ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Abhilash BC

[email protected]

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅಭಿಲಾಷ್‌ ಬಿ.ಸಿ. ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿ ಬಳಿಕ ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿ ಇದೀಗ 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
SRH vs KKR: ಐಪಿಎಲ್‌ನಲ್ಲಿ 200 ವಿಕೆಟ್‌ ಪೂರ್ತಿಗೊಳಿಸಿದ ನರೈನ್;‌ ಈ ಸಾಧನೆಗೈದ ಮೊದಲ ವಿದೇಶಿಗ

ಐಪಿಎಲ್‌ನಲ್ಲಿ 200 ವಿಕೆಟ್‌ ಪೂರ್ತಿಗೊಳಿಸಿ 3 ದಾಖಲೆ ಬರೆದ ನರೈನ್‌

IPL 2026: ಐಪಿಎಲ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ವಿದೇಶಿ ಆಟಗಾರ ಎಂಬ ದಾಖಲೆಗೂ ಪಾತ್ರರಾಗಿರುವ ನರೈನ್, ಒಟ್ಟಾರೆಯಾಗಿ ಯುಜ್ವೇಂದ್ರ ಚಾಹಲ್ ಮತ್ತು ಭುವನೇಶ್ವರ ಕುಮಾರ್ ನಂತರ ಈ ಸಾಧನೆಗೈದ ಮೂರನೇ ಆಟಗಾರ ಎನಿಸಿದರು. ನರೈನ್‌ ಈಗ 201 ವಿಕೆಟ್‌ಗಳನ್ನು ಹೊಂದಿದ್ದಾರೆ.

SRH vs KKR: ಹೈದರಾಬಾದ್‌ನಲ್ಲಿ ಮುಳುಗಿದ 'ಸನ್‌'; ಕೆಕೆಆರ್‌ಗೆ ಹ್ಯಾಟ್ರಿಕ್‌ ಗೆಲುವು

ಬಲಿಷ್ಠ ಸನ್‌ರೈಸರ್ಸ್‌ಗೆ‌ 7 ವಿಕೆಟ್‌ ಅಂತರದ ಸೋಲುಣಿಸಿದ ಕೆಕೆಆರ್

Sunrisers Hyderabad vs Kolkata Knight Riders: ಹಾಲಿ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನಾಡಿದ ಕನ್ನಡಿಗ ಮನೀಷ್ ಪಾಂಡೆ ಇದುವರೆಗಿನ ಐಪಿಎಲ್‌ ಋತುಗಳಲ್ಲಿ ಕನಿಷ್ಠ ಒಂದು ಪಂದ್ಯವಾಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಮೊದಲಿಗರು.

SRH vs KKR: ಚಿರತೆ ವೇಗ, ರೋವ್ಮನ್ ಪೊವೆಲ್ ಒನ್‌ ಹ್ಯಾಂಡೆಡ್‌ ಕ್ಯಾಚ್‌ಗೆ ನೆಟ್ಟಿಗರು ಫಿದಾ

ಚಿರತೆ ವೇಗ, ಪೊವೆಲ್ ಒನ್‌ ಹ್ಯಾಂಡೆಡ್‌ ಕ್ಯಾಚ್‌ಗೆ ನೆಟ್ಟಿಗರು ಫಿದಾ

IPL 2026: ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್‌ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಅವರ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಬ್ಯಾಟರ್‌ಗಳು ವಿಫಲರಾದರು. ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ 44 ರನ್‌ಗಳ ಜೊತೆಯಾಟದೊಂದಿಗೆ ಆತಿಥೇಯರಿಗೆ ತ್ವರಿತ ಆರಂಭ ನೀಡಿದರೂ ಆ ಬಳಿಕಕ ತಂಡ ಹಠಾತ್‌ ಕುಸಿತ ಕಂಡು 165 ರನ್‌ಗೆ ಸರ್ವಪತನ ಕಂಡಿತು.

SRH vs KKR: ಎಲ್ಲ ಆವೃತ್ತಿಯ ಐಪಿಎಲ್‌ ಪಂದ್ಯವಾಡಿ ಕೊಹ್ಲಿ, ರೋಹಿತ್‌ ಜತೆ ಎಲೈಟ್‌ ಪಟ್ಟಿ ಸೇರಿದ ಮನೀಷ್ ಪಾಂಡೆ

ಎಲ್ಲ ಆವೃತ್ತಿಯ ಐಪಿಎಲ್‌ ಪಂದ್ಯವಾಡಿ ದಾಖಲೆ ಬರೆದ ಮನೀಷ್ ಪಾಂಡೆ

IPL 2026: 36 ವರ್ಷದ ಮನೀಷ್‌ ಪಾಂಡೆ ಅವರನ್ನು ಕಳೆದ ಹರಾಜಿನಲ್ಲಿ 75 ಲಕ್ಷ ರೂ.ಗೆ ಖರೀದಿಸಲಾಯಿತು. ತಂಡದ ಕಳಪೆ ಪ್ರದರ್ಶನದ ನಡುವೆಯೂ ಅಭಿಯಾನದ ಆರಂಭಿಕ ಭಾಗವನ್ನು ಬೆಂಚ್‌ನಲ್ಲಿ ಕಳೆದ ಪಾಂಡೆ ಒಂಬತ್ತನೇ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. 44 ವರ್ಷದ ಎಂಎಸ್ ಧೋನಿ ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದರೆ ಎಲ್ಲ ಆವೃತ್ತಿಯಲ್ಲಿಯೂ ಪಂದ್ಯವನ್ನಾಡಿದ ಪಟ್ಟಿಗೆ ಸೇರುತ್ತಾರೆ.

ರಾಜಸ್ಥಾನ್ ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಲಕ್ಷ್ಮಿ ಮಿತ್ತಲ್ ಘೋಷಣೆ

ರಾಜಸ್ಥಾನ್ ತಂಡ ಸ್ವಾಧೀನಪಡಿಸಿಕೊಳ್ಳುವುದಾಗಿ ಲಕ್ಷ್ಮಿ ಮಿತ್ತಲ್ ಘೋಷಣೆ

Rajasthan Royals: ಒಪ್ಪಂದದ ಪ್ರಕಾರ, ಮಿತ್ತಲ್ ಕುಟುಂಬವು ನಿಯಂತ್ರಣ ಹೊಂದಿರುವ ಪ್ರಮುಖ ಮಾಲೀಕರಾಗಿರುತ್ತದೆ. ಅವರು ಫ್ರ್ಯಾಂಚೈಸ್‌ನಲ್ಲಿ ಸರಿಸುಮಾರು ಶೇಕಡಾ 75 ರಷ್ಟು ಪಾಲನ್ನು ಹೊಂದಿರುತ್ತಾರೆ ಮತ್ತು ಅದರ್ ಪೂನವಲ್ಲಾ ಶೇಕಡಾ 18 ರಷ್ಟು ಪಾಲನ್ನು ಹೊಂದಿರುತ್ತಾರೆ. ಉಳಿದ 7% ಪಾಲನ್ನು ಅಸ್ತಿತ್ವದಲ್ಲಿರುವ ಹೂಡಿಕೆದಾರರು ಹೊಂದಿರುತ್ತಾರೆ. ಇದರಲ್ಲಿ ಮನೋಜ್ ಬಡಾಳೆ ಕೂಡ ಸೇರಿದ್ದಾರೆ.

MI vs LSG: ಒಂದೇ ದೋಣಿಯ ಪಯಣಿಗರ ಮಧ್ಯೆ ಕಾದಾಟ; ಯಾರಿಗೆ ಒಲಿಯಲಿದೆ ಗೆಲುವಿನ ಅದೃಷ್ಟ?

ಸೋತವರ ಮಧ್ಯೆ ಗೆಲುವಿಗಾಗಿ ಹೋರಾಟ; ನಾಳೆ ಮುಂಬೈ-ಲಖನೌ​ ಸೆಣಸಾಟ

IPL 2026: ಒಂದು ಕಾಲದಲ್ಲಿ ವಾಂಖಡೆ ಮೈದಾನದಲ್ಲಿ ಮುಂಬೈ ತಂಡವನ್ನು ಸೋಲಿಸುವುದೆಂದರೆ ಕಬ್ಬಿಣದ ಕಡೆಲೆಯಷ್ಟು ಕಷ್ಟವಾಗಿತ್ತು. ಆದರೆ ಈ ಆವೃತ್ತಿಯಲ್ಲಿ ತವರಿನಲ್ಲೇ ಮುಂಬೈ ಅತ್ಯಧಿಕ ಸೋಲು ಕಂಡಿದೆ. ಬ್ಯಾಟಿಂಗ್‌, ಬೌಲಿಂಗ್‌ ಸೇರಿ ಎಲ್ಲ ವಿಭಾಗದಲ್ಲಿಯೂ ಕಳಪೆ ಪ್ರದರ್ಶನ.

ಸತತ ಪಂದ್ಯಗಳ ಬಳಿಕ ಮಾಲ್ಡೀವ್ಸ್‌ನಲ್ಲಿ ಆರ್‌ಸಿಬಿ ಮೋಜು ಮಸ್ತಿ

ಸತತ ಪಂದ್ಯಗಳ ಬಳಿಕ ಮಾಲ್ಡೀವ್ಸ್‌ನಲ್ಲಿ ಆರ್‌ಸಿಬಿ ಮೋಜು ಮಸ್ತಿ

RCB players Maldives vacation: ಆರ್‌ಸಿಬಿ ತನ್ನ ಎಲ್ಲಾ ಪಂದ್ಯಗಳನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಗಾಗಲೇ ಪೂರ್ಣಗೊಳಿಸಿದೆ. ಉಳಿದ ಎರಡೂ ಪಂದ್ಯಗಳನ್ನು ಮೇ 10 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಮತ್ತು ಮೇ 13 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, ಎರಡನೇ ತವರಾದ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ.

ಮತ್ತೆ ನಾಯಕನಾಗಿ ಬಾಬರ್ ಅಜಮ್?; ಹೊಸ ನಿರೀಕ್ಷೆಗಳ ಬಗ್ಗೆ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್‌ ತಾರೆ

ಪಾಕ್‌ ತಂಡಕ್ಕೆ ಮೂರನೇ ಬಾರಿ ನಾಯಕನಾಗಲಿದ್ದಾರೆ ಬಾಬರ್‌ ಅಜಂ?

Babar Azam: ಭಾರತದ ನೆಲದಲ್ಲಿ ನಡೆದ ODI ವಿಶ್ವಕಪ್ ಸೆಮಿಫೈನಲ್‌ಗೆ ಪಾಕಿಸ್ತಾನ ಮುನ್ನಡೆಯಲು ವಿಫಲವಾದ ನಂತರ ಬಾಬರ್ ಎಲ್ಲಾ ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದರು. ಆದರೆ 2024ರ ಟಿ20 ವೇಳೆ ಅವರಿಗೆ ಮತ್ತೆ ನಾಯತ್ವ ನೀಡಲಾಗಿತು. ಆದರೆ ತಂಡ ವಿಶ್ವಕಪ್‌ನ ಗುಂಪು ಹಂತವನ್ನು ಮೀರಿ ಮುನ್ನಡೆಯಲು ಸಾಧ್ಯವಾಗದ ಕಾರಣ ಮತ್ತೆ ನಾಯಕತ್ವವನ್ನು ತ್ಯಜಿಸಿದ್ದರು.

MI vs CSK: 'ಇದು ನಮ್ಮ ಸೀಸನ್ ಅಲ್ಲ'; ಸೋಲಿನ ಬಳಿಕ ಹತಾಶರಾದ ಹಾರ್ದಿಕ್‌ ಪಾಂಡ್ಯ

'ಇದು ನಮ್ಮ ಸೀಸನ್ ಅಲ್ಲ'; ಸೋಲಿನ ಬಳಿಕ ಹತಾಶರಾದ ಹಾರ್ದಿಕ್‌ ಪಾಂಡ್ಯ

IPL 2026: 7ನೇ ಸೋಲಿನೊಂದಿಗೆ ಮುಂಬೈ 9ನೇ ಸ್ಥಾನದಲ್ಲೇ ಉಳಿದರೆ, 4ನೇ ಗೆಲುವು ಸಾಧಿಸಿದ ಚೆನ್ನೈ, ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈ 20 ಓವರಲ್ಲಿ 7 ವಿಕೆಟ್‌ಗೆ 159 ರನ್‌ ಗಳಿಸಿತು. ಸುಲಭ ಗುರಿ ಬೆನ್ನತ್ತಿದ ಚೆನ್ನೈ, 18.1 ಓವರ್‌ಗಳಲ್ಲಿ 2 ವಿಕೆಟ್‌ಗೆ 160 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

21 ವರ್ಷಗಳ ಬಳಿಕ ಧೋನಿಯ ಗನ್ ಪಾಯಿಂಟ್ ಸಂಭ್ರಮಾಚರಣೆ ನೆನಪಿಸಿದ ಕಾರ್ತಿಕ್ ಶರ್ಮಾ

ಕಾರ್ತಿಕ್ ಶರ್ಮಾ ಗನ್ ಪಾಯಿಂಟ್ ಸಂಭ್ರಮಾಚರಣೆಯ ವಿಡಿಯೊ ವೈರಲ್

IPL 2026: 2005 ರಲ್ಲಿ, ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 183 ರನ್ ಗಳಿಸುವ ಮೂಲಕ ಧೋನಿ ಶ್ರೇಷ್ಠ ಏಕದಿನ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ನಿರ್ಮಿಸಿದರು. ಆ ಸಮಯದಲ್ಲಿ, ಧೋನಿ ಅದೇ ಗನ್ ಪಾಯಿಂಟ್ ಭಂಗಿಯಲ್ಲಿ ತಮ್ಮ ಶತಕವನ್ನು ಆಚರಿಸಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ಕ್ಷಣವಾಗಿದೆ.

IPL 2026: ಏಳು ಪಂದ್ಯ ಸೋತ ಮುಂಬೈ ಇಂಡಿಯನ್ಸ್‌ಗೆ ಇನ್ನೂ ಇದೆ ಪ್ಲೇ-ಆಫ್‌ ಅವಕಾಶ

7 ಪಂದ್ಯ ಸೋತ ಮುಂಬೈ ಇಂಡಿಯನ್ಸ್‌ಗೆ ಇನ್ನೂ ಇದೆ ಪ್ಲೇ-ಆಫ್‌ ಅವಕಾಶ

MI IPL 2026 playoff qualification scenarios: ಮುಂಬೈ ಇನ್ನು ಮೇ 4, ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮುಂಬೈ ಇಂಡಿಯನ್ಸ್ ಆ ಪಂದ್ಯದಲ್ಲಿ ಸೋತರೆ, ಐಪಿಎಲ್ 2026 ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದ ಮೊದಲ ತಂಡ ಎನಿಸಿಕೊಳ್ಳಲಿದೆ.

"ನಿರಾಶೆಗೊಂಡಿದ್ದಕ್ಕೆ ಕ್ಷಮಿಸಿ"; ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಯ ಅವಮಾನಕರ ಪೋಸ್ಟ್‌ಗೆ ಪಾರ್ಥಿವ್ ಪಟೇಲ್ ತಿರುಗೇಟು

ಅಭಿಮಾನಿಯ ಅವಮಾನಕರ ಪೋಸ್ಟ್‌ಗೆ ಪಾರ್ಥಿವ್ ಪಟೇಲ್ ತಿರುಗೇಟು

Parthiv Patel: ಪಾರ್ಥಿವ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಈಗ ಸ್ಥಗಿತಗೊಂಡಿರುವ ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಡೆಕ್ಕನ್ ಚಾರ್ಜರ್ಸ್ ಸೇರಿದಂತೆ ಹಲವಾರು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ.

IPL 2026: ಬಲಿಷ್ಠ ಬ್ಯಾಟಿಂಗ್‌ ಪಡೆ ಸನ್‌ರೈಸರ್ಸ್‌ಗೆ ಸವಾವೊಡ್ಡೀತೇ ಕೆಕೆಆರ್‌?

ಸನ್‌ರೈಸರ್ಸ್‌ vs ಕೆಕೆಆರ್‌ ಪಂದ್ಯದ ಪ್ಲೇಯಿಂಗ್‌ 11, ಪಿಚ್‌ ರಿಪೋರ್ಟ್‌

Sunrisers Hyderabad vs Kolkata Knight Riders: ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣವು ಇತ್ತೀಚಿನ ಋತುಗಳಲ್ಲಿ ಹೆಚ್ಚು ಸಮತೋಲಿತ ಸ್ಥಳವಾಗಿ ವಿಕಸನಗೊಂಡಿದೆ, ಮೊದಲು ಬ್ಯಾಟಿಂಗ್ ಮಾಡುವ ತಂಡಗಳಿಗೆ ಹೆಚ್ಚಿನ ಆದ್ಯತೆ ನೀಡುವ ಹಿಂದಿನ ಖ್ಯಾತಿಯಿಂದ ದೂರ ಸರಿದಿದೆ. ಮೈದಾನವು ಈಗ ವಿಶೇಷವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಬೌನ್ಸ್ ಮತ್ತು ಉತ್ತಮ ಕ್ಯಾರಿ ನೀಡುತ್ತದೆ.

ಅತಿರೇಕದ ಸಂಭ್ರಮಾಚರಣೆ; ಕೈಲ್ ಜೇಮಿಸನ್‌ಗೆ ಡಿಮೆರಿಟ್ ಪಾಯಿಂಟ್

ಅತಿರೇಕದ ಸಂಭ್ರಮಾಚರಣೆ; ಕೈಲ್ ಜೇಮಿಸನ್‌ಗೆ ಒಂದು ಡಿಮೆರಿಟ್ ಪಾಯಿಂಟ್

IPL 2026: ವೈಭವ್ ಸೂರ್ಯವಂಶಿ ಮತ್ತು ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ನಡುವಿನ ನಿರೀಕ್ಷಿತ ಮುಖಾಮುಖಿಯಿಂದಾಗಿ ಈ ಪಂದ್ಯವು ಗಮನಾರ್ಹ ಸಂಚಲನ ಮೂಡಿಸಿತ್ತು. ಆದರೆ, ಜೇಮಿಸನ್ ಕೇವಲ ಎರಡನೇ ಓವರ್‌ನಲ್ಲಿ ಹದಿಹರೆಯದ ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡುವ ಮೂಲಕ ಗಮನ ಸೆಳೆದರು.

CSK vs MI: ಇಂದಿನ ಪಂದ್ಯದಲ್ಲಿ ಆಡಲಿದ್ದಾರಾ ಧೋನಿ-ರೋಹಿತ್‌?; ಬಿಗ್‌ ಅಪ್‌ಡೇಟ್‌ ಕೊಟ್ಟ ಕೋಚ್‌

ಇಂದಿನ ಪಂದ್ಯಕ್ಕೆ ಧೋನಿ-ರೋಹಿತ್‌ ಲಭ್ಯ?; ಅಪ್‌ಡೇಟ್‌ ಕೊಟ್ಟ ಕೋಚ್‌

IPL 2026: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ, ಮಾಜಿ ನಾಯಕ ಎಂಎಸ್ ಧೋನಿ ಗಾಯದಿಂದ ಚೇತರಿಸಿಕೊಳ್ಳುತ್ತಿರುವುದು ಉತ್ತಮವಾಗಿದ್ದು, ಶೀಘ್ರದಲ್ಲೇ ಅವರು ಮತ್ತೆ ತಂಡಕ್ಕೆ ಮರಳಲಿದ್ದಾರೆ ಎಂದು ಹೇಳಿದ್ದು, 2026 ರ ಐಪಿಎಲ್‌ನಲ್ಲಿ ಅವರು ಆಡಲು ಇಡೀ ಚೆನ್ನೈ ತಂಡ ಕಾಯುತ್ತಿದೆ ಎಂದು ಹೇಳಿದರು.

ಬ್ಯಾಟ್‌ನಲ್ಲಿ ಹೊಡೆಯಲು ಬಂದ ಜಡೇಜಾರನ್ನು ತಳ್ಳಿದ ಕುಲ್‌ದೀಪ್‌; ವಿಡಿಯೊ ವೈರಲ್‌

ಮೈದಾನದಲ್ಲೇ ಹೊಡೆದಾಡಿಕೊಂಡರೇ ಜಡೇಜಾ-ಕುಲ್‌ದೀಪ್‌?

Ravindra Jadeja-Kuldeep Yadav: ಡಿಸಿ ತಂಡವು ಐಪಿಎಲ್‌ನಲ್ಲಿ ತನ್ನ ಅತ್ಯುನ್ನತ ಯಶಸ್ವಿ ಚೇಸಿಂಗ್ ಅನ್ನು ಪೂರ್ಣಗೊಳಿಸುವ ಮೂಲಕ ಮೂರು ಪಂದ್ಯಗಳ ಸೋಲಿಗೆ ಅಂತ್ಯ ಹಾಡಿತು. ಜೈಪುರದಲ್ಲಿ ನಡೆದ ಪಂದ್ಯದಲ್ಲಿ 226 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡಿಸಿ ತಂಡವು, ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಮತ್ತು ಪಾಥುಮ್ ನಿಸ್ಸಂಕಾ ಅವರ ಅರ್ಧಶತಕಗಳ ನೆರವಿನಿಂದ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು.

ಗೆಲುವನ್ನು ರಸ್ತೆ ಅಪಘಾತದಲ್ಲಿ ಮಡಿದ ಅಭಿಮಾನಿಗಳಿಗೆ ಅರ್ಪಿಸಿದ ಅಕ್ಷರ್‌ ಪಟೇಲ್‌

ಗೆಲುವನ್ನು ರಸ್ತೆ ಅಪಘಾತದಲ್ಲಿ ಮಡಿದ ಅಭಿಮಾನಿಗಳಿಗೆ ಅರ್ಪಿಸಿದ ಅಕ್ಷರ್‌

IPL 2026: ಕಳೆದ ವಾರ ದೆಹಲಿಯಲ್ಲಿ ನಡೆದ ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ಮನೆಗೆ ಮರಳುತ್ತಿದ್ದ ಇಬ್ಬರು ಸೋದರಸಂಬಂಧಿಗಳಾದ ಯಜ್ಞ ಭಾಟಿಯಾ (20) ಮತ್ತು ಅಭವ್ ಭಾಟಿಯಾ (14) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇವರಿಬ್ಬರೂ ಬೈಕ್‌ ಸವಾರಿ ಮಾಡುತ್ತಿದ್ದಾಗ ಮಧ್ಯ ದೆಹಲಿಯ ಅಶೋಕ ರಸ್ತೆಯಲ್ಲಿ ಹಿಟ್ ಅಂಡ್ ರನ್ ಘಟನೆ ಸಂಭವಿಸಿತ್ತು.

RR vs DC: ಧೋನಿಯಂತೆ ಐದು ಟ್ರೋಫಿ ಗೆಲ್ಲಬೇಕು ಎಂದ ಕೆ.ಎಲ್‌ ರಾಹುಲ್

ನನ್ನ ಸ್ಟ್ರೈಕ್ ರೇಟ್ ಹಲವು ವರ್ಷಗಳಿಂದ ಚರ್ಚಾಸ್ಪದ ವಿಷಯ; ರಾಹುಲ್‌

IPL 2026: 'ಮಹಿ ಭಾಯ್ (ಧೋನಿ) ಅವರ ದಾಖಲೆಯನ್ನು ಮೀರಿದ್ದೆ ಎಂಬ ಅರಿವು ನನಗೆ ಇರಲಿಲ್ಲ. ವೈಯಕ್ತಿಕ ದಾಖಲೆಗಳನ್ನು ಸಾಧಿಸುವುದು ಒಂದು ರೀತಿಯಲ್ಲಿ ಒಳ್ಳೆಯದು. ಅವು ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುತ್ತವೆ. ಆದರೆ ಧೋನಿಯವರ ಐದು ಪ್ರಶಸ್ತಿ ಗೆಲುವಿನ ದಾಖಲೆಯನ್ನು ಸಮ ಮಾಡುವುದೇ ನನಗೆ ಹೆಚ್ಚು ಖುಷಿ ಕೊಡುತ್ತದೆ’ ಎಂದು ರಾಹುಲ್‌ ಹೇಳಿದರು.

RR vs DC: ಟೀಕಾಕಾರರಿಗೆ ಉತ್ತರಿಸುವ ಅಗತ್ಯವಿಲ್ಲ, ಪಂದ್ಯ ಸೋಲಿಗೆ ಬೌಲಿಂಗ್‌ ವೈಫಲ್ಯ ಕಾರಣ; ರಿಯಾನ್ ಪರಾಗ್

ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದ ರಾಜಸ್ಥಾನ್‌ ನಾಯಕ ಪರಾಗ್‌

IPL 2026: ತಮ್ಮ ವಿರುದ್ಧದ ಟೀಕೆಗಳಿಗೂ ತಕ್ಕ ತಿರುಗೇಟು ನೀಡಿದ ಪರಾಗ್‌, "ಯಾವುದೇ ಟೀಕಾಕಾರರಿಗೆ ಅಥವಾ ಅದರ ಬಗ್ಗೆ ಮಾತನಾಡುವ ಯಾರಿಗಾದರೂ ನಾನು ಉತ್ತರಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ದಿನದ ಕೊನೆಯಲ್ಲಿ, ನನ್ನ ಕೆಲಸ ಎರಡು ಅಂಕಗಳನ್ನು ಪಡೆಯುವುದು, ಮತ್ತು ನಾವು ಪಂದ್ಯವನ್ನು ಸೋತಿದ್ದರೂ ನನ್ನ ಇನ್ನಿಂಗ್ಸ್ ನಿಜವಾಗಿಯೂ ಅಪ್ರಸ್ತುತವಾಗುತ್ತದೆ" ಎಂದು ಪರಾಗ್ ಹೇಳಿದರು.

ರಾಜಸ್ಥಾನ್‌ ಮಣಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಅಗ್ರಸ್ಥಾನ ಪಡೆದ ಕನ್ನಡಿಗ ಕೆ.ಎಲ್‌ ರಾಹುಲ್‌

IPL 2026 Points Table: ರಾಜಸ್ಥಾನ್‌ ವಿರುದ್ಧದ ಪಂದ್ಯದಲ್ಲಿ ಬೃಹತ್‌ ಮೊತ್ತದ ಚೇಸಿಂಗ್‌ ವೇಳೆ 40 ಎಸೆತಗಳಲ್ಲಿ 75 ರನ್ ಗಳಿಸಿದ ಕೆ.ಎಲ್ ರಾಹುಲ್ ತಮ್ಮ ಈ ಬ್ಯಾಟಿಂಗ್‌ ಪ್ರದರ್ಶನದಿಂದ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡರು. ಅವರು ಈಗ 433ರನ್‌ ಗಳಿಸಿದ್ದಾರೆ. ಅಭಿಷೇಕ್‌ ಶರ್ಮ(425) ಈ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

RR vs DC: ರಾಹುಲ್‌–ನಿಸ್ಸಾಂಕ ಅಬ್ಬರ: ರಾಜಸ್ಥಾನ್‌ ಎದುರು ಗೆದ್ದು ಬೀಗಿದ ಡೆಲ್ಲಿ

ರಾಹುಲ್‌–ನಿಸ್ಸಾಂಕ ಅಬ್ಬರ: ರಾಜಸ್ಥಾನ್‌ ಎದುರು ಗೆದ್ದು ಬೀಗಿದ ಡೆಲ್ಲಿ

IPL 2026: ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ಗೆ ಉತ್ತಮ ಆರಂಭ ಸಿಗದಿದ್ದರೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಯಾನ್‌ ಪರಾಗ್‌ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಜವಾಬ್ದಾರಿಯುತ ಬ್ಯಾಟಿಂಗ್‌ ಮೂಲಕ ತಂಡಕ್ಕೆ ನೆರವಾದರು. ಈ ಜೋಡಿ ಮೂರನೇ ವಿಕೆಟ್‌ಗೆ 102 ರನ್‌ಗಳ ಜತೆಯಾಟ ನಡೆಸಿತು. ಹಾಲಿ ಆವೃತ್ತಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಪರಾಗ್‌ ಅರ್ಧಶತಕ ಬಾರಿಸಿ ಬ್ಯಾಟಿಂಗ್‌ ಫಾರ್ಮ್‌ ಕಂಡುಕೊಂಡರು.

ಸೂರ್ಯವಂಶಿಯನ್ನು ಕ್ಲೀನ್‌ ಬೌಲ್ಡ್‌ ಮಾಡಿ ಘರ್ಜಿಸಿದ ಜೇಮಿಸನ್; ವಿಡಿಯೊ ವೈರಲ್‌

ಸೂರ್ಯವಂಶಿಯನ್ನು ಕ್ಲೀನ್‌ ಬೌಲ್ಡ್‌ ಮಾಡಿ ಘರ್ಜಿಸಿದ ಜೇಮಿಸನ್

IPL 2026: ಸೂರ್ಯವಂಶಿ ಕೇವಲ 4 ರನ್‌ಗೆ ಆಟ ಮುಗಿಸಿದರು. ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್‌ ಅವರು ಈ ಋತುವಿನ ಮೊದಲ ಪಂದ್ಯವಾಡಿದ ಮಿಚೆಲ್‌ ಸ್ಟಾರ್ಕ್‌ಗೆ ಸಿಕ್ಸರ್‌ ಬಾರಿಸುವ ಮೂಲಕ ವೆಲ್‌ಕಮ್‌ ಮಾಡಿದರೂ ಅವರ ಆಟ ಹೆಚ್ಚು ಹೊತ್ತು ಸಾಗಲಿಲ್ಲ. ಇದೇ ಓವರ್‌ನ ಮೂರನೇ ಎಸೆತದಲ್ಲಿ ವಿಕೆಟ್‌ ಕಳೆದುಕೊಂಡರು. ಅವರ ಆಟ ಏಕೈಕ ಸಿಕ್ಸರ್‌ಗಷ್ಟೇ ಸೀಮಿತವಾಯಿತು.

ಟಾಸ್‌ ಗೆದ್ದ ರಾಜಸ್ಥಾನ್‌; ಡೆಲ್ಲಿ ಪರ ಮೂರು ಬದಲಾವಣೆ

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ರಾಜಸ್ಥಾನ್‌ ರಾಯಲ್ಸ್‌

RR vs DC Live Score: ಭುಜದ ಗಾಯದಿಂದ ಚೇತರಿಸಿಕೊಂಡಿರುವ ಮಿಚೆಲ್‌ ಸ್ಟಾರ್ಕ್‌ ಹಾಲಿ ಆವೃತ್ತಿಯಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಸ್ಟಾರ್ಕ್‌ ಅವರು ರಾಜಸ್ಥಾನ್‌ ವಿರುದ್ಧ ಆಡುವ ಬಗ್ಗೆ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ನಲ್ಲಿ ಒಂದು ದಿನ ಮೊದಲೇ ವಿಡಿಯೊ ಹಂಚಿಕೊಳ್ಳುವ ಮೂಲಕ ಸುಳಿವು ನೀಡಿತ್ತು. ಡೆಲ್ಲಿ ಈ ಪಂದ್ಯಕ್ಕೆ ಡೇವಿಡ್‌ ಮಿಲ್ಲರ್‌ ಅವರನ್ನು ಕೈಬಿಟ್ಟಿತು.

ಶಿವಂ ಮಾವಿ ಬದಲಿಗೆ ಸನ್‌ರೈಸರ್ಸ್‌ ಸೇರಿದ 19 ವರ್ಷದ ಯುವ ವೇಗಿ ಅಂಬ್ರೀಶ್

ಮಾವಿ ಬದಲಿಗೆ ಸನ್‌ರೈಸರ್ಸ್‌ ಸೇರಿದ 19 ವರ್ಷದ ಯುವ ವೇಗಿ ಅಂಬ್ರೀಶ್

IPL 2026: ತಮಿಳುನಾಡಿನ ಪ್ರತಿಭಾನ್ವಿತ ಯುವ ಆಲ್‌ರೌಂಡರ್ ಆಗಿರುವ ಅಂಬ್ರೀಶ್, ಆಯುಷ್ ಮ್ಹಾತ್ರೆ ನಾಯಕತ್ವದ 2026 ರ ಐಸಿಸಿ ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರು. ಅವರು 11 ವಿಕೆಟ್‌ಗಳೊಂದಿಗೆ ಟೂರ್ನಮೆಂಟ್‌ನಲ್ಲಿ ಭಾರತದ 19 ವರ್ಷದೊಳಗಿನವರ ತಂಡದಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.

Loading...