ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೀಡಿಯೋಸ್

2028ಕ್ಕೆ ನಮ್ಮ ಬುಲ್ಡೋಜರ್‌ ಸರ್ಕಾರ ಅಧಿಕಾರಕ್ಕೆ ಬರುತ್ತದೆ: ಬಸನಗೌಡ ಪಾಟೀಲ ಯತ್ನಾಳ Video

2028ಕ್ಕೆ ನಮ್ಮ ಬುಲ್ಡೋಜರ್‌ ಸರ್ಕಾರ: ಬಸನಗೌಡ ಪಾಟೀಲ ಯತ್ನಾಳ

Bagalkot Bypoll 2026: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರ ಕ್ಷೇತ್ರದ ಕಮತಗಿ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮುಸ್ಲಿಂ ಸಮುದಾಯ ಹಾಗೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದರು. ಆಜಾನ್ ಕೂಗೋರಿಗೆ 6 ಸಾವಿರ ರುಪಾಯಿ, ವಿದೇಶಗಳಲ್ಲಿ ಹೆಚ್ಚಿನ ವ್ಯಾಸಂಗ ಮಾಡಲು ಇಚ್ಚಿಸುವ ಮುಸ್ಲಿಂ ಸಮುದಾಯದ ಮಕ್ಕಳಿಗೆ ಮಕ್ಕಳಿಗೆ 30 ಲಕ್ಷ ರೂಪಾಯಿ ಶಿಷ್ಯವೇತನ, ಮುಸ್ಲಿಂ ಓಣಿಗಳಲ್ಲಿ ಒಂದೊಂದು ಸರ್ಕಾರಿ ಐಟಿಐ ಕಾಲೇಜು, ಮುಸ್ಲಿಂ ಯುವಕರಿಗೆ ಸ್ಟಾರ್ಟ್‌ ಅಪ್‌ಗೆ 3 ಲಕ್ಷ ರೂಪಾಯಿಯನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಆರೋಪಿಸಿದರಲ್ಲದೇ, ಹಿಂದುಳಿದ, ದಲಿತ ಸಮುದಾಯದವರಿಗೆ ಈ ಯೋಜನೆ ಇದೆಯಾ ಎಂದು ಅವರು ಪ್ರಶ್ನಿಸಿದ್ದಾರೆ.

ಮದುವೆ ವಿಚಾರದಲ್ಲಿ ವೃಷಭ ರಾಶಿಯವರಿಗೆ ಚಂದ್ರ ಗ್ರಹದಿಂದ ಸಮಸ್ಯೆ Video

ವೃಷಭ ರಾಶಿಗೆ ಚಂದ್ರ ಗ್ರಹದ ಪರಿಣಾಮವೇನು?

ದ್ವಾದಶಿ ರಾಶಿಗಳಲ್ಲಿ ಚಂದ್ರನ ಸಂಚಾರವು ಕೆಲವು ರಾಶಿಗಳಿಗೆ ಅದೃಷ್ಟವನ್ನು ತಂದರೆ, ಇನ್ನು ಕೆಲವರಿಗೆ ಅನಿರೀಕ್ಷಿತ ಬದಲಾವಣೆ ತರಬಹುದು. ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹ ಯಾವ ರೀತಿ ಪರಿಣಾಮ ಬೀರಬಹುದು? ಅದರಲ್ಲೂ ವೃಷಭ ರಾಶಿಗೆ ಏನು ಬದಲಾವಣೆ ಆಗಬಹುದು? ಎಂದು ಜ್ಯೋತಿಷ್ಯ ವಿಜ್ಞಾನಿ ಸಂಶೋಧಕ ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

ಮೇಷ ರಾಶಿ ಮೇಲೆ ಚಂದ್ರ ಗ್ರಹದ ಒಳಿತು ಕೆಡುಕಿನ ಪರಿಣಾಮ ಏನು? Video

ಮೇಷ ರಾಶಿ ಮೇಲೆ ಚಂದ್ರ ಗ್ರಹದ ಪ್ರಭಾವ ಹೇಗಿರುತ್ತದೆ?

ಬದುಕಿನಲ್ಲಿ ಸುಖವನ್ನು ಕರುಣಿಸುವ ಚಂದ್ರನು ದ್ವಾದಶ ರಾಶಿಯಲ್ಲಿ ಅದರಲ್ಲೂ ಮುಖ್ಯವಾಗಿ ಮೇಷ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಾನೆ, ಯಾವ ಸಂದರ್ಭದಲ್ಲಿ ಕಷ್ಟ, ಯಾವ ಸಂದರ್ಭದಲ್ಲಿ ದುಃಖವನ್ನು ಕರುಣಿಸುತ್ತಾನೆ ಎಂಬುದರ ಕುರಿತು ವಿಶ್ವವಾಣಿ ಟಿವಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ ಭಾರತೀಯ ಜ್ಯೋತಿಷ್ಯ ವಿಜ್ಞಾನ ಸಂಶೋಧಕರಾದ ಮಹಾಬಲ ಮೂರ್ತಿ ಕೊಡ್ಲೆಕೆರೆ.

ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ: ಜನಸಂಘದ ಇತಿಹಾಸ ಬಿಚ್ಚಿಟ್ಟ ಮಾಜಿ ಸಿಎಂ Video

ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ

Basavaraj Bommai slams Congress: ಬಿಜೆಪಿ ಮತ್ತು ಜನಸಂಘದ ಇತಿಹಾಸದ ಬಗ್ಗೆ ಮಾತನಾಡುತ್ತಾ, ಕಾಂಗ್ರೆಸ್ (Congress) ಪಕ್ಷದ ವಿರುದ್ಧ ಬಸವರಾಜ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟಿತು. ಭಾರತೀಯರನ್ನು ಗುಲಾಮಗಿರಿಯಲ್ಲಿಡಲು ಮತ್ತು ಬ್ರಿಟಿಷರ ಹಿತಾಸಕ್ತಿ ಕಾಪಾಡಲು ಈ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಅಸ್ಸಾಂ ಚುನಾವಣೆ: ಕೊನೆಯ ಹಂತದ ಪ್ರಚಾರದ ಅಬ್ಬರ; ಅಭಿವೃದ್ಧಿಗಾಗಿ ಎನ್‌ಡಿಎ ಬೆಂಬಲಿಸುವಂತೆ ಮೋದಿ ಮನವಿ Video

ಅಸ್ಸಾಂ ಚುನಾವಣೆ: ಕೊನೆಯ ಹಂತದ ಪ್ರಚಾರದಲ್ಲಿ ಗುಡುಗಿದ ಮೋದಿ

ಅಸ್ಸಾಂನಲ್ಲಿ ಚುನಾವಣಾ ಕಾವು ಜೋರಾಗಿದೆ. ಮತದಾನಕ್ಕೆ ಇನ್ನು ಕೇವಲ 2 ದಿನ ಉಳಿದಿದೆ. ಕೊನೆಯ ಹಂತದ ಪ್ರಚಾರದಲ್ಲಿ ವಿವಿಧ ಪಕ್ಷಗಳು ತೊಡಗಿಸಿಕೊಂಡಿವೆ. 126 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್‌ 9ರಂದು ಮತದಾನ ನಡೆಯಲಿದೆ. ಈ ಬಾರಿಯೂ ಬಿಜೆಪಿ ಮೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾರೆ.

Jagappa: ಗಿಲ್ಲಿ ನಟ ನೋಡಿ ನಾನೇನು ಉರ್ಕೊಂಡಿಲ್ಲ; 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಜಗ್ಗಪ್ಪ Video

Jagappa: ಅನುಶ್ರೀ ಸಂದರ್ಶನ ಬಗ್ಗೆ ಕ್ಲಾರಿಟಿ ಕೊಟ್ಟ ಜಗ್ಗಪ್ಪ!

Gilli Nata: ಗಿಲ್ಲಿ ಹಳೆಯ ವಿಡಿಯೋ ಒಂದು ವೈರಲ್ ಆಗಿತ್ತು. ಆಂಕರ್ ಅನುಶ್ರೀ, ಹಾಸ್ಯ ಕಲಾವಿದರ ಜೊತೆ ಮಾತನಾಡ್ತಿದ್ದ ವಿಡಿಯೋ ಅದು. ಆಗ ಜಗಪ್ಪ ಸೇರಿದಂತೆ ಅನೇಕರು ಗಿಲ್ಲಿ ವಿಚಾರಕ್ಕೆ ಟ್ರೋಲ್‌ ಆಗಿದ್ದರು. ಈ ಬಗ್ಗೆ ಜಗ್ಗಪ್ಪ ಮಾತನಾಡಿದ್ದಾರೆ. ನಮ್ಮಲ್ಲಿ ಯಾವುದೇ ಮನಸ್ತಾಪಗಳಿಲ್ಲ. ಗಿಲ್ಲಿ ಅವರ ಜೊತೆ ಹಲವಾರ ಶೋಗಳನ್ನು ಮಾಡಿದ್ದೇನೆ. ಎಲ್ಲರೂ ಒಟ್ಟಿಗೆ ಜೀವನವನ್ನು ಕಟ್ಟಿಕೊಳ್ಳಲು ಬಂದವರು. ನಮ್ಮನ್ನು ಟ್ರೋಲ್‌ ಮಾಡಿದರೆ ಏನು ಸಿಗುತ್ತೆ ಗೊತ್ತಿಲ್ಲ. ಯಾರೂ ಯಾರನ್ನೂ ತುಳಿದು ಬದಕುಲು ಆಗಲ್ಲ ಎಂದಿದ್ದಾರೆ.

ʼʼಪಂಚ ಗ್ಯಾರಂಟಿಗೆ ಜನ ಮೆಚ್ಚುಗೆʼʼ; ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದೇ ಗೆಲ್ಲುತ್ತೆ ಎಂದ ಅನ್ನಪೂರ್ಣ ತುಕಾರಾಮ್ Video

ಪಂಚ ಗ್ಯಾರಂಟಿಗೆ ಜನ ಮೆಚ್ಚುಗೆ:ಅನ್ನಪೂರ್ಣ ತುಕಾರಾಮ್

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಇದರಿಂದಾಗಿ ದಾವಣಗೆರೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತ ಎಂದು ವಿಶ್ವವಾಣಿ ಜೊತೆ ಮಾತನಾಡಿದ ಶಾಸಕಿ ಅನ್ನಪೂರ್ಣ ತುಕಾರಾಮ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Karantara Suliyalli Book: ʼಕಾರಂತರ ಸುಳಿಯಲ್ಲಿʼ ಪುಸ್ತಕ ಬಿಡುಗಡೆ; ಶಿವರಾಮ ಕಾರಂತರ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಮಕ್ಕಳು!

ಶಿವರಾಮ ಕಾರಂತರ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಮಕ್ಕಳು!

ಶಿವರಾಮ ಕಾರಂತರ ಮೂವರು ಮಕ್ಕಳಾದ ಕೆ.ಉಲ್ಲಾಸ ಕಾರಂತ, ಮಾಲವಿಕಾ ಕಪೂರ ಮತ್ತು ಕ್ಷಮಾ ರಾವ್ ಬರೆದ Growing Up Karanth ಕೃತಿಯನ್ನು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ʼಕಾರಂತರ ಸುಳಿಯಲ್ಲಿʼ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಭಾನುವಾರ ನೆರವೇರಿತು.

Keralam Assembly Elections 2026: ʼʼಕೇರಳಂ ಮತದಾರರು ಬದಲಾವಣೆ ಬಯಸಿದ್ದಾರೆʼʼ: ಕಣ್ಣೂರಿನಲ್ಲಿ ಡಿ.ಕೆ. ಶಿವಕುಮಾರ್‌ ಅಬ್ಬರದ ಪ್ರಚಾರ Video

ಕೇರಳಂನಲ್ಲಿ ಡಿಕೆಶಿ ಅಬ್ಬರದ ಪ್ರಚಾರ

ಕೇರಳಂ ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ. ಏಪ್ರಿಲ್‌ 9ರಂದು ನಡೆಯುವ ಒಂದೇ ಹಂತದ ಮತದಾನ ನಡೆಯಲಿದ್ದು, ರಾಜ್ಯಾದ್ಯಂತ ಚುನಾವಣಾ ಕಾವು ಜೋರಾಗಿದೆ. ಸತತ 2 ಅಧಿಕಾರದಲ್ಲಿರುವ ಎಲ್‌ಡಿಎಫ್‌ ಒಕ್ಕೂಟವನ್ನೂ ಮಣಿಸಲೇಬೇಕೆಂದು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಪಣ ತೊಟ್ಟಿದ್ದರೆ, ಪ್ರಭಾವ ಬೀರಲು ಎನ್‌ಡಿಎ ಸಜ್ಜಾಗಿದೆ. ವಿಶೇಷ ಎಂದರೆ ಯುಡಿಎಫ್‌ ಪರವಾಗಿ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೇರಳದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಮತದಾರರನ್ನು ಭೇಟಿಯಾಗಿ ಮನವೊಲಿಸಲು ಮುಂದಾಗಿದ್ದು, ಭರ್ಜರಿ ರೋಡ್‌ ಶೋ ನಡೆಸುತ್ತಿದ್ದಾರೆ.

ಜನಗಣತಿ ಆರಂಭ: ಆನ್‌ಲೈನ್‌ನಲ್ಲಿ ವಿವರಗಳನ್ನು ನೀವೇ ತುಂಬಲು ಇಲ್ಲಿದೆ ಗೈಡ್‌ಲೈನ್‌ Video

ಡಿಜಿಟಲ್‌ ಜನಗಣತಿ, ಮೊಬೈಲ್‌ನಲ್ಲೇ ಮಾಡುವುದು ಹೇಗೆ?

ದೇಶದ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪ್ರಕ್ರಿಯೆ ಎನಿಸಿಕೊಂಡಿರುವ ಜನಗಣತಿಯ ಮೊದಲ ಹಂತ ಆರಂಭವಾಗಿದೆ. ಹೌದು, ಏಪ್ರಿಲ್‌ 1ರಂದು ಕರ್ನಾಟಕವೂ ಸೇರಿ 8 ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಆರಂಭವಾದ ಜನಗಣತಿ ಡಿಜಿಟಲ್‌ ವಿಧಾನದಲ್ಲಿ ನಡೆಯುತ್ತಿದೆ. ಜತೆಗೆ ಸ್ವಯಂ ಗಣತಿಗೂ ಅವಕಾಶ ನೀಡಲಾಗಿದೆ. ಅಂದರೆ ನಿಮ್ಮ ವಿವರವನ್ನು ನೀವೇ ಸರ್ಕಾರಕ್ಕೆ ನೀಡಬಹುದು. ಅದು ಹೇಗೆ? ಏನಿದು ಡಿಜಿಟಲ್‌ ಜನಗಣತಿ? ಇದರಿಂದ ಏನೆಲ್ಲ ಅನುಕೂಲವಿದೆ? ಮುಂತಾದ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಸಂಗೀತ ಸಂಯೋಜಕ ರಮೇಶ್ ವಿನಾಯಕಂ ಜತೆ ಪ್ರಧಾನಿ ಚರ್ಚೆ; ʼವಂದೇ ಮಾತರಂʼ ನುಡಿಸಿ ಗಮನ ಸೆಳೆದ ಮೋದಿ Video

ಗಮಕ ಪೆಟ್ಟಿಗೆಯಲ್ಲಿ ʼವಂದೇ ಮಾತರಂʼ ನುಡಿಸಿದ ನರೇಂದ್ರ ಮೋದಿ

Vande Mataram on a gamaka box: ಚುನಾವಣಾ ಪ್ರಚಾರದ ಮಧ್ಯೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಖ್ಯಾತ ಸಂಯೋಜಕ ರಮೇಶ್ ವಿನಾಯಕಂ ಮತ್ತು ಅವರ ಕುಟುಂಬವನ್ನು ಭೇಟಿಯಾದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಟ್ಯಾಬ್ಲೆಟ್‌ನಲ್ಲಿ ವಂದೇ ಮಾತರಂ ನುಡಿಸಿದರು.

ರಾಷ್ಟ್ರಪತಿ ಬಂದಾಗ ಶಿಷ್ಟಾಚಾರ ಉಲ್ಲಂಘನೆ; ಗೊಂದಲಕ್ಕೆ ತೆರೆ ಎಳೆದ ಸಿದ್ದಗಂಗಾ ಶ್ರೀ! Video

ಶಿಷ್ಟಾಚಾರ ಉಲ್ಲಂಘನೆ ಗೊಂದಲಕ್ಕೆ ತೆರೆ ಎಳೆದ ಸಿದ್ದಗಂಗಾ ಶ್ರೀ!

ತುಮಕೂರಿನಲ್ಲಿ ನಡೆದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮವರ್ಧಂತಿ ಮಹೋತ್ಸವದ ವೇದಿಕೆಯಲ್ಲಿ ಸಿದ್ದಲಿಂಗ ಶ್ರೀಗಳಿಗೆ ಕೊನೆಯಲ್ಲಿ ಆಸನ ವ್ಯವಸ್ಥೆ ಮಾಡಿದ್ದ ಬಗ್ಗೆ ಭಕ್ತರಲ್ಲಿ ಅಸಮಾಧಾನ ಮೂಡಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಉಂಟಾಗಿದ್ದ ಶಿಷ್ಟಾಚಾರ ಗೊಂದಲದ ಬಗ್ಗೆ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

ಕಷ್ಟಗಳು ನಮಗೆ ಹೆಚ್ಚು ಕಾಡುತ್ತೆ ಎಂದು ಅನ್ನಿಸೋದ್ಯಾಕೆ? ಈ ಮನಸ್ಥಿತಿ ಬದಲಿಸೋದು ಹೇಗೆ? Video

ಕಷ್ಟದ ಸಂದರ್ಭವನ್ನು ಎದುರಿಸುವುದು ಹೇಗೆ?

ಸಾಕಷ್ಟು ಜನರು ಕಷ್ಟಗಳನ್ನು ಎದುರಿಸಿದ ನಂತರ ತಮ್ಮ ಜೀವನ ಕಷ್ಟದಿಂದಲೇ ಕೂಡಿದೆ ಎನ್ನುವ ಭಾವನೆ ಹೊಂದಿರುತ್ತಾರೆ. ಹೀಗಿರುವಾಗ ನಾವು ಹೇಗೆ ಮಾನಸಿಕ ಸ್ಥಿರತೆಯನ್ನು ಬದಲಿಸಿಕೊಳ್ಳಬೇಕು? ಎದುರಾದ ಸನ್ನಿವೇಶವನ್ನು ಹೇಗೆ ಧನಾತ್ಮಕವಾಗಿ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಮನೋ ಶಾಸ್ತ್ರಜ್ಞ ಡಾ. ನವೀನ್‌ ನೆಲ್ಲಂಗಲ ತಿಳಿಸಿದ್ದಾರೆ.

ರಾಜ್ಯಾದ್ಯಂತ ಭುಗಿಲೆದ್ದ ಆಟೋ ಗ್ಯಾಸ್‌ ಸಮಸ್ಯೆ; ಬೆಂಗಳೂರಿನಲ್ಲಿ ಕಿಲೋ ಮೀಟರ್‌ಗಟ್ಟಲೆ ರಿಕ್ಷಾ ಸಾಲು Video

ರಾಜ್ಯಾದ್ಯಂತ ಭುಗಿಲೆದ್ದ ಆಟೋ ಗ್ಯಾಸ್‌ ಸಮಸ್ಯೆ

LPG Crisis: ಪಶ್ಚಿಮ ಏಷ್ಯಾ ಸಂಘರ್ಷ ಏನಾಗಲಿದೆ ಎನ್ನುವ ಗೊಂದಲ ಒಂದೆಡೆಯಾದರೆ, ರಾಜ್ಯಾದ್ಯಂತ ವಾಣಿಜ್ಯ ಬಳಕೆಯ ಸಿಲಿಂಡರ್ ಸಮಸ್ಯೆ ಮೀರಿದ ಸಮಸ್ಯೆ ಇದೀಗ ಆಟೋ ಗ್ಯಾಸ್‌ನಲ್ಲಿ ಆರಂಭವಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಗ್ಯಾಸ್ ಸಿಗದೆ ಆಟೋ ಚಾಲಕರು ತೀವ್ರ ಸಮಸ್ಯೆಗೆ ಸಿಲುಕುವಂತಾಗಿದೆ. ರಾಜ್ಯದ ಹಲವು ಭಾಗದಲ್ಲಿ ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಳ್ಳಲು ಇಡೀ ರಾತ್ರಿ ಸ್ಟೇಷನ್‌ಗಳ ಮುಂದೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬೆಂಗಳೂರಿನ ಹಲವು ಎಲ್‌ಪಿಜಿ ಬಂಕರ್‌ಗಳು ಇಂಧನ ಸಿಗದೇ ಬಂದಾಗಿವೆ.

ನಾವು ಒಳ್ಳೆ ಕೆಲಸ ಮಾಡಿದ್ದೀವಲ್ವಾ? ಜನ ಓಟ್‌ ಹಾಕ್ತಾರೆ ಅನ್ನೋ ನಂಬಿಕೆಯಿದೆ ಎಂದ ಸಿಎಂ Video

ಒಳ್ಳೆ ಕೆಲಸ ಮಾಡಿದ್ದೇವೆ, ಜನ ನಮಗೆ ಓಟ್‌ ಹಾಕ್ತಾರೆ: ಸಿಎಂ

CM Siddaramaiah: ಬಿಜೆಪಿಯವರ ಅಪಪ್ರಚಾರದ ನಡುವೆಯೂ ಹಿಂದೆ ನಡೆದ 3 ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇವೆ. ಮಾಜಿ ಮುಖ್ಯಮಂತ್ರಿಗಳ ಪುತ್ರರು ನಿಂತಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈಗ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪಚುನಾವಣೆಗೆ ಪ್ರಚಾರ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ನಾವು ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆ ಹೀಗಾಗಿ ಜನರು ಮತ ಹಾಕುತ್ತಾರೆ ಎಂಬ ನಂಬಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Chandan Shetty:  ಡಿವೋರ್ಸ್‌ ಆಯ್ತು ಬೇಜಾರ್‌ ಇಲ್ಲ ಸಾಧನೆ ಮಾಡ್ಬೇಕು; ಚಂದನ್‌ ಶೆಟ್ಟಿ Video

ಡಿವೋರ್ಸ್‌ ಆಯ್ತು ಬೇಜಾರ್‌ ಇಲ್ಲ ಸಾಧನೆ ಮಾಡ್ಬೇಕು; ಚಂದನ್‌ ಶೆಟ್ಟಿ

Chandan Shetty: ಎಲ್ಲರಿಗೆ ಗೊತ್ತಿರುವಂತೆ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ದಾಂಪತ್ಯ ಜೀವನ ಮುಕ್ತಾಯವಾಗಿ ಒಂದೂವರೆ ವರ್ಷಗಳಾಗಿವೆ.ಗೌರವಯುತವಾಗಿ ದೂರವಾದ ಇಬ್ಬರು ಈ ಒಂದೂವರೆ ವರ್ಷದಲ್ಲಿ ಬೇರೆ ಬೇರೆ ದಾರಿಯಲ್ಲಿ ನಡೆಯುತ್ತಿದ್ದಾರೆ. ತಮ್ಮ ತಮ್ಮ ಕೆಲಸಗಳ ಮೂಲಕ ಸದ್ದು ಮಾಡಿದ್ದಾರೆ. ಇದೀಗ ಚಂದನ್‌ವಿಶ್ವವಾಣಿ ಜೊತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕುಳಿತು ಕೆಲಸ ಮಾಡೋರಿಗೆ ಮೂಲವ್ಯಾಧಿ ಸಮಸ್ಯೆ ಕಾಡುವುದೇಕೆ? Video

ಮೂಲವ್ಯಾಧಿ ಸಮಸ್ಯೆಗೆ ಮುಖ್ಯ ಕಾರಣವೇನು?

Health Tips: ಮೂಲವ್ಯಾಧಿ ಎನ್ನುವುದು ಮಕ್ಕಳಿಂದ ವೃದ್ಧರವರೆಗೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆ. ಯಾರೊಂದಿಗೂ ಹೇಳಿಕೊಳ್ಳಲು ಮುಜುಗರಪಡುವ ಈ ಕಾಯಿಲೆಯ ಬಗ್ಗೆ ಆರಂಭದಲ್ಲೇ ಎಚ್ಚರಿಕೆವಹಿಸುವುದು ಒಳಿತು ಎನ್ನುತ್ತಾರೆ ವೈದ್ಯರು. ಮೂಲವ್ಯಾಧಿಗೆ ಆಯುರ್ವೇದದಲ್ಲಿ ಯಾವ ಬಗೆಯ ಚಿಕಿತ್ಸಾ ಕ್ರಮಗಳಿವೆ? ಜನರು ಇದರ ಬಗ್ಗೆ ಯಾವ ಸಂಗತಿಗಳನ್ನು ತಿಳಿದಿರಬೇಕು? ಎನ್ನುವುದರ ಕುರಿತು ಖ್ಯಾತ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ ಡಂಬಳ ತಿಳಿಸಿದ್ದಾರೆ.

ʼʼನಾನೇ ಅಭ್ಯರ್ಥಿ ಎಂದುಕೊಂಡು ಮತ ಹಾಕಿʼʼ; ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ರಚಾರ Video

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ರಚಾರ

CM Siddaramaiah campaigns: ಬಾಗಲಕೋಟೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ನಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ಭರವಸೆ ಇದೆ ಎಂದು ಅವರು ಹೇಳಿದರು.

Ashita Maria: ನಟ ದರ್ಶನ್‌ ಜೊತೆ ದುಬೈ ಅನುಭವ ಮರೆಯೋಕೆ ಆಗಲ್ಲ; ನಟಿ ಆಶಿತಾ Video

ನಟ ದರ್ಶನ್‌ ಜೊತೆ ದುಬೈ ಅನುಭವ ಮರೆಯೋಕೆ ಆಗಲ್ಲ; ನಟಿ ಆಶಿತಾ

Ashita Maria: ʻತವರಿನ ಸಿರಿʼ ಖ್ಯಾತಿಯ ನಟಿ ಆಶಿತಾ ಮಾರಿಯಾ ಹಲವಾರು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಆಶಿತಾ ಸಿನಿಮಾಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ಆಶಿತಾ ಅಭಿಮಾನಿಗಳಿಗೆ ಹೆಚ್ಚು ಕನೆಕ್ಟ್‌ ಆಗಿದ್ದಾರೆ. ಇದೀಗ ನಟಿ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ಪಂಚ ಮಹಾರಥೋತ್ಸವಕ್ಕೆ ಚಾಲನೆ: ಉತ್ಸವವನ್ನು ಕಣ್ತುಂಬಿಕೊಳ್ಳಲಿರುವ ಲಕ್ಷಾಂತರ ಭಕ್ತರು Video

ನಂಜನಗೂಡು ಶ್ರೀಕಂಠೇಶ್ವರಸ್ವಾಮಿಯ ಪಂಚ ಮಹಾರಥೋತ್ಸವಕ್ಕೆ ಅದ್ಧೂರಿ ಚಾಲನೆ

Nanjangud Srikanteshwara Temple: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡು ಶ್ರೀಕಂಠೇಶ್ವರಸ್ವಾಮಿಯ ಪಂಚ ಮಹಾರಥೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಮತ್ತು ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ರಥ ಚಲನ ಮಹೋತ್ಸವದಲ್ಲಿ 5 ರಥಗಳಿಗೆ ಪೂಜೆ ಸಲ್ಲಿಸಿ ರಥ ಕಟ್ಟಲು ಚಾಲನೆ ದೊರೆಯಿತು.

ಕಾಂಗ್ರೆಸ್ ದೇಶದ ಶಕ್ತಿ: ಡಿ.ಕೆ. ಶಿವಕುಮಾರ್ Video

ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಡಿ.ಕೆ.ಶಿವಕುಮಾರ್

ಅಸ್ಸಾಂ ವಿಧಾನಸಭೆ ಚುನಾವಣೆ ಹಿನ್ನೆಲೆ ಗುವಾಹಟಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಉಪಮುಖ್ಯಮಂತ್ರಿ, ಕಾಂಗ್ರೆಸ್ ಉಸ್ತುವಾರಿ ಡಿ.ಕೆ. ಶಿವಕುಮಾರ್ ಅವರು ಈ ಬಾರಿಯ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಬದಲಾವಣೆ ಖಂಡಿತಾ ಆಗುತ್ತದೆ. ಇದು ಇಲ್ಲಿನ ರಾಜಕೀಯ ಇತಿಹಾಸದಲ್ಲಿ ದಾಖಲೆಯಾಗಲಿದೆ ಎಂದು ಹೇಳಿದರು.

ಯುಗಾದಿ ವರ್ಷ ಭವಿಷ್ಯ: ಮೀನ ರಾಶಿಗೆ ಅದೃಷ್ಟ ಹೇಗಿರಲಿದೆ? Video

ಮೀನ ರಾಶಿಯವರಿಗೆ ಈ ವರ್ಷ ಕಷ್ಟಗಳು ದೂರವಾಗಬಹುದಾ?

ಯುಗಾದಿಯ ಮೂಲಕ ಪರಾಭವ ನಾಮ ಸಂವತ್ಸರ ಆರಂಭವಾಗಿದೆ. ಈ ವರ್ಷವು ತಾಳ್ಮೆ ಮತ್ತು ವಿವೇಕದಿಂದ ವರ್ತಿಸಿದರೆ ಶುಭ ಫಲಗಳ ನಿರೀಕ್ಷೆ ಮಾಡಬಹುದು. ಮೀನ ರಾಶಿಗೆ ಈ ಸಂವತ್ಸರ ಹೇಗಿರಲಿದೆ? ಯಾವ ರೀತಿಯ ಬದಲಾವಣೆಗಳು ಕಂಡುಬರಲಿವೆ? ಈ ವರ್ಷ ಆರ್ಥಿಕವಾಗಿ ಪ್ರಗತಿ ಕಾಣಲಿದೆಯೇ? ಎನ್ನುವುದರ ಬಗ್ಗೆ ಖ್ಯಾತ ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.

CM Siddaramaiah: ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದ ಸಿಎಂ ಸಿದ್ದರಾಮಯ್ಯ Video

ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದ ಸಿಎಂ ಸಿದ್ದರಾಮಯ್ಯ

ಮೈಸೂರಿನ ಮೈಲಾರಿ ಹೋಟೆಲ್‌, ಮೃದುವಾದ ದೋಸೆ ಹಾಗೂ ಮಲ್ಲಿಗೆ ಇಡ್ಲಿಗೆ ಸಾಕಷ್ಟು ಫೇಮಸ್‌. ಸಿಎಂ ಅವರು ಪ್ರತಿ ಬಾರಿ ಮೈಸೂರಿಗೆ ಬಂದಾಗ ಸಿಎಂ ಬೆಣ್ಣೆ ದೋಸೆ, ಕಾಯಿ ಚಟ್ನಿ, ಆಲೂಗಡ್ಡೆ ಈರುಳ್ಳಿ ಪಲ್ಯ, ಇಡ್ಲಿ-ಚಟ್ನಿ ಸವಿಯುತ್ತಾರೆ.

ಸಂಸದ ತೇಜಸ್ವಿ ಸೂರ್ಯಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು: ಸರ್ಕಾರದ ವಿಷಯದಲ್ಲಿ ತಲೆಹಾಕುವುದು ಬೇಡ ಎಂದು ಎಚ್ಚರಿಕೆ Video

ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಡಿ.ಕೆ. ಶಿವಕುಮಾರ್ ತಿರುಗೇಟು

DKS hits back at Tejasvi Surya: ಸಂಸದ ತೇಜಸ್ವಿ ಸೂರ್ಯ ಮಾಡುತ್ತಿರುವ ಟೀಕೆಗಳ ಬಗ್ಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಅವರು ತಮ್ಮ ಪಕ್ಷದ ಬಗ್ಗೆ ತಲೆಕೆಡಿಸಿಕೊಳ್ಳಲಿ. ಅವರ ಪಕ್ಷಕ್ಕೆ ಸಲಹೆಗಳನ್ನು ನೀಡಲಿ. ಬೇರೆಯವರ ವಿಷಯದಲ್ಲಿ ಅಥವಾ ಸರ್ಕಾರದ ವಿಷಯದಲ್ಲಿ ಅವರು ತಲೆಹಾಕುವುದು ಬೇಡ ಎಂದು ಎಂದು ಖಡಕ್ ಆಗಿ ಹೇಳಿದ್ದಾರೆ.

Loading...