ಬೇಸಿಗೆ ಅಬ್ಬರ ಆರಂಭ: ರಾಜಧಾನಿಯಲ್ಲಿ ಕುಡಿಯುವ ನೀರಿನ ಕೊರತೆ?
ಈ ಬಾರಿ ವಾಡಿಕೆಗಿಂತ ಅಧಿಕ ತಾಪಮಾನ ಎದುರಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದರ ನಡುವೆ ಬೇಸಿಗೆಯಲ್ಲಿ ಪವರ್ ಕಟ್ ಹಾಗೂ ನೀರಿನ ಅಭಾವದ ಬಿಸಿ ತಟ್ಟುವ ಆತಂಕ ಜನರಲ್ಲಿದೆ. ರಾಜಧಾನಿಗೆ ನೀರೊದಗಿಸುವ ಜಲಾಶಯಗಳ ಸ್ಥಿತಿಗತಿ ಗಮನಿಸಿದರೆ ಈ ಆತಂಕ ಸುಳ್ಳು ಎನ್ನಲಾಗದು. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳಬಹುದಾದ 21 ಹೈ ರಿಸ್ಕ್ ಏರಿಯಾಗಳನ್ನು ಗುರುತಿಸುವ ಕೆಲಸ ಜಿಬಿಎ ಮಾಡಿದೆ.