ಚಿನ್ನಸ್ವಾಮಿಯ 240 ಸಿಸಿಟಿವಿ ಫೀಡ್ಗಳನ್ನು ಕಡಿತಗೊಳಿಸಿದ ಸಿಬ್ಬಂದಿ
Security scare at Bengaluru stadium: ಕಳೆದ ವರ್ಷ ಜೂನ್ 4ರಂದು ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನರು ದುರ್ಮರಣಕ್ಕೀಡಾಗಿದ್ದರು. ಅದರಿಂದಾಗಿ ರಾಜ್ಯ ಸರ್ಕಾರ ನೇಮಕ ಮಾಡಿದ್ದ ಸಮಿತಿಯು ಕ್ರೀಡಾಂಗಣದಲ್ಲಿ ಕೆಲವು ಮಾರ್ಪಾಡುಗಳನ್ನು ಸೂಚಿಸಿತ್ತು. ಅದರಂತೆ ಪ್ರೇಕ್ಷಕರ ಸಂಪೂರ್ಣ ಸುರಕ್ಷತೆಗೆ ಆಧ್ಯತೆ ನೀಡಿ ಮೈದಾನ ಒಳಗೂ ಮತ್ತು ಹೊರಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.