ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Abhilash BC

abhilashkurunji@gmail.com

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅಭಿಲಾಷ್‌ ಬಿ.ಸಿ. ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿ ಬಳಿಕ ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿ ಇದೀಗ 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
ಮಹಾರಾಷ್ಟ್ರ ತಂಡದ ನಾಯಕನಾಗಿ ಗಾಯಕ್ವಾಡ್ ಬದಲಿಗೆ ಪೃಥ್ವಿ ಶಾ ಆಯ್ಕೆ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ; ಮಹಾರಾಷ್ಟ್ರ ತಂಡಕ್ಕೆ ಪೃಥ್ವಿ ಶಾ ನಾಯಕ

ಮಹಾರಾಷ್ಟ್ರ ತಂಡವು ಜಮ್ಮು ಮತ್ತು ಕಾಶ್ಮೀರ, ಹೈದರಾಬಾದ್, ಚಂಡೀಗಢ, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಗೋವಾ ತಂಡಗಳೊಂದಿಗೆ ಸವಾಲಿನ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ತಂಡವು ತನ್ನ ಎಲ್ಲಾ ಲೀಗ್ ಪಂದ್ಯಗಳನ್ನು ಕೋಲ್ಕತ್ತಾದಲ್ಲಿ ಆಡಲಿದೆ.

KL Rahul: ಕೆ.ಎಲ್‌ ರಾಹುಲ್‌ ನಾಯಕತ್ವದ ದಾಖಲೆ ಹೇಗಿದೆ?

ಕೆ.ಎಲ್‌ ರಾಹುಲ್‌ ನಾಯಕತ್ವದಲ್ಲಿ ಭಾರತ ತಂಡ ಎಷ್ಟು ಗೆಲುವು ಕಂಡಿದೆ?

ಪಂತ್‌ ಉಪನಾಯಕನಾಗಿರುವ ಕಾರಣ ಅವರಿಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ನೀಡಲೇ ಬೇಕು. ಹೀಗಾಗಿ ರಾಹುಲ್‌ ಕೀಪಿಂಗ್‌ ಗ್ಲೌಸ್‌ ಪಂತ್‌ಗೆ ಬಿಟ್ಟುಕೊಡಬೇಕಾದಿತು. ಮೂರನೇ ಕೀಪರ್‌ ಜುರೇಲ್‌ಗೆ ಆಡುವ ಬಳಗದಲ್ಲಿ ಅವಕಾಶ ಕಷ್ಟ. ರಾಹುಲ್‌ ಜತೆ ಮತೋರ್ವ ಕನ್ನಡಿಗನಾಗಿ ಪ್ರಸಿದ್ಧ್‌ ಕೃಷ್ಣಗೂ ಅವಕಾಶ ನೀಡಲಾಗಿದೆ.

ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಭಾರತ ಅಂಧರ ಮಹಿಳಾ ತಂಡ

ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಭಾರತ ಅಂಧರ ಮಹಿಳಾ ತಂಡ

ಚೇಸಿಂಗ್‌ ವೇಳೆ ಪೂಲಾ ಸೊರೆನ್ ಅವರು ಔಟಾಗದೇ 27 ಎಸೆತಗಳಲ್ಲಿ ನಾಲ್ಕು ಸ್ಟೈಲಿಶ್ ಬೌಂಡರಿಗಳನ್ನು ಒಳಗೊಂಡಂತೆ 162.96 ಸ್ಟ್ರೈಕ್ ರೇಟ್‌ನಲ್ಲಿ 44 ರನ್ ಗಳಿಸಿದರು. ಅವರ ಟಾಪ್ ಆರ್ಡರ್ ಇನ್ನಿಂಗ್ಸ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಭಾರತ ತಂಡ ಪ್ರಕಟ; ಕನ್ನಡಿಗ ರಾಹುಲ್‌ ನಾಯಕ

ಏಕದಿನ ಸರಣಿಗೆ ಭಾರತ ತಂಡ ಪ್ರಕಟ; ತಂಡಕ್ಕೆ ಮರಳಿದ ಗಾಯಕ್ವಾಡ್‌

IND vs SA ODI Series: ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರ ಅನುಪಸ್ಥಿತಿಯಲ್ಲಿ ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ ಮತ್ತು ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ವೇಗಿಗಳಾಗಿ ಆಯ್ಕೆಯಾಗಲಿದ್ದಾರೆ.

IND vs SA 2nd Test: ದಕ್ಷಿಣ ಆಫ್ರಿಕಾದ ಬಿಗಿ ಹಿಡಿತದಲ್ಲಿ ಗುವಾಹಟಿ ಟೆಸ್ಟ್‌

ಮುತ್ತುಸ್ವಾಮಿ ಶತಕ; ದಕ್ಷಿಣ ಆಫ್ರಿಕಾದ ಬಿಗಿ ಹಿಡಿತದಲ್ಲಿ ಗುವಾಹಟಿ ಟೆಸ್ಟ್‌

ಭಾರತ ಪರ ಕುಲ್‌ದೀಪ್‌ ಯಾದವ್‌ ನಿರೀಕ್ಷಿತ ಬೌಲಿಂಗ್‌ ಮೂಲಕ 4 ವಿಕೆಟ್‌ ಕಿತ್ತರು. ಉಳಿದಂತೆ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್‌ ಕಿತ್ತರು. ಸದ್ಯದ ಸ್ಥಿತಿಯಲ್ಲಿ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿ ವರ್ತಿಸುತ್ತಿರುವಂತೆ ಕಾಣುತ್ತಿದೆ. ಹೀಗಾದರೆ ಭಾರತ ತವರಿನಲ್ಲಿ ಎರಡನೇ ಟೆಸ್ಟ್ ಸರಣಿಯನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ.

Smriti Mandhana; ತಂದೆಗೆ ಹೃದಯಾಘಾತ; ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ

ತಂದೆಗೆ ಹೃದಯಾಘಾತ; ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ

Smriti Mandhana Wedding Postponed: "ಸ್ಮೃತಿ ತನ್ನ ತಂದೆ ಗುಣಮುಖರಾಗುವವರೆಗೆ, ಭಾನುವಾರ ನಡೆಯಬೇಕಿದ್ದ ಈ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ನಿರ್ಧರಿಸಿದ್ದಾರೆ. ಈಗ ಅವರು ವೀಕ್ಷಣೆಯಲ್ಲಿದ್ದಾರೆ, ಮತ್ತು ವೈದ್ಯರು ಅವರನ್ನು ಗುಣಮುಖರಾಗುವವರೆಗೆ ಆಸ್ಪತ್ರೆಯಲ್ಲಿಯೇ ಇರುವಂತೆ ಸೂಚಿಸಿದ್ದಾರೆ. ನಾವು ಕೂಡ ಆಘಾತದಲ್ಲಿದ್ದೇವೆ ಮತ್ತು ಅವರು ಬೇಗ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ" ಎಂದು ತುಹಿನ್ ಮಿಶ್ರಾ ಹೇಳಿದರು.

ಸ್ಮೃತಿ ಮಂಧಾನ ವಿವಾಹ ಸಮಾರಂಭದಲ್ಲಿ ವ್ಯಕ್ತಿಗೆ ಹೃದಯಾಘಾತ; ಮಂಟಪಕ್ಕೆ ಬಂದ ಆಂಬುಲೆನ್ಸ್‌

ಸ್ಮೃತಿ ಮಂಧಾನ ವಿವಾಹ ಸಮಾರಂಭ ವೇಳೆ ಮಂಟಪಕ್ಕೆ ಬಂದ ಆಂಬುಲೆನ್ಸ್‌

Smriti Mandhana Wedding: ಎನ್‌ಡಿಟಿವಿ ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ, ಆ ವ್ಯಕ್ತಿಯ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಮತ್ತು ಸಾಂಗ್ಲಿಯ ಸರ್ವಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಎದುರಿಸಿದ ವ್ಯಕ್ತಿಯ ಗುರುತಿನ ಬಗ್ಗೆ ಇನ್ನೂ ಯಾವುದೇ ದೃಢೀಕರಣ ಲಭ್ಯವಿಲ್ಲ, ಆದರೆ ಆ ವ್ಯಕ್ತಿ ಮಂಧಾನ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದಾನೆಂದು ಹೇಳಲಾಗುತ್ತದೆ.

Lakshya Sen: ಆಸ್ಟ್ರೇಲಿಯನ್ ಓಪನ್ ಗೆದ್ದ ಲಕ್ಷ್ಯ ಸೇನ್

ವರ್ಷದ ಮೊದಲ ಪ್ರಶಸ್ತಿ ಕಾಯುವಿಕೆಗೆ ಅಂತ್ಯ ಹಾಡಿದ ಲಕ್ಷ್ಯ ಸೇನ್

ಫೈನಲ್‌ನಲ್ಲಿ ಲಕ್ಷ್ಯ ಸೇನ್ ಕೆಳ ಶ್ರೇಯಾಂಕದ ಎದುರಾಳಿಯನ್ನು ಹಿಂದಿಕ್ಕಲು ಕೇವಲ 38 ನಿಮಿಷಗಳನ್ನು ತೆಗೆದುಕೊಂಡರು. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಅವರು ಎದುರಾಳಿಗೆ ಯಾವುದೇ ಹಂತದಲ್ಲಿಯೂ ಚೇತರಿಕೆಗೆ ಅವಕಾಶ ನೀಡಲೇ ಇಲ್ಲ. ಶನಿವಾರ ಮಧ್ಯಾಹ್ನ ನಡೆದ ಸೆಮಿಫೈನಲ್‌ನಲ್ಲಿ ಸೇನ್‌ ಗೆಲುವಿಗಾಗಿ 86 ನಿಮಿಷಗಳ ಹೋರಾಟ ನಡೆಸಿದ್ದರು.

Senuran Muthusamy: ಗುವಾಹಟಿಯಲ್ಲಿ ಚೊಚ್ಚಲ ಟೆಸ್ಟ್‌ ಶತಕ ಬಾರಿಸಿದ ಭಾರತೀಯ ಮೂಲದ ಸೆನುರನ್ ಮುತ್ತುಸ್ವಾಮಿ ಯಾರು?

ಭಾರತಕ್ಕೆ ಕಾಡಿದ ಭಾರತೀಯ ಮೂಲದ ಸೆನುರನ್ ಮುತ್ತುಸ್ವಾಮಿ ಯಾರು?

ದಕ್ಷಿಣ ಆಫ್ರಿಕಾದ 2019 ರ ಭಾರತ ಪ್ರವಾಸದ ವೇಳೆ ಅವರು ವಿಶಾಖಪಟ್ಟಣದಲ್ಲಿ ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯವನ್ನಾಡಿದರು. ಆ ಪಂದ್ಯದಲ್ಲಿ ಅವರು ಭಾರತೀಯ ನಾಯಕನಾಗಿದ್ದ ವಿರಾಟ್ ಕೊಹ್ಲಿಯ ವಿಕೆಟ್‌ ಕಿತ್ತಿದ್ದರು. ಅದು ಅವರ ಮೊದಲ ಟೆಸ್ಟ್ ವಿಕೆಟ್.

Mitchell Starc: 34 ವರ್ಷಗಳ ನಂತರ ಆಶಸ್ ಟೆಸ್ಟ್‌ನಲ್ಲಿ ದಾಖಲೆ ಬರೆದ ಮಿಚೆಲ್ ಸ್ಟಾರ್ಕ್

10 ವಿಕೆಟ್‌ ಗೊಂಚಲು ಪಡೆದು ವಿಶೇಷ ದಾಖಲೆ ಬರೆದ ಮಿಚೆಲ್ ಸ್ಟಾರ್ಕ್

The Ashes: 9 ವಿಕೆಟ್‌ಗೆ 123 ರನ್ ಪೇರಿಸಿದ್ದಲ್ಲಿಂದ ಶನಿವಾರ ದ್ವಿತೀಯ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ 132ರನ್‌ಗೆ ಆಲೌಟ್‌ ಆಯಿತು. 40 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ಆಸೀಸ್‌ ಬೌಲರ್‌ಗಳ ಘಾತಕ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ 164ರನ್‌ಗೆ ಕುಸಿತ ಕಂಡಿತು.

Harbhajan Singh: ಅಬುಧಾಬಿ ಟಿ10 ಲೀಗ್‌ ವೇಳೆ ಪಾಕ್‌ ಆಟಗಾರನಿಗೆ ಶೇಕ್‌ ಹ್ಯಾಂಡ್‌ ನೀಡಿದ ಹರ್ಭಜನ್‌

ಪಾಕ್‌ ಆಟಗಾರನ ಕೈಕುಲುಕಿದ ಹರ್ಭಜನ್‌ ಸಿಂಗ್‌; ಭಾರೀ ಟೀಕೆ

Abu Dhabi T10 league: ಎರಡು ಓವರ್‌ಗಳಲ್ಲಿ 10ಕ್ಕೆ 2 ವಿಕೆಟ್ ಪಡೆದ ದಹಾನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು ಸೈಫ್ ಹಸನ್ (11 ಎಸೆತಗಳಲ್ಲಿ 15) ಮತ್ತು ಟೈಮಲ್ ಮಿಲ್ಸ್ (1 ಎಸೆತದಲ್ಲಿ 0) ವಿಕೆಟ್ ಪಡೆದರು. ಪಂದ್ಯದ ಕೊನೆಯ ಎಸೆತದಲ್ಲಿ ಹರ್ಭಜನ್ 1 ಎಸೆತದಲ್ಲಿ 1 ರನ್ ಗಳಿಸಿ ರನೌಟ್ ಆದರು.

ನ್ಯೂಜಿಲೆಂಡ್ ಸರಣಿಗೆ ಪ್ರಕಟಿಸಿದ ತಂಡವೇ 2026ರ ಟಿ20 ವಿಶ್ವಕಪ್‌ಗೆ ಅಂತಿಮ; ಬಿಸಿಸಿಐ

ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡಕ್ಕೆ 10 ಪಂದ್ಯ ಬಾಕಿ

New Zealand series: ನ್ಯೂಜಿಲೆಂಡ್ ವಿರುದ್ಧದ ಐದು ಟಿ20 ಪಂದ್ಯಗಳು ನಾಗ್ಪುರ (ಜನವರಿ 21), ರಾಯ್‌ಪುರ (ಜನವರಿ 23), ಗುವಾಹಟಿ (ಜನವರಿ 25), ವೈಜಾಗ್ (ಜನವರಿ) 28 ಮತ್ತು ತಿರುವನಂತಪುರ (ಜನವರಿ 31)ದಲ್ಲಿ ನಡೆಯಲಿವೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಭಾರತ ಆಡಲಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ; ಮುಂಬೈ ತಂಡದಲ್ಲಿ ಸ್ಥಾನ ಪಡೆದ ಸೂರ್ಯಕುಮಾರ್ ಯಾದವ್

ಮುಂಬೈ ತಂಡದಲ್ಲಿ ಸ್ಥಾನ ಪಡೆದ ಸೂರ್ಯಕುಮಾರ್ ಯಾದವ್

Syed Mushtaq Ali Trophy: ಸೂರ್ಯಕುಮಾರ್‌ ಉಪಸ್ಥಿತಿಯು 2024–25ರ ಆವೃತ್ತಿಯನ್ನು ಗೆದ್ದಿರುವ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಮತ್ತಷ್ಟು ಬಲಪಡಿಸುತ್ತದೆ. ಸೂರ್ಯಕುಮಾರ್ ಜೊತೆಗೆ, ತಂಡವು ಶಿವಂ ದುಬೆ, ಅಜಿಂಕ್ಯ ರಹಾನೆ, ಸರ್ಫರಾಜ್ ಖಾನ್ ಮತ್ತು ಆಯುಷ್ ಮ್ಹಾತ್ರೆ ಅವರಂತಹ ಅನುಭವಿ ಆಟಗಾರರನ್ನು ಒಳಗೊಂಡಿದ್ದು, ತಂಡಕ್ಕೆ ಹೆಚ್ಚಿನ ಬಲ ನೀಡಿದೆ.

T20 World Cup 2026: ಫೆ.15ಕ್ಕೆ ಭಾರತ-ಪಾಕ್‌ ಟಿ20 ವಿಶ್ವಕಪ್‌ ಫೈಟ್‌

ಟಿ20 ವಿಶ್ವಕಪ್‌; ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ-ಪಾಕ್‌

India vs Pakistan: ಮೂಲಗಳ ಪ್ರಕಾರ, ಭಾರತ ಫೆಬ್ರವರಿ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಯುಎಸ್ಎ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ, ನಂತರ ಫೆಬ್ರವರಿ 12 ರಂದು ದೆಹಲಿಯಲ್ಲಿ ನಮೀಬಿಯಾ ವಿರುದ್ಧದ ಪಂದ್ಯವನ್ನು ಆಡಲಿದೆ.

IND vs SA: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ದಕ್ಷಿಣ ಆಫ್ರಿಕಾ; ಭಾರತ ಪರ ಎರಡು ಬದಲಾವಣೆ

ಟಾಸ್‌ ಸೋತರೂ ವಿಶೇಷ ದಾಖಲೆ ಬರೆದ ರಿಷಭ್‌ ಪಂತ್‌

IND vs SA Live score 2nd Test: ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿತು. ಸಾಯಿ ಸುದರ್ಶನ್ ಮತ್ತು ನಿತೀಶ್‌ ಕುಮಾರ್‌ ರೆಡ್ಡಿಗೆ ಅವಕಾಶ ನೀಡಿತು. ಅಕ್ಷರ್‌ ಪಟೇಲ್‌ ಅವರನ್ನು ಕೈಬಿಡಲಾಯಿತು. ದಕ್ಷಿಣ ಆಫ್ರಿಕಾ ಒಂದು ಬಲಾವಣೆ ಮಾಡಿತು. ಸೆನುರನ್ ಮುತ್ತುಸ್ವಾಮಿಗೆ ಅವಕಾಶ ನೀಡಿ ಕಾರ್ಬಿನ್ ಬಾಷ್ ಕೈಬಿಡಲಾಯಿತು.

IND vs SA: ಗುವಾಹಟಿಯ ನಿಗೂಢ ಪಿಚ್‌ನಲ್ಲಿ ಭಾರತಕ್ಕೆ ಟೆಸ್ಟ್‌ ಗೆಲ್ಲುವ ಸವಾಲು

ಚಾರಿತ್ರಿಕ ಸಾಧನೆಗಾಗಿ ತೆಂಬಾ ಪಡೆ ತವಕ; ಸರಣಿ ಸಮಬಲಕ್ಕೆ ಭಾರತ ಹೋರಾಟ

India vs South Africa 2nd Test: ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಕತ್ತುನೋವಿಗೆ ಸಿಲುಕಿದ್ದ ನಾಯಕ ಶುಭಮನ್‌ ಗಿಲ್‌ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಅವರ ಅನುಪಸ್ಥಿತಿಯಲ್ಲಿ ರಿಷಭ್‌ ಪಂತ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇದನ್ನು ಶುಕ್ರವಾರ ಬಿಸಿಸಿಐ ಖಚಿತಪಡಿಸಿತು. ಗಿಲ್‌ ಅವರ ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಅಥವಾ ಕನ್ನಡಿಗ ದೇವದತ್ತ ಪಡಿಕ್ಕಲ್ ಅವರು ಸ್ಥಾನ ಪಡೆಯುವ ಸಾಧ್ಯತೆ ಇದೆ.

ದೆಹಲಿ ಮಾಲಿನ್ಯ:  ಪ್ರಮುಖ ಟೂರ್ನಮೆಂಟ್‌ನ ನಾಕೌಟ್ ಹಂತಗಳನ್ನು ದೆಹಲಿಯಿಂದ ಮುಂಬೈಗೆ ಸ್ಥಳಾಂತರಿಸಿದ ಬಿಸಿಸಿಐ

ದೆಹಲಿ ಹದಗೆಟ್ಟ ಗಾಳಿಯ ಗುಣಮಟ್ಟ; ಪ್ರಮುಖ ಕ್ರಿಕೆಟ್‌ ಟೂರ್ನಿ ಸ್ಥಳಾಂತರ

Pollution woes: ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ವಾಯು ಗುಣಮಟ್ಟದ ಸೂಚ್ಯಂಕಗಳು ಇತ್ತೀಚೆಗೆ ತುಂಬಾ ಕಳಪೆ ಮತ್ತು ಗಂಭೀರ ವರ್ಗಗಳಿಗೆ ಇಳಿದಿದ್ದು, ಕ್ರೀಡಾಪಟುಗಳು, ಅಧಿಕಾರಿಗಳು ಮತ್ತು ಪ್ರೇಕ್ಷಕರಿಗೆ ಗಮನಾರ್ಹ ಆರೋಗ್ಯ ಅಪಾಯಗಳನ್ನು ಹೆಚ್ಚಿಸಿವೆ. ಶುಕ್ರವಾರ ಬೆಳಿಗ್ಗೆ ದೆಹಲಿಯ ಗಾಳಿಯ ಗುಣಮಟ್ಟ ಸ್ವಲ್ಪ ಸುಧಾರಿಸಿತು, ಆದರೆ ಸತತ ಏಳನೇ ದಿನವೂ ತುಂಬಾ ಕಳಪೆ ವ್ಯಾಪ್ತಿಯಲ್ಲಿಯೇ ಉಳಿದಿದೆ.

ಡಬ್ಲ್ಯುಪಿಎಲ್‌ ಆಟಗಾರ್ತಿಯರ ಹರಾಜು ಪಟ್ಟಿ ಬಿಡುಗಡೆ; ಮಾರ್ಕ್ಯೂ ಸೆಟ್‌ನಲ್ಲಿ ದೀಪ್ತಿ ಶರ್ಮಾ, ಮೆಗ್ ಲ್ಯಾನಿಂಗ್

WPL 2026: ಡಬ್ಲ್ಯುಪಿಎಲ್‌ ಆಟಗಾರ್ತಿಯರ ಹರಾಜು ಪಟ್ಟಿ ಬಿಡುಗಡೆ

WPL 2026 auction: ಹತ್ತೊಂಬತ್ತು ಆಟಗಾರ್ತಿಯರು ಗರಿಷ್ಠ ಮೂಲ ಬೆಲೆ 50 ಲಕ್ಷ ರೂ.ಗಳ ಪಟ್ಟಿಯಲ್ಲಿದ್ದಾರೆ. ಉಳಿದಂತೆ 11 ಆಟಗಾರ್ತಿಯರು 40 ಲಕ್ಷ ರೂ.ಗಳ ವಿಭಾಗದಲ್ಲಿ ಮತ್ತು 88 ಆಟಗಾರ್ತಿಯರು 30 ಲಕ್ಷ ರೂ.ಗಳ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.

Joe Root: ಶೂನ್ಯ ಸುತ್ತಿ ವಿರಾಟ್‌ ಕೊಹ್ಲಿಯ ದಾಖಲೆ ಸರಿಗಟ್ಟಿದ ಜೋ ರೂಟ್‌

ಆ್ಯಶಸ್ ಮೊದಲ ಟೆಸ್ಟ್‌ನಲ್ಲಿ ಶೂನ್ಯ ಸುತ್ತಿ ಅನಗತ್ಯ ದಾಖಲೆ ಬರೆದ ರೂಟ್‌

Australia vs England 1st Test: ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು ಆರಂಭಿಕ ಬ್ಯಾಟ್ಸ್‌ಮನ್ ಜ್ಯಾಕ್ ಕ್ರಾಲಿ ಅವರನ್ನು ಮೊದಲ ಓವರ್‌ನಲ್ಲೇ ಕಳೆದುಕೊಂಡು ಕಳಪೆ ಆರಂಭ ಕಂಡಿತು. ಮಿಚೆಲ್‌ ಸ್ಟಾರ್ಕ್‌ ಅವರ ಬೆಂಕಿ ಉಂಡೆಗಳ ವೇಗದ ಬೌಲಿಂಗ್‌ ಮುಂದೆ ಆಂಗ್ಲ ಬ್ಯಾಟರ್‌ಗಳು ಪರದಾಡಿ 172 ರನ್‌ಗೆ ಸರ್ವಪತನ ಕಂಡರು. ಮಿಚೆಲ್‌ ಸ್ಟಾರ್‌ ಕೇವಲ 58 ರನ್‌ಗೆ 7 ವಿಕೆಟ್‌ ಕಿತ್ತು ಮಿಂಚಿದರು.

ಶುಭಮನ್ ಗಿಲ್ ತಂಡದಿಂದ ಬಿಡುಗಡೆ; ಗುವಾಹಟಿ ಟೆಸ್ಟ್‌ನಲ್ಲಿ ರಿಷಭ್ ಪಂತ್ ನಾಯಕ

ಗಾಯದ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲು ಮುಂಬೈಗೆ ಪ್ರಯಾಣಿಸಿದ ಗಿಲ್‌

Gill ruled out of 2nd Test: ಗಿಲ್ ಸ್ಥಾನಕ್ಕೆ ಸಾಯಿ ಸುದರ್ಶನ್ ಹಾಗೂ ಕರ್ನಾಟಕದ ದೇವದತ್ತ ಪಡಿಕ್ಕಲ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಮೂರನೇ ಕ್ರಮಾಂಕದಲ್ಲಿ ಆಡಿರುವುದರಿಂದ ಸುದರ್ಶನ್ ಅವರನ್ನೇ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ. ವೇಗದ ಪಿಚ್‌ ಆಗಿರುವ ಕಾರಣ ಅಕ್ಷರ್‌ ಪಟೇಲ್‌ ಅವರನ್ನು ಕೈ ಬಿಟ್ಟು ಅವರ ಸ್ಥಾನದಲ್ಲಿ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

Smriti Mandhana: ಸ್ಪೆಷಲ್‌ ವಿಡಿಯೊ ಮೂಲಕ ಪಾಲಶ್‌ ಮುಚ್ಚಲ್‌ ಜತೆಗಿನ ನಿಶ್ಚಿತಾರ್ಥ ಘೋಷಿಸಿದ ಸ್ಮೃತಿ ಮಂಧಾನ

ಮುನ್ನಾಭಾಯಿ ಶೈಲಿಯಲ್ಲಿ ನಿಶ್ಚಿತಾರ್ಥ ಘೋಷಿಸಿದ ಸ್ಮೃತಿ ಮಂಧಾನ

Smriti Mandhana engagement: ಈಗಾಗಲೇ ವರದಿಯಾದ ಪ್ರಕಾರ ಸ್ಮೃತಿ ಮಂಧಾನ ಹಾಗೂ ಚಲನಚಿತ್ರ ನಿರ್ಮಾಪಕ ಪಾಲಶ್‌ ಮುಚ್ಚಲ್‌ ವಿವಾಹ ನವೆಂಬರ್‌ 23 ರಂದು ಮಹಾರಾಷ್ಟ್ರ ಸಾಂಗ್ಲಿಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪಲಾಶ್‌, ‘ಸ್ಮೃತಿ ಸದ್ಯದಲ್ಲೇ ಇಂದೋರ್‌ನ ಸೊಸೆ ಆಗಲಿದ್ದಾರೆ’ ಎಂದು ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದರು.

SMAT 2025-26: ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಪಡಿಕ್ಕಲ್‌, ನಾಯರ್ ಕಮ್‌ಬ್ಯಾಕ್‌

ಮುಷ್ತಾಕ್​ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಅಗರ್ವಾಲ್‌ ನಾಯಕ

ನವೆಂಬರ್​ 26ರಿಂದ ಅಹಮದಾಬಾದ್​ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಕರ್ನಾಟಕವು ತನ್ನ ಮೊದಲ ಪಂದ್ಯದಲ್ಲಿ ಉತ್ತರಾಖಂಡ ಎದುರು ಆಡಲಿದೆ. ಕರ್ನಾಟಕ ತಂಡ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಉತ್ತರಾಖಂಡ, ರಾಜಸ್ಥಾನ, ತಮಿಳುನಾಡು, ದೆಹಲಿ, ಸೌರಾಷ್ಟ್ರ ಮತ್ತು ತ್ರಿಪುರ ತಂಡಗಳು ಈ ಗುಂಪಿನಲ್ಲಿವೆ.

IND vs SA: ಊಟದ ಹೊತ್ತಿಗೆ ಚಹಾ!; ಗುವಾಹಟಿ ಟೆಸ್ಟ್‌ ಸಮಯದಲ್ಲಿ ಬದಲಾವಣೆ

ಗುವಾಹಟಿ ಟೆಸ್ಟ್‌ ಸಮಯದಲ್ಲಿ ಬದಲಾವಣೆ; ಕಾರಣವೇನು?

Guwahati Test: ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡವು ಸರಣಿಯಲ್ಲಿ ಈಗಾಗಲೇ 1–0 ಮುನ್ನಡೆಯಲ್ಲಿದೆ. 2010ರಲ್ಲಿ ಭಾರತದ ನೆಲದಲ್ಲಿ ಟೆಸ್ಟ್ ಸರಣಿಯನ್ನು 2–0ಯಿಂದ ಜಯಿಸಿತ್ತು. ಸರಣಿಯಲ್ಲಿ 1–1ರ ಸಮಬಲ ಸಾಧಿಸಲು ಆತಿಥೇಯ ತಂಡಕ್ಕೂ ಈ ಟೆಸ್ಟ್‌ನಲ್ಲಿ ಜಯ ದಾಖಲಿಸಲೇಬೇಕಿದೆ.

Ashes 2025: ಆ್ಯಶಸ್ ಮೊದಲ ಟೆಸ್ಟ್‌ಗೆ 12 ಸದಸ್ಯರ ತಂಡ ಪ್ರಕಟಿಸಿದ ಇಂಗ್ಲೆಂಡ್‌

ಆ್ಯಶಸ್ ಮೊದಲ ಟೆಸ್ಟ್‌ಗೆ ಅಚ್ಚರಿಯ ತಂಡ ಪ್ರಕಟಿಸಿದ ಇಂಗ್ಲೆಂಡ್‌

ವೇಗಿ ಮಾರ್ಕ್ ವುಡ್ ಲಭ್ಯತೆಯ ಬಗ್ಗೆಯೂ ಸಂದೇಹಗಳಿದ್ದವು. ದೀರ್ಘ ಗಾಯದ ನಂತರ ಹಿಂತಿರುಗಿದ ಈ ವೇಗಿ, ಅಭ್ಯಾಸ ಪಂದ್ಯದಲ್ಲಿ 8 ಓವರ್ ಬೌಲಿಂಗ್ ಮಾಡಿದ ನಂತರ ಸ್ಕ್ಯಾನ್‌ಗೆ ಒಳಪಟ್ಟರು. ಅದೃಷ್ಟವಶಾತ್, ಅವರು ಫಿಟ್ ಆಗಿದ್ದರು. ಮಂಗಳವಾರ ಇಂಗ್ಲೆಂಡ್‌ನ ತರಬೇತಿ ಅವಧಿಯಲ್ಲಿ ವುಡ್ ಪೂರ್ಣ ಓರೆಯಾಗಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿತು.

Loading...