ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Pravasi Prapancha

Pravasi Prapancha: ತಂಬುಳಿ ಮನೆ...ಅಜ್ಜಿಯ ಕೈರುಚಿ ನೆನಪಿಸುವ ಮನೆ; ಮಲೆನಾಡ ಖಾದ್ಯ ರಾಜಧಾನಿಯಲ್ಲಿ

ತಂಬುಳಿ ಮನೆ ಎಂಬ ಅಜ್ಜಿಯ ಕೈರುಚಿ ನೆನಪಿಸುವ ಮನೆ

Tambuli Mane: ಆ ಕಳೆದುಹೋಗುತ್ತಿರುವ 'ಮಲೆನಾಡಿನ ಅಪ್ಪಟ ರುಚಿ' ಮತ್ತು 'ಆರೋಗ್ಯಕರ ಆಹಾರ ಪದ್ಧತಿ'ಯನ್ನು ಮತ್ತೆ ಜೀವಂತವಾಗಿಸುತ್ತಿರುವ ಒಂದು ಅದ್ಭುತ ಜಾಗವೇ ʼತಂಬುಳಿ ಮನೆʼ. ಇದನ್ನು ರಾಜ್ಯವ್ಯಾಪಿ ಬಡಿಸಬೇಕು ಎಂದು ಕನಸು ಕಂಡವರು ಮಲೆನಾಡಿನವರೇ ಅದ ಕಾರ್ತಿಕ್‌ ಎಚ್‌. ಶ್ರೀಧರ್‌ ಹಾಗೂ ಅವರ ಸ್ನೇಹಿತರು.

ಜಪಾನ್‌ ಪ್ರವಾಸದ ಅಪೂರ್ವ ಅನುಭವಕ್ಕೆ ಅಡಿಗಾಸ್‌ ಯಾತ್ರಾ ಸಾಥ್

ಜಪಾನ್‌ ಪ್ರವಾಸದ ಅಪೂರ್ವ ಅನುಭವಕ್ಕೆ ಅಡಿಗಾಸ್‌ ಯಾತ್ರಾ ಸಾಥ್!

Adigas Yatra: ಜಪಾನ್ ಎಂದರೆ ಕೇವಲ ಒಂದು ದೇಶವಲ್ಲ, ಅದೊಂದು ವಿಸ್ಮಯ ಲೋಕ. ಪ್ರಾಚೀನ ಸಂಪ್ರದಾಯಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಇಲ್ಲಿ ಕೈಕೈ ಹಿಡಿದು ಸಾಗುತ್ತವೆ. ಜಪಾನ್‌ನ ಸಾಂಸ್ಕೃತಿಕ ಮತ್ತು ಆಹಾರ ವೈವಿಧ್ಯದ ರಾಜಧಾನಿ ಎಂಬ ಹೆಗ್ಗಳಿಕೆಗೆ ಒಸಾಕಾ ಪಾತ್ರವಾಗಿದೆ. ಜಪಾನ್‌ನಲ್ಲಿ ನೀವು ನೋಡಬೇಕಾದ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ತಿಳಿಯೋಣ.

Pravasi Prapancha: ಧರ್ಮದೊಂದಿಗೆ ಜ್ಞಾನ-ವಿಜ್ಞಾನದ ಬೆಳಕು

ಧರ್ಮದೊಂದಿಗೆ ಜ್ಞಾನ-ವಿಜ್ಞಾನದ ಬೆಳಕು

ಭೋವಿ ಸಮುದಾಯದ ಬದುಕನ್ನು ರೂಪಿಸುತ್ತಿರುವ ಶಕ್ತಿ, ಚಿತ್ರದುರ್ಗದ ಶಿವಯೋಗಿ ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು. ಈ ಮಹಾನ್ ಚೇತನದ 40ನೆಯ ಜನ್ಮವರ್ಧಂತಿಯನ್ನು ಜುಲೈ 18ರಂದು ಸಂಭ್ರಮದಿಂದ ಆಚರಿಸಗಿದ್ದು, ಅವರೊಂದಿಗೆ ಸಂದರ್ಶನ ಇಲ್ಲಿದೆ.

ಪ್ರವಾಸಿಗರ ಅಚ್ಚುಮೆಚ್ಚಿನ ಅಡಿಗಾಸ್‌ ಯಾತ್ರಾಗೆ 32ರ ಸಂಭ್ರಮ; ದೇಶ-ವಿದೇಶ ಟೂರ್‌ಗೆ ಎಲ್ಲರ ಪ್ರಥಮ ಆಯ್ಕೆ

ಪ್ರವಾಸಿಗರ ಅಚ್ಚುಮೆಚ್ಚಿನ ಅಡಿಗಾಸ್‌ ಯಾತ್ರಾಗೆ 32ರ ಸಂಭ್ರಮ

Adigas Yatra: ಕರ್ನಾಟಕ ಮತ್ತು ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ವಿಶಿಷ್ಟ ಸಂಸ್ಥೆ ಅಡಿಗಾಸ್‌ ಯಾತ್ರಾಗೆ ಇದೀಗ 32 ವರ್ಷದ ಸಂಭ್ರಮ. ಕೆ. ನಾಗರಾಜ್‌ ಅಡಿಗ ಅವರ ಸಾರಥ್ಯದಲ್ಲಿ ಅಡಿಗಾಸ್‌ ಯಾತ್ರಾ ಲಕ್ಷಾಂತರ ಪ್ರವಾಸಿಗರಿಗೆ ದೇಶ-ವಿದೇಶಗಳ ಪ್ರವಾಸವನ್ನು ಅಚುಕಟ್ಟಾಗಿ, ನಡೆಸಿಕೊಟ್ಟಿದೆ.

Pravasi Prapancha: ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ 40ನೆಯ ಜನ್ಮವರ್ಧಂತಿ

ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ 40ನೆಯ ಜನ್ಮವರ್ಧಂತಿ

ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಕೇವಲ ಧಾರ್ಮಿಕ ಮುಖಂಡರಾಗಿರದೆ, ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಪಾರ ದೂರದೃಷ್ಟಿಯುಳ್ಳ ಚೇತನ. ತಮ್ಮ 12-13ನೆಯ ವಯಸ್ಸಿನಲ್ಲೇ ಜನಸೇವೆಯ ಗುರಿಯನ್ನು ಇಟ್ಟುಕೊಂಡು ಗುರುಕುಲಕ್ಕೆ ಪ್ರವೇಶಿಸಿದ ಇವರು, ಇದೇ 'ಜನಾರ್ದನ ಸೇವೆ' ಎಂದು ಭಾವಿಸಿ ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ಆರಂಭದಲ್ಲಿ ಸಣ್ಣ ಗುಡಿಸಲಾಗಿದ್ದ ಮಠವನ್ನು, ಭಕ್ತರ ಪ್ರೀತಿ-ವಿಶ್ವಾಸ ಮತ್ತು ಸ್ವಯಂಪ್ರೇರಿತ ಬೆಂಬಲದೊಂದಿಗೆ ಇಂದು ಅಭಿವೃದ್ಧಿಯ ಕೇಂದ್ರವನ್ನಾಗಿ ರೂಪಿಸಿದ್ದಾರೆ.

Pravasi Prapancha: ಧರೆಗಿಳಿದ ಸೀತಾರಾಮ; ರಾಮನಗರದ ಚನ್ನಮಾನಹಳ್ಳಿಯ ಶ್ರೀ ಸೀತಾರಾಮಚಂದ್ರ ದೇವಾಲಯ

ಗಮನ ಸೆಳೆವ ಚನ್ನಮಾನಹಳ್ಳಿಯ ಸೀತಾರಾಮಚಂದ್ರ ದೇವಾಲಯ

ರಾಮನಗರದ ಚನ್ನಮಾನಹಳ್ಳಿಯಲ್ಲಿ ನಿರ್ಮಿಸಲ್ಪಟ್ಟ ಈ ಶ್ರೀ ಸೀತಾರಾಮಚಂದ್ರ ದೇವಾಲಯವು ಕೇವಲ ಒಂದು ಕಟ್ಟಡವಾಗಿರದೆ, ಅತ್ಯಂತ ಸುಂದರ ಹಾಗೂ ವೈಭವಯುತ ಕಲಾಕೃತಿಯಾಗಿ ಮೂಡಿಬರಲು ದೇಶದ ಹೆಸರಾಂತ ತಜ್ಞರು, ಅನುಭವಿ ಸ್ಥಪತಿಗಳು, ಶಿಲ್ಪಿಗಳು ಮತ್ತು ಚಿತ್ರಕಲಾವಿದರು ಶ್ರಮಿಸಿದ್ದಾರೆ. ತಮಿಳುನಾಡು ಸರಕಾರದ ಪ್ರಸಿದ್ಧ ಸ್ಥಪತಿಗಳಾದ, ಪದ್ಮಶ್ರೀ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮುತ್ತಯ್ಯ ಸ್ಥಪತಿಗಳ ಉನ್ನತ ನೇತೃತ್ವದಲ್ಲಿ ಚನ್ನಮಾನಹಳ್ಳಿಯ ಈ ದೇವಾಲಯದ ಸಂಪೂರ್ಣ ವಿನ್ಯಾಸ ನೆರವೇರಿತು.

ಪ್ರವಾಸಿಗರಿಗೆ ‍ಗುಡ್‌ನ್ಯೂಸ್‌: ಪ್ರಕೃತಿಪ್ರಿಯರ ಸ್ವರ್ಗ ಮೇಘಾಲಯಕ್ಕೆ ಅಡಿಗಾಸ್‌ ಯಾತ್ರಾ ಟೂರ್

ಪ್ರಕೃತಿಪ್ರಿಯರ ಸ್ವರ್ಗ ಮೇಘಾಲಯಕ್ಕೆ ಅಡಿಗಾಸ್‌ ಯಾತ್ರಾ ಟೂರ್

Adigas Yatra: ಕನ್ನಡಿಗರ ನೆಚ್ಚಿನ ಅಡಿಗಾಸ್‌ ಯಾತ್ರಾ ಇದೀಗ ಪ್ರಕೃತಿಪ್ರಿಯರ ನೆಚ್ಚಿನ ಮೇಘಾಲಯಕ್ಕೆ ಪ್ರವಾಸ ಹಮ್ಮಿಕೊಂಡಿದೆ. ಅಡಿಗಾಸ್‌ ಯಾತ್ರಾದ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತದೆ. ಹೆಚ್ಚಿನ ಮಾಹಿತಿಗೆ ಅಡಿಗಾಸ್‌ ಯಾತ್ರಾವನ್ನು ಸಂಪರ್ಕಿಸಿ: ಫೋನ್‌ ನಂಬರ್‌: 080-26616678/ 7022259008/ 9449478944.

Pravasi Prapancha: ಬಂಗಾರ ಅಡವಿಟ್ಟು 30 ಕೋಟಿ ರುಪಾಯಿ ಸಾಮ್ರಾಜ್ಯ ಕಟ್ಟಿದ ಕಥೆ

ಬಂಗಾರ ಅಡವಿಟ್ಟು 30 ಕೋಟಿ ರು.ಯ ಚಹಾ ಸಾಮ್ರಾಜ್ಯ ಕಟ್ಟಿದ ಕಥೆ

Malgudi Amrutha Chaha: 2020ರಲ್ಲಿ ಇಡೀ ಜಗತ್ತನ್ನೇ ಕೋವಿಡ್ ಆವರಿಸಿದಾಗ ಶಿವರಾಜಕುಮಾರ್ ಅವರ ಬದುಕು ತಲ್ಲಣಿಸಿತು. ಕಂಪೆನಿಯಲ್ಲಿ ಉಂಟಾದ ಸ್ಟ್ರೈಕ್ ಹಾಗೂ ಲಾಕ್‌ಡೌನ್‌ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಾಯಿತು. ಒಂದು ಹಂತದಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಕಟ್ಟಲು ಮತ್ತು ಮನೆಗೆ ರೇಷನ್ ತರಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ಕಣ್ಣೆದುರೇ ಕತ್ತಲು ಆವರಿಸಿದಾಗ ಅವರು ತಮ್ಮ ಬದುಕಿನ ಅತ್ಯಂತ ದೊಡ್ಡ ನಿರ್ಧಾರ ಕೈಗೊಂಡರು. ಮನೆಯಲ್ಲಿದ್ದ ಚಿನ್ನದ ಒಡವೆಯನ್ನು ಅಡವಿಟ್ಟರು. ಆ ಹಣವನ್ನು ಬಂಡವಾಳವಾಗಿಸಿ, ಚಹಾ ಉದ್ಯಮಕ್ಕೆ ಕೈಹಾಕಿದರು.

Museum of Art & Photography: ಕಲೆಯ ಭೂಪಟ ಬಿಡಿಸಿದ ಮ್ಯೂಸಿಯಂ

ಕಲೆಯ ಭೂಪಟ ಬಿಡಿಸಿದ ಮ್ಯೂಸಿಯಂ

Pravasi Prapancha: ಐಟಿ ಬೆಳವಣಿಗೆ ಹಾಗೂ ತಂತ್ರಜ್ಞಾನಕ್ಕೆ ಜಗತ್ಪ್ರಸಿದ್ಧವಾಗಿರುವ ಬೆಂಗಳೂರು ನಗರದ ಹೃದಯಭಾಗದಲ್ಲಿ, ಒಂದು ವಿಭಿನ್ನ ರೀತಿಯ ಮ್ಯೂಸಿಯಂ ತಲೆಯೆತ್ತಿ ನಿಂತಿದೆ. 'ಮ್ಯೂಸಿಯಂ ಆಫ್ ಆರ್ಟ್ & ಫೊಟೋಗ್ರಫಿ' (MAP), ಪ್ರಾಚೀನ ಸಂಪ್ರದಾಯ ಹಾಗೂ ಆಧುನಿಕ ಡಿಜಿಟಲ್ ತಂತ್ರಜ್ಞಾನದ ಅದ್ಭುತ ಸಂಗಮವಾಗಿದೆ. ಈ ಮ್ಯೂಸಿಯಂನ ಕುರಿತಾದ ಒಂದು ಸಮಗ್ರ ಇಣುಕು ನೋಟ ಇಲ್ಲಿದೆ.

Pravasi Prapancha: ರ‍್ಯಾಡಿಸನ್ ಬ್ಲೂ ಏಟ್ರಿಯಾ; 3 ದಶಕಗಳ ಆತಿಥ್ಯ ಪರಂಪರೆ

ರ‍್ಯಾಡಿಸನ್ ಬ್ಲೂ ಏಟ್ರಿಯಾ: 3 ದಶಕಗಳ ಆತಿಥ್ಯ ಪರಂಪರೆ

Radisson Blu Atria: ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವು ಹೊಟೇಲ್‌ಗಳು ಕೇವಲ ಕಟ್ಟಡಗಳಲ್ಲ. ಅವು ಈ ನಗರದ ಬೆಳವಣಿಗೆಯ ಕಥೆಯ ಭಾಗವಾಗಿವೆ. ಕೆಲವು ಹೊಟೇಲ್‌ಗಳು ಕೇವಲ ಅತಿಥಿಗಳಿಗೆ ಆಹಾರ ಮತ್ತು ಕೊಠಡಿಗಳನ್ನು ನೀಡುವ ಸರಳ ಆತಿಥ್ಯ ತಾಣಗಳಲ್ಲ, ಅವು ಒಂದು ತಲೆಮಾರಿನ ನೆನಪುಗಳನ್ನು ಸಂಗ್ರಹಿಸಿಟ್ಟಿರುವ ಮ್ಯೂಸಿಯಂಗಳಂತೆ, ಇತಿಹಾಸದ ಕೊಂಡಿಯಂತೆ ನಗರದೊಂದಿಗೆ ಬೆಸೆದುಕೊಂಡಿರುತ್ತವೆ. ಬೆಂಗಳೂರಿನ ಹೃದಯ ಭಾಗದ ಪ್ಯಾಲೇಸ್ ರಸ್ತೆಯಲ್ಲಿರುವ ರ‍್ಯಾಡಿಸನ್ ಬ್ಲೂ ಏಟ್ರಿಯಾ ಅಂಥ ಅಪರೂಪದ ಪಂಚತಾರಾ ಹೊಟೇಲ್ ಗಳಲ್ಲೊಂದು.

ಕಾಪು ಮಾರಿ ಗುಡಿ: ಬ್ರಹ್ಮ ಕಲಶೋತ್ಸವದ ಹಿಂದಿನ ಶಕ್ತಿ ಡಾ. ಪ್ರಕಾಶ್‌ ಶೆಟ್ಟಿ

ಕಾಪು ಮಾರಿ ಗುಡಿ: ಬ್ರಹ್ಮ ಕಲಶೋತ್ಸವದ ಹಿಂದಿನ ಶಕ್ತಿ ಡಾ. ಪ್ರಕಾಶ್‌ ಶೆಟ್ಟಿ

ಕಾಪು ಹೊಸ ಮಾರಿಗುಡಿಯ ಬೇರುಗಳು 17ನೆಯ ಶತಮಾನಕ್ಕೆ ಕರೆದೊಯ್ಯುತ್ತವೆ. ವಿಜಯನಗರ ಸಾಮ್ರಾಜ್ಯದ ಅಂಗವಾಗಿದ್ದ ಕೇಳಾಡಿ ನಾಯಕ ಮನೆತನದ ಅರಸ ಬಸಪ್ಪ ನಾಯಕ ಕ್ರಿ.ಶ. 1743ರಲ್ಲಿ ಕಾಪು ಸಮುದ್ರ ತೀರದಲ್ಲಿ ಮನೋಹರಗಢ ಎಂಬ ಕೋಟೆ ಮತ್ತು ಮಳ್ಳೂರಿನಲ್ಲಿ ಸೇನಾ ಕೋಟೆ ನಿರ್ಮಿಸಿದ. ಈ ಸೇನೆಯ ಜತೆ ಮಾರಿ ದೇವಿ ಕಾಪುವಿಗೆ ಬಂದಳೆಂಬ ನಂಬಿಕೆ ಇರುವುದರಿಂದ ಆಕೆ ದಂಡಿನ ಮಾರಿ ಎಂದೇ ಪ್ರಸಿದ್ಧಿ.

Pravasi Prapancha: ಜಗಮಗಿಸುತಿಹುದು ಕಾಪು ಶ್ರೀ ಮಾರಿ ಗುಡಿ

ಭಕ್ತರ ಕೈ ಬೀಸಿ ಕರೆಯುತ್ತಿದೆ ಕಾಪು ಶ್ರೀ ಮಾರಿ ಗುಡಿ

Kaup Mari Gudi: ಕರ್ನಾಟಕದ ಕರಾವಳಿಯಲ್ಲಿ ದೇವಾಲಯಗಳ ಕೊರತೆಯಿಲ್ಲ. ಆದರೆ ಕೆಲವೊಮ್ಮೆ ಒಂದು ದೇವಾಲಯ ಕೇವಲ ಆರಾಧನೆಯ ಕೇಂದ್ರವಾಗಿ ಉಳಿಯದೆ, ಒಂದು ಸಮುದಾಯದ ಒಗ್ಗಟ್ಟು, ಭಕ್ತಿ, ಸಂಘಟನಾ ಶಕ್ತಿ ಮತ್ತು ನಾಯಕತ್ವದ ಪ್ರತೀಕವಾಗಿ ರೂಪುಗೊಳ್ಳುತ್ತದೆ. ಕಾಪು ಶ್ರೀ ಹೊಸ ಮಾರಿಗುಡಿ ಅಂಥ ಒಂದು ಅಪರೂಪದ ಉದಾಹರಣೆ. ಐದು ಶತಮಾನಗಳ ಸಂಪ್ರದಾಯವನ್ನು ಹೊತ್ತ ಈ ಪವಿತ್ರ ಕ್ಷೇತ್ರ ಇಂದು ₹99 ಕೋಟಿ ವೆಚ್ಚದ ಭವ್ಯ ಶಿಲಾಮಂದಿರವಾಗಿ ಪುನರ್ಜನ್ಮ ಪಡೆದಿದೆ. ಕಳೆದ ವರ್ಷ ಇಲ್ಲಿ ಜರುಗಿದ ಬ್ರಹ್ಮಕಲಶೋತ್ಸವ ಮಹಾಕಾರ್ಯದ ಹಿಂದಿರುವ ಶಕ್ತಿ ಸಾವಿರಾರು ಭಕ್ತರ ಭಕ್ತಿಯಾಗಿದ್ದರೆ, ಅದಕ್ಕೆ ದಿಕ್ಕು ನೀಡಿದ ನಾಯಕತ್ವ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರದು.

ದಕ್ಷಿಣ ಆಫ್ರಿಕಾಕ್ಕೆ ಅಡಿಗಾಸ್‌ ಯಾತ್ರಾ ಸೊಬಗಿನ ಯಾತ್ರೆ

ಅಡಿಗಾಸ್‌ ಯಾತ್ರಾದಿಂದ ದಕ್ಷಿಣ ಆಫ್ರಿಕಾಕಕ್ಕೆ ಪ್ರವಾಸ

Adigas Yatra: ದಕ್ಷಿಣ ಆಫ್ರಿಕಾ ಎಂದರೆ ಪ್ರಕೃತಿ ಸೌಂದರ್ಯ ಕಣ್ಣಮುಂದೆ ಬರುತ್ತದೆ. ಇಲ್ಲಿನ ವನ್ಯಜೀವಿ ಸಂಪತ್ತು ಮತ್ತು ಶ್ರೀಮಂತ ಸಂಸ್ಕೃತಿಯಿಂದಲೂ ಜಾಗತಿಕ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿಗೆ ಪ್ರವಾಸ ಹೋಗಬೇಕು ಎನ್ನುವುದು ಎಲ್ಲರ ಕನಸು. ಅಡಿಗಾಸ್‌ ಯಾತ್ರಾದಿಂದ ಈ ಕನಸು ಸುಲಭವಾಗಿ ನೆರವೇರುತ್ತದೆ. ಈ ಕುರಿತಾದ ವಿವರ ಇಲ್ಲಿದೆ.

ಪಡುಬಿದ್ರಿ ಬ್ರಹ್ಮಕಲಶೋತ್ಸವ: ಭಕ್ತಿಯ ಮಹಾಸಾಗರ

ಪಡುಬಿದ್ರಿಯಲ್ಲಿ ಭಕ್ತಿಯ ಮಹಾಸಾಗರ

Pravasi Prapancha: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಡುಬಿದ್ರಿಯ ಜನಜೀವನದ ಕೇಂದ್ರಬಿಂದು. ಹಲವು ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸಿದ್ಧತೆಗಳು ತಿಂಗಳುಗಳ ಹಿಂದೆಯೇ ಆರಂಭವಾಗಿದ್ದವು. ಡಾ. ಪ್ರಕಾಶ್ ಶೆಟ್ಟಿ ಬಂಜಾರ ಮತ್ತು ಧರ್ಮಪತ್ನಿ ಆಶಾ ಅವರ ಮುಂದಾಳತ್ವದಲ್ಲಿ ನಡೆದ ದೇವಸ್ಥಾನದ ಜೀರ್ಣೋದ್ಧಾರ, ಅಲಂಕಾರ, ಯಾಗಶಾಲೆ ನಿರ್ಮಾಣ, ಭಕ್ತರ ವ್ಯವಸ್ಥೆ, ಪ್ರತಿ ಕೆಲಸದಲ್ಲೂ ಊರಿನ ಜನರ ಪಾಲ್ಗೊಳ್ಳುವಿಕೆ ಸ್ಪಷ್ಟವಾಗಿ ಕಾಣಿಸುತ್ತಿತ್ತು.

Pravasi Prapancha: ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ: ಭಕ್ತಿಯ ಹೆಜ್ಜೆಯನ್ನಿಟ್ಟು ಬನ್ನಿ

ಪಡುಬಿದ್ರಿಯ ಒಡೆಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ

ದೇವಸ್ಥಾನ ಎಂದರೆ ಕೇವಲ ಪೂಜೆ ನಡೆಯುವ ಕಟ್ಟಡವಲ್ಲ; ಒಂದು ಊರಿನ ಇತಿಹಾಸ, ಸಂಸ್ಕೃತಿ, ಸಮುದಾಯದ ಒಗ್ಗಟ್ಟು ಮತ್ತು ಜನರ ಬದುಕಿನ ರೀತಿ ಎಲ್ಲವೂ ಅಲ್ಲಿ ನೆಲೆಸಿರುತ್ತವೆ. ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವೂ ಅದೇ ರೀತಿಯ ಜೀವಂತ ಸಂಸ್ಕೃತಿಕೇಂದ್ರವಾಗಿದೆ. ವರ್ಷಗಳಿಂದ ಕಳೆಗುಂದಿದ ಸ್ಥಿತಿಯಲ್ಲಿದ್ದ ಈ ಕೇಂದ್ರದ ಜೀರ್ಣೋದ್ಧಾರಕ್ಕೆ ತನು ಮನ ಧನ ಸಹಾಯ ಮಾಡುವ ಮೂಲಕ ದೇವಾಲಯಕ್ಕೆ ಹೊಸ ರೂಪವನ್ನು ನೀಡಿದವರು ಡಾ. ಪ್ರಕಾಶ್‌ ಶೆಟ್ಟಿ ಬಂಜಾರ. ಇವರ ಶ್ರಮ, ದಿಟ್ಟ ಯೋಜನೆಗಳ ಮೂಲಕ ಕರಾವಳಿಯ ಪುಟ್ಟ ಗ್ರಾಮ ಇಂದು ಧಾರ್ಮಿಕ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ.

Pravasi Prapancha: ರಾಣೇಬೆನ್ನೂರು ಪ್ರವಾಸೋದ್ಯಮ; ಸಫಾರಿಯಿಂದ ಪರಂಪರೆಯವರೆಗೆ ಪಯಣ

ರಾಣೇಬೆನ್ನೂರು: ಸಫಾರಿಯಿಂದ ಪರಂಪರೆಯವರೆಗೆ ಪಯಣ

Ranebennuru: ರಾಣೇಬೆನ್ನೂರು ವನ್ಯಜೀವಿ, ಪರಂಪರೆ, ಆಧ್ಯಾತ್ಮಿಕ, ಪರಿಸರ ಮತ್ತು ಸಾಹಸ ಪ್ರವಾಸೋದ್ಯಮದ ವಿಶಿಷ್ಟ ಸಮ್ಮಿಲನವನ್ನು ಹೊಂದಿದೆ. ಕೃಷ್ಣಮೃಗ ಅಭಯಾರಣ್ಯ, ಬೆಟ್ಟದ ಮಲ್ಲಪ್ಪನ ಗುಡ್ಡ, ಮುಕ್ತೇಶ್ವರ ದೇವಾಲಯ ಮತ್ತು ಐರಾಣಿ ಕೋಟೆಗಳು ಒಟ್ಟಾಗಿ ಅಭಿವೃದ್ಧಿಯ ಅಪಾರ ಸಾಮರ್ಥ್ಯವಿರುವ ಬಲಿಷ್ಠ ಪ್ರವಾಸೋದ್ಯಮ ವಲಯವನ್ನು ಸೃಷ್ಟಿಸುತ್ತವೆ.

Pravasi Prapancha: ನಾಡು ಕಂಡ ಮಾಸ್‌ ಲೀಡರ್‌ ಬಿಎಸ್‌ವೈ ಅಭಿಮಾನೋತ್ಸವ

ಮಾಸ್‌ ಲೀಡರ್‌ ಬಿಎಸ್‌ವೈ ಅಭಿಮಾನೋತ್ಸವ

BSY Abhimanotsava: ರಾಜಕಾರಣಕ್ಕೆ ಬರುವ ಹಾದಿ ಕಷ್ಟವಲ್ಲ. ಆದರೆ ಬಂದ ಬಳಿಕ ಆ ಹಾದಿಯಲ್ಲಿ ಅಭಿವೃದ್ಧಿ ಮಾಡುತ್ತಾ, ಜನರ ಪ್ರೀತಿ ಹಾಗೂ ನಂಬಿಕೆ ಗಳಿಸಿ ಎಷ್ಟು ದೂರ ಕ್ರಮಿಸಲು ಸಾಧ್ಯವೆನ್ನುವುದೇ ಸವಾಲು. ಈ ಸವಾಲನ್ನು ಮೆಟ್ಟಿನಿಂತು, ರಾಜ್ಯವೇ ಮೆಚ್ಚುವಂತೆ ಜನಪರ ಧ್ವನಿಯಾಗಿ ಕರ್ನಾಟಕದ ʼಮಾಸ್ ಲೀಡರ್ʼ ಎಂಬ ಹೆಸರು ಪಡೆದ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ (ಬಿ.ಎಸ್. ಯಡಿಯೂರಪ್ಪ) ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ರಾಜ್ಯದ ಪ್ರವಾಸೋದ್ಯಮಕ್ಕೂ ದಾರಿದೀಪದಂತಿದ್ದ ಅವರ ದೂರದೃಷ್ಟಿ ಈಗಲೂ ಪ್ರಸ್ತುತ.

Pravasi Prapancha: ಹಿತವಾದ ಮನಸಿಗೆ ಹದವಾದ ಕಾಫಿ; ನೆನಪಲ್ಲುಳಿಯುವ ಮಾತಾಸ್‌ ಘಮ

ನೆನಪಲ್ಲುಳಿಯುವ ಮಾತಾಸ್‌ ಕಾಫಿ ಘಮ

Mathas Coffee: ಮಾತಾಸ್‌ ಕಾಫಿ ಎಂದರೆ ಕರ್ನಾಟಕದ ಜನರಿಗೆ ಎಮೋಷನ್‌ ಆಗಿಬಿಟ್ಟಿದೆ. ಮಾತಾಸ್‌ ಅವರು ಬರಿ ಕಾಫಿ ಪುಡಿ ಮಾರಾಟ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಇವರು ಕಾಫಿ ಸಂಸ್ಕೃತಿಯನ್ನು ಪ್ರತಿಯೊಬ್ಬರ ಜೀವನದ ಭಾಗವಾಗಿಸಲು ಶ್ರಮಿಸುತ್ತಿದ್ದಾರೆ. ನೀವು ಹೊಟೇಲ್‌ಗೆ ಹೋದಾಗ ಅಲ್ಲಿ ಬರುವ ಆ ನೊರೆ ಭರಿತ ಫಿಲ್ಟರ್ ಕಾಫಿಯ ಹಿಂದಿರೋ ಶ್ರಮವೇ ಇವರ ಬ್ರ್ಯಾಂಡ್ ಮೇಲೆ ಜನರಿಟ್ಟಿರುವ ನಂಬಿಕೆ.

ಅಡಿಗಾಸ್‌ನಿಂದ ಬಂಪರ್‌ ಕೊಡುಗೆ, ಪ್ರವಾಸಿಗರಿಗೆ ಭಾರಿ ಡಿಸ್ಕೌಂಟ್‌; ವಿದೇಶಿ ಪ್ರವಾಸಗಳಲ್ಲಿ20,000 ರುಪಾಯಿವರೆಗೆ ದರ ಕಡಿತ!

ಅಡಿಗಾಸ್‌ನಿಂದ ಬಂಪರ್‌ ಕೊಡುಗೆ, ಪ್ರವಾಸಿಗರಿಗೆ ಭಾರಿ ಡಿಸ್ಕೌಂಟ್‌

Adigas Yatra: ರಾಜ್ಯದ ಪ್ರತಿಷ್ಠಿತ ಟ್ರಾವೆಲ್‌ ಸಂಸ್ಥೆ ಅಡಿಗಾಸ್‌ ಯಾತ್ರಾ ಇದೀಗ ತನ್ನ ಪ್ರವಾಸಿಗರಿಗೆ ಬಂಪರ್‌ ರಿಯಾಯಿತಿಯ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಅಂತಾರಾಷ್ಟ್ರೀಯ ಪ್ರವಾಸಗಳ ದರಗಳಲ್ಲಿ ಭಾರಿ ರಿಯಾಯಿತಿ ಪ್ರಕಟಿಸಿದೆ. ಸಂಸ್ಥೆಯ ʼನಮ್ಮ ಗ್ಯಾರಂಟಿʼ ಯೋಜನೆಯ ಅಡಿಯಲ್ಲಿ, ಎಲ್ಲ ವಿದೇಶಿ ಪ್ರವಾಸಗಳಿಗೆ 2,000 ರುಪಾಯಿಯಿಂದ ಗರಿಷ್ಠ 20,000 ರುಪಾಯಿಗಳವರೆಗೆ ಡಿಸ್ಕೌಂಟ್‌ ಪಡೆಯಬಹುದು.

Pravasi Prapancha: ಶಾಂತಿ, ಅಹಿಂಸೆಯ ನೆಲೆವೀಡು ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ

ಶಾಂತಿ ಅಹಿಂಸೆಯ ನೆಲೆವೀಡು ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ

Sonda Mutt: ಸೋಂದೆ ಜೈನ ಮಠದ 36ನೇ ಗುರುಗಳಾದ ಭಟ್ಟಾಕಲಂಕ ಸ್ವಾಮಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಕನ್ನಡ ಭಾಷೆಯ ವ್ಯಾಕರಣದ ಕುರಿತು 'ಕರ್ನಾಟಕ ಶಬ್ದಾನುಶಾಸನ' ಎಂಬ ಪ್ರಸಿದ್ಧ ಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ. ಹೊರಗಿನವರಿಗೂ ಕನ್ನಡದ ಮಹತ್ವ ತಿಳಿಯಲಿ ಎಂಬ ಉದ್ದೇಶದಿಂದ ಇದನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ.

Pravasi Prapancha: ಜಗತ್ತು ಸುತ್ತಿಸುತ್ತಾ ಪ್ರವಾಸಿಗನೊಳಗೆ ಕನಸಿನ ಬೀಜ ಬಿತ್ತುತ್ತಿರುವ MSIL ಟೂರ್ಸ್‌ ಆ್ಯಂಡ್ ಟ್ರಾವೆಲ್ಸ್‌

ವಿಶ್ವಾಸವೇ ಅಸ್ತ್ರ-ನಂಬಿಕೆಯೇ ಆಸ್ತಿ: ಆರ್ಥಿಕ ಬಲ ತುಂಬುವ MSIL ಚಿಟ್‌ ಫಂಡ್

MSIL ಅತ್ಯಂತ ವಿಶ್ವಾಸಾರ್ಹ ಸಂಸ್ಥೆ. ಸರಕಾರದ ಪ್ರತಿಷ್ಠಿತ ಉದ್ದಿಮೆಯಾಗಿ ಕರ್ನಾಟಕದಾದ್ಯಂತ ಹೆಸರುವಾಸಿಯಾಗಿದೆ. ಲಕ್ಷಾಂತರ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಂಡಿದೆ. ಸುದೀರ್ಘ ಐವತ್ತು ವರ್ಷಗಳ ಹಿನ್ನೆಲೆಯಿರುವ ಎಂಎಸ್‌ಐಎಲ್‌ ವ್ಯಾವಹಾರಿಕ ಸಂಸ್ಥೆ ಮಾತ್ರವಲ್ಲದೆ, ಜನ ಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸುವ ಮತ್ತು ಅವರನ್ನು ಆರ್ಥಿಕವಾಗಿ ಬಲಪಡಿಸುವ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ಮಾಡುತ್ತಿದೆ. ಆ ಪೈಕಿ ಎಂಎಸ್‌ಐಲ್‌ ಟೂರ್ಸ್‌ & ಟ್ರಾವೆಲ್ಸ್‌ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

Pravasi Prapancha: ಕರಾವಳಿಯ ಕಿರೀಟ – ಮೂಲ್ಕಿ ಅರಮನೆ: ಪ್ರತಿ ಪ್ರವಾಸಿಯೂ ಭೇಟಿ ನೀಡಲೇಬೇಕಾದ ಐತಿಹಾಸಿಕ ತಾಣ

ಕರಾವಳಿಯ ಕಿರೀಟ – ಮೂಲ್ಕಿ ಅರಮನೆ

Mulki Aramane: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮೂಲ್ಕಿ ಪ್ರದೇಶವು ಸಮುದ್ರ ತೀರದ ಸೌಂದರ್ಯಕ್ಕೆ ಮಾತ್ರವಲ್ಲ, ಶತಮಾನಗಳ ಇತಿಹಾಸವನ್ನು ಹೊತ್ತಿರುವ ರಾಜಪರಂಪರೆಗಾಗಿ ಸಹ ಪ್ರಸಿದ್ಧವಾಗಿದೆ. ಈ ಪ್ರದೇಶದ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲಿ ಒಂದು, ಮೂಲ್ಕಿ ಅರಮನೆ. ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಈ ಅರಮನೆ, ಸ್ಥಳೀಯ ಆಡಳಿತ, ಜೈನ ಧರ್ಮದ ಪ್ರಭಾವ, ಕಂಬಳ ಸಂಪ್ರದಾಯ ಇವೆಲ್ಲದರಿಂದ ಸಮೃದ್ಧಗೊಂಡಿರುವ ಒಂದು ತಾಣ.

Chardham Yatra: ಅಡಿಗಾಸ್‌ ಯಾತ್ರಾದಿಂದ ಚಾರ್‌ ಧಾಮ್‌ ಪ್ರವಾಸ ಪ್ಯಾಕೇಜ್‌; ಯಾವೆಲ್ಲಾ ಸ್ಥಳ ನೋಡಬಹುದು? ಇಲ್ಲಿದೆ ಮಾಹಿತಿ

ಅಡಿಗಾಸ್‌ ಯಾತ್ರಾದಿಂದ ಚಾರ್‌ ಧಾಮ್‌ ಪ್ರವಾಸ ಪ್ಯಾಕೇಜ್‌

Chardham Yatra: ಕಳೆದ 32 ವರ್ಷಗಳಿಂದಲೂ 3 ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೆ ಪ್ರವಾಸ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಬೆಂಗಳೂರಿನ ಅಡಿಗಾಸ್‌ ಯಾತ್ರಾ ಸಂಸ್ಥೆಯು ಇದೀಗ ಚಾರ್ ಧಾಮ್ ಯಾತ್ರೆ ಹಮ್ಮಿಕೊಂಡಿದೆ. ಈ ಟೂರ್‌ ಪ್ಯಾಕೇಜ್‌ನಲ್ಲಿ ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದು ಎಂಬ ಕುರಿತ ವಿವರವಾದ ಮಾಹಿತಿ ಇಲ್ಲಿ ನೀಡಲಾಗಿದೆ.

Pravasi Prapancha: ರಾಜ್ಯದ ಮಾದರಿ ಶಿಕ್ಷಣ ಸಂಸ್ಥೆ; ವಿ.ಆರ್. ದೇಶಪಾಂಡೆ ಟ್ರಸ್ಟ್‌ನ ಸಾರ್ಥಕ ಶೈಕ್ಷಣಿಕ ಸೇವೆ

ವಿ.ಆರ್. ದೇಶಪಾಂಡೆ ಟ್ರಸ್ಟ್‌ನ ಸಾರ್ಥಕ ಶೈಕ್ಷಣಿಕ ಸೇವೆ

Shri V. R. Deshpande Memorial Trust: ಬೆಳಗಾವಿಯ ಹಳಿಯಾಳದಲ್ಲಿರುವ ವಿ.ಆರ್. ದೇಶಪಾಂಡೆ ಸ್ಮಾರಕ ಶಿಕ್ಷಣ ಸಂಸ್ಥೆ ಇಂದು ರಾಜ್ಯವಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲೂ ಹೆಸರುವಾಸಿಯಾಗಿದೆ. ಶಿಕ್ಷಣ, ತರಬೇತಿ ಎಂದರೆ ವಸೂಲಿ ಮತ್ತು ದಂಧೆ ಎಂಬಂತಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಶಿಸ್ತು ಮತ್ತು ಪ್ರಾಮಾಣಿಕವಾಗಿ ಶೈಕ್ಷಣಿಕ ಕ್ರಾಂತಿಗೆ ವಿಆರ್ಡಿಎಂ ಸಂಸ್ಥೆಯು ಮುನ್ನುಡಿ ಬರೆದಿದೆ. ರಾಜ್ಯದ ಹಿರಿಯ ರಾಜಕಾರಣಿಗಳಾದ ಆರ್ ವಿ ದೇಶಪಾಂಡೆ ಅವರು ತಮ್ಮ ತಂದೆಯ ಸ್ಮರಣಾರ್ಥವಾಗಿ ಈ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಶಿಕ್ಷಣದ ಮೂಲಕವೇ ಹೊಸತನದ ಬೀಜ ಬಿತ್ತಲು ಮುಂದಾಗಿದ್ದಾರೆ.

Loading...