ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Belle Chandrashekher Shetty Column: ಸರ್ಕಾರಿ ನೌಕರರ ಹೊಸ ಪಿಂಚಣಿ ಯೋಜನೆಯೊಂದು ಪರ್ಯಾಯ ಯೋಚನೆ

ಯಾವುದೇ ದುಡಿಯುವ ನೌಕರರಿಗೆ ಅವರು ನಿವೃತ್ತಿ ಹೊಂದಿದಾಗ ಗೌರವಯುತ ಜೀವನ ಸಾಗಿಸಲು ಪಿಂಚಣಿ ತೀರಾ ಅಗತ್ಯ. ಪಿಂಚಣಿ ನೌಕರರಿಗೆ ಮಾಲೀಕ ಅಥವಾ ಸರಕಾರ ನೀಡುವ ಉಪಕಾರ ಅಥವಾ ದಾನವಲ್ಲ; ಅದು ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ನಿವೃತ್ತಿ ನಂತರ ಜೀವಿಸಲು ಪಾವತಿಸುವ ಬದ್ಧತೆಯ ಆದಾಯವೆಂದು ನಮ್ಮ ದೇಶದ ಘನ ಸರ್ವೋಚ್ಛ ನ್ಯಾಯಾಲಯವು ಹಲವು ಬಾರಿ ತೀರ್ಪಿನಲ್ಲಿ ಘೋಷಿಸಿದೆ.

ಸರ್ಕಾರಿ ನೌಕರರ ಹೊಸ ಪಿಂಚಣಿ ಯೋಜನೆಯೊಂದು ಪರ್ಯಾಯ ಯೋಚನೆ

Profile Ashok Nayak Jun 10, 2025 11:39 AM

ಸರಕಾರಿ ಸಮಾಚಾರ

ಬೆಳ್ಳೆ ಚಂದ್ರಶೇಖರ ಶೆಟ್ಟಿ

ಕೇಂದ್ರ ಮತ್ತು ರಾಜ್ಯ ಸರಕಾರದ ನೌಕರರು 2004ರ ಹಿಂದೆ ಜಾರಿಯಲ್ಲಿದ್ದ ಹಳೆ ಪಿಂಚಣಿ ನಿಯಮಾವಳಿ (Old Pension Rules)ಯನ್ನೇ ಪುನಃ ಜಾರಿಗೊಳಿಸಬೇಕೆಂಬ ಒತ್ತಾಯವನ್ನು ಸರಕಾ ರದ ಮೇಲೆ ತರುತ್ತಿದ್ದಾರೆ. ಕೆಲವು ರಾಜ್ಯಗಳು ಹೊಸ ಪಿಂಚಣಿ ಯೋಜನೆಯನ್ನು( NPS) ವಾಪಸ್ಸು ಪಡೆದು ನೌಕರರ ಒತ್ತಾಯಕ್ಕೆ, ಮತ ಪಡೆಯುವ ದೂರಾಲೋಚನೆಯಿಂದ ಹಿಂದೆ ಮುಂದೆ ಯೋಚಿಸದೆ ವಾಪಸ್ ಪಡೆದು ರಾಜ್ಯದ ಸರಕಾರಿ ನೌಕರರಿಗೆ ಹಳೆ ಪಿಂಚಣಿ ನಿಯಮಾವಳಿ ಯನ್ನೇ ಪುನಃ ಜಾರಿಗೊಳಿಸಿವೆ.

ಇನ್ನೂ ಹಲವು ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಮತಗಳಿಕೆಯ ಅಸ್ತ್ರವಾಗಿ ತಮ್ಮ ಪಕ್ಷ ಆಡಳಿತಕ್ಕೆ ಬಂದರೆ ಹಳೆ ಪಿಂಚಣಿ ಯೋಜನೆಯನ್ನು ಪುನಃ ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿವೆ. ಕೇಂದ್ರ ಸರಕಾರವೂ ಇದಕ್ಕೆ ಹೊರತಾಗಿಲ್ಲ. ಕರ್ನಾಟಕ ಸರಕಾರವೂ ಸಹ ನೌಕರರ ಬೇಡಿಕೆಗೆ ಸ್ಪಂದಿಸಿ ಹಳೆ ಪಿಂಚಣಿ ಯೋಜನೆಯನ್ನು ಪುನಃ ಜಾರಿಗೆ ತರುವಲ್ಲಿ ಆಗಬಹುದಾದ ಗುಣಾವಗುಣಗಳ ಅಧ್ಯಯನ ಕೈಗೊಂಡು ವರದಿ ಸಲ್ಲಿಸಲು eಪನವನ್ನು ಹೊರಡಿಸಿದೆಯಾದರೂ ಹಳೆ ಪಿಂಚಣಿ ಯೋಜನೆಯನ್ನು ಪುನಃ ತರುವ ಖಾತ್ರಿಯನ್ನಂತೂ ನೀಡಿಲ್ಲ.

ಈ ಕ್ರಮವು ಸದ್ಯಕ್ಕೆ ತಕ್ಕ ಮಟ್ಟಿಗೆ ನೌಕರರು ಕಾಯುವ ತಾಳ್ಮೆಗೆ ಒಳಪಡುವಂತಾಗಿದೆ. ಸರಕಾರಗಳು ರಚಿಸಿರುವ ಸಮಿತಿಯಲ್ಲಿ ಸರಕಾರದ ವೇತನ-ಸೌಲಭ್ಯ ಪಡೆಯುವ ಅಧಿಕಾರಿಗಳೇ ಸದಸ್ಯರಾಗಿ ದ್ದಾರೆ. ಆರ್ಥಿಕ-ಸಾಮಾಜಿಕ, ಆಡಳಿತ ವಿಷಯತಜ್ಞರಾಗಲಿ ಅಥವಾ ಪರಿಣಿತ ಸ್ವತಂತ್ರ ಸದಸ್ಯ ರಾಗಲೀ ಈ ಸಮಿತಿಯಲ್ಲಿಲ್ಲ.

ಯಾವುದೇ ದುಡಿಯುವ ನೌಕರರಿಗೆ ಅವರು ನಿವೃತ್ತಿ ಹೊಂದಿದಾಗ ಗೌರವಯುತ ಜೀವನ ಸಾಗಿಸಲು ಪಿಂಚಣಿ ತೀರಾ ಅಗತ್ಯ. ಪಿಂಚಣಿ ನೌಕರರಿಗೆ ಮಾಲೀಕ ಅಥವಾ ಸರಕಾರ ನೀಡುವ ಉಪಕಾರ ಅಥವಾ ದಾನವಲ್ಲ; ಅದು ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ನಿವೃತ್ತಿ ನಂತರ ಜೀವಿಸಲು ಪಾವತಿಸುವ ಬದ್ಧತೆಯ ಆದಾಯವೆಂದು ನಮ್ಮ ದೇಶದ ಘನ ಸರ್ವೋಚ್ಛ ನ್ಯಾಯಾ ಲಯವು ಹಲವು ಬಾರಿ ತೀರ್ಪಿನಲ್ಲಿ ಘೋಷಿಸಿದೆ.

ವರಮಾನ ಕಾಯ್ದೆಯಡಿಯಲ್ಲಿಯೂ ಪಿಂಚಣಿಯನ್ನು ವೇತನವೆಂದೇ ಪರಿಗಣಿಸಲಾಗಿದೆ. ನಮ್ಮ ದೇಶದಲ್ಲಿ ಜನವರಿ 2004ರಿಂದ ಕೇಂದ್ರ ಸರಕಾರಿ ನೌಕರರಿಗೆ ಹಾಗೂ ಇತರೆ ರಾಜ್ಯಗಳಲ್ಲಿ ನಂತರದ ದಿನಾಂಕದಿಂದ (ಕರ್ನಾಟಕದಲ್ಲಿ ಏಪ್ರಿಲ್ 2006ರಿಂದ) ಎನ್‌ಪಿಎಸ್ ಜಾರಿಗೆ ಬಂದಿದೆ. ಇಂತಹ ದಿನಾಂಕದ ನಂತರ ಸೇವೆಗೆ ಸೇರುವ ಎಲ್ಲ ಸರಕಾರಿ ನೌಕರರಿಗೆ ಇದು ಅನ್ವಯಿಸುತ್ತದೆ.

ಇದನ್ನೂ ಓದಿ: IPL Trophy: IPL​ ಟ್ರೋಫಿ ಮೇಲೆ ಸಂಸ್ಕೃತ ಶ್ಲೋಕ; ಏನಿದರ ಅರ್ಥ ನಿಮಗೆ ಗೊತ್ತಾ?

ಹಳೆ ಪಿಂಚಣಿ ನಿಯಮಾವಳಿಯಲ್ಲಿ 15 ವರ್ಷಗಳ ಸೇವೆ ಪೂರೈಸಿದ ಸರಕಾರಿ ನೌಕರರು ಅವರು ಸಲ್ಲಿಸಿರುವ ಸೇವಾವಽ ಅವಲಂಬಿಸಿ ಪ್ರತಿ ತಿಂಗಳೂ ಪಿಂಚಣಿ ಪಡೆಯಲು ಅರ್ಹರಾಗುತ್ತಾರಲ್ಲದೆ ವರ್ಷದಲ್ಲಿ ಆರು ತಿಂಗಳಿಗೊಮ್ಮೆ ಗ್ರಾಹಕ ಬೆಲೆ ಸೂಚ್ಯಂಕನುಸಾರ ಸೇವೆಯಲ್ಲಿರುವ ನೌಕರರಿಗೆ ನೀಡಿದ ದರದಂತೆಯೇ ತುಟ್ಟಿಭತ್ಯೆಯನ್ನೂ ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ಸೇವೆಯಲ್ಲಿದ್ದಾಗ ಅಥವಾ ನಿವೃತ್ತಿಯ ನಂತರ ನಿಧನರಾಗುವ ನೌಕರನ/ಳ ಪತ್ನಿ/ಪತಿಯೂ ಸಹ ಜೀವನಪರ್ಯಂತ ನಿಗದಿತ ಕುಟುಂಬ ಪಿಂಚಣಿಗೆ ಅರ್ಹರಾಗುತ್ತಾರೆ.

ಹಳೆ ಪಿಂಚಣಿ ನಿಯಮಾವಳಿಯಲ್ಲಿ ಸೇವಾವಧಿ ಪೂರ್ತಿ ಹಾಗೂ ನಂತರವೂ ಪಿಂಚಣಿ/ಕುಟುಂಬ ಪಿಂಚಣಿಗೆ ನೌಕರರಿಂದ ಯಾವುದೇ ವಂತಿಕೆ ಪಡೆಯಲಾಗುವುದಿಲ್ಲ. ಸಂಪೂರ್ಣವಾಗಿ ಸರಕಾರವೇ ಖಜಾನೆಯಿಂದ ಭರಿಸುತ್ತದೆ. ಹಳೆ ಪಿಂಚಣಿ ನಿಯಮಾವಳಿಯಲ್ಲಿ ನೌಕರರ ಪಿಂಚಣಿ-ಕುಟುಂಬ ಪಿಂಚಣಿಯ ವೆಚ್ಚ ಪೂರ್ಣವಾಗಿ ಸರಕಾರವೇ ಭರಿಸುವ ವೆಚ್ಚವು ಬೃಹದಾಕಾರವಾಗಿ ಹಿಗ್ಗುತ್ತಾ ಸರಕಾರದ ಆಯವ್ಯಯದ ಬಹುಪಾಲು ನಿಧಿಯನ್ನು ಈ ಬಾಬತ್ತಿಗೇ ಮೀಸಲಾಗಿಡಬೇಕಾಗುತ್ತದೆ.

ಈ ರೀತಿ ನಿವೃತ್ತಿ ನಂತರವೂ ಸರಕಾರವೇ ನೌಕರರಿಗೆ ಪಿಂಚಣಿ/ಕುಟುಂಬ ಪಿಂಚಣಿ ವೆಚ್ಚವನ್ನು ಭರಿಸುವ ಬದ್ಧತೆಯ ವ್ಯವಸ್ಥೆ ಇತರೆ ಪ್ರಗತಿಪರ ದೇಶಗಳಲ್ಲಿ ಕಂಡುಬರುವುದಿಲ್ಲ. ನಿವೃತ್ತಿಯ ನಂತರ ಸರಕಾರವೇ ನಿವೃತ್ತರನ್ನು ಪೊರೆಯುವ ವ್ಯವಸ್ಥೆ ಹಲವು ದೇಶಗಳಲ್ಲಿ ಇದೆಯಾದರೂ , ನೌಕರರ ಸೇವಾವಽಯಲ್ಲಿ ಅವರ ವೇತನದಿಂದ ಯಾವುದೇ ವಿನಾಯಿತಿಯಿಲ್ಲದೆ ತೆರಿಗೆಯ ರೂಪ ದಲ್ಲಿ ಎಲ್ಲರಿಂದಲೂ ಹಣವನ್ನು ಮುಂದಾಲೋಚನೆಯಿಂದ ಪಡೆದಿರುತ್ತವೆ.

ಆದರೆ ನಮ್ಮ ದೇಶದಲ್ಲಿ ಸರಕಾರೇತರ ನೌಕರರ ಹೊರತಾಗಿ ಸರಕಾರಿ ನೌಕರರಿಂದ ಅವರ ನಿವೃತ್ತಿ ನಂತರದ ಭವಿಷ್ಯದ ಪಾಲನೆಗಾಗಿ ಯಾವುದೇ ವಂತಿಗೆಯನ್ನು 2004ರಲ್ಲಿ ಎನ್‌ಪಿಎಸ್ ಜಾರಿಗೆ ಬರುವವರೆಗೂ ಪಡೆಯದೇ ಸರಕಾರವೇ ಪೂರ್ತಿಯಾಗಿ ಭರಿಸುತಿತ್ತು. ನೌಕರರ ಸಂಖ್ಯೆ, ವೇತನ, ಪಿಂಚಣಿ, ಕುಟುಂಬ ಪಿಂಚಣಿಗಳ ಮೊತ್ತವೂ ಒಂದೇ ಸಮನೆ ಏರುತ್ತ ನಿವೃತ್ತರ ಜೀವಿತಾವಧಿ, ಪಿಂಚಣಿ-ಕುಟುಂಬ ಪಿಂಚಣಿದಾರರ ಸಂಖ್ಯೆಯ ಏರಿಕೆಯಿಂದ ಆಯವ್ಯಯದ ಬಹುಭಾಗವನ್ನು ಇದಕ್ಕಾಗಿಯೇ ಕಾದಿರಿಸಬೇಕಾದ ಪರಿಸ್ಥಿತಿ ತಲೆದೋರಿತಲ್ಲದೆ ಪಿಂಚಣಿದಾರರ ಸಂಖ್ಯೆಯು ಸೇವೆಯಲ್ಲಿರುವ ನೌಕರರ ಸಂಖ್ಯೆಯನ್ನೇ ಮೀರಬಹುದೆಂಬ ಸೂಚನೆ ಸಿಕ್ಕಾಗ ಸರ್ಕಾರ ಈ ಬಗ್ಗೆ ಸೂಕ್ತ ಬದಲಿ ಯೋಜನೆಯೊಂದರಿಂದ ಕಡಿವಾಣ ಹಾಕುವ ಪ್ರಮೇಯ ಸಾರ್ವಜನಿಕರ ಹಿತದೃಷ್ಟಿ ಯಿಂದ ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ ಉದ್ಭವಿಸಿದ್ದೇ 2004ರ ರಾಷ್ಟ್ರೀಯ ಪಿಂಚಣಿ ಯೋಜನೆ.

ಎನ್‌ಪಿಎಸ್ ಯೋಜನೆ ಜಾರಿಯಾದ ದಿನಾಂಕದಿಂದ ಸೇವೆಗೆ ಸೇರುವ ಪ್ರತಿ ಸರಕಾರಿ ನೌಕರನೂ ತನ್ನ ಮಾಸಿಕ ವೇತನದ (ಮೂಲವೇತನ ಮತ್ತು ತುಟ್ಟಿ ಭತ್ಯೆ ಸೇರಿ) ಶೇ.10 ನೌಕರರ ಪಾಲಿನ ವಂತಿಕೆಯನ್ನೂ ಮತ್ತು ಸರಕಾರವು ಅದೇ ರೀತಿ ಶೇ.10 ತನ್ನ ಪಾಲಿನ ವಂತಿಕೆಯನ್ನು (ಪ್ರಸಕ್ತ ಅದನ್ನು ಶೇ.14ಕ್ಕೆ ಹೆಚ್ಚಿಸಲಾಗಿದೆ) ನೀಡಿ ನಿಽಯನ್ನು ಸ್ಥಾಪಿಸಬೇಕು. ಈ ನಿಧಿಯ ಉಸ್ತುವಾರಿಯ ನಿರ್ವಹಣೆಗೆ ‘ವ್ಯವಸ್ಥಾಪಕ’(ಫಂಡ್ ಮ್ಯಾನೇಜರ್) ಸಂಸ್ಥೆಗೆ ವಹಿಸಬೇಕು.

ನೌಕರನು ನಿವೃತ್ತಿ ಹೊಂದಿದಾಗ/ಸೇವೆಯಿಂದ ಮುಕ್ತಿ ಹೊಂದಿದಾಗ ಆತನ ಖಾತೆಯಲ್ಲಿರುವ ಒಟ್ಟು ಹಣದ ಶೇಕಡಾ 60 ರಷ್ಟನ್ನು ಪಡೆಯಬಹುದು. ಉಳಿದ ಶೇ.40 ಆತನ ಪಿಂಚಣಿ ಪಾವತಿಗೆ ವಿನಿಯೋಗಿಸಲು ಉಪಯೋಗಿಸಲಾಗುವುದು. ಈ ಯೋಜನೆಯಲ್ಲಿಯ ಪಿಂಚಣಿ ನಿಧಿಯ ಮೊತ್ತವನ್ನು ಷೇರುಗಳಲ್ಲಿ ತೊಡಗಿಸುವುದರಿಂದ ಅದರ ಮೌಲ್ಯವು ಮಾರುಕಟ್ಟೆ ಏರಿಳಿತಕ್ಕೊಳ ಪಟ್ಟು ಅಸಲು ಮೊತ್ತಕ್ಕೆ ಸಂಚಕಾರ ಬರಬಹುದೆಂಬ ಅನುಮಾನ ಸಹಜವಾಗಿಯೇ ನೌಕರರನ್ನು ಚಿಂತಿಸುವಂತೆ ಮಾಡಿದೆ.

ನೌಕರ ನಿವೃತ್ತಿಯಾದಾಗ ಅಥವಾ ನಿಧನ ಹೊಂದಿದಾಗ ಲಭಿಸುವ ಇಡುಗಂಟು ಹಾಗೂ ಲಭಿಸುವ ಪಿಂಚಣಿ, ಕುಟುಂಬ ಪಿಂಚಣಿಯ ಮೊತ್ತಕ್ಕೆ ಯೋಜನೆಯಲ್ಲಿ ಸ್ಪಷ್ಟತೆಯಿಲ್ಲ. ಸೇವಾವಧಿ ಮುಗಿದ ನಂತರ ಜೀವನಾವಶ್ಯಕ ಮಾಸಿಕ ಆದಾಯದ ಖಾತ್ರಿ ಸ್ಪಷ್ಟತೆಯಿಂದ ತನ್ನ ನಿವೃತ್ತ ಜೀವನವನ್ನು ರೂಪಿಸಿಕೊಳ್ಳುವಲ್ಲಿ ನೆರವಾಗುವಂತಿರಬೇಕು.

ಆದರೆ ಸರಕಾರದ ಎನ್‌ಪಿಎಸ್ ಎಡವಿದ್ದೇ ಇಲ್ಲಿ. ನೌಕರರಿಗೆ ಅನ್ವಯಿಸುವ ಅಥವಾ ಹೊಸದಾಗಿ ಜಾರಿಗೊಳಿಸಲಾಗುವ ಸೇವಾ ಸವಲತ್ತು ನಿಯಮಾವಳಿಗಳ ಬಗ್ಗೆ ನೌಕರರ ವಿಶ್ವಾಸ ಮತ್ತು ನಂಬಿಕೆ ಯನ್ನು ಸರಕಾರ ಗಳಿಸಿರಬೇಕು. ಹೊರಗಿನ ಸಂಸ್ಥೆ ಫಂಡ್ ವ್ಯವಸ್ಥಾಪಕರ ಬದಲಿಗೆ ಸರಕಾರದ ಸೌಮ್ಯದ ಸಂಸ್ಥೆಯೇ ಆಗಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆಗೆ ಇದನ್ನು ವಹಿಸಿ ನೌಕರರ ವಿಶ್ವಾಸ ಪಡೆಯಬಹುದಿತ್ತು.

ನೌಕರರ ಭವಿಷ್ಯನಿಧಿ ಮತ್ತು ಇತರೆ ಸೌಲಭ್ಯಗಳ ಕಾಯ್ದೆ-1952- ದೇಶದ ಸರಕಾರಿ ಮತ್ತು ಖಾಸಗಿ ಉದ್ಯೋಗಿಗಳ ಸಾಮಾಜಿಕ ಭದ್ರತೆಯ ಪ್ರಮುಖ ಕಾನೂನು. ಇದರಲ್ಲಿ ಪಿಂಚಣಿ, ಕುಟುಂಬ ಪಿಂಚಣಿ, ಮಕ್ಕಳ ಪಿಂಚಣಿ, ಸೌಲಭ್ಯಗಳಲ್ಲದೆ ಸ್ವಂತ ಮನೆ ಹೊಂದಲು, ಮಕ್ಕಳ ಶಿಕ್ಷಣ,ಮದುವೆ, ವೈದ್ಯಕೀಯ ವೆಚ್ಚಕ್ಕಾಗಿ ಮುಂಗಡ ಪಡೆಯಲು ಅವಕಾಶವಿರುವುದಲ್ಲದೆ, ಚಂದಾದಾರ ನೌಕರನು ಸೇವಾವಽಯಲ್ಲಿ ನಿಧನ ಹೊಂದಿದರೆ ಯಾವುದೇ ಕನಿಷ್ಠ ಅವಧಿಯ ಸೇವೆ ಸಲ್ಲಿಸಬೇಕೆಂಬ ಷರತ್ತಿಲ್ಲದೆ ಠೇವಣಿ-ಜೋಡಿತ ವಿಮೆ (ಉಈಔಐ) ಯೋಜನೆಯಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂ.ಗಳ ಸೌಲಭ್ಯವೂ ಉಂಟು.

ವಿಮೆ ಸೌಲಭ್ಯಕ್ಕೆ ನೌಕರನಿಂದ ಯಾವುದೇ ವಂತಿಕೆ ಇರುವುದಿಲ್ಲ. ಅಲ್ಲದೆ ನೌಕರನು ನಿವೃತ್ತಿ ಸಂದರ್ಭದಲ್ಲಿ ಖಾತೆಯಲ್ಲಿರುವ ಪಾವತಿಸಿದ ಪೂರಾ ಮೊತ್ತವನ್ನು ಜತೆಗೆ ಮಾಲೀಕನು ಭವಿಷ್ಯ ನಿಧಿ ಲೆಕ್ಕಕ್ಕೆ ಪಾವತಿಸಿದ ಶೇ.3.67 ಮೊತ್ತವನ್ನು ಬಡ್ಡಿ ಸಮೇತ ಸೇರಿಸಿ ನೀಡಲಾಗುತ್ತದೆ. ದೇಶಾ ದ್ಯಂತ ಕಾರ್ಖಾನೆಗಳಲ್ಲಿ, ಅಂಗಡಿ ವಾಣಿಜ್ಯೋದಮಗಳಲ್ಲಿ ಶೇ.22ರಷ್ಟು ದುಡಿಯುವ ನೌಕರರಿಗೆ ಅನ್ವಯಿಸುತ್ತಿರುವ ಈ ಕಾಯ್ದೆಯನ್ನು ಸರಕಾರಿ ನೌಕರರಿಗೆ ಅನ್ವಯಿಸಿ ವಿಸ್ತರಿಸಲು ಮೂಲ ಕಾಯಿದೆಗೆ ಕೆಲವು ತಿದ್ದುಪಡಿಯ ಅವಶ್ಯಕವಿದೆ.

‘ಸಂಸ್ಥೆ’ ಯ ವ್ಯಾಖ್ಯಾನಕ್ಕೆ ಸರಕಾರಿ ನೌಕರರನ್ನೂ ’ನೌಕರ’ ಎಂದು ಸೇರಿಸಬೇಕು. ಕಾಯ್ದೆ ಗೊಳಪಡಿಸುವಲ್ಲಿ ವೇತನದ ಯಾವುದೇ ಮಿತಿಯಿರದೆ ಎಲ್ಲರಿಗೂ ಅನ್ವಯಿಸುವಂತಿರಬೇಕು. (ಪ್ರಸಕ್ತ, ಮೂಲವೇತನ ಮತ್ತು ತುಟ್ಟಿ ಭತ್ಯೆ ಸೇರಿ 15000 ರು.ಗಳ ಮಿತಿಯಿದೆ.) ಇದು ಸರಕಾರಿ ಸೌಮ್ಯದ ಸಂಸ್ಥೆಯಾಗಿರುವುದರಿಂದ ನೌಕರರಲ್ಲೂ ನಂಬಿಕೆ-ವಿಶ್ವಾಸ ಮೂಡಿಸಬಹುದು.

ದೇಶದ ಸರಕಾರೇತರ ಕೈಗಾರಿಕೋದ್ಯಮಗಳಲ್ಲಿಯ ಶೇ.98 ರಷ್ಟು ದುಡಿಯುವ ಹಾಗೂ ನಿತ್ಯ 8-9 ಗಂಟೆಗಳಷ್ಟು ಕಾಲ ಉತ್ಪಾದನಾ ನೌಕರರಿಗೆ ಅನ್ವಯಸುವ ಈ ಕಾಯ್ದೆಯನ್ನು ಶೇ.2ರಷ್ಟಿರುವ ಮತ್ತು ನಿತ್ಯ 6 ರಿಂದ 7 ಗಂಟೆಗಳಷ್ಟು ಅನುತ್ಪಾದಕ ಕೆಲಸ ನಿರ್ವಹಿಸವ ಸರಕಾರಿ ನೌಕರರಿಗೆ ವಿಸ್ತರಿಸುವುದು ಸಮಾನತೆಯ ಹಾಗೂ ರಾಷ್ಟ್ರೀಯ ವೇತನ ನೀತಿಗೂ ಸಮೀಪವೆನಿಸುತ್ತದೆ.

ನಮ್ಮ ದೇಶದ ಯಾವುದೇ ಸರಕಾರವು ತನ್ನ ನೌಕರರಿಗೆ ಹಳೆ ಪಿಂಚಣಿ ನಿಯಮವನ್ನು ಮರಳಿ ಜಾರಿಗೆ ತರುವ ನಿರ್ಧಾರ ಅಥವಾ ರಾಜಕೀಯ ಲಾಭಕ್ಕಾಗಿ ನೀಡುವ ಆಶ್ವಾಸನೆಯು ರಾತ್ರಿ ಕಂಡ ಭಾವಿಗೆ ಹಗಲು ಬಿದ್ದಂತೆ. ಇಂತಹ ಅಪ್ರಬುದ್ಧವಾದ ಅಂತಹ ಯಾವುದೇ ನಿರ್ಧಾರ ದೇಶದ ಸಾಮಾನ್ಯ ಜನರ ಹಿತಕ್ಕೆ,ಆರ್ಥಿಕತೆಗೆ ಎಸಗುವ ದ್ರೋಹ. ಹಳೆ ಪಿಂಚಣಿ ಮರಳಿ ಜಾರಿಗೊಳಿಸಿದರೆ ಸರಕಾರ ಆಯವ್ಯಯವನ್ನು ಸರಿದೂಗಿಸಲಾಗದೆ ತಾನೇ ಹೆಣೆದ ಬಲೆಯಲ್ಲಿ ಸಿಕ್ಕಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಫಲಾನುಭವಿ ನೌಕರರಿಂದ ಯಾವುದೇ ವಂತಿಕೆ ಪಡೆಯದೆ (ನಮ್ಮ ಶಾಸಕರು ಮತ್ತು ಮಂತ್ರಿ ಗಳಂತೆ!) ಪಿಂಚಣಿ ಸೌಲಭ್ಯ ನೀಡುವುದು ಯಾವುದೇ ಜನ ಕಲ್ಯಾಣಪರ ಸರಕಾರಕ್ಕೆ ತರವಲ್ಲ. ಇದಕ್ಕೆ ಪರ‍್ಯಾಯವಾಗಿ ನೌಕರರಿಂದಲೂ ವಂತಿಕೆ ಪಡೆಯಬೇಕಾದ ಅವರಿಗೂ ಅನುಕೂಲಕರ ವಾದ ಹೊಸ ತೊಂದು ಪಿಂಚಣಿ ಯೋಜನೆಯನ್ನೂ ರೂಪಿಸಿ ಜಾರಿಗೊಳಿಸಬಹುದು.

ಈ ಯೋಜನೆಯಲ್ಲಿ, ಪ್ರತಿ ಸರ್ಕಾರಿ ನೌಕರನೂ ತನ್ನ ವೇತನದ ಶೇ.12.5 ರಷ್ಟು (ಮೂಲವೇತನ ಮತ್ತು ತುಟ್ಟಿ ಭತ್ಯೆ ಸೇರಿ) ಪಾವತಿಸುವುದು ಮತ್ತು ಅಷ್ಟೇ ಸಮನಾದ ವಂತಿಕೆಯನ್ನು ಸರಕಾರ ದಿಂದಲೂ ಪಾವತಿಸುವುದು. ಈ ಪಿಂಚಣಿ ನಿಧಿಯ ನಿರ್ವಹಣೆ ಆಯಾ ಸರ್ಕಾರದ ಹಿಡಿತದಲ್ಲಿರ ಬೇಕು. ಅಂದರೆ, ಪ್ರತಿ ತಿಂಗಳೂ ಒಟ್ಟು ವೇತನದ ಶೇ. 25ರಷ್ಟು (ಎರಡೂ ಕಡೆ ಸೇರಿ) ನೌಕರನ ಪಿಂಚಣಿ ಖಾತೆಗೆ ಜಮೆ ಆಗುತ್ತದೆ. ಉದಾಹರಣೆಗಾಗಿ ನೌಕರನೊಬ್ಬನ 25 ವರ್ಷದ ಸೇವಾವಧಿಯ ಸರಾಸರಿ ಮಾಸಿಕ ವೇತನ ರೂ.40000.

ಅದರಲ್ಲಿ ನೌಕರ ಮತ್ತು ಸರಕಾರದ ವಂತಿಕೆ ಮಾಸಿಕ ರೂ.10000 ಹಾಗೂ ವರ್ಷಕ್ಕೆ ರೂ.1 ಲಕ್ಷ 20 ಸಾವಿರ. ಅಂದರೆ 25 ವರ್ಷಕ್ಕೆ ರು 30 ಲಕ್ಷ. ಈ ಮೊತ್ತಕ್ಕೆ ಶೇಕಡಾ 9ರಷ್ಟು ಸರಳ ಬಡ್ಡಿಯನ್ನು ಲೆಕ್ಕ ಹಾಕಿದರೆ ಬಡ್ಡಿ ರೂ.33 ಲಕ್ಷದ 91 ಸಾವಿರ ಆಗುತ್ತದೆ (ಭವಿಷ್ಯ ನಿಧಿಯಲ್ಲಿ ಶೇ.8.05ರಷ್ಟು ಬಡ್ಡಿ ದರವಿದೆ). ಅಂದರೆ, ಅಸಲು ಮೊತ್ತ ಸೇರಿ 25 ವರ್ಷಕ್ಕೆ ನಿವೃತ್ತಿ ಹೊಂದಿದಾಗ ಆತನ ಪಿಂಚಣಿ ಖಾತೆಯಲ್ಲಿ 63 ಲಕ್ಷದ 91 ಸಾವಿರ ರು. ಇರುತ್ತದೆ. ಈ ಮೊತ್ತಕ್ಕೆ ಶೇ.9 ರಷ್ಟು ಬಡ್ಡಿ ಲೆಕ್ಕ ಹಾಕಿದಲ್ಲಿ ವರ್ಷಕ್ಕೆ 5 ಲಕ್ಷದ 75 ಸಾವಿರ ರು. ಹಾಗೂ ತಿಂಗಳಿಗೆ 48 ಸಾವಿರ ರು. ಪಿಂಚಣಿ ರೂಪದಲ್ಲಿ ಪಡೆಯಬಹುದು.

ಸೇವಾವಧಿ 25 ರಿಂದ 35 ವರ್ಷದವರೆಗೂ ಅಥವಾ ವಯೋ ನಿವೃತ್ತಿಯ ವಯಸ್ಸಿನವರೆಗೂ ವಿಸ್ತರಿಸುವುದರಿಂದ ಮಾಸಿಕ ಪಿಂಚಣಿ ಮೊತ್ತ ಗಣನೀಯವಾಗಿ ಹೆಚ್ಚುತ್ತದೆ. ಇಲ್ಲಿ ಉದಾಹರಣೆ ಗಾಗಿ ಕನಿಷ್ಠ ಸರಾಸರಿ ವೇತನವನ್ನು ಲೆಕ್ಕಹಾಕಲಾಗಿದೆ. ಹೆಚ್ಚಿನ ವೇತನ ಶ್ರೇಣಿಗೆ ಲೆಕ್ಕ ಹಾಕಿದಲ್ಲಿ ಅದು ಮಾಸಿಕ ಪಿಂಚಣಿ ಮೂರು ನಾಲ್ಕು ಪಟ್ಟು ಹೆಚ್ಚುತ್ತದೆ.

ವಿಶೇಷ ಎಂದರೆ, ಪಿಂಚಣಿದಾರ ನಿಧನ ಹೊಂದಿದರೂ ಕುಟುಂಬ ಪಿಂಚಣಿಯೂ ಕಡಿಮೆಯಾಗದೇ ಅಷ್ಟೇ ದೊರೆಯುತ್ತದೆ. ಪಿಂಚಣಿ ನಿಯಮಾವಳಿಯಲ್ಲಿ ಭಾಗಶಃ ಪಿಂಚಣಿಯನ್ನು ಮುಂಚಿತವಾಗಿ ( commutation) ಪಡೆಯುವ ಬಗ್ಗೆ ಅಥವಾ ಮಾಸಿಕ ಪಿಂಚಣಿ ಬಯಸದವರು ಯಾವುದೇ ಸಂದರ್ಭ ದಲ್ಲಿ ತಮ್ಮ ಖಾತೆಯಲ್ಲಿರುವ ಪೂರ್ಣ ಮೊತ್ತವನ್ನು ಪಡೆಯುವಂತೆ ಮತ್ತು ಪಿಂಚಣಿ ದಾರನ ನಿಧನದ ನಂತರ ಕುಟುಂಬ ಪಿಂಚಣಿ ಪಡೆಯುವ ನಾಮಿನಿಯೂ ಸಮಾನ ಹಕ್ಕನ್ನು ಪಡೆಯು ವಂತಿರಬೇಕು.

ಇಂತಹ ಯೋಜನೆಯಿಂದ ಹೊಸ ಪಿಂಚಣಿ ಯೋಜನೆಗಿಂತ ಕಡಿಮೆ ಖರ್ಚಿನಲ್ಲಿಯೇ (ಶೇ.14ರ ಬದಲಾಗಿ ಶೇ.12.5) ಹೆಚ್ಚಿನ ಆರ್ಥಿಕ ಹೊರೆಯಿಲ್ಲದೆ ಆರ್ಥಿಕತೆಯನ್ನು ನಿಭಾಯಿಸಬಹುದು. ನೌಕರರ ಪಾಲಿನ ವಂತಿಕೆಯನ್ನೂ 11.5ಕ್ಕೆ ಇಳಿಸಲೂಬಹುದು. ಈ ರೀತಿಯ ಖಜಾನೆ ಉಳಿತಾಯದ ಯೋಜನೆಯನ್ನು ರೂಪಿಸದೆ ಹಳೆ ಪಿಂಚಣಿ ಯೋಜನೆಯನ್ನು ಪುನಃ ತಂದಲ್ಲಿ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಆಗಬಹುದಾದ ಅಪಾಯದ ಚಿತ್ರಣ ಅಂಗೈಯೊಳಗಿನ ಹುಣ್ಣಿನಷ್ಟು ಸ್ಪಷ್ಟ. ಕೇಂದ್ರ ಮತ್ತು ರಾಜ್ಯಸರಕಾರ ಪುನಃ ಹಳೆ ಪಿಂಚಣಿ ಯೋಜನೆ ತರುವ ವಿಚಾರದಲ್ಲಿ ಆಶ್ವಾಸನೆ ನೀಡುವುದು.