Harish Kera Column: ವ್ಯರ್ಥನಂದನದಲ್ಲಿ ಕ್ರೂರ ಏಪ್ರಿಲ್ ಮಾಸ
ಜೋಗದ ಝೋಕು, ಜೋಕ್ ಆಗಿಬಿಡುತ್ತದೆ. ಒಣ ಮರಗಳಲ್ಲಿ ಗಿಳಿಗಳು ಕೂಡ ಕೂತು ಕೂಗುವುದಿಲ್ಲ. ಪಾರಿವಾಳಗಳು ಮೆಟ್ರೋ ಪಿಲ್ಲರುಗಳ ಎಡೆಯಲ್ಲಿ ಕೂತು ಘೂಕರಿಸುತ್ತವೆ. ಹೊಳೆ ತೊರೆಗಳು ಚರಂಡಿ ಗಳಾಗಿ, ಕಸ ಕಟ್ಟಿಕೊಂಡು ಗಬ್ಬು ನಾತ. ನೀರು ಕಂಡಲ್ಲ ರಜೆ ಪಡೆದ ಜನರ ನೂಕಾಟ. ಬೆಟ್ಟಗಳಲ್ಲಿ ಬೆಂಕಿ. ಜನ ನಡೆಯುವ ನೆಲವೂ ಬೆಂಕಿ. ಪ್ರಾಣ ಒಂದು ಗುಟುಕು ನೀರಿಗಾಗಿ, ಒಂದು ಬೀಸು ತಂಗಾಳಿಗಾಗಿ ಹಂಬಲಿಸುತ್ತದೆ.