ಇಂಡಿ: ೨೦೨೫- ೨೬ನೇಸಾಲಿನ ಮುಂಗಾರು ಹಂಗಾಮಿನ ದಾಳಿಂಬೆ, ಲಿಂಬೆ ಮತ್ತು ದ್ರಾಕ್ಷಿ ಬೆಳೆಗೆ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನಕ್ಕೆ ಸೂಚಿಸಲಾಗಿದೆ.
ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ನೋಂದಾಯಿಸುವ ಅವಧಿ ಜು, ೧೫ರವರೆಗೆ ಹಾಗೂ ದ್ರಾಕ್ಷಿ ಬೆಳೆ ವಿಮಾ ಯೋಜನೆಯಡಿ ನೋಂದಾಯಿಸುವ ಅವಧಿ ಆ, ೧೬ರವರೆಗೆ ವಿಸ್ತರಿಸಲಾಗಿದೆ. ಬೆಳೆ ಸಾಲ ಪಡೆದ ರೈತರು ಹಾಗೂ ಪಡೆಯದೆ ಇರುವ ರೈತರು ಆಧಾರ ಕಾರ್ಡ ಝರಾಕ್ಷ ,ಪಹಣಿ ,ಬ್ಯಾಂಕ್ ಖಾತೆ ಪ್ರತಿಯೊಂದಿಗೆ ಹತ್ತಿರದ ಬ್ಯಾಂಕ್ ಅಥವಾ ಗ್ರಾಮ ಒನ್ ಕೇಂದ್ರ ಸಿ.ಎಸ್.ಸಿ ಸೆಂಟರ್ಗಳಲ್ಲಿ ವಿಮಾ ಯೋಜನೆ ನೋಂದಣಿ ಮಾಡಬೇಕು.
ಇದನ್ನೂ ಓದಿ: Indi (Vijayapura) News: ಇಂಡಿ ನಗರದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ 19ರಂದು ಸಭೆ
ರೈತರು ದ್ರಾಕ್ಷಿ ಬೆಳೆಗೆ ಪ್ರತಿ ಹೆಕ್ಟರ್ ಗೆ ವಿಮಾ ಕಂತಿನ ಮೊತ್ತ ೧೪,೦೦೦ ಸಾವಿರ, ದಾಳಿಂಬೆ ವಿಮಾ ಕಂತಿನ ಮೊತ್ತ ೬೩೫೦, ಮತ್ತು ಲಿಂಬೆ ವಿಮಾ ಕಂತಿನ ಮೋತ್ತ ಪ್ರತಿ ಹೆಕ್ಟರ್ ಗೆ ೨೮೦೦ ಈ ಕುರಿತು ಹೆಚ್ಚಿನ ಮಾಹಿತಿಗೆ ಹತ್ತಿರ ತೋಟಗಾರಿಕಾ ಇಲಾಖೆಗೆ ಸಂಪರ್ಕಿಸಲು ತಿಳಿಸಿದ್ದಾರೆ.
ಅಗ್ರೀಕಲ್ಚರ್ ಇನ್ಸೋರೇನ್ಸ್ ಕಂಪನಿ ಪ್ರತಿನಿಧಿ ಮೊ, ೮೩೧೦೯೩೯೭೫೩, ವಿಜಯಪೂರ ಹಿರಿಯ ಸಹಾಯಕ ತೋಟಗಾರಿಕಾ ಇಲಾಖೆ ನಿರ್ದೇಶಕರು ಮೊ, ೯೫೩೫೧೮೫೯೯೯, ಸಹಾಯಕ ನಿರ್ದೇಶಕರು ಇಂಡಿ ೯೦೦೮೪೦೪೦೪೧ ಸಿಂದಗಿ ಸಹಾಯ ನಿರ್ದೇಶಕರು ೭೭೯೫೯೫೨೬೩, ಬಸವನಬಾಗೇವಾಡಿ ಸಹಾಯಕ ನಿರ್ದೇಶಕರು ೯೮೪೫೨೧೫೩೬೨ಮುದ್ದೇಬಿಹಾಳ ಸಹಾಯಕ ನಿರ್ದೇಶಕರು ೯೬೨೦೫೭೮೫೫೧ಸಂಪರ್ಕಿಸುವAತೆ ಪ್ರಕಟಣೆಗೆ ತಿಳಿಸಿದ್ದಾರೆ.