ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Blast Case: ಸೌರ ವಿದ್ಯುತ್ ಸ್ಥಾವರ ಸ್ಫೋಟ; ಓರ್ವ ಸಾವು, ಎಂಟು ಮಂದಿಗೆ ಗಂಭೀರ ಗಾಯ

ನಾಗ್ಪುರದ ಕಲ್ಮೇಶ್ವರ ತೆಹಸಿಲ್‌ನ ಬಜಾರ್ ಗ್ರಾಮದ ಬಳಿಯ (Blast Case) ಚಂದೂರ್ ಗ್ರಾಮದ ಬಳಿ ಇರುವ ಸೌರ ಸ್ಥಾವರದಲ್ಲಿ ದೊಡ್ಡ ಸ್ಫೋಟ ಸಂಭವಿಸಿದೆ. ಸೆಪ್ಟೆಂಬರ್ 4 (ಗುರುವಾರ) ಬೆಳಗಿನ ಜಾವ 1:00 ಗಂಟೆ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ.

ಮುಂಬೈ: ನಾಗ್ಪುರದ ಕಲ್ಮೇಶ್ವರ ತೆಹಸಿಲ್‌ನ ಬಜಾರ್ ಗ್ರಾಮದ ಬಳಿಯ (Blast Case) ಚಂದೂರ್ ಗ್ರಾಮದ ಬಳಿ ಇರುವ ಸೌರ ಸ್ಥಾವರದಲ್ಲಿ ದೊಡ್ಡ ಸ್ಫೋಟ ಸಂಭವಿಸಿದೆ. ಸೆಪ್ಟೆಂಬರ್ 4 (ಗುರುವಾರ) ಬೆಳಗಿನ ಜಾವ 1:00 ಗಂಟೆ ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಜಾರ್‌ಗಾಂವ್‌ನಲ್ಲಿರುವ ಸೌರ ಸ್ಫೋಟಕಗಳ ಆರ್‌ಡಿಎಕ್ಸ್ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ, ಕಂಪನಿಯಲ್ಲಿ 900 ರಿಂದ 6,000 ಕಾರ್ಮಿಕರನ್ನು ವಿವಿಧ ಪಾಳಿಗಳಲ್ಲಿ ನಿಯೋಜಿಸಲಾಗಿತ್ತು. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ದೃಢಪಟ್ಟಿಲ್ಲವಾದರೂ, ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಎಂಟರಿಂದ ಒಂಬತ್ತು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.



ಎನ್‌ಸಿಪಿ (ಎಸ್‌ಪಿ) ನಾಯಕ ಮತ್ತು ಮಾಜಿ ರಾಜ್ಯ ಗೃಹ ಸಚಿವ ಅನಿಲ್ ದೇಶಮುಖ್ ಅವರು ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿ ಪರಿಸ್ಥಿಯನ್ನು ಅವಲೋಕಿಸಿದ್ದಾರೆ. ಸುಮಾರು ಎಂಟರಿಂದ ಒಂಬತ್ತು ಮಂದಿ ಗಾಯಗೊಂಡಿದ್ದಾರೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಮಾಹಿತಿ ಪಡೆದ ಕೂಡಲೇ ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಸ್ಫೋಟದ ನಿಖರವಾದ ಕಾರಣವನ್ನು ಇನ್ನೂ ಖಚಿತಪಡಿಸಲಾಗಿಲ್ಲ.



ಈ ಸುದ್ದಿಯನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 7 ಮಂದಿ ಸಾವು, ಹಲವರಿಗೆ ಗಾಯ

ರಿಯಾಕ್ಟರ್ ನಿಂದ ಹೊಗೆ ಬರುತ್ತಿರುವುದನ್ನು ನೋಡಿ ನಾವೆಲ್ಲರೂ ಹೊರಬಂದೆವು. ಸುಮಾರು 20-25 ನಿಮಿಷಗಳ ಕಾಲ ನಿರಂತರ ಹೊಗೆಯ ನಂತರ, ಸ್ಫೋಟ ಸಂಭವಿಸಿತು. ಸ್ಫೋಟದಿಂದಾಗಿ, ಸುಮಾರು 40-50 ಜನರು ಕಲ್ಲುಗಳಿಂದ ಗಾಯಗೊಂಡರು" ಎಂದು ಗಾಯಗೊಂಡ ಕಾರ್ಮಿಕನೊಬ್ಬ ತಿಳಿಸಿದ್ದಾನೆ. ಇದು ತಾಂತ್ರಿಕ ವೈಫಲ್ಯ, ನಿರ್ಲಕ್ಷ್ಯ ಅಥವಾ ಇತರ ಕಾರಣಗಳಿಂದ ಉಂಟಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Vishakha Bhat Heggar

View all posts by this author