ಜಾಗತಿಕ ಮಾರುಕಟ್ಟೆಯಲ್ಲಿ ಬಂಜಾರ ಕಸೂತಿ ಛಾಪು
Pravasi Prapancha: ʻಬಂಜಾರ ಕಸೂತಿ ಆರ್ಗನೈಸೇಷನ್ʼ…ಇದು ಸಚಿವ ಎಂ.ಬಿ. ಪಾಟೀಲ್ ಅವರ ಪತ್ನಿ ಆಶಾ ಪಾಟೀಲ್ ಅವರ ಕನಸಿನ ಕೂಸು. ವಿಜಯಪುರ ಭಾಗದ ಬಂಜಾರ ಲಂಬಾಣಿ ಜನಾಂಗದ ಮಹಿಳೆಯರ ಕಸೂತಿ ಕಲೆಗೆ ಜಾಗತಿಕ ಮನ್ನಣೆಯನ್ನು ತಂದುಕೊಡುವ ಮೂಲಕ, ಸ್ವಾವಲಂಭಿ ಬದುಕನ್ನು ರೂಪಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ 2017ರಲ್ಲಿಯೇ ಈ ಸಂಸ್ಥೆಯನ್ನು ಹುಟ್ಟುಹಾಕಲಾಗಿತ್ತು. ಇಂದಿಗೂ ದೇಶಿಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಅನೇಕ ಪ್ರದರ್ಶನಗಳಲ್ಲೂ ಭಾಗಿಯಾಗುವ ಮೂಲಕ ಬಂಜಾರ ಕಸೂತಿ ಜನಮನ್ನಣೆ ಗಳಿಸುತ್ತಿದೆ.