ಕುಣಿಗಲ್ನಲ್ಲಿ ಭೀಕರ ರಸ್ತೆ ಅಪಘಾತ; ನಾಲ್ವರ ಸಾವು
Tumkur News: ತುಮಕೂರು ಜಿಲ್ಲೆಯ ಕುಣಿಗಲ್ ಬೈಪಾಸ್ನಲ್ಲಿರುವ ಉಗಿಬಂಡಿ ರೆಸ್ಟೋರೆಂಟ್ ಬಳಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಮಾಗಡಿ ಪಟ್ಟಣದ ಸೀಬೇಗೌಡ (45), ಪತ್ನಿ ಶೋಭಾ (37) ಮಗಳು ದುಂಬಿಶ್ರಿ (21), ಮಗ ಭಾನುಕಿರಣ್ ಗೌಡ (15)ಎಂದು ಗುರುತಿಸಲಾಗಿದೆ.