ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anti Tobacco Campaign: ತಂಬಾಕು ವಿರೋಧಿ ಅಭಿಯಾನ ಆರಂಭಿಸಿದ ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌

ಪ್ರತಿನಿತ್ಯ ತಂಬಾಕು ಸೇವನೆಯಿಂದ ಆರೋಗ್ಯ ಹಾಳು ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಿ, ಇಂದಿನ ಯುವಪೀಳಿಗೆ ಯನ್ನು ಈ ಅಪಾಯದಿಂದ ದೂರ ಇರಿಸಬೇಕು. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ರಸ್ತೆ ಬದಿ, ಬಸ್‌ನಿಲ್ದಾಣ, ಸಾರ್ವಜನಿಕ ಸ್ಥಳಗ ಳನ್ನು ಬಿತ್ತಿಚಿತ್ರ, ಡಿಜಿಟಲ್ ಹೋರ್ಡಿಂಗ್‌ ಗಳ ಮೂಲಕ ತಂಬಾಕು ಸೇವನೆಯಿಂದ ಆಗುವ ಅನಾಹು ತದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ

ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ತಂಬಾಕು ವಿರೋಧಿ ಅಭಿಯಾನ

Profile Ashok Nayak Jun 2, 2025 4:52 PM

ಬೆಂಗಳೂರು: ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ಹಾನಿಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಜ್ಜಿವಾನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ದೇಶಾದ್ಯಂತ ತಂಬಾಕು ವಿರೋಧಿ ಅಭಿಯಾನ ಪ್ರಾರಂಭಿಸಿದೆ. ಆರೋಗ್ಯಕರ ಜೀವನಶೈಲಿ ಆಯ್ಕೆ ಮಾಡಿಕೊಳ್ಳುವುದರಿಂದ “ಉತ್ತಮ ಜೀವನ ನಿರ್ಮಿಸಿ” ಎಂಬ ಘೋಷಾ ವಾಕ್ಯದಡಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Dr Gururaj Arakeri Column: ಬೀದಿಯಲ್ಲಿ ಹೋಗೋ ಮಾರಿಯನ್ನು ಮನೆಯೊಳಗೆ ಕರೆತರೋದ್ಯಾಕೆ..?!

ಈ ಕುರಿತು ಮಾತನಾಡಿದ ಉಜ್ಜಿವಾನ್ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ಮುಖ್ಯ ಮಾರ್ಕೆಟಿಂಗ್‌ ಅಧಿಕಾರಿ ಲಕ್ಷ್ಮಣ್ ವೇಲಾಯುಥಮ್, ಇಂದು ಪ್ರತಿನಿತ್ಯ ತಂಬಾಕು ಸೇವನೆಯಿಂದ ಆರೋಗ್ಯ ಹಾಳು ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಿ, ಇಂದಿನ ಯುವಪೀಳಿಗೆ ಯನ್ನು ಈ ಅಪಾಯದಿಂದ ದೂರ ಇರಿಸಬೇಕು. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ರಸ್ತೆ ಬದಿ, ಬಸ್‌ನಿಲ್ದಾಣ, ಸಾರ್ವಜನಿಕ ಸ್ಥಳಗಳನ್ನು ಬಿತ್ತಿಚಿತ್ರ, ಡಿಜಿಟಲ್ ಹೋರ್ಡಿಂಗ್‌ ಗಳ ಮೂಲಕ ತಂಬಾಕು ಸೇವನೆಯಿಂದ ಆಗುವ ಅನಾಹುತದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ.

ಬೆಂಗಳೂರಿನ ರಾಜಾ ರಾಮ್ ಮೋಹನ್ ರಾಯ್ ರಸ್ತೆಯ ಕಾಂತೀರವಾರ ಕ್ರೀಡಾಂಗಣದಲ್ಲಿ ಈಗಾಗಲೇ ದೊಡ್ಡ ಡಿಜಿಟಲ್‌ ಹೋರ್ಡಿಂಗ್‌ನಲ್ಲಿ ಬಿತ್ತರಿಸಲಾಗಿದೆ. ಜನಸಾಮಾನ್ಯರು ಈ ಅಪಾಯದ ಅರಿವು ಪಡೆದು, ಕೂಡಲೇ ಜಗಿಯುವ ಹಾಗೂ ಧೂಮಪಾನದಂತಹ ಎಲ್ಲಾ ರೀತಿಯ ತಂಬಾಕು ಸೇವನೆಯನ್ನು ಬಿಡಬೇಕು, ಇದರಿಂದ ನಮ್ಮ ಜೀವನದ ಗುಣಮಟ್ಟ ಹೆಚ್ಚಲಿದ್ದು, ನಮ್ಮ ಕುಟುಂಬ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.