ಸೋತರೂ ಖುಷಿ ಇದೆ; ದರ್ಪದ ಮಾತುಗಳನ್ನಾಡಿದ ಗಾಯಕ್ವಾಡ್
RCB vs CSK: 50 ರನ್ ಅಂತರದ ಸೋಲನ್ನೂ ಕೂಡ ಸಣ್ಣ ಅಂತರದ ಸೋಲು ಎಂದ ಗಾಯಕ್ವಾಡ್ ಹೇಳಿಕೆಗೆ ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿಮ್ಮ ಪ್ರಕಾರ ದೊಡ್ಡ ಅಂತರದ ಸೋಲು ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ.
abhilashkurunji@gmail.com
IPL 2025: ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಎರಡು ಪಂದ್ಯಗಳನ್ನು ಗೆದ್ದು ಅಜೇಯವಾಗಿದೆ. ಜತೆಗೆ ಅಂಕಪಟ್ಟಿಯಲ್ಲಿಯೂ ಉತ್ತಮ ರನ್ರೇಟ್ನೊಂದಿಗೆ ಅಗ್ರಸ್ಥಾನದಲ್ಲಿದೆ. ಐಐಟಿ ಬಾಬಾನ ಭವಿಷ್ಯದಿಂದ ಆರ್ಸಿಬಿ ಪ್ರದರ್ಶನಕ್ಕೆ ಅಡ್ಡಿಯಾಗದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
MS Dhoni: ಪಂದ್ಯದ ಬಳಿಕ ಮಾತನಾಡಿದ ಚೆನ್ನೈ ಅಭಿಮಾನಿಯೊಬ್ಬರು, ಕ್ರಿಕೆಟ್ನಿಂದ ನಿವೃತ್ತಿಯಾದ ಆಟಗಾರರೆಲ್ಲ ಚೆನ್ನೈ ತಂಡದಲ್ಲಿದ್ದಾರೆ. ಅದರಲ್ಲೂ ಧೋನಿ ತಂಡ ಸಂಕಷ್ಟದಲ್ಲಿದ್ದರೂ ಕೂಡ 10 ಎಸೆತಗಳು ಬಾಕಿ ಇರುವಾಗ ಬ್ಯಾಟಿಂಗ್ಗೆ ಬಂದು ಸಿನೆಮಾ ಶೈಲಿಯಲ್ಲಿ ಒಂದೆರಡು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ದೊಡ್ಡ ಸ್ಕೋಪ್ ಪಡೆಯುತ್ತಿದ್ದಾರೆ. ಇದರಿಂದ ತಂಡಕ್ಕೇನು ಲಾಭವಿಲ್ಲ ಎಂದಿದ್ದಾರೆ.
IPL 2025: ಆರೆಂಜ್ ಕ್ಯಾಪ್ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ನಿಕೋಲಸ್ ಪೂರನ್ ಬಳಿಯೇ ಇದೆ. ಆದರೆ ಪರ್ಪಲ್ ಕ್ಯಾಪ್ ವಿಭಾಗದಲ್ಲಿ ಬದಲಾವಣೆಯಾಗಿದೆ. ಲಕ್ನೋ ತಂಡದ ಶಾರ್ದೂಲ್ ಠಾಕೂರ್ ಅವರನ್ನು ಹಿಂದಿಕ್ಕಿ ನೂರ್ ಅಹ್ಮದ್(7 ವಿಕೆಟ್) ಅಗ್ರಸ್ಥಾನಕ್ಕೇರಿದ್ದಾರೆ.
RCB vs CSK: ಬ್ಯಾಟಿಂಗ್ ಮಾತ್ರವಲ್ಲದೆ ಕೀಪಿಂಗ್ನಲ್ಲಿಯೂ ಮಿಂಚಿದ ಧೋನಿ ಫಿಲ್ ಸಾಲ್ಟ್ ಅವರನ್ನು ಕೇವಲ 0.16 ಸೆಕೆಂಡ್ಗಳಲ್ಲಿ ಸ್ಟಂಪಿಂಗ್ ಮಾಡುವ ಮೂಲಕ ನಿಬ್ಬೆರಗಾಗಿಸಿದರು. ಇದನ್ನೂ ಮುನ್ನ ಮುಂಬೈ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಅವರನ್ನು 0.12 ಸೆಕೆಂಡ್ಗಳಲ್ಲಿ ಸ್ಟಂಪಿಂಗ್ ಮಾಡಿದ್ದರು.
viral video: ಪಂತ್ ಪ್ರದರ್ಶನದ ಬಗ್ಗೆಯೂ ಕಿಡಿಕಾರಿದ ನಿರೂಪಕ ಪಂಕಜ್, ರಿಷಭ್ ಪಂತ್ ಆಟ ಹೇಗಿರುತ್ತದೆ ಎಂಬುದನ್ನು ಮೊದಲೇ ಊಹಿಸಬಹುದಾಗಿದೆ. ನೀವು ಅವರನ್ನು ನಂಬಲು ಸಾಧ್ಯವಿಲ್ಲ. ಅವರು ನಾಯಕತ್ವಕ್ಕೆ ಅನ್ಫಿಟ್! ನಮಗೆ ಅವರಂತಹ ನಾಯಕ ಅಗತ್ಯವಿಲ್ಲ ಎಂದರು.
ಶ್ರೇಯಸ್ ಅಯ್ಯರ್ ಅವರನ್ನು ಮತ್ತೆ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಗೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ. ಕಳೆದ ವರ್ಷ ಗುತ್ತಿಗೆ ಪಟ್ಟಿಯಿಂದ ಶ್ರೇಯಸ್ ಹೊರಬಿದ್ದಿದ್ದರು. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್ ಭಾರತದ ಪರ ಗರಿಷ್ಠ ರನ್ ಬಾರಿಸಿದ್ದರು.
RCB vs CSK: ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಎಮಿಲಿನೇಟರ್ ಪಂದ್ಯದಲ್ಲಿ ಸೋತಾಗಲೂ ಸರಣಿ ಟ್ವೀಟ್ ಮೂಲಕ ರಾಯುಡು ಆರ್ಸಿಬಿಯನ್ನು ಗೇಲಿ ಮಾಡಿದ್ದರು. ಅಲ್ಲದೆ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆಯೂ ಟೀಕೆ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಕಾಮೆಂಟ್ರಿ ವೇಳೆಯೂ ಲೈವ್ನಲ್ಲೇ ಆರ್ಸಿಬಿಯನ್ನು ಗೇಲಿ ಮಾಡಿದ್ದರು.
IPL 2025: ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 2 ಓವರ್ಗಳಲ್ಲಿ 19 ರನ್ ನೀಡಿ 2 ವಿಕೆಟ್ ಉರುಳಿಸಿದ್ದ ಶಾರ್ದೂಲ್, ಗುರುವಾರ ನಡೆದಿದ್ದ ಬಲಿಷ್ಠ ಬ್ಯಾಟರ್ಗಳನ್ನು ಹೊಂದಿದ ಹೈದರಾಬಾದ್(SRH Vs LSG) ವಿರುದ್ಧ 34 ರನ್ ನೀಡಿ 4 ವಿಕೆಟ್ಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿತ್ತು. ರೋಹಿತ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡಿದ್ದರು. ಉಸ್ತುವಾರಿ ನಾಯಕ ಸೂರ್ಯಕುಮಾರ್ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ನಿಷೇಧ ಶಿಕ್ಷೆಯಿಂದ ಮೊದಲ ಪಂದ್ಯ ಆಡದ ನಾಯಕ ಹಾರ್ದಿಕ್ ಪಾಂಡ್ಯ ಗುಜರಾತ್ ವಿರುದ್ಧ ಆಡಲಿಳಿಯಲಿದ್ದಾರೆ.
ಚೆನ್ನೈ ತಂಡದ ಪರ ವಿಶ್ವ ಶ್ರೇಷ್ಠ ಸ್ಪಿನ್ನರ್ಗಳಿದ್ದಾರೆ. ಆರ್.ಅಶ್ವಿನ್, ರವೀಂದ್ರ ಜಡೇಜಾ ಹಾಗೂ ನೂರ್ ಅಹ್ಮದ್ ಜತೆ ರಚಿನ್ ರವೀಂದ್ರ ಕೂಡ ಇರುವುದು ತಂಡಕ್ಕೆ ಹೆಚ್ಚಿನ ಬಲ. ಕಳೆದ ಮುಂಬೈ ವಿರುದ್ಧ ಪಂದ್ಯದಲ್ಲಿ ನೂರ್ ಅಹ್ಮದ್ 4 ವಿಕೆಟ್ ಕಿತ್ತಿದ್ದರು. ಹೀಗಾಗಿ ಆರ್ಸಿಬಿ ವಿರುದ್ಧವೂ ಕೈಚಳಕ ತೋರಿಸುವ ಸಾಧ್ಯತೆಯಿದೆ.
SRH vs LSG: ಇಶಾನ್ ಕಿಶನ್ ಅವರನ್ನು ಹಿಂದಿಕ್ಕುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಿಕೋಲಸ್ ಪೂರಣ್(145 ರನ್) ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ಇಶಾನ್ ನಿನ್ನೆ(ಗುರುವಾರ)ಯ ಪಂದ್ಯದಲ್ಲಿ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದ್ದರು.
ಒಟ್ಟಾರೆ ಐಪಿಎಲ್ ದಾಖಲೆ ಕೂಡ ಸಿಎಸ್ಕೆ ಪರವಾಗಿದೆ. ಇದುವರೆಗೆ ಉಭಯ ತಂಡಗಳು 33 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಚೆನ್ನೈ 21 ಪಂದ್ಯ ಗೆದ್ದಿದೆ. ಆರ್ಸಿಬಿ 11 ಪಂದ್ಯ ಜಯಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಮೊದಲ ಪಂದ್ಯವನ್ನು ತವರಿನಲ್ಲೇ ಗೆದ್ದಿರುವ ಚೆನ್ನೈಗೆ ಇದು ಎರಡನೇ ತವರು ಪಂದ್ಯ. ತವರಿನ ಲಾಭವನ್ನೂ ಹೊಂದಿದೆ. ಒಟ್ಟಾರೆ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.
ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ನಲ್ಲಿ ಭಾರತ ಎ ತಂಡ 3 ಚತುರ್ದಿನ ಪಂದ್ಯಗಳಲ್ಲಿ ಆಡಲಿದೆ. ಈ ತಂಡದೊಂದಿಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ತೆರಳಲಿದ್ದಾರೆ ಎನ್ನಲಾಗಿದೆ. ಮುಂಚಿತವಾಗಿಯೇ ಇಂಗ್ಲೆಂಡ್ ಪರಿಸ್ಥಿತಿಯನ್ನು ಅಧ್ಯಯನ ಮಾಡುವುದು, ಮೀಸಲು ಕ್ರಿಕೆಟಿಗರ ಪ್ರತಿಭೆಗಳನ್ನು ತಿಳಿದುಕೊಳ್ಳುವುದು ಗಂಭೀರ್ ಉದ್ದೇಶ ಎನ್ನಲಾಗಿದೆ.
ರಿಯಾನ್ ಪರಾಗ್ ಅಸ್ಸಾಂನಿಂದ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಮೊದಲ ಕ್ರಿಕೆಟಿಗ. ಹೀಗಾಗಿ ಅಸ್ಸಾಂನಲ್ಲಿ ಪರಾಗ್ ಓರ್ವ ಸ್ಟಾರ್ ಆಟಗಾರ. ಆದ್ದರಿಂದ ಅವರ ಪಾದಗಳನ್ನು ಸ್ಪರ್ಶಿಸಿರಬಹುದೆಂದು ಹೇಳಲಾಗುತ್ತಿದೆ. ಐಪಿಎಲ್ನಲ್ಲಿ ಪರಾಗ್ ಬಹಳ ಸಮಯದಿಂದ ರಾಜಸ್ಥಾನ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಒತ್ತಡ ರಹಿತವಾಗಿ ಬ್ಯಾಟಿಂಗ್ ನಡೆಸುವ ಸಲುವಾಗಿಯೇ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಜವಾಬ್ದಾರಿಯನ್ನು ತಿರಸ್ಕರಿಸಿದ್ದರು. ಕಳೆದ ಮೂರು ಸೀಸನ್ ಗಳಲ್ಲಿ ಕೆ ಎಲ್ ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದರು. ಮೊದಲೆರಡು ಸೀಸನ್ ಗಳಲ್ಲಿ ಲಕ್ನೋ ಪ್ಲೇ ಆಫ್ ಪ್ರವೇಶಿಸಿತ್ತು. ಕಳೆದ ಸೀಸನ್ ನಲ್ಲಿ ತಂಡ ಆರನೇ ಸ್ಥಾನಿಯಾಗಿತ್ತು.
ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಅಳುತ್ತಾ ವಿಡಿಯೊ ಮೂಲಕ ಮಾತನಾಡಿದ ಸವೀಟಿ ಬೂರಾ,'ಎಲ್ಲರೂ ಸೇರಿ ನಾನೇ ತಪ್ಪು ಮಾಡಿರುವ ಹಾಗೆ ಬಿಂಬಿಸುತ್ತಿದ್ದಾರೆ. ಪೊಲೀಸರಿಂದಲೂ ನನಗೆ ನ್ಯಾಯ ಸಿಗುತ್ತಿಲ್ಲ. ನಾನು ಠಾಣೆಯಲ್ಲಿ ದೀಪಕ್ ಮೇಲೆ ಹಲ್ಲೆ ನಡೆಸಿದ ವಿಡಿಯೊವನ್ನು ಬೇಕಂತಲೇ ವೈರಲ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸದ್ಯ ಆರೆಂಜ್ ಕ್ಯಾಪ್ ಸನ್ರೈಸರ್ಸ್ ಹೈದರಾಬಾದ್ ತಂಡದ ಇಶಾನ್ ಕಿಶನ್ ಬಳಿ ಇದೆ. ಅವರು ಒಂದು ಪಂದ್ಯವನ್ನಾಡಿ 106 ರನ್ ಬಾರಿಸಿದ್ದಾರೆ. ಇಂದು(ಗುರುವಾರ) ನಡೆಯುವ ಲಕ್ನೋ ವಿರುದ್ಧದ ಪಂದ್ಯದಲ್ಲಿ ಇಶಾನ್ ಮತ್ತೆ ಅಬ್ಬರಿಸಿದರೆ ಆರೆಂಜ್ ಕ್ಯಾಪ್ ಅವರ ಬಳಿಯೇ ಉಳಿಯಲಿದೆ.
IPL 2025: ಬಿರುಸಿನ ಬ್ಯಾಟಿಂಗ್ ನಡೆಸಿದ ಕ್ವಿಂಟನ್ ಡಿ ಕಾಕ್ 97 ರನ್ ಬಾರಿಸುವ ಮೂಲಕ ಚೇಸಿಂಗ್ ವೇಳೆ ಕೆಕೆಆರ್ ಪರ ಅತ್ಯಧಿಕ ರನ್ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಕನ್ನಡಿಗ ಮನೀಷ್ ಪಾಂಡೆ(94) ಹೆಸರಿನಲ್ಲಿತ್ತು. ಇದೀಗ ಅವರ ದಾಖಲೆ ಪತನಗೊಂಡಿದೆ.
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಹೈದರಾಬಾದ್ ತಂಡಗಳು ಇದುವರೆಗೆ ಐಪಿಎಲ್ನಲ್ಲಿ ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಲಕ್ನೋ 3 ಪಂದ್ಯಗಳನ್ನು ಗೆದ್ದಿದೆ. ಹೈದರಾಬಾದ್ ಒಂದರಲ್ಲಿ ಜಯಿಸಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಲಕ್ನೋ ಮುಂದಿದ್ದರೂ ಈ ಬಾರಿ ತಂಡದ ಬೌಲಿಂಗ್ ಕಳಪೆಯಾಗಿರುವ ಕಾರಣ ಹಿಂದಿನಂತೆ ಹಿಡಿತ ಸಾಧಿಸುವುದು ಕೊಂಚ ಕಷ್ಟ.