ಬೆಂಗಳೂರು, ಅ. 30: 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ (Rajyotsava Award 2025) ಪ್ರಕಟವಾಗಿದ್ದು, ಒಟ್ಟು 70 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಸಿನಿಮಾ ಕ್ಷೇತ್ರದಿಂದ ಬಹುಭಾಷಾ ನಟ ಪ್ರಕಾಶ್ ರಾಜ್, ವಿಜಯಲಕ್ಷ್ಮೀ ಸಿಂಗ್ ಸೇರಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ ಅಕ್ಟೋಬರ್ 30ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಪಡೆದವರ ಹೆಸರು ಪ್ರಕಟಿಸಿದರು. ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆದಿರಲಿಲ್ಲ ಎನ್ನುವುದು ವಿಶೇಷ.
ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರುಗಲಿದೆ.
ಸಾಹಿತ್ಯ, ಜಾನಪದ, ಸಂಗೀತ, ನೃತ್ಯ, ಚಲನಚಿತ್ರ/ಕಿರುತೆರೆ, ಆಡಳಿತ, ವೈದ್ಯಕೀಯ, ಸಮಾಜಸೇವೆ, ಸಂಕೀರ್ಣ, ಹೊರನಾಡು/ಹೊರದೇಶ, ಪರಿಸರ, ಕೃಷಿ, ಮಾಧ್ಯಮ, ವಿಜ್ಞಾನ/ತಂತ್ರಜ್ಞಾನ, ಸಹಕಾರ, ಯಕ್ಷಗಾನ, ಬಯಲಾಟ, ರಂಗಭೂಮಿ, ಶಿಕ್ಷಣ, ಕ್ರೀಡೆ, ನ್ಯಾಯಾಂಗ, ಶಿಲ್ಪಕಲೆ, ಚಿತ್ರಕಲೆ, ಕರಕುಶಲ ಮುಂತಾದ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ಗಂಗೋನಹಳ್ಳಿ ಗ್ರಾಮದಲ್ಲಿ ಶಾಸಕ ಡಿ.ಸಿ ಗೌರಿಶಂಕರ್ ಅಧ್ಯಕ್ಷತೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ
ರಾಜ್ಯೋತ್ಸವ ಪ್ರಶಸ್ತಿ ವಿಜೇತರ ವಿವರ:
ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
ಜಾನಪದ
- ಬಸಪ್ಪ ಭರಮಪ್ಪ ಚೌಡ್ಕಿ-ಕೊಪ್ಪಳ
- ಬಿ. ಟಾಕಪ್ಪ ಕಣ್ಣೂರು-ಶಿವಮೊಗ್ಗ
- ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ-ಬೆಳಗಾವಿ
- ಹನುಮಂತಪ್ಪ, ಮಾರಪ್ಪ, ಚೀಳಂಗಿ-ಚಿತ್ರದುರ್ಗ
- ಎಂ. ತೋಪಣ್ಣ-ಕೋಲಾರ
- ಸೋಮಣ್ಣ ದುಂಡಪ್ಪ ಧನಗೊಂಡ-ವಿಜಯಪುರ
- ಸಿಂಧು ಗುಜರನ್-ದಕ್ಷಿಣ ಕನ್ನಡ
- ಎಲ್. ಮಹದೇವಪ್ಪ ಉಡಿಗಾಲ-ಮೈಸೂರು
ಸಾಹಿತ್ಯ
- ಪ್ರೊ. ರಾಜೇಂದ್ರ ಚೆನ್ನಿ-ಶಿವಮೊಗ್ಗ
- ತುಂಬಾಡಿ ರಾಮಯ್ಯ-ತುಮಕೂರು
- ಪ್ರೊ.ಅರ್. ಸುನಂದಮ್ಮ-ಚಿಕ್ಕಬಳ್ಳಾಪುರ
- ಡಾ.ಎಚ್.ಎಲ್. ಪುಷ್ಪ-ತುಮಕೂರು
- ರಹಮತ್ ತರೀಕೆರೆ-ಚಿಕ್ಕಮಗಳೂರು
- ಹ.ಮ. ಪೂಜಾರ-ವಿಜಯಪುರ
ಚಲನಚಿತ್ರ /ಕಿರುತೆರೆ
- ಪ್ರಕಾಶ್ ರಾಜ್-ದಕ್ಷಿಣ ಕನ್ನಡ
- ವಿಜಯಲಕ್ಷ್ಮೀ ಸಿಂಗ್- ಕೊಡಗು
ಆಡಳಿತ
- ಎಚ್. ಸಿದ್ದಯ್ಯ ಭಾ.ಆ.ಸೇ. (ನಿ) ಬೆಂಗಳೂರು ದಕ್ಷಿಣ (ರಾಮನಗರ)
ವೈದ್ಯಕೀಯ
- ಆಲಮ್ಮ ಮಾರಣ್ಣ-ತುಮಕೂರು
- ಡಾ. ಜಯರಂಗನಾಥ್-ಬೆಂಗಳೂರು ಗ್ರಾಮಾಂತರ
ಸಮಾಜ ಸೇವೆ
- ಮತಿ ಸೂಲಗಿತ್ತಿ ಈರಮ್ಮ-ವಿಜಯನಗರ
- ಫಕ್ಕೀರಿ-ಬೆಂಗಳೂರು ಗ್ರಾಮಾಂತರ
- ಕೋರಿನ್ ಆಂಟೊನಿಯಟ್ ರಸ್ಕೀನಾ-ದಕ್ಷಿಣ ಕನ್ನಡ
- ಡಾ. ಎನ್. ಸೀತಾರಾಮ ಶೆಟ್ಟಿ-ಉಡುಪಿ
- ಕೋಣಂದೂರು ಲಿಂಗಪ್ಪ-ಶಿವಮೊಗ್ಗ
ಸಂಕೀರ್ಣ
- ಉಮೇಶ ಪಂಬದ-ದಕ್ಷಿಣ ಕನ್ನಡ
- ಡಾ. ರವೀಂದ್ರ ಕೋರಿಶೆಟ್ಟಿರ್-ಧಾರವಾಡ
- ಕೆ. ದಿನೇಶ್- ಬೆಂಗಳೂರು
- ಶಾಂತರಾಜು -ತುಮಕೂರು
- ಜಾಫರ್ ಮೊಹಿಯುದ್ದೀನ್- ರಾಯಚೂರು
- ಪೆನ್ನ ಓಬಳಯ್ಯ- ಬೆಂಗಳೂರು ಗ್ರಾಮಾಂತರ
- ಬಾಯಿ ಬಳ್ಳಾರಿ
- ಪುಂಡಲೀಕ ಶಾಸ್ತ್ರಿ (ಬುಡಬುಡಕೆ)-ಬೆಳಗಾವಿ
ಹೊರನಾಡು/ಹೊರ ದೇಶ
- ಜಕರಿಯ ಬಜಪೆ (ಸೌದಿ)-ಹೊರನಾಡು/ಹೊರ ದೇಶ
- ಪಿ.ವಿ. ಶೆಟ್ಟಿ (ಮುಂಬೈ)-ಹೊರನಾಡು/ಹೊರ ದೇಶ
ಪರಿಸರ
- ರಾಮೇಗೌಡ-ಚಾಮರಾಜನಗರ
- ಮಲ್ಲಿಕಾರ್ಜುನ ನಿಂಗಪ್ಪ-ಯಾದಗಿರಿ
ಕೃಷಿ
- ಡಾ. ಎಸ್.ವಿ. ಹಿತ್ತಲಮನಿ-ಹಾವೇರಿ
- ಎಂ.ಸಿ. ರಂಗಸ್ವಾಮಿ-ಹಾಸನ
ಮಾಧ್ಯಮ
- ಕೆ. ಸುಬ್ರಹ್ಮಣ್ಯ-ಬೆಂಗಳೂರು
- ಅಂಶಿ ಪ್ರಸನ್ನ ಕುಮಾರ್-ಮೈಸೂರು
- ಬಿ.ಎಂ. ಹನೀಫ್-ದಕ್ಷಿಣ ಕನ್ನಡ
- ಎಂ. ಸಿದ್ದರಾಜು-ಮಂಡ್ಯ
ವಿಜ್ಞಾನ/ತಂತ್ರಜ್ಞಾನ
- ರಾಮಯ್ಯ-ಚಿಕ್ಕಬಳ್ಳಾಪುರ
- ಏರ್ ಮಾರ್ಷಲ್ ಫಿಲಿಫ್ ರಾಜಕುಮಾರ್-ದಾವಣೆರೆ
- ಡಾ. ಆರ್.ವಿ. ನಾಡಗೌಡ-ಗದಗ
ಸಹಕಾರ
- ಶೇಖರ ಗೌಡ ವಿ. ಮಾಲಿಪಾಟೀಲ್-ಕೊಪ್ಪಳ
ಯಕ್ಷಗಾನ
- ಕೋಟ ಸುರೇಶ ಬಂಗೇರ-ಉಡುಪಿ
- ಐರಬೈಲ್ ಆನಂದ ಶೆಟ್ಟಿ-ಉಡುಪಿ
- ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ. ಹೆಗಡೆ)-ಉತ್ತರ ಕನ್ನಡ
ಬಯಲಾಟ
- ಗುಂಡೂರಾಜ್-ಹಾಸನ
ರಂಗಭೂಮಿ
- ಎಸ್.ಎಂ. ಪರಮಶಿವಯ್ಯ-ಬೆಂಗಳೂರು ದಕ್ಷಿಣ (ರಾಮನಗರ)
- ಎಲ್.ಬಿ. ಶೇಖ್ (ಮಾಸ್ತರ್)-ವಿಜಯಪುರ
- ಬಂಗಾರಪ್ಪ ಖುದಾನ್ಪುರ-ಬೆಂಗಳೂರು
- ಮೈಮ್ ರಮೇಶ್-ದಕ್ಷಿಣ ಕನ್ನಡ
- ಡಿ. ರತ್ನಮ್ಮ ದೇಸಾಯಿ-ರಾಯಚೂರು
ಶಿಕ್ಷಣ
- ಡಾ.ಎಂ.ಆರ್. ಜಯರಾಮ್-ಬೆಂಗಳೂರು
- ಡಾ.ಎನ್.ಎಸ್. ರಾಮೇಗೌಡ-ಮೈಸೂರು
- ಎಸ್.ಬಿ. ಹೊಸಮನಿ-ಕಲಬುರಗಿ
- ರಾಜ್ಶ್ರೀ ನಾಗರಾಜು-ಬೆಳಗಾವಿ
ಕ್ರೀಡೆ
- ಆಶೀಶ್ ಕುಮಾರ್ ಬಲ್ಲಾಳ್-ಬೆಂಗಳೂರು
- ಎಂ. ಯೋಗೇಂದ್ರ-ಮೈಸೂರು
- ಡಾ. ಜಬೀನಾ ಎನ್.ಎಂ.-ಕೊಡಗು
ನ್ಯಾಯಾಂಗ
- ನ್ಯಾ. ವಿ.ಬಿ. ಭಜಂತ್ರಿ-ಬಾಗಲಕೋಟೆ
ಶಿಲ್ಪಕಲೆ
- ಬಸಣ್ಣ ಮೋನಪ್ಪ ಬಡಿಗೇರ-ಯಾದಗಿರಿ
- ನಾಗಲಿಂಗಪ್ಪ ಜಿ. ಗಂಗೂರ-ಬಾಗಲಕೋಟೆ
ಚಿತ್ರಕಲೆ
- ಮಾರುತಿ-ವಿಜಯನಗರ
ಕರಕುಶಲ
- ಎಲ್. ಹೇಮಾ ಶೇಖರ್-ಮೈಸೂರು