ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಪ್ರತಿಪಾ ತಿಥಿ ಉತ್ತರ ಪಲ್ಗುಣಿ ನಕ್ಷತ್ರದ ಸೆಪ್ಟೆಂಬರ್ 22ನೇ ತಾರೀಖಿನ ಸೋಮವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯದ (Daily Horoscope) ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಉತ್ತರ ಫಾಲ್ಗುಣಿ ನಕ್ಷತ್ರ ಇದ್ದು ಇದರ ಅಧಿಪತಿ ರವಿ. ಮೇಷ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟದ ದಿನವಾಗಲಿದೆ. ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಇರಲಿದ್ದು, ಮಧ್ಯಾಹ್ನ ಬಳಿಕ ಶತ್ರು ಭಾದೆ ಕಾಡಲಿದೆ. ಹಾಗಾಗಿ ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಮಧ್ಯಾಹ್ನದವರೆಗೂ ಆಸ್ತಿ ಪಾಸ್ತಿ, ಸಂಸಾರದ ವಿಚಾರದಲ್ಲಿ ಹೆಚ್ಚು ಕ್ಷೇಷ ಉಂಟಾಗಲಿದೆ. ಆದರೆ ಮಧ್ಯಾಹ್ನ ಬಳಿಕ ನಿಮ್ಮ ಬುದ್ದಿ ಶಕ್ತಿ ಬಳಸಿ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಗಳಿಸುತ್ತೀರಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಮಧ್ಯಾಹ್ನವರೆಗೂ ಸಮಯ ಬಹಳ ಉತ್ತಮವಾಗಿ ಇರುತ್ತದೆ. ಮಧ್ಯಾಹ್ನ ಬಳಿಕ ಆಸ್ತಿ ಪಾಸ್ತಿ ವಿಚಾರದಲ್ಲಿ ಮನೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅದೇ ರೀತಿ ನಿಮ್ಮ ಸಂಸಾರದ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಮಧ್ಯಾಹ್ನವರೆಗೂ ಸಂಸಾರದ ವಿಚಾರದಲ್ಲಿ ಬೇಸರ ತರಬಹುದು. ಮಧ್ಯಾಹ್ನ ಬಳಿಕ ಬಂಧು ಮಿತ್ರರ ಸಮಾಗಮದಿಂದ ನೆಮ್ಮದಿ ಇರುತ್ತದೆ. ಅದೇ ರೀತಿ ಸ್ನೇಹಿತರ ಜತೆ ಖುಷಿಯಿಂದ ದಿನವನ್ನು ಕಳೆಯಲಿದ್ದೀರಿ.
ಸಿಂಹ ರಾಶಿ: ಸಿಂಹ ರಾಶಿಯವರು ಈ ದಿನ ಮಧ್ಯಾಹ್ನವರೆಗೂ ನಿಮ್ಮ ಜವಾಬ್ದಾರಿಯ ಬಗ್ಗೆ ಮಾತ್ರ ಯೋಚಿಸುತ್ತೀರಿ. ನಿಮ್ಮ ಏಳಿಗೆಯ ಬಗ್ಗೆಯೇ ನೀವು ಹೆಚ್ಚು ಗಮನ ಹರಿಸುತ್ತೀರಿ. ಆದರೆ ಮಧ್ಯಾಹ್ನ ಬಳಿಕ ನಿಮ್ಮ ಕುಟುಂಬದ ಬಗ್ಗೆಯೂ, ಕುಟುಂಬದ ಹಣಕಾಸಿನ ಬಗ್ಗೆಯೂ ಯೋಚನೆ ಮಾಡಲಿದ್ದೀರಿ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ಕ್ಷೇಷ ಇರುತ್ತದೆ. ಮಧ್ಯಾಹ್ನ ಬಳಿಕ ನಿಮ್ಮ ಆತ್ಮವಿಶ್ವಾಸ ಚೆನ್ನಾಗಿ ಇರುತ್ತದೆ. ಇದರಿಂದ ಬೇರೆಯವರಿಗೂ ನೀವು ಶಾಂತಿಯನ್ನು ನೀಡಿ ದಿನ ಕಳೆಯಬಹುದು. ಕೆಲಸ ಕಾರ್ಯದಲ್ಲೂ ಕೂಡ ಯಶಸ್ಸನ್ನು ನೀವು ಕಾಣಲಿದ್ದೀರಿ.
ತುಲಾ ರಾಶಿ: ತುಲಾ ರಾಶಿಯವರಿಗೆ ಈ ದಿನ ತುಂಬ ಚೆನ್ನಾಗಿ ಇದೆ. ಬಹಳಷ್ಟು ಸಂತೋಷವಾಗಿ ದಿನ ಕಳೆಯುತ್ತೀರಿ. ಮಧ್ಯಾಹ ಬಳಿಕ ಮನಸ್ಸಿಗೆ ಕ್ಷೇಷ ಉಂಟಾಗಲಿದ್ದು ಮಿತೃತ್ವದಲ್ಲಿ ಒಡಕು ಉಂಟಾಗಲಿದೆ. ಅದೇ ರೀತಿ ಸ್ನೇಹಿತರ ಜತೆ ತಪ್ಪು ಅಭಿಪ್ರಾಯಗಳು ಕೂಡ ಬರಬಹುದು. ಇದು ನೋವಾಗಿ ಪರಿಣಮಿಸಬಹುದು. ಹಾಗಾಗಿ ಹುಷಾರಾಗಿ ಇರುವುದು ಉತ್ತಮ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೂ ಅನೇಕ ಕಾರ್ಯ ಕ್ಷೇತ್ರದ ಜವಾಬ್ದಾರಿಗಳು ಇರುತ್ತವೆ. ಮಧ್ಯಾಹ್ನ ಬಳಿಕ ನಿಮ್ಮ ಮಿತ್ರರೊಂದಿಗೆ ಸುತ್ತಾಡಿ ಖುಷಿಯ ದಿನವನ್ನು ಕಳೆಯುತ್ತೀರಿ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ಜವಾಬ್ದಾರಿಗಳು ಹೆಚ್ಚಾಗಿರುತ್ತದೆ. ಇದರ ಬಗ್ಗೆ ಹೆಚ್ಚಿನ ಯೋಚನೆಗಳು ಬರುತ್ತವೆ. ಮಧ್ಯಾಹ್ನ ಬಳಿಕ ನಿಮ್ಮ ಕೆಲವು ಯೋಜನೆ, ವಿಚಾರಗಳನ್ನು ಕಾರ್ಯ ರೂಪಕ್ಕೆ ತರಬಹುದು.
ಇದನ್ನು ಓದಿ:Vastu tips: ಗಡಿಯಾರದಿಂದ ಬದಲಾಗುವುದು ನಿಮ್ಮ ಭವಿಷ್ಯ
ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ಸಮಯ ಉತ್ತಮವಾಗಿ ಇರುತ್ತದೆ. ಬೇರೆಯವರಿಂದ ಉತ್ತಮ ಸಹಕಾರ ಪ್ರಾಪ್ತಿಯಾಗುತ್ತದೆ. ಮಧ್ಯಾಹ್ನ ಬಳಿಕ ಮನಸ್ಸಿಗೆ ಕ್ಷೇಷ ಉಂಟಾಗಲಿದ್ದು ಮುಖ್ಯವಾದ ವಿಚಾರಗಳಲ್ಲಿ ಬಹಳಷ್ಟು ತೊಂದರೆಯಾಗಬಹುದು.
ಕುಂಭರಾಶಿ: ಕುಂಭ ರಾಶಿಯವರಿಗೆ ಮಧ್ಯಾಹ್ನವರೆಗೂ ಚೆನ್ನಾಗಿರುತ್ತದೆ. ಒಳ್ಳೆಯ ಸಹಕಾರ ಕೂಡ ಸಿಗುತ್ತದೆ. ಮಧ್ಯಾಹ್ನ ಬಳಿಕ ಸ್ನೇಹಿತರ ಜತೆ ತಪ್ಪು ಕಲ್ಪನೆ ಬರಬಹುದು. ಹಾಗಾಗಿ ಮುಖ್ಯವಾದ ನಿರ್ಧಾರ ಮಾಡಲು ಹೋಗಬೇಡಿ.
ಮೀನ ರಾಶಿ: ಮೀನ ರಾಶಿಯವರು ಮಧ್ಯಾಹ್ನವರೆಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಉತ್ತಮ ಸಮಯ ಕಳೆಯಲಿದ್ದೀರಿ. ಮಧ್ಯಾಹ್ನ ಬಳಿಕ ಮನೆಯವರ ಜತೆ, ಪ್ರೀತಿ ಪಾತ್ರರೊಂದಿಗೆ ಉತ್ತಮ ಒಡನಾಟ ಇರಲಿದೆ. ಉತ್ತಮ ದಿನ ಈ ದಿನವಾಗಿದ್ದು ಅನುಕೂಲವಿದೆ.