ಸಿದ್ದರಾಮಯ್ಯ ಪ್ರಶಸ್ತಿಗೆ ಸುಶೀಲಾ ಸುಬ್ರಹ್ಮಣ್ಯ, ನೀಳಾ ಎಂ.ಎಚ್ ಆಯ್ಕೆ
Siddaramaiah Award: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ತಮ್ಮದೇ ಹೆಸರಿನಲ್ಲಿ ಪ್ರಶಸ್ತಿ ಪ್ರಕಟಿಸಲು ದತ್ತಿನಿಧಿ ನೀಡಿದ್ದು, 2024-25ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಾಗಿ ಸಂಘ ಈ ಇಬ್ಬರು ಹಿರಿಯ ಪತ್ರಕರ್ತೆಯರನ್ನು ಆಯ್ಕೆ ಮಾಡಿದೆ. ʼಸಿದ್ದರಾಮಯ್ಯ ಪ್ರಶಸ್ತಿʼ ಪ್ರದಾನ ಸಮಾರಂಭ ನವೆಂಬರ್ 28ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ರಸ್ತೆಯ ʼಕೊಂಡಜ್ಜಿ ಬಸಪ್ಪʼ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ.