ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

BSY Abhimanotsava: ಚಿತ್ರದುರ್ಗದಲ್ಲಿ ಬಿಎಸ್‌ವೈ ಪುರಪ್ರವೇಶ; ಬೃಹತ್‌ ಮೆರವಣಿಗೆ ಮೂಲಕ ಅದ್ಧೂರಿ ಸ್ವಾಗತ Video

ಬಿಎಸ್‌ವೈ ಅದ್ಧೂರಿ ಪುರಪ್ರವೇಶ; ಮೆರವಣಿಗೆ ಮೂಲಕ ಸ್ವಾಗತ

BS Yediyurappa Abhimanotsava: ಬಿಜೆಪಿ ಹಿರಿಯ ನಾಯಕ, ರೈತನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು 50 ವರ್ಷ ಯಶಸ್ವಿ ರಾಜಕೀಯ ಜೀವನ ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಲು ʼಬಿಎಸ್‌ವೈ ಅಭಿಮಾನೋತ್ಸವʼ ಕಾರ್ಯಕ್ರಮವನ್ನು ಚಿತ್ರದುರ್ಗದ ಮಾದಾರ ಚೆನ್ನಯ್ಯ ಮೈದಾನದಲ್ಲಿ ನಾಳೆ ಹಮ್ಮಿಕೊಳ್ಳಲಾಗಿದೆ.

BESCOM: ವಿದ್ಯುತ್‌ ಸಂಬಂಧಿತ ದೂರುಗಳಿಗೆ ವಾಟ್ಸ್‌ಆ್ಯಪ್‌, ಸಾಮಾಜಿಕ ಜಾಲತಾಣ ಬಳಸಿ: ಬೆಸ್ಕಾಂ

ವಿದ್ಯುತ್‌ ಸಂಬಂಧಿತ ದೂರಿಗೆ ವಾಟ್ಸ್‌ಆ್ಯಪ್‌, ಸಾಮಾಜಿಕ ಜಾಲತಾಣ ಬಳಸಿ

BESCOM Helpline: ವಿದ್ಯುತ್‌ ಸಂಬಂಧಿತ ದೂರುಗಳನ್ನು ದಾಖಲಿಸಲು ವಾಟ್ಸ್‌ಆ್ಯಪ್‌ ಸಹಾಯವಾಣಿ ಸಂಖ್ಯೆಗಳು (WhatsApp helpline numbers) ಹಾಗೂ ಬೆಸ್ಕಾಂ ಸಾಮಾಜಿಕ ಜಾಲತಾಣಗಳ (Social Media) ಮೂಲಕ ದೂರು ದಾಖಲಿಸಲು ಗ್ರಾಹಕರಿಗೆ ಬೆಸ್ಕಾಂ ಮನವಿ ಮಾಡಿದೆ. ಈ ಕುರಿತ ವಿವರ ಇಲ್ಲಿದೆ.

ಪೆನ್ನಾರ್ ನದಿ ನೀರು ಹಂಚಿಕೆ ವಿವಾದ; ನ್ಯಾಯಮಂಡಳಿ ರಚಿಸಲು ಕೇಂದ್ರಕ್ಕೆ 6 ತಿಂಗಳ ಕಾಲಾವಕಾಶ ಕೊಟ್ಟ ಸುಪ್ರೀಂ ಕೋರ್ಟ್‌

ಪೆನ್ನಾರ್ ನದಿ ವಿವಾದ; ನ್ಯಾಯಮಂಡಳಿ ರಚನೆಗೆ 6 ತಿಂಗಳ ಕಾಲಾವಕಾಶ

Pennar River Dispute: ಕರ್ನಾಟಕ-ತಮಿಳುನಾಡು ನಡುವಿನ ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಅಂತಾರಾಜ್ಯ ಜಲ ನ್ಯಾಯಮಂಡಳಿ ರಚಿಸಲು ಆರು ತಿಂಗಳ ಕಾಲಾವಕಾಶ ಕೋರಿ ಕೇಂದ್ರವು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಪುರಸ್ಕರಿಸಿದೆ.

ಬೆಂಗಳೂರಿನಲ್ಲಿ ಜರ್ಮನಿಯ ಪ್ರಸಿದ್ಧ ಅಡುಗೆಮನೆ ಬ್ರಾಂಡ್‌ ನೋಲ್ಟೆ ಕುಚೆನ್ʼನ ಹೊಸ ಶೋ ರೂಂ ಆರಂಭ

ಅಡುಗೆಮನೆ ಬ್ರಾಂಡ್‌ ನೋಲ್ಟೆ ಕುಚೆನ್ʼನ ಹೊಸ ಶೋ ರೂಂ ಆರಂಭ

ಸುಮಾರು 3,500 ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ಆಯೋಜಿಸಲಾದ ಪ್ರದರ್ಶನಾಲಯದಲ್ಲಿ ಅಡುಗೆಮನೆ ಬ್ರಾಂಡ್‌ʼನ  ಇತ್ತೀಚಿನ ಕಲೆಕ್ಷನ್‌ʼಗಳಾದ ನೋಲ್ಟೆ ನಿಯೋ, ನೋಲ್ಟೆ ಮತ್ತು ಎಕ್ಸ್‌ಪ್ರೆಸ್‌ ಗಳನ್ನು ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಅಸಾಧಾರಣ ವಿನ್ಯಾಸ ಗುಣಮಟ್ಟ, ಖಾತರಿ ಮತ್ತು ಸೇವೆಯಿಂದ ಪ್ರಯೋಜನ ಪಡೆಯು ವುದರ ಜೊತೆಗೆ ಸಂದರ್ಶಕರು ವಿವಿಧ ಅಗತ್ಯತೆಗಳು ಮತ್ತು ಬಜೆಟ್‌ಗಳಿಗೆ ಅನುಗುಣವಾಗಿ ಶೈಲಿಗಳು, ವಸ್ತುಗಳು ಮತ್ತು ವ್ಯಾಪಕ ಆಯ್ಕೆಯನ್ನು ಅನ್ವೇಷಿಸ ಬಹುದು.

GBA elections: ಜೂನ್ 14 ರಿಂದ 24ರೊಳಗೆ ಜಿಬಿಎ 5 ಪಾಲಿಕೆಗಳ ಚುನಾವಣೆ: ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ

ಜೂನ್ 14 ರಿಂದ 24ರೊಳಗೆ ಜಿಬಿಎ 5 ಪಾಲಿಕೆಗಳ ಚುನಾವಣೆ

ಸುಪ್ರೀಂ ಕೋರ್ಟ್ ನಿರ್ದೆಶನ ಹಿನ್ನೆಯಲ್ಲಿ ಶೀಘ್ರದಲ್ಲೇ ಜಿಬಿಎ 5 ಪಾಲಿಕೆಗಳ ಚುನಾವಣೆ ಮುಗಿಸುತ್ತೇವೆ. ಯಾವುದೇ ಕುಂಟು ನೆಪಗಳಿಗೆ ಅವಕಾಶ ಇಲ್ಲ. ತಾಲೂಕು ಮತ್ತು ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸಹ ತಯಾರಿ ನಡೆಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜಿ.ಎಸ್. ಸಂಗ್ರೇಶಿ ತಿಳಿಸಿದ್ದಾರೆ.

Bengaluru Digital arrest: ಎನ್‌ಐಎ ಅಧಿಕಾರಿಗಳ ಸೋಗಿನಲ್ಲಿ ವೃದ್ಧೆ, ಪುತ್ರಿಯ ಡಿಜಿಟಲ್‌ ಅರೆಸ್ಟ್;‌ 2.1 ಕೋಟಿ ರೂ. ವಂಚಿಸಿದ ಸೈಬರ್‌ ಕಳ್ಳರು!

ವೃದ್ಧೆ, ಪುತ್ರಿಯ ಡಿಜಿಟಲ್‌ ಅರೆಸ್ಟ್ ಮಾಡಿ 2.1 ಕೋಟಿ ರೂ. ವಂಚನೆ

ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯನೊಬ್ಬ ನಿಮ್ಮ ಹೆಸರಿನಲ್ಲಿ ಡೆಬಿಟ್‌ ಕಾರ್ಡ್‌ ಬಳಸುತ್ತಿದ್ದಾನೆ, ನಿಮ್ಮ ಪುತ್ರಿಯೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ ಎಂದು ಹೆದರಿಸಿದ್ದ ಸೈಬರ್‌ ಖದೀಮರು, ಒಟ್ಟು 2.1 ಕೋಟಿ ರೂ. ವರ್ಗಾವಣೆ ಮಾಡಿಸಿಕೊಂಡು ವಂಚನೆ ಎಸಗಿದ್ದಾರೆ.

ಬೆಂಗಳೂರಿನ ನಡುರಸ್ತೆಯಲ್ಲೇ ಪತ್ನಿಯ ಕತ್ತು ಕೊಯ್ಯಲು ಹೋದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ; ವಿಡಿಯೊ ವೈರಲ್‌

ಪತ್ನಿಯ ಕತ್ತು ಕೊಯ್ಯಲು ಹೋದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ

Bengaluru News: ಪತ್ನಿಯ ನಡತೆಯ ಮೇಲೆ ಸಂಶಯಗೊಂಡು ಆಕೆಯನ್ನು ಕೊಲೆ ಮಾಡಲು ಪತಿ ಯತ್ನಿಸಿದ ವೇಳೆ, ಆತನನ್ನು ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ್ದಾರೆ. ಬೆಂಗಳೂರು ನಗರದ ಮಾದನಾಯಕನಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಶ್ರೀಗಂಧ ಮರಗಳ್ಳತನ ತಡೆಗೆ ತಂತ್ರಜ್ಞಾನಕ್ಕೆ ಮೊರೆ

ಶ್ರೀಗಂಧ ಮರಗಳ್ಳತನ ತಡೆಗೆ ತಂತ್ರಜ್ಞಾನಕ್ಕೆ ಮೊರೆ

ಶ್ರೀಗಂಧ ಬೆಳೆಯುವುದನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಎಸ್‌ಡಿಎಲ್ ಹೊಸ ಪುರಸ್ಕಾರಗಳನ್ನು ಘೋಷಿ ಸಿದೆ. ಕೆಎಸ್‌ಡಿಎಲ್‌ಗೆ ಅತಿ ಹೆಚ್ಚು ಶ್ರೀಗಂಧ ಪೂರೈಸಿದ ನಾಲ್ವರು ರೈತರನ್ನು ಗುರುತಿಸಿ, ಜೂನ್ 4ರಂದು (ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ) ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸ ಲಾಗುವುದು. ಶ್ರೀಗಂಧ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಳ್ಳತನದ ಬಗ್ಗೆ ನಿಖರ ಮಾಹಿತಿ ನೀಡಿದ ಸಾರ್ವಜನಿಕರನ್ನು ಕೂಡ ಇದೇ ಸಂದರ್ಭದಲ್ಲಿ ಪುರಸ್ಕರಿಸ ಲಾಗುವುದು.

Mobile Sanjeevini: ಜಾನುವಾರುಗಳಿಗೆ ಸಂಚಾರಿ ಸಂಜೀವಿನಿ

ಜಾನುವಾರುಗಳಿಗೆ ಸಂಚಾರಿ ಸಂಜೀವಿನಿ

ಜಾನುವಾರುಗಳ ಕಾಲುಬಾಯಿ ರೋಗ, ವಾರ್ಷಿಕ ಲಸಿಕೆ ಕಾರ್ಯಕ್ರಮಗಳು, ಸಾಂಕ್ರಾಮಿಕ ರೋಗಗಳು ಜಾನುವಾರುಗಳನ್ನು ಬಾಽಸುವುದು ಸಾಮಾನ್ಯವಾಗಿದ್ದು, ಅವುಗಳಿಗೆ ಕಾಲಕಾಲಕ್ಕೆ ನಿಗದಿತ ಕೇಂದ್ರ ದಲ್ಲಿ ಚಿಕಿತ್ಸೆ ನೀಡುತ್ತಿರುವುದರ ನಡುವೆಯೇ ರೈತನ ಮನೆ ಬಾಗಿಲಲ್ಲೇ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕೆಂಬ ರಾಜ್ಯ ಸರ್ಕಾರದ ಸಂಕಲ್ಪ ಯಶಸ್ವಿ ಕಂಡಿದೆ.

ಮತ್ತೆ ಬಂದಿದೆ ಬೆಂಗಳೂರಿಗರ ನೆಚ್ಚಿನ 'ಸಂಡೇ ಸೋಲ್ ಸಂತೆ': ಸಂಗೀತ, ಶಾಪಿಂಗ್‌, ಭರ್ಜರಿ ಮನರಂಜನೆಗೆ 'ದಿ ಬೇ' ಸಜ್ಜು!

ಮತ್ತೆ ಬಂದಿದೆ ಬೆಂಗಳೂರಿಗರ ನೆಚ್ಚಿನ 'ಸಂಡೇ ಸೋಲ್ ಸಂತೆ

ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್ ಆಯೋಜಿಸುತ್ತಿರುವ ಈ ಸಂತೆಯ 'ಕಲರ್ ಪ್ಲೇ' ಆವೃತ್ತಿಯು ಇದೇ ಮೇ 10ರಂದು ಬೆಳ್ಳಂದೂರಿನ ಇಕೋವರ್ಲ್ಡ್‌ನಲ್ಲಿರುವ 'ದಿ ಬೇ' ಆವರಣದಲ್ಲಿ ನಡೆಯಲಿದೆ. ಟಾಯ್ಟ್ ಸಹಯೋಗದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮವು ಕಲೆ, ವಾಣಿಜ್ಯ ಮತ್ತು ಸಮುದಾಯವನ್ನು ಬೆಸೆಯುವ ಅದ್ಭುತ ವೇದಿಕೆಯಾಗಿದೆ.

ಉಷ್ಠ ವಿದ್ಯುತ್ ಸ್ಥಾವರ ಪ್ತಸ್ತಾವನೆಗೆ ಬ್ರೇಕ್

ಉಷ್ಠ ವಿದ್ಯುತ್ ಸ್ಥಾವರ ಪ್ತಸ್ತಾವನೆಗೆ ಬ್ರೇಕ್

ಎಲ್ಲ ತರಹದ ವಿದ್ಯುತ್ ತಯಾರಿಕೆಗೆ ಉತ್ತರ ಕನ್ನಡ ಜಿಲ್ಲೆಯೇ ಬೇಕೆ? ಎಂದು ಜಿಲ್ಲೆಯ ಜನರು ಅಸಮಾ ಧಾನ ವ್ಯಕ್ತಪಡಿಸಿದ್ದಿದೆ. ಅಣು ವಿದ್ಯುತ್ ಸ್ಥಾವರ, ಜಲ ವಿದ್ಯುತ್ ಸ್ಥಾವರ ಇದೀಗ ಉಷ್ಣ ವಿದ್ಯುತ್ ಸ್ಥಾವರದ ಸರದಿಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೇರಿ ಗ್ರಾಮದಲ್ಲಿ ಎನ್‌ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವ ಪ್ರಸ್ತಾವನೆಗೆ ಈಗ ದೊಡ್ಡ ತಾಂತ್ರಿಕ ಅಡ್ಡಿ ಎದುರಾಗಿದೆ.

ಹೊಸ ಎನ್‌ಎಫ್‌ಒ ಘೋಷಿಸಿದ ಮೋತಿಲಾಲ್‌ ಓಸ್ವಾಲ್‌ ಮ್ಯೂಚುವಲ್‌ ಫಂಡ್‌!

ಹೊಸ ಎನ್‌ಎಫ್‌ಒ ಘೋಷಿಸಿದ ಮೋತಿಲಾಲ್‌ ಓಸ್ವಾಲ್‌ ಮ್ಯೂಚುವಲ್‌ ಫಂಡ್‌!

ಫಂಡ್ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಮೋತಿಲಾಲ್‌ ಓಸ್ವಾಲ್‌ ಅಸೆಟ್‌ ಮ್ಯಾನೆಜ್ಮೆಂಟ್ ಕಂಪನಿಯ ಎಮ್‌ಡಿ ಮತ್ತು ಸಿಇಒ ಪ್ರತೀಕ್ ಅಗರ್‍ವಾಲ್‌ ಅವರು, “ಮಾರುಕಟ್ಟೆಯ ಅಸ್ಥಿರತೆಯ ಸಮಯದಲ್ಲಿ ಕಾಂಟ್ರೇರಿಯನ್ ಹೂಡಿಕೆ ತಂತ್ರವು ತಾತ್ಕಾಲಿಕ ಮಾರುಕಟ್ಟೆ ಭಾವನೆಗಳಿಗಿಂತ ದೀರ್ಘಾವಧಿಯ ವ್ಯವಹಾರ ಮೂಲಭೂತ ಅಂಶಗಳ ಮೇಲೆ ಗಮನ ಹರಿಸಲು ಸಹಾಯ ಮಾಡುತ್ತದೆ. ಮೊತೀಲಾಲ್ ಓಸ್ವಾಲ್ ಕಾಂಟ್ರಾ ಫಂಡ್ ಆರಂಭಿಕ ಹಂತದಲ್ಲೇ ಅವಕಾಶಗಳನ್ನು ಗುರುತಿಸಿ, ಸಮಂಜಸ ಮೌಲ್ಯ ಮಾಪನ ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಲು ರೂಪಿಸಲಾಗಿದೆ

ಚಲಿಸುತ್ತಿದ್ದ ಬಸ್‌ನಲ್ಲಿ ಚಾಲಕನಿಗೆ ಹೃದಯಾಘಾತ; ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಚಲಿಸುತ್ತಿದ್ದ ಬಸ್‌ನಲ್ಲಿ ಚಾಲಕನಿಗೆ ಹೃದಯಾಘಾತ!

ಚಲಿಸುತ್ತಿದ್ದ ಬಸ್‌ನಲ್ಲಿ ಚಾಲಕನಿಗೆ ಹೃದಯಾಘಾತವಾದ ಘಟನೆ ಮಡಿಕೇರಿ ಸಮೀಪದ ತಾಳತ್ ಮನೆ ಬಳಿ ನಡೆದಿದೆ. ಬೆಂಗಳೂರಿನಿಂದ ಹೊರಟ ಖಾಸಗಿ ಬಸ್ ಮಡಿಕೇರಿ ಸಮೀಪದ ತಲುಪುತ್ತಿದ್ದಂತೆ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಪರಿಣಾಮ ಬಸ್ ರಸ್ತೆ ಪಕ್ಕಕ್ಕೆ ವಾಲಿದೆ.

ಕರ್ನಾಟಕದಲ್ಲಿ ಮುಂದಿನ 3 ದಿನ ಭಾರೀ ಮಳೆ ಎಚ್ಚರಿಕೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆ ಎಚ್ಚರಿಕೆ

Karnataka Weather: ಏಪ್ರಿಲ್ ತಿಂಗಳ ತಾಪಮಾನದಿಂದ ಕಂಗೆಟ್ಟಿದ್ದ ಜನರಿಗೆ ಮೇ ತಿಂಗಳಲ್ಲಿ ಮಳೆರಾಯ ಕೊಂಚ ನಿರಾಳ ತಂದಿದ್ದಾನೆ. ಕರ್ನಾಟಕದ ಹಲವೆಡೆ ಪೂರ್ವ ಮುಂಗಾರು ಚುರುಕುಗೊಂಡಿದ್ದು, ವರುಣನ ಅಬ್ಬರ ಕಂಡುಬರುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ತಲಸೀಮಿಯಾದಿಂದ ಬಳಲುತ್ತಿರುವ ಮಕ್ಕಳಿಗಾಗಿ ಡಿ.ಕೆ.ಎಂ.ಎಸ್ ಉಚಿತ ಎಚ್.ಎಲ್.ಎ ಟೈಪಿಂಗ್ ಘೋಷಣೆ

ತಲಸೀಮಿಯಾದಿಂದ ಬಳಲುತ್ತಿರುವವರಿಗೆ ಉಚಿತ ಎಚ್.ಎಲ್.ಎ ಟೈಪಿಂಗ್

ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಎಂ.ಎಸ್ ಫೌಂಡೇಶನ್ ಇಂಡಿಯಾದ ಕಾರ್ಯನಿರ್ವಾಹಕ ಅಧ್ಯಕ್ಷ ಪ್ಯಾಟ್ರಿಕ್ ಪಾಲ್, ರಕ್ತದ ಕ್ಯಾನ್ಸರ್ ಮತ್ತು ಇತರೆ ರಕ್ತದ ಕಾಯಿಲೆಗಳಂತಹ ಮಾರಾಣಾಂತಿಕ ಕಾಯಿಲೆಗಳಿಗೆ ದುಬಾರಿ ವೆಚ್ಚದ ಕಾರಣದಿಂದಾಗಿ ಅತ್ಯಾ‘ುನಿಕ ಚಿಕಿತ್ಸೆ ಪಡೆಯಲು ಸಾಕಷ್ಟು ಸವಾಲುಗಳನ್ನು ಎದುರಿಸು ತ್ತಾರೆ. ಚಿಕಿತ್ಸೆಯ ಆಯ್ಕೆಗಳ ಬಗ್ಗೆ ಮಾರ್ಗದರ್ಶನ ಮತ್ತು ಆರ್ಥಿಕ ಬೆಂಬಲದ ಸಂಭಾವ್ಯ ಮೂಲಗಳು ಭಾರತದಲ್ಲಿ ಚಿಕಿತ್ಸೆಯ ಲಭ್ಯತೆಯ ಮೇಲೆ ಪ್ರಭಾವ ಬೀರುವ ಅತ್ಯಂತ ನಿರ್ಣಾಯಕ ಅಂಶಗಳಾಗಿವೆ ಎಂದರು

KPCC: ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ವಿಂಗಡಣೆ ಮಸೂದೆ ಲೋಪದೋಷಗಳ ವಿರುದ್ಧ ಕೆಪಿಸಿಸಿ ದಕ್ಷಿಣ ಜಿಲ್ಲಾ ಪ್ರಚಾರ ಸಮಿತಿಯಿಂದ ಆಕ್ರೋಶ

ಮಸೂದೆ ಲೋಪದೋಷಗಳ ವಿರುದ್ಧ ಕೆಪಿಸಿಸಿ ಆಕ್ರೋಶ

ಮಹಿಳಾ ಮೀಸಲಾತಿ ಜಾರಿಗೆ ಮುನ್ನ ಕ್ಷೇತ್ರ ವಿಂಗಡಣೆ ಪ್ರಕ್ರಿಯೆ ಕೈಗೊಳ್ಳುವುದಾಗಿ ಹೇಳಲಾಗು ತ್ತಿದ್ದು, ಇದರಿಂದ ಹಲವಾರು ಕ್ಷೇತ್ರಗಳ ಅಸ್ತಿತ್ವವೇ ಬದಲಾಗುವ ಆತಂಕ ನಿರ್ಮಾಣವಾಗಿದೆ. ವಿಶೇಷವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಜನಸಂಖ್ಯೆ ಆಧಾರಿತ ವಿಂಗಡಣೆ ನಡೆಸಿದರೆ ರಾಜಕೀಯ ಹಾಗೂ ಸಾಮಾಜಿಕ ಸಮತೋಲನ ಹದಗೆಡುವ ಸಾಧ್ಯತೆ ಇದೆ

ಬೆಲೆ ಏರಿಕೆ ನಡುವೆಯೂ ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಾಟವಾದ ಮದ್ಯ;  ಸರ್ಕಾರಕ್ಕೆ ಬಂದ ಆದಾಯ ಎಷ್ಟು?

ಬೆಲೆ ಏರಿಕೆ ನಡುವೆಯೂ ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಾಟವಾದ ಮದ್ಯ

ಮದ್ಯದ ಬೆಲೆ ಏರಿಕೆ ನಡುವೆಯೂ ಕರ್ನಾಟಕದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಭರ್ಜರಿ ಮದ್ಯ ಮಾರಾಟವಾಗಿದೆ. ಕಳೆದ ತಿಂಗಳ ವ್ಯಾಪಾರದಿಂದ ಬರೋಬ್ಬರಿ ರಾಜ್ಯ ಸರ್ಕಾರಕ್ಕೆ ಮೂರು ಸಾವಿರ ಕೋಟಿ ಆದಾಯ ಬಂದಿದೆ. ಅಬಕಾರಿ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಒಟ್ಟಾರೆ 118.56 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ.

ಮಠಗಳು ಸನ್ಮಾರ್ಗದ ದಾರಿದೀಪ

ಮಠಗಳು ಸನ್ಮಾರ್ಗದ ದಾರಿದೀಪ

ಪ್ರತಿಯೊಬ್ಬರಲ್ಲೂ ದೇವರಿದ್ದಾನೆ. ಆ ದೇವರನ್ನು ಕಾಣಲು ನಮ್ಮಲ್ಲಿ ಅರಿವು ಮೂಡಿಸುವ ಮಠಗಳ ಗುರುಗಳು ಅಗತ್ಯ, ಗುರುವೆಂದರೆ ಕೇವಲ ಶಿಕ್ಷಣ ಜ್ಞಾನ ನೀಡುವವರಲ್ಲ, ಬದುಕಿಗೆ ಮಾರ್ಗ ತೋರು ವವರು ಅವರು ತೋರುವ ಮಾರ್ಗದಲ್ಲಿ ಸಮಾಜ ಶಾಂತಿ ನೆಮ್ಮದಿ ಯಿಂದ ಬಾಳಬೇಕು ಎಂದರು

Indi News: ಉರುಸುಗಳು ಭಾವೈಕ್ಯತೆಯ ಸಂಕೇತ

ಉರುಸುಗಳು ಭಾವೈಕ್ಯತೆಯ ಸಂಕೇತ

ಪೀರ ರಾಜೇನೂರ ಶಾ ಶಾಹನೂರಲಿ ಬಾಬಾರವರು ಪವಾಡ ಪುರುಷರಾಗಿದ್ದರು. ಹೀಗಾಗಿ ಅವರ ಮೇಲೆ ಜನರ ಅಪಾರ ಪ್ರೇಮ ಇತ್ತು. ಜನರು ಅವರನ್ನು ಗೌರವ ಮತ್ತು ಶ್ರದ್ದೆಯಿಂದ ಕಾಣುತ್ತಿದ್ದರು. ಅವರಿಂದ ಉದ್ದಾರ ಆದವರು ಅನೇಕರು ಎಂದರು. ಶ್ರೀ ಮಲ್ಲಿಕಾರ್ಜುನ ಶ್ರೀಗಳು ಅಹಿರಸಂಗ, ವಿಠ್ಠಲಗೌಡ ಯಶವಂತರಾಯಗೌಡ ಪಾಟೀಲರು, ಅಹಿರಸಂಗದ ರೇವಣಸಿದ್ದಯ್ಯ ಶಾಸ್ತಿçÃಗಳು, ಅಶೋಕ ಬಡಿಗೇರ ದಾದಾ ಶ್ಯಾಮಣ್ಣವರ ಮಾತನಾಡಿದರು.

Gubbi News: ತಾಲ್ಲೂಕಿಗೆ ನೀರಾವರಿ ಯೋಜನೆ ಕೊಟ್ಟ ಮಾಜಿ ಬಿಎಸ್ ವೈ : ಋಣ ತೀರಿಸಲು ಅಭಿಮಾನೋತ್ಸವಕ್ಕೆ ಸಾವಿರಾರು ಅಭಿಮಾನಿಗಳು

ತಾಲ್ಲೂಕಿಗೆ ನೀರಾವರಿ ಯೋಜನೆ ಕೊಟ್ಟ ಮಾಜಿ ಬಿಎಸ್ ವೈ

ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ, ರಾಜಕೀಯದಲ್ಲಿ ಬಿಎಸ್ ವೈ ಒಂದು ಶಕ್ತಿ ಎನ್ನಬಹುದಾಗಿದೆ. 50 ವರ್ಷದ ರಾಜಕೀಯ ಸಾಧನೆ ಸಾಮಾನ್ಯವಲ್ಲ. ರೈತರಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ ಮೊದಲ ಸಿಎಂ ಆಗಿ ಮಕ್ಕಳಿಗೆ ಸೈಕಲ್, ಬಿಸಿಯೂಟ, ವಿಧವಾ ವೇತನ, ವೃದ್ದಾಪ್ಯ ವೇತನ ಹೀಗೆ ಅನೇಕ ಯೋಜನೆ ಇಂದಿಗೂ ಪ್ರಚಲಿತವಾಗಿದೆ. ಸಣ್ಣ ಸಮುದಾಯವನ್ನು ಕೈಹಿಡಿದ ಇವರು ಅಗ್ನಿವಂಶ ಕ್ಷತ್ರಿಯಕ್ಕೆ ನಿಗಮ ಸ್ಥಾಪನೆ ಮಾಡಿದರು

Chikkaballapur News: ಶೇ.56ರ ಎಸ್‌ಸಿ-ಎಸ್‌ಟಿ ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ ಕಲ್ಪಿಸುವುದು ಸರಕಾರದ ಕರ್ತವ್ಯ : ಮಾಜಿ ಸಂಸದ ಉಗ್ರಪ್ಪ ಆಗ್ರಹ

ಎಸ್‌ಸಿ-ಎಸ್‌ಟಿ ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ: ಸರಕಾರದ ಕರ್ತವ್ಯ

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪ.ಜಾತಿ-ಪ.ಪಂಗಡವು ಶೇ.17.1 ಮತ್ತು 6.95 ಇರುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎನ್ನುವುದು ಭಾರತ ಸಂವಿಧಾನದ ನಿರ್ದೇಶನವಾಗಿದೆ. ಅದರಂತೆ, ಲೋಕಸಭೆ, ವಿಧಾನಸಭೆ, ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಜನಸಂಖ್ಯೆಗೆ ಅನುಗುಣ ವಾಗಿ ಮೀಸಲಾತಿ ನೀಡಲಾಗಿರುತ್ತದೆ.

ದೇಶದ ಆಹಾರ ದಾಸ್ತಾನು ಬಫರ್‌ಗಿಂತ ಮೂರು ಪಟ್ಟು ಹೆಚ್ಚು; ಪ್ರಸ್ತುತ 604 ಲಕ್ಷ ಮೆ.ಟನ್ ಸಂಗ್ರಹ

ದೇಶದ ಆಹಾರ ದಾಸ್ತಾನು ಬಫರ್‌ಗಿಂತ ಮೂರು ಪಟ್ಟು ಹೆಚ್ಚಳ

Pralhad Joshi: ಪ್ರಸ್ತುತವಾಗಿ ಕೇಂದ್ರ ಸರ್ಕಾರದ ಆಹಾರ ಧಾನ್ಯ ದಾಸ್ತಾನು 604.02 ಲಕ್ಷ ಮೆಟ್ರಿಕ್ ಟನ್ ತಲುಪಿದೆ. ಇದು ಕಡ್ಡಾಯ ಬಫರ್ ಅವಶ್ಯಕತೆಗಿಂತ ಮೂರು ಪಟ್ಟು ಹೆಚ್ಚಳವನ್ನು ಪ್ರದರ್ಶಿಸುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಮಾಹಿತಿ ನೀಡಿದ್ದಾರೆ.

ಚಿಂತಾಮಣಿಯಲ್ಲಿ ಸುಸಜ್ಜಿತ ನೂತನ ಟೌನ್‌ಶಿಪ್‌ ಅಭಿವೃದ್ಧಿ: ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಡಾ.ಎಂ.ಸಿ. ಸುಧಾಕರ್ ಸಮಾಲೋಚನೆ

ಚಿಂತಾಮಣಿಯಲ್ಲಿ ಸುಸಜ್ಜಿತ ನೂತನ ಟೌನ್‌ಶಿಪ್‌ ಅಭಿವೃದ್ಧಿ

ಯೋಜನೆಯನ್ನು ಅಚ್ಚುಕಟ್ಟಾಗಿ ರೂಪಿಸಲು ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೇವಲ ವಸತಿ ಮಾತ್ರವಲ್ಲದೆ, ಪಾರ್ಕ್, ರಸ್ತೆ, ಚರಂಡಿ ಮತ್ತು ವಿದ್ಯುತ್‌ ಸೌಲಭ್ಯಗಳನ್ನೊಳಗೊಂಡ ಆಧುನಿಕ ಮಾದರಿ ಯ ಟೌನ್‌ಶಿಪ್‌ ನಿರ್ಮಾಣದ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸ ಲಾಯಿತು.

ನಗರಸಭೆ ಸಿ.ಕೆ.ಬಾಬು ಅವರಿಗೆ ಕಾಯಕಯೋಗಿ ರಾಜ್ಯ ಪ್ರಶಸ್ತಿ ಗೌರವ: ಜನಾಂಗದ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನ*

ನಗರಸಭೆ ಸಿ.ಕೆ.ಬಾಬು ಅವರಿಗೆ ಕಾಯಕಯೋಗಿ ರಾಜ್ಯ ಪ್ರಶಸ್ತಿ ಗೌರವ

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸಿ.ಕೆ.ಬಾಬು ಅವರ ಸೇವೆಯನ್ನು ಗುರುತಿಸಿ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು. ಸಮಾಜದ ಏಳಿಗೆಗೆ ಮತ್ತು ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿ ಯಲ್ಲಿ ಅವರು ತೋರುತ್ತಿರುವ ಶ್ರದ್ಧೆ ಇತರರಿಗೆ ಮಾದರಿಯಾಗಿದೆ ಎಂದು ಈ ಸಂದರ್ಭದಲ್ಲಿ ಗಣ್ಯರು ಶ್ಲಾಘಿಸಿದರು.

Loading...