Book Release: ಮಾಧ್ಯಮ ಕ್ಷೇತ್ರದಲ್ಲಿ ಮಾರ್ಗದರ್ಶನ ನೀಡುವವರ ಕೊರತೆ ಸಾಕಷ್ಟಿದೆ: ಡಾ. ನಿರಂಜನ ವಾನಳ್ಳಿ
Book Release: ಶಿರಸಿ ನಗರದ ಪಂಚವಟಿ ಸಭಾಂಗಣದಲ್ಲಿ ಮನು ವಿಕಾಸ ಸಂಸ್ಥೆ ಹಾಗೂ ಸಾಹಿತ್ಯ ಪ್ರಕಾಶನ ವತಿಯಿಂದ ಹಿರಿಯ ಪತ್ರಕರ್ತ ರಾಜು ಅಡಕಳ್ಳಿ ಅವರ 'ಸ್ಫೂರ್ತಿವಂತರು' ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಈ ವೇಳೆ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಮಾತನಾಡಿದ್ದಾರೆ.


ಶಿರಸಿ: ಮಾಧ್ಯಮ ಕ್ಷೇತ್ರದಲ್ಲಿ ಇಂದು ಕೈ ಹಿಡಿದು ಬರೆಸಬಲ್ಲ, ಮಾರ್ಗದರ್ಶನ ನೀಡುವ ಹಿರಿಯರ ಕೊರತೆ ಸಾಕಷ್ಟಿದೆ ಎಂದು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ (Dr. Niranjana Vanalli) ಹೇಳಿದರು. ನಗರದ ಪಂಚವಟಿ ಸಭಾಂಗಣದಲ್ಲಿ ಮನು ವಿಕಾಸ ಸಂಸ್ಥೆ ಹಾಗೂ ಸಾಹಿತ್ಯ ಪ್ರಕಾಶನ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ರಾಜು ಅಡಕಳ್ಳಿ ಅವರ 'ಸ್ಫೂರ್ತಿವಂತರು' ಕೃತಿಯನ್ನು (Sphurtivantaru Book Release) ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಹಿಂದೆಲ್ಲ ವಿಷಯ ಕೊಟ್ಟು ಬರೆಸುವ, ಬರೆದ ಲೇಖನಗಳಿಗೆ ಇನ್ನಷ್ಟು ಹೊಸ ದೃಷ್ಟಿ ಕೊಡುವ ಹಿರಿಯ ಪತ್ರಕರ್ತರು, ಮಾರ್ಗದರ್ಶಕರಿದ್ದರು. ಆದರೆ, ಇಂದು ಇಂತಹ ಹಿರಿಯರನ್ನು ಹುಡುಕಬೇಕಿದೆ ಎಂದ ವಾನಳ್ಳಿ, ಸ್ಥಳೀಯ ಭಾಷೆ, ನೆಲ ಮೂಲದ ಬರಹಗಳನ್ನು ಹೆಚ್ಚು ಹೆಚ್ಚು ಬರೆಯಬೇಕು. ಹುಡುಕಿಕೊಂಡು ಹೊರಟರೆ ಬೇಕಾದಷ್ಟು ಅಪರೂಪದ ಬರಹಗಳ ವಸ್ತುಗಳು ಸಿಗುತ್ತವೆ ಎಂದರು.

ಅಡಕಳ್ಳಿ ಅವರ ಕೃತಿ ಅಪರೂಪದ್ದಾಗಿದೆ. ಅವರು ಬಳಸುವ ಭಾಷೆ ಕೂಡ ಮಹತ್ವದ್ದಾಗಿದೆ. ಸ್ಥಳೀಯ ಸೊಗಡಿನದ್ದು ಎಂದ ವಾನಳ್ಳಿ, ಇಂದಿನ ಸಾಧಕರ ಜತೆಗೆ ಹಿಂದಿನ ಸಾಧಕರ ಪರಿಚಯ ಆಗಬೇಕು. ಮುಂದಿನ ತಲೆಮಾರಿಗೆ ಒಂದೊಳ್ಳೆ ಕೊಡುಗೆಯಾಗಿ ಈ ಕೃತಿ ಖಂಡಿತವಾಗಿ ಉಳಿಯುತ್ತದೆ ಎಂದರು.
ಕೃತಿ, ಲೇಖನ ಓದುವ ಸಂಪ್ರದಾಯದಿಂದ ನೋಡುವ ಸಂಪ್ರದಾಯಕ್ಕೆ ಬದಲಾಗಿದ್ದೇವೆ. ಕನ್ನಡ ಪತ್ರಿಕೋದ್ಯಮದಲ್ಲಿ ಕಾರ್ಯನಿರತರ ಕೊಡುಗೆ ಜೊತೆಗೆ ಹವ್ಯಾಸಿ ಲೇಖಕರ ಕೊಡುಗೆ ಕೂಡ ಇದೆ ಎಂದರು.

ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಮಾತನಾಡಿ, ರಾಜು ಅಡಕಳ್ಳಿ ಅವರ ಈ ಕೃತಿ ಕೂಡ ಓದುವ ಹಂಬಲ ಹೆಚ್ಚಿಸಿದೆ ಎಂದರು.
ಸಮಾಜ ವಿಜ್ಞಾನಿ ಡಾ. ಪ್ರಕಾಶ ಭಟ್ಟ ಮಾತನಾಡಿ, ಕಲಾವಿದರೊಬ್ಬರು ಒಡವೆ ಇದ್ದೂ ಬಡವೆ ಎಂದು ಹೇಳಿದಂತೆ ಉತ್ತರ ಕನ್ನಡದಲ್ಲಿ ಎಲ್ಲ ಇದ್ದೂ ಬಡವೆ ಎಂಬಂತಾಗಬಾರದು. ನಾವು ಉತ್ತರ ಕನ್ನಡ ಬ್ರ್ಯಾಂಡ್ ಮಾಡಿಕೊಳ್ಳಬೇಕಿದೆ ಎಂದರು.
ಕೃತಿಕಾರ ರಾಜು ಅಡಕಳ್ಳಿ ಮಾತನಾಡಿ, ಕೃತಿ ಬಿಡುಗಡೆ ಎಂದರೆ ನಾಮಕರಣ ಮಾಡುವ ಕಾಲ ಘಟ್ಟ. ಮನೆಯಲ್ಲಿ ಕುಬೇರ ಮೂಲೆ ಇದ್ದಂತೆ, ಸರಸ್ವತಿ ಮೂಲೆ ಕೂಡ ನಿರ್ಮಾಣ ಮಾಡಬೇಕು. ಆ ಮೂಲಕ ಸರಸ್ವತಿ ಪೂಜೆಯ ಆರಾಧಿಸೋಣ ಎಂದರು.
ಕೃತಿ ಪರಿಚಯಿಸಿದ ಡಿ.ಎಸ್.ನಾಯ್ಕ, ರಾಜು ಅಡಕಳ್ಳಿ ಅವರ ಬರಹದಲ್ಲಿನ ಸ್ಥಳೀಯ ಭಾಷಾ ಪ್ರಯೋಗ ಗಮನ ಸೆಳೆದಿದೆ. ಇವರ ಬರಹಗಳಲ್ಲಿ ಅಡಕಳ್ಳಿ ಛಾಪು ಇರುತ್ತದೆ ಎಂದರು.
ಮನುವಿಕಾಸ ಸಂಸ್ಥೆ ಅಧ್ಯಕ್ಷ ಗಣಪತಿ ಭಟ್ ವಹಿಸಿ, ಎಲ್ಲರನ್ನೂ, ಎಲ್ಲ ಕ್ಷೇತ್ರಗಳನ್ನೂ ಮುನ್ನೆಲೆಗೆ ತರುವ ಕಾರ್ಯವನ್ನು ಅಡಕಳ್ಳಿ ಕಾರ್ಯ ಮಾಡುತ್ತಿದ್ದಾರೆ ಎಂದರು.
ಈ ಸುದ್ದಿಯನ್ನೂ ಓದಿ | Roopa Gururaj Column: ದೊಡ್ಡವರ ಮಾತನ್ನು ನಿರ್ಲಕ್ಷಿಸಬೇಡಿ
ಸಾಹಿತಿ ರಾಜೀವ ಅಜ್ಜಿಬಳ ಮಾತನಾಡಿದರು. ವೀಣಾ ಅರಣಕುಮಾರ ಜೋಶಿ ಪ್ರಾರ್ಥಿಸಿದರು. ಶ್ರೀಕಾಂತ ಹೆಗಡೆ ಸ್ವಾಗತಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು. ವೆಂಕಟೇಶ ಹೆಗಡೆ ಹೊಸಬಾಳೆ ವಂದಿಸಿದರು. ಈ ವೇಳೆ ಅನೇಕ ಗಣ್ಯರು, ಹಿರಿಯರು, ಸಾಧಕರು ಆಗಮಿಸಿದ್ದರು.
![]()
ಮನೆ ಕಟ್ಟುವವರು ಕುಬೇರ ಮೂಲೆಯೊಂದೇ ಅಲ್ಲದೇ ಸರಸ್ವತಿ ಮೂಲೆಯನ್ನು ನೋಡಬೇಕು. ಇವೆರಡೂ ಮನೆಗೆ ಅತ್ಯವಶ್ಯಕ.
-ರಾಜು ಅಡಕಳ್ಳಿ_ಕೃತಿಕಾರ
![]()
ಬದುಕಿಗೆ ವಿಭೂತಿಯಂತೆ ಅನುಭುತಿಯೂ ಇರಬೇಕು ಅದಾಗಮಾತ್ರ ಎಲ್ಲವೂ ಚೆಂದ.
-ಡಿಎಸ್ ನಾಯ್ಕ , ವಿಮರ್ಶಕ.
![]()
ಓದುವ ಸಂಪ್ರದಾಯದಿಂದ ನಾವೀಗ ನೋಡುವ ಸಂಪ್ರದಾಯಕ್ಕೆ ಬಂದಿದ್ದೇವೆ. ಆದರೆ ದೂರಾಗಬೇಕು. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನೆಲ, ಜಲದ ಬಗ್ಗೆ ಅಭಿಮಾನ ಹೊಮ್ಮಬೇಕು.
-ನಿರಂಜನ ವಾನಳ್ಳಿ , ಕುಲಪತಿ, ಬೆಂಗಳೂರು ಉತ್ತರ ವಿವಿ