ಚೇತನ್ನ ಈ ಮಾತಿಗೆ ಭಾವಿ ಪತಿಯನ್ನು ಕೊಂದಳಾ ಸಿಯಾ?
ಉದ್ಯಮಿ ಹತ್ಯೆ ಕೇಸ್ಗೆ ಸಂಬಂಧಿಸಿದಂಗೆ ಎಸ್ಐಟಿ ಹಲವು ಆಯಾಮದಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿ ಸಿಯಾ ಹಾಗೂ ಚೇತನ್ನನ್ನು ವಿಚಾರಣೆಗೆ ಒಳಪಡಿಸಿದೆ. ಕೊಲೆ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದ್ದು, ಸಿಯಾ ಗೋಯಲ್ ಕೇತನ್ನನ್ನು ಕೊಲೆ ಮಾಡಲು ಕಾರಣ ಊಹಿಸಲಾಗಿದೆ. ಮೂಲಗಳ ಪ್ರಕಾರ, ಸಿಯಾಳ ಪ್ರಿಯಕರ ಚೇತನ್ ಚೌಧರಿ ತನ್ನ ವೃತ್ತಿಜೀವನದಲ್ಲಿ ನೆಲೆಗೊಳ್ಳಲು ಬಯಸಿದ್ದರಿಂದ ಮದುವೆಯಾಗಲು ಕನಿಷ್ಠ ಮೂರು ವರ್ಷಗಳಾದರೂ ಕಾಯುವಂತೆ ಕೇಳಿಕೊಂಡಿದ್ದ