ಚಿಕ್ಕಬಳ್ಳಾಪುರ : ದಿನಾಂಕ ೨೫-೦೯-೨೦೨೫ ರಿಂದ ೦೬-೧೦-೨೦೨೫ರವರೆಗೆ ಭಾರತ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ನವದೆಹಲಿಯ ಜವಹರ್ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯು ತ್ತಿರುವ ವಿಶ್ವ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸುವಂತೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರ ಸ್ವಾಮಿ(Union Minister for Steel and Heavy Industries H.D. Kumaraswamy) ಗೆ ನವದೆಹಲಿಯ ಅವರ ನಿವಾಸದಲ್ಲಿ ಆಹ್ವಾನ ನೀಡಲಾಯಿತು.
ಈ ಸಂದರ್ಭದಲ್ಲಿ ಭಾರತ ವಾಲಿಬಾಲ್ ತಂಡದ ಮಾಜಿ ಆಟಗಾರ ಹಾಗೂ ಭಾರತ ವೀಲ್ಛೇರ್ ತಂಡದ ತರಬೇತಿದಾರರಾದ ಎನ್ಎಜಿಈಹೆಚ್ಎಸ್ ನಾಗೇಶ್, ಅಂತರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಕ್ರೀಡಾಪಟುಗಳಾದ ದಿವಾಕರ್, ಶ್ರೀಕಾಂತ್, ಕೃಷ್ಣಮೂರ್ತಿ, ಬಾಬುಶೆಟ್ಟಿ, ಎಳಗಣ್ಣ, ಪ್ರಸನ್ನ, ಧರ್ಮರಾಜ್, ಆದಿತ್ಯ, ಶಿವಕುಮಾರ್, ಪೃಥ್ವಿರಾಜ್, ದೇವರಾಜು ಮುಂತಾದವರು ಉಪಸ್ಥಿತರಿದ್ದರು.