Harish Kera Column: ನಮ್ಮ ಪಾಪಕ್ಕೆ ಅವರೇಕೆ ಬಲಿಯಾಗಬೇಕು?
ನೀವು ಒಂದು ವೈರಲ್ ವಿಡಿಯೋ ನೋಡಿರುತ್ತೀರಿ. ತ್ರಿಶಾಲಿಯ ದುಂಗೇ ಬಜಾರ್ ಬಳಿಯ ಅಬ್ಬರಿಸು ತ್ತಿರುವ ನದಿಯ ಅಲೆಗಳ ನಡುವೆ ಒಂಟಿಯಾಗಿ ಗಟ್ಟಿ ನಿಂತ ಹಸಿರು ಬಣ್ಣದ ಮನೆ ಮತ್ತು ಅದರ ಮಾಳಿಗೆಯಲ್ಲಿ ಆತಂಕಿತರಾಗಿ ನಿಂತಿರುವ ನಿವಾಸಿಗಳು. ಪ್ರವಾಹದಿಂದ ಬರ್ಬಾದ್ ಆದ ನೆಲದಲ್ಲಿ ಓಡಾಡುತ್ತಿರುವ ಪತ್ರಕರ್ತೆ ಬರ್ಖಾ ದತ್ ಈ ಮನೆಯ ಯಜಮಾನ/ನಿಯನ್ನು ಮಾತಾಡಿಸಿ ‘ನಿಮ್ಮ ಮನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತಲ್ಲ ಏನನ್ಸುತ್ತೆ?’ ಅಂತ ಕೇಳುತ್ತಿದ್ದರು.