ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರು ನಗರ

ಇವೈ ಇಂಡಿಯಾ ಮತ್ತು ಯು.ಪಿ.ಇ.ಎಸ್. ಉದ್ಯಮ-ಸಂಯೋಜಿತ ಶಿಕ್ಷಣದಲ್ಲಿ ಹೊಸ ಮಾನದಂಡ ಸ್ಥಾಪನೆ; ಏಳು ಹೊಸ ಕಾರ್ಯಕ್ರಮಗಳ ಆರಂಭ

ಉದ್ಯಮ-ಸಂಯೋಜಿತ ಶಿಕ್ಷಣದಲ್ಲಿ ಹೊಸ ಮಾನದಂಡ ಸ್ಥಾಪನೆ

ಹೊಸ ಎಂ.ಬಿ.ಎ. ಕಾರ್ಯಕ್ರಮಗಳಲ್ಲಿ ಎಂ.ಬಿ.ಎ. ಎಐ ಫಾರ್ ಬಿಸಿನೆಸ್, ಎಂ.ಬಿ.ಎ. ಫೈನಾನ್ಷಿ ಯಲ್ ಟೆಕ್ನಾಲಜಿ, ಮತ್ತು ಎಂ.ಬಿ.ಎ. ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಅಂಡ್ ಕ್ಯಾಪಿಟಲ್ ಮಾರ್ಕೆಟ್ಸ್ ಸೇರಿವೆ. ಅಂಡರ್‌ಗ್ರಾಜುಯೇಟ್ ಮಟ್ಟದಲ್ಲಿ ಬಿ.ಬಿ.ಎ. ಡೇಟಾ ಸೈನ್ಸ್ ಅಂಡ್ ಎಐ, ಬಿ.ಕಾಂ ಅಕೌಂಟಿಂಗ್ ಅಂಡ್ ಫೈನಾನ್ಸ್, ಬಿ.ಕಾಂ ಬ್ಯಾಂಕಿಂಗ್ ಅಂಡ್ ಇನ್ಷೂರೆನ್ಸ್, ಮತ್ತು ಬಿ.ಕಾಂ ಇಂಟರ್‌ನ್ಯಾಷನಲ್ ಫೈನಾನ್ಸ್ ಕಾರ್ಯಕ್ರಮಗಳು ಆರಂಭಗೊಂಡಿವೆ.

Actress Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯ ಕಂಡು ನಟಿ ರಮ್ಯಾ ಕಣ್ಣೀರು; ಪ್ರಾಣಿ ಹಿಂಸೆ ವಿರುದ್ಧ ಆಕ್ರೋಶ

ಬೀದಿ ನಾಯಿಗಳ ಮೇಲಿನ ಕ್ರೌರ್ಯ ನೋಡಿ ನಟಿ ರಮ್ಯಾ ಕಣ್ಣೀರು

Brutality on street dogs: ಬೆಂಗಳೂರಿನ ನಗರದ ಕಗ್ಗದಾಸಪುರದಲ್ಲಿ ಬೀದಿ ನಾಯಿಗಳನ್ನು ಚೀಲದಲ್ಲಿ ಕಟ್ಟಿ ಅಮಾನವೀಯಾಗಿ ಸಾಗಿಸಿದ್ದ ಘಟನೆ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರಾಣಿಪ್ರಿಯರಿಂದ ಬೃಹತ್ ಪ್ರತಿಭಟನೆ ನಡೆದಿದಿದೆ. ಈ ವೇಳೆ ಶ್ವಾನಗಳ ಮೇಲೆ ದೌರ್ಜನ್ಯವನ್ನು ನೆನೆದು ಸ್ಯಾಂಡಲ್‌ವುಡ್‌ ನಟಿ ರಮ್ಯಾ ಕಣ್ಣೀರು ಹಾಕಿದ್ದಾರೆ.

Asha Bhosle Death: ಸ್ವರ ಸಾಮ್ರಾಜ್ಞಿಯನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ: ಆಶಾ ಭೋಸ್ಲೆ ನಿಧನಕ್ಕೆ ಸಿಎಂ ಸಂತಾಪ

ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

CM Siddaramaiah: ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಹೃದಯಾಘಾತದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿ ವಿವಿಧ ರಾಜಕೀಯ ನಾಯಕರು, ಸಿನಿಮಾ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

MLC Abdul jabbar: ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್; ಶೀಘ್ರದಲ್ಲೇ ನೂತನ ಸಮಿತಿ ರಚನೆ

ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕೆಂಬ ಒತ್ತಾಯವಿತ್ತು. ಆದರೆ, ತಮ್ಮ ಬೇಡಿಕೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಎಂಎಲ್‌ಸಿ ಹಾಗೂ ಟಿಕೆಟ್‌ ಆಕಾಂಕ್ಷಿ ಅಬ್ದುಲ್ ಜಬ್ಬಾರ್ ಸಹ ಪ್ರಚಾರದಿಂದ ದೂರ ಉಳಿದಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಹೈಕಮಾಂಡ್‌ ಮುಂದಾಗಲಿದೆ ಎಂಬ ಮಾಹಿತಿ ಬೆನ್ನಲ್ಲೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್‌ ಜಬ್ಬಾರ್‌ ರಾಜೀನಾಮೆ ನೀಡಿದ್ದಾರೆ.

Car Accident: ಸಾವಿಗೆ ಹೋಗಿ ಬರುತ್ತಿದ್ದ ವ್ಯಕ್ತಿಗೆ ಆಕ್ಸಿಡೆಂಟ್‌, ಪತ್ನಿಯ ಎದುರೇ ಮರಣ

ಸಾವಿಗೆ ಹೋಗಿ ಬರುತ್ತಿದ್ದ ವ್ಯಕ್ತಿಗೆ ಆಕ್ಸಿಡೆಂಟ್‌, ಪತ್ನಿಯ ಎದುರೇ ಮರಣ

ಬೆಂಗಳೂರು- ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಪಾರ್ಕಿಂಗ್ ಲಾಟ್‌ನಲ್ಲಿ ದುರಂತ ಸಂಭವಿಸಿದೆ. ಪಾರ್ಕಿಂಗ್ ಲಾಟ್ ಮೇಲ್ವಿಚಾರಕ ಕಾರು ರಿವರ್ಸ್ ತೆಗೆಯುವಾಗ ಅಲ್ಲೇ ನಿಲ್ಲಿಸಿದ ಬ್ಲಡ್ ಬ್ಯಾಂಕ್ ಬಸ್ ಬಳಿ ಶಾಮ್ ದೊರೆ ನಿಂತಿದ್ದರು. ಕಾರು ಹಾಗೂ ಬಸ್ಸಿನ ನಡುವೆ ಸಿಲುಕಿ ಶ್ಯಾಮ್‌ ಅಪ್ಪಚ್ಚಿಯಾಗಿದ್ದಾರೆ.

ಟಾಟಾ ಮೋಟಾರ್ಸ್ ಬಿಲಿಯನ್‌ ಇ- ಮೊಬಿಲಿಟಿಗೆ ಮೊದಲ ಬ್ಯಾಚ್ ಎಲೆಕ್ಟ್ರಿಕ್ ಪ್ರೈಮಾ E.55S ಅನ್ನು ತಲುಪಿಸುತ್ತದೆ; ಶೂನ್ಯ ಹೊರಸೂಸುವಿಕೆ ಸರಕು ಸಾಗಣೆಯಲ್ಲಿ ಪ್ರಗತಿ

ಟಾಟಾ ಮೋಟಾರ್ಸ್ ಬಿಲಿಯನ್‌ ಇ- ಮೊಬಿಲಿಟಿಗೆ ಮೊದಲ ಬ್ಯಾಚ್

ಇ-ಟ್ರಕ್‌ಗಳನ್ನು ಸ್ವೀಕರಿಸುತ್ತಾ, ಬಿಲಿಯನ್ ಇ & ಚಾರ್ಜ್‌ಝೋನ್‌ನ ಸಂಸ್ಥಾಪಕ ಶ್ರೀ ಕಾರ್ತಿಕೇಯ ಹರಿಯಾನಿ ಮತ್ತು ಬಿಲಿಯನ್ ಇ ಮೊಬಿಲಿಟಿಯ ಸಿಇಒ ಸಂಜೀವ್ ಕುಲಕರ್ಣಿ, "ಬಿಲಿಯನ್ ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ನಮ್ಮ ಗಮನವು ವಿಶ್ವಾಸಾರ್ಹವಾಗಿ ಮತ್ತು ಅಂತರ-ನಗರ ಮಾರ್ಗ ಗಳಿಗೆ ನೈಜ ಸರಕು ಸಾಗಣೆ ಕಾರ್ಯಾಚರಣೆಗಳಲ್ಲಿ ಪ್ರಮಾಣದಲ್ಲಿ ನಿಯೋಜಿಸಬಹುದಾದ ವಿದ್ಯುತ್ ವಾಣಿಜ್ಯ ವಾಹನ ಪರಿಹಾರಗಳನ್ನು ನಿರ್ಮಿಸುವತ್ತ ಸಾಗುತ್ತಿದೆ.

Harassment: ನನಗೆ ಕ್ಯಾನ್ಸರ್‌ ಇದೆ, ನಗ್ನ ಫೋಟೋ ಕಳಿಸು: ಶಿಕ್ಷಕಿಗೆ ಕಾಮುಕನ ಕಿರುಕುಳ!‌

ನನಗೆ ಕ್ಯಾನ್ಸರ್‌ ಇದೆ, ನಗ್ನ ಫೋಟೋ ಕಳಿಸು: ಶಿಕ್ಷಕಿಗೆ ಕಾಮುಕನ ಕಿರುಕುಳ!‌

ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಬೆಂಗಳೂರಿಗೆ ಬಂದು ದೈಹಿಕ ಸಂಬಂಧದ ಆಸೆಗೆ ಬಿದ್ದು ಮಹಿಳೆಗೆ ಮೊಬೈಲ್‌ ಸಂದೇಶದ ಮೂಲಕ ಕಿರುಕುಳ ನೀಡಿದ ಈ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿಸಲು ತೆರಳುತ್ತಿದ್ದಂತೆ ಯುವಕ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದ.

BMTC Shakti scam: ಪುರುಷ ಪ್ರಯಾಣಿಕರಿಗೆ ಶಕ್ತಿ ಯೋಜನೆ ಟಿಕೆಟ್​​, ಯುಪಿಐ ಸ್ಕ್ಯಾನ್ ಹಗರಣ: ನಾಲ್ವರು ಬಿಎಂಟಿಸಿ ನೌಕರರು ಸಸ್ಪೆಂಡ್​​

ಪುರುಷರಿಗೆ ಶಕ್ತಿ ಟಿಕೆಟ್​​, ಯುಪಿಐ ಸ್ಕ್ಯಾನ್ ಹಗರಣ: 4 ನೌಕರರ ಸಸ್ಪೆಂಡ್​​

ಶಕ್ತಿ ಯೋಜನೆಯ ಫ್ರೀ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ಉಚಿತ ಪ್ರಯಾಣ ಎಂದು ಪ್ರಿಂಟ್ ಮಾಡಲಾಗಿದೆ. ಹೀಗಾಗಿ ಕನ್ನಡ ಓದಲು ಬಾರದ ಪ್ರಯಾಣಿಕರನ್ನೇ ಟಾರ್ಗೆಟ್​ ಮಾಡಿ ಅವರಿಗೆ ಟಿಕೆಟ್​​ ನೀಡಿ ಹಣ ಪಡೆಯಲಾಗುತ್ತಿತ್ತು. ತನಿಖೆಯಲ್ಲಿ ಕೆಲ ನಿರ್ವಾಹಕರ ಈ ಕಳ್ಳಾಟ ಬಯಲಾಗಿದ್ದು, ಅಕೌಂಟ್​​ನಲ್ಲಿ ಸಾವಿರಾರು ರೂಪಾಯಿ ಹಣವೂ ಪತ್ತೆಯಾಗಿದೆ.

Minority leadership: ಕವಲು ದಾರಿಯಲ್ಲಿ ಅಲ್ಪಸಂಖ್ಯಾತ ನಾಯಕತ್ವ

Minority leadership: ಕವಲು ದಾರಿಯಲ್ಲಿ ಅಲ್ಪಸಂಖ್ಯಾತ ನಾಯಕತ್ವ

ದಾವಣಗೆರೆಯಲ್ಲಿ ಟಿಕೆಟ್ ಕೈ ತಪ್ಪುತ್ತಿದ್ದಂತೆ ಕ್ಷೇತ್ರದಲ್ಲಿದ್ದ 80 ಸಾವಿರಕ್ಕೂ ಹೆಚ್ಚಿನ ಅಲ್ಪಸಂಖ್ಯಾತ ಮತದಾರರಲ್ಲಿ ಬಹುತೇಕ ಮಂದಿ ಆಕ್ರೋಶಗೊಂಡಿದ್ದರು. ಇದನ್ನು ಸಮಾಧಾನಗೊಳಿಸಲು ಸಚಿವ ಜಮೀರ್ ಅವರು ಬರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ನಂತರ ಪಕ್ಷದ ನಾಯಕರೆ ಸೇರಿದ್ದ ನಾಮ ಪತ್ರ ಸಲ್ಲಿಕೆಗಾದರೂ ಸಿಗುತ್ತಾರೆ ಎನ್ನುವ ಮಾತಿತ್ತು. ಆದರೆ ಎಲ್ಲ ನಿರೀಕ್ಷೆಗಳು ಹುಸಿಯಾಗಿತ್ತು.

Vande Bharat Train: ಬೆಂಗಳೂರಿನಿಂದ ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು

ಬೆಂಗಳೂರಿನಿಂದ ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು

ಸುಮಾರು 1,136 ಕಿಮೀ ದೂರವನ್ನು ಈ ರೈಲು 23ರಿಂದ 24 ಗಂಟೆಗಳ ಅವಧಿಯಲ್ಲಿ ಸಾಗುತ್ತದೆ. ಹೊಸ ವಂದೇ ಭಾರತ್ ಸ್ಲೀಪರ್ ರೈಲು ಪರಿಚಯದಿಂದ ಪ್ರಯಾಣ ಸಮಯವು ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದ್ದು, ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಮತ್ತು ವೇಗದ ಸೇವೆ ಲಭ್ಯವಾಗಲಿದೆ.

PUC Result: ಪಿಯುಸಿ ಫಲಿತಾಂಶ: ಎಪಿಎಸ್ ಶಿಕ್ಷಣ ಸಂಸ್ಥೆಯಿಂದ ಉನ್ನತ ಸಾಧನೆ

ಪಿಯುಸಿ ಫಲಿತಾಂಶ: ಎಪಿಎಸ್ ಶಿಕ್ಷಣ ಸಂಸ್ಥೆಯಿಂದ ಉನ್ನತ ಸಾಧನೆ

ಬಹುಪಾಲು ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು, ಅನೇಕ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ (85% ಮತ್ತು ಅದಕ್ಕಿಂತ ಹೆಚ್ಚು) ಫಲಿತಾಂಶ ದಾಖಲಿಸಿದ್ದಾರೆ. ಆಟೋ ಚಾಲಕರು, ಅಡುಗೆ ಮಾಡುವ ಮತ್ತು ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡವರ ಕುಟುಂಬದವರ ಮಕ್ಕಳ ಸಾಧನೆ ಶ್ಲಾಘನೀಯ

ಪಾರ್ಕಿನ್ಸನ್ಸ್ ರೋಗದ ಕುರಿತು ಅರಿವು: ರೋಗಲಕ್ಷಣಗಳನ್ನು ಮೊದಲೇ ಕಂಡುಕೊಳ್ಳಲು ಮತ್ತು ಜೀವನ ಬದಲಾಯಿಸುವ ಚಿಕಿತ್ಸೆಗಳನ್ನು ಪಡೆಯಲು ತಜ್ಞರ ಕರೆ

ಪಾರ್ಕಿನ್ಸನ್ಸ್ ರೋಗದ ಕುರಿತು ಅರಿವು

ಪಾರ್ಕಿನ್ಸನ್ಸ್ ರೋಗವು ಗಂಭೀರ, ಕೇಂದ್ರ ನರಮಂಡಲದ ಕ್ಷೀಣಗೊಳ್ಳುವ ಸಮಸ್ಯೆಯಾಗಿದ್ದು ಮೆದುಳಿ ನಲ್ಲಿ ಡೋಪಮೈನ್ ಉತ್ಪಾದಿಸುವ ನ್ಯೂರಾನ್ ಗಳು ಕ್ರಮೇಣ ನಷ್ಟವಾಗುತ್ತವೆ, ಇದರಿಂದ ಚಲನೆ ಮತ್ತು ಸಹಯೋಗ ದುರ್ಬಲಗೊಳ್ಳುತ್ತದೆ. ನಿರ್ದಿಷ್ಟ ಕಾರಣವು ಅಗೋಚರವಾಗಿದ್ದರೂ ಪರಿಣಿತರು ಅನುವಂಶಿಕ ಮತ್ತು ಪಾರಿಸರಿಕ ಅಂಶಗಳ ಸಂಯೋಜನೆಯಿಂದ ಉಂಟಾಗುತ್ತದೆ ಎಂದು ನಂಬಿದ್ದಾರೆ.

ಆನೇಕಲ್ ತಾಲ್ಲೂಕಿನಲ್ಲಿ ಸತತ 4ನೇ ಬಾರಿ ನೂರಕ್ಕೆ ನೂರರಷ್ಟು ಫಲಿತಾಂಶ

ಆನೇಕಲ್ ತಾಲ್ಲೂಕಿನಲ್ಲಿ ಸತತ 4ನೇ ಬಾರಿ ನೂರಕ್ಕೆ ನೂರರಷ್ಟು ಫಲಿತಾಂಶ

ಪರೀಕ್ಷೆ ಬರೆದ ಒಟ್ಟು 292 ವಿದ್ಯಾರ್ಥಿಗಳಲ್ಲಿ 163 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದಾರೆ. ಮತ್ತು 129 ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ವಿಜ್ಞಾನ ವಿಭಾಗದ ಜೆ. ತನುಶ್ರೀ ಎಂಬ ವಿದ್ಯಾರ್ಥಿನಿ 600 ಕ್ಕೆ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ ಪಡೆದುಕೊಂಡಿದ್ದಾರೆ.

Lamborghini case: ಲ್ಯಾಂಬೊರ್ಗಿನಿ ಕಾರಿನಲ್ಲಿಯೇ ಹೋಗಿ ರಸ್ತೆ ಕಸ ಗುಡಿಸಿ ಬನ್ನಿ: ಆರೋಪಿಗೆ ಹೈಕೋರ್ಟ್‌ ಸೂಚನೆ

ಲ್ಯಾಂಬೊರ್ಗಿನಿ ಕಾರಲ್ಲಿಯೇ ಹೋಗಿ ರಸ್ತೆ ಕಸ ಗುಡಿಸಿ: ಆರೋಪಿಗೆ ಹೈಕೋರ್ಟ್‌

ಮನುಷ್ಯನ ಪ್ರಾಣಕ್ಕೆ ಹಾನಿಯಾಗುವಂಥ ಸೈಲೆನ್ಸರ್‌ ಅಳವಡಿಸಿಕೊಂಡಿರುವ ಲ್ಯಾಂಬೊರ್ಗಿನಿ ಕಾರನ್ನು ಮೈಸೂರು ರಸ್ತೆ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಕುರಿತು ಬೆಂಗಳೂರಿನ ಕೆಂಗೇರಿ ಸಂಚಾರಿ ಠಾಣೆಯಲ್ಲಿ ಚಿರಂತನ್‌ ಎಂಬವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

Peenya Elevated Flyover: ಪೀಣ್ಯ ಎಲಿವೇಟೆಡ್ ಫ್ಲೈಓವರ್‌ ಐದು ದಿನ ಬಂದ್, ಪರ್ಯಾಯ ಮಾರ್ಗ ಬಳಸಲು ಸೂಚನೆ

ಪೀಣ್ಯ ಎಲಿವೇಟೆಡ್ ಫ್ಲೈಓವರ್‌ ಐದು ದಿನ ಬಂದ್, ಪರ್ಯಾಯ ಮಾರ್ಗ ಬಳಸಲು ಸೂಚನೆ

ಏಪ್ರಿಲ್ 13ರ ಬೆಳಗ್ಗೆ 5 ಗಂಟೆಯಿಂದ ಆರಂಭಗೊಂಡು, ಏಪ್ರಿಲ್ 17ರ ಬೆಳಗ್ಗೆ 11 ಗಂಟೆಯವರೆಗೆ‌ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ವಾಹನ ಸವಾರರಿಗೆ ತೊಂದರೆಯಾಗದಂತೆ ಪೊಲೀಸರು ಬದಲಿ ಮಾರ್ಗಗಳನ್ನು ಸೂಚಿಸಿದ್ದಾರೆ.

Bengaluru Rains: ಬೆಂಗಳೂರಿನಲ್ಲಿ ಭಾರಿ ಮಳೆ ಹಿನ್ನೆಲೆ ವಿಮಾನ ಸಂಚಾರ ವ್ಯತ್ಯಯ; ರಾಜ್ಯಪಾಲರಿದ್ದ ವಿಮಾನ ಮಂಗಳೂರಿಗೆ ವಾಪಸ್!

ಭಾರಿ ಮಳೆ; ರಾಜ್ಯಪಾಲರಿದ್ದ ವಿಮಾನ ಮಂಗಳೂರಿಗೆ ವಾಪಸ್!

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಭಾಗಶಃ ಮೋಡ ಕವಿದ ವಾತಾವರಣ ಇರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 34 ° C ಮತ್ತು 24 ° C ಇರುವ ಸಾಧ್ಯತೆ ಹೆಚ್ಚು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

KCET 2026 Admit Card: ಸಿಇಟಿ 2026 ಪ್ರವೇಶ ಪತ್ರ ಬಿಡುಗಡೆ; ಡೌನ್‌ಲೋಡ್‌ ಮಾಡುವ ವಿಧಾನ ಇಲ್ಲಿದೆ

ಸಿಇಟಿ 2026 ಪ್ರವೇಶ ಪತ್ರ ಬಿಡುಗಡೆ; ಡೌನ್‌ಲೋಡ್‌ ವಿಧಾನ ಇಲ್ಲಿದೆ

Karnataka Common Entrance Test: ಸಿಇಟಿಗೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿರುವ ಅರ್ಹ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಗದಿತ ಲಿಂಕ್ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.

Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್‌ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ

ಪೆಪ್ಸ್ ಮ್ಯಾಟ್ರೆಸ್‌ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ

ಪೆಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಜಿ. ಶಂಕರ್ ರಾಮ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯ ಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಚಲನಚಿತ್ರ ನಿರ್ಮಾಪಕ ಹಾಗೂ ಕೆಪಿಸಿಸಿ ಸದಸ್ಯ ಉಮಾಪತಿ ಶ್ರೀನಿವಾಸ್ ಗೌಡ, ಮತ್ತು ಆನೇಕಲ್ ಕ್ಷೇತ್ರದ ಶಾಸಕ ಬಿ.ಶಿವಣ್ಣ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಮಳಿಗೆಯನ್ನು ಲೋಕಾರ್ಪಣೆ ಮಾಡಿದರು.

ದ್ವಿತೀಯ ಪಿಯುಸಿ ಫಲಿತಾಂಶ: ದೀಕ್ಷಾ ವೇದಾಂತುಗೆ ಅಗ್ರ 10 ರಲ್ಲಿ 30 ರ‍್ಯಾಂಕ್‌ʼಗಳು

ದೀಕ್ಷಾ ವೇದಾಂತುಗೆ ಅಗ್ರ 10 ರಲ್ಲಿ 30 ರ‍್ಯಾಂಕ್‌ʼಗಳು

ಜೆಇಇ, ನೀಟ್ ಮತ್ತು ಕೆಸಿಇಟಿಯಂತಹ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಜತೆಗೆ ರಾಜ್ಯ ಮಟ್ಟದ ಪರೀಕ್ಷೆಗಳಲ್ಲಿಯೂ ದೀಕ್ಷಾ ವೇದಾಂತು ತನ್ನ ಯಶೋಗಾಥೆ ಮುಂದು ವರಿಸಿದೆ. ವಿಜ್ಞಾನ ವಿಭಾಗದ 21 ವಿದ್ಯಾರ್ಥಿಗಳು ಮತ್ತು ವಾಣಿಜ್ಯ ವಿಭಾಗದ 4 ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ.

ಬೆಂಗಳೂರು ಉತ್ತರ ನಗರ ಪಾಲಿಕೆ ಫೋನ್-ಇನ್ ಕಾರ್ಯಕ್ರಮ; ನಾಗರಿಕರ ಸಮಸ್ಯೆಗೆ ಆಯುಕ್ತರಿಂದ ಸ್ಪಂದನೆ

ಬೆಂಗಳೂರು ಉತ್ತರ ನಗರ ಪಾಲಿಕೆ ಫೋನ್-ಇನ್ ಕಾರ್ಯಕ್ರಮ

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ನಾಗರಿಕರ ಸಮಸ್ಯೆಗಳನ್ನು ಆಲಿಸಿ, ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಇಂದು ಬೆಳಿಗ್ಗೆ 7 ಗಂಟೆಯಿಂದ ಅಮೃತಹಳ್ಳಿ ಮುಖ್ಯ ರಸ್ತೆಯಲ್ಲಿರುವ ನಗರ ಪಾಲಿಕೆಯ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಫೋನ್–ಇನ್ ಕಾರ್ಯಕ್ರಮ ನಡೆಯಿತು. ನಾಗರಿಕರಿಂದ ಬಂದಂತಹ ದೂರುಗಳಿಗೆ ತಕ್ಷಣ ಸ್ಪಂದಿಸಿ, ಇರುವ ಸಮಸ್ಯೆಗಳನ್ನು ಬಗೆಹರಿಸಲು ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Electric Stove: ಎಲ್‌ಪಿಜಿಯಂತೆ ಜ್ವಾಲೆ ಹರಡುವ ವಿದ್ಯುತ್‌ ಸ್ಟೌ ಪ್ರದರ್ಶಿಸಿದ ಜೋಶಿ; ಏನಿದರ ವಿಶೇಷತೆ?

ಎಲ್‌ಪಿಜಿಯಂತೆ ಜ್ವಾಲೆ ಹರಡುವ ವಿದ್ಯುತ್‌ ಸ್ಟೌ ಪ್ರದರ್ಶಿಸಿದ ಜೋಶಿ

ಆಹಾರ ಮತ್ತು ನಾಗರಿಕ ಸರಬರಾಜು ಸಚಿವರ ಪ್ರಲ್ಹಾದ್‌ ಜೋಶಿ ಅವರು ಎಲ್‌ಪಿಜಿ ಇಲ್ಲದೆ ಜ್ವಾಲೆಯನ್ನು ಉತ್ಪಾದಿಸುವ ವಿನೂತನ ಮಾದರಿ, ತಂತ್ರಜ್ಞಾನದ ʼವಿದ್ಯುತ್ ಸ್ಟೌʼ ಅನ್ನು ಪ್ರದರ್ಶಿಸಿ, ಪರಿಚಯಿಸಿದ್ದಾರೆ. ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಇಂತಹ ಸ್ಟೌಗಳ ಉತ್ಪಾದನೆಗೆ ಸಿದ್ಧತೆ ನಡೆಸುವಂತೆ ಗಮನ ಸೆಳೆದಿದ್ದಾರೆ.

2025-26ನೇ ಸಾಲಿನಲ್ಲಿ 19.44 ಕೋಟಿ ರೂ. ಲಾಭ ಗಳಿಸಿದ ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್

ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್‌ಗೆ 19.44 ಕೋಟಿ ರೂ. ಲಾಭ

ಬೆಂಗಳೂರು ನಗರದ ದಿ ಮಲ್ಲೇಶ್ವರಂ ಕೋ- ಆಪರೇಟಿವ್ ಬ್ಯಾಂಕ್ 2025-26ನೇ ಆರ್ಥಿಕ ಸಾಲಿನಲ್ಲಿ 19.44 ಕೋಟಿ ರೂ. ಲಾಭ ಗಳಿಸಿದೆ. ಶತಮಾನದ ಇತಿಹಾಸ ಇರುವ ಈ ಬ್ಯಾಂಕ್ ಬೆಂಗಳೂರಿನಲ್ಲಿ ಮುಖ್ಯ ಶಾಖೆ ಸೇರಿದಂತೆ ಒಟ್ಟು ಆರು ಶಾಖೆಗಳನ್ನು ಹೊಂದಿದೆ.

Zombie Drug: ಬೆಂಗಳೂರಿನಲ್ಲಿ ಝಾಂಬಿ ಡ್ರಗ್ ಹಾವಳಿ ಇಲ್ಲ; ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಕಮಿಷನರ್‌

ಝಾಂಬಿ ಡ್ರಗ್ ಹಾವಳಿ ಇಲ್ಲ; ವಿಡಿಯೊ ಶೇರ್‌ ಮಾಡಿದ್ದ ವ್ಯಕ್ತಿ ಅರೆಸ್ಟ್‌

ಬೆಂಗಳೂರಿನಲ್ಲಿ ಝಾಂಬಿ ಡ್ರಗ್‌ ಹಾವಳಿ ಶುರುವಾಗಿದೆ ಎಂಬ ಸುದ್ದಿ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಪೋಸ್ಟ್ ಮಾಡುವ ಮೊದಲು ಯೋಚಿಸಿ. ಸುಳ್ಳು ಸುದ್ದಿ ಸತ್ಯಕ್ಕಿಂತ ವೇಗವಾಗಿ ಹರಡುತ್ತದೆ ಮತ್ತು ಅದರ ಹಾನಿ ಬಹಳ ದೀರ್ಘಕಾಲ ಉಳಿಯುತ್ತದೆ. ಜವಾಬ್ದಾರಿಯಿಂದ ವರ್ತಿಸಿ. ಮಾಹಿತಿ ಹಂಚಿಕೊಳ್ಳುವ ಮುನ್ನ ಖಚಿತಪಡಿಸಿಕೊಳ್ಳಿ ಎಂದು ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.

ಹುಲಿಕಲ್ ಘಾಟ್‌ ದುರಂತ; ಮೃತ ಮೂವರು ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಹುಲಿಕಲ್ ಘಾಟ್‌ ದುರಂತ; ಮೃತ 3 ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ

Hulikal Ghat road landslide: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಲಿಕಲ್ ಘಾಟಿ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿಯ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಕುಟುಂಬಗಳಿಗೆ ಸಿಎಂ ಸಿದ್ದರಾಮಯ್ಯ ಪರಿಹಾರ ಘೋಷಿಸಿದ್ದಾರೆ.

Loading...