ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ದಿನ ಭವಿಷ್ಯ- ಬುಧನ ಅನುಗ್ರಹ ಇಂದು ಈ‌ ರಾಶಿಗಳಿಗೆ ಒಳಿತು ಮಾಡಲಿದೆ!

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಧನುರ್ ತಿಥಿ, ಆಶ್ಲೇಷಾ ನಕ್ಷತ್ರದ ಸೆಪ್ಟೆಂಬರ್ 19ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಧನುರ್ ತಿಥಿ, ಆಶ್ಲೇಷಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಆಶ್ಲೇಷ ನಕ್ಷತ್ರದ ಅಧಿಪತಿ ಬುಧ ಆಗಿರುವುದರಿಂದ ಹೆಚ್ಚಿನ ರಾಶಿಗೆ ಇದರ ಪರಿಣಾಮ ಬೀರಲಿದೆ.‌ ಮೇಷ ರಾಶಿಯವರಿಗೆ ಈ‌ ದಿನ ಕಷ್ಟಕರವಾದ ದಿನ ಆಗಲಿದೆ. ಕೋರ್ಟ್, ವ್ಯವಹಾರ, ದಾಖಲಾತಿ ವ್ಯವಹಾರದಲ್ಲಿ ತೊಂದರೆ ಆಗಬಹುದು.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಅತ್ಯುತ್ತಮವಾದ ದಿನ ಆಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಇಷ್ಟಾರ್ಥ ಕೂಡ ಸಿದ್ದಿಯಾಗಲಿದೆ. ನೀವು ಮಾಡುವ ಎಲ್ಲ ಕೆಲಸದಲ್ಲೂ, ಕಾರ್ಯ ಕ್ಷೇತ್ರದಲ್ಲೂ ಯಶಸ್ಸು ಸಿಗಲಿದೆ. ಬಂಧು ಬಾಂಧವರಿಂದ ನಿಮಗೆ ಸಹಕಾರ ಕೂಡ ಪ್ರಾಪ್ತಿ ಯಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ನಿಮ್ಮ ಮನೆಯಲ್ಲಿ ಸಂಸಾರದ ವಿಚಾರದಲ್ಲಿ ನಾನಾ ರೀತಿಯ ಯೋಚನೆಗಳು ಬರಬಹುದು. ಸಂಸಾರದ ವಿಚಾರಗಳಿಗೆ ಧನವ್ಯಯ ಕೂಡ ಆಗಬಹುದು. ಹೆಚ್ಚಿನ ಖರ್ಚು ಉಂಟಾಗುವ ಸಾಧ್ಯತೆ ಇಂದು ಇರುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನ ಆಗಿರುತ್ತದೆ. ಹಿಂದಿನ ಮೂರು ದಿನದಲ್ಲಿ ಇದ್ದ ನೋವು ಮಯವಾಗಲಿದೆ. ಅತೀ ಖುಷಿಯಾದ ದಿನವೂ ನಿಮ್ಮದು ಆಗಿರುತ್ತದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಅಷ್ಟೊಂದು ನೆಮ್ಮದಿ ಇರುವುದಿಲ್ಲ. ಮುಖ್ಯವಾದ ಕೆಲವೊಂದು ಕೆಲಸದಲ್ಲಿ ಯಾವುದೇ ನಿರ್ಧಾರಗಳು ಬೇಡ. ಯಾವುದೇ ಮೀಟಿಂಗ್, ಇಮೇಲ್ ಯಾವುದು ಕಳಿಸುವುದು ಬೇಡ. ಯಾರಿಂದಲೂ ಸರಿಯಾದ ಸಹಕಾರ ಇಂದು ಸಿಗುವುದಿಲ್ಲ. ಮಿತೃತ್ವಗಳಲ್ಲಿ ಒಡಕು ಕೂಡ ಉಂಟಾಗಬಹುದು.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನ ವಾಗಿದೆ. ಮನಸ್ಸಿಗೆ ನೆಮ್ಮದಿ, ಇಷ್ಟಾರ್ಥ ಸಿದ್ದಿಯಾಗಲಿದೆ. ಮಿತ್ರರಿಂದ ಧನ ಆಗಮನ ಕೂಡ ಆಗಲಿದೆ.

ಇದನ್ನೂ ಓದಿ:Vastu tips: ಫ್ರಿಡ್ಜ್ ಮೇಲೆ ಇವುಗಳನ್ನು ಇಡಲೇಬಾರದು ಎನ್ನುತ್ತದೆ ವಾಸ್ತು

ತುಲಾ ರಾಶಿ: ತುಲಾ ರಾಶಿಯವರಿಗೆ ಕಾರ್ಯ ಕ್ಷೇತ್ರದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಮುಂದಿನ ದಿನಗಳ ಬಗ್ಗೆ ಅನೇಕ ಯೋಚನೆಗಳು ನಿಮಗೆ ಕಾಡಬಹುದು. ಅತೀ ಹೆಚ್ಚಿನ ಬೇಸರ‌ ಕೂಡ ನಿಮಗೆ ಉಂಟಾಗಬಹುದು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಭಾಗ್ಯೋದಯವಾದ ಅತ್ಯುತ್ತಮವಾದ ದಿನ ಆಗಲಿದೆ. ಆದರೂ ಭಗವಂತನ ಆಶೀರ್ವಾದ ಇಲ್ಲದೆ ಯಾವದೇ ಫಲ ಸಿಗುವುದಿಲ್ಲ. ಫಲ ಇದ್ದರೂ ಭಗವಂತನ ಪ್ರಾರ್ಥನೆ ಮಾಡದೇ ಇದ್ದಲ್ಲಿ ಲಕ್ಷ್ಮಿ ಕೂಡ ಒಲಿಯುವುದಿಲ್ಲ. ಹಾಗಾಗಿ ಈ ದಿನ ಭಗವಂತನ ಅನುಗ್ರಹ ಪಡೆಯಿರಿ

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಮನಸ್ಸಿಗೆ ಇಂದು ನೆಮ್ಮದಿ ಇರುವುದಿಲ್ಲ. ಅನೇಕ ವಿಚಾರ ದಲ್ಲಿ ಮನಸ್ಸಿಗೆ ಕ್ಲೇಷ ಉಂಟುಮಾಡಲಿದ್ದು ಖಿನ್ನತೆ, ಆತಂಕ ಎದುರಾಗಲಿದೆ .ಧ್ಯಾನಧಿಗಳನ್ನು ಮಾಡುವ ಮೂಲಕ ಸಮಯ ಕಳೆಯ ಬೇಕು.

ಮಕರ ರಾಶಿ: ಮಕರ ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನ ಆಗಲಿದೆ. ಎಲ್ಲ ಕೆಲಸದಲ್ಲೂ ಸಹಕಾರ ಪ್ರಾಪ್ತಿ ಯಾಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಉತ್ತಮವಾಗಲಿದ್ದು, ಸಾಮಾಜಿಕ ವ್ಯವಹಾರದಲ್ಲಿ ಆತ್ಮವಿಶ್ವಾಸ ಚೆನ್ನಾಗಿ ಇರಲಿದ್ದು ಶತ್ರು ನಾಶ ಆಗಲಿದೆ. ಆರೋಗ್ಯದಲ್ಲೂ ಸುಧಾರಣೆ ಕಂಡು ಬರಲಿದೆ

ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಸ್ವಲ್ಪ ಕ್ಷಿಷ್ಟಕರವಾದ ದಿನ ಆಗಲಿದೆ. ನಿಮ್ಮ ಬುದ್ದಿ ಅತೀ ಹೆಚ್ಚಿನ ಕೆಲಸ ಮಾಡಬಹುದು. ಇದರಿಂದ ನಿಮಗೂ ತೊಂದರೆ ಯಾಗಬಹುದು. ಬೇರೆ ಯವರಿಂದ ಇದಕ್ಕೆ ಸಮಸ್ಯೆಯಾಗಬಹುದು. ಹಾಗೇ ಮಿತೃತ್ವ ದಲ್ಲಿ ಒಡಕು ಆಗಬಹುದು..