ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Actor Darshan: ದರ್ಶನ್ ಮೇಲೆ ಹದ್ದಿನ ಕಣ್ಣಿಟ್ಟ ಪತ್ನಿ ವಿಜಯಲಕ್ಷ್ಮಿ; ಹಳೇ ಪಟಾಲಂಗೆ ಗೇಟ್ ಪಾಸ್!

Actor Darshan: ನಟ ದರ್ಶನ್ ಸುತ್ತ ಅಷ್ಟದಿಗ್ಬಂಧನವನ್ನೇ ಹಾಕಿರುವ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಹಳೇ ಪಟಾಲಂಗೆ ಗೇಟ್ ಪಾಸ್ ಕೊಟ್ಟ ನಂತರ ಆರ್‌ಆರ್ ನಗರ ಮನೆಗೆ ನಟ ದರ್ಶನ್ ಅವರನ್ನು ಕಳಿಸಿದ್ದಾರೆ ಎಂದು ತಿಳಿದುಬಂದಿದೆ.

ದರ್ಶನ್ ಮೇಲೆ ಹದ್ದಿನ ಕಣ್ಣಿಟ್ಟ ಪತ್ನಿ ವಿಜಯಲಕ್ಷ್ಮಿ

Profile Prabhakara R Mar 3, 2025 4:08 PM

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಂತರ ಪತಿ ದರ್ಶನ್ (Actor Darshan) ಮೇಲೆ ಪತ್ನಿ ವಿಜಯಲಕ್ಷ್ಮಿ ಹದ್ದಿನ ಕಣ್ಣಿಟ್ಟಿದ್ದಾರೆ. ರೇಣುಕಾಸ್ವಾಮಿ ಕೊಲೆಗೂ ಮುಂಚೆ ದರ್ಶನ್ ಸುತ್ತ ಇದ್ದವರಿಗೆ ಗೇಟ್ ಪಾಸ್ ನೀಡಿರುವ ಪತ್ನಿ ದರ್ಶನ್ ಮ್ಯಾನೇಜರ್, ಮನೆಕೆಲಸದವರು, ನಾಯಿಗಳನ್ನು ಆರೈಕೆ ಮಾಡುವವರು, ಸೆಕ್ಯೂರಿಟಿಗಳು, ಡ್ರೈವರ್‌ಗಳು ಸೇರಿ ಎಲ್ಲ ಸಿಬ್ಬಂದಿಯನ್ನು ಬದಲಿಸಿದ್ದಾರೆ ಎನ್ನಲಾಗಿದೆ. ಸದ್ಯ ವಿಜಯಲಕ್ಷ್ಮಿ ಕಂಟ್ರೋಲ್‌ನಲ್ಲಿ ದರ್ಶನ್ ಸಾಮ್ರಾಜ್ಯವಿದ್ದು, ಸಿನಿಮಾ ವಿಚಾರಗಳನ್ನು ದರ್ಶನ್ ಸಹೋದರ ದಿನಕರ್ ನೋಡಿಕೊಳ್ಳುತ್ತಿದ್ದಾರೆ.

ದರ್ಶನ್ ಸುತ್ತ ಅಷ್ಟದಿಗ್ಬಂಧನವನ್ನೇ ಹಾಕಿರುವ ವಿಜಯಲಕ್ಷ್ಮಿ, ದರ್ಶನ್ ಹಳೇ ಪಟಾಲಂಗೆ ಗೇಟ್ ಪಾಸ್ ಕೊಟ್ಟ ನಂತರ ಆರ್‌ಆರ್ ನಗರ ಮನೆಗೆ ದರ್ಶನ್ ಅವರನ್ನು ಕಳಿಸಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಕೊಲೆಗೂ ಮೊದಲು ಗಂಡನ ಸುತ್ತ ಇದ್ದವರನ್ನು ದೂರ ಇಟ್ಟ ವಿಜಯಲಕ್ಷ್ಮಿ, ದರ್ಶನ್ ಭೇಟಿ ಮಾಡಬೇಕು ಅಂದರೆ ಪತ್ನಿ ಪರ್ಮಿಶನ್ ಬೇಕು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ | Oscar 2025: `ಅನೋರಾ'ಗೆ ಆಸ್ಕರ್‌ ಅವಾರ್ಡ್‌; ಪ್ರಿಯಾಂಕಾ ಚೋಪ್ರಾ ನಿರ್ಮಾಣದ ಅನುಜಾಗೆ ಕೈ ತಪ್ಪಿದ ಪ್ರಶಸ್ತಿ

ಅರ್ಜುನ್‌ ಸರ್ಜಾ ನಿರ್ದೇಶನದ ʼಸೀತಾ ಪಯಣʼ ಚಿತ್ರಕ್ಕೆ ಪುತ್ರಿ ಐಶ್ವರ್ಯಾ ನಾಯಕಿ

Seetha Payana Movie

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಎನಿಸಿಕೊಂಡಿರುವ ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ, ಇದೀಗ ಮತ್ತೆ ನಿರ್ದೇಶಕನ ಕ್ಯಾಪ್‌ ಧರಿಸುತ್ತಿದ್ದಾರೆ. ʼಸೀತಾ ಪಯಣʼ ಸಿನಿಮಾ (Seetha Payana Movie) ಮೂಲಕ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕಥೆ, ಚಿತ್ರಕಥೆ ಬರೆದು, ತಮ್ಮದೇ ಹೋಮ್‌ ಬ್ಯಾನರ್‌ ಶ್ರೀ ರಾಮ್ ಫಿಲ್ಮ್ಸ್ ಇಂಟರ್‌ನ್ಯಾಷನಲ್‌‌ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸೀತಾ ಪಯಣದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್‌ ನಾಯಕನಾಗಿ ನಟಿಸಿದರೆ, ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯಾ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ 'ಜೈ ಹಿಂದ್' ಮತ್ತು 'ಅಭಿಮನ್ಯು' ಸಿನಿಮಾಗಳಿಗೆ ನಿರ್ದೇಶನ ಮಾಡಿ, ತಮ್ಮ ಕ್ಯಾಮರಾ ಹಿಂದಿನ ಕೆಲಸ ಹೇಗಿದೆ ಎಂಬುದನ್ನು ಸಾಬೀತುಪಡಿಸಿದ್ದರು ಅರ್ಜುನ್‌ ಸರ್ಜಾ. ಅದಾದ ಮೇಲೆ ಪ್ರೇಮಬರಹ ಚಿತ್ರಕ್ಕೂ ಆಕ್ಷನ್‌ ಕಟ್‌ ಹೇಳಿದ್ದರು. ಇದೀಗ ʼಸೀತಾ ಪಯಣʼ ಮೂಲಕ ಮರಳಿದ್ದಾರೆ.

ಶೀರ್ಷಿಕೆ ಸೂಚಿಸುವಂತೆ 'ಸೀತಾ ಪಯಣ', ಪ್ರೀತಿ ಮತ್ತು ಭಾವನಾತ್ಮಕ ಕಥೆಯ ಅಡಿಯಲ್ಲಿ ಸಾಗುವ ಪ್ರಯಾಣ. ಇದೀಗ ಇದೇ ಸಿನಿಮಾದ ತಾಂತ್ರಿಕ ಬಳಗದ ವಿವರವನ್ನು ಚಿತ್ರತಂಡ ರಿವೀಲ್‌ ಮಾಡಿದೆ. ʼಸೀತಾ ಪಯಣʼ ಸಿನಿಮಾಕ್ಕೆ ಬಾಲಮುರುಗನ್‌ ಛಾಯಾಗ್ರಹಣ ಮಾಡಿದ್ದಾರೆ. ದೃಶ್ಯಂ ಸಿನಿಮಾ ಖ್ಯಾತಿಯ ಸಂಕಲನಕಾರ ಆಯೂಬ್‌ ಖಾನ್‌ ಈ ಚಿತ್ರಕ್ಕೆ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಅನುಪ್‌ ರುಬೆನ್ಸ್‌ ಸೀತಾ ಪಯಣ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅದೇ ರೀತಿ ಬರವಣಿಗೆ ಜವಾಬ್ದಾರಿ ಸಾಯಿ ಮಾಧವ್‌ ಬುರ್ರಾ ಅವರದ್ದು. ಇನ್ನು ಭರತ್‌ ಜನನಿ ಎಂಬುವವರು ಕನ್ನಡದ ಹಾಡುಗಳಿಗೆ ಅದ್ಭುತವಾದ ಸಾಹಿತ್ಯ ನೀಡಿದ್ದಾರೆ. ನಿರ್ದೇಶನದ ಜತೆಗೆ ಡೈಲಾಗ್ಸ್ ಸಹ ಬರೆದಿದ್ದಾರೆ ಅರ್ಜುನ್ ಸರ್ಜಾ.

ಹೆಸರೇ ಹೇಳುವಂತೆ ಇದೊಂದು ಪಯಣದ ಕುರಿತಾದ ಚಿತ್ರವಾಗಿದ್ದು, ಈ ಪ್ರಯಾಣದಲ್ಲಿ ಅಭಿ ಮತ್ತು ಸೀತಾ ಎಂಬ ಹದಿಹರೆಯದವರ ಭಾವನಾತ್ಮಕ ಪಯಣವನ್ನು ತೋರಿಸಲಾಗುತ್ತಿದೆ. ನಿರಂಜನ್ ‍ಮತ್ತು ಐಶ್ವರ್ಯ ಅರ್ಜುನ್‌ ಜತೆಗೆ ಪ್ರಕಾಶ್‍ ರೈ, ಸತ್ಯರಾಜ್‍ ಮುಂತಾದವರು ನಟಿಸಿದ್ದಾರೆ. ಸ್ವತಃ ಅರ್ಜುನ್‌ ಸರ್ಜಾ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರ ಜತೆಗೆ ಕನ್ನಡದ ಹೆಸರಾಂತ ನಟರೊಬ್ಬರು ಈ ಚಿತ್ರದ ಭಾಗವಾಗಲಿದ್ದಾರೆ. ಈಗಾಗಲೇ ಚಿತ್ರದ ಡಬ್ಬಿಂಗ್‌ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಏಪ್ರಿಲ್‌ನಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ.

ಈ ಸುದ್ದಿಯನ್ನೂ ಓದಿ | Winter Cape Dress Fashion: ಹೊಸ ವಿನ್ಯಾಸದಲ್ಲಿ ಎಂಟ್ರಿ ಕೊಟ್ಟ ಕೇಪ್ ಡಿಸೈನರ್‌ವೇರ್ಸ್

ಮೂರು ಭಾಷೆಗಳಲ್ಲಿ ಬಿಡುಗಡೆ

ಭಾರತೀಯ ಚಿತ್ರೋದ್ಯಮದಲ್ಲಿ ತಮ್ಮ ನಟನೆಯ ಮೂಲಕವೇ ಅಪಾರ ಜನಮನ್ನಣೆ ಗಳಿಸಿದ್ದಾರೆ ಅರ್ಜುನ್‌ ಸರ್ಜಾ. ದಕ್ಷಿಣದ ಸಿನಿಮಾಗಳ ಜತೆಗೆ ಬಾಲಿವುಡ್‌ನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಸೀತಾ ಪಯಣ ಸಿನಿಮಾ ಮೂಲಕ ಪರಿಪೂರ್ಣ ಫ್ಯಾಮಿಲಿ ಡ್ರಾಮಾ ಜತೆಗೆ ಆಗಮಿಸುತ್ತಿದ್ದಾರೆ. ಸೀತಾ ಪಯಣ ಸಿನಿಮಾ ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನಲ್ಲಿ ಸಿದ್ಧವಾಗಲಿದೆ. ನಟ ಅರ್ಜುನ್ ಸರ್ಜಾ ತಮ್ಮದೇ ಹೋಮ್ ಬ್ಯಾನರ್ ಶ್ರೀ ರಾಮ್ ಫಿಲ್ಮ್ಸ್ ಇಂಟರ್‌ನ್ಯಾಷನಲ್‌‌ ಅಡಿಯಲ್ಲಿ ʼಸೀತಾ ಪಯಣʼ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.