ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಸ್ವಾತಂತ್ರ ಸಿಕ್ಕ 78 ವರ್ಷಗಳ ನಂತರ ಈ ಗ್ರಾಮದಲ್ಲಿ ದಲಿತನಿಗೆ ಮೊದಲ ಬಾರಿಗೆ ಹೇರ್‌ಕಟ್‌!

ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಅಲ್ವಾಡಾ ಗ್ರಾಮದಲ್ಲಿ ಆಗಸ್ಟ್ 7, 2025ರಂದು ಸಾಮಾಜಿಕ ಸಮಾನತೆಯ ಕಡೆಗೆ ಐತಿಹಾಸಿಕ ಹೆಜ್ಜೆಯೊಂದು ಇಡಲಾಯಿತು. 24 ವರ್ಷದ ಕೃಷಿ ಕಾರ್ಮಿಕ ಕೀರ್ತಿ ಚೌಹಾಣ್ ಗ್ರಾಮದ ಕ್ಷೌರಿಕನ ಅಂಗಡಿಯಲ್ಲಿ ಮೊದಲ ಬಾರಿಗೆ ಕೂದಲು ಕತ್ತರಿಸಿಕೊಂಡ, ಇದು ದಲಿತರಿಗೆ ಸ್ಥಳೀಯ ಕ್ಷೌರಿಕ ಸೇವೆ ಸಿಕ್ಕ ಮೊದಲ ಸಂದರ್ಭವಾಗಿದೆ. ಈ ಘಟನೆಯನ್ನು ಗ್ರಾಮದ ದಲಿತ ಸಮುದಾಯವು ಮುಕ್ತಿಯ ಕ್ಷಣವೆಂದು ಪರಿಗಣಿಸಿದೆ.

ಈ ಗ್ರಾಮದಲ್ಲಿ ಇಲ್ಲಿಯವರೆಗೆ ದಲಿತರಿಗೆ ನಿರ್ಬಂಧ ಹೇರಿದ್ದ  ಕ್ಷೌರಿಕರು

ಸಾಂಧರ್ಬಿಕ ಚಿತ್ರ

Profile Sushmitha Jain Aug 18, 2025 8:30 PM

ಗಾಂಧಿನಗರ: ಗುಜರಾತ್‌ನ (Gujarat) ಬನಸ್ಕಾಂತ ಜಿಲ್ಲೆಯ ಅಲ್ವಾಡಾ (Alvada) ಗ್ರಾಮದಲ್ಲಿ ಆಗಸ್ಟ್ 7, 2025ರಂದು ಸಾಮಾಜಿಕ ಸಮಾನತೆಯ ಕಡೆಗೆ ಐತಿಹಾಸಿಕ ಹೆಜ್ಜೆಯೊಂದು ಇಡಲಾಯಿತು. 24 ವರ್ಷದ ಕೃಷಿ ಕಾರ್ಮಿಕ ಕೀರ್ತಿ ಚೌಹಾಣ್ ಗ್ರಾಮದ ಕ್ಷೌರಿಕನ ಅಂಗಡಿಯಲ್ಲಿ ಮೊದಲ ಬಾರಿಗೆ ಕೂದಲು ಕತ್ತರಿಸಿಕೊಂಡ (Haircut), ಇದು ದಲಿತರಿಗೆ ಸ್ಥಳೀಯ ಕ್ಷೌರಿಕ ಸೇವೆ ಸಿಕ್ಕ ಮೊದಲ ಸಂದರ್ಭವಾಗಿದೆ. ಈ ಘಟನೆಯನ್ನು ಗ್ರಾಮದ ದಲಿತ ಸಮುದಾಯವು ಮುಕ್ತಿಯ ಕ್ಷಣವೆಂದು ಪರಿಗಣಿಸಿದೆ.

ವರದಿಯ ಪ್ರಕಾರ, ಅಲ್ವಾಡಾದ 6,500 ನಿವಾಸಿಗಳಲ್ಲಿ ಸುಮಾರು 250 ದಲಿತರಿದ್ದಾರೆ. ತಲೆಮಾರುಗಳಿಂದ ಸ್ಥಳೀಯ ಕ್ಷೌರಿಕರು ದಲಿತರ ಕೂದಲು ಕತ್ತರಿಸಲು ನಿರಾಕರಿಸುತ್ತಿದ್ದರು, ಇದರಿಂದ ದಲಿತರು ತಮ್ಮ ಜಾತಿಯನ್ನು ಮರೆಮಾಚಿ ನೆರೆಯ ಗ್ರಾಮಗಳಿಗೆ ತೆರಳಬೇಕಾಗಿತ್ತು. 58 ವರ್ಷದ ಚ್ಹೋಗಾಜಿ ಚೌಹಾಣ್, “ಸ್ವಾತಂತ್ರ್ಯಕ್ಕೂ ಮುನ್ನವೇ ನಮ್ಮ ಪೂರ್ವಜರು ಈ ತಾರತಮ್ಯವನ್ನು ಎದುರಿಸಿದ್ದರು ಮತ್ತು ಎಂಟು ದಶಕಗಳಿಂದ ನನ್ನ ಮಕ್ಕಳೂ ಇದನ್ನು ಎದುರಿಸಿದ್ದಾರೆ” ಎಂದು ಹೇಳಿದ್ದಾರೆ.

ಕೀರ್ತಿ ಚೌಹಾಣ್‌ನ ಈ ನಿರ್ಧಾರವು ಭಾವನಾತ್ಮಕ ಕ್ಷಣವಾಗಿತ್ತು. “ಈ ಹಿಂದೆ ಬೇರೆಡೆಗೆ ತೆರಳಬೇಕಿತ್ತು. 24 ವರ್ಷಗಳಲ್ಲಿ ಮೊದಲ ಬಾರಿಗೆ ನನ್ನ ಗ್ರಾಮದ ಕ್ಷೌರಿಕನ ಬಳಿ ಕೂತೆ. ಆ ದಿನ ನಾನು ಮುಕ್ತನಾದೆ, ಗ್ರಾಮದಲ್ಲಿ ಸ್ವೀಕೃತನಾದ ಭಾವನೆಯಾಯಿತು” ಎಂದು ಆತ ಹೇಳಿದ್ದಾನೆ.

ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಚೇತನ್ ದಾಭಿ ಈ ತಾರತಮ್ಯದ ಅಸಂವಿಧಾನಿಕತೆಯ ಬಗ್ಗೆ ಉನ್ನತ ಜಾತಿಯವರಿಗೆ ಮತ್ತು ಕ್ಷೌರಿಕರಿಗೆ ಶಿಕ್ಷಣ ನೀಡಿದರು. ಸಂವಾದ ವಿಫಲವಾದಾಗ, ಪೊಲೀಸರು ಮತ್ತು ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿತು. ಗ್ರಾಮದ ಮುಖಂಡರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿದರು. ಗ್ರಾಮದ ಸರಪಂಚ್ ಸುರೇಶ್ ಚೌಧರಿ, ಈ ತಾರತಮ್ಯದ ಕೊನೆಗೊಂಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಈಗ ಗ್ರಾಮದ ಎಲ್ಲ ಐದು ಕ್ಷೌರಿಕ ಅಂಗಡಿಗಳು ದಲಿತ ಗ್ರಾಹಕರನ್ನು ಸ್ವಾಗತಿಸುತ್ತವೆ.

ಈ ಸುದ್ದಿಯನ್ನು ಓದಿ: Viral Video: ಸ್ಟ್ಯಾಂಡ್ ನೀಡದ ಆಸ್ಪತ್ರೆ ಸಿಬ್ಬಂದಿ; ಕೈಯಲ್ಲೇ ಡ್ರಿಪ್ಸ್ ಬಾಟಲ್ ಹಿಡಿದುಕೊಂಡು ನಿಂದ ವೃದ್ಧೆ, ವಿಡಿಯೊ ವೈರಲ್

ಕೀರ್ತಿಯ ಕೂದಲು ಕತ್ತರಿಸಿದ 21 ವರ್ಷದ ಕ್ಷೌರಿಕ ಪಿಂಟು, “ನಾವು ಸಾಮಾಜಿಕ ರೂಢಿಗಳನ್ನು ಪಾಲಿಸುತ್ತಿದ್ದೆವು, ಆದರೆ ಈಗ ಹಿರಿಯರಿಂದ ಬದಲಾವಣೆಗೆ ಅನುಮತಿ ಸಿಕ್ಕಿದೆ, ಆದ್ದರಿಂದ ಯಾವುದೇ ತಡೆಯಿಲ್ಲ. ಇದರಿಂದ ನಮ್ಮ ವ್ಯಾಪಾರಕ್ಕೂ ಲಾಭವಾಗಿದೆ” ಎಂದು ಹೇಳಿದ್ದಾರೆ. ಪಾಟಿದಾರ್ ಸಮುದಾಯದ ಪ್ರಕಾಶ್ ಪಟೇಲ್, “ನನ್ನ ಅಂಗಡಿಯಲ್ಲಿ ಎಲ್ಲ ಗ್ರಾಹಕರಿಗೆ ಸ್ವಾಗತವಿದ್ದರೆ, ಕ್ಷೌರಿಕನ ಬಳಿಯೂ ಏಕೆ ಇರಬಾರದು?” ಎಂದು ಬೆಂಬಲಿಸಿದ್ದಾರೆ.