ಕೊಟ್ಟ ಕುದುರೆಯ ಏರಬೇಕು
ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಮೊದಲ ದಿನವೇ ಬಂಡಾಯ ಕಾಣಿಸಿಕೊಂಡಿದೆ. ರಾಮಲಿಂಗಾರೆಡ್ಡಿ ಅವರು ತಮಗೆ ನೀಡಲಾದ ಖಾತೆ ಜಲಸಂಪನ್ಮೂಲ ಖಾತೆಯನ್ನು ತಿರಸ್ಕರಿಸಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದಿದ್ದುದಕ್ಕೆ ಅತೃಪ್ತಿ ವ್ಯಕ್ತಪಡಿಸಿ ರಾಜಿನಾಮೆ ನೀಡಿದ್ದಾರೆ. ರೆಡ್ಡಿ ಅವರ ಜೊತೆ ಮಾತನಾಡುತ್ತೇನೆ ಎಂದು ಸಿಎಂ ಹೇಳಿದ್ದಾರಾದರೂ, ರಾಜಿನಾಮೆ ಅಂಗೀಕೃತವಾಗಿದೆ.