ಕ್ಷೇಮವನ: ದೇಶದ ನಂಬರ್ ಒನ್ ಪ್ರಕೃತಿ ಚಿಕಿತ್ಸಾ ತಾಣ
Pravasi Prapancha: ಬೆಂಗಳೂರಿನಿಂದ ನೆಲಮಂಗಲ ದಾಟಿ ಕುಣಿಗಲ್ ಜಂಕ್ಷನ್ನಿಂದ ಚಿತ್ರದುರ್ಗದೆಡೆಗೆ ಪಯಣ ಬೆಳೆಸುತ್ತಿದ್ದರೆ, ಹೆದ್ದಾರಿಯ ಬಲಭಾಗದಲ್ಲಿ ಕ್ಷೇಮವನ ಎಂಬ ದೊಡ್ಡ ಫಲಕ ಕಣ್ಣಿಗೆ ಬೀಳುತ್ತದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ ಸ್ಟಿಟ್ಯೂಟ್ ಆಫ್ ನ್ಯಾಚುರೋಪಥಿ ಆ್ಯಂಡ್ ಯೋಗಿ ಸೈನ್ಸಸ್ ಎಂಬ ಉದ್ದದ ಹೆಸರಿಗೆ ಅನ್ವರ್ಥವಾಗಿ ಕ್ಷೇಮವನ ಎಂದು ಕರೆಸಿಕೊಳ್ಳುತ್ತಿದೆ ಈ ವೆಲ್ನೆಸ್ ರೆಸಾರ್ಟ್.