Narayana Yaji Column: ಭೌಮಸ್ವರ್ಗದಲ್ಲಿ ಸೀತೆಯನ್ನು ಹುಡುಕುವ ಚಿಂತೆ
ನಾರಾಯಣ ಯಾಜಿ ಅಂಕಣ: ಸುಂದರಕಾಂಡ ರಾಮಾಯಣದ ಬಹು ಸುಂದರ ಭಾಗ. ʼಸುಂದರʼ ಎಂಬುದು ಹನುಮಂತನನ್ನು ಉದ್ದೇಶಿಸಿದ ಪದ. ಭರತ ದ್ವೀಪಖಂಡದ ತುದಿಯಿಂದ ಹಾರಿ ನೂರು ಯೋಜನ ದೂರದ ಸಮುದ್ರವನ್ನು ದಾಟಿ ಸುವರ್ಣಲಂಕೆಯನ್ನು ಸೇರಿ ಅಲ್ಲಿ ಸೀತಾಮಾತೆಯನ್ನು ಹುಡುಕುವ ಆಂಜನೇಯನ ಬೆಕ್ಕಸ ಬೆರಗಾಗುವಂಥ ಸಾಹಸವನ್ನು ಕವಿ ವಾಲ್ಮೀಕಿಗಳು ಇಲ್ಲಿ ಸೊಗಸಾಗಿ ಬಣ್ಣಿಸಿದ್ದಾರೆ. ಸುಂದರಕಾಂಡದ ಈ ಭಾಗವನ್ನು ಲೇಖಕರು ಇಲ್ಲಿ ವಿಶ್ಲೇಷಿಸಿದ್ದಾರೆ.