ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಅಂಕಣಗಳು
Roopa Gururaj Column: ಭಕ್ತಿ ಒಂದಿದ್ದರೆ, ಭಗವಂತ ಕೈ ಬಿಡುವುದಿಲ್ಲ

ಭಕ್ತಿ ಒಂದಿದ್ದರೆ, ಭಗವಂತ ಕೈ ಬಿಡುವುದಿಲ್ಲ

ಗುರುಗಳು ಶಾಂತವಾಗಿಯೇ ಇದ್ದರು, ಒಂದು ಮಾತನ್ನೂ ಆಡದೆ, ಸ್ವಲ್ಪ ದೂರದಲ್ಲಿ ಒಂದು ಗುಹೆ ಕಾಣುತ್ತಿತ್ತು, ಶಿಷ್ಯನ ಕೈಹಿಡಿದು ಕೊಂಡು ಆ ಗುಹೆಯೊಳಗೆ ನಡೆದು, ಇಬ್ಬರೂ ಅಲ್ಲಿ ಅಡಗಿ ಕುಳಿತರು. ಸ್ವಲ್ಪ ಸಮಯದ ನಂತರ, ಕೊಲೆಗಡುಕರ ಗುಂಪು ಆ ಗುಹೆಯ ಬಾಗಿಲಲ್ಲಿ ಬಂದು ನಿಂತಿತು.

Dr Murali Mohan Choontaru Column: ಬಾಯಿಯಲ್ಲೇ ಬ್ರಹ್ಮಾಂಡ

ಬಾಯಿಯಲ್ಲೇ ಬ್ರಹ್ಮಾಂಡ

ವೈದ್ಯರ ಭೇಟಿ ಅತೀ ಅವಶ್ಯಕ. ನಮ್ಮ ಬಾಯಿ ಎನ್ನುವುದು ‘ಫಿಸಿಷಿಯನ್ಸ್ ಮಿರರ್’ ಎಂದು ಕರೆಯ ಲಾಗುತ್ತದೆ. ಲಿವರ್ ಸಮಸ್ಯೆ, ರಕ್ತ ಹೀನತೆ, ಜಾಂಡಿಸ್, ಪ್ಲೇಟ್‌ಲೆಟ್ ಕೊರತೆ, ಡೆಂಗ್ಯುಜ್ವರ, ರಕ್ತದ ಕ್ಯಾನ್ಸರ್, ವಿಟಮಿನ್ ಸಿ ಕೊರತೆ, ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆ, ಏಡ್ಸ್, ಹೆಪಟೈಟಿಸ್, ಮಧುಮೇಹ ರೋಗ, ಅಧಿಕ ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಶಿಲೀಂದ್ರಗಳ ಸೋಂಕು, ಗ್ಯಾಸ್ಟ್ರಿಕ್ ಸಮಸ್ಯೆ, ಶ್ವಾಸ ಕೋಶದ ಕೀವು, ರಕ್ತದ ಕಾಯಿಲೆಗಳು, ಔಷಧಿಗಳ ಅಡ್ಡ ಪರಿಣಾಮ, ಅಪಸ್ಮಾರ ರೋಗ, ವೈರಾಣು ಸೋಂ ಕು, ರಸದೂತಗಳ ಏರುಪೇರು, ನಿದ್ರಾಹೀನತೆ, ಚಿಕುನ್‌ಗುನ್ಯ ಜ್ವರ, ಥೈರಾಯ್ಡ್ ಸಮಸ್ಯೆ ಹೀಗೆ ಹತ್ತಾರು ರೋಗಗಳು ನಮ್ಮ ಬಾಯಿಯೊಳಗೆ ಬೇರೆ ಬೇರೆ ರೂಪಗಳಲ್ಲಿ ಪ್ರಕಟಗೊಳ್ಳುತ್ತದೆ.

Gururaj Gantihole Column: ಆಧುನಿಕತೆಯಲ್ಲಿ ಕಾಣೆಯಾಗುತ್ತಿರುವ ಎಪಿಎಂಸಿ ವ್ಯವಸ್ಥೆ

ಆಧುನಿಕತೆಯಲ್ಲಿ ಕಾಣೆಯಾಗುತ್ತಿರುವ ಎಪಿಎಂಸಿ ವ್ಯವಸ್ಥೆ

ತನ್ನ ಬೆಳೆಗಳನ್ನು ಯಾವುದೇ ಹಳ್ಳಿಯ ಯಾವುದೇ ಸಂತೆಪೇಟೆಯಲ್ಲಿ ಮಾರಾಟ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದ ರೈತ, ಕ್ರಮೇಣ ದಳಿಗಳ ನಿಯಂತ್ರಣಕ್ಕೊಳಪಟ್ಟು ಮಾರುಕಟ್ಟೆಗಳಲ್ಲಿ ತನ್ನ ಬೆಳೆಗಳನ್ನು ಏಜೆಂಟರುಗಳಿಗೆ ಮಾರುತ್ತಿದ್ದಾನೆ. ಕಾಲ ಬದಲಾ ಗಿದ್ದು ಬಿಟ್ಟರೆ, ಬ್ರಿಟಿಷರಿಂದ ಹಿಡಿದು, ಈಗಿನ ಸರಕಾರದವರೆಗೆ ಇರುವುದು ಅದೇ ಕಮಿಷನ್ ವ್ಯವಸ್ಥೆ!

Harish Kera Column: ಸುನಿತಾ ನೆಪದಲ್ಲಿ ಕೆಲವು ಸಂಗತಿಗಳು

ಸುನಿತಾ ನೆಪದಲ್ಲಿ ಕೆಲವು ಸಂಗತಿಗಳು

ಸುನಿತಾ ಅವರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಅವರು ಬಾಹ್ಯಾಕಾಶ ಕೇಂದ್ರಕ್ಕೆ ಹೋಗುವ ಮುನ್ನ ತಮ್ಮ ಜೊತೆಗೆ ಗಣೇಶನ ವಿಗ್ರಹ ಮತ್ತು ಭಗವದ್ಗೀತೆ ಕೊಂಡೊಯ್ದರು. ತಾವು ಪ್ರಾಕ್ಟೀಸಿಂಗ್ ಹಿಂದೂ ಎಂದು ಹೇಳಿಕೊಳ್ಳುವುದರಲ್ಲಿ ಸುನಿತಾ ಹಿಂದೆ ಬಿದ್ದಿಲ್ಲ. ಆದರೆ ಸುನಿತಾ ಹೋಗುತ್ತಿರುವುದು ಆಧುನಿಕ ವಿಜ್ಞಾನ- ತಂತ್ರಜ್ಞಾನದ ಉತ್ಕೃಷ್ಟ ಫಲ ಎನ್ನಬಹುದಾದ ರಾಕೆಟ್

Dr Vijay Darda Column: ರೈಲಿಗೆ ರೈಲೇ ಹೈಜಾಕ್‌ ಮತ್ತು ರಕ್ತದ ಹೊಳೆ

ರೈಲಿಗೆ ರೈಲೇ ಹೈಜಾಕ್‌ ಮತ್ತು ರಕ್ತದ ಹೊಳೆ

ಬ್ರಿಟಿಷರು ಸ್ವಾತಂತ್ರ್ಯ ನೀಡಿ ಬ್ರಿಟನ್ನಿಗೆ ಮರಳಿದ ಮೇಲೆ ಬಲೂಚಿಸ್ತಾನ 227 ದಿನಗಳ ಕಾಲ ಸ್ವತಂತ್ರ ದೇಶವಾಗಿತ್ತು. ನಂತರ ಅದನ್ನು ಪಾಕಿಸ್ತಾನ ವಶಪಡಿಸಿಕೊಂಡಿತು. ಅಂದಿನಿಂದ ಈವರೆಗೂ ಬಲೂಚಿ ಸ್ತಾನದ ಮೇಲೆ ಪಾಕಿಸ್ತಾನ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಲೇ ಬಂದಿದೆ. ಇದಕ್ಕೆ ಕೊನೆ ಯಾವಾಗ?

Vishweshwar Bhat Column: ಹಕ್ಕಿಗಳ, ಕಪ್ಪೆಗಳ ಬಗ್ಗೆಯೂ ಸದನದಲ್ಲಿ ಸಭಾತ್ಯಾಗ ಆಗಬೇಕು !

ಹಕ್ಕಿಗಳ, ಕಪ್ಪೆಗಳ ಬಗ್ಗೆಯೂ ಸದನದಲ್ಲಿ ಸಭಾತ್ಯಾಗ ಆಗಬೇಕು !

ಸುಮಾರು ಹನ್ನೆರಡು ವರ್ಷಗಳ ಹಿಂದೆ, ನಾನು ಒಂದು ಅಂಕಣದಲ್ಲಿ ಬರೆದಿದ್ದೆ. ದೊಡ್ಡಾಲದ ಮರದ ನೆರಳಲ್ಲಿ ಕರ್ನಾಟಕ ಸರಕಾರ ಸಚಿವ ಸಂಪುಟದ ಸಭೆಯನ್ನು ನಡೆಸಬೇಕೆಂದು. ಅರಣ್ಯ ವೃದ್ಧಿ, ಸಂರ ಕ್ಷಣೆ ಬೇರೆ ಮಾತಾಯಿತು. ಒಂದು ಮರದ ಸಂರಕ್ಷಣೆಯೂ ನಮಗೆ ಮುಖ್ಯವಾಗಬೇಕು ಎಂದು ಬರೆದಿದ್ದೆ.

Vishweshwar Bhat Column: ಸಾಕುಪ್ರಾಣಿಗಳಿಗೂ ಕೆಫೆ

ಸಾಕುಪ್ರಾಣಿಗಳಿಗೂ ಕೆಫೆ

ಪ್ರಾಣಿ ಕೆಫೆ ಅಥವಾ ಸಾಕುಪ್ರಾಣಿ ಕೆಫೆ ಎಂದೂ ಕರೆಯುವ ಒಂದು ವಿಶಿಷ್ಟ ಸ್ಥಳವಾಗಿದ್ದು, ಜನರು ಆಹಾರ ಮತ್ತು ಪಾನೀಯಗಳನ್ನು ಆನಂದಿಸುವಾಗ ಬೆಕ್ಕು, ನಾಯಿ, ಮೊಲ, ಗೂಬೆ ಅಥವಾ ಕುರಿ ಗಳಂ ಥ ವಿವಿಧ ಪ್ರಾಣಿಗಳನ್ನು ನೋಡಬಹುದು ಮತ್ತು ಅವುಗಳ ಜತೆ ಆಟವಾಡಲೂಬಹುದು. ಮೊದಲ ಪ್ರಾಣಿ ಕೆಫೆ 1998ರಲ್ಲಿ ತೈವಾನ್‌ನಲ್ಲಿ ಆರಂಭವಾಯಿತು.

Roopa Gururaj Column: ಒಡಹುಟ್ಟಿದವರು ತಂದೆ ತಾಯಿಯ ಸ್ಥಾನ ತುಂಬಬೇಕು

ಒಡಹುಟ್ಟಿದವರು ತಂದೆ ತಾಯಿಯ ಸ್ಥಾನ ತುಂಬಬೇಕು

ಅಣ್ಣನಿಗೆ ತಂಗಿ ಪರಿಸ್ಥಿತಿ ಅರ್ಥವಾಗುತ್ತದೆ. ನೀರನ್ನು ಕುಡಿದು ಓಹೋ ಈ ಸೋಡಾ ನನಗೆ ಬಹಳ ಇಷ್ಟ ಚೆನ್ನಾಗಿದೆ ಎಂದನು. ಇದನ್ನು ಕೇಳಿದ ಅತ್ತಿಗೆ ತಾಯಿಗೆ ಆಸೆಯಾಯಿತು ಸೋಡಾ ನನಗೂ ಸ್ವಲ್ಪ ಕೊಡು ಎಂದರು. ಅತ್ತಿಗೆ ತಾಯಿಯ ಮುಂದೆ ತನ್ನ ಮರ್ಯಾದೆ ಹೋಯಿತು ಎಂದು ಕೊಂಡಿದ್ದಳು.

Dr J N Jagannath Column: ಬ್ಯಾಂಕುಗಳಲ್ಲಿ ಏರುತ್ತಿರುವ ಸಾಲದ ಮಟ್ಟ

ಬ್ಯಾಂಕುಗಳಲ್ಲಿ ಏರುತ್ತಿರುವ ಸಾಲದ ಮಟ್ಟ

ಠೇವಣಿದಾರರು ಹಣ ವಾಪಸ್ಸು ಪಡೆಯಲು ಇಚ್ಛಿಸಿದಾಗ, ತಕ್ಷಣವೇ ಬ್ಯಾಂಕುಗಳು ನೀಡುವುದಕ್ಕೆ ಇದು ಅನುವುಮಾಡಿಕೊಡುತ್ತದೆ. ಜತೆಗೆ ಬ್ಯಾಂಕುಗಳು ಸರಕಾರಿ ಹೂಡಿಕೆ, ಬೇಗನೆ ದ್ರವ್ಯರೂಪಕ್ಕೆ ಪರಿವರ್ತಿಸ ಬಹುದಾದ ಹೂಡಿಕೆಯನ್ನು (ಎಸ್‌ಎಲ್‌ ಆರ್) ಹೊಂದಿರಬೇಕಾಗುತ್ತದೆ. ಸಾಲ, ನಗದು ರೂಪ, ದ್ರವ್ಯ ರೂಪದ ಹೂಡಿಕೆ ಈ ರೀತಿ ಬ್ಯಾಂಕು ಹಣವನ್ನು ಉಪಯೋಗಿಸುವಾಗ, ಠೇವಣಿಯೇ ಸಾಲಕ್ಕಿಂತ ಅಧಿಕವಾಗಿರಬೇಕಾಗುತ್ತದೆ.

Ravi Hunj Column: ಜಾತಿಪೀಠಿಗಳು ನಾಟಕ ಆಡಿಸುವುದರಲ್ಲಿ ಮಗ್ನರಾಗಿದ್ದಾರೆ !

ಜಾತಿಪೀಠಿಗಳು ನಾಟಕ ಆಡಿಸುವುದರಲ್ಲಿ ಮಗ್ನರಾಗಿದ್ದಾರೆ !

ವೀರಶೈವರಲ್ಲಿ ಎಲ್ಲರೂ ಇಷ್ಟಲಿಂಗವನ್ನು ಧರಿಸುವುದು ಮತ್ತು ಪ್ರತಿಯೊಬ್ಬನೂ/ಳೂ ಶಿವೈಕ್ಯ/ಲಿಂಗೈ ಕ್ಯರಾಗಿ ಶಿವನೇ ಆಗುತ್ತಾರೆ ಎಂಬ ನಂಬಿಕೆ ಇರುವುದು. ಆದ್ದರಿಂದಲೇ ಈ ಪಿನೀಲ್ ಗ್ರಂಥಿಯನ್ನು ಅಧ್ಯಾ ತ್ಮಿಗಳು ಶಿವನ ಮೂರನೇ ಕಣ್ಣು ಎನ್ನುತ್ತಾರೆ. ಈ ಆತ್ಮಜಾಗೃತಿಯ ತ್ರಾಟಕ ಮಾರ್ಗದಲ್ಲಿ ಮೊದಲಿಗೆ ಸಾಧಕನಿಗೆ ನಿರಾಳ ಭಾವವು ಮೂಡಲಾರಂಭಿಸಿ ನಂತರ ಆತನ ಎಲ್ಲಾ ನೋವಿನ ಭಾವಗಳು ಮಾಯ ವಾಗುತ್ತವೆ.

Lokesh Kaayarga Column: ಹೆತ್ತವರನ್ನು ಹೊರಗಟ್ಟಿ ಗಂಗೆಯಲ್ಲಿ ಮಿಂದರೇನು ಫಲ ?

ಹೆತ್ತವರನ್ನು ಹೊರಗಟ್ಟಿ ಗಂಗೆಯಲ್ಲಿ ಮಿಂದರೇನು ಫಲ ?

ಬದಲಾದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾಲ ಘಟ್ಟದಲ್ಲಿ ಅತ್ಯಂತ ಹೆಚ್ಚು ಶಿಥಿಲ ವಾಗಿರುವುದು ನಮ್ಮ ಕುಟುಂಬ ವ್ಯವಸ್ಥೆ. ಈ ಕುಟುಂಬ ವ್ಯವಸ್ಥೆಯನ್ನು ಪರಸ್ಪರ ಪ್ರೀತಿ, ವಿಶ್ವಾಸ, ಕಾಳಜಿ, ಗೌರವಗಳಿಂದಷ್ಟೇ ಬಲಪಡಿಸಲು ಸಾಧ್ಯ. ಸಹಾಯವಾಣಿ, ದೂರಿನ ವ್ಯವಸ್ಥೆ, ಕಾನೂನುಗಳು ಹಿರಿಯ ನಾಗರಿಕರಿಗೆ ತಾತ್ಕಾಲಿಕ ಉರುಗೋಲುಗಳಾಗಬಹುದೇ ವಿನಾ ಮನಸ್ಸಿಗೆ ನೆಮ್ಮದಿ, ಸಾಂತ್ವನ ನೀಡಲಾರದು. ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಪ್ರೀತಿ, ವಿಶ್ವಾಸದ ಒರತೆ ತುಂಬಿ ಮಾನವೀಯ ಮೌಲ್ಯಗಳು ಬತ್ತಿ ಹೋಗದಂತೆ ನೋಡಿಕೊಳ್ಳಬೇಕಿದೆ. ಹೆತ್ತವರ ಕೈಯಲ್ಲಿ ಆಸ್ತಿ ಬರೆಸಿಕೊಂಡು, ಹೊರ ತಳ್ಳುವ ಮಕ್ಕಳ ಸಂತಾನ ಹೆಚ್ಚಾಗದಿರಲೆಂದು ಪ್ರಾರ್ಥಿಸಬೇಕಿದೆ.

Prakash Shesharaghavachar Column: ಕೇಜ್ರಿವಾಲ್:‌ ಅಧಿಕಾರ-ಅಹಂಕಾರ-ಅಧಃಪತನ

ಕೇಜ್ರಿವಾಲ್:‌ ಅಧಿಕಾರ-ಅಹಂಕಾರ-ಅಧಃಪತನ

ಕೇಜ್ರಿವಾಲ್‌ರವರ ವಿಚಾರದ ಆಕರ್ಷಣೆಯಿಂದಾಗಿ ‘ಆಪ್’ ದೇಶಾದ್ಯಂತ ಹೊಸ ಅಲೆಯನ್ನು ಸೃಷ್ಟಿ ಸಿತ್ತು ಎಂದರೆ ಅತಿಶಯೋಕ್ತಿಯಲ್ಲ. ಆದರೆ ತಪ್ಪಾಗಿದ್ದು ಕೇಜ್ರಿವಾಲರಿಂದಲೇ. ಅವರ ಹಲವು ವೈರು ದ್ಧ್ಯದ ನಿಲುವುಗಳು ಮತ್ತು ಅವಕಾಶವಾದಿ ವರ್ತನೆಗಳು ಹನುಮಂತನ ಬಾಲದಂತೆ ಬೆಳೆದಿದ್ದು ಇದಕ್ಕೆ ಕಾರಣ. ಕೇಜ್ರಿವಾಲರು ಪದೇ ಪದೆ ತಳೆಯುತ್ತಿದ್ದ ಗೊಂದಲದ ನಿಲುವುಗಳು ಅವರ ಬಗೆಗಿನ ವಿಶ್ವಾಸಾ ರ್ಹತೆಗೆ ಭಾರಿ ಪೆಟ್ಟು ನೀಡಿದವು.

Dr N Someshwara Column: ಮನಸ್ಸಿನ ಮೌಲ್ಯಮಾಪನವು ಸಾಧ್ಯವೇ ?

ಮನಸ್ಸಿನ ಮರುಮೌಲ್ಯಮಾಪನವು ಸಾಧ್ಯವೇ ?

ನಮ್ಮ ಮನಸ್ಸು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಮನಸ್ಸು ಎನ್ನುವುದು ಅಮೂರ್ತ. ಆದರೆ ಮನಸ್ಸು ಎನ್ನುವುದು ಇದೆ ಎಂದು ನಮಗೆ ಗೊತ್ತು. ಆದರೆ ಎಲ್ಲಿದೆ ಎಂದರೆ, ನಮಗೆ ಗೊತ್ತಿಲ್ಲ, ಬಹುಶಃ ಮಿದುಳಿ ನಲ್ಲಿ ಇದ್ದರೆ ಇರಬಹುದು ಎಂಬ ಅನುಮಾನದ ಉತ್ತರವನ್ನು ನೀಡಬೇಕಾಗುತ್ತದೆ. ಮನಸ್ಸು ಇರುವು ದರಿಂದ ನಾವು ಯೋಚಿಸುತ್ತೇವೆ.

Vishweshwar Bhat Column: ಶಿಂಟೋ ಧರ್ಮದ ಕುರಿತು

ಶಿಂಟೋ ಧರ್ಮದ ಕುರಿತು

ಶಿಂಟೋ ಧರ್ಮದ ಹುಟ್ಟು ಹಳೆಯ ಜಪಾನಿ ಜಾನಪದ ನಂಬಿಕೆಗಳಿಗೆ ಸಂಬಂಧಿಸಿದೆ. ಇದು ನೈಸರ್ಗಿಕ ಶಕ್ತಿಗಳನ್ನು ಪೂಜಿಸುವ ಧಾರ್ಮಿಕ ಪರಂಪರೆಯಾಗಿ ಪ್ರಾರಂಭವಾಯಿತು. ಜಪಾನಿನ ವಿವಿಧ ಪರ್ವತ ಗಳು, ನದಿಗಳು, ಮರಗಳು ಮತ್ತು ಇತರ ನೈಸರ್ಗಿಕ ಅಂಶಗಳು ಈ ಧರ್ಮದಲ್ಲಿ ಪವಿತ್ರವಾದವುಗಳಾಗಿವೆ.

Roopa Gururaj Column: ಪ್ರಶ್ನೆ ಕೇಳುವ ಮಕ್ಕಳನ್ನು ಸುಮ್ಮನಾಗಿಸಬೇಡಿ

ಪ್ರಶ್ನೆ ಕೇಳುವ ಮಕ್ಕಳನ್ನು ಸುಮ್ಮನಾಗಿಸಬೇಡಿ

ನನಗೆ ನನ್ನ ಮಗನ ಮೇಲೆ ನಂಬಿಕೆ ಇದೆ, ಅಸಾಧಾರಣವಾದದ್ದನ್ನು ಸಾಧಿಸುವ ಚೈತನ್ಯ ಅವನ ಲ್ಲಿದೆ, ನಿಮ್ಮ ಶಿಕ್ಷಣ ಅವನಿಗೆ ಬೇಡ, ನಾನೇ ಅವನಿಗೆ ನನ್ನ ಕೈಲಾದಷ್ಟನ್ನು ಹೇಳಿಕೊಡುತ್ತೇನೆ. ನೀವು ಅವನಿಗೆ ಗಿಳಿಯ ಪಾಠ ಒಪ್ಪಿಸುವ ಅವಶ್ಯಕತೆ ಇಲ್ಲ’ ಎಂದು ಮಗನನ್ನು ಮನೆಗೆ ಕರೆ ತಂದಳು.

Narada Sanchara: ಕಾಂಗ್ರೆಸ್ ಪಕ್ಷವು ‘ಶಾಂತಿ’ನಿವಾಸವೇ?!

ಕಾಂಗ್ರೆಸ್ ಪಕ್ಷವು ‘ಶಾಂತಿ’ನಿವಾಸವೇ?!

ನಿಮಗೆ ವಿಜಯಶಾಂತಿ ಗೊತ್ತುಂಟಲ್ಲವೋ?! ಅದೇ ಮಾರಾಯ್ರೇ... ‘ಲೇಡಿ ಅಮಿತಾಭ್ ಬಚ್ಚನ್’ ಎಂದೇ ಕಂಡಾಬಟ್ಟೆ ಫೇಮಸ್ ಆಗಿದ್ದ ತೆಲುಗು ಚಿತ್ರರಂಗದ ಲೇಡಿ ಸೂಪರ್‌ಸ್ಟಾರ್... ಅವರೀಗ ಭಾರಿ ಸುದ್ದಿ ಯಲ್ಲಿದ್ದಾರೆ ನೋಡಿ! ಕಾರಣ, ಇತ್ತೀಚೆಗಷ್ಟೇ ಅವರು ತೆಲಂಗಾಣ ಕಾಂಗ್ರೆಸ್‌ನಿಂದ ‘ಎಂಎಲ್‌ ಸಿ’ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡು, ವಿಧಾನ ಪರಿಷತ್ತಿನ ಸದಸ್ಯರಾಗಲು ಸಜ್ಜಾಗಿದ್ದಾರೆ.

Ravi Hunj Column: ಗ್ರಂಥೇತಿಹಾಸಿಕವಾಗಿ ಇಷ್ಟಲಿಂಗ ಪರಿಕಲ್ಪನೆ 8ನೇ ಶತಮಾನದಲ್ಲೂ ಇತ್ತು

ಗ್ರಂಥೇತಿಹಾಸಿಕವಾಗಿ ಇಷ್ಟಲಿಂಗ ಪರಿಕಲ್ಪನೆ 8ನೇ ಶತಮಾನದಲ್ಲೂ ಇತ್ತು

“ಕಲ್ಲಿನಿಂದ ಮಾಡಿದ ಸಣ್ಣ ಲಿಂಗಾಕೃತಿಗಳು ಮೊಹೆಂಜೋದಾರೋ ಉತ್ಖನನದ ಸಮಯದಲ್ಲಿ ಸಿಕ್ಕಿದ್ದು, ಶೈವಾರಾಧನೆ ಅಥವಾ ಲಿಂಗಾರಾಧ ನೆಯು ಈ ಕಾಲದಲ್ಲಿಯೂ ಪ್ರಚಲಿತವಿತ್ತೆಂದು ಸಾಕ್ಷ್ಯ ವನ್ನು ನೀಡುತ್ತವೆ. ಇಲ್ಲಿ ದೊರೆತ ಸಣ್ಣ ಲಿಂಗಾಕೃತಿಗಳು ದಕ್ಷಿಣ ಭಾರತದಲ್ಲಿನ ಇಂದಿನ ವೀರಶೈವರು ಕೊರಳಿಗೆ ಕಟ್ಟಿಕೊಂಡಿರುವ, ಕರಂಡದಲ್ಲಿ ಇಟ್ಟುಕೊಳ್ಳುವ ಲಿಂಗಗಳಷ್ಟು ಚಿಕ್ಕದಿವೆ"

Rangaswamy Mookanahalli Column: ದಿನವೂ ರಜೆಯಾದರೆ, ಭಾನುವಾರಕ್ಕೆಲ್ಲಿ ಮಜಾ ? !

ದಿನವೂ ರಜೆಯಾದರೆ, ಭಾನುವಾರಕ್ಕೆಲ್ಲಿ ಮಜಾ ? !

ಎಲ್ಲಾ ದಿನಗಳೂ ರಜಾದಿನಗಳೇ ಆಗಿಬಿಟ್ಟರೆ, ಭಾನುವಾರಕ್ಕೆ ಈಗಿರುವ ವಿಶೇಷ ಬೆಲೆ ಇರುತ್ತಿರಲಿಲ್ಲ. 1922ರ ಡಿಸೆಂಬರ್ ೨೮ರಂದು ಜನಿಸಿದ ಸ್ಟಾನ್ ಲಿ, ಯೆಹೂದಿ ರೀತಿನೀತಿಗಳಲ್ಲಿ ಬೆಳೆದರು. ಇವರ ತಂದೆ-ತಾಯಿ ಮೂಲತಃ ರುಮೇನಿಯನ್ನರು. ಸ್ಟಾನ್ ಲಿ ತನ್ನ ರುಮೇನಿಯನ್ ಮೂಲದ ಬಗ್ಗೆ ಹೆಚ್ಚು ಮಾತ ನಾಡುವುದಿಲ್ಲ.

Ravi Sajangadde Column: ವಿವಿ ಮುಚ್ಚಲಿ ಬಿಡಲಿ; ಶಿಕ್ಷಣದ ಗುಣಮಟ್ಟ ಹೆಚ್ಚಲಿ !

ವಿವಿ ಮುಚ್ಚಲಿ ಬಿಡಲಿ; ಶಿಕ್ಷಣದ ಗುಣಮಟ್ಟ ಹೆಚ್ಚಲಿ !

ಯಾವುದೇ ಹೊಸ ವಿವಿಯ ಸ್ಥಾಪನೆಗೆ ಪಾಲಿಸಬೇಕಾದ ಒಂದಷ್ಟು ಶಿಫಾರಸು ಮತ್ತು ಮಾನದಂಡ ಗಳನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ದಾಖಲೀಕರಿಸಿದೆ; ಆದರೆ ಅದರಲ್ಲಿನ ಕನಿಷ್ಠ ಅಂಶ ಗಳನ್ನೂ ಪರಿಗಣಿಸದೆ ಕಾಲಕಾಲಕ್ಕೆ ವಿವಿಗಳನ್ನು ಘೋಷಿಸಲಾಗಿದೆ. ಹೊಸ ವಿವಿಯ ಸ್ಥಾಪನೆ, ಸಂಪೂ ರ್ಣ ಬೆಳವಣಿಗೆ ಮತ್ತು ಸಾಮಾನ್ಯ ಕಾರ್ಯನಿರ್ವಹಣೆಗೆ 50 ರಿಂದ 250 ಎಕರೆ ಭೂಮಿ ಬೇಕು

Ranjith H Ashwath Column: ಬೇರುಗಳನ್ನು ಗಟ್ಟಿಗೊಳಿಸುವುದು ಯಾವಾಗ ?

ಬೇರುಗಳನ್ನು ಗಟ್ಟಿಗೊಳಿಸುವುದು ಯಾವಾಗ ?

ಕರ್ನಾಟಕದ ಇಂದಿನ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಬೂತ್‌ಮಟ್ಟದಲ್ಲಿ ಸಂಘಟನೆ ಬಲಿಷ್ಠ ವಾಗಿರಲು ರಾಜ್ಯ ಮಟ್ಟದ ನಾಯಕತ್ವಕ್ಕಿಂತ ಹೆಚ್ಚಾಗಿ ಸ್ಥಳೀಯ ಮಟ್ಟದ ನಾಯಕತ್ವ ಗಟ್ಟಿಯಾಗಿರ ಬೇಕು. ಬೂತ್ ಮಟ್ಟದ ಸಂಘಟನೆಯನ್ನು ಗಟ್ಟಿಗೊಳಿಸಲು ಶಾಸಕರು, ಪದಾಧಿಕಾರಿಗಳು, ಸಚಿವರು, ರಾಜ್ಯಾಧ್ಯಕ್ಷರಿಂದ ಸಾಧ್ಯವಿಲ್ಲ.

Vishweshwar Bhat Column: ಇಲ್ಲಿ ಉಗುಳಿದರೆ ಜೋಕೆ !

ಇಲ್ಲಿ ಉಗುಳಿದರೆ ಜೋಕೆ !

ಸಿಂಗಾಪುರಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ 7 ವರ್ಷಗಳ ಮೊದಲು (ಸ್ವಾತಂತ್ರ್ಯ ಸಿಕ್ಕಿದ್ದು 1965 ಆಗಸ್ಟ್ 9), ಅಂದರೆ 1958ರಲ್ಲಿ ಸಿಂಗಾಪುರ ಪ್ರಪ್ರಥಮ ಅಭಿಯಾನವನ್ನು ಆರಂಭಿಸಿತು. ಅದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರ ( Anti-Spitting Campaign) ವಿರುದ್ಧ.

Roopa Gururaj Column: ಯಮನಿಗೆ ಶಾಪ ಕೊಟ್ಟ ಅಣಿಮಂಡವ್ಯ ಋಷಿ

ಯಮನಿಗೆ ಶಾಪ ಕೊಟ್ಟ ಅಣಿಮಂಡವ್ಯ ಋಷಿ

ಸಣ್ಣ ಪುಟ್ಟ ತಪ್ಪುಗಳಿಗೂ ಉಗ್ರಶಿಕ್ಷೆ ಕೊಡುವ, ಊಹಿಸಿ ಕೊಳ್ಳಲು ಭಯವಾಗುವ ಒಂದು ಕ್ರೂರ ಸ್ಥಳ. ಅಲ್ಲಿ ಕಾದ ಎಣ್ಣೆ ಬಾಂಡಲಿ, ಶೂಲಗಳು, ಕಣ್ಣು ಕೀಳುವ, ಕಿವಿಗೆ ಕಾದ ಎಣ್ಣೆ ಸುರಿಯುವ, ದೇಹದ ಚರ್ಮವನ್ನು ಸುಲಿಯುವ ಯಮಭಟರು ಹೀಗೆ ಹೇಳುತ್ತಾ ಹೋದರೇ ಸಾಲದು. ಇಂಥ ಸ್ವರ್ಗ-ನರಕ ಗಳನ್ನು ನೋಡಿಕೊಳ್ಳಲು ಒಬ್ಬೊಬ್ಬ ಅಧಿಪತಿ ಗಳಿದ್ದಾರೆ.

M J Akbar Column: ಅಮೆರಿಕದಲ್ಲಿ ನಡೆದ ಹೈಪ್ರೊಫೈಲ್‌ ಅರಚಾಟದ ಸುತ್ತ...

ಅಮೆರಿಕದಲ್ಲಿ ನಡೆದ ಹೈಪ್ರೊಫೈಲ್‌ ಅರಚಾಟದ ಸುತ್ತ...

ಅಮೆರಿಕದಿಂದ ಉಚಿತವಾಗಿ ಉಪಕಾರ ಮಾಡಿಸಿಕೊಳ್ಳುವವರನ್ನು ನೋಡಿ ಡೊನಾಲ್ಡ್ ಟ್ರಂಪ್ ಬೇಸತ್ತಿದ್ದಾರೆ. ಆದರೆ ಉಕ್ರೇನ್‌ನಲ್ಲಿರುವ ಅಪರೂಪದ ಖನಿಜ ಗಳ ಮೇಲೆ ಅವರು ಕಣ್ಣು ಹಾಕಿರುವುದು ಬೇರೆಯದೇ ರೀತಿಯ ಭದ್ರತಾ ಗ್ಯಾರಂಟಿ ಯನ್ನು ಕೇಳುತ್ತಿರುವಂತಿದೆ. ಜೆಲೆನ್‌ ಸ್ಕಿಗೆ ಬೇರೆ ದಾರಿಯಿಲ್ಲ. ಶಾಂತಿ ಸ್ಥಾಪನೆಗೆ ಇನ್ನೂ ಸಾಕಷ್ಟು ಸಮಯ ಹಿಡಿಯುತ್ತದೆ.

Kiran Upadhyay Column: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ: ಬಲ ಸುಮ್ಮನೆ ಬರಲಿಲ್ಲ !

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ: ಬಲ ಸುಮ್ಮನೆ ಬರಲಿಲ್ಲ !

‘ಪಂದ್ಯ ಆಡಲು ಭಾರತ ಮಂಡಿಯೂರಿ ನಡೆದುಕೊಂಡು ಬರುತ್ತದೆ’ ಎಂಬ ಪಾಕಿಸ್ತಾನದ ಅಹಂಕಾರದ ಮಾತಿಗೆ, ಒಂದೂ ಪಂದ್ಯವನ್ನೂ ಆಡದೆ, ಕೊನೆಗೆ ಸೆಮಿಫೈನ್, ಫೈನಲ್ ಪಂದ್ಯ ವನ್ನೂ ಪಾಕಿಸ್ತಾನದಿಂದ ಭಾರತ ಕಸಿದುಕೊಂಡಿತು. ಅವಮಾನದ ಪರಮಾವಧಿ ಹೇಗಿತ್ತು ಎಂದರೆ, ಅಂತಿಮ ಪಂದ್ಯದಲ್ಲಿ ಜಯಿಸಿದ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಆತಿಥೇಯ ಪಾಕಿಸ್ತಾನದ ಒಬ್ಬೇ ಒಬ್ಬ ಪದಾಧಿಕಾರಿಯೂ ವೇದಿಕೆಯಲ್ಲಿರಲಿಲ್ಲ!