ಮುಂಬೈ: ದೇಶ ಹಾಗೂ ವಿದೇಶಗಳಲ್ಲಿ ನಂದಿನಿ ಉತ್ಪನ್ನಗಳಿಗೆ (Nandini Products) ಮಾರುಕಟ್ಟೆ ವಿಸ್ತರಣೆ ನಮ್ಮ ಗುರಿ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ (DK Suresh) ತಿಳಿಸಿದರು. ಮಹಾರಾಷ್ಟ್ರದ ವಿರಾರ್ನಲ್ಲಿರುವ ಅಮುಲ್ ಡೈರಿ ಘಟಕಕ್ಕೆ ಡಿ.ಕೆ. ಸುರೇಶ್ ಅವರ ನೇತೃತ್ವದಲ್ಲಿ ಬಮೂಲ್ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿದೆ.
ಈ ಭೇಟಿ ಕುರಿತು ಮಾಹಿತಿ ನೀಡಿರುವ ಡಿ.ಕೆ. ಸುರೇಶ್, ನಮ್ಮ ನಂದಿನಿ, ನಮ್ಮ ಆದ್ಯತೆ. ಇಲ್ಲಿನ ಹಾಲಿನ ಸಂಸ್ಕರಣೆ ಘಟಕ, ಹಾಲಿನ ಉತ್ಪನ್ನಗಳ ತಯಾರಿ ಹಾಗೂ ಪ್ಯಾಕಿಂಗ್ ಘಟಕಗಳ ಕಾರ್ಯನಿರ್ವಹಣೆಯನ್ನು ಅಧ್ಯಯನ ನಡೆಸಲಾಯಿತು. ಬಳಿಕ ಅಲ್ಲಿನ ಡೈರಿ ಕಾರ್ಯನಿರ್ವಾಹಕರೊಂದಿಗೆ ಸಭೆ ನಡೆಸಿ, ಕ್ಷೀರ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು ಎಂದು ಅವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Reliance Foundation: ರಿಲಯನ್ಸ್ ಫೌಂಡೇಷನ್ ನಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; 5100 ವಿದ್ಯಾರ್ಥಿಗಳಿಗೆ ಅವಕಾಶ