ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈಭವ್‌ ಸೂರ್ಯವಂಶಿ ಬ್ರಿಯಾನ್‌ ಲಾರಾ ಬಳಿ ಮಾತನಾಡಬೇಕೆಂದ ಅಂಬಾಟಿ ರಾಯುಡು!

ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಹಾಗೂ ವೆಸ್ಟ್‌ ಇಂಡೀಸ್‌ ದಿಗ್ಗಜ ಬ್ರಿಯಾನ್‌ ಲಾರಾ ಅವರು ಒಂದೇ ಶೈಲಿಯ ಬ್ಯಾಟಿಂಗ್‌ ಹೊಂದಿದ್ದಾರೆ. ಹಾಗಾಗಿ 14ರ ಪ್ರಾಯದ ಆಟಗಾರ ವಿಂಡೀಸ್‌ ದಿಗ್ಗಜನ ಬಳಿ ಉಪಯುಕ್ತ ಸಲಹೆಯನ್ನು ಪಡೆಯಬೇಕೆಂದು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು ಆಗ್ರಹಿಸಿದ್ದಾರೆ.

ವೈಭವ್‌ಗೆ ಮಹತ್ವದ ಸಲಹೆಯನ್ನು ನೀಡಿದ ರಾಯುಡು!

ವೈಭವ್‌ ಸೂರ್ಯವಂಶಿಗೆ ಸಲಹೆ ನೀಡಿದ ಅಂಬಾಟಿ ರಾಯುಡು.

Profile Ramesh Kote Aug 23, 2025 3:53 PM

ನವದೆಹಲಿ: ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದ 14ನೇ ವಯಸ್ಸಿನ ವೈಭವ್‌ ಸೂರ್ಯವಂಶಿಯನ್ನು (Vaibhav Suryavanshi) ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು (Ambati Rayudu) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವೈಭವ್‌ ಸೂರ್ಯವಂಶಿ ವಿಶೇಷ ಪ್ರತಿಭೆಯನ್ನು ತಮ್ಮ ಬ್ಯಾಟಿಂಗ್‌ನಲ್ಲಿ ಹೊಂದಿದ್ದಾರೆ. ಈ ಕಾರಣದಿಂದ ಅವರು ವೆಸ್ಟ್‌ ಇಂಡೀಸ್‌ ದಿಗ್ಗಜ ಬ್ರಿಯಾನ್‌ ಲಾರಾ ಅವರ ಬಳಿ ಉಪಯುಕ್ತ ಸಲಹೆಯನ್ನು ಪಡೆಯಬೇಕೆಂದು ಆಗ್ರಹಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುವ ಯುವ ಬ್ಯಾಟ್ಸ್‌ಮನ್ ಗುಜರಾತ್ ಟೈಟನ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಅದ್ಭುತ ಶತಕ ಗಳಿಸುವ ಮೂಲಕ ಸುದ್ದಿಯಾಗಿದ್ದರು. ಎಡಗೈ ಬ್ಯಾಟ್ಸ್‌ಮನ್ 38 ಎಸೆತಗಳಲ್ಲಿ ಏಳು ಬೌಂಡರಿ ಮತ್ತು 11 ಸಿಕ್ಸರ್‌ಗಳೊಂದಿಗೆ 101 ರನ್ ಗಳಿಸಿದ್ದರು. ಆ ಮೂಲಕ ರಾಜಸ್ಥಾನ್‌ ರಾಯಲ್ಸ್‌ ತಂಡ 210 ರನ್‌ಗಳ ಬೃಹತ್ ಗುರಿಯನ್ನು ಇನ್ನೂ 25 ಎಸೆತಗಳು ಬಾಕಿ ಇರುವಾಗ ತಲುಪಿತ್ತು.

Asia Cup 2025: ಏಷ್ಯಾಕಪ್‌ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ಗಳ ಪಟ್ಟಿ ಹೀಗಿದೆ

"ಅವರ ಬ್ಯಾಟಿಂಗ್ ವೇಗ ಅಸಾಧಾರಣ. ಅವರು ಉತ್ತಮವಾಗಬೇಕು. ಲಾರಾ ಅವರಂತಹ ಯಾರಾದರೂ... ಬಹುಶಃ ಹೋಗಿ ಅವರೊಂದಿಗೆ ಮಾತನಾಡಬೇಕು. ಅವರು ಇದೇ ರೀತಿಯ ಬ್ಯಾಟ್ ಲಿಫ್ಟ್ ಅನ್ನು ಸಹ ಹೊಂದಿದ್ದರು. ಆದ್ದರಿಂದ ನೀವು ಡಿಫೆಂಡ್ ಮಾಡುವಾಗ ಮತ್ತು ನೀವು ಮೃದುವಾದ ಕೈಯಿಂದ ಆಡುವಾಗ ಬ್ಯಾಟ್ ವೇಗವನ್ನು ಹೇಗೆ ನಿಯಂತ್ರಿಸಬೇಕೆಂದು ಅವರು ಕಲಿಯಬಹುದು. ಆದ್ದರಿಂದ ವೈಭವ್‌ ಅದನ್ನು ಕಲಿತರೆ, ಅವರು ಅಸಾಧಾರಣ ಪ್ರತಿಭೆಯಾಗುತ್ತಾರೆ," ಎಂದು ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ರಾಯುಡು ಹೇಳಿದ್ದಾರೆ.

Asia Cup 2025: ಏಷ್ಯಾಕಪ್‌ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ಗಳ ಪಟ್ಟಿ ಹೀಗಿದೆ

ವೈಭವ್‌ ಸೂರ್ಯವಂಶಿ ಅವರು ಅತ್ಯಂತ ಅಪರೂಪದ ಪ್ರತಿಭಾವಂತ ಹಾಗೂ ಅವರಿಗೆ ಸರಿಯಾದ ಹಾದಿಯಲ್ಲಿ ಮಾರ್ಗದರ್ಶನವನ್ನು ನೀಡಿದರೆ, ಅವರು ಮುಂದಿನ ದಿನಗಳಲ್ಲಿ ಅದ್ಭುತ ಆಟಗಾರ ಆಗಲಿದ್ದಾರೆ. ಅಲ್ಲದೆ ಜನರು ತಮ್ಮ ಬಗ್ಗೆ ಏನು ಮಾತನಾಡುತ್ತಾರೆಂಬುದರ ಕಡೆಗೆ ಯುವ ಬ್ಯಾಟ್ಸ್‌ಮನ್‌ ಗಮನವನ್ನು ನೀಡಬಾರದು ಎಂದು ಇದೇ ಸಿಎಸ್‌ಕೆ ಮಾಜಿ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ.

"ಇವರು ಒಂದೇ ಒಂದು ಅಂಶದ ಕಡೆಗೆ ಗಮನ ನೀಡಬೇಕು, ಅದೇನೆಂದರೆ ಅವರು ಜನರ ಮಾತುಗಳಿಗೆ ಕಿವಿ ಕೊಡಬಾರದು. ಜವರು ಮಾತಿಗೆ ಮನ್ನಣೆ ನೀಡಬಾರದು ಹಾಗೂ ತಮ್ಮ ಪ್ರತಿಭೆಯನ್ನು ಬೆಂಬಲಿಸಬೇಕು. ಇನ್ನು ಕೋಚ್‌ಗಳು ಕೂಡ ಜಾಸ್ತಿ ಸಲಹೆಗಳನ್ನು ಯುವ ಬ್ಯಾಟ್ಸ್‌ಮನ್‌ಗೆ ನೀಡಬಾರದು," ಎಂದು ಅಂಬಾಟಿ ರಾಯುಡು ತಿಳಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ದ ಯೂಥ್‌ ಟೆಸ್ಟ್‌ನಲ್ಲಿ ವಿಶೇಷ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ಎರಡನೇ ವೇಗದ ಶತಕವನ್ನು ಸಿಡಿಸಿದ್ದ ವೈಭವ್‌ ಸೂರ್ಯವಂಶಿ

ವೈಭವ್‌ ಸೂರ್ಯವಂಶಿ ಅವರು ಕಳೆದ ಐಪಿಎಲ್‌ ಟೂರ್ನಿಯಲ್ಲಿ ಎರಡನೇ ಅತ್ಯಂತ ವೇಗದ ಶತಕವನ್ನು ಭಾರಿಸಿದ್ದರು. ಅವರು ಕೇವಲ 35 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು.ಆ ಮೂಲಕ ಕ್ರಿಸ್‌ ಗೇಲ್‌ ಬಳಿಕ ಐಪಿಎಲ್‌ನಲ್ಲಿ ವೇಗದ ಶತಕವನ್ನು ಸಿಡಿಸಿದ ಬ್ಯಾಟರ್‌ ಎನಿಸಿಕೊಂಡಿದ್ದರು. ಅಲ್ಲದೆ ಭಾರತದ ಮೊದಲ ಬ್ಯಾಟ್ಸ್‌ಮನ್‌ ಆಗಿದ್ದರು. ಆ ಮೂಲಕ ಯೂಸಫ್‌ ಪಠಾಣ್‌ ಅವರ ದಾಖಲೆಯನ್ನು ವೈಭವ್‌ ಸೂರ್ಯವಂಶಿ ಮುರಿದಿದ್ದಾರೆ.