ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ashok Nayak

Senior Sub Editor

[email protected]

ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯದಲ್ಲಿ ಎಂ.ಎ. ಸಿಕ್ಕಿಂ ಮಣಿಪಾಲ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಗಳಿಸಿರುತ್ತಾರೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಶಿಕ್ಷಣ ಪೂರೈಕೆ... ಆರಂಭದಲ್ಲಿ ನಾಲ್ಕು ವರ್ಷಗಳ ಕಾಲ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ಉದಯವಾಣಿಯ ಡಿಜಿಟಲ್‌ ವಿಭಾಗದಲ್ಲಿ ಪತ್ರಿಕೋದ್ಯಮ ವೃತ್ತಿ ಆರಂಭ. ಮಂಗಳೂರಿನ ವಿಜಯವಾಣಿಯಲ್ಲಿ ಒಂದು ವರ್ಷ ಡೆಸ್ಕ್‌ ನಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಣೆ. ಬೆಂಗಳೂರಿನಲ್ಲಿ ಉದಯಕಾಲದಲ್ಲಿ ಡಿಜಿಟಲ್‌ ವಿಭಾಗದಲ್ಲಿ ವೃತ್ತಿ ನಿರ್ವಹಣೆ, ಎಸ್‌ ನ್ಯೂಸ್‌ ಚಾನೆಲ್‌ ನಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡಿದ ಅನುಭವ. ಈಗ, ವಿಶ್ವೇಶ್ವರ ಭಟ್‌ ಸಾರಥ್ಯದ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..

Articles
Vishwavani Editorial: ನೀರಾಟ ನರಳಾಟವಾಗದಿರಲಿ

Vishwavani Editorial: ನೀರಾಟ ನರಳಾಟವಾಗದಿರಲಿ

ಮಕ್ಕಳು ತರಗತಿಗಳಿಂದ ಮುಕ್ತರಾಗಿ ನೀರಿನಲ್ಲಿ ಆಟವಾಡಲು ಬಯಸುವುದು ಸಹಜ. ಹಿರಿಯರು ಸಹಿತ ಮಕ್ಕಳೊಂದಿಗೆ ನೀರಿನ ತಾಣಗಳ ಕಡೆಗೆ ಪ್ರವಾಸ ಹೋಗುವುದು ಸಾಮಾನ್ಯ. ಇಂಥ ಹೊತ್ತಿ ನಲ್ಲಿ ತಂಪು ಬಯಸುವ ಎಲ್ಲರನ್ನೂ ನೀರು ಸೆಳೆಯುತ್ತದೆ. ಆದರೆ ಸ್ಥಳೀಯ ನೀರಿನ ಆಳ ಅಥವಾ ರಭಸದ ಅರಿವಿಲ್ಲದೆ ಹಲವರು ದುರಂತ ಮರಣ ಕಾಣುತ್ತಾರೆ.

Thimmanna Bhagwat Column: ಮಂತ್ರಿಗಳ ಆಡಳಿತಾವಧಿ: ರಾಜ್ಯಪಾಲರ ಅಧಿಕಾರ ಔಪಚಾರಿಕವೇ ?

ಮಂತ್ರಿಗಳ ಆಡಳಿತಾವಧಿ: ರಾಜ್ಯಪಾಲರ ಅಧಿಕಾರ ಔಪಚಾರಿಕವೇ ?

ಪಶ್ಚಿಮ ಬಂಗಾಳದ ವಿಧಾನ ಸಭೆಗೆ ಚುನಾವಣೆ ನಡೆದು ಆಡಳಿತಾರೂಢ ಟಿಎಂಸಿ ಪಕ್ಷಕ್ಕೆ ಬಹುಮತ ಲಭಿಸಿಲ್ಲ. ಹಾಲಿ ವಿಧಾನ ಸಭೆಯ ಅವಧಿ ಮೇ 7ಕ್ಕೆ ಮುಗಿಯುತ್ತದೆ. ಬಹುಮತ ಪಡೆಯದ ಕಾರಣಕ್ಕೆ ಹಾಲಿ ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರೆಯಲು ಹಕ್ಕುದಾರರಲ್ಲ. ಅಲ್ಲದೆ ಅವರ ಪ್ರಸಕ್ತ ಅವಧಿ ಕೂಡಾ ಮೇ 7ಕ್ಕೆ ಮುಗಿಯುತ್ತದೆ.

ಸಚಿವ ಎಂ.ಸಿ.ಸುಧಾಕರ್ ವಿರುದ್ಧದ ಅಪಪ್ರಚಾರಕ್ಕೆ ರೈತ ಸಂಘದ ತೀವ್ರ ಖಂಡನೆ : ಭೂಮಾಫಿಯಾಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಸಚಿವ ಎಂ.ಸಿ.ಸುಧಾಕರ್ ವಿರುದ್ಧದ ಅಪಪ್ರಚಾರಕ್ಕೆ ರೈತ ಸಂಘದ ತೀವ್ರ ಖಂಡನೆ

ಕದಿರೇಗೌಡ ಅವರು ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರಕಾರ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

MLA K.H. Puttaswamy Gowda: ಬಿತ್ತನೆ ಬೀಜ ರಸಗೊಬ್ಬರ, ಕೃಷಿ ಸಲಕರಣೆಯಲ್ಲಿ ಲೋಪವಾಗದಂತೆ ಕ್ರಮ ವಹಿಸಿ : ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ

ಬಿತ್ತನೆ ಬೀಜ ರಸಗೊಬ್ಬರ, ಕೃಷಿ ಸಲಕರಣೆಯಲ್ಲಿ ಲೋಪವಾಗದಂತೆ ಕ್ರಮ ವಹಿಸಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಬೇಸಿಗೆಯ ಧಗೆ ವಿಪರೀತವಿದ್ದು, ಗ್ರಾಮೀಣ ಭಾಗದಲ್ಲಿನ ಶುದ್ದ ಕುಡಿಯುವ ನೀರಿನ ಘಟಕಗಳು ಪದೇ ಪದೇ ದುರಸ್ತಿಯಾಗುತ್ತಿವೆ.ಹೀಗಾದಲ್ಲಿ ಜನತೆಗೆ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲವೆ? ಸ್ಥಳೀಯ ಗ್ರಾ.ಪಂ ಅಥವಾ ಗುತ್ತಿಗೆದಾರರ ವಿರುದ್ದ ಕ್ರಮ ವಹಿಸಿ ಘಟಕಗಳ ರಿಪೇರಿಗೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು.

Gudibande News: ಗುಡಿಬಂಡೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ

ಗುಡಿಬಂಡೆಯಲ್ಲಿ ಕ.ಸಾಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ

ಕನ್ನಡಿಗರ ವಿಶಾಲ ಮನೋಭಾವದ ನಡುವೆಯೂ ನಮ್ಮ ಭಾಷೆಯ ಅಸ್ಮಿತೆಯನ್ನು ಮರೆಯಬಾರದು. ಇಂದಿನ ದಿನಗಳಲ್ಲಿ ಪರಭಾಷೆಗಳನ್ನು ಕಲಿಯುವುದು ಅನಿವಾರ್ಯವಿರಬಹುದು, ಆದರೆ ಮಾತೃಭಾಷೆ ಯನ್ನು ಮರೆಯುವುದು ಸರಿಯಲ್ಲ. ಕನ್ನಡದಲ್ಲಿರುವ ಆಪ್ತತೆ ಬೇರೆಲ್ಲೂ ಸಿಗದು. 'ಮಮ್ಮಿ-ಡ್ಯಾಡಿ' ಸಂಸ್ಕೃತಿಯ ವ್ಯಾಮೋಹ ಬಿಟ್ಟು ಅಪ್ಪ-ಅಮ್ಮ ಎಂದು ಕರೆಯುವ ಮೂಲಕ ಸಂಸ್ಕೃತಿಯನ್ನು ಉಳಿಸಬೇಕು

Shidlaghatta News: 112 ವರ್ಷಗಳ ಐತಿಹಾಸಿಕ ಪಯಣ: ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನ ಆಚರಣೆ

ಕನ್ನಡದ ಬೆಳವಣಿಗೆಗೆ ಸಮೂಹ ಪ್ರಯತ್ನ ಅಗತ್ಯ: ಕೊಡಿ ರಂಗಪ್ಪ

ಕಸಾಪ ತಾಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಮಾತನಾಡಿ, ಸ್ವಾತಂತ್ರ್ಯಾನಂತರ ಮೈಸೂರು ಆಡಳಿತವನ್ನು ಬಲಪಡಿಸಲು ರಾಜರು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಕಾರ್ಯ ನಿರ್ವಹಿಸಿದ ಪರಿಣಾಮವಾಗಿ ನೀರಾವರಿ ಸೌಲಭ್ಯಗಳು, ಅಣೆಕಟ್ಟುಗಳು ಹಾಗೂ ಸಾಮಾಜಿಕ-ಧಾರ್ಮಿಕ ಸಂಸ್ಥೆಗಳು ಸ್ಥಾಪನೆಯಾದವು ಎಂದು ಹೇಳಿದರು.

Shidlaghatta News: ಶ್ರೀರಾಮ ಶೋಭಾಯಾತ್ರೆಗೆ ಭರ್ಜರಿ ಸಿದ್ಧತೆ: ಜೂನ್ 7ರಂದು ಆಯೋಜನೆ

ಶ್ರೀರಾಮ ಶೋಭಾಯಾತ್ರೆಗೆ ಭರ್ಜರಿ ಸಿದ್ಧತೆ: ಜೂನ್ 7ರಂದು ಆಯೋಜನೆ

ಜೂನ್ 7ರಂದು ನಡೆಯಲಿರುವ ಈ ಶೋಭಾಯಾತ್ರೆಯನ್ನು ಅದ್ದೂರಿಯಾಗಿ ನಡೆಸಲು ಸಮಿತಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಯಾತ್ರೆ ಸಂಚರಿಸಲಿದೆ. ಧಾರ್ಮಿಕ ಘೋಷಣೆಗಳು ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನಗಳು ಯಾತ್ರೆಯ ವಿಶೇಷ ಆಕರ್ಷಣೆ ಯಾಗಲಿವೆ

Chikkaballapur News: 112 ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸ್ವಾಭಿಮಾನದ ಪ್ರತೀಕ: ಬಿ.ಎಂ.ಪ್ರಮೀಳ ಅಭಿಮತ

112 ವರ್ಷಗಳ ಇತಿಹಾಸವಿರುವ ಕ.ಸಾ.ಪ ಕನ್ನಡಿಗರ ಸ್ವಾಭಿಮಾನದ ಪ್ರತೀಕ

ಸರ್.ಮಿರ್ಜಾ ಇಸ್ಮಾಯಿಲ್ ಅವರು ಈಗಿನ ಚಾಮರಾಜಪೇಟೆಯಲ್ಲಿರುವ ಕೇಂದ್ರ ಕಛೇರಿ ಇರುವ ಜಾಗ ವನ್ನು ಪರಿಷತ್ತಿಗೆ ನೀಡುವ ಮೂಲಕ ನಾಡಿನ ಹೆಮ್ಮೆಯ ಪರಿಷತ್ತಿನ ಬೆಳವಣಿಗೆಗೆ ಶ್ರಮಿಸಿದರು. 1938 ರಲ್ಲಿ  ಕರ್ನಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಹೆಸರಿಸ ಲಾಯಿತು ಎಂದರು.

Chikkaballapur News: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ ಎಂಬುದು ಭವಿಷ್ಯದ ಸೋಪಾನವಾಗಬೇಕು: ಸಂದೀಪ್ ರೆಡ್ಡಿ ಅಭಿಮತ

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ ಎಂಬುದು ಭವಿಷ್ಯದ ಸೋಪಾನವಾಗಬೇಕು

ಪ್ರೀತಿಯ ವಿದ್ಯಾರ್ಥಿಗಳೇ ನೀವು ಪಡೆದಿರುವ ಉತ್ತಮ ಅಂಕಗಳೇ ಭವಿಷ್ಯವಲ್ಲ. ವಿದ್ಯೆಯ ಜತೆಗೆ ವಿನಯವನ್ನೂ ಬೆಳೆಸಿಕೊಳ್ಳಿ.ನಮ್ಮ ಜೊತೆಗಿರುವ ಯಾರ ಬಗ್ಗೆಯೂ ಅಸೂಯೆ ಬೇಡ ಗುರು ಹಿರಿಯರ ಬಗ್ಗೆ ಹೆತ್ತ-ತಂದೆ ತಾಯಿ ಬಗ್ಗೆ ವ್ಯಾಸಂಗ ಮಾಡಿದ ಶಾಲೆಯ ಬಗ್ಗೆ ಹೆಮ್ಮೆ ಇರಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿ ಸಂದೀಪ ಬಿ ರೆಡ್ಡಿ ಮನನ ಮಾಡಿದರು.

Chikkaballapur News: ಭಾಷೆ ಸಾಹಿತ್ಯ ಸಂಸ್ಕೃತಿ ಬೆಳವಣಿಗೆಗೆ ಸಾಂಸ್ಥಿಕ ಚೌಕಟ್ಟಿನ ಪ್ರತಿರೂಪ ಕಸಾಪ

ಭಾಷೆ ಸಾಹಿತ್ಯ ಸಂಸ್ಕೃತಿ ಬೆಳವಣಿಗೆಗೆ ಸಾಂಸ್ಥಿಕ ಚೌಕಟ್ಟಿನ ಪ್ರತಿರೂಪ ಕಸಾಪ

ಕರ್ನಾಟಕ ಸಾಹಿತ್ಯ ಪರಿಷತ್ತು ರೂಪುಗೊಳ್ಳಲು ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ, ಸರದಾರ್ ಎಂ.ಕಾಂತರಾಜೇ ಅರಸ್, ಎಚ್.ವಿ.ನಂಜುಂಡಯ್ಯ, ಎಂ.ಶ್ಯಾಮರಾವ್, ಎಂ.ಎಸ್. ಕುಟ್ಟಣ್ಣ, ಎಂ.ಕೆ.ವೆಂಕಟಕೃಷ್ಣಯ್ಯ, ಎಚ್.ಲಿಂಗರಾಜೇ ಅರಸ್, ಕರ್ಪೂರ ಶ್ರೀನಿವಾಸ ರಾವ್, ಬಿ.ಕೃಷ್ಣಪ್ಪ, ಕವಿ ತಿಲಕಶಾಸ್ತ್ರಿ, ಮುದವೀಡು ಕೃಷ್ಣರಾಯರು, ವಾಸುದೇವಾಚಾರ್, ಆಲೂರು ವೆಂಕಟರಾಯರು ಹೀಗೆ ಹಲವರು ಕಾರಣರಾಗಿದ್ದಾರೆ

ಬಿಟ್‌ಡೆಲ್ಟಾ ಇಂಡಿಯಾ ವಿಶ್ವದ ಅತಿದೊಡ್ಡ ಕ್ರಿಪ್ಟೋ ಮಾರುಕಟ್ಟೆಗಾಗಿ ಸಾಂಸ್ಥಿಕ ದರ್ಜೆಯ ವರ್ಚುವಲ್ ಡಿಜಿಟಲ್ ಅಸೆಟ್ (VDA) ಮೂಲಸೌಕರ್ಯ ಪ್ರಾರಂಭ

ಸಾಂಸ್ಥಿಕ ದರ್ಜೆಯ ವರ್ಚುವಲ್ ಡಿಜಿಟಲ್ ಅಸೆಟ್ ಮೂಲಸೌಕರ್ಯ ಪ್ರಾರಂಭ

ಭಾರತವು ಜಾಗತಿಕವಾಗಿ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ವರ್ಚುವಲ್ ಡಿಜಿಟಲ್ ಅಸೆಟ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿ ಅಂದಾಜು 11.9 ಕೋಟಿ ನೋಂದಾಯಿತ ಬಳಕೆದಾರ ರಿದ್ದು, ಎರಡನೇ ಮತ್ತು ಮೂರನೇ ಹಂತದ ನಗರಗಳಿಂದ ಹೆಚ್ಚಿನ ಭಾಗವಹಿಸುವಿಕೆ ಕಂಡುಬರುತ್ತಿದೆ. ಮಾರುಕಟ್ಟೆ ವಿಕಸನಗೊಳ್ಳುತ್ತಿದ್ದಂತೆ, ಬಳಕೆದಾರರು ಕೇವಲ ವ್ಯವಹಾರದ ಲಭ್ಯತೆಗಿಂತ ಹೆಚ್ಚಾಗಿ ವೇದಿಕೆಯ ವಿಶ್ವಾಸಾರ್ಹತೆ, ಭದ್ರತೆ ಮತ್ತು ಆಡಳಿತಕ್ಕೆ ಆದ್ಯತೆ ನೀಡುತ್ತಿದ್ದಾರೆ.

Madhuri Dikshit: ಮಾಧುರಿ ದೀಕ್ಷಿತ್ ಅವರೊಂದಿಗೆ ಎಂಎಸ್‌ಡಿ ಇಂಡಿಯಾದಿಂದ ದೇಶವ್ಯಾಪಿ ಸರ್ವೈಕಲ್ ಕ್ಯಾನ್ಸರ್ ಜಾಗೃತಿ ಅಭಿಯಾನ ಆರಂಭ

ದೇಶವ್ಯಾಪಿ ಸರ್ವೈಕಲ್ ಕ್ಯಾನ್ಸರ್ ಜಾಗೃತಿ ಅಭಿಯಾನ ಆರಂಭ

ಸರ್ವೈಕಲ್ ಕ್ಯಾನ್ಸರ್ ಭಾರತದಲ್ಲಿನ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕ್ಯಾನ್ಸರ್‌ ಗಳಲ್ಲಿ ಒಂದಾಗಿದೆ..ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆ ಪಡೆಯುವುದು ಮತ್ತು ಸರಿಯಾದ ನಿರೋಧಾತ್ಮಕ ಕ್ರಮಗಳನ್ನು ಅನುಸರಿಸುವುದರಿಂದ ಈ ರೋಗವನ್ನು ಬಹುಪಾಲು ತಡೆಯಬಹುದು, ಆದರೂ ಭಾರತದಲ್ಲಿ ಪ್ರತಿ ಏಳು ನಿಮಿಷಕ್ಕೊಮ್ಮೆ ಸುಮಾರು ಒಬ್ಬ ಮಹಿಳೆ ಸಾವನ್ನಪ್ಪುತ್ತಾರೆ.

ಅಮೆಜಾನ್ ಎಐ ಕ್ರಾಂತಿಯ ಹಿಂದೆ ಸ್ತ್ರೀ ಶಕ್ತಿ: ತಾಂತ್ರಿಕ ಆವಿಷ್ಕಾರದ ಮುಂಚೂಣಿಯಲ್ಲಿ ಭಾರತೀಯ ನಾಯಕಿಯರು

ಅಮೆಜಾನ್ ಎಐ ಕ್ರಾಂತಿಯ ಹಿಂದೆ ಸ್ತ್ರೀ ಶಕ್ತಿ

ಅಮೆಜಾನ್ ಇಂಡಿಯಾದ ಮೂವರು ನಾಯಕಿಯರು ಈ ಎಐ ಕ್ರಾಂತಿಯ ಹಿಂದೆ ಇದ್ದಾರೆ ಅನ್ನು ವುದು ವಿಶೇಷ. ಗೀತಾಂಜಲಿ ಭೂತಾನಿ, ಪಾಯಲ್ ಗುಪ್ತಾ ಮತ್ತು ಶ್ವೇತಾ ಶಂಕರ್ ಅವರು ಗ್ರಾಹಕರ ಪ್ರಯಾಣ ದ ಪ್ರತಿ ಹಂತಕ್ಕೂ ಅಂದರೆ ಗ್ರಾಹಕರು ಉತ್ಪನ್ನಗಳನ್ನು ಹುಡುಕುವ ಕ್ಷಣದಿಂದ ಹಿಡಿದು ಸುಗಮವಾಗಿ ಹಣ ಪಾವತಿಸಿ ಹೊರಬರುವವರೆಗೆ ಅವರಿಗೆ ಸುಗಮ ಅನುಭವ ಒದಗಿಸುವ ತಂತ್ರಜ್ಞಾನ ವೇದಿಕೆ ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

Linkedin: ಭಾರತೀಯ ವೃತ್ತಿಪರರು ಉದ್ಯೋಗ ವಂಚನೆಗಳ ಬಗ್ಗೆ ಜಾಗರೂಕರು, ಆದರೆ ಅಪಾಯ ಇನ್ನೂ ಇದೆ: ಲಿಂಕ್ಡ್‌ ಇನ್‌ ವರದಿ ಬಿಡುಗಡೆ

ಭಾರತೀಯ ವೃತ್ತಿಪರರು ಉದ್ಯೋಗ ವಂಚನೆಗಳ ಬಗ್ಗೆ ಜಾಗರೂಕರು

ಲಿಂಕ್ಡ್‌ ಇನ್‌ ಹೊಸ ಜಾಬ್ ಸರ್ಚ್ ಸೇಫ್ಟಿ ಪಲ್ಸ್ ವರದಿ ಇದೀಗ ಬಿಡುಗಡೆಯಾಗಿದ್ದು, ಈ ವರದಿಯ ಮುಖ್ಯಾಂಶಗಳು ಮಾರುಕಟ್ಟೆಯಲ್ಲಿ ಉದ್ಯೋಗ ವಂಚನೆಗಳ ಬಗ್ಗೆ ಜಾಗೃತಿ ಬೆಳೆಯುತ್ತಿರುವುದನ್ನು ಎತ್ತಿ ತೋರಿಸಿವೆ. ಇದರೊಂದಿಗೆ ವೃತ್ತಿಜೀವನದ ಆರಂಭಿಕ ಹಂತದಲ್ಲಿರುವವರಿಗೆ ಇರುವ ಸೂಕ್ಷ್ಮ ಅಪಾಯಗಳನ್ನೂ ಈ ವರದಿ ತಿಳಿಸಿಕೊಟ್ಟಿದೆ. ಜಾಗೃತಿ ಹೆಚ್ಚುತ್ತಿದ್ದರೂ ಸಹ, ಉತ್ತಮ ಅವಕಾಶ ಗಳನ್ನು ಪಡೆಯಲೇಬೇಕೆಂಬ ಒತ್ತಡದಿಂದ ಕೆಲವೊಮ್ಮೆ ಜಾಗರೂಕತೆ ಕಡಿಮೆಯಾಗಬಹುದಾಗಿದೆ.

ವಿಶ್ವಯಾನದಲ್ಲಿ ದಾಖಲೆ ಬರೆದ ಪುಟ್ಟ ಹಕ್ಕಿ

ವಿಶ್ವಯಾನದಲ್ಲಿ ದಾಖಲೆ ಬರೆದ ಪುಟ್ಟ ಹಕ್ಕಿ

ಗಿಡುಗ ಜಾತಿಯ ಅಮೂರ್ ಫಾಲ್ಕನ್ ಮತ್ತೊಮ್ಮೆ ತನ್ನ ಅಪ್ರತಿಮ ಹಾರಾಟ ಸಾಮರ್ಥ್ಯ ದಿಂದ ವಿಜ್ಞಾನಿಗಳನ್ನು ಬೆರಗು ಗೊಳಿಸಿದೆ. ಮಣಿಪುರದಿಂದ ರೇಡಿಯೋ ಟ್ಯಾಗ್ ಮಾಡಲ್ಪಟ್ಟ ಅಪಾಪಂಗ್ ಎಂಬ ಗಂಡು ಪಕ್ಷಿಯು ಸೊಮಾಲಿಯಾದಿಂದ ಮಧ್ಯ ಭಾರತದವರೆಗೆ 95 ಗಂಟೆಗಳಲ್ಲಿ 4750 ಕಿಲೋ ಮೀಟರ್ ದೂರವನ್ನು ಎಲ್ಲಿಯೂ ನಿಲ್ಲದೆ ಕ್ರಮಿಸಿ ಹೊಸ ದಾಖಲೆ ಬರೆದಿದೆ.

ಗಂಭೀರತೆಗೆ ಹೊರಳಿದ ಪಾಲಿಕೆ ವಿಭಜನೆ ವಿವಾದ

ಗಂಭೀರತೆಗೆ ಹೊರಳಿದ ಪಾಲಿಕೆ ವಿಭಜನೆ ವಿವಾದ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆ ವಿಷಯ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೋರಾಟಕ್ಕೂ ಧಾರವಾಡ ಸನ್ನದ್ಧವಾಗುತ್ತಿದೆ. ಬೃಹತ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನಾಗಿಸಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಏಕಪಕ್ಷಿಯವಾಗಿ ತೆಗೆದುಕೊಂಡ ನಿರ್ಣಯಕ್ಕೆ ತೀವ್ರ ಆಕ್ರೋಶ ಧಾರವಾಡದಲ್ಲಿ ವ್ಯಕ್ತವಾಗುತ್ತಿದೆ. ಅಲ್ಲದೇ ಈಗಾಗಲೇ ಹೋರಾಟದ ರೂಪುರೇಷೆ ಸಹ ಸಿದ್ಧಗೊಳ್ಳುತ್ತಿವೆ.

ಆಟೋಮೊಬೈಲ್‌ ಐಕಾನ್ ಟಾಟಾ ಏಸ್ ಗೆ 21ರ ಸಂಭ್ರಮ

ಆಟೋಮೊಬೈಲ್‌ ಐಕಾನ್ ಟಾಟಾ ಏಸ್ ಗೆ 21ರ ಸಂಭ್ರಮ

ನಗರದೊಳಗಿನ ಸಾಗಣೆ ಮತ್ತು ಕೊನೆಯ ಹಂತದ ಸಾಗಣೆ ಅಗತ್ಯಗಳನ್ನು ಪೂರೈಸಲು ಈ ವಾಹನವು ಸತತವಾಗಿ ವಿಕಸನ ಹೊಂದುತ್ತಾ ಬಂದಿದೆ. ಹೆಚ್ಚಿನ ಹೊರೆ ಹೊರುವ ಸಾಮರ್ಥ್ಯಕ್ಕೆ ತಕ್ಕಂತೆ ಏಸ್ ನ ಪ್ರಸ್ತುತತೆಯನ್ನು ಸಾರುವ ಈ ಏಸ್ ಗೋಲ್ಡ್+ ಎಕ್ಸ್ಎಲ್ ಅನ್ನು ಇಂದಿನ ಉದ್ಯಮಿಗಳಿಗೆ ಹೆಚ್ಚಿನ ದಕ್ಷತೆ, ವಿಶ್ವಾಸಾರ್ಹತೆ ಮತ್ತು ಸೊಗಸಾದ ಮಾಲೀಕತ್ವದ ಅನುಭವ ನೀಡುವಂತೆ ವಿನ್ಯಾಸಗೊಳಿಸ ಲಾಗಿದೆ" ಎಂದು ಹೇಳಿದರು.

Dr Jagadeesh Maane Column: ಕಪ್ಪು ಕೋಟಿನ ಹಿಂದೆ ಅಂಕಗಳಿಲ್ಲ, ನ್ಯಾಯದ ಪ್ರತಿಜ್ಞೆ ಇದೆ !

ಕಪ್ಪು ಕೋಟಿನ ಹಿಂದೆ ಅಂಕಗಳಿಲ್ಲ, ನ್ಯಾಯದ ಪ್ರತಿಜ್ಞೆ ಇದೆ !

ಒಬ್ಬ ಸಾಮಾನ್ಯ ಪ್ರಜೆಗೆ ಸಂವಿಧಾನದ ಒಂದು ಸಾಲನ್ನು ಕೊಡಬಲ್ಲದೇ, ನ್ಯಾಯ ಸಿಗದವನ ಕಣ್ಣೀರು ಒರೆಸಬಲ್ಲದೇ ಎಂಬಿತ್ಯಾದಿ ಪ್ರಶ್ನೆಗಳಿಗೆಲ್ಲ ‘ಹೌದು’ ಎನ್ನುವ ಉತ್ತರವೇ ಕಾನೂನು ಪದವಿ. ಈ ಕಪ್ಪು ಕೋಟು ಕೇವಲ ವೃತ್ತಿಯ ಸಂಕೇತವಲ್ಲ, ಅದು ನ್ಯಾಯದ ಪರವಾದ ಪ್ರತಿಜ್ಞೆಯಾಗಿದೆ. ಶೇ.50ರಷ್ಟು ಅಂಕ ಪಡೆದು ಪಾಸಾದ ವಕೀಲನು, ಶೇ.90ರಷ್ಟು ಅಂಕ ಪಡೆದ ಎಂಜಿನಿಯರ್ಗಿಂತಲೂ ಈ ಸಮಾಜ ದಲ್ಲಿ ಹೆಚ್ಚು ಪರಿಣಾಮವನ್ನು ಬೀರುತ್ತಾನೆ.

Shimoga Airport: ಶಿವಮೊಗ್ಗ ವಿಮಾನ ನಿಲ್ದಾಣ ಸೇವೆ ಮೂರು ವರ್ಷಕ್ಕೆ ಸ್ಥಗಿತ?

ಶಿವಮೊಗ್ಗ ವಿಮಾನ ನಿಲ್ದಾಣ ಸೇವೆ ಮೂರು ವರ್ಷಕ್ಕೆ ಸ್ಥಗಿತ?

ಕಳೆದ 2023ರ ಆಗಸ್ಟ್ 31ರಂದು ಅದ್ಧೂರಿಯಾಗಿ ಆರಂಭಗೊಂಡಿದ್ದ ಇಂಡಿಗೋ ಏರ್‌ಲೈನ್ಸ್ ಸೇವೆ ಬಲು ಬೇಗ ಸ್ಥಗಿತಗೊಂಡಿದ್ದು ಯಾಕೆ? ಎಂಬುದಕ್ಕೆ ಇದುವರೆಗೂ ಸರಕಾರದಿಂದಲೂ ನಿಖರವಾದ ಉತ್ತರ ಬಂದಿಲ್ಲ. ಆದರೆ, ವಿಮಾನ ಕಂಪನಿ ಹೇಳುತ್ತಿರುವ ಕಾರಣಗಳನ್ನು ನಂಬುವಂತೆಯೇ ಇಲ್ಲ. ತಿಂಗಳಿಗೆ ನೂರಾರು ಜನರಿಗೆ ಸೇವೆ ಒದಗಿಸುತ್ತಿದ್ದ ವಿಮಾನ ನಿಂತು ಹೋಗಿರುವುದು ಶಿವಮೊಗ್ಗದ ಜನರಿಗೆ ಬೇಸರ ತಂದಿದೆ.

Vishwavani Editorial: ಭರವಸೆಗಳ ಕಾಮನಬಿಲ್ಲಿನ ಡೊಂಕು

Vishwavani Editorial: ಭರವಸೆಗಳ ಕಾಮನಬಿಲ್ಲಿನ ಡೊಂಕು

ಮನೆ ಯಜಮಾನಿಗೆ ಮಾಸಿಕ 2500 ರೂ., ವಾರ್ಷಿಕ 6 ಗ್ಯಾಸ್ ಸಿಲಿಂಡರ್ ಉಚಿತ, ಬಡ ಮನೆತನದ ಹೆಣ್ಣುಮಕ್ಕಳ ಮದುವೆಗೆ ಒಂದು ಸವರಿನ್ ಚಿನ್ನ ಹಾಗೂ ಸೀರೆ; ನವಜಾತ ಹೆಣ್ಣುಮಕ್ಕಳಿಗೆ ಚಿನ್ನ ದುಂಗುರ ಹಾಗೂ ಕಿಟ್. ನಿರುದ್ಯೋಗಿ ಪದವಿಧರರಿಗೆ ಮಾಸಿಕ 4000 ರೂ., ಕೃಷಿ ಸಾಲ ಮನ್ನಾ, ಮಹಿಳೆಯರಿಗೆ ಉಚಿತ ಪ್ರಯಾಣ, 200 ಯುನಿಟ್ ವಿದ್ಯುತ್ ಉಚಿತ ಇತ್ಯಾದಿ ಇತ್ಯಾದಿ ಕಾಮನ ಬಿಲ್ಲನ್ನು ತೋರಿಸಿದ್ದಾರೆ.

Congress: ಕೈಜಾರಿದ ಅಲ್ಪಸಂಖ್ಯಾತರ ಮತ, ಕೈಗೆ ನೋವು

Congress: ಕೈಜಾರಿದ ಅಲ್ಪಸಂಖ್ಯಾತರ ಮತ, ಕೈಗೆ ನೋವು

ಕಾಂಗ್ರೆಸ್ ಹಿರಿಯ ನಾಯಕರ ಪ್ರಕಾರ, ಎರಡೂ ಉಪ ಚುನಾವಣೆಗಳ ಪೈಕಿ ಬಾಗಲಕೋಟೆ ಉಪಚುನಾವಣೆಯಲ್ಲಿ ಲಭಿಸಿರುವ ಗೆಲುವಿಗೆ ಕೈ ಪಕ್ಷಕ್ಕೆ ಕೊಂಚ ಸಮಾಧಾನವಾದರೂ ಇದೆ. ಆದರೆ ದಾವಣಗೆರೆ ವಿಚಾರದಲ್ಲಿ ತೀರಾ ಬೇಸರ ಇರುವುದು ವ್ಯಕ್ತವಾಗಿದೆ. ಅಂದರೆ ಉಪಚುನಾವಣೆ ಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಭಾಗಶಃ ಜಯ ಸಾಧಿಸಿದ್ದು, ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹಮ್ಮದ್ ಅವರು ಪಕ್ಷವನ್ನು ಸೋಲಿನ ದವಡೆಯಿಂದ ತಪ್ಪಿಸಿದ ರಕ್ಷಕರು ಎನಿಸಿಕೊಂಡಿದ್ದಾರೆ.

Shidlaghatta News: ಗ್ರಾಮಗಳಲ್ಲಿ ನೀರು ಪೂರೈಕೆಗೆ ಆದ್ಯತೆ: ತಹಶೀಲ್ದಾರ್ ಸೂಚನೆ

ಗ್ರಾಮಗಳಲ್ಲಿ ನೀರು ಪೂರೈಕೆಗೆ ಆದ್ಯತೆ: ತಹಶೀಲ್ದಾರ್ ಸೂಚನೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿ ಕೊಳ್ಳಬೇಕು ಎಂದು ಹೇಳಿದರು. ನೀರಿನ ಟ್ಯಾಂಕ್‌ಗಳ ಸ್ವಚ್ಛತೆ ಹಾಗೂ ದುರಸ್ತಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಸಮಸ್ಯೆ ಇರುವ ಪ್ರದೇಶಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಪೂರೈಕೆ ಮಾಡುವುದಕ್ಕೂ ಆದ್ಯತೆ ನೀಡಬೇಕು

Gudibande News: ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಬೇರಿ, ಗುಡಿಬಂಡೆಯಲ್ಲಿ ಸಂಭ್ರಮಾಚರಣೆ

ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಬೇರಿ, ಗುಡಿಬಂಡೆಯಲ್ಲಿ ಸಂಭ್ರಮಾಚರಣೆ

ಬಿಜೆಪಿ ಪಕ್ಷದ ಅಭಿವೃದ್ದಿ ಕೆಲಸಗಳನ್ನು ಮೆಚ್ಚಿದ ಜನತೆ ಇಂದು ಬಿಜೆಪಿ ಪಕ್ಷದತ್ತ ವಾಲುತ್ತಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಜನಪರ ಕೆಲಸಗಳನ್ನು ಮಾಡುತ್ತಿದ್ದು, ಇಡೀ ದೇಶದ ಜನತೆ ಮೋದಿಯವರ ಪರ ಇದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯ ಗಳಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ.

ಪಂಚರಾಜ್ಯಗಳ ಫಲಿತಾಂಶ ಬಿಜೆಪಿಯಿಂದ ಚಿಕ್ಕಬಳ್ಳಾಪುರದಲ್ಲಿ ಪಟಾಕಿ ಸಿಡಿಸಿ : ಸಿಹಿ ಹಂಚಿ ಸಂಭ್ರಮಾಚರಣೆ

ಬಿಜೆಪಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ

ಸಂಭ್ರಮಾಚರಣೆಗೂ ಮೊದಲು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ ಭಾರತೀಯ ಜನತಾ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಪಡೆದಿರುವ ಗೆಲುವು ಕೇವಲ ಒಂದು ರಾಜ್ಯದ ಗೆಲುವಲ್ಲ ಬದಲಿಗೆ ದೇಶದ ಗೆಲುವಾಗಿದೆ ಎಂದು ಸೀಕಲ್ ರಾಮ ಚಂದ್ರಗೌಡ ಈ ವೇಳೆ ಅಭಿಪ್ರಾಯಪಟ್ಟರು.

Loading...