ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tumkur News: ಪಾಕಿಸ್ತಾನ ಮೂಲದ ಸಂಘಟನೆಯ ಚಟುವಟಿಕೆಗೆ ಕಡಿವಾಣ ಹಾಕಲು ಮನವಿ

Tumkur News: ತುಮಕೂರು ನಗರದಲ್ಲಿ ಪಾಕಿಸ್ತಾನ ಮೂಲದ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿದ್ದು, ಮುಸ್ಲಿಂರನ್ನು ತಪ್ಪು ದಾರಿಗೆಳೆಯುವ ಮತ್ತು ಭದ್ರತೆಯ ಆತಂಕ ಎದುರಾಗಿದೆ. ಈ ಸಂಘಟನೆಗಳ ಬಗ್ಗೆ ನಿಗಾ ವಹಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಮರ್ಕಜಿ ಮಜ್ಲಿಸೆ ಮುಶಾವರತ್ ನೇತೃತ್ವದಲ್ಲಿ ತುಮಕೂರಿನ ಮುಸ್ಲಿಂ ಬಾಂಧವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಪಾಕಿಸ್ತಾನ ಮೂಲದ ಸಂಘಟನೆಯ ಚಟುವಟಿಕೆಗೆ ಕಡಿವಾಣ ಹಾಕಲು ಮನವಿ

Profile Siddalinga Swamy Aug 25, 2025 10:17 PM

ತುಮಕೂರು: ನಗರದಲ್ಲಿ ಪಾಕಿಸ್ತಾನ ಮೂಲದ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿದ್ದು, ಮುಸ್ಲಿಂರನ್ನು ತಪ್ಪು ದಾರಿಗೆಳೆಯುವ ಮತ್ತು ಭದ್ರತೆಯ ಆತಂಕ ಎದುರಾಗಿದೆ. ಈ ಸಂಘಟನೆಗಳ ಬಗ್ಗೆ ನಿಗಾ ವಹಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಮರ್ಕಜಿ ಮಜ್ಲಿಸೆ ಮುಶಾವರತ್ ನೇತೃತ್ವದಲ್ಲಿ ತುಮಕೂರಿನ ಮುಸ್ಲಿಂ ಬಾಂಧವರು (Tumkur News) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ನೂರಾನಿ ಮಸೀದಿ ಅಧ್ಯಕ್ಷರು ಹಾಗೂ ಮರ್ಕಜಿ ಮಜ್ಲಿಸೆ ಮುಶಾವರತ್ ಸದಸ್ಯರಾದ ಜಾಹಿದ್ ಖಾನ್ ಶೀರಾನಿ, ಇಕ್ಬಾಲ್ ಅಹಮದ್, ನಯಾಜ್ ಅಹಮದ್ ನೇತೃತ್ವದಲ್ಲಿ ನೂರಾರು ಮಂದಿ ಮುಸ್ಲಿಂ ಬಾಂಧವರು ತೆರಳಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಗೋಪಾಲ್ ಹಾಗೂ ಪುರುಷೋತ್ತಮ್ ಅವರಿಗೆ ಮನವಿ ಸಲ್ಲಿಸಿ ಪಾಕಿಸ್ತಾನ ಮೂಲದ ಸಂಘಟನೆಗಳ ಬಗ್ಗೆ ತೀವ್ರ ನಿಗಾ ವಹಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಇಕ್ಬಾಲ್ ಅಹಮದ್, ರಿಯಾಜ್ ಅಹ್ಮದ್ ಗೋಹಲ್ ಶಾಹಿ ಗುಂಪು (ಎಂಎಫ್‌ಐ) ಪಾಕಿಸ್ತಾನದಲ್ಲಿ ಹುಟ್ಟಿಕೊಂಡ ಸಂಘಟನೆಯಾಗಿದೆ. ಇದರ ಸ್ಥಾಪಕ ರಿಯಾಜ್ ಅಹ್ಮದ್ ಗೋಹರ್ ಶಾಹಿ ಅವರನ್ನು ಭಾರತದ ಎಲ್ಲಾ ಖ್ಯಾತ ಉಲಮಾಗಳು ಇಸ್ಲಾಮಿಕ್ ಧರ್ಮದಿಂದ ಹೊರಗಿಟ್ಟಿದ್ದಾರೆ. ಈ ಸಂಘಟನೆಯ ನಂಬಿಕೆಗಳು ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾಗಿದ್ದು, ನಿರಪರಾಧಿ ಜನರನ್ನು ತಪ್ಪು ದಾರಿಗೆಳೆಯುತ್ತಿವೆ ಎಂದು ಆರೋಪಿಸಿದ ಅವರು, ಭಾರತೀಯ ಮುಸ್ಲಿಮರಿಗೆ ಇಂತಹ ಪಾಕಿಸ್ತಾನ ಮೂಲಕ ಸಂಘಟನೆಗಳು ಅಗತ್ಯವಿಲ್ಲ. ಇವು ಸಮುದಾಯದ ಶಾಂತಿ, ಏಕತೆ ಮತ್ತು ಸಾಮರಸ್ಯಕ್ಕೆ ಅಪಾಯ ಉಂಟು ಮಾಡುತ್ತವೆ ಎಂದು ಹೇಳಿದರು.

ಈ ಪಂಥದ ಸದಸ್ಯೆಯಾದ ಇಶ್ರತ್ ಎಂಬ ಮಹಿಳೆ ಎಂಎಫ್‌ಐ ಸಂಘಟನೆಯ ಸಕ್ರಿಯ ಸದಸ್ಯೆಯಾಗಿದ್ದಾರೆ. ತುಮಕೂರಿನ ಮುಸ್ಲಿಂ ಸಮುದಾಯದಲ್ಲಿ ಈ ಸಂಘಟನೆಯ ತತ್ವಗಳನ್ನು ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರು ಮೂಲದ ಈ ಸಂಘಟನೆಯ ಇತರ ಸದಸ್ಯರು ಇವರೊಂದಿಗೆ ಸಂಪರ್ಕದಲ್ಲಿದ್ದು, ಈ ಗುಂಪಿನ ಜನರು ನಗರದಲ್ಲಿ ಶೈಖ್ ಅಹಮದ್ ಮತ್ತು ಅವರ ಪತ್ನಿ ಹಾಗೂ ಅವರ ಕುಟುಂಬದ ಬಳಿಗೆ ಮತ್ತೆ ಮತ್ತೆ ಬರುತ್ತಿರುತ್ತಾರೆ ಎಂದು ಆರೋಪಿಸಿದರು.

ಈ ಸಂಘಟನೆಯ ಸದಸ್ಯರಿಗೆ ಇಸ್ಲಾಂ ಅಥವಾ ಮುಸ್ಲಿಂ ಸಮುದಾಯದೊಂದಿಗೆ ಯಾವುದೇ ಧಾರ್ಮಿಕ ಸಂಬಂಧ ಇಲ್ಲ. ಅವರ ಹೆಸರುಗಳು ಮುಸ್ಲಿಂ ಹೆಸರಿನಂತೆ ಕಂಡರೂ ಅವರ ನಂಬಿಕೆಗಳು ಮತ್ತು ಆಚರಣೆಗಳು ಸಂಪೂರ್ಣವಾಗಿ ಇಸ್ಲಾಂ ಹೊರಗೆ ಇವೆ. ಹಾಗಾಗಿ ನಗರದ ಮುಸ್ಲಿಂ ಸಮುದಾಯವು ಅವರನ್ನು ಗುರುತಿಸುವುದಿಲ್ಲ, ಬೆಂಬಲಿಸುವುದಿಲ್ಲ ಮತ್ತು ಅವರು ಯಾವುದೇ ಅಕ್ರಮ ಅಥವಾ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ, ಅದರ ಜವಾಬ್ದಾರಿ ಸಮುದಾಯದ ಮೇಲೆ ಬಾರದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ತುಮಕೂರಿನಲ್ಲಿ ಈ ಸಂಘಟನೆಯ ಎಲ್ಲಾ ಚಟುವಟಿಕೆಗಳನ್ನು ಗುರುತಿಸಿ, ವಿಶೇಷವಾಗಿ ಇಶ್ರತ್ ಶೈಖ್ ಅಹಮದ್ ಕುಟುಂಬ ಮತ್ತು ಅವರ ಸಹಚರರೊಂದಿಗೆ ಸಂಬಂಧಿಸಿದ ಕಾರ್ಯಗಳ ಮೇಲೆ ನಿಗಾ ವಹಿಸಬೇಕು. ಅವರ ಪ್ರಚಾರ ಸಭೆಗಳು ಅಥವಾ ಲಿಫ್‌ಲೆಟ್‌ಗಳ ಹಂಚಿಕೆಯನ್ನು ತಡೆಗಟ್ಟಬೇಕು ಎಂದು ಅವರು ಒತ್ತಾಯಿಸಿದರು.‌

ಈ ಸುದ್ದಿಯನ್ನೂ ಓದಿ | Karnataka Rains: ಯೆಲ್ಲೋ ಅಲರ್ಟ್‌; ಮುಂದಿನ ಮೂರು ದಿನ ರಾಜ್ಯದಲ್ಲಿ ಆರ್ಭಟಿಸಲಿದೆ ಮುಂಗಾರು ಮಳೆ!

ಈ ಸಂದರ್ಭದಲ್ಲಿ ಮೌಲಾನಾ ಜಿಯಾ ಉರ್ ರೆಹಮಾನ್, ನಸ್ರುಲ್ಲಾ, ಅಬೂಬಕರ್, ಬಿಲಾಲ್, ಅಕ್ರಂ ಉಲ್ಲಾಖಾನ್, ಲಾಯರ್ ಅಹಮದ್, ಜಿಯಾ ಉಲ್ಲಾಖಾನ್, ಬಜರ್, ಬಕಾಶ್, ಇಮ್ರಾನ್, ಸಯ್ಯೂಬ್ ಸೇರಿದಂತೆ ಮುಸ್ಲಿಂ ಸಮುದಾಯದ ನೂರಾರು ಮಂದಿ ಪಾಲ್ಗೊಂಡಿದ್ದರು.