ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶ

Terrorism: ಟೆರರ್‌ ಡಾಕ್ಟರ್‌ ಅರೆಸ್ಟ್‌! ದೇಶಾದ್ಯಂತ ಭೀಕರ ದಾಳಿಗೆ ನಡೆಸಿದ ಸಂಚು ವಿಫಲ; 350 ಕೆಜಿ RDX ಸ್ಫೋಟಕ ಸೀಜ್‌

ತಪ್ಪಿದ ಭಾರೀ ದುರಂತ; ಉಗ್ರರ ದಾಳಿ ಸಂಚು ವಿಫಲ

Jammu and Kashmir: ಜಮ್ಮು ಮತ್ತು ಕಾಶ್ಮೀರ ಪೊಲೀಸರ ತಂಡವು ಹರಿಯಾಣದ ಫರಿದಾಬಾದ್‌ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 300 ಕೆಜಿ ಆರ್‌ಡಿಎಕ್ಸ್, ಎಕೆ -47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ. ಎರಡು ದಿನಗಳ ಹಿಂದೆಯಷ್ಟೇ ಉಗ್ರರ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಅರೆಸ್ಟ್‌ ಆಗಿರುವ ಕಾಶ್ಮೀರಿ ಮೂಲದ ವೈದ್ಯನನ್ನು ಅರೆಸ್ಟ್‌ ಮಾಡಿರುವ ಬೆನ್ನಲ್ಲೇ ಈ ಮಹತ್ವದ ಕಾರ್ಯಾಚರಣೆ ನಡೆದಿದೆ.

Shashi Tharoor: ಅಡ್ವಾಣಿ ಪರ ಶಶಿ ತರೂರ್‌ ಬ್ಯಾಟಿಂಗ್‌; ಕಾಂಗ್ರೆಸ್‌ಗೆ ತೀವ್ರ ಮುಜುಗರ!

ಅಡ್ವಾಣಿಗೆ ಶಶಿ ತರೂರ್ ಬೆಂಬಲ; ಕಾಂಗ್ರೆಸ್‌ ಫುಲ್‌ ಗರಂ!

Shashi Tharoor’s Praise for LK Advani: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಮಾಜಿ ಉಪ ಪ್ರಧಾನಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಎಲ್‌.ಕೆ. ಅಡ್ವಾನಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಇದು ರಾಜಕೀಯ ವಲಯದಲ್ಲಿ ಹೊಸ ಸಂಚಲನವನ್ನುಂಟು ಮಾಡಿದೆ.

Viral Video: ವಿಮಾನ ಪ್ರಯಾಣದ ವೇಳೆ ನಿಮ್ಮ ‘ಕೋಳಿ ನಿದ್ದೆಗೆ’ ಸಹಕಾರಿ ಈ ಕ್ಯಾಪ್ಸೂಲ್‌

ಏರ್‌ಪೋರ್ಟ್‌ನಲ್ಲಿದೆ ಸ್ಲೀಪಿಂಗ್ ಕ್ಯಾಪ್ಸೂಲ್! ನಿಮಗಿದರ ಬಗ್ಗೆ ಗೊತ್ತೇ?

China News ಚೀನಾದ ಕುನ್ಮಿಂಗ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ವಿಶ್ರಾಂತಿ ತೆಗೆದುಕೊಳ್ಳಲು ಸ್ಲೀಪಿಂಗ್ ಕ್ಯಾಪ್ಸೂಲ್‌ಗಳನ್ನು, ಹಿಡಲಾಗಿದೆ. ಇವು ಪ್ರಯಾಣಿಕರಿಗೆ ಆರಾಮದಾಯಕವಾಗಿ ವಿಶ್ರಾಂತಿ, ನಿದ್ರೆ ಮತ್ತು ರಿಫ್ರೆಶ್ ಆಗುವ ಅವಕಾಶವನ್ನು ನೀಡುತ್ತವೆ. ಈ ಕ್ಯಾಪ್ಸೂಲ್‌ಗಳಲ್ಲಿ ಏರ್‌ಕಂಡೀಷನರ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಟಿವಿ, ಲೈಟಿಂಗ್ ಕಂಟ್ರೋಲ್ ಸೇರಿದಂತೆ ಅನೇಕ ಸೌಲಭ್ಯಗಳಿವೆ. ಪ್ರತಿ ಗಂಟೆಗೆ ನಿಗದಿತ ಶುಲ್ಕ ಪಾವತಿಸಿ ಇವುಗಳನ್ನು ಬಳಸಬಹುದು.

Air Pollution: ಭಾರತದಲ್ಲಿ ಸ್ವಚ್ಛ ಗಾಳಿಗೆ ಬರ- ನಿತ್ಯ ಬಲಿಯಾಗ್ತಿರುವ ಭಾರತೀಯರೆಷ್ಟು ಗೊತ್ತಾ?

ವಾಯು ಮಾಲಿನ್ಯಕ್ಕೆ ನಿತ್ಯ ಭಾರತೀಯರು ಬಲಿಯಾಗುತ್ತಿದ್ದಾರೆ!

ಭಾರತದ ನಗರಗಳಲ್ಲಿ ವಿಪರೀತ ವಾಯುಮಾಲಿನ್ಯ ಆಗುತ್ತಿದ್ದು ಇಲ್ಲಿನ ಜನರನ್ನು ವಾಯುಮಾಲಿನ್ಯದ ಅಪಾಯದಿಂದ ಪಾರು ಮಾಡಲು ಭಾರತ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಮತ್ತು ಸಾರ್ವಜನಿಕ ಆರೋಗ್ಯ ತಜ್ಞೆ ಡಾ. ಸೌಮ್ಯ ಎಚ್ಚರಿಸಿದ್ದಾರೆ.

Bihar Assembly Election: ಬಿಹಾರ ವಿಧಾನಸಭಾ ಚುನಾವಣೆ: ನಾಳೆ ಎರಡನೇ ಹಂತದ ಮತದಾನ

ಬಿಹಾರ: ನ. 11ರಂದು ಎರಡನೇ ಹಂತದ ಮತದಾನ

ಬಿಹಾರ ವಿಧಾನಸಭೆಗೆ ಎರಡನೇ ಹಂತದ ಮತದಾನ ನ. 11ರಂದು ನಡೆಯಲಿದೆ. 20 ಜಿಲ್ಲೆಗಳ ಒಟ್ಟು 122 ಕ್ಷೇತ್ರಗಳಿಗೆ ಮತದಾನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಒಟ್ಟು 1,302 ಅಭ್ಯರ್ಥಿಗಳು ಕಣದಲ್ಲಿದ್ದು, ಅವರಲ್ಲಿ 136 ಮಹಿಳಾ ಸ್ಪರ್ಧಿಗಳಿದ್ದಾರೆ. ಮೊದಲ ಹಂತದಲ್ಲಿ 18 ಜಿಲ್ಲೆಗಳ 121 ಸ್ಥಾನಗಳಿಗೆ ಮತದಾನ ನಡೆದಿದೆ.

Yettinahole project: ಎತ್ತಿನಹೊಳೆ, ಶರಾವತಿ ಪಂಪ್‌ ಸ್ಟೋರೇಜ್‌ ಯೋಜನೆಗೆ ಕೇಂದ್ರ ಸರಕಾರ ಬ್ರೇಕ್

ಎತ್ತಿನಹೊಳೆ, ಶರಾವತಿ ಪಂಪ್‌ ಸ್ಟೋರೇಜ್‌ ಯೋಜನೆಗೆ ಕೇಂದ್ರ ಸರಕಾರ ಬ್ರೇಕ್

Sharavati Pump Storage: ಎತ್ತಿನಹೊಳೆ ಯೋಜನೆಯ ಮೊದಲ ಹಂತದಲ್ಲಿ ಹಲವು ಕಾಮಗಾರಿಗಳು ಅನಧಿಕೃತವಾಗಿದೆ. ಇಂಥ ಕಾಮಗಾರಿಗಳಿಂದ ಪರಿಸರದ ಮೇಲೆ ಭಾರೀ ಅನಾಹುತವಾಗಿದೆ ಎಂದು ಹೇಳಿರುವ ಕೇಂದ್ರ ಪರಿಸರ ಇಲಾಖೆಯ ಸಲಹಾ ಸಮಿತಿಯು, ಕೆಲಸಗಳನ್ನು ಆಳವಾಗಿ ಪರಿಶೀಲಿಸದ ಹೊರತೂ ಯೋಜನೆಯ ಮುಂದುವರೆದ ಭಾಗಕ್ಕೆ ಅನುಮತಿ ನೀಡದಂತೆ ಸಲಹೆ ನೀಡಿದೆ. ಜೊತೆಗೆ, ರಾಜ್ಯ ಸರ್ಕಾರದ ಉದ್ದೇಶಿತ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗಾಗಿ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದ ಸುಮಾರು 54 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಬಳಸುವ ಕರ್ನಾಟಕ ಸರ್ಕಾರದ ಪ್ರಸ್ತಾವವನ್ನು ಕೂಡ ಕೇಂದ್ರ ಸರ್ಕಾರ ತಡೆ ಹಿಡಿದಿದೆ.

Tejasvi Surya: ಸತತ 2ನೇ ಬಾರಿ ಐರನ್‌ಮ್ಯಾನ್ 70.3 ಓಟ ಪೂರ್ಣಗೊಳಿಸಿದ ಸಂಸದ ತೇಜಸ್ವಿ ಸೂರ್ಯ; ಅಣ್ಣಾಮಲೈ ಸಾಥ್‌

ಐರನ್‌ಮ್ಯಾನ್ 70.3 ಓಟ ಪೂರ್ಣಗೊಳಿಸಿದ ಸಂಸದ ತೇಜಸ್ವಿ ಸೂರ್ಯ

IRONMAN 70.3: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗೋವಾದಲ್ಲಿ ನಡೆದ 5ನೇ ಆವೃತ್ತಿಯ ಐರನ್‌ಮ್ಯಾನ್ 70.3 ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಓಟವನ್ನು ತೇಜಸ್ವಿ ಸೂರ್ಯ ಪೂರ್ಣಗೊಳಿಸುತ್ತಿರುವುದು ಇದು ಸತತ 2ನೇ ಬಾರಿ. ಈ ಸಲ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ತಮ್ಮ ಓಟವನ್ನು ಪೂರ್ಣಗೊಳಿಸಿ ಗಮನ ಸೆಳೆದರು.

Bihar Assembly Election: ಸೇತುವೆ ನಿರ್ಮಿಸುವವರೆಗೂ ಮತ ಚಲಾಯಿಸುವುದಿಲ್ಲ: ಬಿಹಾರದಲ್ಲಿ ಸಿಡಿದೆದ್ದ ಗ್ರಾಮಸ್ಥರು

ಸೇತುವೆ ಇಲ್ಲ, ಮತದಾನ ಕೂಡ ಮಾಡೋದಿಲ್ಲ

ಗ್ರಾಮಕ್ಕೆ ಸೇತುವೆ ನಿರ್ಮಿಸುವವರೆಗೂ ನಾವು ಮತ ಚಲಾಯಿಸುವುದಿಲ್ಲ ಎಂದು ಬಿಹಾರದ ಪತ್ರಾ, ಹೆರ್ಹಂಜ್ ಮತ್ತು ಕೆವಾಲ್ದಿಹ್‌ನ ಗ್ರಾಮಸ್ಥರು ಹೇಳಿದ್ದಾರೆ. ಗಯಾದಿಂದ 150 ಕಿಲೋ ಮೀಟರ್ ದೂರದಲ್ಲಿರುವ ಹಳ್ಳಿಗಳಲ್ಲಿ ನದಿ ದಾಟ ಬೇಕಿದ್ದರೆ ಗ್ರಾಮಸ್ಥರು ಜೀವವನ್ನೇ ಪಣಕ್ಕಿಡಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮದ ಮಹಿಳಾ ಮತದಾರರು ತಿಳಿಸಿದ್ದಾರೆ.

Delhi Air Pollution: ದೆಹಲಿ ವಾಯು ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ;  ಪ್ರತಿಭಟನಾಕಾರರನ್ನೇ ಬಂಧಿಸಿದ ಪೊಲೀಸರು!

ದೆಹಲಿ ವಾಯು ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ

ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ಮಿತಿ ಮೀರಿದೆ. ವಾಯು ಗುಣಮಟ್ಟ 400 ಕ್ಕೆ ಕುಸಿದಿದ್ದು ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ವಾಯು ಮಾಲಿನ್ಯವನ್ನು ನಿಯಂತ್ರಿಸುವಂತೆ ದೆಹಲಿ ಸರ್ಕಾರವನ್ನು ಒತ್ತಾಯಿಸಿ ವಿಪಕ್ಷಗಳು ಇಂದು (ಭಾನುವಾರ) ಪ್ರತಿಭಟನೆಯನ್ನು ನಡೆಸಿದವು.

Physical abuse: ಪಾಲಕರೊಟ್ಟಿಗೆ ಮಲಗಿದ್ದ 4 ವರ್ಷದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿದ ದುರುಳ

4 ವರ್ಷದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿದ ದುರುಳ

ಅಜ್ಜಿಯ ಪಕ್ಕದಲ್ಲೇ ಮಲಗಿದ್ದ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ಕೋಲ್ಕತ್ತಾ ಬಳಿಯ ಹೂಗ್ಲಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಗಂಭೀರ ಗಾಯಗೊಂಡಿರುವ ಬಾಲಕಿಯನ್ನು ತಾರಕೇಶ್ವರ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ಹೂಗ್ಲಿ ಗ್ರಾಮೀಣ ಠಾಣೆಯ ಪೊಲೀಸರು ಶಂಕಿತನೊಬ್ಬನನ್ನು ಬಂಧಿಸಿದ್ದಾರೆ.

Vande Bharath: ವಂದೇ ಭಾರತ್ ರೈಲಿನಲ್ಲಿ ವಿದ್ಯಾರ್ಥಿಗಳಿಂದ RSS ಗೀತೆ ಹಾಡಿಸಿದ ದಕ್ಷಿಣ ರೈಲ್ವೆ; ಕಿಡಿ ಕಾರಿದ ಕೇರಳ ಸಿಎಂ

ರೈಲಿನಲ್ಲಿ ವಿದ್ಯಾರ್ಥಿಗಳು RSS ಗೀತೆ ಹಾಡಿದ್ದಕ್ಕೆ ಕೇರಳ ಸಿಎಂ ಖಂಡನೆ

Students sing RSS song: ಕೇರಳದ ವಂದೇ ಭಾರತ್ ರೈಲಿನಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಗೀತೆ ಹಾಡಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ವಿದ್ಯಾರ್ಥಿಗಳ ಈ ನಡೆ ಅಪಾಯಕಾರಿ ಎಂದು ಹೇಳಿದ್ದಾರೆ. ರೈಲಿನಲ್ಲಿ ನಡೆದ ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Viral Video: ಗೃಹ ಪ್ರವೇಶ ಆಚರಣೆಯಲ್ಲಿ ಗೋಮಾತೆ ಬದಲಿಗೆ ಆಟಿಕೆ ಹಸು: ಇದೇ ಮಾಡರ್ನ್‌ ಇಂಡಿಯಾ ಎಂದ ನೆಟ್ಟಿಗರು

ಗೃಹ ಪ್ರವೇಶ ಆಚರಣೆಯಲ್ಲಿ ಗೋಮಾತೆ ಬದಲಿಗೆ ಆಟಿಕೆ ಹಸು

Desi family viral video: ಪಾರಂಪರಿಕ ಆಚರಣೆಗೆ ಹಾಸ್ಯಭರಿತ ತಿರುವು ನೀಡಿದ ಒಂದು ಕುಟುಂಬದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗೃಹ ಪ್ರವೇಶ ಸಮಾರಂಭದಲ್ಲಿ ನಿಜವಾದ ಗೋಮಾತೆಯ ಬದಲು ಆಟಿಕೆ ಹಸುವನ್ನು ಬಳಸಲಾಗಿದೆ. ಇದಕ್ಕೆ ನೆಟ್ಟಿಗರಿಂದ ನಗು ಹಾಗೂ ಟೀಕೆ ವ್ಯಕ್ತವಾಗಿದೆ.

Viral Video: ವೇಗವಾಗಿ ಚಲಿಸುತ್ತಿದ್ದ ರೈಲಿನ ವಿಂಡ್‌ಸ್ಕ್ರೀನ್‌ಗೆ ಹದ್ದು ಡಿಕ್ಕಿ; ಲೋಕೋ ಪೈಲಟ್‌ಗೆ ಗಾಯ, ಇಲ್ಲಿದೆ ವಿಡಿಯೊ

ವೇಗವಾಗಿ ಚಲಿಸುತ್ತಿದ್ದ ರೈಲಿನ ವಿಂಡ್‌ಸ್ಕ್ರೀನ್‌ಗೆ ಹದ್ದು ಡಿಕ್ಕಿ

Eagle Hits Windscreen of Moving Train: ಜಮ್ಮು-ಕಾಶ್ಮೀರದ ಅನಂತನಾಗ್‌ನಲ್ಲಿ ಅಸಾಮಾನ್ಯ ಘಟನೆ ಸಂಭವಿಸಿದೆ. ವೇಗವಾಗಿ ಚಲಿಸುತ್ತಿರುವ ರೈಲಿನ ಗಾಜಿನ ಕಿಟಕಿಗೆ ಹದ್ದು ಡಿಕ್ಕಿ ಹೊಡೆದ ಪರಿಣಾಮ ಲೊಕೊ ಪೈಲಟ್ ಗಾಯಗೊಂಡಿದ್ದಾರೆ. ಘಟನೆಯು ಪ್ರಯಾಣಿಕರಲ್ಲಿ ಆತಂಕವನ್ನು ಹುಟ್ಟಿಸಿದ್ದು, ಅದೃಷ್ಟವಶಾತ್‌ ಯಾವುದೇ ದುರಂತ ನಡೆದಿಲ್ಲ.

Viral News: ಒಂದೂವರೆ ಲಕ್ಷ ರೂ. ಸ್ಕೂಟರ್‌ಗೆ 21 ಲಕ್ಷ ರೂ. ದಂಡ!; ಸವಾರ ಕಕ್ಕಾಬಿಕ್ಕಿ

ಹೆಲ್ಮೆಟ್ ಹಾಕದೆ ಸ್ಕೂಟರ್‌ ಚಲಾಯಿಸಿದ್ದಕ್ಕೆ 21 ಲಕ್ಷ ರೂ. ಫೈನ್!

ಹೆಲ್ಮೆಟ್ ಧರಿಸದ ಕಾರಣ ಸ್ಕೂಟರ್ ಸವಾರನೊಬ್ಬನಿಗೆ ಬರೋಬ್ಬರಿ 21 ಲಕ್ಷ ರೂ. ನಷ್ಟು ದಂಡ ವಿಧಿಸಿದ್ದ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ. ಹೆಲ್ಮೆಟ್ ಧರಿಸದಿದ್ದರೆ ಒಂದೆರೆಡು ಸಾವಿರ ರೂ. ಫೈನ್ ಹಾಕಿದ್ದು ಕೇಳಿದ್ದೇವೆ. ಆದರೆ 21 ಲಕ್ಷ ರೂಪಾಯಿ ಫೈನ್ ಹಾಕಿದ್ದು ಮಾತ್ರ ವಿಚಿತ್ರವೆನಿಸುವಂತಿದೆ. ಆತನ ಸ್ಕೂಟರ್‌ಕ್ಕಿಂತಲೂ ದಂಡದ ಮೊತ್ತವೆ ಅಧಿಕವಾಗಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Viral News: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದವಳು ಪ್ರಿಯಕರನ ಮನೆಯಲ್ಲಿ ಪ್ರತ್ಯಕ್ಷ! ಸಾವಿನ ನಾಟಕ ಕೊನೆಗೂ ಬಯಲು

ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದವಳು ಪ್ರಿಯಕರನ ಮನೆಯಲ್ಲಿ ಪ್ರತ್ಯಕ್ಷ!

ವರದಕ್ಷಿಣೆ ಕೊಲೆ ಪ್ರಕರಣದಲ್ಲಿ ಸತ್ತಿದ್ದಾಳೆ ಎಂದೇ ನಂಬಲಾಗಿದ್ದ ಮಹಿಳೆಯೊಬ್ಬರು ಜೀವಂತವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಘಾಜಿಪುರದಲ್ಲಿ ನಡೆದಿದೆ. ಸತ್ತಿದ್ದಾಳೆ ಎಂದೇ ಭಾವಿಸಲಾಗಿದ್ದ ಮಹಿಳೆ ಗ್ವಾಲಿಯರ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾಳೆ. ವರದಕ್ಷಿಣೆ ಕೊಲೆ ಪ್ರಕರಣ ಒಂದು ಕಟ್ಟುಕಥೆ ಎಂದು ಪೊಲೀಸರು ತಿಳಿಸಿದ್ದಾರೆ.

PM Modi: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯುನಿವರ್ಸಿಟಿಯಿಂದ ಹೆಚ್ಚುವರಿ ಅಂಕ? ವೈರಲ್‌ ಆಯ್ತು ಸುದ್ದಿ

ಪ್ರಧಾನಿ ಕಾರ್ಯಕ್ರಮಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ?

PM Modi event fact check: ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳು ಹೆಚ್ಚುವರಿ ಅಂಕ ನೀಡುತ್ತಿವೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಹೇಳಿಕೆ ನಿಜವೇ ಎಂಬುದನ್ನು ತಿಳಿಯಲು ಸತ್ಯ ಪರಿಶೀಲನೆ ನಡೆಸಲಾಗಿದೆ.

Viral Video: ವೇಗವಾಗಿ ಬಸ್ ಚಲಾಯಿಸುತ್ತಾ ಮೊಬೈಲ್‍ನಲ್ಲಿ ಬಿಗ್‍ಬಾಸ್ ನೋಡಿದ ಚಾಲಕ; ವೈರಲ್‌ ಆಯ್ತು ವಿಡಿಯೋ

ವೇಗವಾಗಿ ಬಸ್ ಚಲಾಯಿಸುತ್ತಾ ಬಿಗ್‍ಬಾಸ್ ನೋಡಿದ ಚಾಲಕ

Bus driver watches TV while driving: 80 ಕಿಮೀ ವೇಗದಲ್ಲಿ ಬಸ್ ಚಾಲನೆ ಮಾಡುತ್ತಿದ್ದಾಗ ಚಾಲಕನೊಬ್ಬ, ಮೊಬೈಲ್‌ನಲ್ಲಿ ಬಿಗ್ ಬಾಸ್ ವೀಕ್ಷಿಸುತ್ತಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದೂರ ಪ್ರಯಾಣದ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ಶಿಸ್ತಿನ ಬಗ್ಗೆ ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ISI Terrorist: ಭಾರತದಲ್ಲಿ ಅತೀ ದೊಡ್ಡ ಭಾಯೋತ್ಪಾದಕ ದಾಳಿಗೆ ನಡೆಸಿದ್ದ ಸಂಚು ವಿಫಲ; ಐಸಿಸ್ ಉಗ್ರರ ಬಂಧನ

ಭಾರತದಲ್ಲಿ ಅತೀ ದೊಡ್ಡ ಭಾಯೋತ್ಪಾದಕ ದಾಳಿಗೆ ಸಂಚು!

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಸುಂದೌಯ್‌ನಲ್ಲಿ ಪ್ರಮುಖ ಭಯೋತ್ಪಾದಕ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದಾಬಾದ್‌ನಿಂದ ಮೂವರನ್ನು ಬಂಧಿಸಿದೆ. ಆರೋಪಿಗಳ ಮೇಲೆ ಕಳೆದ ಒಂದು ವರ್ಷದಿಂದ ನಿಗಾ ಇಡಲಾಗಿತ್ತು. ಎಟಿಎಸ್ ಪ್ರಕಾರ, ಶಸ್ತ್ರಾಸ್ತ್ರಗಳನ್ನು ಪೂರೈಸುವಾಗ ಮೂವರನ್ನು ಬಂಧಿಸಲಾಗಿದೆ.

Mohan Bhagwat: ಮುಸ್ಲಿಂ, ಕ್ರಿಶ್ಚಿಯನ್ನರ ಪೂರ್ವಜರು ಹಿಂದೂಗಳ ವಂಶಸ್ಥರೇ; RSS ಮುಖ್ಯಸ್ಥ ಮೋಹನ್‌ ಭಾಗವತ್‌

ದೇಶದಲ್ಲಿರುವವರೆಲ್ಲಾ ಹಿಂದೂಗಳೇ : ಮೋಹನ್‌ ಭಾಗವತ್

ಮುಸ್ಲಿಮರು, ಕ್ರಿಶ್ಚಿಯನ್ನರು ಒಂದೇ ಪೂರ್ವಜರ ವಂಶಸ್ಥರು. ಭಾರತದಲ್ಲಿ ಅಹಿಂದೂಗಳು ಯಾರೂ ಇಲ್ಲ. ಎಲ್ಲ ಹಿಂದೂಗಳೇ ಆಗಿದ್ದಾರೆ. ದೇಶದ ಮೂಲ ಸಂಸ್ಕೃತಿಯೇ ಹಿಂದೂಗಳು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. '100 ವರ್ಷಗಳ ಸಂಘದ ಪಯಣ: ಹೊಸ ದಿಗಂತಗಳು' ಕುರಿತು ಉಪನ್ಯಾಸ ನೀಡುತ್ತಾ ಭಾಗವತ್ ಈ ಹೇಳಿಕೆ ನೀಡಿದ್ದಾರೆ.

Physical Assault: ಬಾಲಕನನ್ನು ಅಪಹರಿಸಿ ಲೈಂಗಿಕ ಕಿರುಕುಳ; ಆರೋಪಿ ಮಹಿಳೆಗೆ 54 ವರ್ಷಗಳ ಜೈಲು ಶಿಕ್ಷೆ!

ತಮಿಳುನಾಡಿನಲ್ಲಿ ಬಾಲಕನನ್ನು ಅಪಹರಿಸಿ ಲೈಂಗಿಕ ಕಿರುಕುಳ

Tamil Nadu Physical assault case: ತಮಿಳುನಾಡಿನಲ್ಲಿ 14 ವರ್ಷದ ಬಾಲಕನನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಮಹಿಳೆಯೊಬ್ಬಳಿಗೆ ನ್ಯಾಯಾಲಯವು 54 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಆಕೆ ಬಾಲಕನನ್ನು ಬಲವಂತವಾಗಿ ಲೈಂಗಿಕ ಸಂಬಂಧಕ್ಕೆ ಒಳಪಡಿಸಿದ್ದಾಳೆ ಎಂದು ಆರೋಪಿಸಲಾಗಿದೆ.

Vande Bharat Train: ಪಿಎಂ ಮೋದಿ ಉದ್ಘಾಟಿಸಿದ ಬೆಂಗಳೂರು- ಎರ್ನಾಕುಲಂ ವಂದೇ ಭಾರತ್ ರೈಲಿನಿಂದ ಎರಡು ಗಂಟೆ ಉಳಿತಾಯ

ಬೆಂಗಳೂರು- ಎರ್ನಾಕುಲಂ ವಂದೇ ಭಾರತ್ ರೈಲಿನಿಂದ ಎರಡು ಗಂಟೆ ಉಳಿತಾಯ

Bengaluru- Ernakulam Vande Bharat Train: ಪ್ರಸ್ತುತ, ಎರ್ನಾಕುಲಂ ಮತ್ತು ಬೆಂಗಳೂರು ನಡುವಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್ 583 ಕಿ.ಮೀ ಮಾರ್ಗವನ್ನು ಕ್ರಮಿಸಲು 11 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೊಸ ವಂದೇ ಭಾರತ್ ರೈಲು ಈ ಪ್ರಯಾಣದ ಸಮಯವನ್ನು ಕೇವಲ 8 ಗಂಟೆ 40 ನಿಮಿಷಗಳಿಗೆ ಇಳಿಸಲಿದ್ದು, ಎರಡೂ ನಗರಗಳ ನಡುವೆ ವೇಗದ ಸಂಪರ್ಕವನ್ನು ಕಲ್ಪಿಸುತ್ತದೆ.

PM Narendra Modi: ನ.11ರಂದು ಪ್ರಧಾನಿ ನರೇಂದ್ರ ಮೋದಿ ಭೂತಾನ್‌ಗೆ

ನ.11ರಂದು ಪ್ರಧಾನಿ ನರೇಂದ್ರ ಮೋದಿ ಭೂತಾನ್‌ಗೆ

Narendra Modi Bhutan visit: ಭೂತಾನಿನ ಮಾಜಿ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಅವರ 70ನೇ ಜನ್ಮ ದಿನಾಚರಣೆಯ ಆಚರಣೆಯಲ್ಲಿಯೂ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಮೋದಿ ಅವರು ಥಿಂಪುವಿನ ತಾಶಿಚೋಡ್‌ಜಾಂಗ್‌ನಲ್ಲಿರುವ ಪವಿತ್ರ ಅವಶೇಷಗಳಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ ಮತ್ತು ಭೂತಾನ್ ಸರ್ಕಾರ ಆಯೋಜಿಸಿರುವ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಭೇಟಿಯು ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ವರ್ಧಿಸುವ ಮತ್ತು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲು, ಪರಸ್ಪರ ಆಸಕ್ತಿಯ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಎರಡೂ ಕಡೆಯವರಿಗೆ ಈ ಸಂದರ್ಭದಲ್ಲಿ ಅವಕಾಶ ಒದಗಲಿದೆ.

Bihar Election ground report by Raghav Sharma Nidle: ಪರ್ವತ ಪುರುಷನ ಪರಿವಾರ ಕೈ ಕಡೆ ವಾಲಿದ್ದೇಕೆ ?

ಪರ್ವತ ಪುರುಷನ ಪರಿವಾರ ಕೈ ಕಡೆ ವಾಲಿದ್ದೇಕೆ ?

ಬಿಹಾರದ ಗಯಾದಿಂದ ಅತ್ರಿ ವಿಧಾನಸಭೆ ವ್ಯಾಪ್ತಿಯ ಗೆಹ್ಲೋರ್ ಇತಿಹಾಸ ಪ್ರಸಿದ್ಧ ಸ್ಥಳ. ಈ ಹಳ್ಳಿ ವಿಶ್ವದ ಗಮನ ಸೆಳೆದಿದ್ದು ಬಿಹಾರದ ಪರ್ವತ ಪುರುಷ ದಶರಥ ಮಾಂಜಿ ಕಾರಣದಿಂದ. ಬರೀ ಸುತ್ತಿಗೆ ಮತ್ತು ಉಳಿ ಬಳಸಿ ೨೨ ವರ್ಷಗಳ ಕಾಲ ಗೆಹ್ಲೋರ್‌ನ ಬೃಹತ್ ಬೆಟ್ಟವನ್ನು ಏಕಾಂಗಿಯಾಗಿ ಕೊರೆದು ರಸ್ತೆ ನಿರ್ಮಾಣ ಮಾಡಿದ್ದ ಮಹಾನ್ ಪರ್ವತ ಪುರುಷ ಆತ.

Mohan Bhagwat: ಆರೆಸ್ಸೆಸ್‌ನ ಹಣದ ಮೂಲ ಇದು: ಮೋಹನ ಭಾಗವತ್‌ ಸ್ಪಷ್ಟನೆ

ಆರೆಸ್ಸೆಸ್‌ನ ಹಣದ ಮೂಲ ಇದು: ಮೋಹನ ಭಾಗವತ್‌ ಸ್ಪಷ್ಟನೆ

Rashtriya Swayamsevak Sangh: ಜನರ ಹೃದಯಗಳು ನಮ್ಮೊಂದಿಗಿವೆ. ಇಡೀ ಸಮಾಜವನ್ನು ಸಂಘಟಿಸುವುದು ನಮ್ಮ ಗುರಿ. ನಾವು ಇಲ್ಲಿ ದೋಷಗಳನ್ನು ಹುಡುಕಲು ಬಂದಿಲ್ಲ. ಇಡೀ ಹಿಂದೂ ಸಮಾಜವನ್ನು ಸಂಘಟಿಸುವ ಕಲ್ಪನೆಯನ್ನು ಜನರು ಅರ್ಥಮಾಡಿಕೊಳ್ಳುವುದು ಕಷ್ಟ. ಆರ್‌ಎಸ್‌ಎಸ್ ಸಮಾಜದಲ್ಲಿ ಅಧಿಕಾರ ಅಥವಾ ಪ್ರಾಮುಖ್ಯತೆಯನ್ನು ಬಯಸುವುದಿಲ್ಲ. ಭಾರತ ಮಾತೆಯ ಮಹಿಮೆಗಾಗಿ ಸಮಾಜವನ್ನು ಒಗ್ಗೂಡಿಸುವುದು ಮತ್ತು ಸಂಘಟಿಸುವುದು ನಮ್ಮ ಏಕೈಕ ಗುರಿ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

Loading...