ಓದುವಾಗ ಆನಂದ ಓದಿದ ನಂತರ ಬೆರಗು !
ಶಶಿಧರ ಹಾಲಾಡಿ ಅವರದು ಪರಿಸರ ಪ್ರತಿಭೆ. ಇದಕೆ ಹಲವು ಅರ್ಥಗಳಿವೆ. ಪರಿಸರದ ಬಗ್ಗೆ, ಹಕ್ಕಿ ಮರ ಗಿಡ ಹೂವು ಹಣ್ಣು ಗುಡ್ಡ ಬೆಟ್ಟಗಳ ಬಗ್ಗೆ ಹೆಚ್ಚಾಗಿ ಬರೆಯುತ್ತಾರೆ ಎಂಬುದೊಂದು. ಪರಿಸರದ ಬಗ್ಗೆ ಅದಮ್ಯ ಕಾಳಜಿಯ ಬರಹಗಾರ ಎಂಬುದು ಇನ್ನೊಂದು. ಟ್ರೆಕ್ಕಿಂಗ್ನಲ್ಲಿ ಆಸಕ್ತರು ಎಂಬುದೂ ನಿಜ. ಇನ್ನೂ ಒಂದು ಆಯಾಮವಿದೆ. ತಮ್ಮ ಒಂದು ಅಂಕಣದಲ್ಲಿ ಅವರು, ತಾವು ಟ್ರೆಕ್ಕಿಂಗ್ ಹೋದಾಗ ಕಂಡ ಒಂದು ಬಳ್ಳಿಯ ಬಗ್ಗೆ ಬರೆದಿದ್ದರು