ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂಕಣಗಳು

Roopa Gururaj Column: ಕಾಶ್ಮೀರದ ಕಣವೆಯಲ್ಲಿ ಅಮಾಯಕ ಹೆಣ್ಣು ಮಕ್ಕಳ ಆಪದ್ಭಾಂಧವ

ಕಾಶ್ಮೀರದ ಕಣವೆಯಲ್ಲಿ ಅಮಾಯಕ ಹೆಣ್ಣು ಮಕ್ಕಳ ಆಪದ್ಭಾಂಧವ

ಗಡಿ ನಿಯಂತ್ರಣ ರೇಖೆಯ (LoC) ಅತ್ಯಂತ ಸೂಕ್ಷ ಪ್ರದೇಶವಾದ ಕುಪ್ವಾರದಲ್ಲಿ ಇವರು ಕೆಲಸ ಮಾಡಲು ಆರಂಭಿಸಿದಾಗ, ಉಗ್ರರು ಇವರನ್ನು ಗುಪ್ತಚರ ಏಜೆಂಟ್ ಎಂದು ಶಂಕಿಸಿ 19 ಬಾರಿ ಅಪಹರಿಸಿದ್ದರು. ಆದರೆ ಅಧಿಕ್ ಅವರ ನಿಷ್ಕಲ್ಮಶ ಸೇವೆಯನ್ನು ಕಂಡಿದ್ದ ಸ್ಥಳೀಯ ಕಾಶ್ಮೀರಿ ಬಾಂಧವರೇ ಉಗ್ರರ ಎದುರು ನಿಂತು ಇವರನ್ನು ಪ್ರತಿ ಬಾರಿಯೂ ಜೀವಂತವಾಗಿ ಬಿಡಿಸಿಕೊಂಡು ಬರುತ್ತಿದ್ದರು. ಜೀವಕ್ಕೆ ಕಂಟಕವಿದ್ದರೂ ಅಧಿಕ್ ಹೆದರಿ ಓಡಲಿಲ್ಲ

Dr Vijay Darda Column: ನಂಬಿಕೆಯ ಗರ್ಭಗುಡಿಗೇ ಕೆಸರು ಚೆಲ್ಲಿದ ವಂಚಕರು!

ನಂಬಿಕೆಯ ಗರ್ಭಗುಡಿಗೇ ಕೆಸರು ಚೆಲ್ಲಿದ ವಂಚಕರು!

ಅಯೋಧ್ಯೆಗೆ ಲಖ್ನೋದಿಂದ ಪ್ರಯಾಣಿಸುವಾಗ ನನ್ನ ಮನಸ್ಸು ಇತಿಹಾಸದ ಪುಟಗಳನ್ನು ಮೆಲುಕು ಹಾಕುತ್ತಿತ್ತು. ರಾಮ ಜನ್ಮಭೂಮಿ ಚಳವಳಿ ಹಾಗೂ ರಾಮ ಮಂದಿರಕ್ಕಾಗಿ ನಡೆದ ಹೋರಾಟವನ್ನು ನಾವೆಲ್ಲರೂ ನೋಡಿದ್ದೇವೆ. ಅಲ್ಲಿ ಪುರಾತತ್ವ ಇಲಾಖೆ ಉತ್ಖನನ ನಡೆಸಿದಾಗ ಅದು ರಾಮನ ಜನ್ಮಭೂಮಿ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ಲಭಿಸಿದ್ದವು

Vishweshwar Bhat Column: ಸಾಹಿತ್ಯ ಲೋಕದ ಪರನಿಂದಾ ಪುರಾಣವು!

ಸಾಹಿತ್ಯ ಲೋಕದ ಪರನಿಂದಾ ಪುರಾಣವು!

ಬರಹಗಾರರೂ ರಕ್ತಮಾಂಸಗಳಿರುವ ಸಾಧಾರಣ ಜೀವಿಗಳು. ಅವರ ಈ ಸಣ್ಣಪುಟ್ಟ ದೌರ್ಬಲ್ಯಗಳು, ಮುನಿಸುಗಳು ಮತ್ತು ಹಠಗಳೇ ಅವರ ಬರಹಕ್ಕೆ ವಿಶಿಷ್ಟವಾದ ತೀವ್ರತೆಯನ್ನು ಕೊಡುತ್ತವೆ ಎಂಬುದೂ ಅಷ್ಟೇ ಸತ್ಯ. ಲೇಖಕರೊಳಗಿನ ಈ ಮನುಷ್ಯ ಸಹಜ ಗುಣಗಳೇ ಸಾಹಿತ್ಯ ಲೋಕವನ್ನು ಇಷ್ಟು ಸ್ವಾರಸ್ಯ ಕರವಾಗಿಸಿವೆ ಮತ್ತು ನಮ್ಮನ್ನು ಅವರ ಅಕ್ಷರಗಳಿಗೆ ಮತ್ತಷ್ಟು ಹತ್ತಿರವಾಗಿಸಿವೆ.

Harish Kera Column: ಮಳೆ ನಿಂತು ಹೋದ ಮೇಲೆ, ಕಣ್ಣ ಹನಿ ಮೂಡಿದೆ

Harish Kera Column: ಮಳೆ ನಿಂತು ಹೋದ ಮೇಲೆ, ಕಣ್ಣ ಹನಿ ಮೂಡಿದೆ

ಮನುಷ್ಯನಷ್ಟೇ ಅಲ್ಲ ಮಳೆಗಾಗಿ ಕಾಯುವುದು. ಅಥವಾ ಹೀಗೆ ಹೇಳೋಣ- ಮಳೆಗಾಗಿ ಮನುಷ್ಯ ಕಾಯದಿದ್ದರೂ ಸಕಲ ಜೀವಜಾತಿಗಳು ತಮ್ಮದೇ ಆದ ರೀತಿಯಲ್ಲಿ ಕಾಯುತ್ತವೆ. ಸಣ್ಣ ಕ್ರಿಮಿ ಕೀಟ ಗಳಿಂದ ಹಿಡಿದು ಭವ್ಯ ಜೀವಿ ಆನೆಯವರೆಗೂ. ಮಳೆ ಸರಿಯದ ಪ್ರಮಾಣದಲ್ಲಿ ಸುರಿದರೆ ಅವುಗಳ ಜೀವನ ಚಲನೆ ಸರಾಗ. ಉದಾಹರಣೆಗೆ ಮೀನಿನ ಈ ಜೀವಚಕ್ರವನ್ನು ನೋಡಿ.

Gururaj Gantihole Column: ಅನಿವಾಸಿ ಕನ್ನಡಿಗರನ್ನು ತವರು ಮನೆ ಮರೆಯದಿರಲಿ

ಅನಿವಾಸಿ ಕನ್ನಡಿಗರನ್ನು ತವರು ಮನೆ ಮರೆಯದಿರಲಿ

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ (ಎಐ) ಕ್ಷೇತ್ರಗಳಲ್ಲಿ ಜಾಗತಿಕ ತಜ್ಞರೊಂದಿಗೆ ಸಂಪರ್ಕ ಕಲ್ಪಿಸುವಲ್ಲಿ ಅನಿವಾಸಿ ಕನ್ನಡಿಗರು ಮುಂಚೂಣಿಯಲ್ಲಿದ್ದಾರೆ. ಗ್ರಾಮೀಣ ಭಾಗದ ಶಾಲೆಗಳಿಗೆ ದೇಣಿಗೆ, ಡಿಜಿಟಲ್ ತರಗತಿಗಳ ನಿರ್ಮಾಣ, ವಿದ್ಯಾರ್ಥಿವೇತನಗಳು ಹಾಗೂ ವೈದ್ಯ ಕೀಯ ಶಿಬಿರಗಳು ಮತ್ತು ಆಂಬ್ಯುಲೆನ್ಸ್‌ಗಳ ಒದಗಣೆಯ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಇವರು ನಿರಂತರ ಬೆಂಬಲ ನೀಡುತ್ತಿದ್ದಾರೆ.

Vishweshwar Bhat Column: ಕೆ.ಸಿ.ತ್ಯಾಗಿ ಬೆಳೆದ ಪರಿ

Vishweshwar Bhat Column: ಕೆ.ಸಿ.ತ್ಯಾಗಿ ಬೆಳೆದ ಪರಿ

ಕೇವಲ 30 ವರ್ಷದ ಒಬ್ಬ ರಾಜಕೀಯ ಕಾರ್ಯಕರ್ತ. ಆತನೇ ಇಂದಿನ ರಾಷ್ಟ್ರೀಯ ಲೋಕ ದಳದ ಹಿರಿಯ ಮುತ್ಸದ್ದಿ ಹಾಗೂ ಜನತಾ ದಳ ಯುನೈಟೆಡ್ (ಒಜೆಡಿಯು) ಪ್ರಮುಖ ರಾಷ್ಟ್ರೀಯ ನಾಯಕ ಕಿಶನ್ ಚಂದ್ ತ್ಯಾಗಿ (ಕೆ.ಸಿ.ತ್ಯಾಗಿ). ಪಶ್ಚಿಮ ಉತ್ತರ ಪ್ರದೇಶದ ಒಬ್ಬ ಸಾಮಾನ್ಯ ಗ್ರಾಮೀಣ ಯುವ ನಾಯಕ, ಈ ಒಂದೇ ಒಂದು ಘಟನೆಯಿಂದ ದೆಹಲಿಯ ಅಧಿಕಾರದ ಕಾರಿಡಾರ್‌ನಲ್ಲಿ ಹೆಮ್ಮರವಾಗಿ ಬೆಳೆದ ಕಥೆ ಅತ್ಯಂತ ರೋಚಕ.

ಭಾರತ ಸೆಮಿಕಂಡಕ್ಟರ್‌ ಕ್ರಾಂತಿ: ತಂತ್ರಜ್ಞಾನ, ಆರ್ಥಿಕ ಪ್ರಗತಿಗೆ ಹಾದಿ

ಭಾರತ ಸೆಮಿಕಂಡಕ್ಟರ್‌ ಕ್ರಾಂತಿ: ತಂತ್ರಜ್ಞಾನ, ಆರ್ಥಿಕ ಪ್ರಗತಿಗೆ ಹಾದಿ

ಭಾರತವು ಸೆಮಿಕಂಡಕ್ಟರ್‌ಗಳ ಕ್ಷೇತ್ರದಲ್ಲಿ ಸ್ವದೇಶಿ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಆಮದು ಗಳ ಮೇಲಿನ ದೀರ್ಘಕಾಲದ ಅವಲಂಬನೆಯನ್ನು ಕಡಿಮೆ ಮಾಡಲು ತನ್ನ ಇತಿಹಾಸದಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿದೆ. ರಾಷ್ಟ್ರೀಯ ಭದ್ರತೆ ಮತ್ತು ಭವಿಷ್ಯದ ತಂತ್ರಜ್ಞಾನ ಗಳಿಗೆ ಅತ್ಯಗತ್ಯವಾಗಿರುವ ಈ ಯುಗದಲ್ಲಿ, ಸೆಮಿಕಂಡಕ್ಟರ್‌ಗಳು ಆರ್ಥಿಕ ಬೆಳವಣಿಗೆ ಭಾರತದ ತಾಂತ್ರಿಕ ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಣಾಯಕವಾಗಿದೆ.

Dr N Someshwara Column: ನೀಲಿ ಮಕ್ಕಳಿಗೆ ಹೊಸ ಬದುಕನ್ನು ನೀಡಿದ ತ್ರಿಮೂರ್ತಿಗಳು

ನೀಲಿ ಮಕ್ಕಳಿಗೆ ಹೊಸ ಬದುಕನ್ನು ನೀಡಿದ ತ್ರಿಮೂರ್ತಿಗಳು

ಗ್ಲೂಕೋಸ್ ಮತ್ತು ಆಕ್ಸಿಜನ್ ಇರುವ ರಕ್ತವನ್ನು ಹೃದಯವು ಪಂಪ್ ಮಾಡುತ್ತದೆ. ಆಗ ರಕ್ತವು ತನ್ನಲ್ಲಿರುವ ಗ್ಲೂಕೋಸ್ ಮತ್ತು ಆಕ್ಸಿಜನ್ನನ್ನು ನಮ್ಮ ದೇಹದಲ್ಲಿರುವ ಪ್ರತಿಯೊಂದು ಜೀವಕೋಶ ಕ್ಕೂ ಪೂರೈಸುತ್ತದೆ. ಜೀವಕೋಶ ಗಳ ಒಳಗೆ ಆಕ್ಸಿಜನ್ ಎಂಬ ಕಿಡಿಯು ಗ್ಲೂಕೋಸ್ ಎಂಬ ಇಂಧನವನ್ನು ಉರಿಸಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಆ ಶಕ್ತಿಯನ್ನು ಬಳಸಿಕೊಂಡು ನಮ್ಮ ಜೀವಕೋಶಗಳು ಕೆಲಸ ಮಾಡುತ್ತವೆ.

Lokesh Kayarga Column: ಸ್ಟೆತಸ್ಕೋಪ್‌ ಮತ್ತು ಲೇಖನಿಯ ನೈತಿಕ ತೊಳಲಾಟ

ಸ್ಟೆತಸ್ಕೋಪ್‌ ಮತ್ತು ಲೇಖನಿಯ ನೈತಿಕ ತೊಳಲಾಟ

ವೈದ್ಯೋ ನಾರಾಯಣೋ ಹರಿಃ ಎನ್ನುವುದು ಹಿರಿಯರ ದೊಡ್ಡ ಮಾತು. ಮನುಷ್ಯನ ಪ್ರಾಣ ಉಳಿಸು ವಾತ ದೇವರಿಗಿಂತ ಕಡಿಮೆಯಿಲ್ಲ ಎಂಬುದು ಇದರ ಹಿಂದಿನ ಆಶಯ. ಇನ್ನು ಪತ್ರಿಕಾರಂಗವನ್ನು ‘ಪ್ರಜಾಪ್ರಭುತ್ವದ ನಾಲ್ಕನೇ ಅಂಗ’ ಎಂದು ಬಣ್ಣಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರ ಮನುಷ್ಯನ ದೇಹದ ಸ್ವಾಸ್ಥ್ಯವನ್ನು ಕಾಪಾಡಿದರೆ, ಪತ್ರಿಕಾರಂಗ ಸಮಾಜದ ಹಾಗೂ ಪ್ರಜಾ ಪ್ರಭುತ್ವದ ಸ್ವಾಸ್ಥ್ಯವನ್ನು ಕಾಯುವ ಕಾವಲುಗಾರ.

Vinaya Shirahattimutt Column: ʼಹಿಂದೂʼ ಪದದ ಚಾರಿತ್ರಿಕ ಸತ್ಯ ಮತ್ತು ಬೌದ್ಧಿಕ ಪರಾಮರ್ಶೆ

ʼಹಿಂದೂʼ ಪದದ ಚಾರಿತ್ರಿಕ ಸತ್ಯ ಮತ್ತು ಬೌದ್ಧಿಕ ಪರಾಮರ್ಶೆ

ಸಮಾಜವನ್ನು ಎಚ್ಚರಿಸುವ ಮತ್ತು ಮುಖಪುಟದಲ್ಲಿ ನಿಂತು ನಾಡಿನ ವಿಶಾಲ ಓದುಗ ವರ್ಗದ ಗಮನ ಸೆಳೆಯುವಂತಹ ಗಂಭೀರ ವೈಚಾರಿಕ ಬರಹಗಳು ಸದಾ ವಸ್ತುನಿಷ್ಠ ಸತ್ಯಶೋಧನೆಯ ಹಾದಿ ತುಳಿಯ ಬೇಕು. ಯಾವುದೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ, ವಿಚಾರಗಳನ್ನು ವಿಚಾರಗಳಿಂದ, ಐತಿಹಾ ಸಿಕ ಆಧಾರಗಳನ್ನು ಆಧಾರಗಳಿಂದಲೇ ಎದುರಿಸಬೇಕೇ ವಿನಃ, ಭಿನ್ನಮತೀಯರ ಶೈಕ್ಷಣಿಕ ಅರ್ಹತೆ ಯನ್ನು ಲೇವಡಿ ಮಾಡುವುದು ಪ್ರಬುದ್ಧತೆಯ ಲಕ್ಷಣವಲ್ಲ.

Roopa Gururaj Column: ಶಕುನಿ ಮತ್ತು ಪವಿತ್ರೇಶ್ವರಂನ ನೈಜ ಜನಪದ ಕಥೆ

Roopa Gururaj Column: ಶಕುನಿ ಮತ್ತು ಪವಿತ್ರೇಶ್ವರಂನ ನೈಜ ಜನಪದ ಕಥೆ

ಕುರುಕ್ಷೇತ್ರ ಯುದ್ಧದಲ್ಲಿ ತಾನು ಮಾಡಿದ ತಂತ್ರಗಳು ಇಷ್ಟೊಂದು ಜನರ ಭೀಕರ ನಾಶಕ್ಕೆ ಕಾರಣವಾಯಿ ತಲ್ಲ ಎಂದು ಶಕುನಿ ಕೊನೆಯ ದಿನಗಳಲ್ಲಿ ತೀವ್ರ ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದನು. ತನ್ನ ಪಾಪ ಪ್ರಕ್ಷಾಳನೆಗಾಗಿ ಮತ್ತು ಆತ್ಮದ ಶಾಂತಿಗಾಗಿ ದಕ್ಷಿಣದತ್ತ ಯಾತ್ರೆ ಬೆಳೆಸಿದ ಅವನು, ಪವಿತ್ರೇಶ್ವರಂನ ಈ ಪ್ರಶಾಂತ ಬೆಟ್ಟದ ಪ್ರದೇಶಕ್ಕೆ ಬಂದು ಶಿವನನ್ನು ಕುರಿತು ಕಠಿಣ ತಪಸ್ಸು ಆಚರಿಸಿದನು

Raghav Sharma Nidle Column: ರಾಮಭಕ್ತರ ಹೃದಯ ಕಲಕಿದ ಹುಂಡಿ ಕಳವು

ರಾಮಭಕ್ತರ ಹೃದಯ ಕಲಕಿದ ಹುಂಡಿ ಕಳವು

ಪ್ರಕರಣಕ್ಕೆ ಸಂಬಂಧಿಸಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟ್ ಸದಸ್ಯ ಡಾ.ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ. ಜೂನ್ 18-19ರಂದು ಉತ್ತರಾಖಂಡದ ಹರಿದ್ವಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್‌ನ ಉನ್ನತ ಮುಖಂಡರು ಮಹತ್ವದ ಸಭೆ ನಡೆಸಿ, ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ರಾಜೀನಾಮೆ ನೀಡಬೇಕು ಎಂಬ ತೀರ್ಮಾನ ಮಾಡಿದ್ದರು

Dr Murli Mohan Chuntharu Column: ಕುಟುಂಬ ಪಾಲಿಸುವ ವೈದ್ಯರ ಕಾಯಕ ನಿಷ್ಠೆ

ಕುಟುಂಬ ಪಾಲಿಸುವ ವೈದ್ಯರ ಕಾಯಕ ನಿಷ್ಠೆ

ಪ್ರತಿವರುಷ ಜುಲೈ ಒಂದು ಭಾರತದಾದ್ಯಂತ ರಾಷ್ಟ್ರೀಯ ವೈದ್ಯರ ದಿನ. ನಮ್ಮ ದೇಶ ಕಂಡ ಧೀಮಂತ ನಾಯಕ, ವೈದ್ಯ ಮತ್ತು ಶಿಕ್ಷಣ ತಜ್ಞ ಡಾ.ಬಿ.ಸಿ ರಾಯ್ ಅವರ ಜನುಮ ದಿನದಂದು ಅವರನ್ನು ಸ್ಮರಿಸಿ, ಎಲ್ಲಾ ವೈದ್ಯರು ತಮ್ಮ ವೃತ್ತಿ ಜೀವನದ ಸಿಂಹಾವಲೋಕನ ಮತ್ತು ಆತ್ಮಾವಲೋಕನ ಮಾಡುವ ಸುದಿನ.

Vishweshwar Bhat Column: ಸುರೇಶ್-ಸುಷ್ಮಾ ಪ್ರಕರಣ

Vishweshwar Bhat Column: ಸುರೇಶ್-ಸುಷ್ಮಾ ಪ್ರಕರಣ

1978ರಲ್ಲಿ ದೇಶವನ್ನೇ ತಲ್ಲಣಗೊಳಿಸಿದ ಜಗಜೀವನರಾಂ ಪುತ್ರ ಸುರೇಶ್ ರಾಮ್ ಮತ್ತು ಸುಷ್ಮಾ ಚೌಧರಿ ಹಗರಣ ಮುಂದೇನಾಯಿತು? ಇದು ಕೇವಲ ರಾಜಕೀಯ ಚದುರಂಗದಾಟದ ದಾಳವಾಗಷ್ಟೇ ಉಳಿಯ ಲಿಲ್ಲ. ರಾಜಕೀಯವಾಗಿ ಧೀಮಂತ ನಾಯಕರಾಗಿದ್ದ ಜಗಜೀವನ್ ರಾಮ್ ವರ್ಚಸ್ಸನ್ನು ಮಣ್ಣುಪಾಲು ಮಾಡಿದ ಈ ಘಟನೆ, ತೆರೆಮರೆಯಲ್ಲಿ ಇಬ್ಬರು ವ್ಯಕ್ತಿಗಳ ವೈಯಕ್ತಿಕ ಬದುಕನ್ನು ಘಾಸಿಗೊಳಿಸಿತು.

Shashidhara Halady Column: ಇಲ್ಲಿ ಶಾಸ್ತ್ರ ಹೇಳಲಾಗುವುದು ! ಶುಲ್ಕ 25 ಡಾಲರ್‌ !

ಇಲ್ಲಿ ಶಾಸ್ತ್ರ ಹೇಳಲಾಗುವುದು ! ಶುಲ್ಕ 25 ಡಾಲರ್‌ !

ಅಮೆರಿಕದ ಶಿಕಾಗೋ ನಗರದ ಬೀದಿಗಳಲ್ಲಿ ಎರಡು ದಿನ ಸಂತಸದಿಂದ ಅಲೆದಾಡುತ್ತಾ, ಆ ಚಂದದ ಊರಿನ ವಿಶೇಷಗಳನ್ನು ನೋಡುತ್ತಾ ಕಳೆದೆವು. ಜೂನ್ ತಿಂಗಳಿನ ಅಲ್ಲಿನ ಬೇಸಗೆಯ ದಿನಗಳು ಥೇಟ್ ಬೆಂಗಳೂರಿನ ವಾತಾವರಣದ ಅನುಭವ ನೀಡುತ್ತಿತ್ತು. ಚಳಿಗಾಲದಲ್ಲಿ ವಿಂಡಿ ಸಿಟಿ ಅಂದರೆ ಕುಳಿರ್ಗಾಳಿಯ ನಗರ ಎಂಬ ವಿಶೇಷಣವನ್ನು ಹೊರುವ ಶಿಕಾಗೋ ನಗರಕ್ಕೆ, ಥಂಡಿಯನ್ನು ತರುವುದು ಆ ನಗರದ ಒಂದು ದಿಕ್ಕಿನಲ್ಲಿ ಉದ್ದಕ್ಕೂ ಹರಡಿರುವ ಮಿಶಿಗನ್ ಮಹಾಸರೋವರ.

‌Ravi Hunj Column: ಹಿಂದೂ ಪದಕ್ಕೆ ಕಳ್ಳ ಎಂಬ ಅಪವ್ಯಾಖ್ಯಾನ ಹೇಗೆ ಬಂತು ?

ಹಿಂದೂ ಪದಕ್ಕೆ ಕಳ್ಳ ಎಂಬ ಅಪವ್ಯಾಖ್ಯಾನ ಹೇಗೆ ಬಂತು ?

ಜೈನ, ಬೌದ್ಧ, ಸಿಖ್ ಮತಗಳು ಧರ್ಮಗಳಾಗಿ ಸಂವಿಧಾನಿಕ ಮಾನ್ಯತೆ ಪಡೆದದ್ದು ಸಾಂದರ್ಭಿಕ ಶಿಶು ಗಳಾಗಿಯಷ್ಟೇ. ಈಗಲೂ ಭಾರತದಲ್ಲಿ ಹಿಂದೂ ಎನ್ನುವುದು ಇತರೆ ಮತಧರ್ಮಗಳು ಎಂಬ ಸಮಗ್ರತೆ ಯ ರೂಪ ಹೊಂದಿದೆಯೇ ಹೊರತು ಮತಧರ್ಮದ ಗುರುತಾಗಿಯಲ್ಲ. ಹಾಗಾಗಿಯೇ ಕೇವಲ ಪಾಕಿಸ್ತಾನ ವಷ್ಟೇ ವಿಭಜನೆಯಂದು ಇಸ್ಲಾಂ ರಾಷ್ಟ್ರವಾಗಲಿಲ್ಲ, ಹಿಂದೂ ಎನ್ನುವದು ಇಂದಿಗೂ ಸ್ವತಂತ್ರ ಭಾರತ ದಲ್ಲಿ ಸಂಸ್ಕೃತಿಯಾಗಿದ್ದು ಮತಧರ್ಮವಾಗಿ ಸಂವಿಧಾನಿಕ ಮಾನ್ಯತೆ ಪಡೆದಿರದ ಕಾರಣ ಭಾರತ ಸಹ ಪರೋಕ್ಷವಾಗಿ ಇಸ್ಲಾಂ ರಾಷ್ಟ್ರವೇ ಆಗಿದೆ ಎನ್ನಬಹುದು!

Ranjith H Ashwath Column: ಆರ್ಥಿಕ ಸಂಕಷ್ಟ ನಿವಾರಿಸುವುದೇ ಗ್ಯಾರಂಟಿ ಪರಿಷ್ಕರಣೆ ?

ಆರ್ಥಿಕ ಸಂಕಷ್ಟ ನಿವಾರಿಸುವುದೇ ಗ್ಯಾರಂಟಿ ಪರಿಷ್ಕರಣೆ ?

ಕರ್ನಾಟಕದಲ್ಲಿ ಪಂಚಗ್ಯಾರಂಟಿ ಯೋಜನೆಯನ್ನು ಘೋಷಿಸಿದ್ದ ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದ ಬಿಜೆಪಿ ಹಾಗೂ ಇತರೆ ಪಕ್ಷಗಳು ಇದೀಗ ಅದೇ ಮಾರ್ಗದಲ್ಲಿ ಸಾಗಿದೆ ಎನ್ನುವುದು ಬೇರೆ. ಭವಿಷ್ಯದಲ್ಲಿ ಈ ಗ್ಯಾರಂಟಿ ಘೋಷಣೆಗಳಿಲ್ಲದೇ ಚುನಾವಣೆ ನಡೆಸೋದು ಹೇಗೆ ಎನ್ನುವ ಸ್ಥಿತಿಗೆ ದೇಶ ಬಂದು ನಿಂತಿದೆ.

Naveen Sagar Column: ಆ ದೇವರಿಗೂ ಕೆಲವೊಮ್ಮೆ ವಿಕೃತ ಖುಷಿ !

Naveen Sagar Column: ಆ ದೇವರಿಗೂ ಕೆಲವೊಮ್ಮೆ ವಿಕೃತ ಖುಷಿ !

ಅರವತ್ತರ ಇಳಿವಯಸ್ಸಿನಲ್ಲಿರುವ ಅಲ್ಕಾ ಯಾಜ್ಞಿಕ್ ಸಿನಿಮಾಗಳಿಗೆ ಹಾಡಲಿ ಅಂತೇನೂ ದುರಾಸೆ ಇಲ್ಲ ನಮಗೆ. ಆಕೆ ಈಗಾಗಲೇ ಕೊಟ್ಟಿರುವ ಹಾಡುಗಳೇ ಸಾಕಷ್ಟಿವೆ. ಅದನ್ನೇ ಸಾವಿರ ಸಾವಿರ ಬಾರಿ ಕೇಳಿ ತಣಿಯಬಹುದು. ಇಷ್ಟು ಹಾಡುಗಳನ್ನು ಕೊಟ್ಟು, ನಮ್ಮ ಭಾವತಂತಿಗಳನ್ನು ಮೀಟಿದಾಕೆಗೆ ಇಂಥ ಅನ್ಯಾಯ ಯಾಕೆ ಅಂತಷ್ಟೇ ಕಂಪ್ಲೇಂಟು

Rangaswamy Mookanahally Column: ಸ್ವಂತ ವಿವೇಚನೆ ಇರುವ ಜನರು ಸಮಾಜದ ಆಸ್ತಿ !

ಸ್ವಂತ ವಿವೇಚನೆ ಇರುವ ಜನರು ಸಮಾಜದ ಆಸ್ತಿ !

ಮನುಷ್ಯನ ಸೈಕಾಲಜಿ ನನಗೆ ಎಂದಿಗೂ ಅಚ್ಚರಿ ಹುಟ್ಟಿಸುವ, ಪ್ರಶ್ನೆಗಳನ್ನು ಹುಟ್ಟುಹಾಕುವ ವಿಷಯ. ಈ ಮನುಷ್ಯನ ಮನಸ್ಸು ಬಹಳ ವಿಚಿತ್ರ. ತನ್ನ ಬುದ್ಧಿವಂತಿಕೆಯ ಶಕ್ತಿಯಿಂದ ಈ ವಿಶ್ವ ಎಷ್ಟು ದೊಡ್ಡದು, ಅದರಲ್ಲಿ ನಾನೆಷ್ಟು ಚಿಕ್ಕವನು ಎನ್ನುವುದನ್ನು ಕಂಡುಕೊಂಡಿರುವುದು ಅವನ ದೊಡ್ಡಸ್ತಿಕೆ. ಆತನನ್ನು ಜಗತ್ತಿನ ಇತರ ಎಲ್ಲಾ ಜೀವಿಗಳಿಗಿಂತ ಶ್ರೇಷ್ಠವಾಗಿಸಿರುವುದು ಕೂಡ ಈ ಚಿಂತನ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ

Vishweshwar Bhat Column; ಮಣ್ಣುಪಾಲಾದ ಮರ್ಯಾದೆ

Vishweshwar Bhat Column; ಮಣ್ಣುಪಾಲಾದ ಮರ್ಯಾದೆ

ದೆಹಲಿಯ ರಾಜಕೀಯ ವಲಯದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಆ ಪತ್ರಿಕೆಯೇ ಇತ್ತು. ಈ ಹಗರಣ ಕೇವಲ ಪತ್ರಿಕೆಗಳಿಗೆ ಸೀಮಿತವಾಗದೆ ಸಂಸತ್ತಿನ ಉಭಯ ಸದನಗಳನ್ನೂ ತಲುಪಿತು. ಪ್ರತಿಪಕ್ಷಗಳು ರಕ್ಷಣಾ ಸಚಿವ ಜಗಜೀವನ್ ರಾಮ್ ರಾಜೀನಾಮೆಗೆ ಪಟ್ಟು ಹಿಡಿದವು. ರಕ್ಷಣಾ ಸಚಿವರ ಮಗನೇ ಇಂಥ ಸಾರ್ವಜನಿಕ ನೈತಿಕ ಅಧಃಪತನಕ್ಕೆ ಕಾರಣನಾಗಿದ್ದಾನೆ ಮತ್ತು ಆತನನ್ನು ಕಿಡ್ನಾಪ್ ಮಾಡು ವಷ್ಟು ಭದ್ರತಾ ಲೋಪ ಉಂಟಾಗಿದೆ ಎಂದರೆ ದೇಶದ ರಕ್ಷಣೆಯ ಕಥೆಯೇನು ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಸಂಸದರು ಎತ್ತಿದರು.

Roopa Gururaj Column: ಠಾಣಾ ರಾಮ್‌ ಕಡ್ವಾಸರ ಅವರ ಇಪ್ಪತ್ತೊಂದು ವರ್ಷಗಳ ನಿಸ್ವಾರ್ಥ ಸೇವೆ

ಠಾಣಾ ರಾಮ್‌ ಕಡ್ವಾಸರ ಅವರ ಇಪ್ಪತ್ತೊಂದು ವರ್ಷಗಳ ನಿಸ್ವಾರ್ಥ ಸೇವೆ

ರಾಜಸ್ಥಾನದ ಧಗಧಗಿಸುವ ಬಿಸಿಲು, ಮೈ ಸುಡುವ ಮರಳುಗಾಡು, ಬಾಯಾರಿಕೆಯಿಂದ ಒಣಗುವ ಗಂಟಲು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೇವಲ ಒಂದು ಲೋಟ ತಣ್ಣೀರು ಸಿಕ್ಕರೆ ಅದು ಅಮೃತಕ್ಕೆ ಸಮಾನ. ಇಂತಹ ಅಮೃತವನ್ನು ಕಳೆದ 21 ವರ್ಷಗಳಿಂದ ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ಪ್ರತಿಯೊಬ್ಬ ಹಾದಿಹೋಕರಿಗೂ ಉಣಿಸುತ್ತಿರುವ ಅಪರೂಪದ ಮಾನವತಾವಾದಿ, 77 ವರ್ಷದ ವೃದ್ಧ ಠಾಣಾ ರಾಮ್ ಕಡ್ವಾಸರ.

ಉಚಿತ ಭಾಗ್ಯ ಅಂದೇ ಇತ್ತು!

ಉಚಿತ ಭಾಗ್ಯ ಅಂದೇ ಇತ್ತು!

ನಾವೆಲ್ಲ ತಿಳಿದಿರುವಂತೆ ಸರಕಾರದಿಂದ ಕೊಡಲ್ಪಡುವ ಉಚಿತ ಭಾಗ್ಯಗಳು ಈಗೊಂದು 2 ದಶಕಗಳಿಂದ ಶುರುವಾಯಿತು. ಅದರಲ್ಲೂ ತಮಿಳುನಾಡಿನ ಆಗಿನ ಮುಖ್ಯಮಂತ್ರಿ ದಿವಂಗತ ಜಯಲಲಿತ ಅವರೇ ಇದರ ಮೂಲ ವ್ಯಕ್ತಿ ಎಂಬುದೇ ಎಲ್ಲರ ತಿಳುವಳಿಕೆ. ಆದರೆ ಇವೆಲ್ಲಕ್ಕಿಂತ ಮುಂಚೆ (ನಾಲ್ಕು ದಶಕಗಳ ಹಿಂದೆ) 1980ರ ದ್ವಿತೀಯಾರ್ಧದಲ್ಲಿ ಬಹಳಷ್ಟು ಜನರಿಗೆ ಹಿಂಬಾಗಿಲಿನಿಂದ ಈ ಉಚಿತ ಭಾಗ್ಯ ದೊರೆಯಿತು.

Ravi Hunj Column: ಹಿಂದೂ ಎಂಬ ಪದದ ಹಿಂದು ಮುಂದು !

Ravi Hunj Column: ಹಿಂದೂ ಎಂಬ ಪದದ ಹಿಂದು ಮುಂದು !

ಕ್ರಿಸ್ತಪೂರ್ವ ಆರನೇ (ಕ್ರಿ. ಪೂ. 521) ಶತಮಾನದಲ್ಲಿ ಇರಾನಿನ ಬಿಸೋಟನ್ ಪರ್ವತದ ಹದಿನೈದು ಮೀಟರ್ ಎತ್ತರ ಮತ್ತು ಇಪ್ಪತ್ತೈದು ಮೀಟರ್ ಅಗಲದ ಬೆಟ್ಟದಂಚಿನ ಏಣಿನ ಮೇಲೆ ಕೆತ್ತಿರುವ ಯುನೆಸ್ಕೊ ಪರಂಪರೆಯ ತಾಣ ಎಂದು ಗುರುತಿಸಿರುವ ಒಂದು ಶಿಲಾಶಾಸನವಿದೆ. ಇದನ್ನು ಬೇಹಿಸ್ತಾನ ಶಾಸನ ಅಥವಾ ಒಂದನೇ ಡೇರಿಯಸ್ (ದಾರಿಯಸ್) ಶಾಸನ ಎಂದು ಕರೆಯುತ್ತಾರೆ.

Kiran Upadhyay Column: ಎತ್ತರಕ್ಕೆ ಏರುತ್ತಿರುವ ಕಿಲೋಮೀಟರ್‌ ರೇಸ್

Kiran Upadhyay Column: ಎತ್ತರಕ್ಕೆ ಏರುತ್ತಿರುವ ಕಿಲೋಮೀಟರ್‌ ರೇಸ್

ಅಡ್ಡಡ್ಡವಾಗಿ ಕಟ್ಟಿಕೊಳ್ಳುತ್ತಿದ್ದ ಮನೆ, ಊರು, ಪಟ್ಟಣಗಳು ಮುಂದೊಂದುದಿನ ಎತ್ತರೆತ್ತರವಾಗಿ ಮರ ಗಳಂತೆ ಬೆಳೆಯುತ್ತವೆ, ಅಲ್ಲ, ಮರಗಳನ್ನೂ ಮೀರಿಸಿ ಬೆಳೆಯುತ್ತವೆ ಎಂದೂ ಆ ಕಾಲದಲ್ಲಿ ಊಹಿಸಿರ ಲಿಕ್ಕಿಲ್ಲ. ಮೊದಲ ಮಹಡಿ ಕಂಡಾಗ ಜನ ಹೇಗೆ ಪ್ರತಿಕ್ರಿಯೆ ನೀಡಿರಬಹುದು, ಕಟ್ಟಿದವರು ಎಷ್ಟು ಹೆಮ್ಮೆಪಟ್ಟಿರಬಹುದು ಎಂದು ಯೋಚಿಸುವಾಗ ಅಚ್ಚರಿಯಾಗುವುದು ಸಹಜ. ಆದರೆ ಈಗ, ಬಾನೆತ್ತರಕ್ಕೆ ಬಿಲ್ಡಿಂಗ್ ಕಟ್ಟುವುದು ರೂಢಿಯೂ, ಸಹಜವೂ ಆಗಿದೆ.

Loading...