ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

R T Vittalmurthy Column: ಹನಿಟ್ರ್ಯಾಪ್‌ ಬಲೆಗೆ ಬಿದ್ದ ಆ ಸಚಿವರ ಮಕ್ಕಳು ?

ಇದೇ ರೀತಿ ಉತ್ತರ ಕರ್ನಾಟಕ ಭಾಗದ ಸಚಿವರೊಬ್ಬರ ಕಿರಿ ವಯಸ್ಸಿನ ಪುತ್ರನನ್ನೂ ಹನಿ ಟ್ರ್ಯಾಪ್ ಜಾಲ ತನ್ನ ತೆಕ್ಕೆಗೆ ಸಿಲುಕಿಸಿಕೊಂಡಿದೆ. ಹೀಗೆ ತಮ್ಮ ಪುತ್ರನನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ರುವ ಬಗ್ಗೆ ಸಿಟ್ಟಿಗೆದ್ದಿರುವ ಆ ಸಚಿವರು ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ

ಹನಿಟ್ರ್ಯಾಪ್‌ ಬಲೆಗೆ ಬಿದ್ದ ಆ ಸಚಿವರ ಮಕ್ಕಳು ?

ಅಂಕಣಕಾರ ಆರ್‌.ಟಿ.ವಿಠ್ಠಲಮೂರ್ತಿ

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮೊನ್ನೆ ವಿಧಾನಸಭೆಯಲ್ಲಿ ನಿಂತು ಹನಿಟ್ರ್ಯಾಪ್ ಬಗ್ಗೆ ಮಾತನಾಡಿದ ನಂತರ ದಿಲ್ಲಿಯ ಕಾಂಗ್ರೆಸ್ ನಾಯಕರು ಮಂಕಾಗಿzರೆ. ಕಾರಣ? ರಾಜಣ್ಣ ಎಪಿಸೋಡಿನ ನಂತರ ಕರ್ನಾಟಕದಿಂದ ಅವರಿಗೆ ತಲುಪುತ್ತಿರುವ ಸಂದೇಶಗಳು ಹಿತಕರ ವಾಗಿಲ್ಲ. ದಿಲ್ಲಿಯ ಕಾಂಗ್ರೆಸ್ ಮೂಲಗಳ ಪ್ರಕಾರ, ಹನಿಟ್ರ್ಯಾಪ್ ಜಾಲ ಕರ್ನಾಟಕದಲ್ಲಿ ಯಾವ ಮಟ್ಟಕ್ಕೆ ಸಕ್ರಿಯವಾಗಿದೆ ಎಂದರೆ ಮಂತ್ರಿ ರಾಜಣ್ಣ ಮತ್ತವರ ಮಗ ರಾಜೇಂದ್ರ ಅವರ ವಿರುದ್ದ ಮಾತ್ರವಲ್ಲ, ಹಲವು ಸಚಿವರು, ಮತ್ತವರ ಮಕ್ಕಳನ್ನೂ ತನ್ನ ಮುಷ್ಟಿಗೆ ಸಿಲುಕಿಸಿ ಕೊಳ್ಳಲು ಯತ್ನಿಸಿದೆ. ಹಾಗಂತ ಈ ಜಾಲಕ್ಕೆ ಎಲ್ಲರೂ ಸಿಕ್ಕು ಬಿದ್ದಿದ್ದಾರೆ ಅಂತಲ್ಲ.

ರಾಜಧಾನಿ ಬೆಂಗಳೂರಿನ ಒಬ್ಬ ಸಚಿವರನ್ನು ಜಾಲಕ್ಕೆ ಸಿಲುಕಿಸುವ ಯತ್ನ ನಡೆದಿದೆ ಯಾದರೂ ಇದರ ಸುಳಿವು ಪಡೆದ ಸಚಿವರು ಜಾಗೃತರಾಗಿದ್ದಾರೆ. ಅಷ್ಟೇ ಅಲ್ಲ, ಹನಿ ಟ್ರ್ಯಾಪ್ ನಡೆಸಲು ಬಂದ ತಂಡದವರನ್ನೇ ಲಾಕ್ ಮಾಡಿ, ಅವರಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆದು ರೆಕಾರ್ಡ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: R T Vittalmurthy Column: ಅಮಿತ್‌ ಶಾ ಪರೀಕ್ಷೆಯಲ್ಲಿ ವಿಜಯೇಂದ್ರ ಪಾಸು

ಹೀಗೆ ತಮ್ಮನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಲು ಸುಪಾರಿ ನೀಡಿದವರ‍್ಯಾರು? ಎಂಬು ದೂ ಸೇರಿದಂತೆ ಹಲವು ಮಾಹಿತಿಗಳನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ ಎಂಬುದು ಈ ಮೂಲಗಳ ಮಾತು. ಈ ಮಧ್ಯೆ ರಾಜಧಾನಿಯ ಮತ್ತೊಬ್ಬ ಸಚಿವರು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಲ್ಲ ವಾದರೂ ಅವರ ಪುತ್ರನನ್ನು ಖೆಡ್ಡಾಕ್ಕೆ ಕೆಡವುದರಲ್ಲಿ ಹನಿಟ್ರ್ಯಾಪ್ ಗ್ಯಾಂಗ್ ಯಶಸ್ವಿಯಾಗಿದೆ.

ಇದೇ ರೀತಿ ಉತ್ತರ ಕರ್ನಾಟಕ ಭಾಗದ ಸಚಿವರೊಬ್ಬರ ಕಿರಿ ವಯಸ್ಸಿನ ಪುತ್ರನನ್ನೂ ಹನಿ ಟ್ರ್ಯಾಪ್ ಜಾಲ ತನ್ನ ತೆಕ್ಕೆಗೆ ಸಿಲುಕಿಸಿಕೊಂಡಿದೆ. ಹೀಗೆ ತಮ್ಮ ಪುತ್ರನನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿರುವ ಬಗ್ಗೆ ಸಿಟ್ಟಿಗೆದ್ದಿರುವ ಆ ಸಚಿವರು ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಈ ಮಧ್ಯೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತವರ ಪುತ್ರ ರಾಜೇಂದ್ರ ರಾಜಣ್ಣ ಅವರ ಎಪಿಸೋಡು ಸೇರಿದ ನಂತರ ಹನಿಟ್ರ್ಯಾಪ್ ಹೊಡೆತಕ್ಕೆ ಸಿಲುಕಿದವರೆಲ್ಲ ಒಂದಾಗಿದ್ದಾರೆ.

ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವಾಗಲೇ ತಮ್ಮನ್ನು ಮುಗಿ ಸುವ ಯತ್ನ ಮಾಡಲಾಗಿದೆ. ಅಂದ ಮೇಲೆ ಸಿದ್ದರಾಮಯ್ಯ ಕೆಳಗಿಳಿದರೆ ತಮ್ಮ ಗತಿ ಏನಾಗಬಹುದು ಅಂತ ಯೋಚಿಸಿದ್ದಾರೆ. ಮೂಲಗಳ ಪ್ರಕಾರ, ಇನ್ನು ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಬೇರೊಬ್ಬರಿಗೆ ಅಧಿಕಾರ ಹಸ್ತಾಂತರ ಮಾಡುವುದನ್ನು ಸಹಿಸ ಲು ಈ ಸಚಿವರ್ಯಾರೂ ಸಿದ್ಧರಿಲ್ಲ. ಹಾಗೊಂದು ವೇಳೆ ಅಂತಹ ಸಂದರ್ಭ ಬಂದರೆ ತಾವು ಸೂಚಿಸುವ ಹೆಸರಿಗೆ ಪಟ್ಟ ಸಿಗ ಬೇಕು. ಇಲ್ಲದಿದ್ದರೆ ದೊಡ್ಡ ಸಂಖ್ಯೆಯ ಶಾಸಕರೊಂದಿಗೆ ಕಾಂಗ್ರೆಸ್ ತೊರೆಯಬೇಕು ಎಂಬು ದು ಅವರ ಯೋಚನೆ. ಅಂದ ಹಾಗೆ ಪಕ್ಷ ತೊರೆಯು ವವರು ಅಗತ್ಯಕ್ಕನುಗುಣವಾಗಿ ಬಿಜೆಪಿ ಇಲ್ಲವೇ ಜೆಡಿಎಸ್ ಪಕ್ಷಕ್ಕೆ ಸೇರಬಹುದು.

ಹೀಗೆ ಕಾಂಗ್ರೆಸ್‌ನಿಂದ ಹೊರಬರುವವರನ್ನು ಸ್ವೀಕರಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಗಳು ತಯಾರಾಗಿಯೇ ಇವೆ. ಒಂದು ಸಲ ಈ ಕಾರ್ಯಕ್ಕೆ ಚಾಲನೆ ಸಿಕ್ಕ ನಂತರ ಸರಕಾರ ಉಳಿಸಿಕೊಳ್ಳುವ ಯತ್ನ ಕಾಂಗ್ರೆಸ್‌ನಿಂದ ನಡೆಯುವುದು ಸಹಜ. ಆದರೆ ಅದು ಯಶಸ್ವಿ ಯಾಗಲು ಬಿಡದೆ ಕರ್ನಾಟಕದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವ ವಾತಾವರಣ ನಿರ್ಮಿಸ ಬೇಕು. ಹೀಗೆ ಒಂದು ಸಲ ಕರ್ನಾಟಕ ರಾಷ್ಟ್ರಪತಿ ಆಳ್ವಿಕೆಯ ತೆಕ್ಕೆಗೆ ಹೋದರೆ ವಿಧಾನಸಭೆಗೆ ಮಧ್ಯಂತರ ಚುನಾವಣೆ ಅನಿವಾರ್ಯವಾಗುತ್ತದೆ.

ಹಾಗೇನಾದರೂ ಆದರೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅದ್ಧೂರಿ ಗೆಲುವು ಗಳಿಸಿ ಅಧಿಕಾರಕ್ಕೆ ಬರುತ್ತದೆ ಎಂಬುದು ಈ ಪಡೆಯ ಬಹುತೇಕರ ಯೋಚನೆ. ಪರಿಣಾಮ? ಕರ್ನಾಟಕದಲ್ಲಿ ನಡೆಯುತ್ತಿರುವ ಹನಿಟ್ರ್ಯಾಪ್ ಸಂಘರ್ಷ ಯಾವ ಲೆವೆಲ್ಲಿಗೆ ಹೋಗಬಹುದು? ಎಂಬ ಚಿಂತೆ ದಿಲ್ಲಿಯ ಕಾಂಗ್ರೆಸ್ ವರಿಷ್ಠರನ್ನು ಕಾಡುತ್ತಿದೆ. ಅಂದ ಹಾಗೆ ಅವರ ಚಿಂತೆಗೂ ಕಾರಣವಿದೆ. ಇವತ್ತು ದೇಶದ ಬಹುತೇಕ ರಾಜ್ಯಗಳು ಬಿಜೆಪಿಯ ಹಿಡಿತ ದಲ್ಲಿವೆ.

ಹೀಗಾಗಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಹೊಡೆತವನ್ನು ಸಹಿಸಿಕೊಂಡು ಮೇಲೆದ್ದು ನಿಲ್ಲಲು ಯತ್ನಿಸಬೇಕೆಂದರೆ ಪಕ್ಷಕ್ಕೆ ಕರ್ನಾಟಕ ಎಂಬ ಸೇನಾ ನೆಲೆ ಬೇಕೇ ಬೇಕು. ಒಂದು ವೇಳೆ ಈ ಸೇನಾ ನೆಲೆ ಕುಸಿದು ಬಿದ್ದರೆ ರಾಷ್ಟ್ರ ರಾಜಕಾರಣದಲ್ಲಿ ಇನ್ನು ತಲೆ ಎತ್ತುವುದು ಕಷ್ಟ ಎಂಬುದು ಅವರ ಆತಂಕ. ಆದರೆ ಮುಂದೇನು ಕತೆಯೋ ಕಾದು ನೋಡಬೇಕು.

ಅಮಿತ್ ಶಾ ಕಿರಿಕ್ ಮಾಡಿದ್ದೇಕೆ?

ಅಂದ ಹಾಗೆ ಹನಿಟ್ರ್ಯಾಪ್ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರಲ್ಲ? ಈ ವಿಷಯವನ್ನು ಹಿಡಿದುಕೊಂಡು ಅಂದೇ ಸಂಘಟಿತ ಹೋರಾಟ ಕ್ಕಿಳಿಯಬೇಕಿದ್ದ ಪ್ರತಿಪಕ್ಷ ಬಿಜೆಪಿ ಆ ಕೆಲಸ ಮಾಡಲಿಲ್ಲ. ಇದಕ್ಕೆ ತಮ್ಮ ಪಕ್ಷದ ನಾಯಕರಿಗೆ ಸರಕಾರದ ಟಾಪ್ ಲೀಡರ್‌ಗಳ ಜತೆಗಿರುವ ಸಂಪರ್ಕವೇ ಕಾರಣ ಅಂತ ಬಿಜೆಪಿಯ ಹಲ ಶಾಸಕರೂ ಕಿಡಿ ಕಾರಿದ್ದರಂತೆ. ಅವರ ಪ್ರಕಾರ, ಸಚಿವ ರಾಜಣ್ಣ ಹನಿಟ್ರ್ಯಾಪ್ ವಿಷಯ ಪ್ರಸ್ತಾಪಿಸಿದ ನಂತರ, ಆ ವಿಷಯವ ನ್ನು ಹಿಡಿದುಕೊಂಡು ಅಂದೇ ವಿಧಾನಸಭೆಯಲ್ಲಿ ಧರಣಿ ಪ್ರಾರಂಭಿಸಿ, ಆಡಳಿತ ಪಕ್ಷವನ್ನು ಪೇಚಿಗೆ ಸಿಲುಕಿಸಬೇಕಿತ್ತು. ಆದರೆ ಹಾಗೆ ಮಾಡುವ ಬದಲು ಪ್ರತಿಪಕ್ಷ ನಾಯಕ ಅಶೋಕ್ ಅವರಿಂದ ಹಿಡಿದು ಒಬ್ಬೊಬ್ಬ ನಾಯಕರು ಒಂದೊಂದು ಬಗೆಯ ಮಾತನಾಡುತ್ತಾ ಹೋದರು.

ಒಬ್ಬರು ನ್ಯಾಯಾಧೀಶರಿಂದ ತನಿಖೆಯಾಗಲಿ ಎಂದರೆ, ಮತ್ತೊಬ್ಬರು ಸಿಬಿಐ ತನಿಖೆ ಯಾಗಲಿ ಎಂದರು. ಇನ್ನೊಬ್ಬರು ಮಗದೊಂದು ರೀತಿಯ ತನಿಖೆಗೆ ಒತ್ತಾಯಿಸಿದರು. ಹೀಗೆ ಮಾಡುವ ಬದಲು ಹನಿಟ್ರ್ಯಾಪಿನ ಬಗ್ಗೆ ಸಚಿವರೇ ಆತಂಕ ವ್ಯಕ್ತಪಡಿಸಿರುವುದರಿಂದ ಈ ಸರಕಾರ ವಿಫಲವಾಗಿದೆ ಎಂದು ದೂರಿ ಧರಣಿ ಆರಂಭಿಸಿದ್ದರೆ ಆಟವೇ ಬೇರೆಯಾಗುತ್ತಿತ್ತು. ಇಡೀ ರಾಷ್ಟ್ರದ ಗಮನ ಸೆಳೆಯಲು ಸಾಧ್ಯವಾಗುತ್ತಿತ್ತು.

ಆದರೆ ಅದನ್ನು ಮಾಡದೆ ಪಕ್ಷದ ಮುಂಚೂಣಿ ನಾಯಕರು ಕೈ ಚೆಲ್ಲಿದರು ಎಂಬುದು ಈ ಶಾಸಕರ ಸಿಟ್ಟು. ಯಾವಾಗ ಅವರ ಸಿಟ್ಟು ಬಹಿರಂಗವಾಗಿಯೇ ವ್ಯಕ್ತವಾಯಿತೋ? ಇದಾದ ನಂತರ ವಿಷಯ ಪಕ್ಷದ ವರಿಷ್ಠರ ಕಿವಿಗೆ ತಲುಪಿದೆ. ಹೀಗಾಗಿ ರಾಜ್ಯ ಬಿಜೆಪಿಯ ಇಬ್ಬರು ನಾಯಕರಿಗೆ ಫೋನು ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿರಿಕಿರಿ ಮಾಡಿದ್ದಾರೆ.

ಸರಕಾರವನ್ನು ಸಂಕಷ್ಟಕ್ಕೆ ಸಿಲುಕಿಸುವ ಒಂದು ಅವಕಾಶವನ್ನೂ ನೀವು ಕೈ ಬಿಡಬಾರದು. ಹಾಗೆ ಮಾಡಿ ಅಂತಲೇ ನಿಮ್ಮನ್ನು ಈ ಜಾಗದಲ್ಲಿ ಕೂರಿಸಲಾಗಿದೆ ಅಂತ ಅವರು ಯಾವಾಗ ಗದರಿಕೊಂಡರೋ? ಇದಾದ ಮರುದಿನ ವಿಧಾನಸಭೆಯಲ್ಲಿ ಬಿಜೆಪಿ ಪಡೆ ತೋರುಗಾಣಿಕೆ ಗಾದರೂ ಸಂಘಟಿತವಾಗಿ ಅಬ್ಬರಿಸಿದೆ. ಆದರೆ ಮೊದಲ ದಿನ ಅವಕಾಶ ಕೈ ಚೆಲ್ಲಿದ ಪರಿ ಣಾಮವಾಗಿ ಎರಡನೇ ದಿನದ ಅದರ ಹೋರಾಟ ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ.

ಬದಲಿಗೆ ಬಿಜೆಪಿಯ ಹದಿನೆಂಟು ಶಾಸಕರನ್ನು ಸದನದಿಂದ ಅಮಾನತು ಮಾಡಿ ಸ್ಪೀಕರ್ ಯು.ಟಿ.ಖಾದರ್‌ ಸದ್ದು ಮಾಡಿದರು ಎಂಬುದು ಪಕ್ಷದ ಹಲ ಶಾಸಕರ ಅಸಮಾಧಾನ.

ವಿಜಯೇಂದ್ರ ಪದಚ್ಯುತಿಗೆ ಹೊಸ ತಂತ್ರ

ಈ ಮಧ್ಯೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಕೆಳಗಿಳಿಯುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆಯೇ ವಿರೋಧಿ ಪಾಳಯದಲ್ಲಿ ಮೌನ ನೆಲೆಸಿದೆ.

ಹಾಗಂತ ಅದು ಹತಾಶೆಯಿಂದಾದ ಮೌನ ಅಂತಲ್ಲ. ಬದಲಿಗೆ ವಿಜಯೇಂದ್ರ ಅವರನ್ನು ಕೆಳಗಿಳಿಸಲು ಹೊಸ ತಂತ್ರ ರೆಡಿಯಾಗಿದೆ ಎಂಬ ಸಂದೇಶದ ಹಿನ್ನೆಲೆಯಲ್ಲಿ ನೆಲೆಸಿದ ಮೌನ. ಅಂದ ಹಾಗೆ ದಿಲ್ಲಿಯ ಬಿಜೆಪಿ ವರಿಷ್ಠರು ವಿಜಯೇಂದ್ರ ಅವರನ್ನು ಬದಲಿಸದಿರಲು ಏನು ಕಾರಣ ಅನ್ನುವುದು ರಹಸ್ಯವಲ್ಲ. ಅದೆಂದರೆ ರಾಜ್ಯದಿಂದ ಅಮಿತ್ ಶಾ ತರಿಸಿರುವ ಸರ್ವೆ ರಿಪೋರ್ಟ್. ಈ ರಿಪೋರ್ಟ್ ವಿಜಯೇಂದ್ರ ಅವರಿಗೆ ಬಹುಪರಾಕ್ ಎಂದಿದೆ.

ಇಂತಹ ಸ್ಥಿತಿಯಲ್ಲಿ ವಿಜಯೇಂದ್ರ ಅವರನ್ನು ಬದಲಿಸಲು ಸಾಧ್ಯವಿಲ್ಲ ಅಂತ ನಡ್ಡಾ, ಅಮಿತ್ ಶಾ ಹೇಳಿದ ಮೇಲೆ ಆರು ತಿಂಗಳ ಕದನ ವಿರಾಮಕ್ಕೆ ವಿಜಯೇಂದ್ರ ವಿರೋಧಿ ಪಡೆ ಸಜ್ಜಾಗಿದೆ. ಆದರೆ ಈ ಆರು ತಿಂಗಳ ಅವಧಿಯಲ್ಲಿ ಜಿಲಾ ಮಟ್ಟದಲ್ಲಿ ವಿಜಯೇಂದ್ರ ವಿರುದ್ದ ಅಸಹನೆಯ ಗಾಳಿ ಶುರುವಾಗಬೇಕು, ಪಕ್ಷದಲ್ಲಿರುವ ಹಿರಿಯರು, ಮಾಜಿ ಸಚಿವರು ಸೇರಿದಂತೆ ಯಾರನ್ನೂ ವಿಜಯೇಂದ್ರ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಕೂಗು ದಟ್ಟ ವಾದರೆ ವರಿಷ್ಠರು ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂಬುದು ವಿರೋಧಿ ಪಡೆಯ ಟಾಪ್ ಲೀಡರುಗಳ ಲೆಕ್ಕಾಚಾರ.

ಅಂದ ಹಾಗೆ ಇಂತಹ ಲೆಕ್ಕಾಚಾರ ಹಾಕಿರುವ ಪಡೆ ಅದೇ ಕಾಲಕ್ಕೆ ಮತ್ತೊಂದು ಕೆಲಸ ಮಾಡಿದೆ. ಅದೆಂದರೆ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರನ್ನು ತಮ್ಮ ಕಡೆ ಸೆಳೆದು ಕೊಂಡಿರುವುದು. ಇದಕ್ಕಿರುವ ಮುಖ್ಯ ಕಾರಣ ಎಂದರೆ ನಿರಾಣಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಅವರಿಗೆ ಆಪ್ತರಾಗಿರುವುದು. 2021ರಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವ ಮುನ್ನ ನಿರಾಣಿ ಅವರನ್ನು ಕರೆಸಿಕೊಂಡಿದ್ದ ಅಮಿತ್ ಶಾ ಅವರು ‘ನಿಮ್ಮನ್ನು ಸಿಎಂ ಹುದ್ದೆಯಲ್ಲಿ ಕೂರಿಸುತ್ತೇವೆ’ ಎಂದಿದ್ದರು.

ಆದರೆ ಹಲವು ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಸವ ರಾಜ ಬೊಮ್ಮಾಯಿ ಹೆಸರಿಗೆ ಗ್ರೀನ್ ಸಿಗ್ನಲ್ ನೀಡಿದ್ದರಿಂದ ನಿರಾಣಿ ನಿರಾಸೆ ಅನುಭವಿಸ ಬೇಕಾಯಿತು. ಹಾಗಂತ ಅಮಿತ್ ಶಾ ಅವರು ತಮಗೆ ಕೊಟ್ಟ ಮಾತು ಈಡೇರಿಲ್ಲ ಅಂತ ನಿರಾಣಿ ಅವರೇನೂ ಮುನಿಸಿಕೊಂಡಿಲ್ಲ.

ಬದಲಿಗೆ ಅಮಿತ್ ಶಾ ಬಯಸಿದ್ದನ್ನು ಮಾಡುತ್ತಾ, ಈಗಲೂ ಅವರ ಅತ್ಯಾಪ್ತ ಬಳಗ ದಲ್ಲಿದ್ದಾರೆ. ಹೀಗಾಗಿ ಅವರ ಮೇಲೆ ಕಣ್ಣಿಟ್ಟಿರುವ ವಿಜಯೇಂದ್ರ ವಿರೋಧಿ ಪಡೆ,ಮೆಲ್ಲಗೆ ನಿರಾಣಿ ಅವರ ಕೈ ಹಿಡಿದು ತನ್ನ ಶಿಬಿರಕ್ಕೆ ಎಳೆದುಕೊಂಡಿದೆ. ಅಲ್ಲಿಗೆ ಕರ್ನಾಟಕ ಬಿಜೆಪಿಯ ವಿಷಯದಲ್ಲಿ ವರಿಷ್ಠರು ಮೌನವಾಗಿರುವುದು ನಿಶ್ಚಿತವಾದರೂ ವಿಜಯೇಂದ್ರ ವಿರೋಽ ಪಡೆ ಹೊಸ ಲೆಕ್ಕಾಚಾರದೊಂದಿಗೆ ನಿರ್ಧರಿಸಿದೆ. ಒಟ್ಟಿನಲ್ಲಿ ಈಗಲ್ಲದಿದ್ದರೂ ಮುಂದಿನ ವಿಧಾನಸಭಾ ಚುನಾವಣೆಯ ಸಾರಥ್ಯ ವಿಜಯೇಂದ್ರ ಅವರ ಕೈಲಿರಬಾರದು ಎಂದು ಶಪಥ ಮಾಡಿದೆ.

ರಾಮಮೂರ್ತಿಗೆ ಕೋಪ ಬಂದಿದೆ

ಇನ್ನು ಜಯನಗರದ ಶಾಸಕ ಸಿ.ಕೆ.ರಾಮಮೂರ್ತಿ ಅವರಿಗೆ ಕೆಂಡದಂತ ಕೋಪ ಬಂದಿದೆ ಯಂತೆ. ಅವರ ಈ ಕೋಪಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕಾರಣ. ಅಂದ ಹಾಗೆ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರ ವಿರುದ್ದ ಅಂತಿಮ ಕ್ಷಣದಲ್ಲಿ ರಾಮಮೂರ್ತಿ ಅವರು ಗೆದ್ದಿzರೆ ಅಂತ ಘೋಷಿಸಲಾಯಿತಲ್ಲ? ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿ ಇನ್ನೇನು ಅಂತಿಮ ತೀರ್ಪು ಬರುವ ಕಾಲ ಹತ್ತಿರವಾಗಿದೆ. ಹೀಗೆ ಬರುವ ತೀರ್ಪು ರಾಮ ಮೂರ್ತಿ ಅವರಿಗೆ ಮಾರಕವಾಗಲಿದ್ದು, ಇದರ ಪರಿಣಾಮವಾಗಿ ಜಯನಗರ ಕ್ಷೇತ್ರದ ಮುಂದಿನ ಚುನಾವಣೆಯಲ್ಲಿ ಸಂದೀಪ್ ರವಿ ಬಿಜೆಪಿ ಕ್ಯಾಂಡಿಡೇಟ್ ಆಗಲಿದ್ದಾರೆ ಎಂಬ ಸುದ್ದಿ ಸುನಾಮಿಯಂತೆ ಹಬ್ಬಿದೆ. ಅಂದ ಹಾಗೆ ಬಿಜೆಪಿಯ ರಾಜ್ಯ ಯುವ ಮೋರ್ಚಾದ ಮುಂಚೂಣಿಯಲ್ಲಿರುವ ಸಂದೀಪ್ ರವಿ ಅವರು ಸಂಸದ ತೇಜಸ್ವಿ ಸೂರ್ಯ ಅವರ ಆಪ್ತ. ಹೀಗೆ ತಮ್ಮ ಆಪ್ತರಾಗಿರುವ ಕಾರಣಕ್ಕಾಗಿಯೇ ತೇಜಸ್ವಿಸೂರ್ಯ ಅವರು ಸಂದೀಪ್ ರವಿ ಅವರ ಹೆಸರನ್ನು ಫೀಲ್ಡಿಗೆ ಬಿಟ್ಟಿzರೆ ಎಂಬುದು ಶಾಸಕ ಸಿ.ಕೆ. ರಾಮಮೂರ್ತಿ ಅವರ ಅನುಮಾನ.

ಹಾಗಂತಲೇ ಅವರೀಗ ತೇಜಸ್ವಿ ಸೂರ್ಯ ಅವರ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕೋಪವನ್ನು ತೇಜಸ್ವಿ ಸೂರ್ಯ ಅವರ ಎದುರು ತೋರಿಸಿ ಬಂದಿ ದ್ದಾರೆ ಎಂಬುದು ಲೇಟೆಸ್ಟು ಸುದ್ದಿ.