ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maha Kumbh: ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ! ವಿಡಿಯೊ

ಕೇಂದ್ರ ಗೃಹ ಸಚಿಹ ಅಮಿತ್‌ ಶಾ ಅವರು ಪ್ರಯಾಗ್‌ರಾಜ್‌ನ ಸಂಗಮದಲ್ಲಿ ಪವಿತ್ರಸ್ನಾನ ಮಾಡಿದ್ದಾರೆ. ಸೋಮವಾರ ಮಾಹಾ ಕುಂಭಮೇಳಕ್ಕೆ ತೆರಳಿದ್ದ ಅವರು, ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್‌, ಹಲವು ಸಾಧು ಸಂತರ ಜೊತೆ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದು, ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Maha Kumbh: ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ! ವಿಡಿಯೊ

Amit Shah Visits Maha Kumbh

Profile Ramesh Kote Jan 27, 2025 9:06 PM

ನವದೆಹಲಿ: ಗೃಹ ಸಚಿವ ಅಮಿತ್ ಶಾ ( Amit Shah) ಮಹಾಕುಂಭ ಮೇಳಕ್ಕೆ (Maha Kumbh) ಆಗಮಿಸಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಸ್ವಾಮಿ ರಾಮ್‌ದೇವ್ ಸೇರಿದಂತೆ ಇತರ ಸಂತರು, ಋಷಿಮುನಿಗಳು ಉಪಸ್ಥಿತರಿದ್ದರು. ಅಮಿತ್ ಶಾ, ಸಿಎಂ ಯೋಗಿ ಮತ್ತು ಸ್ವಾಮಿ ರಾಮ್‌ದೇವ್ ಅವರು ಪವಿತ್ರ ಸ್ನಾನ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿವೆ.

ಪ್ರಯಾಗ್‌ರಾಜ್‌ಗೂ ತೆರಳುವುದಕ್ಕೂ ಮುನ್ನ ಅಮಿತ್‌ ಶಾ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ. "ಮಹಾ ಕುಂಭಮೇಳವು ಸನಾತನ ಸಂಸ್ಕೃತಿಯ ಅಡೆತಡೆಯಿಲ್ಲದ ಹರಿವಿನ ವಿಶಿಷ್ಟ ಸಂಕೇತವಾಗಿದೆ." ಎಂದು ಬರೆದುಕೊಂಡಿದ್ದಾರೆ.

Vachanananda swamiji: ಪ್ರಯಾಗರಾಜ್‌ ಮಹಾ ಕುಂಭಮೇಳ: ಮಹಾ ಧಾರ್ಮಿಕ ಸಮ್ಮೇಳನ

"ಕುಂಭಮೇಳವು ಸಾಮರಸ್ಯದ ಆಧಾರದ ಮೇಲೆ ನಮ್ಮ ಶಾಶ್ವತ ಜೀವನ ತತ್ವವನ್ನು ಪ್ರತಿಬಿಂಬಿಸುತ್ತದೆ. ಇಂದು (ಸೋಮವಾರ), ನಾನು ಸಂಗಮದಲ್ಲಿ ಸ್ನಾನ ಮಾಡಲು ಮತ್ತು ಪವಿತ್ರ ನಗರವಾದ ಪ್ರಯಾಗ್‌ರಾಜ್‌ನಲ್ಲಿ ಐಕ್ಯತೆ ಮತ್ತು ಸಮಗ್ರತೆಯ ಈ ಮಹಾನ್ ಉತ್ಸವದಲ್ಲಿ ಸಂತರ ಆಶೀರ್ವಾದವನ್ನು ಪಡೆಯಲು ಉತ್ಸುಕನಾಗಿದ್ದೇನೆ," ಎಂದು ಅವರು ಬರೆದುಕೊಂಡಿದ್ದರು.



ಸಚಿವ ಸಂಪುಟ ಸಭೆ ನಡೆಸಿದ್ದ ಯೋಗಿ ಆದಿತ್ಯನಾಥ್‌

ಸಂಗಮದಲ್ಲಿ ಸ್ನಾನ ಮಾಡುವುದಕ್ಕೂ ಮುನ್ನ ಸಿಎಂ ಯೋಗಿ ಆದಿತ್ಯನಾತ್‌ ಅವರು, ಸಚಿವ ಸಂಪುಟ ಸಭೆಯನ್ನು ನಡೆಸಿದ್ದು, ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಮೂರು ಜಿಲ್ಲೆಗಳಿಗೆ (ಬಾಗ್‌ಪತ್, ಕಾಸ್‌ಗಂಜ್ ಮತ್ತು ಹತ್ರಾಸ್) ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದು, ಪ್ರಯಾಗ್‌ರಾಜ್, ವಾರಣಾಸಿ, ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್‌ಗೆ ಬಾಂಡ್‌ಗಳನ್ನು ನೀಡುವುದು, ಯುವಕರಿಗೆ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ನೀಡುವುದು, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಅನ್ನು ಗಂಗಾ ಎಕ್ಸ್‌ಪ್ರೆಸ್‌ವೇಯೊಂದಿಗೆ ಸಂಪರ್ಕಿಸುವುದು ಇದರಲ್ಲಿ ಸೇರಿದೆ.



ಚಿತ್ರಕೂಟವನ್ನು ಗಂಗಾ ಎಕ್ಸ್‌ಪ್ರೆಸ್‌ವೇಯೊಂದಿಗೆ ಸಂಪರ್ಕಿಸುವ ಕುರಿತು ಚರ್ಚೆ, ಹೊಸ ಏರೋಸ್ಪೇಸ್ ರಕ್ಷಣಾ ನೀತಿಯನ್ನು ಮಾಡುವ ಬಗ್ಗೆ ಮತ್ತು ಯಮುನಾ ನದಿಯ ಮಹಾಕುಂಭದ ದೃಷ್ಟಿಯಿಂದ ಪ್ರಯಾಗ್‌ರಾಜ್‌ನ ಅಭಿವೃದ್ಧಿಯ ಕುರಿತು ಚರ್ಚೆ. ಮತ್ತೊಂದು ಸಹಿ ಸೇತುವೆಯ ಬಗ್ಗೆಯೂ ಚರ್ಚೆ ನಡೆದಿತ್ತು.



ಜನವರಿ 26 ರಂದು ಪುಣ್ಯಸ್ನಾನ ಮಾಡಿದ್ದ ಅಖಿಲೇಶ್ ಯಾದವ್

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಜನವರಿ 26 ರಂದು ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದರು. ಇದರ ವಿಡಿಯೊ ಕೂಡ ವೈರಲ್‌ ಆಗಿದೆ. ಅಖಿಲೇಶ್ ಯಾದವ್ ಅವರ ಈ ಸ್ನಾನ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಏಕೆಂದರೆ, ಅಖಿಲೇಶ್ ಯಾದವ್ ಮಹಾ ಕುಂಭಮೇಳದ ಅಂಕಿಅಂಶಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಅಖಿಲೇಶ್ ಯಾದವ್ ಅವರು ಮಹಾಕುಂಭದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ಪ್ರತಿಯೊಂದು ಡೇಟಾ ನಕಲಿ ಎಂದು ಆರೋಪ ಮಾಡಿದ್ದರು. ಕೆಲವು ರೈಲುಗಳು ಖಾಲಿಯಾಗಿ ಹೋಗುತ್ತಿವೆ ಎಂದು ಆರೋಪಿಸಿದ್ದರು.