R T Vittalmurthy Column: ಬೊಮ್ಮಾಯಿ ರೂಪಿಸಿದ ಸಂಕಷ್ಟ ಸೂತ್ರ
ಬಿಜೆಪಿ ಮೂಲಗಳ ಪ್ರಕಾರ, ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಸಂಕಷ್ಟ ಸೂತ್ರ ಬಹುತೇಕ ಎಲ್ಲರಿಗೂ ಒಪ್ಪಿಗೆಯಾಗಿದೆ. ಅರ್ಥಾತ್, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನಿಳಿಸಲು ಎಲ್ಲ ಬಗೆಯ ಹೋರಾಟ ನಡೆಸುವುದು, ಒಂದು ವೇಳೆ ಅದು ಯಶಸ್ವಿಯಾಗದೆ ಇದ್ದರೆ ತಮ್ಮ ತಮ್ಮ ಪಾಳೇಪಟ್ಟುಗಳನ್ನು ಭದ್ರಗೊಳಿಸಿಕೊಂಡು ಹಿತ ಕಾಪಾಡಿ ಕೊಳ್ಳುವುದು ಅನಿವಾರ್ಯ ಎಂಬುದು ಮನದಟ್ಟಾಗಿದೆ.