಿ ದಸಂಸ ಕೊಡುಗೆ ಆಪಾರ

ಕಳೆದ 50 ವರ್ಷಗಳ ಸುದೀರ್ಘ ಪಯಣದಲ್ಲಿ ದಲಿತ ಸಂಘರ್ಷ ಸಮಿತಿ ಅನೇಕ ಸಾಧನೆ ಗಳನ್ನೂ ಸವಾಲುಗಳನ್ನೂ ಎದುರಿಸಿದೆ. ಜನಪರ ಹೋರಾಟಗಳ ಜೊತೆಗೆ ಭೂಮಿಗಾಗಿ ಕಡ್ಡಾಯ ಶಿಕ್ಷಣಕ್ಕಾಗಿ, ಸೂರಿಗಾಗಿ, ಸೇಂದಿ ಮುಕ್ತ ರಾಜ್ಯಕ್ಕಾಗಿ, ಶೋಷಣೆಯ ವಿಮುಕ್ತಿಗಾಗಿ ವಿಶ್ರಾಂತವಾಗಿ ಹೋರಾಟಗಳನ್ನು ಕಟ್ಟಿದೆ.

Chikkaballapur Congress: ಇಂದು ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಮೆರವಣಿಗೆ

ಇಂದು ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಮೆರವಣಿಗೆ

ಜಿಲ್ಲಾ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾ.14ರಂದು ಶನಿವಾರ ಬೆಳಿಗ್ಗೆ10 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಕಚೇರಿ ಯಿಂದ ಶಿಡ್ಲಘಟ್ಟ ವೃತ್ತದ ವರೆಗೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸ ಲಾಗುವುದು

Chikkaballapur News: ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ: ಜಿಲ್ಲಾಧಿಕಾರಿ ಜಿ.ಪ್ರಭು ಅಭಯ

ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ

ಇರಾನ್ ಅಮೇರಿಕಾ ಯುದ್ಧದ ಸಂದರ್ಭವನ್ನು ಬಳಸಿಕೊಂಡು ಕೆಲವರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಬಾರೀ ವ್ಯತ್ಯಯವಾಗುತ್ತಿದೆ. ಒಂದು ಸಿಲಿಂಡರ್‌ಗೆ 1500-1700 ನೀಡಿದರು ದೊರೆಯುತ್ತಿಲ್ಲ ಎಂಬAತಹ ವದಂತಿಗಳು ಹರಿದಾಡುತ್ತಿರುತ್ತಾರೆ.

MP Dr. K. Sudhakar: ತೃತೀಯ ಹಂತದ ಸಂಸ್ಕರಣೆ ಯೋಜನೆ ತರಬೇಕು: ಇಲ್ಲದಿದ್ದರೆ ಸರ್ಕಾರದ ವಿರುದ್ಧ ಪಾದಯಾತ್ರೆ: ಸಂಸದ ಡಾ.ಕೆ.ಸುಧಾಕರ್ ಎಚ್ಚರಿಕೆ

ಎತ್ತಿನಹೊಳೆ ಯೋಜನೆಯ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ರೈತರ ಋಣ ತೀರಿಸಿ

ಎಚ್.ಎನ್ ವ್ಯಾಲಿ, ಕೆ.ಸಿ ವ್ಯಾಲಿ ಯೋಜನೆಯಡಿ ಚಿಕ್ಕಬಳ್ಳಾಪುರ, ಕೋಲಾರ ಭಾಗಕ್ಕೆ 2 ಹಂತ ಗಳಲ್ಲಿ ನೀರು ಸಂಸ್ಕರಣೆಯಾಗಿ ಬರುತ್ತಿದೆ. ಆದರೆ ಇತ್ತೀಚೆಗೆ ಈ ನೀರು ಸರಿಯಾಗಿ ಸಂಸ್ಕರಣೆ ಯಾಗುತ್ತಿಲ್ಲ ಎಂಬ ದೂರು ಬಂದಿದೆ. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಸರ್ಕಾರ ಕಟ್ಟು ನಿಟ್ಟಾದ ಸೂಚನೆ ನೀಡಬೇಕಿದೆ.

Chikkaballapur News: ಎಚ್‌ಎನ್ ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣ ಸರಕಾರದ ಜವಾಬ್ದಾರಿ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ

ಎಚ್‌ಎನ್ ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣ ಸರಕಾರದ ಜವಾಬ್ದಾರಿ

ರಾಜ್ಯ ಸರ್ಕಾರ ಜಿಲ್ಲೆಯ ಕೆರೆಗಳಿಗೆ ಹೆಚ್.ಎನ್ ವ್ಯಾಲಿಯ ಕೊಳಚೆ ನೀರನ್ನು 2ನೇ ಹಂತ ದಲ್ಲಿ ಶುದ್ಧೀಕರಿಸಿ ಹರಿಸುತ್ತಿದೆ. ಈ ಶುದ್ಧೀಕರಣದ ಬಗ್ಗೆಯೂ ನಾಗರೀಕರಿಗೆ ಅನುಮಾನವಿದೆ. ಆದರೂ ಕೂಡ ಸರಕಾರ ಎರಡನೇ ಹಂತದಲ್ಲಿ ಈ ಯೋಜನೆಗೆ ಚಾಲನೆ ನೀಡಿ ಇನ್ನೂ ಹಲವು ಕೆರೆಗಳಿಗೆ ವ್ಯಾಲಿಯ ನೀರು ಹರಿಸಲು ಅನುದಾನ ನೀಡಿದೆ.

Chikkaballapur News: ಚಿಕ್ಕಬಳ್ಳಾಪುರದಲ್ಲಿ ಸುಡು ಬಿಸಿಲಿನಲ್ಲೂ ಸಿಲಿಂಡರ್‌ಗಾಗಿ ಕ್ಯೂ ನಿಂತ ಜನತೆ

ಸುಡು ಬಿಸಿಲಿನಲ್ಲೂ ಸಿಲಿಂಡರ್‌ಗಾಗಿ ಕ್ಯೂ ನಿಂತ ಜನತೆ

ಜಿಲ್ಲಾಡಳಿತ, ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆ ಅಧಿಕಾರಿಗಳು ಗೃಹ ಬಳಕೆಯ ಸಿಲಿಂಡರ್‌ಗೆ ಕೊರತೆ ಇಲ್ಲ. ಜನರು ಆತಂಕಕ್ಕೊಳಗಾಗಬಾರದು ಎಂದು ಪದೇಪದೇ ಹೇಳು ತ್ತಿದ್ದರೂ ಸಹ ಜನತೆ ನಾ ಮುಂದು ತಾ ಮುಂದು ಎಂಬಂತೆ ಸಾಲುಗಟ್ಟಿ ನಿಲ್ಲುವುದನ್ನು ಬಿಟ್ಟಿಲ್ಲ. ದಶಕಗಳ  ಹಿಂದೆ ಸೀಮೆಎಣ್ಣೆಗಾಗಿ ಜನರು ಕ್ಯೂ ನಿಲ್ಲುವಂತೆ ಈಗ ಸಿಲಿಂಡರ್‌ಗಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಸರ್ವೆಸಾಮಾನ್ಯವಾಗಿವೆ

Chikkaballapur News: ಮಾ.15ರ ಬಂದ್‌ಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಬೆಂಬಲ ಆರ್.ಆಂಜನೇಯರೆಡ್ಡಿ ಘೋಷಣೆ

ಮೂರನೇ ಹಂತದ ಶುದ್ದಿಕರಣ ಮಾಡಿಸಿ ಅವಳಿ ಜಿಲ್ಲೆಗಳ ಋಣ ತೀರಿಸಲಿ

ಬೆಂಗಳೂರು ತ್ಯಾಜ್ಯ ನೀರನ್ನು ಕೋಲಾರ ಚಿಕ್ಕಬಳ್ಳಾಪುರಕ್ಕೆ ಹರಿಸಲಾಗುತ್ತಿದೆ. ಈ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡಿಸಿ ಹರಿಸಬೇಕು. ಈ ನೀರಿನ ಬಳಕೆಯಲ್ಲಿರುವ ಜಿಲ್ಲೆಯ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈಗಾಗಲೇ ನಮ್ಮ ತರಕಾರಿ ಬೆಲೆ ಕುಸಿದಿದೆ. ಇದರ ಜತೆಗೆ ಜನತೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯೋದ್ದೇಶಕ್ಕೆ ಬಳಸುವಂತಿಲ್ಲ: ಜಿಲ್ಲಾಧಿಕಾರಿ ಜಿ ಪ್ರಭು ಎಚ್ಚರಿಕೆ

ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯೋದ್ದೇಶಕ್ಕೆ ಬಳಸುವಂತಿಲ್ಲ

ಜಿಲ್ಲೆಯಲ್ಲಿ ಸರಾಸರಿ 10 ರಿಂದ 11 ಸಾವಿರ ಸಿಲೆಂಡರ್ ಗಳು ಪ್ರತಿ ದಿನ ದಾಸ್ತಾನು ಇರು ವಂತೆ ಇವರೆಗೆ ನಿರ್ವಹಣೆ ಮಾಡಲಾಗುತ್ತಿತ್ತು. ಪ್ರಸ್ತುತ 12 ಸಾವಿರಕ್ಕೂ ಹೆಚ್ಚು ಗೃಹ ಬಳಕೆ  ಸಿಲಿಂಡರ್  ದಾಸ್ತಾನು ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮುಂಜಾಗ್ರತೆ ಯಾಗಿ ಅನಿಲ ಸಿಲಿಂಡರ್ ಗಳನ್ನು ತರಿಸಿಕೊಳ್ಳುವ ಪ್ರಕ್ರಿಯೆಯು ನಿರಂತರವಾಗಿ ಚಾಲ್ತಿಯಲ್ಲಿರುವಂತೆ ನಿಗಾ ಇಡಲಾಗಿದೆ.

Domestic Gas Price hike: ಗೃಹಬಳಕೆ ಅನಿಲ ಬೆಲೆ ಏರಿಕೆ: ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಗೃಹಬಳಕೆ ಅನಿಲ ಬೆಲೆ ಏರಿಕೆ: ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರ ಯುದ್ಧದ ಸಂದರ್ಭವನ್ನು ಬಳಸಿಕೊಂಡು ಗೃಹ ಬಳಕೆ ಸಿಲಿಂಡರ್ ಬೆಲೆ ಏಕಾಏಕಿ 60 ರೂಪಾಯಿ ಹೆಚ್ಚಳ ಮಾಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಮೇಲೆ ಭಾರೀ ಹೊರೆ ಬಿದ್ದಿದೆ .ಇದೇ ಕೇಂದ್ರದ ಬಡವರ ನೀತಿಯಾಗಿದೆ ಎಂದರು.

Somnath Jyotirlinga: ಮಾ.14ರಿಂದ ಜಿಲ್ಲೆಯಲ್ಲಿ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಪ್ರಾರಂಭ : ಚಂದ್ರಿಕಾ ಹೇಳಿಕೆ

14ರಿಂದ ಜಿಲ್ಲೆಯಲ್ಲಿ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಪ್ರಾರಂಭ

ಮಾ.15ರ ಬೆಳಿಗ್ಗೆ 7ರಿಂದ 11ಗಂಟೆಯವರೆಗೆ ಜ್ಯೋತಿರ್ಲಿಂಗ ದರ್ಶನ ಹಾಗು ಸತ್ಸಂಗವನ್ನು ಗುಡಿಬಂಡೆ ಪಟ್ಟಣದ ತಾಲೂಕು ಆಫೀಸ್ ಪಕ್ಕದ ಮುಖ್ಯ ರಸ್ತೆಯ  ಲಕ್ಷ್ಮೀ ಆದಿ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ  ಮತ್ತು ಅಂದು ಸಂಜೆ ಸಂಜೆ 5.30ರಿಂದ 9 ಗಂಟೆಯವರೆಗೆ ಬಾಗೇಪಲ್ಲಿಯ ಡಿ.ವಿ.ಜಿ  ರಸ್ತೆಯಲ್ಲಿರುವ ಶ್ರೀ ಸಾಯಿ ಶ್ರೀನಿವಾಸ ಕಾಂಪ್ಲೆಕ್ಸ್ನ ದ್ವಾರಕಾ ಫಂಕ್ಷನ್ ಹಾಲ್‌ನಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಕ ಭಕ್ತರು ಆಗಮಿಸಲು ಮನವಿ ಮಾಡಿದರು

Shidlaghatta News: ನಗರಸಭೆ ಸಿಬ್ಬಂದಿ ಮಾಡಬೇಕಾದ ಕೆಲಸವನ್ನು ತಾವು ಮಾಡಿ ನಗರಾಡಳಿತಕ್ಕೆ ಹಿಡಿ ಶಾಪ ಹಾಕಿದ ಆಟೋ ಚಾಲಕರು

ನಗರಾಡಳಿತಕ್ಕೆ ಹಿಡಿ ಶಾಪ ಹಾಕಿದ ಆಟೋ ಚಾಲಕರು

ಚರಂಡಿಯಲ್ಲಿ ಕಸ ತುಂಬಿ ನೀರು ಸರಿಯಾಗಿ ಹರಿಯದೇ ದೇವಾಲಯದ ಪಾಯದ ಒಳಭಾಗ ಕ್ಕೂ ನುಗ್ಗುತ್ತಿರುವ ದುಸ್ಥಿತಿ ಉಂಟಾಗಿತ್ತು. ಈ ಬಗ್ಗೆ ನಗರಸಭೆ ಸಿಬ್ಬಂದಿಗೆ ಮಾಹಿತಿ ನೀಡಿದರೂ ಏನೂ ಪ್ರಯೋಜನ ಆಗಿಲ್ಲ.ನಗರಸಭೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸ್ವಚ್ಛತೆ ನಡೆಯದೆ ದುರ್ವಾಸನೆ ಬೀರುತ್ತಿತ್ತು

Loading...