ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

K Annamalai: ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಿಜೆಪಿ ಮುಖಂಡ ಅಣ್ಣಾಮಲೈ ಭೇಟಿ

ಬಿಜೆಪಿ ಘಟಕದ ಪ್ರಮುಖ ನಾಯಕ ಕೆ. ಅಣ್ಣಾಮಲೈ (K Annamalai) ಅವರು ಭಾನುವಾರ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಾಲಯದಲ್ಲಿ ದರ್ಶನ ಪಡೆದು, ದೇವಸ್ಥಾನದ ಆವರಣದಲ್ಲಿರುವ ಸಂಪುಟ ನರಸಿಂಹ ಮಠಕ್ಕೆ ಭೇಟಿ ನೀಡಿ, ಆಶ್ಲೇ಼ಷ ಬಲಿ ಪೂಜೆಯನ್ನೂ ನೆರವೇರಿಸಿದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಿಜೆಪಿ ಮುಖಂಡ ಅಣ್ಣಾಮಲೈ ಭೇಟಿ

ಕೆ ಅಣ್ಣಾಮಲೈ ದಂಪತಿ

ಹರೀಶ್‌ ಕೇರ ಹರೀಶ್‌ ಕೇರ Jun 30, 2025 7:23 AM

ದಕ್ಷಿಣ ಕನ್ನಡ: ತಮಿಳುನಾಡು ಬಿಜೆಪಿ ಘಟಕದ ಪ್ರಮುಖ ನಾಯಕ ಕೆ. ಅಣ್ಣಾಮಲೈ (K Annamalai) ಅವರು ತಮ್ಮ ಕುಟುಂಬದೊಂದಿಗೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ (Kukke Subrahmanya Temple) ಭೇಟಿ ನೀಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರು ದೇವಸ್ಥಾನದಲ್ಲಿ ದರ್ಶನ ಪಡೆದು, ಸಂಪುಟ ನರಸಿಂಹ ಮಠದಲ್ಲಿ ಆಶ್ಲೇಷ ಬಲಿ ಪೂಜೆಯನ್ನು ನೆರವೇರಿಸಿದ್ದಾರೆ.

ಈ ಸಂದರ್ಭದಲ್ಲಿ ಅವರು ಆಶ್ಲೇಷ ಬಲಿ ಸೇವೆಯನ್ನು ನಡೆಸಿದರು ಎಂದು ಗೊತ್ತಾಗಿದೆ. ಆಶ್ಲೇಷ ಬಲಿ ಸೇವೆಯು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ವಿಶೇಷವಾದ ಪೂಜಾ ಕಾರ್ಯವಾಗಿದೆ. ವಿಶೇಷವಾಗಿ ಕುಜ ದೋಷ ಮತ್ತು ಸರ್ಪ ದೋಷ ಪರಿಹಾರಕ್ಕೆ ಸಂಬಂಧಿಸಿದಂತೆ ಇದನ್ನು ನೆರವೇರಿಸುತ್ತಾರೆ.

ಅಣ್ಣಾಮಲೈ ದಂಪತಿ ದೇವಸ್ಥಾನದ ಆವರಣದಲ್ಲಿರುವ ಸಂಪುಟ ನರಸಿಂಹ ಮಠಕ್ಕೆ ಭೇಟಿ ನೀಡಿದರು. ಈ ಮಠವು ಶತಮಾನಗಳ ಇತಿಹಾಸವನ್ನು ಹೊಂದಿದ್ದು, ಮಧ್ವಾಚಾರ್ಯರಿಂದ ಪವಿತ್ರಗೊಳಿಸಲ್ಪಟ್ಟ ನರಸಿಂಹ ಶಿಲೆಯನ್ನು ಒಳಗೊಂಡಿದೆ ಎಂದು ನಂಬಲಾಗುತ್ತದೆ. ಮಠದ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು ಅಣ್ಣಾಮಲೈ ದಂಪತಿಗಳನ್ನು ಸತ್ಕರಿಸಿ, ಗೌರವ ಸೂಚಕವಾಗಿ ಆಶೀರ್ವಾದ ನೀಡಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಸ್ಥಾನದಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದ್ದು, ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಮತ್ತು ಆಶ್ಲೇಷ ಬಲಿ ಸೇವೆಗಳು ಭಕ್ತರನ್ನು ಆಕರ್ಷಿಸುತ್ತವೆ. ಪವಿತ್ರ ಕುಮಾರಧಾರ ನದಿಯ ತೀರದಲ್ಲಿ ನೆಲೆಗೊಂಡಿರುವ ಈ ದೇವಾಲಯಕ್ಕೆ ಇತ್ತೀಚೆಗೆ ಕತ್ರಿನಾ ಕೈಫ್‌ ಕೂಡ ಭೇಟಿ ನೀಡಿದ್ದರು.

ಇದನ್ನೂ ಓದಿ: ಉರೂಸ್‌ ಕಾರ್ಯಕ್ರಮದಲ್ಲಿ ನೂಕುನುಗ್ಗಲು, ಹಲವರು ಅಸ್ವಸ್ಥ