ಉಪವಾಸದ ಹೋರಾಟ ಮುಟ್ಟೀತೇ ಗುರಿ ?
ವಾಂಗ್ಚುಕ್ ಯಾಕೆ ಉಪವಾಸ ಕುಳಿತಿದ್ದಾರೆ, ಏನವರ ಬೇಡಿಕೆ, ಹಾಗೆ ಹಕ್ಕೊತ್ತಾಯ ಮಾಡಲಿಕ್ಕೆ ಅವರ್ಯಾರು? ಅದನ್ನು ನೋಡುವುದಕ್ಕೆ ಮೊದಲು, ಉಪವಾಸ ಸತ್ಯಾಗ್ರಹದ ಶಕ್ತಿಯನ್ನು ಕಡೆಗಣಿಸು ವುದು ಬೇಡ. ಅದಕ್ಕೆ ಒಂದು ನೈತಿಕ, ಸಾತ್ವಕ ಬಲ ವನ್ನು ತುಂಬಿಕೊಟ್ಟ ಮಹಾತ್ಮ ಗಾಂಧಿಯ ಬಗ್ಗೆ ಎಲ್ಲರಿಗೆ ಗೊತ್ತಿರುವುದೇ. ಆದರೆ ಇನ್ನೊಬ್ಬರೂ ಇದ್ದಾರೆ- ಅವರೇ ಪೊಟ್ಟಿ ಶ್ರೀರಾಮುಲು. ಅವರ 58 ದಿನಗಳ ಉಪವಾಸ ಭಾರತ ದೇಶದ ಭೂಪಟವನ್ನೇ ಬದಲಿಸಿತು.