ಬೆಂಗಳೂರು: ರಾಜ್ಯದ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಗದ್ದುಗೆಗಾಗಿ ಗುದ್ದಾಟ ನಡೆಯುತ್ತಿರುವ ನಡುವೆ 23 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಈ ಮೂಲಕ ಮುಂಬರುವಂತ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದೆ.
ಈ ಬಗ್ಗೆ ಬಿಜೆಪಿಯ ರಾಜ್ಯ ಚುನಾವಣಾಧಿಕಾರಿ ಕ್ಯಾ.ಗಣೇಶ್ ಕಾರ್ಮಿಕ್ ಅವರು ಹೊರಡಿಸಿದ್ದಾರೆ. ದೇಶದಾದ್ಯಂತ ಪಕ್ಷದ ಸಂಘಟನಾ ಪರ್ವ 2024-25 ನಡೆಯುತ್ತಿದ್ದು, ಇದರ ಅಂಗವಾಗಿ ರಾಜ್ಯದಲ್ಲಿ ಮೊದಲ ಹಂತದಲ್ಲಿ 23 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಲಾಗಿದೆ. ನೂತನ ಜಿಲ್ಲಾಧ್ಯಕ್ಷರನ್ನು ಜಿಲ್ಲಾ ಚುನಾವಣಾಧಿಕಾರಿಗಳು ಸ್ಥಳೀಯವಾಗಿ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ನೂತನ ಜಿಲ್ಲಾ ಅಧ್ಯಕ್ಷರು ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಪಕ್ಷ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಶ್ರಮಿಸುತ್ತಾರೆಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
ನೂತನ ಜಿಲ್ಲಾಧ್ಯಕ್ಷ ಪಟ್ಟಿ
- ಮೈಸೂರು ನಗರ - ಎಲ್. ನಾಗೇಂದ್ರ
 - ಚಾಮರಾಜನಗರ - ಸಿ.ಎಸ್. ನಿರಂಜನಕುಮಾರ್
 - ದಕ್ಷಿಣಕನ್ನಡ - ಸತೀಶ್ ಕುಂಪಲ
 - ಚಿಕ್ಕಮಗಳೂರು - ದೇವರಾಜ ಶೆಟ್ಟಿ
 - ಶಿವಮೊಗ್ಗ - ಎನ್.ಕೆ. ಜಗದೀಶ್
 - ಉತ್ತರಕನ್ನಡ - ನಾರಾಯಣ್ ಶ್ರೀನಿವಾಸ್ ಹೆಗಡೆ
 - ಹುಬ್ಬಳ್ಳಿ-ಧಾರವಾಡ - ತಿಪ್ಪಣ್ಣ ಮಜ್ಜಗಿ
 - ಧಾರವಾಡ ಗ್ರಾಮಾಂತರ - ನಿಂಗಪ್ಪ ಡಿ. ಸುತಗಟ್ಟಿ
 - ಬೆಳಗಾವಿ ಗ್ರಾಮಾಂತರ -ಸುಭಾಷ್ ದುಂಡಪ್ಪ ಪಾಟೀಲ್
 - ಬೆಳಗಾವಿ ನಗರ - ಗೀತಾ ಸುತಾ
 - ಚಿಕ್ಕೋಡಿ - ಸತೀಶ್ ಅಪ್ಪಾಜಿಗೋಳ್
 - ಬೀದರ್ - ಸೋಮನಾಥ್ ಪಾಟೀಲ್
 - ಕಲಬುರಗಿ ನಗರ - ಚಂದ್ರಕಾಂತ್ ಬಿ. ಪಾಟೀಲ್
 - ಕಲಬುರಗಿ ಗ್ರಾಮಾಂತರ- ಅಶೋಕ್ ಬಗಲಿ
 - ಯಾದಗಿರಿ - ಬಸವರಾಜಪ್ಪಗೌಡ ವಿ.
 - ಕೊಪ್ಪಳ - ದಡೇಸಗೂರು ಬಸವರಾಜ್
 - ವಿಜಯನಗರ - ಸಂಜೀವ್ ರೆಡ್ಡಿ.
 - ಚಿಕ್ಕಬಳ್ಳಾಪುರ - ಬಿ.ಸಂದೀಪ್
 - ಕೋಲಾರ - ಓಂ ಶಕ್ತಿ ಛಲಪತಿ
 - 20. ಬೆಂಗಳೂರು ಉತ್ತರ- ಎಸ್ ಹರೀಶ್
 - 21. ಬಳ್ಳಾರಿ - ಅನಿಲ್ ಕುಮಾರ್ ಮೋಕಾ
 - 22. ಬೆಂಗಳೂರು ಕೇಂದ್ರ - ಎ ಆರ್ ಸಪ್ತಗಿರಿ ಗೌಡ
 - 23. ಬೆಂಗಳೂರು ದಕ್ಷಿಣ - ಸಿ.ಕೆ ರಾಮಮೂರ್ತಿ