ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶ

ಬಿಹಾರದಲ್ಲೊಬ್ಬ ಬಾಹುಬಲಿ; ಗದ್ದೆಯಲ್ಲಿ ಸಿಕ್ಕ ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಪೊಲೀಸ್‌ ಠಾಣೆಗೆ ಬಂದ ಯುವಕ: ವಿಡಿಯೊ ವೈರಲ್‌

ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಪೊಲೀಸ್‌ ಠಾಣೆಗೆ ಬಂದ ಯುವಕ

Viral video: ಬಿಹಾರದ ಸುಪೌಲ್ ಜಿಲ್ಲೆಯ ಹೊಲದಲ್ಲಿ ಸಿಕ್ಕ ಬೃಹತ್ ಮೊಸಳೆಯನ್ನು ಗ್ರಾಮಸ್ಥರು ಸುರಕ್ಷಿತವಾಗಿ ಹಿಡಿದ ಬಳಿಕ, ಯುವಕನೊಬ್ಬ ಅದನ್ನು ಹೆಗಲ ಮೇಲೆ ಹೊತ್ತು ಪೊಲೀಸ್ ಠಾಣೆಗೆ ತಂದ ಘಟನೆ ವೈರಲ್ ಆಗಿದೆ. ಬಳಿಕ ಅರಣ್ಯ ಇಲಾಖೆ ಮೊಸಳೆಯನ್ನು ವಶಕ್ಕೆ ಪಡೆದು ಆರೋಗ್ಯ ತಪಾಸಣೆ ನಡೆಸಿ ಕೋಸಿ ನದಿಗೆ ಸುರಕ್ಷಿತವಾಗಿ ಬಿಡುಗಡೆ ಮಾಡಿದೆ. ವನ್ಯಜೀವಿಗಳು ಕಂಡುಬಂದರೆ ಸಾರ್ವಜನಿಕರು ಸ್ವತಃ ಹಿಡಿಯಲು ಮುಂದಾಗದೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸ್ವಾಮಿ ವಿವೇಕಾನಂದರ ತತ್ತ್ವ ಉಲ್ಲೇಖಿಸಿ ದೇಶದ ಯುವ ಜನತೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ವಿವರಿಸಿದ ಪ್ರಧಾನಿ ನರೇಂದ್ರ ಮೋದಿ

ಮೈಸೂರಿನಲ್ಲಿ ಯುವಶಕ್ತಿ, ಶಿಕ್ಷಣಕ್ಕೆ ಪ್ರಧಾನಿ ಮೋದಿ ಒತ್ತು

Narendra modi: ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ 'ವಿವೇಕ ಸ್ಮಾರಕ' ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಯುವಜನತೆ, ಶಿಕ್ಷಣ ಮತ್ತು ಸಮಾನ ಅವಕಾಶಗಳ ಮಹತ್ವವನ್ನು ಒತ್ತಿ ಹೇಳಿದರು. ಮಾತೃಭಾಷೆಯಲ್ಲಿನ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿ, ಮಹಿಳೆಯರಿಗೆ ಎನ್‌ಡಿಎ ಪ್ರವೇಶ, ಸ್ಟಾರ್ಟ್‌ಅಪ್‌ಗಳು ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಕರ ಸಾಧನೆಗಳನ್ನು ಶ್ಲಾಘಿಸಿ, ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಸಕ್ರಿಯ ಭಾಗವಹಿಸುವಿಕೆಗೆ ಕರೆ ನೀಡಿದರು.

ʼʼ12 ವರ್ಷವಾದರೂ ಸರ್ವಾಧಿಕಾರಿಯಾಗಲು ಮೋದಿ ವಿಫಲʼʼ: ಪ್ರಧಾನಿ ವಿರುದ್ಧ ತಿರುಗಿ ಬಿದ್ರಾ ಶೆಹಜಾದ್ ಪೂನಾವಾಲಾ?

ಮೋದಿ ಸರ್ವಾಧಿಕಾರಿಯಾಗಲು ವಿಫಲ: ಪೂನಾವಾಲಾ ವ್ಯಂಗ್ಯ

Shehzad Poonawalla: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಟೀಕಿಸುವ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ, "12 ವರ್ಷವಾದರೂ ಮೋದಿ ಸರ್ವಾಧಿಕಾರಿಯಾಗಲು ವಿಫಲರಾಗಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ. ನೀಟ್ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳನ್ನು ಕ್ಷಮಿಸುವಂತೆ ಮೋದಿ ಮಾಡಿದ ಮನವಿಯನ್ನೂ ಅವರು ಉಲ್ಲೇಖಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಹೈಬ್ರಿಡ್‌ ಉಗ್ರರು ಸಕ್ರಿಯ; ದಾಳಿಯ ನಂತರ ಸಾಮಾನ್ಯ ಜನರ ನಡುವೆ ಬೆರೆತು ತಪ್ಪಿಸಿಕೊಳ್ಳುವ ತಂತ್ರ

ಇಬ್ಬರು ವಲಸೆ ಕಾರ್ಮಿಕರ ಹತ್ಯೆ, ಲತೀಫ್ ಭಟ್ ಮೇಲೆ ಶಂಕೆ

Latif Bhat: ಜಮ್ಮು-ಕಾಶ್ಮೀರದ ಕುಲ್ಗಾಂನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ದಾಳಿಯ ಹಿಂದೆ ಲಷ್ಕರ್-ಎ-ತೊಯ್ಬಾ ಕಮಾಂಡರ್ ಲತೀಫ್ ಭಟ್ ಹಾಗೂ ಆತನ ಸಹಚರರ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ.

ಪಾಕಿಸ್ತಾನದಲ್ಲಿ ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ದುರ್ಮರಣ; ಸಾವಿಗೆ ಕಾರಣವಾಗಿದ್ದೇನು?

ಪಾಕಿಸ್ತಾನದಲ್ಲಿ ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ಸಾವು

Mountaineer Nirmal Purja Dies: ಖ್ಯಾತ ನೇಪಾಳಿ-ಬ್ರಿಟಿಷ್ ಪರ್ವತಾರೋಹಿ ನಿರ್ಮಲ್ ಪುರ್ಜಾ ಪಾಕಿಸ್ತಾನದ ಬ್ರಾಡ್ ಪೀಕ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ಸಹ-ಮಾಲೀಕರಾಗಿದ್ದ ಸಾಹಸಯಾತ್ರೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಪರ್ವತಾರೋಹಣ ದಂಡಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ, ಅವರಿದ್ದ ತಂಡದ ಮೇಲೆ ಹಿಮಕುಸಿತ ಸಂಭವಿಸಿದೆ.

2 ಗಂಟೆಗಳಲ್ಲಿ 250 ಕಿಲೋ ಮೀಟರ್... ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಮೊದಲ ಬಾರಿಗೆ ದಾನಿಯ ಹೃದಯ ಸಾಗಾಟ: ರೈಲ್ವೆಯ ಇತಿಹಾಸದಲ್ಲಿ ಸಾಧನೆ

ವಂದೇ ಭಾರತ್‌ನಲ್ಲಿ ಮೊದಲ ಬಾರಿಗೆ ಜೀವಂತ ಹೃದಯ ಸಾಗಾಟ

Vande Bharat Express: ಭಾರತೀಯ ರೈಲ್ವೆ ಮೊದಲ ಬಾರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಗುಜರಾತ್‌ನಿಂದ ಸೂರತ್‌ನಿಂದ ಅಹಮದಾಬಾದ್‌ಗೆ ಜೀವಂತ ದಾನಿಯ ಹೃದಯವನ್ನು ಯಶಸ್ವಿಯಾಗಿ ಸಾಗಿಸಿತು. ಹಸಿರು ಮಾರ್ಗದ ನೆರವಿನಿಂದ ಹೃದಯವನ್ನು ನಿಗದಿತ ಸಮಯಕ್ಕೆ ಆಸ್ಪತ್ರೆಗೆ ತಲುಪಿಸಿ, ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯ ಜೀವ ಉಳಿಸಲಾಯಿತು.

ಅಜಿತ್ ದೋವಲ್‌ ಮುಡಿಗೆ ಮತ್ತೊಂದು ಗರಿ; ಲೋಕಮಾನ್ಯ ತಿಲಕ್ ಪ್ರಶಸ್ತಿ ಪ್ರದಾನ

ಅಜಿತ್ ದೋವಲ್‌ಗೆ ಲೋಕಮಾನ್ಯ ತಿಲಕ್ ಪ್ರಶಸ್ತಿ ಪ್ರದಾನ

Ajit Doval Conferred Lokmanya Tilak Award: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಮಹಾರಾಷ್ಟ್ರದ ಪುಣೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಪ್ರತಿಷ್ಠಿತ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ 2026 ಪ್ರದಾನ ಮಾಡಿದರು. ಗೃಹ ಸಚಿವರು ತಮ್ಮ ಭಾಷಣವನ್ನು ತಿಲಕರಿಗೆ ಗೌರವ ಸಲ್ಲಿಸುವ ಮೂಲಕ ಪ್ರಾರಂಭಿಸಿದರು.

ಎಥೆನಾಲ್ ಮಿಶ್ರಣ ಮಾಡದಿದ್ದರೆ ಇರಾನ್‌ ಯುದ್ಧದ ವೇಳೆ ದೇಶದಲ್ಲಿ ಪೆಟ್ರೋಲ್ ಬೆಲೆ 125 ರುಪಾಯಿ ದಾಟುತ್ತಿತ್ತು ಎಂದ ಕೇಂದ್ರ ಸರ್ಕಾರ

E20ಯಿಂದ ದೇಶದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗಿದೆ: ಕೇಂದ್ರ ಸರ್ಕಾರ

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಬಿಕ್ಕಟ್ಟಿನ ನಡುವೆ ದೇಶದಲ್ಲಿ ಪೆಟ್ರೋಲ್ ಗೆ ಎಥೆನಾಲ್ ಮಿಶ್ರಣವನ್ನು ಕೇಂದ್ರ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಈ ನಡುವೆ ಇದು ವಾಹನಗಳ ಎಂಜಿನ್ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಈಗ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡಿದ್ದು, ಎಥೆನಾಲ್ ಮಿಶ್ರಣ ಮಾಡದಿದ್ದರೆ ದೇಶದಲ್ಲಿ ಪೆಟ್ರೋಲ್ ಬೆಲೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿತ್ತು. ಇದರಿಂದ ಜನಸಾಮಾನ್ಯರಿಗೆ ಕಷ್ಟವಾಗುತ್ತಿತ್ತು ಎಂದು ಹೇಳಿದೆ.

ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಬಂದ್; ಅಮರನಾಥ ಯಾತ್ರೆ ಸ್ಥಗಿತ

ಭಾರಿ ಮಳೆ: ಅಮರನಾಥ ಯಾತ್ರೆ ಸ್ಥಗಿತ

Amarnath Yatra Suspended in Jammu: ನಿರಂತರ ಮಳೆಯಿಂದಾಗಿ ಜಮ್ಮು ಕಾಶ್ಮೀರದ ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಎರಡನೇ ದಿನವೂ ಮುಚ್ಚಲ್ಪಟ್ಟಿದೆ. ಇದರಿಂದ ಶನಿವಾರ (ಆಗಸ್ಟ್‌ 1) ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಜುಲೈ 3ರಂದು ತೀರ್ಥಯಾತ್ರೆ ಪ್ರಾರಂಭವಾದಾಗಿನಿಂದ ಸುಮಾರು 4.5 ಲಕ್ಷ ಭಕ್ತರು ಈ ಗುಹಾ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಕೇರಳದಾದ್ಯಂತ ಭಾರಿ ಮಳೆ:  ಭೂಕುಸಿತದಿಂದ ಮೂವರ ಸಾವು, ಹಲವು ಮನೆಗಳು ಜಲಾವೃತ

ಕೇರಳದಾದ್ಯಂತ ಭಾರಿ ಮಳೆ: ಮೂವರು ಸಾವು

ಕೇರಳದಾದ್ಯಂತ ಭಾರಿ ಮಳೆಯಿಂದ ಮೂವರು ಸಾವನ್ನಪ್ಪಿದ್ದಾರೆ. ಹಲವಾರು ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ರಸ್ತೆಗಳು ಮುಚ್ಚಿ ಹೋಗಿವೆ. ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿವೆ. ರಸ್ತೆ ಸಂಪರ್ಕ ಕಡಿತಗೊಂಡಿದೆ. ಪೀಡಿತ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ರಸ್ತೆ, ಹಾಸ್ಟೆಲ್ ಬಳಿಕ ಇದೀಗ ಬಾತ್‌ರೂಂಗೂ ನುಗ್ಗಿದ ಮೊಸಳೆ; ರಕ್ಷಣಾ ಕಾರ್ಯಾಚರಣೆಯ ವಿಡಿಯೊ ವೈರಲ್‌

ಬಾತ್‌ರೂಂನಲ್ಲಿ 7 ಅಡಿ ಉದ್ದದ ಮೊಸಳೆ ಪತ್ತೆ: ಇಲ್ಲಿದೆ ವಿಡಿಯೊ

Crocodile Found in a house: ಮನೆಯೊಂದರ ಸ್ನಾನಗೃಹದಲ್ಲಿ ಏಳು ಅಡಿ ಉದ್ದದ ಮೊಸಳೆ ಪತ್ತೆಯಾದ ಘಟನೆ ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ನಡೆದಿದೆ. ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ಮೊಸಳೆ ಬಾಲಾಭಾಯಿ ಚೌಹಾಣ್ ಎಂಬುವವರ ಮನೆಯ ಬಾತ್‌ರೂಂಗೆ ಪ್ರವೇಶಿಸಿತ್ತು. ಕೂಡಲೇ ಸ್ಥಳಕ್ಕೆ ತಲುಪಿದ ರಕ್ಷಣಾ ತಂಡವು ಅದನ್ನು ರಕ್ಷಿಸಿದೆ.

ಅಸ್ಸಾಂನಲ್ಲಿ ಮುಂದವರಿದ ಮಳೆ ಅವಾಂತರ: ಭೀಕರ ಪ್ರವಾಹಕ್ಕೆ ಕೊಚ್ಚಿಹೋದ ರೈಲ್ವೆ ಹಳಿಗಳು; ಜನಜೀವನ ಅಸ್ತವ್ಯಸ್ತ

ಅಸ್ಸಾಂನಲ್ಲಿ ಭೀಕರ ಪ್ರವಾಹ: ಕೊಚ್ಚಿಹೋದ ರೈಲ್ವೆ ಹಳಿಗಳು

Assam Floods: ಅಸ್ಸಾಂನ ಪೂರ್ವ ಜಿಲ್ಲೆಗಳಾದ ಶಿವಸಾಗರ್, ಚರೈದೇವ್ ಮತ್ತು ಜೋರ್ಹಾಟ್‌ನಲ್ಲಿ ಭಾರಿ ಅವಾಂತರ ಸೃಷ್ಟಿಸಿರುವ ಪ್ರವಾಹದಿಂದ ಭಾರತೀಯ ರೈಲ್ವೆಯ ಮೂಲಸೌಕರ್ಯ ತೀವ್ರವಾಗಿ ಹಾನಿಗೊಳಗಾಗಿದೆ. ಚಾರೈಡಿಯೊ ಜಿಲ್ಲೆಯ ಸಿಮುಲ್ಗುರಿ ಜಂಕ್ಷನ್ ಮತ್ತು ಲಕ್ವಾ ನಿಲ್ದಾಣದ ನಡುವಿನ ರೈಲ್ವೆ ಹಳಿಯಲ್ಲಿ ದುರಸ್ತಿ ಕಾರ್ಯ ವೇಗವಾಗಿ ನಡೆಯುತ್ತಿದೆ.

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದ ಮೇಲೆ ಎರಡನೇ ಬಾರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆ; ಗೃಹ ಬಳಕೆಯ ಸಿಲಿಂಡರ್ ಬೆಲೆ ಎಷ್ಟಿದೆ?  ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆ

ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ಆರಂಭವಾದ ಬಳಿಕ ಎರಡನೇ ಬಾರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 192 ರೂ. ಇಳಿಕೆಯಾಗಿದೆ. ಇದರಿಂದ ವಾಣಿಜ್ಯ ಸಿಲಿಂಡರ್ ದರ 2,930 ರೂ.ಗಳಿಂದ 2,738 ರೂ. ಗೆ ಇಳಿಕೆಯಾಗಿದೆ. ಇದರೊಂದಿಗೆ ವಾಯುಯಾನ ಟರ್ಬೈನ್ ಇಂಧನ ಬೆಲೆ ಏರಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಗಳು ಸ್ಥಿರವಾಗಿವೆ.

Gold Price Today On 1st August 2026: ವೀಕೆಂಡ್‌ ಶಾಪಿಂಗ್‌ ಪ್ರಿಯರಿಗೆ ಸುದಿನ; ಚಿನ್ನದ ದರದಲ್ಲಿ ಭಾರಿ ಇಳಿಕೆ

ಡಬಲ್‌ ಧಮಾಕ; ಕಮರ್ಷಿಯಲ್‌ ಎಲ್‌ಪಿಜಿ ಜತೆಗೆ ಚಿನ್ನದ ದರದಲ್ಲೂ ಇಳಿಕೆ

Gold Rate Today: ಮಾಸಾಂಭದಲ್ಲೇ ಗ್ರಾಹಕರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಚಿನ್ನದ ದರದಲ್ಲಿ ಶನಿವಾರ ಬಾರಿ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 35 ರುಪಾಯಿ ಕಡಿಮೆಯಾಗಿ 13,220 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 38 ರುಪಾಯಿ ಅಗ್ಗವಾಗಿ 14,422 ರುಪಾಯಿಗೆ ಬಂದಿದೆ.

ಝೆನ್ ಜಿ ಬಗ್ಗೆ ತಿಳಿದುಕೊಳ್ಳಲು ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾದ ಬಿಜೆಪಿ

ಸಿಜೆಪಿ ಪ್ರತಿಭಟಣೆ ಬಳಿಕ ಬಿಜೆಪಿಯಿಂದ ಮಹತ್ವದ ನಿರ್ಧಾರ

ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ಎನ್ ಡಿಎ ಸರ್ಕಾರಕ್ಕೆ ಬಹುದೊಡ್ಡ ಹೊಡೆತವನ್ನೇ ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗೆ ಕ್ರಮಗಳನ್ನು ಕೈಗೊಂಡ ಬೆನ್ನಲ್ಲೇ ಝೆನ್ ಜಿ ಬಗ್ಗೆ ತಿಳಿದುಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಇದಕ್ಕಾಗಿ ಸಚಿವ ಸಂಪುಟ, ಮುಖ್ಯಸ್ಥರ ತಂಡದಲ್ಲಿ ಯುವ ನಾಯಕರಿಗೆ ಮಣೆ ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ನಾನು ಮಾಡಿರುವುದು ಕ್ಷಮೆಗೆ ಅರ್ಹವಲ್ಲ; ಆದರೂ ನನ್ನನ್ನು ಕ್ಷಮಿಸಿಬಿಡಿ: ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಿದ ಬಾಲಕಿ

ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಿದ ಬಾಲಕಿ ಮಾಡಿರುವ ತಪ್ಪೇನು?

ನನಗೆ ಕೇವಲ 15 ವರ್ಷ. ನಾನು ಮಾಡಿರುವುದು ಕ್ಷಮೆಗೆ ಅರ್ಹವಲ್ಲ, ಆದರೂ ನನ್ನನ್ನು ಕ್ಷಮಿಸಿ ಎಂದು ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಕ್ಷಮೆ ಕೇಳಿದ್ದಾಳೆ. ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆಯಲ್ಲಿ ಬಾಲಕಿ ಪ್ರಧಾನಿ ಮೋದಿಯನ್ನು ನಿಂದಿಸಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಬಳಿಕ ಆಕೆ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಪ್ರಧಾನಿಯವರ ಬಳಿ ಕ್ಷಮೆ ಯಾಚಿಸಿದ್ದಾಳೆ.

ʻತನ್ನನ್ನು ನಿಂದಿಸಿದ ಯುವಕರನ್ನು ಕ್ಷಮಿಸಿದ್ದೇನೆʼ: ತಡರಾತ್ರಿ ವಿಡಿಯೊ ಹಂಚಿಕೊಂಡ ಪ್ರಧಾನಿ ಮೋದಿ!

ʻನನ್ನನ್ನು ನಿಂದಿಸಿದ ಯುವಕರನ್ನು ಕ್ಷಮಿಸಿದ್ದೇನೆʼ: ನರೇಂದ್ರ ಮೋದಿ!

ಜಂತರ್ ಮಂತರ್‌ನಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ತಮ್ಮ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ ಯುವಕರನ್ನು ಕ್ಷಮಿಸಲು ಬಯಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರನ್ನು ಶಿಕ್ಷಿಸುವ ಬದಲು ಸಮಾಜವು ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ಕರೆ ನೀಡಿದ ಪ್ರಧಾನಿ ಮೋದಿ, ಯುವಕರು ಸರಿದಾರಿಗೆ ಬರಲು ಪ್ರೋತ್ಸಾಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ದಾಳಿ: ವಲಸೆ ಕಾರ್ಮಿಕನ ಹತ್ಯೆ, ಮರ್ತೋರ್ವ ಗಾಯ!

ಕುಲ್ಗಾಂನಲ್ಲಿ ಉಗ್ರರ ದಾಳಿ: ವಲಸೆ ಕಾರ್ಮಿಕನ ಹತ್ಯೆ, ಮತ್ತೋರ್ವ ಗಾಯ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ವಲಸೆ ಕಾರ್ಮಿಕ ಮೃತಪಟ್ಟಿದ್ದು, ಮತೋರ್ವ ಗಾಯಗೊಂಡಿದ್ದಾರೆ. ಶುಕ್ರವಾರ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಕೆಲ್ಲಂ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ʼಪಿಎಂ ಸೂರ್ಯ ಸರೋವರ' ಯೋಜನೆಗೆ ಕೇಂದ್ರ ಅಸ್ತು: ಬಳಕೆಯಾಗದ ಜಲಮೂಲಗಳಲ್ಲಿ 5000 ಮೆ.ವ್ಯಾ ತೇಲುವ ಸೌರ PV ಅಳವಡಿಕೆ

ʼಪಿಎಂ ಸೂರ್ಯ ಸರೋವರ' ಯೋಜನೆಗೆ ಕೇಂದ್ರ ಅಸ್ತು

Pralhad Joshi: ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆ ದೇಶದಲ್ಲಿ ಜಲಾಶಯಗಳು ಮತ್ತು ಜಲಮೂಲಗಳನ್ನೂ ಬಳಸಿಕೊಂಡು ಸೌರ ಶಕ್ತಿ ಉತ್ಪಾದಿಸುವ ಒಂದು ಮಹತ್ತರ ಯೋಜನೆಯಾಗಿದ್ದು, ಬಳಕೆಯಾಗದ ಜಲಮೂಲಗಳ ಸದ್ಬಳಕೆಗೆ ಉತ್ತಮ ಅವಕಾಶವಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

ದೇಣಿಗೆ ಕಳ್ಳತನ  ಬಳಿಕ ಕಣ್ಗಾವಲು ಬಿಗಿಗೊಳಿಸಿದ ಅಯೋಧ್ಯೆ ರಾಮ ಮಂದಿರ ಟ್ರಸ್ಟ್

ಕಣ್ಗಾವಲು ಬಿಗಿಗೊಳಿಸಿದ ಅಯೋಧ್ಯೆ ರಾಮ ಮಂದಿರ ಟ್ರಸ್ಟ್

Ayodhya Ram Temple Trust: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ರಾಮ ದೇಗುಲದಲ್ಲಿ ದೇಣಿಗೆಗಳ ಮೇಲೆ ಕಣ್ಗಾವಲು ಬಿಗಿಗೊಳಿಸಿದ್ದು, ಸಂಗ್ರಹ ಮತ್ತು ಎಣಿಕೆಯ ಪ್ರತಿಯೊಂದು ಹಂತವನ್ನು ಈಗ ವಿಡಿಯೋಗ್ರಾಫ್ ಮಾಡಲಾಗುತ್ತಿದೆ. ಜುಲೈ 25 ರಿಂದ ಹೊಸ ವ್ಯವಸ್ಥೆ ಜಾರಿಯಲ್ಲಿದೆ ಎಂದು ಟ್ರಸ್ಟಿ ಮಹಂತ್ ದಿನೇಂದ್ರ ದಾಸ್ ತಿಳಿಸಿದ್ದಾರೆ.

ನಾಳೆಯಿಂದ ಕೇಜ್ರಿವಾಲ್‌ ನೇತೃತ್ವದಲ್ಲಿ  E20 ಚಳವಳಿ; ತೆಹಸೀನ್ ಪೂನಾವಾಲಾ ಉಪವಾಸ ಸತ್ಯಾಗ್ರಹ

ನಾಳೆಯಿಂದ ಕೇಜ್ರಿವಾಲ್‌ ನೇತೃತ್ವದಲ್ಲಿ E20 ಚಳವಳಿ

ದೇಶಾದ್ಯಂತ ಸಂಚಲನ ಮೂಡಿಸಿದ್ದ ವಿದ್ಯಾರ್ಥಿಗಳ ನೀಟ್‌ ಪ್ರತಿಭಟನೆ ಮುಗಿದ ಬೆನ್ನಲ್ಲೇ ಆಮ್‌ ಆದ್ಮಿ ಪಕ್ಷ ಮತ್ತೊಂದು ಪ್ರತಿಭಟನೆಗೆ ಸಜ್ಜಾಗಿದೆ. ಕೇಂದ್ರದ E20 (20% ಎಥೆನಾಲ್ ಮಿಶ್ರಿತ ಪೆಟ್ರೋಲ್) ಕಾರ್ಯಕ್ರಮದ ವಿರುದ್ಧ ಆಮ್‌ ಆದ್ಮಿಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸುತ್ತಿದ್ದಾರೆ.

ಕೇಸರಿ ಬಟ್ಟೆ ಧರಿಸಿ ರಾಮಮಂದಿರ ದೇಣಿಗೆ ಕಳ್ಳತನದ ದೃಶ್ಯವನ್ನು ಮರುಸೃಷ್ಟಿಸಿದ ಸಂಸದ ಪಪ್ಪು ಯಾದವ್: ರಾಹುಲ್ ಗಾಂಧಿ ಸಾಥ್

ದೇಣಿಗೆ ಕಳ್ಳತನದ ದೃಶ್ಯವನ್ನು ಮರುಸೃಷ್ಟಿಸಿದ ಸಂಸದ ಪಪ್ಪು ಯಾದವ್

Recreates Ram Temple Donation Theft Scene: ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷೇತರ ಸಂಸದ ಪಪ್ಪು ಯಾದವ್ ಅವರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಸಾಂಕೇತಿಕ ಪ್ರದರ್ಶನವು ಬೀದಿ ನಾಟಕದಂತೆ ನಡೆಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಸಂಸದರು ದೇಣಿಗೆ ಪೆಟ್ಟಿಗೆಗಳಿಗೆ ಹಣ ಹಾಕಿದರು.

ಎಲ್‌ಒಸಿ ಬಳಿ ಪಾಕಿಸ್ತಾನದ ಸ್ಪೈ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ; ಮೆಮೊರಿ ಕಾರ್ಡ್ ವಶಕ್ಕೆ

ಎಲ್‌ಒಸಿ ಬಳಿ ಪಾಕಿಸ್ತಾನದ ಸ್ಪೈ ಡ್ರೋನ್ ಹೊಡೆದುರುಳಿಸಿದ ಸೇನೆ

Army Shoots Down Pakistani Spy Drone: ಜಮ್ಮುವಿನ ಖೌರ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆ (LoC) ಬಳಿಯ ಪ್ರಮುಖ ಸೇನಾ ನೆಲೆಗಳ ಸಮೀಪ ಅಪಾಯಕಾರಿಯಾಗಿ ಹಾರಾಡುತ್ತಿದ್ದ ಪಾಕಿಸ್ತಾನದ ಕಣ್ಗಾವಲು ಡ್ರೋನ್‌ನ್ನು ಪತ್ತೆಹಚ್ಚಿದ ಬಳಿಕ ಭಾರತೀಯ ಸೇನೆ ಹೊಡೆದುರುಳಿಸಿದೆ. ಡ್ರೋನ್‌ನ ಒಳಗಿನಿಂದ 64 GB ಸಾಮರ್ಥ್ಯದ ಲೆಕ್ಸರ್ ಮೆಮೊರಿ ಕಾರ್ಡ್ ಅನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.

"ನಮ್ಮ ಮಗಳಿಂದ ತಪ್ಪಾಗಿದೆ ಪ್ಲೀಸ್‌ ಕ್ಷಮಿಸಿ"; ಪ್ರಧಾನಿಯನ್ನು ನಿಂದಿಸಿದ್ದ ಯುವತಿ ತಾಯಿಯಿಂದ ಕ್ಷಮೆಯಾಚನೆ

ಪ್ರಧಾನಿಯನ್ನು ನಿಂದಿಸಿದ್ದ ಯುವತಿಯ ತಾಯಿಯಿಂದ ಕ್ಷಮೆಯಾಚನೆ

NEET Protest: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ಆರೋಪದ ವಿವಾದದ ನಡುವೆಯೇ, ರುಚಿಕಾ ಸಿಂಗ್ ಅವರ ತಾಯಿ ಶಾಲಿನಿ, ಪ್ರಧಾನಿ ಮೋದಿಯವರಲ್ಲಿ ಕ್ಷಮೆಯಾಚಿಸಿದ್ದಾರೆ.

Loading...