ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪರಮ್ ಕಲ್ಚರ್ ವತಿಯಿಂದ ಆ.24ಕ್ಕೆ ಪರಮ್ ವಿಹಾರ

ನಗರದ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿರುವ ʻಪರಮ್ ಕಲ್ಚರ್ʼ ತನ್ನ ಮಾಸಿಕ ಕಲಾ ಪ್ರದರ್ಶನವಾದ ʻಪರಮ್ ವಿಹಾರʼ ಕಾರ್ಯಕ್ರಮವನ್ನು ಸನಾತನ ಕಲಾಕ್ಷೇತ್ರದಲ್ಲಿ ಆಗಸ್ಟ್ 24ರಂದು ಆಯೋಜಿಸಿದೆ. ಸಾಂಪ್ರದಾಯಿಕ ಮತ್ತು ಸಮಕಾಲೀನ ಕಲಾ ಪ್ರಕಾರಗಳ ಮಿಶ್ರಣವುಳ್ಳ ಕಾರ್ಯಕ್ರಮ ಇದಾಗಿದ್ದು, ಜಗಲಿ ಟೇಲ್ಸ್‌, ತಂತ್ರ ಕಾರ್ಯಕ್ರಮಗಳು ಮಾಹಿತಿಯುಕ್ತ ಮನೋರಂಜನೆ ನೀಡಲು ಸಜ್ಜಾಗಿದೆ.

ಪರಮ್ ಕಲ್ಚರ್ ವತಿಯಿಂದ ಆ.24ಕ್ಕೆ ಪರಮ್ ವಿಹಾರ

Ashok Nayak Ashok Nayak Aug 23, 2025 4:17 PM

ಬೆಂಗಳೂರು: ನಗರದ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿರುವ ʻಪರಮ್ ಕಲ್ಚರ್ʼ ತನ್ನ ಮಾಸಿಕ ಕಲಾ ಪ್ರದರ್ಶನವಾದ ʻಪರಮ್ ವಿಹಾರʼ ಕಾರ್ಯಕ್ರಮವನ್ನು ಸನಾತನ ಕಲಾಕ್ಷೇತ್ರದಲ್ಲಿ ಆಗಸ್ಟ್ 24ರಂದು ಆಯೋಜಿಸಿದೆ. ಸಾಂಪ್ರದಾಯಿಕ ಮತ್ತು ಸಮಕಾಲೀನ ಕಲಾ ಪ್ರಕಾರಗಳ ಮಿಶ್ರಣವುಳ್ಳ ಕಾರ್ಯಕ್ರಮ ಇದಾಗಿದ್ದು, ಜಗಲಿ ಟೇಲ್ಸ್‌, ತಂತ್ರ ಕಾರ್ಯಕ್ರಮಗಳು ಮಾಹಿತಿಯುಕ್ತ ಮನೋರಂಜನೆ ನೀಡಲು ಸಜ್ಜಾಗಿದೆ. ಪ್ರತಿ ತಿಂಗಳ ನಾಲ್ಕನೇ ಭಾನುವಾರದಂದು ನಡೆಯುವ ಈ ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯ ಶ್ರೀಮಂತತೆಯ ಸಾರವನ್ನೊಳಗೊಂಡಿರುವುದಲ್ಲದೆ, ಉದಯೋನ್ಮುಖ ಕಲಾವಿದರಿಗೆ ವೇದಿಕೆಯನ್ನು ಒದಗಿಸುತ್ತಾ ಬಂದಿದೆ.

ವಿದ್ವಾನ್ ಪ್ರಮಥ್ ಕಿರಣ್ ಅವರ ನೇತೃತ್ವದಲ್ಲಿ ‘ತಂತ್ರ’: ವಿದ್ವಾನ್ ಪ್ರಮಥ್ ಕಿರಣ್ ಅವರ ನೇತೃತ್ವದಲ್ಲಿ ಭಾನುವಾರ ಮಧ್ಯಾಹ್ನ 2:30ರಿಂದ 4:30ರವರೆಗೆ ‘ತಂತ್ರ’ ಎಂಬ ವಿಶೇಷ ಕಾರ್ಯಾ ಗಾರದ ಮೂಲಕ ಕಾರ್ಯಕ್ರಮವು ಪ್ರಾರಂಭವಾಗಲಿದೆ. ಈ ಕಾರ್ಯಾಗಾರದಲ್ಲಿ ಸಂಗೀತಗಾರರು ಮತ್ತು ಧ್ವನಿ ತಂತ್ರಜ್ಞರು ಲೈವ್ ಸೌಂಡ್ ಪ್ರೊಡಕ್ಷನ್ ಕುರಿತು ಅಗಾಧ ಮಾಹಿತಿಯನ್ನೊದಗಿಸು ತ್ತಾರೆ. ಗೇರ್ ಹ್ಯಾಕ್‌ಗಳು ಮತ್ತು ಫೀಡ್‌ಬ್ಯಾಕ್ ನಿಯಂತ್ರಣದಂತಹ ಸೂಕ್ಷ್ಮ ತಾಂತ್ರಿಕ ವಿಷಯ ಗಳಿಂದ ಹಿಡಿದು ಅತ್ಯುತ್ತಮ ಗುಣಮಟ್ಟದ ಮತ್ತು ಸ್ಪಷ್ಟ ಆಡಿಯೋ ಮಿಕ್ಸಿಂಗ್‌ ಮಾಡುವವರೆಗಿನ ಹತ್ತು ಹಲವು ವಿಷಯಗಳ ಬಗ್ಗೆ ಈ ಕಾರ್ಯಾಗಾರದಲ್ಲಿ ಚರ್ಚಿಸಲಾಗುತ್ತದೆ.

ಇದನ್ನೂ ಓದಿ: Pooja Pillai Column: ಉಡುಪಿನ ರೂಪಾಂತರವೋ, ಓಲೈಕೆಯ ರಾಜಕಾರಣವೋ ?!

ಉದಯೋನ್ಮುಖ ಕಲಾವಿದರಿಗೆ ʻಜಗಲಿ ಟೇಲ್ಸ್ʼ ವೇದಿಕೆ

ಪರಮ್ ವಿಹಾರದ ಈ ಮಾಸಿಕ ಕಾರ್ಯಕ್ರಮದ ಭಾಗವಾಗಿ ಜಗಲಿ ಟೇಲ್ಸ್‌ ಎಲ್ಲರ ಗಮನ ಸೆಳೆಯಲಿದೆ. ‘ಜಗಲಿ ಕಟ್ಟೆ’ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಕಾರ್ಯಕ್ರಮವು ಸಂಭಾಷಣೆ ಮತ್ತು ಕಥೆಗಾರಿಕೆಗೆ ಮೀಸಲಾದ ಪ್ರಮುಖ ವೇದಿಕೆಯಾಗಿದೆ. ಇಲ್ಲಿ ಪ್ರಸಿದ್ಧ ವ್ಯಕ್ತಿಗಳು ತಮ್ಮ ಅನುಭವಗಳನ್ನು ಮತ್ತು ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಹೀಗಾಗಿ ಜಗಲಿ ಕಟ್ಟೆಯು ಉದಯೋ ನ್ಮುಖ ಕಲಾವಿದರಿಗೆ ಮೀಸಲಾದ ‘ಜಗಲಿ ಟೇಲ್ಸ್‌’ಗೆ ಪ್ರೇರಣೆಯಾಗಿದೆ.

ಈ ಕಾರ್ಯಕ್ರಮವು ಭಾನುವಾರ ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ. ಇಲ್ಲಿ ಹೊಸಬರು ಮತ್ತು ಮಕ್ಕಳನ್ನು ಒಳಗೊಂಡಂತೆ ಉದಯೋನ್ಮುಖ ಕಲಾವಿದರು ಪ್ರೇಕ್ಷಕರ ಮುಂದೆ ಹಾಡುಗಾರಿಕೆ, ನೃತ್ಯ ಮತ್ತು ಇತರ ಪ್ರದರ್ಶನಗಳನ್ನು ನೀಡಲೂ ವೇದಿಕೆಯಾಗಿದೆ. ಈ ಬಾರಿ ಜಗಲಿ ಟೇಲ್ಸ್‌ನಲ್ಲಿ ಶ್ರೀ ರೂಪಕ್ ವೈದ್ಯ ಅವರ ನೇತೃತ್ವದಲ್ಲಿ ವಿಶೇಷ ತಾಳವಾದ್ಯ ಮೇಳದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಬಳಿಕ ಗುರು ಶ್ರೀಮತಿ ರೋಹಿಣಿ ಮಂಜುನಾಥ್ ಅವರ ಕಲಾ ಸುರಭಿ ತಂಡದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಆಕರ್ಷಕ ಭರತನಾಟ್ಯ ಪ್ರದರ್ಶನ ನಡೆಯಲಿದೆ.

‘ಸಂವಾದದಿಂದ ಸಂಯೋಜನೆ’ ಎಂಬ ವಿಶೇಷ ವಿಭಾಗದಲ್ಲಿ ವಿದ್ವಾನ್ ಎನ್.ಎಸ್.ಪ್ರಸಾದ್ ಅವರೊಂದಿಗೆ ಸಂವಾದ ನಡೆಯಲಿದೆ. ಇದರಲ್ಲಿ ನೃತ್ಯಗಾರರು ಹಾಗೂ ತಬಲಾ ವಾದಕರು ಭಾಗಿಯಾಗಲಿದ್ದಾರೆ. ಈ ವಿಭಾಗವು ಸಂಗೀತ ಸಂಯೋಜನೆಗಳ ಹಿಂದಿನ ಕ್ರಿಯೇಟಿವ್‌ ತಂತ್ರಗಳ ಸೂಕ್ಷ್ಮತೆಗಳನ್ನು ಅರಿಯಲು ವಿಶಿಷ್ಟ ಅವಕಾಶವನ್ನು ಒದಗಿಸುತ್ತದೆ.

ಉಚಿತ ಪ್ರವೇಶ

ಪರಮ್‌ ಕಲ್ಚರ್ ಅರ್ಪಿಸುವ ಪರಮ್ ವಿಹಾರ ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರವೇಶ ಉಚಿತ ವಾಗಿದೆ. ಪರಮ್ ವಿಹಾರ ಕಾರ್ಯಕ್ರಮ ಮತ್ತು ಮುಂದಿನ ಈವೆಂಟ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು @paramculture ಇನ್ಸ್ಟಾಗ್ರಾಮ್ ಪೇಜ್‌ಗೆ ಭೇಟಿ ನೀಡಬಹುದು.

ಏನಿದು ಪರಮ್ ವಿಹಾರ

ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪರಮ್ ಕಲ್ಚರ್ ʻಪರಮ್ ವಿಹಾರʼ ಎಂಬ ಕಾರ್ಯಕ್ರಮದೊಂದಿಗೆ ಸಾಂಪ್ರದಾಯಿಕ ಕಲೆಗಳು ಮತ್ತು ಆಧುನಿಕ ತಂತ್ರಜ್ಞಾನದ ನಡುವೆ ಅದ್ಭುತ ಸಮ್ಮಿಲನವನ್ನು ಸೃಷ್ಟಿಸುವ ಮೂಲಕ ಒಂದು ಅನನ್ಯ ವೇದಿಕೆಯಾಗಿ ಹೊರಹೊಮ್ಮಿದೆ. ಇದು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸು ವುದಕ್ಕಿಂತ ಹೆಚ್ಚಾಗಿ, ಜ್ಞಾನ ವಿನಿಮಯ ಮತ್ತು ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ.

ಇಲ್ಲಿ ಅನುಭವಿ ಕಲಾವಿದರು ಮತ್ತು ತಂತ್ರಜ್ಞಾನ ಪರಿಣತರಿಂದ ಮಾಸ್ಟರ್‌ ಕ್ಲಾಸ್‌ಗಳು ನಡೆಯು ತ್ತವೆ. ಇದು ಕಲಾ ಕ್ಷೇತ್ರದಲ್ಲಿನ ವೃತ್ತಿಪರರಿಗೆ ಹೊಸ ದೃಷ್ಟಿಕೋನ ನೀಡುತ್ತದೆ. ಜತೆಗೆ ‘ಜಗಲಿ ಟೇಲ್ಸ್’ ನಂತಹ ವಿಭಾಗಗಳ ಮೂಲಕ ಉದಯೋನ್ಮುಖ ಯುವ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಒಂದು ಪ್ರಮುಖ ವೇದಿಕೆಯನ್ನು ಒದಗಿಸಲಾಗುತ್ತದೆ. ಇವೆಲ್ಲದರ ಜೊತೆಗೆ, ಶಾಸ್ತ್ರೀಯ ನೃತ್ಯ ಮತ್ತು ಸಂಗೀತದಂತಹ ಸಾಂಪ್ರದಾಯಿಕ ಕಲೆಗಳ ಪ್ರದರ್ಶನಗಳು ನಮ್ಮ ಪರಂಪರೆಯ ಶ್ರೀಮಂತಿಕೆ ಯನ್ನು ಎತ್ತಿಹಿಡಿಯುತ್ತವೆ.