ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಹರೀಶ್‌ ಕೇರ

columnist

harish@vishwavani.news

ದಶಕದ ಕಾಲ ಪತ್ರಿಕೋದ್ಯಮ ಅನುಭವ ಹೊಂದಿದ ಹರೀಶ್‌ ಕೇರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ. ಹೊಸದಿಗಂತ, ವಿಜಯ ಕರ್ನಾಟಕ, ಕನ್ನಡಪ್ರಭ, ವಿಸ್ತಾರ ನ್ಯೂಸ್‌ಗಳಲ್ಲಿ ಮುದ್ರಣ, ಡಿಜಿಟಲ್‌ ಹಾಗೂ ಯುಟ್ಯೂಬ್‌ ಮೂರೂ ಸ್ವರೂಪಗಳಲ್ಲಿ ಕೆಲಸ ಮಾಡಿದ ಅನುಭವ. ಸಾಹಿತ್ಯ, ಸಾಂಸ್ಕೃತಿಕ, ನಾಡು ಹಾಗೂ ರಾಷ್ಟ್ರ ರಾಜಕೀಯ, ವಿಜ್ಞಾನ, ಪರಿಸರ ಇತ್ಯಾದಿ ಆಸಕ್ತಿಗಳು. ಕವಿ, ಕತೆಗಾರ, ವಿಮರ್ಶಕ. ಗಿಣಿಬಾಗಿಲು, ನಕ್ಷತ್ರ ನೇಯುವ ಹಕ್ಕಿಗಳು, ಮೇಧಾ ಪಾಟ್ಕರ್‌, ಪ್ರಜ್ವಲ ಮಾತು ಉಜ್ವಲ ಬೆಳಕು, ನಿಮ್ಮೊಳಗಿದೆ ಸಕ್ಸಸ್‌ ಇವರ ಕೃತಿಗಳು. ಉತ್ಥಾನ, ಸಂಚಯ, ಸಂಕ್ರಮಣ ಸಾಹಿತ್ಯ ಸ್ಪರ್ಧೆಗಳಲ್ಲಿ ಪುರಸ್ಕಾರ ದೊರೆತಿದೆ. ಅಭಿವೃದ್ದಿ ಪತ್ರಿಕೋದ್ಯಮ ಮತ್ತು ಅಂಕಣ ಬರಹ ಜೀವದ್ರವ್ಯ.

Articles
Purushottama Bilimale: ಯಕ್ಷಗಾನ ಕಲಾವಿದರ ಸಲಿಂಗಕಾಮ ಕುರಿತು ಪುರುಷೋತ್ತಮ ಬಿಳಿಮಲೆ ಹೇಳಿಕೆ, ಪ್ರತಿರೋಧದ ಬಳಿಕ ಕ್ಷಮೆಯಾಚನೆ

ಯಕ್ಷಗಾನ ಕಲಾವಿದರ ಸಲಿಂಗಕಾಮ ಕುರಿತು ಬಿಳಿಮಲೆ ಹೇಳಿಕೆ, ಕ್ಷಮೆಯಾಚನೆ

Purushottama Bilimale: ಇಲ್ಲಿ ನಾವು ಸತ್ಯವನ್ನು ಹೇಳಲು ಹಿಂಜರಿಯಬಾರದು. ಕಲಾವಿದರು ಮೇಳಕ್ಕೆಂದು ಆರೆಂಟು ತಿಂಗಳು ತಿರುಗಾಟದಲ್ಲೇ ಇದ್ದರಿಂದ, ಅವರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಅಲ್ಲಿನ ಸ್ತ್ರೀ ವೇಷಧಾರಿಗಳೂ ಒತ್ತಡದಲ್ಲಿರುತ್ತಿದ್ದರು. ಅವರ ಮೇಲೆ ಇತರರಿಗೆ ಮೋಹ ಇರುತ್ತಿತ್ತು ಎಂದು ಪುರುಷೋತ್ತಮ ಬಿಳಿಮಲೆ ಹೇಳಿದ್ದರು. ನಂತರ ಕ್ಷಮೆ ಯಾಚಿಸಿದ್ದಾರೆ.

Belagavi News: 31 ಕೃಷ್ಣಮೃಗಗಳ ಸಾವಿಗೆ ಕಾರಣ ಪತ್ತೆ, ತಜ್ಞರ ತಂಡದಿಂದ ವರದಿ

31 ಕೃಷ್ಣಮೃಗಗಳ ಸಾವಿಗೆ ಕಾರಣ ಪತ್ತೆ, ತಜ್ಞರ ತಂಡದಿಂದ ವರದಿ

Belagavi Blackbucks death: ಸಾವು ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ತಜ್ಞ ಡಾ. ಚಂದ್ರಶೇಖರ್ ಅವರನ್ನು ತಕ್ಷಣ ಬೆಳಗಾವಿಗೆ ಕಳುಹಿಸಲಾಗಿತ್ತು. ಅವರು ಮೃಗಾಲಯದ ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ನಡೆಸಿದ ಸಂಯುಕ್ತ ತನಿಖೆಯ ಬಳಿಕ, HS ಎಂಬ ತೀವ್ರವಾಗಿ ಹರಡುವ ಬ್ಯಾಕ್ಟೀರಿಯಾ ಸೋಂಕು ಕೃಷ್ಣ ಮೃಗಗಳಲ್ಲಿ ವೇಗವಾಗಿ ವ್ಯಾಪಿಸಿರುವುದು ಸ್ಪಷ್ಟ ಎಂದು ಮಾಹಿತಿ ಬಿಡುಗಡೆ ಮಾಡಿದ್ದಾರೆ.

Namma Metro: ನಮ್ಮ ಮೆಟ್ರೋಗೆ ಬಾಂಬ್‌ ಬೆದರಿಕೆ ಹಾಕಿದಾತನ ಬಂಧನ

ನಮ್ಮ ಮೆಟ್ರೋಗೆ ಬಾಂಬ್‌ ಬೆದರಿಕೆ ಹಾಕಿದಾತನ ಬಂಧನ

Namma Metro Bomb threat: ನಮ್ಮ ಮೆಟ್ರೋಗೆ ಬಾಂಬ್‌ ಬೆದರಿಕೆ ಇಮೇಲ್‌ ಕಳಿಸಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ʼನಾನೂ ಕೂಡ ಟೆರರಿಸ್ಟ್‌ ಇದ್ದಂತೆʼ ಎಂದು ಉಲ್ಲೇಖಿಸಿ ಆತ ಕಳುಹಿಸಿದ್ದ ಬೆದರಿಕೆ ಇಮೇಲ್‌ ಆತಂಕ ಸೃಷ್ಟಿಸಿತ್ತು. ವಿಚಾರಣೆಯ ವೇಳೆ, ಈತ ಮಾನಸಿಕ ಅಸ್ವಸ್ಥನೂ ಹೌದು ಎಂದು ಗೊತ್ತಾಗಿದೆ.

Chikkaballapur: ಅಡ್ಡಾದಿಡ್ಡಿ ಡ್ರೈವಿಂಗ್‌ ಪ್ರಶ್ನಿಸಿದ್ದಕ್ಕೆ ಬೈಕ್​​ ಸವಾರನಿಗೆ ಚೂರಿಯಿಂದ ಇರಿದ ಲೇಡಿ ಟೆಕ್ಕಿ

ಅಡ್ಡಾದಿಡ್ಡಿ ಡ್ರೈವಿಂಗ್‌ ಪ್ರಶ್ನಿಸಿದ್ದಕ್ಕೆ ಚೂರಿಯಿಂದ ಇರಿದ ಲೇಡಿ ಟೆಕ್ಕಿ

Chikkaballapur news: ಲೇಡಿ ಟೆಕ್ಕಿಯೊಬ್ಬರು ವಿಚಿತ್ರವಾಗಿ, ಆತಂಕಕಾರಿಯಾಗಿ ವರ್ತಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಬೆಂಗಳೂರು-ಹೈದರಾಬಾದ್ ಹೈವೇಯಲ್ಲಿ ಅಡ್ಡಾದಿಡ್ಡಿಯಾಗಿ ಸ್ಕೂಟಿ ಓಡಿಸುತ್ತಿದ್ದ ಮಹಿಳೆ, ಹಿಂದೆ ಬರುತ್ತಿದ್ದ ವಾಹನಗಳಿಗೆ ಅಡಚಣೆ ಉಂಟುಮಾಡಿದ್ದರು. ನಂತರ ಇದನ್ನು ಪ್ರಶ್ನಿಸಿದ ಬೈಕ್ ಸವಾರರ ಮೇಲೆ ಮುಗಿಬಿದ್ದು ಚಾಕುವಿನಿಂದ ಇರಿದಿದ್ದಾಳೆ.

Belagavi News: ಕೋಣೆಯೊಳಗೆ ಹೊಗೆಯಿಂದ ಉಸಿರುಗಟ್ಟಿ ಮೂವರು ಯುವಕರ ಸಾವು

ಕೋಣೆಯೊಳಗೆ ಹೊಗೆಯಿಂದ ಉಸಿರುಗಟ್ಟಿ ಮೂವರು ಯುವಕರ ಸಾವು

Belagavi Tragedy: ನಿನ್ನೆ ರಾತ್ರಿ ನಾಮಕರಣ ಕಾರ್ಯಕ್ರಮ ಮುಗಿಸಿಕೊಂಡು ನಾಲ್ವರು ಯುವಕರು ಬಂದಿದ್ದಾರೆ. ಚಳಿ ಹಿನ್ನೆಲೆಯಲ್ಲಿ ರೂಮ್‌ನಲ್ಲಿ ಬೆಂಕಿ ಹಾಕಿಕೊಂಡು ಮಲಗಿದ್ದಾರೆ. ಸೊಳ್ಳೆ ಕಾಟದ ಹಿನ್ನೆಲೆ ನಾಲ್ಕೈದು ಮಸ್ಕಿಟೋ ಕಾಯಿಲ್ ಹಾಕಿ ಮಲಗಿದ್ದಾರೆ. ಹೊಗೆ ಹೊರಹೋಗಲು ಕಿಟಕಿ ಓಪನ್ ಮಾಡದ ಹಿನ್ನೆಲೆ ಇಡೀ ಕೊಠಡಿ ತುಂಬಾ ಹೊಗೆ ಆವರಿಸಿದ್ದು, ಉಸಿರುಗಟ್ಟಿ ಮೂವರು ಸಾವನ್ನಪ್ಪಿದ್ದಾರೆ.

PM Kisan 21st Installment: ಪಿಎಂ ಕಿಸಾನ್‌ ಯೋಜನೆ ಹಣ 21ನೇ ಕಂತು ಇಂದು ಬಿಡುಗಡೆ, ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿಯಿಂದ ರಿಲೀಸ್‌

ಪಿಎಂ ಕಿಸಾನ್‌ ಯೋಜನೆ ಹಣ 21ನೇ ಕಂತು ಇಂದು ಬಿಡುಗಡೆ

PM Kisan 21st Installment: ತಮಿಳುನಾಡಿನ ಕೊಯಮತ್ತೂರಿನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಆಯ್ದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಂತಿನ ಹಣ ವಿತರಿಸಲಿದ್ದಾರೆ. 2019ರಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕ 6 ಸಾವಿರ ರೂ. ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು ಮೂರು ಬಾರಿ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

Murder Case: ಹಣ ದುಪ್ಪಟ್ಟು ಆಮಿಷಕ್ಕೆ ಬಲಿಯಾದ ಇಂಜಿನಿಯರ್‌, ʼದೃಶ್ಯʼ ಸಿನಿಮಾ ಮಾದರಿಯಲ್ಲಿ ಹತ್ಯೆ!

ಹಣ ದುಪ್ಪಟ್ಟು ಆಮಿಷಕ್ಕೆ ಇಂಜಿನಿಯರ್‌ ಬಲಿ, ʼದೃಶ್ಯʼ ಸಿನಿಮಾದಂತೆ ಹತ್ಯೆ!

Bengaluru crime news: ಆಂಧ್ರಪ್ರದೇಶದ ಕುಪ್ಪಂ ಮೂಲದ ಶ್ರೀನಾಥ್ (30) ಕೊಲೆಯಾದ ವ್ಯಕ್ತಿ. ಹಣ ಡಬಲ್ ಮಾಡಿಕೊಡುವುದಾಗಿ ಹಂತಕ ಪ್ರಭಾಕರ್, ಶ್ರೀನಾಥ್‌ಗೆ ಹೇಳಿದ್ದಾನೆ. ಈ ವೇಳೆ ಸೋದರ ಸಂಬಂಧಿತರಿಂದ ಶ್ರೀನಾಥ್ 40,00,000 ಪಡೆದುಕೊಂಡು ಪ್ರಭಾಕರ್‌ಗೆ ಹಣ ಕೊಟ್ಟಿದ್ದಾನೆ. ಇತ್ತೀಚಿಗೆ ಹಣ ವಾಪಸ್ ಕೊಡುವಂತೆ ಶ್ರೀನಾಥ್ ಪ್ರಭಾಕರ್‌ಗೆ ಕೇಳಿದ್ದಾನೆ. ಆಗ ಶ್ರೀನಾಥ್ ಕೊಲೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾನೆ.

Karnataka Government Holidays 2026: ಕರ್ನಾಟಕ ಸರ್ಕಾರಿ ಸಾರ್ವತ್ರಿಕ ರಜೆ ಪಟ್ಟಿ: 2026ರ ರಜಾದಿನಗಳ ಸಂಪೂರ್ಣ ಕ್ಯಾಲೆಂಡರ್‌ ಇಲ್ಲಿದೆ

2026ರ ಕರ್ನಾಟಕ ಸರ್ಕಾರಿ ರಜಾದಿನಗಳ ಸಂಪೂರ್ಣ ಕ್ಯಾಲೆಂಡರ್‌ ಇಲ್ಲಿದೆ

ರಾಜ್ಯ ಸರ್ಕಾರದ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ (Karnataka Government Holidays 2026) ಗುರುವಾರ ನಡೆದ ಸಚಿವ ಸಂಪುಟ ಸಭೆ ಮಂಜೂರಾತಿ ನೀಡಿದೆ. 20 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟು 20 ಸಾರ್ವತ್ರಿಕ ರಜೆ ದಿನ ಹಾಗೂ 21 ಪರಿಮಿತ ರಜಾ ದಿನಗಳ ಪಟ್ಟಿಗೆ ಮಂಜೂರಾತಿ ನೀಡಿದೆ.

Bhagavad Gita seminar: ಕುವೆಂಪು ವಿವಿಯಲ್ಲಿ ಭಗವದ್ಗೀತೆ ವಿಚಾರ ಸಂಕಿರಣ: ದಲಿತ ಸಂಘರ್ಷ ಸಮಿತಿ ವಿರೋಧ

ಕುವೆಂಪು ವಿವಿಯಲ್ಲಿ ಭಗವದ್ಗೀತೆ ವಿಚಾರ ಸಂಕಿರಣ: ದಲಿತ ಸಂಘರ್ಷ ಸಮಿತಿ ವಿರೋಧ

Shivamogga News: ಈ ವಿಚಾರಗೋಷ್ಠಿ ಬಲಪಂಥೀಯ ತತ್ತ್ವದ ಅಜೆಂಡಾವನ್ನು ಉತ್ತೇಜಿಸುತ್ತಿದೆ. ರಾಷ್ಟ್ರೀಯ ಕವಿ ಕುವೆಂಪು ಅವರ ಆದರ್ಶಗಳು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಭಗವದ್ಗೀತೆಯನ್ನು ಇತಿಹಾಸದಲ್ಲಿ ಚಾತುರ್ವರ್ಣ ವ್ಯವಸ್ಥೆ ಮತ್ತು ಜಾತಿ ಪದ್ಧತಿಯನ್ನು ಸಮರ್ಥಿಸಲು ಬಳಸಲಾಗಿದೆ. ಬಲಪಂಥೀಯ ಗುಂಪುಗಳು ಇಂತಹ ಕಾರ್ಯಕ್ರಮಗಳ ಮೂಲಕ ವಿಶ್ವವಿದ್ಯಾಲಯಗಳಲ್ಲಿ ಒಂದೇ ರೀತಿಯ ತತ್ತ್ವದ ಚೌಕಟ್ಟನ್ನು ಮುನ್ನೆಲೆಗೆ ತಂದು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಲಾಗಿದೆ.

Namma Metro: ನಮ್ಮ ಮೆಟ್ರೋ ತುಮಕೂರಿಗೂ ವಿಸ್ತರಣೆ: ಬಿಎಂಆರ್‌ಸಿಎಲ್‌ನಿಂದ ಡಿಪಿಆರ್‌ ಆಹ್ವಾನ

ನಮ್ಮ ಮೆಟ್ರೋ ತುಮಕೂರು ವಿಸ್ತರಣೆ: ಡಿಪಿಆರ್‌ ಆಹ್ವಾನಿಸಿದ ಬಿಎಂಆರ್‌ಸಿಎಲ್‌

Namma Metro to Tumakuru: ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ವಿಸ್ತರಿಸುವ ಪ್ರಸ್ತಾವನೆಗೆ ಮತ್ತೆ ಚಾಲನೆ ದೊರೆತಿದೆ. ವಿವರವಾದ ಯೋಜನಾ ವರದಿ ಸಲ್ಲಿಸುವಂತೆ ಬಿಎಂಆರ್‌ಸಿಎಲ್‌ ಟೆಂಡರ್ ಆಹ್ವಾನ ನೀಡಿದೆ. ನಮ್ಮ ಮೆಟ್ರೋ ಯೋಜನೆಯಿಂದ ಕೈಗಾರಿಕಾ ನಗರಿ ತುಮಕೂರಿನ ಆರ್ಥಿಕತೆಗೆ ಹೊಸ ವೇಗ ಸಿಗಬಹುದು ಎಂದು ಅಂದಾಜಿಸಲಾಗಿದೆ. 2024–25ರ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಘೋಷಿಸಿದ್ದರು.

Bomb threat: ನಮ್ಮ ಮೆಟ್ರೋಗೆ ಅಪರಿಚಿತನಿಂದ ಬಾಂಬ್‌ ಬೆದರಿಕೆ, ʼನಾನು ಉಗ್ರಗಾಮಿ ಇದ್ದಂತೆ...ʼ ಎಂದು ಇ-ಮೇಲ್

ನಮ್ಮ ಮೆಟ್ರೋಗೆ 'ಉಗ್ರಗಾಮಿʼ ಅಪರಿಚಿತನಿಂದ ಬಾಂಬ್‌ ಬೆದರಿಕೆ ಇ-ಮೇಲ್

Namma Metro Bomb threat: ʼನನ್ನ ವಿಚ್ಛೇದಿತ ಪತ್ನಿಗೆ ಮೆಟ್ರೋ ಸಿಬ್ಬಂದಿ ಕಿರುಕುಳ ಕೊಡ್ತಿದ್ದಾರೆ. ನಿಮ್ಮ ಒಂದು ಮೆಟ್ರೋ ನಿಲ್ದಾಣ ಬ್ಲಾಸ್ಟ್ ಮಾಡಬೇಕಾಗುತ್ತೆ. ನಾನು ಒಬ್ಬ ಉಗ್ರಗಾಮಿ ಇದ್ದಂತೆ, ಅದರಲ್ಲೂ ಕನ್ನಡಿಗರ ವಿರುದ್ಧʼ ಎಂದು ಇಮೇಲ್ ನಲ್ಲಿ ಬರೆಯಲಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ವಿಲ್ಸನ್ ಗಾರ್ಡನ್ ಪೊಲೀಸರು, ಇಮೇಲ್ ಮಾಡಿದ ಅಪರಿಚಿತನಿಗಾಗಿ ಶೋಧ ನಡೆಸುತ್ತಿದ್ದಾರೆ.

Bengaluru news: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಸುಟ್ಟರೆ 1 ಲಕ್ಷ ರೂ. ದಂಡ, 5 ವರ್ಷ ಜೈಲು!

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಸುಟ್ಟರೆ 1 ಲಕ್ಷ ರೂ. ದಂಡ, 5 ವರ್ಷ ಜೈಲು

Bengaluru Garbage burning: ಈ ಮೊದಲು ಎಲ್ಲೆಂದರಲ್ಲಿ ಕಸ ಎಸೆದವರ ವಿಡಿಯೋ- ಫೋಟೋ ಮಾಡಿಕೊಂಡು ಅಂಥವರ ಮನೆ ಮುಂದೆಯೇ ಜಿಬಿಎ ಸಿಬ್ಬಂದಿ ಕಸ ಸುರಿದಿದ್ದರು. ಎರಡನೇ ಬಾರಿಗೆ ಭಾರಿ ದಂಡ ವಿಧಿಸಿದ್ದರು. ಕಸ ಸುಟ್ಟರೆ ಉಂಟಾಗುವ ವಾಯುಮಾಲಿನ್ಯ ತಡೆಯಲು ಹೊಸ ನಿಯಮ ಜಾರಿ ಮಾಡಿದ್ದು, ಪರಿಸರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಒಂದು ಲಕ್ಷ ರೂ.ವರೆಗೂ ದಂಡ ಹಾಗೂ ಐದು ವರ್ಷ ಜೈಲು ಶಿಕ್ಷೆ ವಿಧಿಸಲು ನಿರ್ಧರಿಸಿದೆ.

Akhilesh Yadav: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಅಖಿಲೇಶ್‌ ಯಾದವ್‌

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಅಖಿಲೇಶ್‌ ಯಾದವ್‌

Akhilesh Yadav in Bengaluru: ಬೆಂಗಳೂರಿನ ತಮ್ಮ ಸಂಬಂಧಿಯೊಬ್ಬರ ಮನೆಗೆ ಭೇಟಿ ನೀಡಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್, ರಾಮೇಶ್ವರಂ ಕೆಫೆಗೆ (‌Rameshwarama cafe) ಭೇಟಿ ನೀಡಿ ಅಲ್ಲಿನ ದೋಸೆ ಸವಿದರು. ನಂತರ ಅದನ್ನು ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ.

CM Siddaramaiah: ದೆಹಲಿಯಿಂದ ನೇರ ಆಸ್ಪತ್ರೆಗೆ ಬಂದು ಪತ್ನಿಯ ಆರೋಗ್ಯ ವಿಚಾರಿಸಿದ ಸಿಎಂ

ದೆಹಲಿಯಿಂದ ನೇರ ಆಸ್ಪತ್ರೆಗೆ ಬಂದು ಪತ್ನಿಯ ಆರೋಗ್ಯ ವಿಚಾರಿಸಿದ ಸಿಎಂ

CM Siddaramaiah wife illess: ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತ್ನಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪತ್ನಿ ಆರೋಗ್ಯ ಸ್ಥಿರವಾಗಿದೆ. ಏನೂ ಸಮಸ್ಯೆ ಇಲ್ಲ. ಶ್ವಾಸಕೋಶ ಸೋಂಕು ಇದೆ ಎಂದು ತಿಳಿಸಿದರು.

Bengaluru Crime news: ಜನ್ಮದಿನವೇ ಕೇಕ್‌ ಆಸೆ ತೋರಿಸಿ ಬಾಲಕಿಯ ಮೇಲೆರಗಿದ ಪಾಪಿ; ಅತ್ಯಾಚಾರಿಯ ಬಂಧನ

ಜನ್ಮದಿನವೇ ಕೇಕ್‌ ಆಸೆ ತೋರಿಸಿ ಬಾಲಕಿಯ ಮೇಲೆರಗಿದ ಪಾಪಿ; ಅತ್ಯಾಚಾರಿಯ ಬಂಧನ

15 ವರ್ಷದ ಬಾಲಕಿಯನ್ನು ಜನ್ಮದಿನದ ಕೇಕ್‌ ಕತ್ತರಿಸುವುದಾಗಿ ಪುಸಲಾಯಿಸಿ ರಾಶಿ ಲೇಔಟ್‌ಗೆ ಕರೆದೊಯ್ದು ಅತ್ಯಾಚಾರ (Physical Abuse) ಎಸಗಿದ್ದಾನೆ. ಅತ್ಯಾಚಾರ ಎಸಗಿದ ಬಳಿಕ ಕಾಮುಕ ಎಸ್ಕೇಪ್ ಆಗಿದ್ದಾನೆ. 9ನೇ ತರಗತಿ ವಿದ್ಯಾರ್ಥಿನಿ ಹೆತ್ತವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಸಂಬಂಧ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

Fake Nandini Ghee: ನಂದಿನಿ ತುಪ್ಪದಲ್ಲಿ ಕಲಬೆರಕೆ: ದೊಡ್ಡ ಜಾಲ ಬಯಲು, ನಾಲ್ವರ ಬಂಧನ

ನಂದಿನಿ ತುಪ್ಪದಲ್ಲಿ ಕಲಬೆರಕೆ: ದೊಡ್ಡ ಜಾಲ ಬಯಲು, ನಾಲ್ವರ ಬಂಧನ

fake nandini products: ನಂದಿನಿ ತುಪ್ಪದಲ್ಲಿ ಕಳಪೆ ಸಾಮಗ್ರಿಗಳನ್ನು ಕಲಬೆರಕೆ ಮಾಡಿ ತಮಿಳುನಾಡಿಗೆ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಒಂದು ಲೀಟರ್ ಮೂಲ ತುಪ್ಪದಿಂದ ಮೂರು ಲೀಟರ್ ಕಲಬೆರಕೆ ತುಪ್ಪವನ್ನು ಉತ್ಪಾದಿಸುತ್ತಿದ್ದರು. ಬಂಧಿತ ವ್ಯಕ್ತಿಗಳನ್ನು ಕೆಎಂಎಫ್ ವಿತರಕ ಮಹೇಂದ್ರ, ಅವರ ಮಗ ದೀಪಕ್, ತಮಿಳುನಾಡಿನಿಂದ ಕಲಬೆರಕೆ ತುಪ್ಪ ಸಾಗಿಸುತ್ತಿದ್ದ ಮುನಿರಾಜು ಮತ್ತು ಚಾಲಕ ಅಭಿ ಅರಸು ಎಂದು ಗುರುತಿಸಲಾಗಿದೆ.

Koppala News: ಹಣ ಮರಳಿ ಕೊಡುತ್ತೇವೆಂದು ಕರೆಸಿಕೊಂಡು ಹೋಂ ಗಾರ್ಡ್‌ ಮೇಲೆ ನಾಲ್ವರಿಂದ ಅತ್ಯಾಚಾರ

ಹಣ ಮರಳಿ ಕೊಡುತ್ತೇವೆಂದು ಕರೆಸಿ ಹೋಂ ಗಾರ್ಡ್‌ ಮೇಲೆ ನಾಲ್ವರಿಂದ ಅತ್ಯಾಚಾರ

Koppala News: ಸಂತ್ರಸ್ತೆ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ಆರೋಪಿ ಆಕೆಯನ್ನು ಬೈಕ್‌ನಲ್ಲಿ ಕರೆದೊಯ್ದು ಮದ್ಲೂರ ಗ್ರಾಮದ ಬಳಿ ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇನ್ನು ಮೂವರು ಸೇರಿಕೊಂಡಿದ್ದಾರೆ. ಅವರು ಮಹಿಳೆಗೆ ಜ್ಯೂಸ್ ಎಂದು ಹೇಳಿ ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ನಂತರ ನಾಲ್ವರು ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಕುಷ್ಟಗಿ ಮತ್ತು ಮದ್ಲೂರ ಸೀಮೆಯಲ್ಲಿ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

PM Kisan Yojana: ರೈತರಿಗೆ ಸಿಹಿ ಸುದ್ದಿ, ನಾಳೆ ಪಿಎಂ ಕಿಸಾನ್‌ ಯೋಜನೆ ಹಣ ಬಿಡುಗಡೆ

ಸಿಹಿ ಸುದ್ದಿ, ನಾಳೆ ಪಿಎಂ ಕಿಸಾನ್‌ ಯೋಜನೆ ಹಣ ಬಿಡುಗಡೆ

ಕೇಂದ್ರ ಸರ್ಕಾರದ ಮಹತ್ವದ ಪಿಎಂ ಕಿಸಾನ್‌ ಯೋಜನೆಯ 21ನೇ ಕಂತು ನಾಳೆ (ನ.19) ಬಿಡುಗಡೆಯಾಗಲಿದೆ. ಈ ಯೋಜನೆಯನ್ನು ಫೆಬ್ರವರಿ 24, 2019 ರಂದು ಪ್ರಾರಂಭಿಸಲಾಯಿತು. ಈ ಯೋಜನೆಯ (PM Kisan Yojana) ಅಡಿಯಲ್ಲಿ ಇಲ್ಲಿಯವರೆಗೆ ದೇಶದ 11 ಕೋಟಿಗೂ ಅಧಿಕ ರೈತ ಕುಟುಂಬಗಳಿಗೆ 20 ಕಂತುಗಳಲ್ಲಿ ಒಟ್ಟು 3.70 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.

Basavanagudi Kadalekai Parishe: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಚಾಲನೆ, ಐದು ದಿನಗಳ ಸಂಭ್ರಮ

ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಚಾಲನೆ, 5 ದಿನ ಸಂಭ್ರಮ

ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ (Kadalekayi parishe) ಸೋಮವಾರ (ನ.17) ಆರಂಭವಾಗಲಿದೆ. ಆದರೆ ಈ ವಾರಾಂತ್ಯದ ಎರಡು ದಿನಗಳ ಹಿಂದಿನಿಂದಲೇ ಬಸವನಗುಡಿ ರಸ್ತೆ ಹಾಗೂ ಅದರ ಆಸುಪಾಸಿನ ಪ್ರದೇಶಗಳಲ್ಲಿ ಕಡಲೆಕಾಯಿ ಸ್ಟಾಲ್‌ಗಳು, ಅಂಗಡಿ ಮಳಿಗೆಗಳು ಜನಜಂಗುಳಿಯನ್ನು ಆಕರ್ಷಿಸುತ್ತಿವೆ. ಈ ಬಾರಿ ಐದು ದಿನಗಳಿಗೆ ಪರಿಷೆಯನ್ನು ವಿಸ್ತರಿಸಲಾಗಿದ್ದು, ಬಸವನಗುಡಿ (Basavanagudi) ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

Sabarimala Temple: ಬಾಗಿಲು ತೆರೆದ ಶಬರಿಮಲೆ ಶ್ರೀ ಅಯ್ಯಪ್ಪ ಗರ್ಭಗುಡಿ, ಮಂಡಲ- ಮಕರವಿಳಕ್ಕು ಉತ್ಸವ ಆರಂಭ

ಶಬರಿಮಲೆ ಸನ್ನಿಧಾನದಲ್ಲಿ ಮಂಡಲ- ಮಕರವಿಳಕ್ಕು ಉತ್ಸವ ಆರಂಭ

ಪವಿತ್ರ ಶ್ರೀ ಶಬರಿಮಲೆ ದೇವಾಲಯದಲ್ಲಿ ಮಂಡಲ- ಮಕರವಿಳಕ್ಕು (Mandala- Makaravilakku) ಯಾತ್ರೆ ನಿನ್ನೆ ಅರಂಭವಾಗಿದೆ. ಈ ಋತುವಿಗಾಗಿ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಕೇರಳ ರಾಜ್ಯ ಸರ್ಕಾರವು ಸನ್ನಿಧಾನ, ಪಂಬಾದಾದ್ಯಂತ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ. ಎರಡು ತಿಂಗಳ ಕಾಲ ನಡೆಯುವ ಈ ವಾರ್ಷಿಕ ತೀರ್ಥಯಾತ್ರೆ ಜನವರಿ 20, 2026 ರವರೆಗೆ ಮುಂದುವರಿಯುತ್ತದೆ. ಶಬರಿಮಲೆ ಅಯ್ಯಪ್ಪ ಸನ್ನಿಧಾನ ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುತ್ತಿದ್ದು, ಮೊದಲ ದಿನವೇ ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ಬೆಟ್ಟದ ದೇವಾಲಯಕ್ಕೆ ಆಗಮಿಸಿದ್ದರು.

Mine collapse: ಕಾಂಗೋದಲ್ಲಿ ಗಣಿ ಕುಸಿತ, ಕನಿಷ್ಠ 32 ಜನ ಸಾವು: ಭಯಾನಕ ವಿಡಿಯೋ ವೈರಲ್

ಕಾಂಗೋದಲ್ಲಿ ಗಣಿ ಕುಸಿತ, ಕನಿಷ್ಠ 32 ಜನ ಸಾವು: ಭಯಾನಕ ವಿಡಿಯೋ ವೈರಲ್

ಆಫ್ರಿಕಾದ ಕಾಂಗೋ ರಿಪಬ್ಲಿಕ್‌ನಲ್ಲಿ ಗಣಿ ಕುಸಿದು 32ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಈ ಘಟನೆಯ ವಿಡಿಯೋ ವೈರಲ್‌ (Viral video) ಅಗಿದೆ. ಲುವಾಲಾಬಾ ಪ್ರಾಂತ್ಯದ ಕಲಾಂಡೋ ಸ್ಥಳದಲ್ಲಿ ಅಪಘಾತ ಸಂಭವಿಸಿದೆ. ಪ್ರತಿದಿನ ನೂರಾರು ಕಾರ್ಮಿಕರು ಈ ಗಣಿಗಾರಿಕೆ ಸ್ಥಳದಲ್ಲಿ ಕೆಲಸ ಮಾಡುತ್ತಾರೆ. ಗಣಿಯಲ್ಲಿ ಗುಂಡಿನ ಸದ್ದು ಕೇಳಿದ ನಂತರ ಕಾರ್ಮಿಕರು ಕಿರಿದಾದ ಸೇತುವೆಯ ಮೇಲೆ ಓಡಿಹೋದರು, ಇದರಿಂದಾಗಿ ಅದು ಕುಸಿದು ಬಿತ್ತು, ಜೊತೆಗೆ ಗಣಿಯ ಒಂದು ಭಾಗವೂ ಕುಸಿಯತು ಎಂದು ಗಣಿ ಸಂಸ್ಥೆ ತಿಳಿಸಿದೆ.

Karnataka government: ಹಾವು , ನಾಯಿ ಕಚ್ಚಿದರೆ ಮೊದಲು ಚಿಕಿತ್ಸೆ ಕೊಡಿ, ನಂತರ ಶುಲ್ಕ ಕೇಳಿ: ಆಸ್ಪತ್ರೆಗಳಿಗೆ ಸರಕಾರ ಆದೇಶ

ಹಾವು, ನಾಯಿ ಕಡಿತಕ್ಕೆ ಮೊದಲು ಚಿಕಿತ್ಸೆ, ನಂತರ ಶುಲ್ಕ: ಸರಕಾರ ಆದೇಶ

ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಆ್ಯಂಟಿ-ರೇಬೀಸ್ ಲಸಿಕೆಗಳು ಮತ್ತು ರೇಬೀಸ್ ಇಮ್ಯುನೊಗ್ಲೋಬುಲಿನ್‌ಗಳ ಕಡ್ಡಾಯ ಸಂಗ್ರಹ ಹೊಂದಿರಬೇಕು. ನಾಯಿ, ಹಾವು ಸೇರಿದಂತೆ ಇತರೆ ಪ್ರಾಣಿಗಳು ಕಚ್ಚಿದವರಿಗೆ (Snake bite) ಉಚಿತ ಪ್ರಾಥಮಿಕ ತಪಾಸಣೆ ಹಾಗೂ ಪ್ರಥಮ ಚಿಕಿತ್ಸೆ ಕಡ್ಡಾಯ ನೀಡಬೇಕು. ಯಾವುದೇ ಆಸ್ಪತ್ರೆ ಮುಂಗಡ ಹಣ ಕೇಳದೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

RSS Row: ಪ್ರಿಯಾಂಕ್‌ ಖರ್ಗೆ ತವರು ಚಿತ್ತಾಪುರದಲ್ಲಿ ಆರೆಸ್ಸೆಸ್‌ ಪಥಸಂಚಲನ ಯಶಸ್ವಿ

ಪ್ರಿಯಾಂಕ್‌ ಖರ್ಗೆ ತವರು ಚಿತ್ತಾಪುರದಲ್ಲಿ ಆರೆಸ್ಸೆಸ್‌ ಪಥಸಂಚಲನ ಯಶಸ್ವಿ

ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಅವರ ತವರು ಚಿತ್ತಾಪುರದಲ್ಲಿ (Chittapura) ಆರೆಸ್ಸೆಸ್‌ ಪಥಸಂಚಲನವನ್ನು ಅದ್ಧೂರಿಯಾಗಿ ಮಾಡಿ ಮುಗಿಸಿದೆ. 300 ಜನರಿಗೆ ಮಾತ್ರ ಪರೇಡ್‌ಗೆ ಅವಕಾಶ ನೀಡಲಾಗಿತ್ತು. ಪಥಸಂಚಲನದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಮತ್ತೆ ಆರ್‌ಎಸ್‌ಎಸ್‌ (RSS) ವಿರುದ್ಧ ಗುಡುಗಿದ್ದಾರೆ. ಚಿತ್ತಾಪುರದಲ್ಲಿ ನಾವು ಹೇಳಿದಂತೆ ಆರ್‌ಎಸ್‌ಎಸ್ ಪಥಸಂಚಲನ ನಡೆದಿದೆ ಎಂದು ಟಾಂಗ್‌ ಕೊಟ್ಟಿದ್ದಾರೆ.

Road Accident: ಬಂಟ್ವಾಳದಲ್ಲಿ ಅಪಘಾತ, ಉಡುಪಿ ಶ್ರೀಕೃಷ್ಣ ಮಠಕ್ಕೆ ಹೊರಟಿದ್ದ ಮೂವರು ಸಾವು

ಬಂಟ್ವಾಳದಲ್ಲಿ ಅಪಘಾತ, ಉಡುಪಿ ಶ್ರೀಕೃಷ್ಣ ಮಠಕ್ಕೆ ಹೊರಟಿದ್ದ ಮೂವರು ಸಾವು

Dakshina Kannada: ಬಿಸಿ ರೋಡಿನ ಸರ್ಕಲ್‌ನಲ್ಲಿ ಇನ್ನೋವಾ ಕಾರು ಬಂದು ಎನ್.ಜಿ ಸರ್ಕಲ್‌ಗೆ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಕಾರಿನಲ್ಲಿದ್ದ ರಮ್ಯ (23), ರವಿ ‌(64), ನಂಜಮ್ಮ (75) ಮೃತ ದುರ್ದೈವಿಗಳು. ಮೃತರು ಬೆಂಗಳೂರಿನ ಪೀಣ್ಯದವರಾಗಿದ್ದು, ಉಡುಪಿ ಶ್ರೀಕೃಷ್ಣ ಮಠಕ್ಕೆ ಕೃಷ್ಣನ ದರ್ಶನಕ್ಕೆಂದು ಹೊರಟಿದ್ದರು. ಕಾರಿನಲ್ಲಿ ಇದ್ದ ಪ್ರಯಾಣಿಕರಲ್ಲಿ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Loading...