ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಧಾರ್ಮಿಕ

Astro Tips: ಈ ಎಲ್ಲಾ ಗ್ರಹ ದೋಷಕ್ಕೆ ನವಿಲುಗರಿಯೇ ರಾಮಬಾಣ! ಹೇಗೆ ನೋಡಿ

ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ ನವಿಲು ಗರಿ

ನವಿಲುಗರಿ ಶ್ರೀ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಪವಿತ್ರ ಅಲಂಕಾರ. ಕೃಷ್ಣನ ಕೊಳಲಿನ ನಾದಕ್ಕೆ ಮರುಳಾದ ನವಿಲುಗಳ ಭಕ್ತಿಯ ಸಂಕೇತವಾಗಿ ಕೃಷ್ಣನು ತನ್ನ ಮುಕುಟದಲ್ಲಿ ಧರಿಸಿದ ನವಿಲುಗರಿಯನ್ನು, ವಾಸ್ತು ದೋಷ ನಿವಾರಣೆ, ಜಾತಕ ಹಾಗೂ ಗ್ರಹ ದೋಷ ಶಮನ, ಸಂಪತ್ತು, ಸಂತೋಷ ಮತ್ತು ಸಕಾರಾತ್ಮಕ ಶಕ್ತಿ ತರಲು ಸಹಾಯಕವಾದ ಮಂಗಳಕರ ವಸ್ತುವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ.

Horoscope Today January 22nd: ರಾಹುವಿನ ಪ್ರಭಾವ; ಈ‌ ರಾಶಿಯವರಿಗೆ ಶತ್ರುವಿನ ಕಾಟ ಹೆಚ್ಚು

ಈ ರಾಶಿಯವರು ಇಂದು ಎಚ್ಚರಿಕೆಯಿಂದಿರಿ!

ನಿತ್ಯ ಭವಿಷ್ಯ ಜನವರಿ 22, 2026: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ, ಶಿಶಿರ ಋತು, ಮಘೆ ಮಾಸ, ಶುಕ್ಷ ಪಕ್ಷ, ಚತುರ್ಥಿ ತಿಥಿ, ಶತಭಿಷಾ ನಕ್ಷತ್ರದ ಜನವರಿ 22ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Pavagada News: ಗುಜ್ಜನಡು ವೀರಾಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ನೆರವೇರಿದ ಭೂಮಿ ಪೂಜೆ

ಗುಜ್ಜನಡು ವೀರಾಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ನೆರವೇರಿದ ಭೂಮಿ ಪೂಜೆ

ಪಾವಗಡ ತಾಲೂಕಿನ ಐತಿಹಾಸಿಕ ಗುಜ್ಜನಡು ಗ್ರಾಮದಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ, ಶ್ರೀ ಲಕ್ಷ್ಮಿ ವೆಂಕಟೇಶ್ವರ ಹಾಗೂ ಶಿರಡಿ ಸಾಯಿಬಾಬಾ ನೂತನ ದೇವಾಲಯದ ಭೂಮಿ ಪೂಜೆ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳಿಂದ ನೆರವೇರಿತು.

Horoscope Today January 21st: ಕುಜನ ಪ್ರಭಾವ: ಈ ರಾಶಿಯವರಿಗೆ ಇಂದು ದಾಂಪತ್ಯದಲ್ಲಿ ಬಿರುಕು!

ಈ ರಾಶಿಗೆ ಇಂದು ಮುಖ್ಯ ಸಂಬಂಧದಲ್ಲೇ ಕಲಹ ಸಾಧ್ಯತೆ!

ನಿತ್ಯ ಭವಿಷ್ಯ ಜನವರಿ 21, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ,ತೃತೀಯ ತಿಥಿ ದನಿಷ್ಠ ನಕ್ಷತ್ರದ ಜನವರಿ 22ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

Vastu Tips: ವಿದ್ಯಾಭ್ಯಾಸದಲ್ಲಿ ನಿಮ್ಮ ಮಕ್ಕಳ ಏಕಾಗ್ರತೆ ಹೆಚ್ಚಾಗಬೇಕಾ? ಹಾಗಾದ್ರೆ ಅವರ  ಅಧ್ಯಯನದ ಟೇಬಲ್ ಮೇಲೆ ಈ ಒಂದು ವಸ್ತು ಇಡಿ

ಮಕ್ಕಳು ಓದುವಂತೆ ಮಾಡುವುದು ಹೇಗೆ.?

ಆಧುನಿಕ ಸ್ಪರ್ಧಾತ್ಮಕ ಜೀವನದಲ್ಲಿ ಪಾಲಕರ ನಿರೀಕ್ಷೆ ಮತ್ತು ಅಂಕಗಳ ಒತ್ತಡದಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡ, ನಿರಾಸೆ ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಯಶಸ್ಸಿಗೆ ಕೇವಲ ಶ್ರಮವಲ್ಲದೆ ಓದುವ ವಾತಾವರಣ, ಏಕಾಗ್ರತೆ ಮತ್ತು ಮನಸ್ಸಿನ ಸ್ಥಿತಿಯೂ ಮುಖ್ಯವಾಗಿದ್ದು, ವಾಸ್ತು ಶಾಸ್ತ್ರವು ಮಕ್ಕಳ ಅಧ್ಯಯನ ಹಾಗೂ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮಗೂ ನಿಮ್ಮ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಆಸೆ ಇದ್ದರೆ ಅವರ ಅಧ್ಯಯನ ಕೊಠಡಿಯನ್ನು ವಾಸ್ತು ಪ್ರಕಾರ ಹೀಗೆ ಇಡಿ

Varsha Bhavisya: 2026: ಕುಂಭ ರಾಶಿಯುವರಿಗೆ ಶನಿ ಕಾಟ! ಈ ಯಂತ್ರ ಧರಿಸಿದರೆ ಎಲ್ಲ ಸಮಸ್ಯೆಗಳೂ ಪರಿಹಾರ

ಈ ವರ್ಷ ಕುಂಭ ರಾಶಿಯವರಿಗೆ ಶನಿ ಕಾಟ !

2026ರಲ್ಲಿ ಗ್ರಹಗಳ ಮಹತ್ವದ ಸಂಚಾರದಿಂದ ಕುಂಭ ರಾಶಿಯವರ ಜೀವನದಲ್ಲಿ ಶನಿ ಪ್ರಭಾವ ಹೆಚ್ಚಾಗಲಿದೆ. ಶನಿಯಿಂದ ಕೆಲ ಸವಾಲುಗಳು ಎದುರಾದರೂ, ಶಿಸ್ತು, ಸಹನೆ ಮತ್ತು ಪರಿಶ್ರಮದಿಂದ ಅವನ್ನು ಜಯಿಸಬಹುದು. ಶನಿ ಕಾಟ ನಿವಾರಣೆಗೆ ದಾನ, ಶನಿ ಆರಾಧನೆ, ನಿಯಮಿತ ಪ್ರಾರ್ಥನೆ ಹಾಗೂ ಸತ್ಪಥದಲ್ಲಿ ನಡೆಯುವಂತೆ ಭಾರತೀಯ ಜೋತಿಷ್ಯ ವಿಜ್ಞಾನ ಸಂಶೋಧಕರಾದ ಮಹಾಬಲಮೂರ್ತಿ ಕೊಡ್ಲೆಕೆರೆ

Varsha Bhavisya:  ಎಚ್ಚರ; ಮಕರ ರಾಶಿಯವರಿಗೆ ಅಕ್ಟೋಬರ್ ಬಳಿಕ ಸಮಸ್ಯೆ ಎದುರಾಗಬಹುದು

ಮಕರ ರಾಶಿಯವರ ವರ್ಷ ಭವಿಷ್ಯ ಹೇಗಿದೆ?

2026ರಲ್ಲಿ ಶನಿ, ಗುರು, ರಾಹು–ಕೇತುಗಳ ಮಹತ್ವದ ಸಂಚಾರದಿಂದ ಮಕರ ರಾಶಿಯವರಿಗೆ ಜೀವನದ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ವೃತ್ತಿ ಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾದರೂ ಶ್ರಮಕ್ಕೆ ತಕ್ಕ ಫಲ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ಥಾನಮಾನ ವೃದ್ಧಿ, ಹೊಸ ಅವಕಾಶಗಳು ಲಭ್ಯವಾಗಬಹುದು.

Vastu Tips: ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟಿದ್ದೀರಾ? ಇಂದೇ ತೆಗೆದುಬಿಡಿ

ಈ ವಾಸ್ತು ಟಿಪ್ಸ್ ಪಾಲಿಸಿದ್ದರೆ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಿಕ್ಕುಗಳು ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಸರಿಯಾದ ದಿಕ್ಕಿನಲ್ಲಿ ಪ್ರವೇಶದ್ವಾರ, ಕೊಠಡಿಗಳು ಹಾಗೂ ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ಸುಖ, ಸಮೃದ್ಧಿ ಮತ್ತು ಶಾಂತಿ ದೊರೆಯುತ್ತದೆ. ಆದರೆ ಮನೆ ನಿರ್ಮಾಣದ ವೇಳೆ ವಾಸ್ತು ನಿಯಮಗಳನ್ನು ಪಾಲಿಸದೇ ಹೋದರೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸಿ ಅನೇಕ ತೊಂದರೆಗಳು ಮತ್ತು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

Horoscope Today January 20th: ಇಂದು ಶತ್ರುಗಳಿಂದ ದೂರವಿರಿ

ಇಂದು ಸ್ವಲ್ಪ ಜೋಪಾನ; ಶತ್ರುಗಳಿಂದ ದೂರವಿರಿ

ನಿತ್ಯ ಭವಿಷ್ಯ ಜನವರಿ 20, 2026: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು, ಮಘೆ ಮಾಸೆ, ಶುಕ್ಷ ಪಕ್ಷ, ದ್ವೀತಿಯ ತಿಥಿ ಶ್ರವಣ ನಕ್ಷತ್ರದ ಜನವರಿ 20ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Horoscope Today January 19th: ರವಿಯ ಪ್ರಭಾವದಿಂದ ಈ ರಾಶಿಯವರಿಗೆ ನಷ್ಟ

ಈ ರಾಶಿಯವರಿಗೆ ಇಂದು ಹಣಕಾಸಿನ ವ್ಯವಹಾರದಲ್ಲಿ ನಷ್ಟ

ನಿತ್ಯ ಭವಿಷ್ಯ ಜನವರಿ 19, 2026: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು, ಮಘೆ ಮಾಸೆ, ಶುಕ್ಷ ಪಕ್ಷ, ಪ್ರತಿಭಾ ತಿಥಿ, ಉತ್ತರಾಷಡ ನಕ್ಷತ್ರದ ಜನವರಿ 19ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಪರ್ಯಾಯ ಮಹೋತ್ಸವದಲ್ಲಿ ಮಿಂದೆದ್ದ ಉಡುಪಿ; ಸರ್ವಜ್ಞ ಪೀಠ ಏರಿದ ಶ್ರೀ ವೇದವರ್ಧನ ತೀರ್ಥರು

ಶಿರೂರು ಪರ್ಯಾಯ ಮಹೋತ್ಸವ ಸಂಭ್ರಮ

ದೇಗುಲನಗರಿ ಉಡುಪಿ ಪರ್ಯಾಯ ಸಂಭ್ರಮದಲ್ಲಿ ಮಿಂದೆದ್ದಿದೆ. ಜನವರಿ 18ರಂದು ಬೆಳಗಿನ ಜಾವ ಉಡುಪಿಯ ನೂತನ ಪರ್ಯಾಯ ಪೀಠಾಧೀಶ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಸರ್ವಜ್ಞಪೀಠವನ್ನು ಏರುವ ಮೂಲಕ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಮುಂದಿನ 2 ವರ್ಷಗಳ ತನಕ ಉಡುಪಿಯಲ್ಲಿ ಶ್ರೀಕೃಷ್ಣನ ಪೂಜೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

Astro Tips: ನೀವು ತುಳಸಿ ಮಾಲೆಯನ್ನು ಧರಿಸುತ್ತೀರಾ..?; ಹಾಗಾದ್ರೆ ತಪ್ಪದೇ ಈ ನಿಯಮಗಳನ್ನು ಪಾಲಿಸಿ

ತುಳಸಿ ಮಾಲೆಯೊಂದಿಗೆ ಈ ಸರವನ್ನು ಧರಿಸಬೇಡಿ

ತುಳಸಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಪೂಜೆ ಸಾಧ್ಯವಾಗದಿದ್ದರೂ, ತುಳಸಿಗೆ ನೀರು ಹಾಕಿ ದೀಪ ಹಚ್ಚುವುದು ಮನೆಗೆ ಶಾಂತಿ, ಸುಖ, ಐಶ್ವರ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ. ಶಾಸ್ತ್ರಗಳ ಪ್ರಕಾರ, ಮನೆಯ ಮುಂದೆ ತುಳಸಿ ಪೂಜೆ ಮಾಡುವಷ್ಟೇ ಪುಣ್ಯ ಫಲ ತುಳಸಿ ಮಾಲೆ ಧರಿಸುವುದರಿಂದಲೂ ಲಭಿಸುತ್ತದೆ. ತುಳಸಿ ಮಾಲೆ ಧರಿಸುವುದರಿಂದ ಮನಸ್ಸಿನ ಶುದ್ಧತೆ, ಭಕ್ತಿಭಾವ, ಆತ್ಮಶಾಂತಿ ಹಾಗೂ ದೈವಿಕ ರಕ್ಷಣೆಯ ಅನುಭವ ದೊರೆಯುತ್ತದೆ. ಆದರೆ ಇದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಶಿಸ್ತುಗಳನ್ನು ಸರಿಯಾಗಿ ಪಾಲಿಸುವುದು ಅತ್ಯಂತ ಅಗತ್ಯ; ಅವುಗಳನ್ನು ಉಲ್ಲಂಘಿಸಿದರೆ ಲಾಭಕ್ಕಿಂತ ನಷ್ಟವಾಗುವ ಸಾಧ್ಯತೆ ಇದೆ.

Vastu Tips: ಮನೆಯಲ್ಲಿ ಎಷ್ಟು ಮೆಟ್ಟಿಲುಗಳಿರಬೇಕು? ಸಮ ಸಂಖ್ಯೆ ಇದ್ದರೆ ಒಳ್ಳೆಯದೋ? ಬೆಸ ಸಂಖ್ಯೆ ಇದ್ದರೆ ಶುಭವೋ?

ಮನೆಯಲ್ಲಿ ಎಷ್ಟು ಮೆಟ್ಟಿಲುಗಳಿರಬೇಕು?

ವಾಸ್ತು ಪ್ರಕಾರ ಮನೆಯ ಮೆಟ್ಟಿಲುಗಳು ಸಂತೋಷ ಮತ್ತು ಶಾಂತಿಗೆ ಕಾರಣವಾಗುವುದಲ್ಲದೆ, ಹಣದ ಕೊರತೆಯನ್ನು ನಿವಾರಿಸುತ್ತದೆ. ಆದ್ದರಿಂದ ಮೆಟ್ಟಿಲುಗಳನ್ನು ನಿರ್ಮಿಸುವಾಗ ಅದರ ದಿಕ್ಕು, ಮೆಟ್ಟಿಲುಗಳ ಸಂಖ್ಯೆ ಹಾಗೂ ಅವುಗಳ ಕೆಳಭಾಗದ ವಿನ್ಯಾಸವನ್ನು ಗಮನಪೂರ್ವಕವಾಗಿ ಪರಿಗಣಿಸಬೇಕು. ಹಾಗಾದರೆ ವಾಸ್ತು ದೃಷ್ಟಿಯಿಂದ ಮನೆಯ ಮೆಟ್ಟಿಲುಗಳು ಹೇಗಿರಬೇಕು? ಯಾವ ರೀತಿಯ ಮೆಟ್ಟಿಲುಗಳು ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತವೆ ಎಂಬುದನ್ನು ನೋಡೋಣ.

Horoscope Today January 18th: ಶುಕ್ರನಿಂದ ಈ ರಾಶಿಗೆ ಇಂದು ಯಶಸ್ಸಿನ ಅಬ್ಬರ!

ಈ ರಾಶಿಯವರಿಗೆ ಇಂದು ಎಲ್ಲ ಕೆಲಸ ಕಾರ್ಯದಲ್ಲಿ ಯಶಸ್ಸು ಪ್ರಾಪ್ತಿ!

ನಿತ್ಯ ಭವಿಷ್ಯ ಜನವರಿ 18, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಹಿಮದೃತು ಪೌಸ ಮಾಸೆ, ಕೃಷ್ಣ ಪಕ್ಷದ, ಅಮಾವಾಸ್ಯ ತಿಥಿ ಪೂರ್ವಾಷಡ ನಕ್ಷತ್ರದ ಜನವರಿ 18ನೇ ತಾರೀಖಿನ ಭಾನುವಾರದ ಈ ದಿನ ಬುಧ ಮಕರ ರಾಶಿಯನ್ನು ಪ್ರವೇಶ ಮಾಡಿದ್ದಾನೆ. ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Astro Tips: ಶನಿವಾರ ಆಂಜನೇಯ ಸ್ವಾಮಿಗೆ ಈ ನೈವೇದ್ಯಗಳನ್ನು ಅರ್ಪಿಸಿದರೆ ಸಂಕಷ್ಟ ನಿವಾರಣೆ ಗ್ಯಾರಂಟಿ

ಹನುಮಂತನ ಅನುಗ್ರಹಕ್ಕಾಗಿ ಶನಿವಾರ ಹೀಗೆ ಮಾಡಿ

ಶನಿವಾರ ಆಂಜನೇಯ ಸ್ವಾಮಿಯ ಪೂಜೆಗೆ ಅತ್ಯಂತ ಶುಭ ದಿನ ಆಗಿದೆ. ಈ ದಿನಗಳಲ್ಲಿ ಲಡ್ಡು, ಹಣ್ಣುಗಳು, ಪಾಯಸ, ವೀಳ್ಯದೆಲೆ, ಬೆಲ್ಲ–ಹುರಿಗಡಲೆ, ತೆಂಗಿನಕಾಯಿ ಹಾಗೂ ಕೇಸರಿ ಬಾತ್‌ನಂತಹ ನೈವೇದ್ಯಗಳನ್ನು ಭಕ್ತಿಯಿಂದ ಅರ್ಪಿಸಿದರೆ ಸಂಕಷ್ಟಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇದೆ. ಆಂಜನೇಯ ಸ್ವಾಮಿಯ ಅನುಗ್ರಹದಿಂದ ಜೀವನದಲ್ಲಿ ಶಾಂತಿ, ಸಂತೋಷ, ಸುಖ–ಸಮೃದ್ಧಿ ಮತ್ತು ರಕ್ಷಣೆಯು ಲಭಿಸುತ್ತದೆ ಎನ್ನಲಾಗುತ್ತದೆ.

Horoscope Today January 17th: ಬುಧ ಮಕರ ಪ್ರವೇಶ; ಈ ರಾಶಿಗೆ ಇಂದು ಮುಟ್ಟಿದ್ದೆಲ್ಲಾ ಯಶಸ್ವಿಯಾಗುವ ಪರ್ವಕಾಲ!

ಈ ರಾಶಿಯವರಿಗೆ ಇಂದು ಈ ಮೂಲಗಳಿಂದ ಹಣಕಾಸಿನ ಲಾಭ!

ನಿತ್ಯ ಭವಿಷ್ಯ ಜನವರಿ 17, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಹಿಮದೃತು ಪೌಸ ಮಾಸೆ, ಕೃಷ್ಣ ಪಕ್ಷದ, ಚತುರ್ದಶಿ ತಿಥಿ ಮೂಲ ನಕ್ಷತ್ರದ ಜನವರಿ 17ನೇ ತಾರೀಖಿನ ಶನಿವಾರದ ಈ ದಿನ ಬುಧ ಮಕರ ರಾಶಿಯನ್ನು ಪ್ರವೇಶ ಮಾಡಿದ್ದಾನೆ. ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಮಧುಗಿರಿಯ ಶ್ರೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ; ಜ.22 ರಿಂದ ಫೆ. 4 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ

ಮಧುಗಿರಿ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ; ಜ.22ರಿಂದ ವಿವಿಧ ಕಾರ್ಯಕ್ರಮ

Madhugiri News: ಮಧುಗಿರಿ ಪಟ್ಟಣದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸ್ವಾಮಿಯವರ ಬ್ರಹ್ಮರಥೋತ್ಸವದ ಅಂಗವಾಗಿ ಜ.22 ರಿಂದ ಫೆ. 4 ರವರೆಗೆ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಈ ಕುರಿತ ವಿವರ ಇಲ್ಲಿದೆ.

Varsha Bhavisya: 2026: ಧನು ರಾಶಿಯವರ ಪ್ರೇಮ-ದಾಂಪತ್ಯ ಜೀವನದಲ್ಲಿ ಬಿರುಗಾಳಿ!

ಧನು ರಾಶಿಗೆ ಈ ವರ್ಷ ಎದುರಾಗಲಿದೆ ಕಷ್ಟಗಳ ಸರಮಾಲೆ

2026ರಲ್ಲಿ ಶನಿ, ಗುರು, ರಾಹು–ಕೇತುಗಳ ಗ್ರಹ ಸಂಚಾರದಿಂದ ಧನು ರಾಶಿಯವರ ಪ್ರೀತಿ–ಪ್ರೇಮ, ವ್ಯಾಪಾರ–ವ್ಯವಹಾರ ಹಾಗೂ ಕುಟುಂಬ ಜೀವನದಲ್ಲಿ ಮಹತ್ವದ ಬದಲಾವಣೆಗಳು ಕಂಡುಬರುವ ಸಾಧ್ಯತೆ ಇದೆ. ಹೊಸ ವರ್ಷದ ಈ ಗ್ರಹಸ್ಥಿತಿಗಳು ಧನು ರಾಶಿಯವರಿಗೆ ಸವಾಲುಗಳ ಜೊತೆಗೆ ಹೊಸ ಅವಕಾಶಗಳನ್ನೂ ತಂದೊಡ್ಡಲಿವೆ.

Chanakya Niti: ಚಾಣಕ್ಯ ನೀತಿ; ಶತ್ರುಗಳನ್ನು ಸೋಲಿಸಿ ಜೀವನದಲ್ಲಿ ಮುನ್ನಡೆಯಲು ಅನುಸರಿಸಬೇಕಾದ ಸೂತ್ರಗಳು ಇವು

ಶತ್ರುಗಳನ್ನು ಜಯಿಸಲು ಈ ಗುಣಗಳು ಅಗತ್ಯ ಅಂತಾರೆ ಚಾಣಕ್ಯ!

ಚಾಣಕ್ಯ ನೀತಿಯ ಪ್ರಕಾರ ಶತ್ರುಗಳು ಪ್ರತಿಯೊಬ್ಬರ ಜೀವನದಲ್ಲೂ ಸಹಜ. ಆದರೆ ಅವರನ್ನು ನಿರ್ಲಕ್ಷ್ಯ ಮಾಡುವುದೇ ಅತಿದೊಡ್ಡ ತಪ್ಪು. ಅವಕಾಶ ಸಿಕ್ಕ ತಕ್ಷಣ ಶತ್ರುಗಳು ತೊಂದರೆ ಕೊಡಲು ಯತ್ನಿಸುತ್ತಾರೆ. ಆದ್ದರಿಂದ ಶತ್ರುಗಳನ್ನು ಎದುರಿಸಿ ಜಯ ಸಾಧಿಸಲು ಚಾಣಕ್ಯನು ಹೇಳಿದ ಕೆಲವು ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳುವುದು ಅಗತ್ಯ.

Horoscope Today January 16th: ಇಂದು ಈ ರಾಶಿಯವರಿಗೆ ಹಿಂದೆಂದೂ ಕಾಣದಷ್ಟು ಅದೃಷ್ಟ

ಈ ರಾಶಿಯವರಿಗೆ ಇಂದು ಧನಾಗಮನ

ನಿತ್ಯ ಭವಿಷ್ಯ ಜನವರಿ 16, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ, ಹಿಮದೃತು ಪೌಸ ಮಾಸೆ, ಕೃಷ್ಣ ಪಕ್ಷದ, ಮೂಲ ನಕ್ಷತ್ರದ ಜನವರಿ 16ನೇ ತಾರೀಖಿನ ಈ ದಿನ ಕುಜ ಮಕರ ರಾಶಿಯನ್ನು ಪ್ರವೇಶ ಮಾಡಿದ್ದಾನೆ. ಹಾಗಾದರೆ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ; ಮಕರ ಸಂಕ್ರಾಂತಿಯಂದು ಜರುಗಿತು ವಿಸ್ಮಯ

ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ

ಮಕರ ಸಂಕ್ರಾಂತಿಯಂದು ಪ್ರಕೃತಿಯ ವಿಸ್ಮಯ ನಡೆದಿದ್ದು, ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನದ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಿದೆ. ಈ ಪುನೀತ ಕ್ಷಣವನ್ನು ಕಣ್ತುಂಬಿಕೊಂಡು ನೆರೆದಿದ್ದ ನೂರಾರು ಮಂದಿ ಪುನೀತರಾಗಿದ್ದಾರೆ. ದೇವಸ್ಥಾನದ ಆವರಣದಲ್ಲಿ ಎಲ್‌ಇಡಿ ಸ್ಕ್ರೀನ್​​ ವ್ಯವಸ್ಥೆ ಮಾಡಲಾಗಿಯಿತು.

Astro Tips: ಮನೆಯಲ್ಲಿ ಸಾಕುವ ಈ ಪ್ರಾಣಿಗಳು ನಿಮ್ಮ ಬದುಕನ್ನು ಬಂಗಾರ ಮಾಡುತ್ತದೆ ಅನ್ನುತ್ತದೆ ಶಾಸ್ತ್ರ..!

ಈ ಸಾಕು ಪ್ರಾಣಿಗಳು ಅದೃಷ್ಟವಂತೆ...!

ಶಾಸ್ತ್ರಗಳ ಪ್ರಕಾರ, ಮನೆಯಲ್ಲಿ ಕೆಲವು ಪ್ರಾಣಿಗಳನ್ನು ಪ್ರೀತಿಯಿಂದ ಸಾಕಿದರೆ ಧನಾಗಮನ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇಂತಹ ಪ್ರಾಣಿಗಳು ಮನೆಮಂದಿಯ ಜೀವನದಲ್ಲಿ ಸಮೃದ್ಧಿ, ಸಂತೋಷ ಮತ್ತು ನೆಮ್ಮದಿಯನ್ನು ತರಲು ಸಹಕಾರಿಯಾಗುತ್ತವೆ ಎಂದು ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳು ಹೇಳುತ್ತವೆ.

Makara Sankranti: ಎಲ್ಲೆಲ್ಲೂ ಸಂಕ್ರಾಂತಿ ಸಂಭ್ರಮ; ಭಾರತದ ವಿವಿಧೆಡೆ ಹೇಗೆ ಆಚರಣೆ ಮಾಡ್ತಾರೆ ಗೊತ್ತಾ?

ಭಾರತದ ಈ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಆಚರಣೆಯೇ ವಿಭಿನ್ನ!

ಮಕರ ಸಂಕ್ರಾಂತಿ ಹಬ್ಬಕ್ಕೆ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಹತ್ವವಿದ್ದು, ದೇಶದಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ವೈವಿಧ್ಯತೆಯಿಂದ ಸಮೃದ್ಧವಾಗಿರುವ ಭಾರತದಲ್ಲಿ, ಮಕರ ಸಂಕ್ರಾಂತಿಯನ್ನು ಪ್ರತಿ ರಾಜ್ಯದಲ್ಲಿ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತಿದ್ದು, ಕೆಲವು ಪ್ರಮುಖ ರಾಜ್ಯಗಳಲ್ಲಿ ಈ ಹಬ್ಬವನ್ನು ಹೇಗೆ ಆಚರಿಸುತ್ತಾರೆ ನೋಡೋಣ ಬನ್ನಿ.

Chanakya Niti: ಈ ಗುಣಗಳು ಇರುವವರು ಜೀವನದಲ್ಲಿ ಎಂತಹ ಸಂಕಷ್ಟಗಳು ಎದುರಾದರೂ ಗೆದ್ದು ಬರುತ್ತಾರೆ!

ಚಾಣಕ್ಯ ನೀತಿ: ಕಷ್ಟ ಬಂದಾಗ ವ್ಯಕ್ತಿಯ ಈ ಗುಣ ನೆರವಾಗುತ್ತದೆ!

ಚಾಣಕ್ಯ ನೀತಿಯ ಪ್ರಕಾರ, ಜೀವನದ ಕಠಿಣ ಸಂದರ್ಭಗಳಲ್ಲೇ ನಿಜವಾದ ಸ್ನೇಹಿತರು ಯಾರು ಮತ್ತು ನಮ್ಮೊಳಗಿನ ನಿಜವಾದ ಸಾಮರ್ಥ್ಯ ಏನು ಎಂಬುದು ತಿಳಿಯುತ್ತದೆ. ಸಂಕಷ್ಟದ ಸಮಯದಲ್ಲಿ ವ್ಯಕ್ತಿಯ ಬುದ್ಧಿಮತ್ತೆ, ಧೈರ್ಯ ಮತ್ತು ತೀರ್ಮಾನ ಶಕ್ತಿ ಪರೀಕ್ಷೆಗೆ ಒಳಗಾಗುತ್ತದೆ. ಆಚಾರ್ಯ ಚಾಣಕ್ಯನು ಸೂಚಿಸಿದ ಸಲಹೆಗಳನ್ನು ಅನುಸರಿಸಿದರೆ, ಯಾವುದೇ ಪರಿಸ್ಥಿತಿಯನ್ನಾದರೂ ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ.

Loading...