ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶ

ಬಿರುಸಿನ ಪ್ರಚಾರದ ನಡುವೆಯೇ ಬಂಗಾಳದ ರಸ್ತೆ ಬದಿ ಮಂಡಕ್ಕಿ ಸವಿದ ಪ್ರಧಾನಿ ಮೋದಿ!

ಬಂಗಾಳದ ರಸ್ತೆ ಬದಿ ಮಂಡಕ್ಕಿ ಸವಿದ ಪ್ರಧಾನಿ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ರಾಜಕೀಯ ಪಕ್ಷಗಳು ಬಂಗಾಳದಾದ್ಯಂತ ಭರ್ಜರಿ ಪ್ರಚಾರ ನಡೆಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಬಂಗಾಳದಾದ್ಯಂತ ರ್ಯಾಲಿ ನಡೆಸುತ್ತಿದ್ದಾರೆ. ಇದೀಗ ಪ್ರಧಾನಿ ರಸ್ತೆ ಬದಿ ನಿಂತು ಮಂಡಕ್ಕಿ ಸವಿಯುತ್ತಿರುವ ಫೋಟೋಗಳು ಎಲ್ಲೆಡೆ ವೈರಲ್‌ ಆಗಿವೆ

West Bengal Election ground report by Raghava Sharma Nidle: ಮಮತಾ ಪ್ರಾಬಲ್ಯಕ್ಕೆ ಮಹಿಳೆಯರದ್ದೇ ಪೌರೋಹಿತ್ಯ

ಮಮತಾ ಪ್ರಾಬಲ್ಯಕ್ಕೆ ಮಹಿಳೆಯರದ್ದೇ ಪೌರೋಹಿತ್ಯ

ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸ್ಪರ್ಧಿಸುತ್ತಿರುವ 291 ಕ್ಷೇತ್ರಗಳಲ್ಲಿ 52 ಅಭ್ಯರ್ಥಿಗಳು ಮಹಿಳೆಯರು. ಅಂದರೆ ಶೇ.27ರಷ್ಟು ಅವರೇ ಇದ್ದಾರೆ. 253 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿರುವ ಎಡಪಕ್ಷಗಳು 34 (ಶೇ.13.4) ಮಹಿಳೆಯರಿಗೆ ಟಿಕೆಟ್ ನೀಡಿವೆ. ಎಲ್ಲಾ 294 ಸೀಟುಗಳಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ 35 (ಶೇ. 11.9) ಮತ್ತು ಬಿಜೆಪಿ 33 (ಶೇ.11.2) ಮಹಿಳೆಯರನ್ನು ಚುನಾವಣಾ ಅಖಾಡಕ್ಕಿಳಿಸಿವೆ.

ಇಟಲಿಯ ಗುರುದ್ವಾರದ ಬಳಿ ಭಾರತೀಯರ ಮೇಲೆ ಗುಂಡಿನ ದಾಳಿ; ಇಬ್ಬರು ಸಾವು

ಭಾರತೀಯರ ಮೇಲೆ ಗುಂಡಿನ ದಾಳಿ

ಗುರುದ್ವಾರದಿಂದ ಹೊರಡುತ್ತಿದ್ದ ಇಬ್ಬರು ಭಾರತೀಯರ ಮೇಲೆ ಗುಂಡಿನ ದಾಳಿ ನಡೆದ ಘಟನೆ ಇಟಲಿಯಲ್ಲಿ ನಡೆದಿದೆ. ಇಟಲಿಯ ಬರ್ಗಾಮೊ ಪ್ರಾಂತ್ಯದ ಕೊವೊದಲ್ಲಿ ಕಾರಿನಲ್ಲಿ ಬಂದಿದ್ದ ಬಂದೂಕುಧಾರಿಗಳು ಇಬ್ಬರು ಭಾರತೀಯರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಗುರುದ್ವಾರ ಮಾತಾ ಸಾಹಿಬ್ ಕೌರ್ ಜಿ ಬಳಿ ಈ ಘಟನೆ ನಡೆದಿದೆ.

ಚಪ್ಪಲಿ ಧರಿಸಿ ಪೊಲೀಸ್ ದೈಹಿಕ ಪರೀಕ್ಷೆಗೆ ಆಗಮಿಸಿದ ಯುವಕ; ಆತನ ಛಲಕ್ಕೆ ಮನಸೋತು ಶೂ ಉಡುಗೊರೆ ನೀಡಿದ ಎಸ್‌ಪಿ

ಚಪ್ಪಲಿ ಧರಿಸಿ ಪೊಲೀಸ್ ದೈಹಿಕ ಪರೀಕ್ಷೆಗೆ ಆಗಮಿಸಿದ ಯುವಕ

Viral Video: ಬಡತನವನ್ನೇ ಹಾಸು ಹೊದ್ದ ಯುವಕನೊಬ್ಬ ಸ್ಟೇಟ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ ನೇಮಕಾತಿಯ ದೈಹಿಕ ಪರೀಕ್ಷೆಗಾಗಿ ಮೈದಾನಕ್ಕೆ ಚಪ್ಪಲಿ ಧರಿಸಿ ಬಂದಿದ್ದಾನೆ. ಬ್ರ್ಯಾಂಡೆಡ್‌ ಶೂ ಖರೀದಿಸಲು ಹಣವಿಲ್ಲದ ಕಾರಣ ಚಪ್ಪಲಿ ಧರಿಸಿ ಬಂದಿದ್ದಾಗಿ ಅವನು ತಿಳಿಸಿದ್ದಾನೆ. ಆತನ ಮನಮಿಡಿಯುವ ಕಥೆ ಕೇಳಿ ಎಸ್‌ಆರ್‌ಪಿಎಫ್‌ನ ಎಸ್‌ಪಿ ಶೂ ಉಡುಗೊರೆಯಾಗಿ ನೀಡಿದರು.

ಹೋಗಲು ಅನುಮತಿ ನೀಡಿ, ಗುಂಡು ಹಾರಿಸಿದ್ದೀರಿ: ಇರಾನ್‌ಗೆ ಭಾರತೀಯ ಟ್ಯಾಂಕರ್‌ನಿಂದ ಆಕ್ರೋಶದ ಸಂದೇಶ

ಇರಾನ್ ವಿರುದ್ಧ ಹಾರಿಹಾಯ್ದ ಭಾರತೀಯ ಹಡಗು ಸಿಬ್ಬಂದಿ

ಹೋಗಲು ಅನುಮತಿ ಕೊಟ್ಟು ಬಳಿಕ ಗುಂಡು ಹಾರಿಸುತ್ತಿದ್ದೀರಿ ಎಂದು ಇರಾನ್ ವಿರುದ್ಧ ಭಾರತೀಯ ಹಡಗು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಹೊರ್ಮುಜ್ ಜಲಸಂಧಿಯಲ್ಲಿ ಎರಡು ಭಾರತೀಯ ಧ್ವಜ ಹೊತ್ತ ಹಡಗುಗಳ ಮೇಲೆ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆಗಳು ಗುಂಡಿನ ದಾಳಿ ನಡೆಸಿದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದೆ.

ತಮಿಳುನಾಡು ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; 13 ಮಂದಿ ಸಾವು

ತಮಿಳುನಾಡು ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ

Firecracker Factory Blast: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ತಯಾರಿಕಾ ಘಟಕದಲ್ಲಿ ಭಾನುವಾರ (ಏಪ್ರಿಲ್‌ 19) ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ ಕಟ್ಟನಾರ್‌ಪಟ್ಟಿ ಗ್ರಾಮದಲ್ಲಿನ ಪಟಾಕಿ ತಯಾರಿಕಾ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊತ್ತ ಎರಡು ಹಡಗುಗಳ ಮೇಲೆ ಗುಂಡಿನ ದಾಳಿ: ಇರಾನ್ ಕಳವಳ

ಭಾರತೀಯ ಧ್ವಜವಿದ್ದ ಹಡಗುಗಳ ಮೇಲೆ ಗುಂಡಿನ ದಾಳಿ

ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊತ್ತ ಎರಡು ಹಡಗುಗಳ ಮೇಲೆ ಗುಂಡಿನ ದಾಳಿಯಾಗಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಇರಾನ್, ಭಾರತದೊಂದಿಗೆ ನಮ್ಮ ಸಂಬಂಧಗಳು ತುಂಬಾ ಬಲವಾಗಿವೆ. ಘಟನೆ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ. ಈ ಪ್ರದೇಶದಲ್ಲಿ ಶಾಂತಿ ಕಾಪಾಡಲು ಟೆಹರಾನ್ ಬದ್ಧವಾಗಿದೆ ಎಂದು ತಿಳಿಸಿದೆ.

ಈಗಲೇ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದೇಕೆ? ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಎಡವಿತಾ?

ಮಹಿಳಾ ಮೀಸಲಾತಿ ಮಸೂದೆ ಈ ಸಮಯದಲ್ಲಿ ಏಕೆ?

ಕೇಂದ್ರ ಸರ್ಕಾರವು ಅವಸರವಸರವಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಿ ಸೋತಿದೆ. 2029ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೂ ಮುನ್ನ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡುವ ಉದ್ದೇಶವನ್ನು ಇದು ಹೊಂದಿತ್ತು. ಆದರೆ ಬಹುಮತದ ಕೊರತೆಯಿಂದ ಮಹಿಳಾ ಮೀಸಲಾತಿ ಅಂಗೀಕರವಾಗಲಿಲ್ಲ. ಕೇಂದ್ರ ಸರ್ಕಾರ ಈಗಲೇ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದೇಕೆ? ಯೋಜನೆಗಳು ಎಲ್ಲಿ ತಪ್ಪಿತು ಎಂಬುದಕ್ಕೆ ಇಲ್ಲಿದೆ ಉತ್ತರ.

ಅಪ್ರಾಪ್ತ ಬಾಲಕನ ಅಪಹರಣ, ಲೈಂಗಿಕ ದೌರ್ಜನ್ಯ ನೀಡಿ ಹಣ ಸುಲಿಗೆ ಮಾಡಲು ಯತ್ನಿಸಿದ ಮಹಿಳೆಯ ಬಂಧನ

ಅಪ್ರಾಪ್ತ ಬಾಲಕನ ಅಪಹರಣ ಮಾಡಿದ್ದ ಮಹಿಳೆಯ ಬಂಧನ

Crime News: 16 ವರ್ಷದ ಅಪ್ರಾಪ್ತ ಬಾಲಕ ಅಪಹರಣ, ಲೈಂಗಿಕ ದೌರ್ಜನ್ಯ ಮತ್ತು ಹಣ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣದ ತನಿಖೆಯ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತಳು ಹನಿಟ್ರ್ಯಾಪ್ ಗ್ಯಾಂಗ್‌ನ ಮಾಸ್ಟರ್‌ಮೈಂಡ್‌ ಎಂದೇ ಹೇಳಲಾಗಿದೆ. ಉತ್ತರಪ್ರದೇಶದ ಲಖನೌದಲ್ಲಿ ಘಟನೆ ನಡೆದಿದೆ.

ಮಸೀದಿಯೊಳಗೆ ಮುಸ್ಲಿಂ ಧರ್ಮಗುರು, ಸಹಾಯಕನಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೊ ಚಿತ್ರೀಕರಿಸಿ ಬೆದರಿಕೆ

ಮುಸ್ಲಿಂ ಧರ್ಮಗುರು, ಸಹಾಯಕನಿಂದ ಮಹಿಳೆ ಮೇಲೆ ಅತ್ಯಾಚಾರ

Crime News: ಮಗನಿಗೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಮಸೀದಿ ಒಳಗೆ ಕರೆದೊಯ್ದು ಮುಸ್ಲಿಂ ಧರ್ಮಗುರು ಮತ್ತು ಆತನ ಸಹಾಯಕ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಅವಳಿ ಹೆಣ್ಣುಮಕ್ಕಳ ಕತ್ತು ಸೀಳಿ, ತಾನೇ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಕರೆ ಮಾಡಿದ ಪಾಪಿ ತಂದೆ!

ಅವಳಿ ಹೆಣ್ಣುಮಕ್ಕಳ ಕತ್ತು ಸೀಳಿ ಕೊಂದ ಪಾಪಿ ತಂದೆ

Crime News: ವ್ಯಕ್ತಿಯೊಬ್ಬ ತನ್ನ 11 ವರ್ಷದ ಅವಳಿ ಹೆಣ್ಣುಮಕ್ಕಳನ್ನು ಹರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಕೊಲೆ ಮಾಡಿದ ನಂತರ ಆರೋಪಿ ಪೊಲೀಸರಿಗೆ ಕರೆ ಮಾಡಿ ತನ್ನ ಹೆಣ್ಣುಮಕ್ಕಳನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರವಾಸಿಗರ ಸುರಕ್ಷತೆಗಾಗಿ ಜಮ್ಮು ಕಾಶ್ಮೀರದಲ್ಲಿ ಹೊಸ ನಿಯಮ; ಕ್ಯುಆರ್ ಕೋಡ್ ಆಧಾರಿತ ವಿಶಿಷ್ಟ ಗುರುತಿನ ವ್ಯವಸ್ಥೆ ಪರಿಚಯಿಸಿದ ಅಧಿಕಾರಿಗಳು

ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಹೊಸ ಕ್ರಮ

Jammu and Kashmir: ಪ್ರವಾಸಿಗರ ಸುರಕ್ಷತೆಗಾಗಿ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಎಲ್ಲ ಪ್ರವಾಸೋದ್ಯಮ ಸೇವಾ ಪೂರೈಕೆದಾರರಿಗೆ ವಿಶಿಷ್ಟವಾದ ಕ್ಯುಆರ್ ಕೋಡ್ ಆಧಾರಿತ ಗುರುತಿನ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ. ಈ ವ್ಯವಸ್ಥೆಯು ನಿಜವಾದ ಮತ್ತು ನೋಂದಾಯಿತ ಸೇವಾ ಪೂರೈಕೆದಾರರನ್ನು ಸುಲಭವಾಗಿ ಗುರುತಿಸಲು ಮತ್ತು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

ಕಾರವಾರ ಶಾಸಕ ಸತೀಶ್ ಸೈಲ್‌  ಪುತ್ರಿ  ಸಾಧ್ವಿಗೆ ಒಲಿದ ಮಿಸ್ ಇಂಡಿಯಾ ಕಿರೀಟ

ಕಾರವಾರ ಶಾಸಕ ಸತೀಶ್ ಸೈಲ್‌ ಪುತ್ರಿಗೆ ಮಿಸ್ ಇಂಡಿಯಾ ಕಿರೀಟ

Satish Sail daughter wins Miss India: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಮಿಸ್ ಇಂಡಿಯಾ ವಿಜೇತೆಯಾಗಿದ್ದಾರೆ. ಏಪ್ರಿಲ್ 18, 2026 ರಂದು ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ನಲ್ಲಿ ನಡೆದ 61 ನೇ ಮಿಸ್ ಇಂಡಿಯಾ ಆವೃತ್ತಿಯಲ್ಲಿ ಸಾಧ್ವಿ ಸತೀಶ್ ಸೈಲ್ ಅವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಮಣಿಪುರದಲ್ಲಿ ಶಂಕಿತ ಉಗ್ರರ ದಾಳಿ;  ಮಾಜಿ ಸೈನಿಕ  ಸೇರಿ ಇಬ್ಬರು ಬಲಿ

ಮಣಿಪುರದಲ್ಲಿ ಶಂಕಿತ ಉಗ್ರರ ದಾಳಿ; ಮಾಜಿ ಸೇನಾಧಿಕಾರಿ ಸೇರಿ ಇಬ್ಬರು ಬಲಿ

militant attack in Manipur: ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಶನಿವಾರ (ಏ.18) ನಡೆದ ಶಂಕಿತ ಉಗ್ರರ ದಾಳಿಯಲ್ಲಿ ಭಾರತೀಯ ಸೇನೆಯ ಮಾಜಿ ಯೋಧರೊಬ್ಬರು ಮೃತಪಟ್ಟಿದ್ದು, ಕನಿಷ್ಠ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಮಾಜಿ ಸೈನಿಕನನ್ನು ನಾಗಾ ರೆಜಿಮೆಂಟ್‌ನ ಮಾಜಿ ಸದಸ್ಯ ಎಸ್‌ಡಬ್ಲ್ಯೂ ಚಿನೋಶಾಂಗ್ ಎಂದು ಗುರುತಿಸಲಾಗಿದೆ.

ಈ 10 ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ

ಇವುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ

ದೇಶದಲ್ಲಿ ಕೆಲವೊಂದು ವಹಿವಾಟುಗಳಿಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಕಾರ್ಡ್ ಕಡ್ಡಾಯವಾಗಿದೆ. ಅದರಲ್ಲೂ ಮುಖ್ಯವಾಗಿ ಆದಾಯ ತೆರಿಗೆ, ಆಸ್ತಿ ಖರೀದಿ, ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ವಿವರಗಳನ್ನು ನೀಡಲೇಬೇಕಿದೆ. ಅಂತಹ ವಹಿವಾಟುಗಳು ಯಾವುದು ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

West Bengal Election ground report by Raghava Sharma Nidle: ಕೆಂಬಾವುಟದ ಜಾಗದಲ್ಲೀಗ ಕೇಸರಿ ಬಾವುಟ

ಪಶ್ಚಿಮಬಂಗಾಳದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯ

1967ರಲ್ಲಿ ನಕ್ಸಲ್ ದಂಗೆ ಎದುರಿಸಲು ಅಂದಿನ ಸರಕಾರ ಪೊಲೀಸ್ ಪಡೆಗಳನ್ನು ಸಜ್ಜುಗೊಳಿಸಲು ಪ್ರಾರಂಭಿಸಿತ್ತು. ಆಗ ಜಾರುಗಾಂವ್ ನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರನ್ನು ನಕ್ಸಲ್ ನಾಯಕರು ರಚಿಸಿದ್ದ ರೈತ ಸಮಿತಿ ಸದಸ್ಯರು ಹತ್ಯೆ ಮಾಡಿದ್ದರಿಂದ, ಅದಕ್ಕೆ ಪ್ರತೀಕಾರವಾಗಿ, ಪೊಲೀಸರು ಗುಂಡಿನ ದಾಳಿ ಮಾಡಿದ್ದರು. 1967ರ ಮೇ 24ರಂದು ಒಂಬತ್ತು ಮಹಿಳೆಯರೊಂದಿಗೆ ಹಸುಳೆಯೊಂದು ಮೃತಪಟ್ಟಿತು.

ಶಿವಪುರಿ ಅಪಘಾತ: ತಪ್ಪು ಮಾಡಿದವನಿಗೆ ಶಿಕ್ಷೆಯಾಗಲಿ ಅಂದ ಶಾಸಕ; ಚಿಕಿತ್ಸೆಗೂ ಹಣವಿಲ್ಲದೆ ಕಣ್ಣೀರಿಡುತ್ತಿದ್ದಾರೆ ಸಂತ್ರಸ್ತರು

ಶಿವಪುರಿ ಅಪಘಾತ: ಶಾಸಕ ಪುತ್ರನ ವಿರುದ್ಧ ಪ್ರಕರಣ ದಾಖಲು

Shivapuri Accident: ಮಧ್ಯಪ್ರದೇಶದ ಶಿವಪುರಿಯಲ್ಲಿ ಬಿಜೆಪಿ ಶಾಸಕ ಪ್ರೀತಮ್ ಲೋಧಿ ಅವರ ಪುತ್ರ ದಿನೇಶ್ ಲೋಧಿಗೆ ಸೇರಿದ ಥಾರ್‌ ಐವರಿಗೆ ಡಿಕ್ಕಿ ಹೊಡೆದ ಪ್ರಕರಣ ವಿವಾದಕ್ಕೆ ಕಾರಣವಾಗಿದೆ. ಗಾಯಾಳುಗಳು ಯಾವುದೇ ಸಹಾಯ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ. ಪ್ರಕರಣದ ವಿರುದ್ಧ ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಲೆನ್ಸ್‌ಕಾರ್ಟ್ ಬೆನ್ನಲ್ಲೇ ಏರ್ ಇಂಡಿಯಾದಿಂದಲೂ ʼಸಿಂದೂರʼ ವಿವಾದ: ಸಿಬ್ಬಂದಿಗೆ ಬಿಂದಿ ನಿಷೇಧ

ಏರ್ ಇಂಡಿಯಾ ಸಿಬ್ಬಂದಿಗೆ ಸಿಂದೂರ ನಿಷೇಧ: ಮತ್ತೊಂದು ವಿವಾದ

Viral News: ಲೆನ್ಸ್‌ಕಾರ್ಟ್ ಸಂಸ್ಥೆ ಉದ್ಯೋಗಿಗಳಿಗೆ ಡ್ರೆಸ್ ಕೋಡ್ ನಿಯಮ ಜಾರಿಗೆ ತಂದಿತ್ತು. ಅದರಂತೆ ಸಿಬ್ಬಂದಿ ಬಿಂದಿ, ತಿಲಕ ಇಟ್ಟುಕೊಳ್ಳಬಾರದೆಂದು ಹೇಳಿತ್ತು. ಈ ನಿಯಮದ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು‌. ಈ ಘಟನೆ ಬೆನ್ನಲ್ಲೇ ಇದೀಗ ಏರ್ ಇಂಡಿಯಾ ಕ್ಯಾಬಿನ್ ತನ್ನ ಸಿಬ್ಬಂದಿಗೆ ಹೊರಡಿಸಿರುವ ನಿಯಮ ಚರ್ಚೆಗೆ ಕಾರಣವಾಗಿದೆ.

ಭಾರತ ಸೇರಿ ಇತರ ರಾಷ್ಟ್ರಗಳಿಗೆ ರಷ್ಯಾದ ತೈಲ ಖರೀದಿಸಲು ವಿನಾಯಿತಿ ವಿಸ್ತರಿಸಿದ ಅಮೆರಿಕ

ರಷ್ಯಾದ ತೈಲ ಖರೀದಿಸಲು ವಿನಾಯಿತಿ ವಿಸ್ತರಿಸಿದ ಅಮೆರಿಕ

US extends oil waiver: ಇರಾನ್ ಯುದ್ಧದ ಮಧ್ಯೆ ಭಾರತ ಮತ್ತು ಇತರ ದೇಶಗಳು ರಷ್ಯಾದ ತೈಲವನ್ನು ಖರೀದಿಸಲು ಅಮೆರಿಕ ವಿನಾಯಿತಿ ವಿಸ್ತರಿಸಿದೆ. ಏಪ್ರಿಲ್‌ 17ರಿಂದ ಮೇ 16ರವರೆಗೆ ಹಡಗುಗಳಲ್ಲಿ ಲೋಡ್ ಮಾಡಲಾದ ರಷ್ಯಾದ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ.

ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ: ಭಾರತದಿಂದ ಸಮನ್ಸ್

ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲಿನ ದಾಳಿಗೆ ಖಂಡನೆ

ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊಂದಿದ್ದ ಎರಡು ವಾಣಿಜ್ಯ ಹಡಗುಗಳ ಮೇಲೆ ಇರಾನ್ ಪಡೆಗಳು ಗುಂಡಿನ ದಾಳಿ ನಡೆಸಿದ ಹಿನ್ನೆಲೆ, ಭಾರತ ಸರ್ಕಾರವು ಇರಾನ್ ರಾಯಭಾರಿಯನ್ನು ಕರೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹಡಗುಗಳಿಗೆ ದೊಡ್ಡ ಹಾನಿಯಾಗದಿದ್ದರೂ, ಈ ಘಟನೆ ಜಾಗತಿಕ ಸಮುದ್ರ ಭದ್ರತೆ ಮತ್ತು ರಾಜತಾಂತ್ರಿಕ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲು: ರಾಹುಲ್ ಗಾಂಧಿ ಮನೆಮುಂದೆ ಬಿಜೆಪಿ ನಾಯಕಿಯರಿಂದ ಪ್ರತಿಭಟನೆ

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕಿಯರಿಂದ ಪ್ರತಿಭಟನೆ

BJP women leaders protest: ಸಂಸದರಾದ ಹೇಮಾಮಾಲಿನಿ ಮತ್ತು ಬಾನ್ಸುರಿ ಸ್ವರಾಜ್ ಸೇರಿದಂತೆ ಹಲವು ಉನ್ನತ ಬಿಜೆಪಿ ನಾಯಕಿಯರು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮನೆಯತ್ತ ಬೆಂಬಲಿಗರ ಬೃಹತ್ ಗುಂಪನ್ನು ಕರೆದೊಯ್ದು ಪ್ರತಿಭಟನೆ ನಡೆಸಿದರು.

ನೋಯ್ಡಾ ಹಿಂಸಾಚಾರ: ತಮಿಳುನಾಡಿನ ಮಾಸ್ಟರ್ ಮೈಂಡ್ ಬಂಧನ

ನೋಯ್ಡಾ ಹಿಂಸಾಚಾರ ಪ್ರಮುಖ ಆರೋಪಿ ಬಂಧನ

ವೇತನ ಸಂಬಂಧಿಸಿ ನೋಯ್ಡಾದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಪ್ರಮುಖ ಮಾಸ್ಟರ್ ಮೈಂಡ್ ತಮಿಳುನಾಡಿನ ವ್ಯಕ್ತಿಯನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಶನಿವಾರ ಬಂಧಿಸಿದೆ. ಪ್ರತಿಭಟನೆ ಸಂದರ್ಭದಲ್ಲಿ ಆತ ನೋಯ್ಡಾದಲ್ಲಿ ಇದ್ದನು. ಪ್ರತಿಭಟನಾಕಾರರನ್ನು ಒಗ್ಗೂಡಿಸಲು ಕ್ಯೂಆರ್ ಕೋಡ್, ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದನು ಎಂದು ಆರೋಪಿಸಲಾಗಿದೆ.

ಮಹಿಳಾ ಮೀಸಲು ವಿರೋಧಿಸಿ ಕಾಂಗ್ರೆಸ್ ಅಪರಾಧಿ ಸ್ಥಾನದಲ್ಲಿ ನಿಂತಿದೆ: ಜೋಶಿ

ಮಹಿಳಾ ಮೀಸಲು ವಿರೋಧಿಸಿ ಕಾಂಗ್ರೆಸ್ ಅಪರಾಧಿ ಸ್ಥಾನದಲ್ಲಿ ನಿಂತಿದೆ: ಜೋಶಿ

Pralhad Joshi: ಕಾಂಗ್ರೆಸ್ ಪಕ್ಷ ಶೇ.33ರಷ್ಟು ಮಹಿಳಾ ಮೀಸಲಾತಿ ಬೆಂಬಲಿಸದೇ ಇರುವುದು "ಮಹಿಳಾ ವಿರೋಧಿ" ಎಂಬುದನ್ನು ರುಜುವಾತುಪಡಿಸಿದೆ. ದೇಶದ ಒಳಿತಿಗೆ ಯಾವತ್ತೂ ಹೀಗೆ ವಿರೋಧವಾಗೇ ನಡೆದುಕೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲು; ದೇಶದ ಕ್ಷಮೆ ಕೋರಿದ ಪ್ರಧಾನಿ ನರೇಂದ್ರ ಮೋದಿ

ದೇಶದ ಕ್ಷಮೆ ಕೋರಿದ ಪ್ರಧಾನಿ ನರೇಂದ್ರ ಮೋದಿ

Women's Quota Bill: ಕೇಂದ್ರ ಸರ್ಕಾರದ ಮಹತ್ವಾಂಕಾಕ್ಷಿ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲು ಕಲ್ಪಿಸುವ 131ನೇ ತಿದ್ದುಪಡಿ ವಿಧೇಯಕ ಅಂಗೀಕಾರಕ್ಕೆ ಲೋಕಸಭೆಯ ಮೂರನೇ ಎರಡರಷ್ಟು ಸಂಸದರ ಬೆಂಲ ಅಗತ್ಯವಿತ್ತು. ಆದರೆ 54 ಮತಗಳ ಕೊರತೆಯಿಂದ ಮಸೂದೆಗೆ ಸೋಲಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರನ್ನುದ್ದೇಶಿಸಿ ಪ್ರದಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.

Loading...