ಗೌರಿಬಿದನೂರು : ಕೃಷಿ ಉತ್ಪನ್ನ ಮಾರುಕಟ್ಟೆಗೆ ಸುಂಕವನ್ನು ಕಟ್ಟದೇ ತಮ್ಮ ಇಷ್ಟಬಂದAತೆ ಕಮಿಷನ್ ಪಡಿಯುತ್ತಿರುವ ಹೂವಿನ ಮಾರ್ಕೆಟ್ ಮಧ್ಯವರ್ತಿಗಳ ಕಾಟದಿಂದ ರೈತರಿಗೆ ಮುಕ್ತಿ ನೀಡಬೇಕೆಂದು ರೈತರ ಪರವಾಗಿ ರೈತ ಸಂಘ ಅಧ್ಯಕ್ಷರು ಲೋಕೇಶ ಗೌಡ ಸಹಾಯಕ ನಿರ್ದೇಶಕಿ ಆಶಾಲತಾ, ಕಾರ್ಯದರ್ಶಿ ಮಾಲಿನಿ ರವರಿಗೆ ಮನವಿ ಮಾಡಿದರು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಇಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಲೋಕೇಶ ಗೌಡ ಮಾತನಾಡುತ್ತಾ, ಹೂವಿನ ಮಾರುಕಟ್ಟೆ ನಗರದಲ್ಲಿ ಮೇಲಿನ ಅಂತಸ್ಥಿನ ಮೇಲಿದ್ದು ರೈತರು ತಾವು ಬೆಳದ ಹೂವಿನ ಚೀಲಗಳನ್ನು ಮೇಲೆ ಸ್ಥಿತಿಗೆ ಕೊಂಡೊಯ್ಯಲ ಕಷ್ಟಕರವಾಗಿದೆ. ಅಲ್ಲಿನ ಮಧ್ಯವರ್ತಿಗಳು ತಮ್ಮ ಇಷ್ಟ ಬಂದಂತೆ ಕಮಿಷನ್ ತಗೊಳ್ಳುತ್ತಿದ್ದಾರೆ.ಅಲ್ಲಿನ ವರ್ತಕರು ಕೃಷಿ ಉತ್ಪನ್ನ ಮಾರುಕಟ್ಟೆ ಪರವಾನಿಗೆ ನವೀಕರಿಸಿಕೊಂಡಿಲ್ಲ. ಆದ್ದರಿಂದ ರೈತರಿಗೆ ನ್ಯಾಯ ದೊರಕಿಸ ಲು ಅಲ್ಲಿನ ಹೂವಿನ ಮಾರುಕಟ್ಟೆ ಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಅವರಣಕ್ಕೆ ಸ್ಥಳಾಂತರಿಸ ಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಬು,ನಾರಾಯಣಿ,ಮುದ್ದುರಂಗಪ್ಪ,ರಾಜಣ್ಣ,ಗೋಪೀನಾಥ್, ಸನತ್ ಕುಮಾರ್ ಮುಂತಾದವರಿದ್ದರು.