ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂಕಣಗಳು

ಮತ್ತೊಂದು ಜೀವಕ್ಕೆ ಬೆಳಕಾಗುವ ಮಹಾದಾನ

ಮತ್ತೊಂದು ಜೀವಕ್ಕೆ ಬೆಳಕಾಗುವ ಮಹಾದಾನ

ನಮ್ಮಲ್ಲಿ ಪ್ರತಿಯೊಬ್ಬರಿಗೂ ಬದುಕು ಅಮೂಲ್ಯ. ಆದರೆ ಕೆಲವೊಮ್ಮೆ ಹೃದಯ, ಮೂತ್ರಪಿಂಡ, ಯಕೃತ್ತು, ಶ್ವಾಸಕೋಶ ಸೇರಿದಂತೆ ಪ್ರಮುಖ ಅಂಗಗಳು ವೈಫಲ್ಯಗೊಂಡಾಗ ಚಿಕಿತ್ಸೆ ಮಾತ್ರ ಸಾಕಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿಯ ದಾನ ಮಾಡಿದ ಅಂಗವೇ ಹೊಸ ಬದುಕಿನ ದಾರಿಯಾಗಬಹುದು.

Vijay Kumar Column: ನಾಲಗೆಯಿಂದ ಆದ ಗಾಯಕ್ಕೆ ಔಷಧವಿಲ್ಲ

Vijay Kumar Column: ನಾಲಗೆಯಿಂದ ಆದ ಗಾಯಕ್ಕೆ ಔಷಧವಿಲ್ಲ

ಒಂದು ಬಾರಿ ಆಡಿದ ಮಾತನ್ನು ಮರಳಿ ಪಡೆಯಲು ಆಗುವುದಿಲ್ಲ. ಆದರೆ ನಾವು ಕೋಪದಲ್ಲಿ ಒಂದು ಕ್ಷಣ ಮಾತನಾಡಿದ ಮಾತು, ಆ ವ್ಯಕ್ತಿಯ ಮನಸ್ಸಿನಲ್ಲಿ ವರ್ಷಗಳ ವರೆಗೆ ಉಳಿದುಕೊಳ್ಳ ಬಹುದು. ಕಟುವಾಗಿ ಮಾತನಾಡುವುದು ಕೂಡ ಒಂದು ರೀತಿಯ ಹಿಂಸೆಯೇ. ಏಕೆಂದರೆ ಹಿಂಸೆ ಎಂದರೆ ಕೇವಲ ದೇಹಕ್ಕೆ ನೋವು ಕೊಡುವುದಲ್ಲ; ಮತ್ತೊಬ್ಬರ ಮನಸ್ಸಿಗೆ ನೋವುಂಟು ಮಾಡುವುದೂ ಹಿಂಸೆಯೇ.

Suresh Hakkimani Column: ಬೆಳಕು ಚೆಲ್ಲಿ ಮರೆಯಾದ ಶ್ರೇಷ್ಠ ಚೇತನ

ಬೆಳಕು ಚೆಲ್ಲಿ ಮರೆಯಾದ ಶ್ರೇಷ್ಠ ಚೇತನ

ಮಾನವ ಜನ್ಮದ ಸಾರ್ಥಕತೆ ಇರುವುದು ಕೇವಲ ನಮಗಾಗಿ ನಾವು ಬಾಳುವುದರಲ್ಲಲ್ಲ, ಬದಲಿಗೆ ನಮ್ಮ ಸುತ್ತಲಿನ ನೊಂದ ಜೀವಿಗಳ ಕಣ್ಣೀರು ಒರೆಸಿ, ಅವರ ಬದುಕಿಗೆ ಬೆಳಕಾಗುವುದರಲ್ಲಿ. ಅಂತಹ ನಿಃಸ್ವಾರ್ಥ ಹಾಗೂ ಸಾರ್ಥಕ ಜೀವನವನ್ನು ನಡೆಸಿ, ಸಮಾಜದ ಪ್ರತಿಯೊಂದು ಸ್ತರದಲ್ಲೂ ಅಳಿಸಲಾಗದ ಪ್ರೀತಿಯ ಅನುಬಂಧವನ್ನು ಬೆಳೆಸಿ ಅಗಲಿದ ಮಹಾನ್ ಚೇತನವೇ ದಿವಂಗತ ಉಮೇಶ ಭಟ್ ಅವರು.

Vijay Darda Column: ಜೆನ್ ಝೀಯಿಂದ ಗಡಿ ಜಗಳದವರೆಗೆ: ಮಾತುಕತೆಯೇ ಪರಿಹಾರ!

ಜೆನ್ ಝೀಯಿಂದ ಗಡಿ ಜಗಳದವರೆಗೆ: ಮಾತುಕತೆಯೇ ಪರಿಹಾರ!

ಜೆನ್ ಝೀ ತಲೆಮಾರಿನ ಯುವಕರ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದನ್ನು ಎಲ್ಲರೂ ಒಪ್ಪಲೇಬೇಕು. ಮಕ್ಕಳು ನಮಗಿಂತ ಬುದ್ಧಿವಂತರಿದ್ದಾರೆ. ಅವರ ಜೊತೆಗೆ ಅವರ ಭಾಷೆಯಲ್ಲೇ ಮಾತಾಡಬೇಕು. ಅವರಿಗೆ ನಮ್ಮಲ್ಲಿ ವಿಶ್ವಾಸ ಮೂಡುವಂತೆ ಮಾಡಬೇಕು.

Roopa Gururaj Column: ನಂದಿ: ಜ್ಞಾನ, ವಿನಯ, ಸಮರ್ಪಣೆಗಳ ಜೀವಂತ ಸಂಕೇತ

ನಂದಿ: ಜ್ಞಾನ, ವಿನಯ, ಸಮರ್ಪಣೆಗಳ ಜೀವಂತ ಸಂಕೇತ

ನಂದಿಯನ್ನು ನಾವು ಕೇವಲ ‘ಶಿವನ ವಾಹನ’ಎಂದು ಮಾತ್ರ ಭಾವಿಸಿದ್ದರೆ ಅದು ಅಪೂರ್ಣ ವಾಗುತ್ತದೆ. ಶೈವ ಪರಂಪರೆಯಲ್ಲಿ ನಂದಿಯ ಸ್ಥಾನ ಅತ್ಯುನ್ನತವಾದದ್ದು. ಆತ ಕೇವಲ ವಾಹನವಲ್ಲ; ಕೈಲಾಸದ ದ್ವಾರಪಾಲಕ, ಪ್ರಮಥ ಗಣಗಳ ಅಧಿನಾಯಕ, ಅಪ್ರತಿಮ ಯೋಧ, ಶ್ರೇಷ್ಠ ಸಂಗೀತಜ್ಞ ಹಾಗೂ ಪರಮ ಭಕ್ತ

Gururaj Gantihole Column: ಹಾತಿಕಟ್ಟೆಯ ಹೊಂಡಗಳಲ್ಲಿರುವ ಈ ಮೀನುಮರಿಗಳ ಕಥೆ ಕೇಳಿ !

ಹಾತಿಕಟ್ಟೆಯ ಹೊಂಡಗಳಲ್ಲಿರುವ ಈ ಮೀನುಮರಿಗಳ ಕಥೆ ಕೇಳಿ !

ಮೀನು ಮರಿ ಉತ್ಪಾದನಾ ಕೇಂದ್ರದಿಂದ ತಂದ ಸಣ್ಣ ಮೀನು ಮರಿಗಳನ್ನು ಫಲಾನುಭವಿಗಳಿಗೆ ಉಚಿತ ವಾಗಿ ಅಥವಾ ಭಾರಿ ಸಹಾಯಧನದ ರೂಪದಲ್ಲಿ ಒದಗಿಸಲಾಗುತ್ತಿತ್ತು. ಸಣ್ಣ ರೈತರು ತಮ್ಮ ಜಮೀನಿನ ಹೊಂಡಗಳಲ್ಲಿ ಈ ಮರಿಗಳನ್ನು ಪೋಷಿಸಿ ಬೆಳೆಸುತ್ತಿದ್ದರು. ಮೀನುಗಳು ಸ್ವಲ್ಪ ದೊಡ್ಡದಾದ ನಂತರ ದಳಿಗಳ ಹಾವಳಿಯನ್ನು ತಪ್ಪಿಸಿ ಸರಕಾರವೇ ಅವುಗಳನ್ನು ನ್ಯಾಯಯುತ ಬೆಲೆಗೆ ರೈತರಿಂದ ನೇರವಾಗಿ ಖರೀದಿಸುತ್ತಿತ್ತು

Vishweshwar Bhat Column: ಇದು 'ನಾನು ಬಾಲ್ಡ್' ಎಂದು ಬೋಲ್ಡ್ ಆಗಿ ಹೇಳುವವರ ಕಾಲ!

ಇದು 'ನಾನು ಬಾಲ್ಡ್' ಎಂದು ಬೋಲ್ಡ್ ಆಗಿ ಹೇಳುವವರ ಕಾಲ!

ಜಗತ್ತಿನ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಜಾಗತಿಕ ಉದ್ಯಮವನ್ನು ಮುನ್ನಡೆಸು ತ್ತಿರುವ ಈ ಆರು ನಾಯಕರ ಕೊಡುಗೆಗಳನ್ನು ಶ್ಲಾಘಿಸುತ್ತಾ, 'ಬೋಳು' ಎಂಬುದು ಇಲ್ಲಿ ಕೇವಲ ಶಾರೀರಿಕ ಲಕ್ಷಣವಲ್ಲ, ಬದಲಿಗೆ ಅದು ಅನುಭವ, ದಾರ್ಶನಿಕತೆ, ನಾವೀನ್ಯ ಮತ್ತು ಸಾಂಪ್ರದಾಯಿಕ ಚೌಕಟ್ಟು ಗಳನ್ನು ಮುರಿಯುವ ಧೈರ್ಯದ ಸಂಕೇತವಾಗಿ ಚಿತ್ರಿಸಲಾಗಿದೆ.

Vishweshwar Bhat Column: ಇಲ್ಲಿ ರನ್ ವೇಯನ್ನು ಗುಡಿಸಬೇಕು!

ಇಲ್ಲಿ ರನ್ ವೇಯನ್ನು ಗುಡಿಸಬೇಕು!

ಪ್ರತಿಯೊಂದು ವಿಮಾನದ ಆಗಮನಕ್ಕೂ ಕೆಲವೇ ನಿಮಿಷಗಳ ಮುಂಚಿತವಾಗಿ ನೆಲದ ಸಿಬ್ಬಂದಿ (Ground Crew) ರನ್‌ವೇ ಮೇಲಿರುವ ಮರಳನ್ನು ಸಂಪೂರ್ಣವಾಗಿ ಗುಡಿಸಿ ತೆರವುಗೊಳಿಸ ಬೇಕಾಗುತ್ತದೆ! ಸಹಾರಾ ಮರುಭೂಮಿಯ ನಿರಂತರ ಗಾಳಿಗೆ ಕೊಚ್ಚಿಕೊಂಡು ಬರುವ ಮರಳು, ರನ್‌ವೇ ಮೇಲೆ ರಾಶಿಯಾಗುವುದರಿಂದ, ಈ ವಿಮಾನ ನಿಲ್ದಾಣದಲ್ಲಿ 'ಮರಳು ತೆರವುಗೊಳಿಸುವುದು' ಕೇವಲ ಒಂದು ಸ್ವಚ್ಛತಾ ಕಾರ್ಯವಲ್ಲ, ಬದಲಾಗಿ ನೂರಾರು ಪ್ರಯಾಣಿಕರ ಜೀವ ಉಳಿಸುವ ಅತ್ಯಂತ ಜವಾಬ್ದಾರಿ ಯುತ ಹಾಗೂ ಕಡ್ಡಾಯ ಸುರಕ್ಷತಾ ಪ್ರಕ್ರಿಯೆಯಾಗಿದೆ.

‌ಆಧುನಿಕ ಗ್ರಂಥಾಲಯ ವಿಜ್ಞಾನ ಪಿತಾಮಹ ರಂಗನಾಥನ್

ಆಧುನಿಕ ಗ್ರಂಥಾಲಯ ವಿಜ್ಞಾನ ಪಿತಾಮಹ ರಂಗನಾಥನ್

ಇಂದು ದೇಶ ವಿದೇಶಗಳಲ್ಲಿ ಎಐ ತಂತ್ರಜ್ಞಾನ ಮುಂಚೂಣಿಯಲ್ಲಿದೆ. ಪ್ರಮುಖವಾಗಿ ವಿವಿಧ ಗ್ರಂಥಾಲ ಯಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಟೋಟಗಳ ಮೂಲಕ ವಿವಿಧ ಚಟುವಟಿಕೆಗಳ ಮೂಲಕ ಕೃತಕ ಬುದ್ಧಿಮತ್ತೆಯ ಅರಿವನ್ನು ಮತ್ತು ಅನುಭಾವಾಧಾರಿತ ಕಲಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ.

Ganesh Hegde Column: ಎಥೆನಾಲ್‌ʼಗೆ ಸಮರ್ಪಕ ಪರ್ಯಾಯ ಬಯೋಬ್ಯುಟೆನಾಲ್‌: ಆದರೆ ಉತ್ಪಾದನೆ ಕಷ್ಟ !

ಎಥೆನಾಲ್‌ʼಗೆ ಸಮರ್ಪಕ ಪರ್ಯಾಯ ಬಯೋಬ್ಯುಟೆನಾಲ್‌: ಆದರೆ ಉತ್ಪಾದನೆ ಕಷ್ಟ !

ಹೊಸತಾಗಿ ತಯಾರಾದ ವಾಹನಗಳನ್ನು ಇ-20 ಹೊಂದಿಕೆ (ಕಂಪ್ಯಾಟಿಬಲ್) ಆಗಿ ತಯಾರಿಸಲಾಗುತ್ತಿದೆ. ಆದರೆ ಹಳೆಯ ವಾಹನಗಳು ಎಥೆನಾಲಿನ ಜಲಪ್ರೇಮದಿಂದಾಗಿ ಮತ್ತಷ್ಟು ಬೇಗ ಹಳೆಯದಾಗಿ, ಹಾಳಾಗುವ ಸಾಧ್ಯತೆ ಹೆಚ್ಚು! ಎಥೆನಾಲ್ ನಿರೋಧಕ ವಸ್ತುಗಳನ್ನು ಬಳಸಿ ತಯಾರಿಸಿದ ಎಂಜಿನ್‌ನಿಂದ ಈ ಸಮಸ್ಯೆಯನ್ನೇನೊ ಬಗೆಹರಿಸಬಹುದು, ಆದರೆ ಮೈಲೇಜನ್ನು ಮುಂಚಿನಷ್ಟಕ್ಕೆ ಹೆಚ್ಚಿಸಲು ಸಾಧ್ಯವೇ? ಎಥೆನಾಲ್ ಬೆರಕೆಯ ಪೆಟ್ರೋಲಿನಲ್ಲಿ ಇದು ಸಾಧ್ಯವಿಲ್ಲ.

Ravi Sajangadde Column: ಡಿಜಿಟಲ್ ಪಾವತಿ ಶುಲ್ಕ: ಸಾಧಕ ಬಾಧಕಗಳು

ಡಿಜಿಟಲ್ ಪಾವತಿ ಶುಲ್ಕ: ಸಾಧಕ ಬಾಧಕಗಳು

ಯಾವುದೇ ವಿಷಯದಲ್ಲಿ ತಮ್ಮದೇ ‘ನರೇಟಿವ್’ ಸೃಷ್ಟಿಸುವ ಸಾಮರ್ಥ್ಯ ಪಡೆದುಕೊಂಡಿರುವ ಸಾಮಾ ಜಿಕ ಮಾಧ್ಯಮಗಳಲ್ಲಿ ‘ಇನ್ಮುಂದೆ ಪ್ರತಿಯೊಂದು ಯುಪಿಐ ವಹಿವಾಟಿಗೂ ಶುಲ್ಕ ಪಾವತಿಸ ಬೇಕು’ ಎಂಬ ಅರ್ಥ ಕೊಡುವ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಇದರಿಂದಾಗಿ ಕೋಟ್ಯಂತರ ಬಳಕೆದಾರರು ಮತ್ತು ಸಣ್ಣ ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ವಾಸ್ತವವೇ ಬೇರೆ ಇದೆ.

Roopa Gururaj Column: ಕಲ್ಲಿನಲ್ಲಿ ಸಂಗೀತದ ಪ್ರತಿಧ್ವನಿ: ಚೋಳರ ವಾಸ್ತುಶಿಲ್ಪದ ವಿಸ್ಮಯ

ಕಲ್ಲಿನಲ್ಲಿ ಸಂಗೀತದ ಪ್ರತಿಧ್ವನಿ: ಚೋಳರ ವಾಸ್ತುಶಿಲ್ಪದ ವಿಸ್ಮಯ

ದೇವಾಲಯದ ಬಲಿಪೀಠ ಮತ್ತು ನಂದಿ ಮಂಟಪದ ಬಳಿ ಇರುವ ಏಳು ಸುಂದರವಾದ ಮೆಟ್ಟಿಲು ಗಳು ಒಂದು ರೋಮಾಂಚಕಾರಿ ರಹಸ್ಯವನ್ನು ಹೊಂದಿವೆ. ಈ ಮೆಟ್ಟಿಲುಗಳನ್ನು ಮೆಲ್ಲನೆ ತಟ್ಟಿದಾಗ, ಪ್ರತಿ ಯೊಂದು ಮೆಟ್ಟಿಲು ಕರ್ನಾಟಕ ಸಂಗೀತದ ಏಳು ಮೂಲ ಸ್ವರಗಳಾದ ‘ಸ, ರಿ, ಗ, ಮ, ಪ, ದ, ನಿ’ ಎಂಬ ವಿಭಿನ್ನ ನಾದಗಳನ್ನು ಸ್ಪಷ್ಟವಾಗಿ ಹೊರ ಹೊಮ್ಮಿಸುತ್ತದೆ. ಪ್ರಾಚೀನ ಕಾಲದ ಶಿಲ್ಪಿಗಳು ಇದನ್ನು ಹೇಗೆ ಸಾಽಸಿದರು? ಎಂದು ಹುಡುಕಾಡಿದಾಗ ಸಿಗುವ ಉತ್ತರ ಇದು.

Raghava Sharma Nidle Column: ಉ.ಪ್ರ.ಚುನಾವಣೆ: ಕೇಸರಿಗೆ ಮೇಲ್ಜಾತಿ ಮುನಿಸಿನ ಚಿಂತೆ

ಉ.ಪ್ರ.ಚುನಾವಣೆ: ಕೇಸರಿಗೆ ಮೇಲ್ಜಾತಿ ಮುನಿಸಿನ ಚಿಂತೆ

ಜೆಎಸ್ಪಿಗಂತೂ ಇದೊಂದು ಐತಿಹಾಸಿಕ ರಾಜಕೀಯ-ಚುನಾವಣಾ ಗೆಲುವು. ಅದೂ ಪಕ್ಷದ ಭದ್ರಕೋಟೆ ಎನಿಸಿದ ಕ್ಷೇತ್ರದಲ್ಲಿ ಮತ್ತು ಮೈತ್ರಿ ಸರಕಾರದಲ್ಲಿ ಬಿಜೆಪಿ ನಾಯಕರೇ ಮುಖ್ಯಮಂತ್ರಿ ಹುದ್ದೆಯಲ್ಲಿರು ವಾಗ ಸೋಲುಂಟಾಗಿರುವುದು ಬಿಜೆಪಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಕ್ಷೇತ್ರದ ಅವರ ಪ್ರಭಾವಳಿ ಕೆಲಸ ಮಾಡಲಿಲ್ಲ.

Vishweshwar Bhat Column: ವಿಮಾನದಲ್ಲಿ ಮಗುವಿನ ರಾದ್ಧಾಂತ

Vishweshwar Bhat Column: ವಿಮಾನದಲ್ಲಿ ಮಗುವಿನ ರಾದ್ಧಾಂತ

ವಿಮಾನವು ಟೇಕಾಫ್ ಆಗಲು ಸಿದ್ಧವಾಗುತ್ತಿದ್ದ ಸಮಯದಲ್ಲಿ ಮಗುವನ್ನು ಸೀಟ್‌ನಲ್ಲಿ ಕುಳ್ಳಿರಿಸಿ, ಸುರಕ್ಷತಾ ಬೆಲ್ಟ್ ಹಾಕಲು ವಿಮಾನದ ಸಿಬ್ಬಂದಿ ಹಾಗೂ ಮಗುವಿನ ಪೋಷಕರು ಎಷ್ಟು ಪ್ರಯತ್ನಿಸಿ ದರೂ ಸಾಧ್ಯವಾಗಲಿಲ್ಲ. ವಿಮಾನಯಾನ ನಿಯಮಗಳ ಪ್ರಕಾರ, ವಿಮಾನದಲ್ಲಿ ಪ್ರತಿಯೊಬ್ಬ ಪ್ರಯಾಣಿಕನೂ (ಸಣ್ಣ ಮಕ್ಕಳೂ ಸೇರಿದಂತೆ) ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ‌

Ganesh S Hegde Column: ಮಿಶ್ರ ಇಂಧನ ಎಥೆನಾಲ್‌ʼಗೆ ಬದಲಿ ಆಶಾಕಿರಣದ ಹುಡುಕಾಟ

ಮಿಶ್ರ ಇಂಧನ ಎಥೆನಾಲ್‌ʼಗೆ ಬದಲಿ ಆಶಾಕಿರಣದ ಹುಡುಕಾಟ

ಕೆಲ ಯುವಕರು ಪಾನೀಪುರಿಯಂತೆಯೆ ಇದನ್ನು ಬೆಂಗಳೂರಿನಲ್ಲಿ ಪ್ರಚುರಪಡಿಸಲು ಹೊಸೆದ ಹೊಸ ಹೆಸರೇ ‘ಬ್ರಾಹ್ಮಿನ್ಸ್ ಬಿಯರ್’! ಶರ್ಕರಪಿಷ್ಠ (ಕಾರ್ಬೋಹೈಡ್ರೇಟ್)ಯುಕ್ತ ಆಹಾರ ಪದಾರ್ಥ ಗಳನ್ನು ಕಿಣ್ವನ/ಹುದುಗಿಸಲು ಬಿಟ್ಟರೆ ಅದರಿಂದ ಹೊಮ್ಮುವುದೆ- ಹುಳಿಹೆಂಡ. ಹುದುಗುವಿಕೆಯಿಂದ (ಸೂಕ್ಷ್ಮಾ ಣುಜೀವಿಗಳ ಸಹಾಯದಿಂದ ನಡೆಯುವ ವಿಘಟನ ಜೀವ ರಾಸಾಯನಿಕ ಕ್ರಿಯೆ) ಹೆಂಡ(ಆಲ್ಕೊಹಾಲ್) ದೊಂದಿಗೆ ವಿವಿಧ ಹುಳಿ ಆಮ್ಲಗಳೂ ಉತ್ಪತ್ತಿಯಾಗುತ್ತವೆ.

Roopa Gururaj Column: ಸ್ಕ್ವಾಡ್ರನ್‌ ಲೀಡರ್‌ ಭಾವನಾ ಕಾಂತ್:‌ ಆಕಾಶವನ್ನೇ ಗೆದ್ದ ಭಾರತದ ಹೆಮ್ಮೆಯ ಪುತ್ರಿ

ಸ್ಕ್ವಾಡ್ರನ್‌ ಲೀಡರ್‌ ಭಾವನಾ ಕಾಂತ್:‌ ಆಕಾಶವನ್ನೇ ಗೆದ್ದ ಹೆಮ್ಮೆಯ ಪುತ್ರಿ

ಬಿಹಾರದ ದರ್ಭಾಂಗದಂತಹ ಒಂದು ಸಣ್ಣ ಪಟ್ಟಣದಿಂದ ಬಂದ ಹುಡುಗಿಯೊಬ್ಬಳು ಆಕಾಶದ ಎತ್ತರವನ್ನು ಮುಟ್ಟುವ ಕನಸು ಕಾಣುವುದು ಮತ್ತು ಆ ಕನಸನ್ನು ಕೇವಲ ನನಸಾಗಿಸುವುದು ಮಾತ್ರ ವಲ್ಲದೆ, ಇಡೀ ದೇಶವೇ ತನ್ನತ್ತ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡುವುದು ನಿಜಕ್ಕೂ ಒಂದು ಅದ್ಭುತ ಹಾಗೂ ರೋಮಾಂಚಕಾರಿ ಕಥೆ. ಈ ಕಥೆಯ ನಾಯಕಿ ಬೇರಾರೂ ಅಲ್ಲ, ಭಾರತೀಯ ವಾಯುಪಡೆಯ ( Indian Air Force ) ಹೆಮ್ಮೆಯ ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್.

Ranjith H Ashwath Column: ಹೈಕಮಾಂಡ್‌ ತೀರ್ಮಾನ ಅಂತಿಮ ಹೌದು, ಆದರೆ..!

Ranjith H Ashwath Column: ಹೈಕಮಾಂಡ್‌ ತೀರ್ಮಾನ ಅಂತಿಮ ಹೌದು, ಆದರೆ..!

ಕೇವಲ ಘೋಷಣೆ ಮಾತ್ರವಲ್ಲದೇ, ನಿತ್ಯ ಹತ್ತಾರು ಸಭೆ, ಗಣ್ಯರ ಭೇಟಿ ಸೇರಿದಂತೆ ಬ್ಯುಸಿ ಶೆಡ್ಯೂಲ್ ಮೂಲಕ ಕರ್ನಾಟಕ ಭಿನ್ನ ರೀತಿಯ ಆಡಳಿತ ನೀಡಬಹುದೇನೋ ಎನ್ನುವ ಮಾತುಗಳನ್ನು ಆಡುವಂತೆ ಮಾಡಿದ್ದರು. ಆದರೆ ಸಚಿವ ಸಂಪುಟ ವಿಸ್ತರಣೆಯ ಸಮಯದಲ್ಲಿ ವಾರಗಟ್ಟಲೇ ದೆಹಲಿ ನಾಯಕರ ಹಾದಿ ಕಾದಿದ್ದು, ವಿಸ್ತರಣೆಯ ದಿನಾಂಕವನ್ನು ನಾಲ್ಕೈದು ಬಾರಿ ಮುಂದೂಡಿಕೆ ಮಾಡಿ ಹೈಕಮಾಂಡ್‌ನ ಒಪ್ಪಿಗೆಗೆ ಕಾದು ಕುಳಿತಿದ್ದು, ಸಂಪುಟ ವಿಸ್ತರಣೆಯಾದ ಬಳಿಕ ಖಾತೆ ಹಂಚಿಕೆಗೆ ವಾರಗಟ್ಟಲೇ ಸಮಯ ತೆಗೆದುಕೊಂಡಿದ್ದು ನೋಡಿ ರಾಜ್ಯದ ಜನ ಇಷ್ಟು ದಿನ ಕಂಡಿದ್ದ ಡಿ.ಕೆ.ಶಿವಕುಮಾರ್‌ಗಿಂತ ಭಿನ್ನವಾಗಿ ಕಂಡರು ಎಂದರೆ ತಪ್ಪಾಗುವುದಿಲ್ಲ

Naveen Sagar Column: ಗಾಂಧಿ ನೆಹರೂಗಳ ನಡುವೆ ಕಳೆದುಹೋದ ವೆಂಕಯ್ಯ !

ಗಾಂಧಿ ನೆಹರೂಗಳ ನಡುವೆ ಕಳೆದುಹೋದ ವೆಂಕಯ್ಯ !

ಗಣರಾಜ್ಯೋತ್ಸವದ ದಿನವಾದರೂ ಹಾರಾಡುವ ಬಾವುಟ ಕಾಣಬಹುದಾ ಅಂದರೆ ಆಗಲೂ ನಮ್ಮ ದುರದೃಷ್ಟಕ್ಕೆ ಹಾರಾಡುವ ಬಾವುಟದ ದೃಶ್ಯ ಸಿಗುತ್ತಲೇ ಇರಲಿಲ್ಲ. ದೂರದ ನೆಹರೂ ಮೈದಾನದಲ್ಲಿ, ಗಾಂಧಿ ಮಂದಿರದ ಎದುರು ದೊಡ್ಡ ಬಾವುಟಗಳು ಹಾರಾಡುತ್ತವಂತೆ ಅಂತ ಕೇಳಿದ್ದಷ್ಟೆ. ಹೀಗಾಗಿ ನಮ್ಮ ಪಾಲಿಗೆ ಈ ಹಾರಾಡುತ್ತಿದ್ದ ಬಾವುಟ ಅಂದರೆ ಅದು ಈ ಪದ್ಯದ ಜತೆಗಿದ್ದ ಚಿತ್ರವಷ್ಟೆ. ಆದರೆ ಇದೊಂದು ಮಾದರಿ ಚಿತ್ರವಾಗಿ ಬಿಟ್ಟಿತ್ತು.

Rangaswamy Mookanahalli Column: ಬಣ್ಣ ಕಳೆದು ಕಪ್ಪು ಬಿಳುಪಾಗುತ್ತಿದೆ ಬದುಕು !

ಬಣ್ಣ ಕಳೆದು ಕಪ್ಪು ಬಿಳುಪಾಗುತ್ತಿದೆ ಬದುಕು !

ಮೂರು ದಶಕದ ಹಿಂದೆ ಯಾವುದಾದರೂ ಊರಿಗೆ ಹೋದರೆ ಆ ಊರಿನ ವಿಶೇಷತೆ ಕಣ್ಣಿಗೆ ಕಾಣುತ್ತಿತ್ತು. ಹೆಂಚಿನ ಮನೆ ಇರಬಹುದು, ಹೂವು, ಹಣ್ಣು, ಜನರು ಮಾತಾಡುವ ರೀತಿ, ಅವರು ನೀಡುವ ಪ್ರೀತಿ, ಹೀಗೆ ಒಟ್ಟಾರೆ ಆ ಪ್ರದೇಶಕ್ಕೆ ಸೀಮಿತವಾಗಿರುತ್ತಿದ್ದ ಒಂದಷ್ಟು ವಿಶೇಷತೆಯನ್ನು ಅನುಭವಿಸಿ ಬರುತ್ತಿದ್ದೆವು. ಇವತ್ತಿಗೆ ಶಿವಮೊಗ್ಗದ ಬಡಾವಣೆ, ಬೆಂಗಳೂರಿನ ಬಡಾವಣೆ, ಮೈಸೂರಿನ ಬಡಾವಣೆ ಎಲ್ಲವೂ ಒಂದೇ ಆಗಿ ಬಿಟ್ಟಿದೆ. ಶೆಟ್ಟರ ದಿನಸಿ ಅಂಗಡಿಗಳು ಕಣ್ಮರೆಯಾಗಿವೆ.

Vishweshwar Bhat Column: ಬಿನ್‌ ಅಂದ್ರೆ ಏನರ್ಥ ?

Vishweshwar Bhat Column: ಬಿನ್‌ ಅಂದ್ರೆ ಏನರ್ಥ ?

ಕನ್ನಡದಲ್ಲಿ ವ್ಯಕ್ತಿಯ ಹೆಸರುಗಳನ್ನು ಬರೆಯುವಾಗ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶ ಗಳಲ್ಲಿ, ಸರಕಾರಿ ದಾಖಲೆಗಳಲ್ಲಿ ಅಥವಾ ಹಳೆಯ ಕಂದಾಯ ಪತ್ರಗಳಲ್ಲಿ ‘ಬಿನ್’ ( Bin ) ಎಂಬ ಪದವನ್ನು ಬಹುವಾಗಿ ಬಳಸಲಾಗುತ್ತದೆ. ‘ಬಿನ್’ ಎಂಬುದು ಮೂಲತಃ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯ ಪದ. ಅರೇಬಿಕ್ ಭಾಷೆಯಲ್ಲಿ ‘ಇಬ್ನ್’ ( Ibn ) ಅಥವಾ ’ಬಿನ್’ ಎಂದರೆ ‘ಇನ್ನೊಬ್ಬರ ಮಗ ಅಥವಾ ಮಗಳು’ ಎಂದರ್ಥ.

Vishweshwar Bhat Column: 'ಲೇಟ್' ಪದದ ಕುರಿತು

Vishweshwar Bhat Column: 'ಲೇಟ್' ಪದದ ಕುರಿತು

ಸತ್ತವರ ಹೆಸರಿನ ಮುಂದೆ 'Late' (ಲೇಟ್) ಎಂಬ ಪದವನ್ನು ಬಳಸುವುದು ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆ ಬಳಸುವುದು ಸಾಮಾನ್ಯ. 'Late' ಎಂದರೆ ಕನ್ನಡದಲ್ಲಿ 'ದಿವಂಗತ' ಅಥವಾ 'ಮೃತ' ಎಂದರ್ಥ. ವ್ಯಕ್ತಿಯೊಬ್ಬರು ಇಹಲೋಕ ತ್ಯಜಿಸಿದ್ದಾರೆ ಎಂಬುದನ್ನು ಗೌರವಪೂರ್ವಕವಾಗಿ ಮತ್ತು ಸ್ಪಷ್ಟವಾಗಿ ಸೂಚಿಸಲು ಅವರ ಹೆಸರಿನ ಮುಂದೆ ಈ ಪದವನ್ನು ಸೇರಿಸಲಾಗುತ್ತದೆ. ಉದಾಹರಣೆಗೆ, 'Late Mr. Sharma' ಎಂದರೆ 'ದಿವಂಗತ ಶ್ರೀ ಶರ್ಮಾ' ಎಂದರ್ಥ.

Kiran Upadhyay Column: ಎಂದೂ ಆರದ ‘ನಂದಾ’ ದೀಪ

Kiran Upadhyay Column: ಎಂದೂ ಆರದ ‘ನಂದಾ’ ದೀಪ

ಆಕೆಯ ಹೆಸರು ನಂದಾ. ನೀಲವೇಣಿ, ಮತ್ಸ್ಯನಯನೆ, ಮುಗ್ಧ ನಗುವಿನ, ಸ್ನಿಗ್ಧ ಸೌಂದರ್ಯದ, ಮುದ್ದು ಮೊಗದ, ಕುಸುಮ ಕೋಮಲೆ, ನಂದಾ. ಜೀವನದ ಮೊದಲ ಕೆಲವು ವರ್ಷ ‘ಬೇಬಿ ನಂದಾ’ ಆಗಿದ್ದರಿಂದ ಕೆಲವರ ಪಾಲಿಗೆ ಆಕೆ ಕೊನೆಯವರೆಗೂ ಬೇಬಿ ನಂದಾ. ಈಗಲೂ ಆಕೆ ಯಾರೆಂದು ನೆನಪಾಗದಿದ್ದರೆ, ‘ಯೇ ಸಮಾ, ಸಮಾ ಹೈ ಯೆ ಪ್ಯಾರಕಾ...’ ಎಂದು ತೆರೆಯ ಮೇಲೆ ಹಾಡಿದವಳನ್ನು ನೆನಪಿಸಿಕೊಳ್ಳಿ, ನಂದಾಳ ಮುಖ ಕಣ್ಣೆದುರಿಗೆ ಬಂದು ನಿಲ್ಲುತ್ತದೆ.

Prakash Shesharaghavachar Column: ರಾಹುಲ್ ಗಾಂಧಿ ಮತ್ತೊಮ್ಮೆ ಫೇಲ್!

Prakash Shesharaghavachar Column: ರಾಹುಲ್ ಗಾಂಧಿ ಮತ್ತೊಮ್ಮೆ ಫೇಲ್!

ಆಡಳಿತ ಪಕ್ಷದ ಈ ಗಂಭೀರ ವೈಫಲ್ಯವು ವಿರೋಧ ಪಕ್ಷಗಳಿಗೆ ರಾಜಕೀಯವಾಗಿ ದೊರೆತ ಅಪರೂಪದ ಅವಕಾಶವಾಗಿತ್ತು. ಕಳೆದ ಹನ್ನೆರಡು ವರ್ಷಗಳಿಂದ ಮೋದಿ ಸರಕಾರವನ್ನು ವಿವಿಧ ವಿಚಾರಗಳಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಮಾಡಿದ ಅನೇಕ ಪ್ರಯತ್ನಗಳು ನಿರೀಕ್ಷಿತ ಫಲ ನೀಡದ ಹಿನ್ನೆಲೆಯಲ್ಲಿ, ನೀಟ್ ವಿವಾದವು ವಿರೋಧ ಪಕ್ಷಗಳಿಗೆ ಹೊಸ ರಾಜಕೀಯ ಮರುಜನ್ಮದಂತಾಗಿತ್ತು. ಈ ಅವಕಾಶವನ್ನು ಬಳಸಿಕೊಂಡು ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರ ಪರವಾಗಿ ಬೃಹತ್ ಜನಾಂದೋಲನ ರೂಪಿಸಿ ಸರಕಾರವನ್ನು ಉತ್ತರದಾಯಿತ್ವಕ್ಕೆ ಒಳಪಡಿಸುವ ಅವಕಾಶ ಅವರ ಮುಂದಿತ್ತು.

Thimmanna Bhagwath Column: ವಿದೇಶಿ ದೇಣಿಗೆ ನಿಯಂತ್ರಣಕ್ಕೆ ಅಮೆರಿಕದ ವಿರೋಧವೇಕೆ?

ವಿದೇಶಿ ದೇಣಿಗೆ ನಿಯಂತ್ರಣಕ್ಕೆ ಅಮೆರಿಕದ ವಿರೋಧವೇಕೆ?

ಏನಿದು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ? ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ ಹೊಸದಲ್ಲ. 1976ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಈ ಕಾಯಿದೆ ಜಾರಿಗೆ ಬಂತು. ಆನಂತರ 2010ರ ಯುಪಿಎ ಸರಕಾರ, ಪರಿಷ್ಕೃತ ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ 2010ನ್ನು ಜಾರಿಗೆ ತಂದಿತು.

Loading...