ಎಂಎಂಡಿಆರ್ ತಿದ್ದುಪಡಿ ಕಾಯ್ದೆ-2026’ರ ಒಳನೋಟ
ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ-2026 ಅನ್ನು ಕೇವಲ ಹಣಕಾಸಿನ ಅಥವಾ ನಿಯಂತ್ರಕ ತಿದ್ದುಪಡಿಯಾಗಿ ನೋಡಬಾರದು. ಬದಲಿಗೆ, ಗಣಿಗಾರಿಕೆ ಉದ್ಯಮದ ಭವಿಷ್ಯಕ್ಕಾಗಿ ಭಾರತವನ್ನು ಸಿದ್ಧಪಡಿಸುವ ಪ್ರಮುಖ ಹೆಜ್ಜೆಯಾಗಿ ನೋಡಬೇಕು. ಇಂದು ನಮ್ಮ ಖನಿಜ ವಲಯದ ಮುಂದಿರುವ ದೊಡ್ಡ ಸವಾಲೆಂದರೆ ಅದು ಸಂಪನ್ಮೂಲಗಳು ಅಥವಾ ಪ್ರತಿಭೆಗಳ ಅನುಪಸ್ಥಿತಿಯಲ್ಲ, ಬದಲಿಗೆ, ಲಭ್ಯವಿರುವ ತಂತ್ರಜ್ಞಾನ ಮತ್ತು ಗಣಿಗಳಲ್ಲಿ ಅದರ ದೊಡ್ಡ ಪ್ರಮಾಣದ ನಿಯೋಜನೆಯ ಕೊರತೆ.