#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ
ರಾಷ್ಟ್ರೀಯ
Viral Video: ಕಾರಿಗೆ ಒಂದು ರೂಪಾಯಿ ನಾಣ್ಯದ ಸಿಂಗಾರ- ಯುವಕನ ಕ್ರಿಯೆಟಿವಿಟಿಗೆ ನೆಟ್ಟಿಗರು ಫಿದಾ..!

ನಾಣ್ಯಗಳಿಂದ ಕಾರನ್ನು ಸಿಂಗರಿಸಿದ ಯುವಕ! ಇಲ್ಲಿದೆ ವೈರಲ್ ವಿಡಿಯೊ!

ರಾಜಾಸ್ಥಾನದ ಯುವಕ ಮಾರುತಿ ಡಿಸೈನರ್ ಕಾರಿಗೆ ಹೊರಭಾಗದಲ್ಲಿ ಈ ನಾಣ್ಯಗಳನ್ನು ಹೊದಿಕೆಗಳಂತೆ ಅಲಂಕರಿಸಿದ್ದು ಕಾರಿನ ಮುಂಭಾಗದಿಂದ ಹಿಂಭಾಗದವರೆಗೂ ಒಂದು ರೂಪಾಯಿ ನಾಣ್ಯವನ್ನು ಅತ್ಯಂತ ಕ್ರಮಬದ್ಧವಾಗಿ ಜೋಡಿಸಿ ಅಲಂಕರಿಸಿರುವುದನ್ನು ‌ವಿಡಿಯೊದಲ್ಲಿ ನೋಡಬಹುದು. ಈ ಮೂಲಕ ಒಂದು ರೂಪಾಯಿ ನಾಣ್ಯದ ಕಾರು ಎಂದೇ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹೆಚ್ಚು ವೈರಲ್ ಆಗಿದೆ.

Tahawwur Rana: 26/11 ಮುಂಬೈ ದಾಳಿ ರೂವಾರಿ ತಹವ್ವುರ್ ರಾಣಾ ಹಸ್ತಾಂತರಕ್ಕೆ ಟ್ರಂಪ್‌ ಅನುಮೋದನೆ

ಮುಂಬೈ ದಾಳಿ ರೂವಾರಿ ತಹವ್ವುರ್ ರಾಣಾ ಹಸ್ತಾಂತರಕ್ಕೆ ಟ್ರಂಪ್‌ ಅಸ್ತು

2008ರ 26/11 ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಶಿಕ್ಷೆಗೊಳಗಾಗಿರುವ ತಹಾವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿತ್ತು. ಇದೀಗ ಪ್ರಧಾನಿ ಮೋದಿ ಅಮೆರಿಕ ಭೇಟಿ ವೇಳೆ ಟ್ರಂಪ್‌ ಈ ಮಹತ್ವದ ಘೋಷಣೆ ಹೊರಡಿಸಿದ್ದಾರೆ. ಆಮೂಲಕ ರಾಣಾನನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲಾಗುವುದು.

MahaKumbh 2025: ಮಹಾಕುಂಭದಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ಅಂಬಾನಿ ಕುಟುಂಬದ ಸೊಸೆ ಹೇಳಿದ್ದೆನು?

ಅಂಬಾನಿ ಕುಟುಂಬದ ನವ ದಂಪತಿಯಿಂದ ಪುಣ್ಯ ಸ್ನಾನ

ಬ್ಯುಸಿನೆಸ್ ಟೈಕೂನ್ ಮುಖೇಶ್ ಅಂಬಾನಿ ಅವರ ಕುಟುಂಬ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಕೈಗೊಂಡಿದೆ. ಈ ಸಂದರ್ಭದಲ್ಲಿ ನವ ವಿವಾಹಿತ ಜೋಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪುಣ್ಯಸ್ನಾನದ ಬಳಿಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ...

Valentine’s Day Saree Fashion 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಯುವತಿಯರನ್ನು ಸೆಳೆದ ವೈವಿಧ್ಯಮಯ ಸೀರೆಗಳಿವು!

ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಯುವತಿಯರನ್ನು ಸೆಳೆದ ವೈವಿಧ್ಯಮಯ ಸೀರೆಗಳಿವು!

Valentine’s Day Saree Fashion 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ನಾನಾ ಬಗೆಯ ಟ್ರೆಂಡಿ ಸೀರೆಗಳು ಯುವತಿಯರನ್ನು ಸೆಳೆದಿವೆ. ಈ ಬಾರಿ ಸಾದಾ ರೆಡ್ ಸೀರೆಗಳು ಮಾತ್ರವಲ್ಲ, ಡಿಸೈನರ್ ಸೀರೆಗಳು ಮಾನಿನಿಯರನ್ನು ಆಕರ್ಷಿಸತೊಡಗಿವೆ. ಯಾವ್ಯಾವ ಬಗೆಯವು ಹೆಚ್ಚು ಟ್ರೆಂಡಿಯಾಗಿವೆ? ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಸೀರೆ ಸ್ಟೈಲಿಸ್ಟ್ ಚಶ್ಮಿ ವಿವರಿಸಿದ್ದಾರೆ.

Pulwama Attack: ಪುಲ್ವಾಮಾ ದಾಳಿಗೆ 6 ವರ್ಷ: ಆ 'ಕರಾಳ ದಿನ' ನಡೆದಿದ್ದೇನು? ಇಲ್ಲಿದೆ ವಿವರ

ಪುಲ್ವಾಮಾ ದಾಳಿಯ ಕರಾಳ ನೆನಪಿಗೆ 6 ವರ್ಷ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ಭಾರತೀಯ ಯೋಧರಿದ್ದ ವಾಹನದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಯಿತು. ಈ ವೇಳೆ 40 ಯೋಧರು ಬಲಿಯಾಗಿದ್ದಾರೆ. ಈ ಕರಾಳ ದುರಂತಕ್ಕೆ 6 ವರ್ಷ ತುಂಬಿದೆ. ಆ ದಿನ ಏನೇನಾಯ್ತು ಎಂಬ ಸಂಪೂರ್ಣ ವಿವರಣೆ ಇಲ್ಲಿದೆ.

Valentine’s Week Hairstyle Trend: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ 5 ಬ್ಯೂಟಿಫುಲ್ ಹೇರ್ ಸ್ಟೈಲ್ಸ್

ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ 5 ಬ್ಯೂಟಿಫುಲ್ ಹೇರ್ ಸ್ಟೈಲ್ಸ್

Valentine’s Week Hairstyle Trend 2025: ವ್ಯಾಲೆಂಟೈನ್ಸ್ ವೀಕ್‌ನ ಈ ಸೀಸನ್‌ನಲ್ಲಿ, ಬ್ಯೂಟಿ ಲೋಕದಲ್ಲಿ ನಾನಾ ಶೈಲಿಯ ಹೇರ್‌ ಸ್ಟೈಲ್‌ಗಳು ಡಿಕ್ಲೇರ್ ಆಗಿದ್ದು, ಅವುಗಳಲ್ಲಿ5 ಶೈಲಿಯ ಬ್ಯೂಟಿಫುಲ್ ಕೇಶವಿನ್ಯಾಸಗಳು ಟ್ರೆಂಡಿಯಾಗಿದೆ. ಹಾಗಾದಲ್ಲಿ, ಅವು ಯಾವುವು? ಸ್ಟೈಲಿಂಗ್ ಹೇಗೆ? ಈ ಕುರಿತಂತೆ ಹೇರ್‌ ಸ್ಟೈಲಿಸ್ಟ್‌ಗಳು ಟಿಪ್ಸ್ ನೀಡುವುದರ ಮೂಲಕ ಸಿಂಪಲ್ಲಾಗಿ ವಿವರಿಸಿದ್ದಾರೆ.

World's Most Corrupt Countries: ವಿಶ್ವದ ಭ್ರಷ್ಟ ದೇಶಗಳ ಪಟ್ಟಿ ಬಿಡುಗಡೆ- ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

ಭ್ರಷ್ಟಾಚಾರದಲ್ಲಿ ನಮ್ಮನ್ನೂ ಮೀರಿಸುವ ದೇಶಗಳಿವೆ!

ಭ್ರಷ್ಟಾಚಾರವೆಂಬುದು ಸರ್ವವ್ಯಾಪಿಯಾಗಿರುವ ಒಂದು ಸಮಸ್ಯೆಯಾಗಿದೆ. ಇಡೀ ವಿಶ್ವವನ್ನೇ ಕಾಡುತ್ತಿರುವ ಈ ಭ್ರಷ್ಟಾಚಾರದ ಪೆಡಂಭೂತ ಹಲವು ದೇಶಗಳ ಅಭಿವೃದ್ಧಿಗೆ ತೊಡಕಾಗಿದೆ. ಇದೀಗ ಪ್ರಪ್ರಂಚದ ಭ್ರಷ್ಟ ದೇಶಗಳ ಪಟ್ಟಿ ಹೊರಬಿದ್ದಿದ್ದು, ಯಾವ ದೇಶದ ಯಾವ ಸ್ಥಾನದಲ್ಲಿದೆ ಎಂಬುದರ ವಿವರ ಇಲ್ಲಿದೆ...

Invest Karnataka 2025: ಜಮೀನಿನ ಸಮಸ್ಯೆ ಬಗೆಹರಿಸಿದರೆ ಕ್ಲಸ್ಟರ್ ಮಾದರಿಯಲ್ಲಿ ಕೈಗಾರಿಕೆ ಅಭಿವೃದ್ಧಿ: ಶೋಭಾ ಕರಂದ್ಲಾಜೆ

ಜಮೀನಿನ ಸಮಸ್ಯೆ ಬಗೆಹರಿಸಲು ಶೋಭಾ ಕರಂದ್ಲಾಜೆ ಆಗ್ರಹ

ಕರ್ನಾಟಕದಲ್ಲಿ ಕೃಷಿ ಮತ್ತು ಕೈಗಾರಿಕೆ ಬೆಳವಣಿಗೆ ಎರಡನ್ನೂ ಪರಿಗಣಿಸಬೇಕಾಗಿದೆ. ರಾಜ್ಯದಲ್ಲಿ ಆಹಾರ ಸಂಸ್ಕರಣೆ, ಸೇವನೆಗೆ ಸಿದ್ಧವಾಗಿರುವಉದ್ಯಮ ಬೆಳೆಸಲು ಹೇರಳ ಅವಕಾಶಗಳಿವೆ. ವಿದೇಶಗಳ ಜನರು ನಮ್ಮಿಂದ ಡಿಜಿಟಲ್ ತಂತ್ರಜ್ಞಾನ ಮತ್ತು ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಬಯಸುತ್ತಿದ್ದಾರೆ. ಯುವಜನರಿಗೆ ನಾವು ಕೌಶಲ್ಯ ಕೊಡುವತ್ತ ಒತ್ತು ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

President's Rule: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ

ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ರಾಜೀನಾಮೆ ನೀಡಿದ 5 ದಿನಗಳ ಬಳಿಕ ಗುರುವಾರ (ಫೆ. 13) ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ. 1951ರ ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತಿರುವುದು ಇದು 11ನೇ ಬಾರಿ ಎನ್ನುವುದು ವಿಶೇಷ.

Anand Mahindra: ಟ್ರಾಫಿಕ್‌ನಿಂದ ಜಾಮ್‌ನಿಂದ ಬೇಸತ್ತು ಬೆಂಗಳೂರಿಗೆ ಗುಡ್‌ಬೈ ಹೇಳಿದ ಉದ್ಯಮಿ ಆನಂದ್ ಮಹೀಂದ್ರ

ಬೆಂಗಳೂರಿಗೆ ಗುಡ್‌ಬೈ ಹೇಳಿದ್ರಾ ಉದ್ಯಮಿ ಆನಂದ್ ಮಹೀಂದ್ರ?

ಸಿಲಿಕಾನ್‌ ಸಿಟಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡ ಉದ್ಯಮಿ, ಮಹೀಂದ್ರ & ಮಹೀಂದ್ರ ಸಂಸ್ಥೆಯ ಮಾಲೀಕ ಆನಂದ್ ಮಹೀಂದ್ರ ಇದೀಗ ಟ್ರಾಫಿಕ್‌ ಜಾಮ್‌ ಬಗ್ಗೆ ತಮಾಷೆಯಾಗಿ ಮಾಡಿರುವ ಪೋಸ್ಟ್‌ ವೈರಲ್‌ ಆಗಿದೆ.

Income Tax Bill 2025: ಪಾರ್ಲಿಮೆಂಟ್‌ನಲ್ಲಿ ಆದಾಯ ತೆರಿಗೆ ಮಸೂದೆ ಮಂಡನೆ: ಐಟಿ ಬಿಲ್‌ನಲ್ಲಿ ಏನಿದೆ?

ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು(ಫೆ.13) ವಿಪಕ್ಷಗಳ ವಿರೋಧದ ನಡುವೆಯೂ ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. . ಸಂಸತ್​ನ ಹಣಕಾಸು ಸ್ಥಾಯಿ ಸಮಿತಿಯಿಂದ ಪರಿಶೀಲನೆಯಾಗಿ, ಸಂಸತ್​ನಲ್ಲಿ ಅಂತಿಮ ಒಪ್ಪಿಗೆ ಸಿಕ್ಕಿದ ಬಳಿಕ ಇದು ಕಾಯ್ದೆಯಾಗಿ ಬದಲಾಗುತ್ತದೆ.

Hampi Utsav 2025: ವಿಶ್ವವಿಖ್ಯಾತ ಹಂಪಿ ಉತ್ಸವ ವಿಜೃಂಭಣೆಯ ಆಚರಣೆಗೆ ಭರದ ಸಿದ್ಧತೆ

ವಿಶ್ವವಿಖ್ಯಾತ ಹಂಪಿ ಉತ್ಸವ ವಿಜೃಂಭಣೆಯ ಆಚರಣೆಗೆ ಭರದ ಸಿದ್ಧತೆ

Hampi Utsav 2025: ವಿಶ್ವವಿಖ್ಯಾತ ಹಂಪಿ ಉತ್ಸವ ಫೆ.28, ಮಾ.1 ಮತ್ತು 2 ರಂದು ಮೂರು ದಿನಗಳ ಕಾಲ ನಡೆಯಲಿದ್ದು, ಯಶಸ್ವಿಯಾಗಿ ಉತ್ಸವ ಆಚರಿಸಲು ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 20 ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Valentine's Day: ಪ್ರೇಮಿಗಳ ದಿನದಂದು ಹೋಟೆಲ್‌ನಲ್ಲಿ ರೂಮ್‌ ಬುಕ್‌ ಮಾಡುತ್ತಿದ್ದೀರಾ? ಅವಿವಾಹಿತರು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

ಪ್ರೇಮಿಗಳ ದಿನದಂದು ಹೋಟೆಲ್‌ನಲ್ಲಿ ತಂಗುವ ಮುನ್ನ ಎಚ್ಚರ

ಫೆ. 14ರಂದು ಪ್ರೇಮಿಗಳ ದಿನ. ಈ ಹಿನ್ನೆಲೆಯಲ್ಲಿ ಪ್ರೇಮಿಗಳು ಈ ದಿನವನ್ನು ಇನ್ನಷ್ಟು ಸ್ಮರಣೀಯವಾಗಿಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಅವಿವಾಹಿತರು ಖಾಸಗಿ ಹೋಟೆಲ್‌ನಲ್ಲಿ ರೂಮ್‌ ಬುಕ್‌ ಮಾಡುವ ಮುನ್ನ ತಿಳಿದಿರಲೇಬೇಕಾದ ಕಾನೂನಿನ ಮಾಹಿತಿ ಇಲ್ಲಿದೆ.

Viral News:  ಪ್ರಿಯಕರನ ಜೊತೆ ಇರಲು ಎರಡು ಮಕ್ಕಳನ್ನೇ ಬಿಟ್ಟು ಬಂದ ಮಹಾತಾಯಿ; ಮುಂದೆ ಆಗಿದ್ದೇನು?

ಗೆಳೆಯನ ಜೊತೆ ಇರಲು ಕುಟುಂಬವನ್ನೇ ತೊರೆದ ಮಹಿಳೆ

ಉತ್ತರ ಪ್ರದೇಶದ ಗಾಜಿಯಾಬಾದ್‌ನ ವಿವಾಹಿತ ಮಹಿಳೆಯೊಬ್ಬರು ಅನ್ಯ ಕೋಮಿನ ವಿವಾಹಿತ ಯುವಕನೊಬ್ಬನ ಜೊತೆ ಪ್ರೇಮ ಸಂಬಂಧವನ್ನು ಹೊಂದಿದ್ದು, ಇದೀಗ . ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಆತನೊಂದಿಗೆ ಇರಲು ಭಾಗಲ್ಪುರದ ನವಗಚ್ಚಿಯಾಗೆ ತೆರಳಿದ್ದಾಳೆ. ಆದರೆ ಆತ ಆಕೆಯೊಂದಿಗೆ ಇರಲು ನಿರಾಕರಿಸಿದ್ದಾನೆ.

Viral News: ಪತ್ನಿಯ ಆತ್ಮಕ್ಕೆ ಹೆದರಿ 36 ವರ್ಷಗಳಿಂದ ಮಹಿಳೆಯಂತೆ ವೇಷ ಧರಿಸಿ ಬದುಕ್ತಿರೋ ಭೂಪಾ! ಏನಿದು ಘಟನೆ?

ಹೆಂಡತಿಯ ಆತ್ಮಕ್ಕೆ ಹೆದರಿದ ಗಂಡ ಹೀಗಾ ಮಾಡೋದು!

ಉತ್ತರ ಪ್ರದೇಶದ ಜೌನ್ಪುರದ ಚಿಂತಾ ಹರಣ್ ಚೌಹಾಣ್ ಎಂಬಾತ ಕಳೆದ 36 ವರ್ಷಗಳಿಂದ ಎರಡನೇ ಪತ್ನಿಯ ಆತ್ಮಕ್ಕೆ ಹೆದರಿ ಮಹಿಳೆಯಂತೆ ವೇಷ ಧರಿಸಿ ಬದುಕುತ್ತಿದ್ದಾನೆ. ಈತನ ಕಥೆ ಕೇಳಿ ಕೆಲವರು ಈತ ಮಾನಸಿಕ ಅಸ್ವಸ್ಥ ಎಂದು ಪರಿಗಣಿಸಿದರೆ ಇತರರು ಇದಕ್ಕೆ "ದೆವ್ವದ ಕಾಟ ಎಂದಿದ್ದಾರೆ. ಆದರೆ ಇದರ ಹಿಂದಿನ ನಿಖರವಾದ ಕಾರಣ ತಿಳಿದಿಲ್ಲ. ಈ ಸುದ್ದಿ ವೈರಲ್‌(Viral News) ಆಗಿದೆ.

Chhatrapati Sambhaji Maharaj: ಯಾರು ಈ ಛತ್ರಪತಿ ಸಂಭಾಜಿ ಮಹಾರಾಜ? ವಿಕ್ಕಿ ಕೌಶಲ್‌ ನಟನೆಯ ʼಛಾವಾʼದಲ್ಲಿದೆ ಈ ಮರಾಠ ಹೋರಾಟಗಾರನ ಕಥೆ

ಯಾರು ಈ ಛತ್ರಪತಿ ಸಂಭಾಜಿ ಮಹಾರಾಜ? ಇಲ್ಲಿದೆ ವಿವರ

ಈ ವರ್ಷದ ಬಹು ನಿರೀಕ್ಷಿತ ಹಿಂದಿ ಚಿತ್ರ ʼಛಾವಾʼ ಫೆ. 14ರಂದು ತೆರೆಗೆ ಬರಲಿದೆ. ಈ ಚಿತ್ರ ಅಪ್ರತಿಮ ದೇಶಪ್ರೇಮಿ, ಅಪ್ರತಿಮ ಹೋರಾಟಗಾರ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ ಅವರ ಜೀವನದ ಮೇಲೆ ಬೆಳಕು ಚೆಲ್ಲಲಿದೆ. ಹಾಗಾದರೆ ಯಾರು ಈ ಸಂಭಾಜಿ ಮಹಾರಾಜ? ಇಲ್ಲಿದೆ ವಿವರ.

Viral Video: ಮದುವೆಗೆ ಕರೆಯದೇ ಬಂದ ಡೇಂಜರಸ್‌ ಗೆಸ್ಟ್‌; ವಧು-ವರರು ಫುಲ್‌ ಶಾಕ್‌! ದಿಕ್ಕಾಪಾಲಾಗಿ ಓಡಿದ ಅತಿಥಿಗಳು

ಮದ್ವೆ ಮನೆಗೆ ಚಿರತೆ ಎಂಟ್ರಿ-ವಧು-ವರರನ್ನು ಬಿಟ್ಟು ಓಡಿದ ಗೆಸ್ಟ್‌ಗಳು!

ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಮದುವೆಗೆ ಚಿರತೆಯೊಂದು ಎಂಟ್ರಿ ಕೊಟ್ಟಿದೆ. ಚಿರತೆಯನ್ನು ನೋಡಿ ಮದುವೆಯ ಸಂಭ್ರಮದಲ್ಲಿದ್ದ ಜನರು ನೋಡಿ ಭಯ ಬಿದ್ದು ಓಡಿ ಹೋಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ.

Karnataka State Awards: ಬಸವ ಪುರಸ್ಕಾರ ಪಡೆದ ಡಾ.ಗುಂಜಾಳ, ಚೌಡಯ್ಯ ಪುರಸ್ಕಾರ ಪಡೆದ ಬಸಪ್ಪ ಭಜಂತ್ರಿ ಪರಿಚಯ ಇಲ್ಲಿದೆ

ಯಾರಿವರು ರಾಷ್ಟ್ರೀಯ ಪುರಸ್ಕಾರ ಪಡೆದ ಗುಂಜಾಳ, ಬಸಪ್ಪ ಭಜಂತ್ರಿ?

ಬಸವ ರಾಷ್ಟ್ರೀಯ ಪುರಸ್ಕಾರವನ್ನು ಡಾ.ಎಸ್.ಆರ್. ಗುಂಜಾಳ ಅವರು ಹಾಗೂ ಬಸಪ್ಪ ಎಚ್. ಭಜಂತ್ರಿಯವರು ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಗಳು ತಲಾ 10 ಲಕ್ಷ ರೂ. ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತವೆ. ಇವರಲ್ಲದೆ ʼಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿʼಯನ್ನು ಮುಂಬಯಿಯ ಬೇಗಂ ಪರ್ವೀನ್ ಸುಲ್ತಾನ್ ಪಡೆದುಕೊಂಡಿದ್ದಾರೆ.

Viral Video ಕುಂಭಮೇಳದಲ್ಲಿ ಚಹಾ ಮಾರಿದಾತ ಗಳಿಸಿದ ಲಾಭ ಕೇಳಿದ್ರೆ ಶಾಕ್‌ ಆಗ್ತೀರಿ! ವಿಡಿಯೊ ನೋಡಿ

ಚಹಾ ಮಾರಾಟ ಮಾಡಿದ ಕಟೆಂಟ್‌ ಕ್ರಿಯೇಟರ್‌ ಗಳಿಸಿದ್ದೆಷ್ಟು?

ಕಂಟೆಂಟ್ ಕ್ರಿಯೇಟರ್ ಶುಭಂ ಪ್ರಜಾಪತ್ ಮಹಾಕುಂಭಮೇಳದಲ್ಲಿ ಚಹಾ ಮಾರಾಟ ಮಾಡುವ ಮೂಲಕ ಒಂದು ದಿನದಲ್ಲಿ ಎಷ್ಟು ಹಣವನ್ನು ಗಳಿಸಬಹುದು ಎಂಬುದನ್ನು ಕಂಡುಹಿಡಿಯಲು ಹೋಗಿ ದಿನಕ್ಕೆ 5,000 ರೂಪಾಯಿ ಲಾಭ ಗಳಿಸಿದ್ದಾನಂತೆ. ಇದನ್ನು ಆತ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ಈಗ ವೈರಲ್ (Viral Video) ಆಗಿದೆ.

‌Viral Video: ಟ್ರಾಫಿಕ್‌ ಇರಲಿ, ಗದ್ದಲವಿರಲಿ ಈ ಆಟೋ ಚಾಲಕನ ಸಂಗೀತಕ್ಕೆ ತಡೆಯೇ ಇಲ್ಲ!ವಿಡಿಯೊ ವೈರಲ್

ಮುಂಬೈ ರಸ್ತೆಗಳಲ್ಲಿ ಈ ಆಟೋ ರಿಕ್ಷಾದ್ದೇ ಹವಾ! ಭಾರೀ ವೈರಲಾಗ್ತಿದೆ ಈ ವಿಡಿಯೊ

ಮುಂಬೈ ರಸ್ತೆಯ ಟ್ರಾಫಿಕ್ ಸಿಗ್ನಲ್‍ನಲ್ಲಿ ಆಟೋ ಚಾಲಕನೊಬ್ಬ ತನ್ನ ಆಟೋವನ್ನು ಓಡಿಸುವುದು ಮಾತ್ರವಲ್ಲದೆ ಹಾಡು ಹಾಡುತ್ತಾ ತನ್ನ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ, ಏಳು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.

Viral Video: ಮುನ್ನಾರ್‌ನಲ್ಲಿ ಡಬಲ್ ಡೆಕ್ಕರ್ ಬಸ್ ವ್ಯವಸ್ಥೆ- ಪ್ರಯಾಣಿಕರ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತ

ಮುನ್ನಾರ್‌ನಲ್ಲಿ ಡಬಲ್ ಡೆಕ್ಕರ್ ಬಸ್ ವ್ಯವಸ್ಥೆ- ಈ ಪ್ರಯಾಣ ಸುರಕ್ಷಿತವೇ?

ಮುನ್ನಾರ್‌ನ ಪ್ರಕೃತಿ ಸೌಂದರ್ಯ ವೀಕ್ಷಿಸುವ ಸಲುವಾಗಿ ಡಬಲ್ ಡೆಕ್ಕರ್ ಬಸ್ ವ್ಯವಸ್ಥೆ ಜಾರಿಮಾಡಲಾಗಿದೆ. ಮುನ್ನಾರ್ ನ ಚಹಾ ತೋಟ, ಎತ್ತರದ ಗಿರಿ ಧಾಮಗಳ ವೀವ್ಸ್ ಎಲ್ಲವನ್ನು 360° ವೀಕ್ಷಣೆಗೆ ಅನುವು ಮಾಡಿಕೊಡಲಾಗಿದ್ದು ಈ ಬಸ್ ಪ್ರಯಾಣವನ್ನು ಮುನ್ನಾರ್ ನಿಂದ ದೇವಿಕುಲಂ ವರೆಗೆ ದಿನಕ್ಕೆ ನಾಲ್ಕು ಬಾರಿ ಸಂಚಾರಕ್ಕಾಗಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಈ ಬಗ್ಗೆ ಟಿಟ್ಟರ್ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದ್ದು ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ.

Job Guide: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಲಿಮಿಟೆಡ್‌ನ 129 ಹುದ್ದೆಗಳಿಗೆ ಅಪ್ಲೈ ಮಾಡಿ

ಟಿಎಚ್‌ಡಿಸಿಯ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಲಿಮಿಟೆಡ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಎಕ್ಸಿಕ್ಯುಟಿವ್‌ ಮತ್ತು ಎಂಜಿನಿಯರ್‌ ಸೇರಿ ಒಟ್ಟು 129 ಹುದ್ದೆಗಳಿವೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮಾ. 14

PM Modi-Trump Meet: ಟ್ರಂಪ್‌ ಜೊತೆಗೆ ಔತಣಕೂಟದಲ್ಲಿ ಭಾಗಿಯಾಗಲಿರುವ ಮೋದಿ- ಸಂಜೆ ಉಭಯ ನಾಯಕರ ಜಂಟಿ ಸುದ್ದಿಗೋಷ್ಠಿ

ಮೋದಿಗಾಗಿ ಔತಣಕೂಟ ಆಯೋಜಿಸಿದ ಡೊನಾಲ್ಡ್‌ ಟ್ರಂಪ್!

ನರೇಂದ್ರ ಮೋದಿ ಇಂದು(ಫೆ.13) ಅಮೆರಿಕಕ್ಕೆ ಭೇಟಿ ನೀಡಿದ್ದು, ಇಂದು ಸಂಜೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದು, ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. ಸುದ್ದಿಗೋಷ್ಠಿಯ ನಂತರ ಟ್ರಂಪ್ ಮೋದಿ ಅವರಿಗೆ ಔತಣಕೂಟವನ್ನು ಆಯೋಜಿಸಿದ್ದಾರೆ.

Viral Video: ಬೀದಿ ನಾಯಿಯನ್ನು ನಿರ್ದಯವಾಗಿ ಚರಂಡಿಗೆ ಎಸೆದ ವ್ಯಕ್ತಿ‌ ; ವಿಡಿಯೊ ವೈರಲ್

ಬೀದಿ ನಾಯಿಯನ್ನು ಚರಂಡಿಗೆ ಎಸೆದ ವ್ಯಕ್ತಿ- ಶಾಕಿಂಗ್‌ ವಿಡಿಯೊ ವೈರಲ್‌

ಪಶ್ಚಿಮ ಬಂಗಾಳದ ಸಿಲಿಗುರಿಯ ದುರ್ಗಾ ನಗರದಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ರಸ್ತೆ ಬದಿಯ ಚರಂಡಿಗೆ ನಿರ್ದಯವಾಗಿ ಎಸೆದಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದಕ್ಕೆ ಪ್ರಾಣಿಪ್ರಿಯರಿಂದ ಆಕ್ರೋಶ ವ್ಯಕ್ತವಾದ ನಂತರ ಆತ ತನ್ನ ಕೃತ್ಯದ ಬಗ್ಗೆ ಕ್ಷಮೆಯಾಚಿಸಿದ್ದಾನೆ.