ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಂಬಿದವರ ಪಾಲಿನ ಕಲ್ಪತರು: ಚಿಕ್ಕ ಮಧುರೆಯ ಶ್ರೀ ಶನಿಮಹಾತ್ಮ ದೇವಾಲಯ

Pravasi Prapancha: ಭಾರತದ ಹಿಂದೂ ಧಾರ್ಮಿಕ ಕ್ಷೇತ್ರಗಳ ಪಟ್ಟಿಯಲ್ಲಿ ತಮಿಳುನಾಡಿನ ಮಧುರೆಗೆ ಮುಖ್ಯ ಸ್ಥಾನವಿದೆ. ಮಧುರೆಯಂತೆಯೇ ತನ್ನದೇ ರೀತಿಯಲ್ಲಿ ಧಾರ್ಮಿಕ ಕ್ಷೇತ್ರವಾಗಿ ಬೆಳೆದು ನಿಂತಿರುವ ಇನ್ನೊಂದು ಕ್ಷೇತ್ರ ಬೆಂಗಳೂರಿನ ಬಳಿಯಲ್ಲಿಯೇ ಇದೆ. ಅದುವೇ ಚಿಕ್ಕ ಮಧುರೆ ಶ್ರೀ ಶನಿಮಹಾತ್ಮ ದೇವಸ್ಥಾನ. ಈ ಕ್ಷೇತ್ರದ ಮಹಿಮೆ ಇಲ್ಲಿದೆ.

ಚಿಕ್ಕಮಧುರೆಯ ನಿಜವಾದ ಜನಜಂಗುಳಿ ಶನಿವಾರ ಕಾಣಿಸುತ್ತದೆ. ವಿಶೇಷವಾಗಿ ಶ್ರಾವಣ ಮಾಸದ ಶನಿವಾರಗಳಲ್ಲಿ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತದೆ. ಶ್ರಾವಣ ಶನಿವಾರಗಳಲ್ಲಿ, ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಶನಿಮಹಾತ್ಮಸ್ವಾಮಿ ಮತ್ತು ಜೇಷ್ಠಾದೇವಿಯ ದರ್ಶನ ಪಡೆಯುತ್ತಾರೆ. ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯೂ ಇರುತ್ತದೆ. ಅಂದರೆ ಇದು ಕೇವಲ ಒಂದು ಗಂಟೆ-ಎರಡು ಗಂಟೆಯ ಪೂಜಾ ಕೇಂದ್ರವಲ್ಲ. ಒಂದು ದಿನದ ಆಧ್ಯಾತ್ಮಿಕ ಪ್ರವಾಸದ ಅನುಭವ ನೀಡುವ ಕ್ಷೇತ್ರ.

ಭಾರತದ ಹಿಂದೂ ಧಾರ್ಮಿಕ ಕ್ಷೇತ್ರಗಳ ಪಟ್ಟಿಯಲ್ಲಿ ಮಧುರೆಗೆ ಅಪಾರ ಮಹತ್ವವಿದೆ. ಮಧುರೆಯಂತೆಯೇ ತನ್ನದೇ ರೀತಿಯಲ್ಲಿ ಧಾರ್ಮಿಕ ಕ್ಷೇತ್ರವಾಗಿ ಬೆಳೆದು ನಿಂತಿರುವ ಇನ್ನೊಂದು ಕ್ಷೇತ್ರ ಬೆಂಗಳೂರಿನ ಬಳಿಯಲ್ಲಿಯೇ ಇದೆ. ಭಕ್ತಾದಿಗಳ ಮತ್ತು ಯಾತ್ರಿಗಳ ಪಾಲಿಗೆ ಅಪಾರ ಮಹಿಮೆಯ ಕ್ಷೇತ್ರವಾಗಿ ಪ್ರಸಿದ್ಧಿಯಾಗಿದ್ದರೂ, ದಕ್ಷಿಣ ಭಾರತದ ಶ್ರೇಷ್ಠ ಯಾತ್ರಾತಾಣವಾಗಿದ್ದರೂ ಹೆಚ್ಚು ಪ್ರಚಾರ ಬಯಸದೆ, ಶಾಂತತೆ ಕಾಪಾಡಿಕೊಂಡು ನೆಲೆನಿಂತಿರುವ ಕ್ಷೇತ್ರದ ಹೆಸರು ಚಿಕ್ಕ ಮಧುರೆ ಶ್ರೀ ಶನಿಮಹಾತ್ಮ ದೇವಸ್ಥಾನ.

ಬಾಗಿಲಿಲ್ಲದ ಭಗವಂತ; ಕುಣಿಗಲ್‌ನ ಬೆಟ್ಟದ ರಂಗನಾಥಸ್ವಾಮಿ

ಹೌದು, ಬೆಂಗಳೂರು ನಗರದಿಂದ ದೂರವೇನಿಲ್ಲ. ಕೇವಲ 50 ಕಿ.ಮೀ ದೂರ. ನಗರದ ಗದ್ದಲ, ಟ್ರಾಫಿಕ್, ಕಾಂಕ್ರೀಟ್ ಕಾಡುಗಳನ್ನು ದಾಟಿ ನೆಲಮಂಗಲ–ದೊಡ್ಡಬಳ್ಳಾಪುರ ರಸ್ತೆಯಲ್ಲಿ ಸಾಗಿದರೆ, ಮಧುರೆ ಕೆರೆಯ ದಡದಲ್ಲಿ ನೆಮ್ಮದಿಯಾಗಿ ನೆಲೆಸಿರುವ ಒಂದು ಪುಣ್ಯಕ್ಷೇತ್ರ ಎದುರಾಗುತ್ತದೆ. ಅದೇ ಚಿಕ್ಕಮಧುರೆ ಶ್ರೀ ಶನಿಮಹಾತ್ಮ ದೇವಸ್ಥಾನ. ಬೆಂಗಳೂರಿನಿಂದ ದೊಡ್ಡಬಳ್ಳಾಪುರ ತಾಲ್ಲೂಕು ಮಧುರೆ ಹೋಬಳಿಯ ಕನಸವಾಡಿ ಬಳಿಯ ಮಧುರೆ ಕೆರೆ ದಡದಲ್ಲಿ ನೆಲೆಸಿರುವ ಶ್ರೀ ಶನಿಮಹಾತ್ಮ ದೇವಾಲಯವು ನಾಡಿನ ಶನಿ ಭಕ್ತರ ಪಾಲಿನ ಮಹಾ ಪುಣ್ಯ ಕ್ಷೇತ್ರ. ನವಗ್ರಹಗಳಲ್ಲಿ ಕರ್ಮಫಲದಾತ, ನ್ಯಾಯಾಧೀಶನೆಂದೇ ಖ್ಯಾತನಾದ ಶನಿ ದೇವನಿಗೆ ಮುಡಿಪಾದ ಈ ದೇವಾಲಯವು ತನ್ನ ಇತಿಹಾಸ, ಮಹಿಮೆ ಮತ್ತು ಭಕ್ತರ ನಂಬಿಕೆಯಿಂದಾಗಿ ದಕ್ಷಿಣ ಭಾರತದಲ್ಲೇ ಅಪರೂಪದ ಸ್ಥಾನ ಪಡೆದಿದೆ.

Chikka Madhure Temple

ಶನಿವಾರದಂದು ಇಲ್ಲಿಗೆ ಕಾಲಿಟ್ಟರೆ ಭಕ್ತಿಯೇ ಒಂದು ವಿಭಿನ್ನ ಅನುಭವ. ಕೈಯಲ್ಲಿ ಎಳ್ಳುಬತ್ತಿ, ಬಾಯಲ್ಲಿ ಶನಿಮಹಾತ್ಮನ ನಾಮಸ್ಮರಣೆ, ಮನಸಿನಲ್ಲಿ ತಮ್ಮ ಸಂಕಷ್ಟಗಳು ದೂರವಾಗಲಿ ಎಂಬ ಪ್ರಾರ್ಥನೆ! ಶನಿವಾರದಂದು ಸಾವಿರಾರು ಭಕ್ತರು ಈ ಕ್ಷೇತ್ರದತ್ತ ಬರುತ್ತಾರೆ. ಇತರ ದಿನಗಳಲ್ಲೂ ಒಂದು ಧಾರ್ಮಿಕ ಪ್ರವಾಸ ಕ್ಷೇತ್ರವೆಂಬಂತೆ ಸಹಸ್ರಾರು ಮಂದಿ ಭೇಟಿ ನೀಡುತ್ತಾರೆ.

ಬೆಂಗಳೂರು ನಗರದಿಂದ ಸುಮಾರು 45 ಕಿ.ಮೀ., ನೆಲಮಂಗಲದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರ, ಆಧ್ಯಾತ್ಮಿಕ ಪ್ರವಾಸಕ್ಕೆ ಸುಲಭವಾಗಿ ಸೇರಿಸಿಕೊಳ್ಳಬಹುದಾದ ತಾಣವೂ ಹೌದು. ಮಧುರೆ ಕೆರೆಯ ದಡದಲ್ಲಿರುವ ಸ್ಥಳದ ನೈಸರ್ಗಿಕ ಹಿನ್ನೆಲೆ ಈ ದೇವಾಲಯಕ್ಕೆ ಪ್ರಾಕೃತಿಕ ಮೆರುಗು ಕೊಡುವಲ್ಲಿ ಯಶಸ್ವಿಯಾಗಿದೆ. ದೇವಾಲಯದ ಸ್ಥಳೀಯ ಹೆಸರು ಚಿಕ್ಕಮಧುರೆ ಅಥವಾ ಕನಸವಾಡಿ ಕ್ಷೇತ್ರ ಎಂಬ ರೂಪದಲ್ಲಿಯೂ ಬಳಕೆಯಲ್ಲಿದೆ.

ರೈತನ ಭಕ್ತಿಯಿಂದ ಹುಟ್ಟಿದ ದೇವಾಲಯ

ಸ್ಥಳೀಯರಾದ ಬಡರೈತಾಪಿ ಕುಟುಂಬದ ಗಂಗಾಹನುಮಯ್ಯ ಅವರಿಗೆ ಈ ದೇವಾಲಯವನ್ನು ನಿರ್ಮಿಸಿದ ಹಿರಿಮೆ ಸಲ್ಲುತ್ತದೆ. ಶನಿ ದೇವರ ಆರಾಧನೆಯ ಮೂಲಕ ಜೀವನದ ಕಷ್ಟ-ಕಲಹಗಳು ಶಮನವಾಗಲಿ ಎಂಬ ಭಾವನೆಯಿಂದ ಹಾಗೂ ಸ್ವತಃ ದೇವರ ಪ್ರೇರಣೆಯಿಂದ ಈ ದೇವಾಲಯದ ನಿರ್ಮಾಣವಾಗಿದ್ದು, ಅದರ ಹಿಂದೆ ಮೈನವಿರೇಳಿಸುವ ಪವಾಡಗಳ ಸತ್ಯಕಥೆ ಇದೆ. ಒಬ್ಬ ಸ್ಥಳೀಯ ರೈತನ ಭಕ್ತಿ, ನಂಬಿಕೆ ಮತ್ತು ಸಂಕಲ್ಪದಿಂದ ರೂಪುಗೊಂಡ ಕ್ಷೇತ್ರ ಎಂಬುದು ಚಿಕ್ಕಮಧುರೆಯ ಇತಿಹಾಸದ ಪ್ರಮುಖ ಅಂಶ.

ಅದರಲ್ಲೇ ಈ ಕ್ಷೇತ್ರದ ಆತ್ಮವಿದೆ. ಕಾಲಕ್ರಮೇಣ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಈ ದೇವಾಲಯ ಭಕ್ತಿಯ ಕೇಂದ್ರವಾಯಿತು. ನಂತರ ಶನಿಮಹಾತ್ಮನ ಮಹಿಮೆಯ ಬಗ್ಗೆ ಭಕ್ತರಲ್ಲಿ ಬೆಳೆದ ನಂಬಿಕೆ ಕ್ಷೇತ್ರದ ವ್ಯಾಪ್ತಿಯನ್ನು ಗ್ರಾಮದಿಂದ ತಾಲೂಕಿಗೆ, ತಾಲೂಕಿನಿಂದ ಜಿಲ್ಲೆಗೆ, ಅಲ್ಲಿಂದ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸಿತು.

ಇಂದು ಶನಿವಾರದಂದು ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಡೀ ದಕ್ಷಿಣ ಭಾರತದಲ್ಲೇ ಈ ದೇವಾಲಯದಷ್ಟು ಮಹಿಮೆ ಶಕ್ತಿಯನ್ನುಳ್ಳ ಇನ್ನೊಂದು ಶನಿದೇವರ ದೇವಾಲಯ ಇಲ್ಲ ಎಂದು ಹೇಳಲಾಗುತ್ತದೆ. ಬರುವ ಅನೇಕ ಭಕ್ತರಲ್ಲಿ ಶನಿಮಹಾತ್ಮನ ದರ್ಶನ, ಪ್ರಾರ್ಥನೆ ಮತ್ತು ಎಳ್ಳುಬತ್ತಿ ಸೇವೆಯಿಂದ ಜೀವನದ ಅಡೆತಡೆಗಳು ಕಡಿಮೆಯಾಗುತ್ತವೆ ಎಂಬ ಭಕ್ತಿಭಾವ ಗಟ್ಟಿಯಾಗಿದೆ.

Chikka Madhure Shani Temple

ಕಪ್ಪು ವರ್ಣದ ಶನಿದೇವರ ಮೂರ್ತಿ

ದೇವಾಲಯದ ಗರ್ಭಗುಡಿಯಲ್ಲಿರುವ ಶನಿಮಹಾತ್ಮನ ವಿಗ್ರಹ ಕಪ್ಪು ವರ್ಣದಲ್ಲಿದ್ದು, ಕಪ್ಪು ವಸ್ತ್ರದಿಂದ ಅಲಂಕರಿಸಲಾಗುತ್ತದೆ. ಆಭರಣಗಳಿಂದ ಅಲಂಕರಿಸಲ್ಪಡುವ ಸ್ವಾಮಿಯ ದರ್ಶನ ಭಕ್ತರಿಗೆ ವಿಶೇಷ ಅನುಭವ ನೀಡುತ್ತದೆ. ಅತಿ ಶೀಘ್ರದಲ್ಲಿ ದಾನಿಯೊಬ್ಬರ ಕೊಡುಗೆಯಿಂದಾಗಿ ಶನಿದೇವರ ಗರ್ಭಗುಡಿಯ ಗೋಡೆಗಳಿಗೆ ಬೆಳ್ಳಿ ಕವಚದ ಹೊದಿಕೆ ಬರಲಿದೆ. ಇದರ ಎದುರು ವೀರಾಂಜನೇಯ ಸ್ವಾಮಿಯ ಸನ್ನಿಧಿಯೂ ಇದ್ದು, ಶನಿ-ಆಂಜನೇಯರ ಈ ಸಂಯೋಗ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ

ಎಳ್ಳುಬತ್ತಿಯ ಸೇವೆ ಮತ್ತು ವಾಹನ ಪೂಜೆ

ಕಪ್ಪು ಎಳ್ಳನ್ನು ಬಟ್ಟೆಯಲ್ಲಿ ಕಟ್ಟಿ ಎಳ್ಳೆಣ್ಣೆಯಲ್ಲಿ ಅದ್ದಿ ದೀಪದ ರೂಪದಲ್ಲಿ ಬೆಳಗಿಸುವ ಈ ಸೇವೆ ಶನಿ ಆರಾಧನೆಯ ಪ್ರಮುಖ ಆಚರಣೆ. ತಮ್ಮ ಸಂಕಷ್ಟಗಳು ನಿವಾರಣೆಯಾಗಲಿ, ಕುಟುಂಬದಲ್ಲಿ ನೆಮ್ಮದಿ ನೆಲೆಸಲಿ, ಉದ್ಯೋಗ-ವ್ಯವಹಾರದಲ್ಲಿ ಅಡೆತಡೆಗಳು ದೂರವಾಗಲಿ ಎಂಬ ಪ್ರಾರ್ಥನೆಯೊಂದಿಗೆ ಭಕ್ತರು ಎಳ್ಳುಬತ್ತಿ ಹಚ್ಚುತ್ತಾರೆ. ಇಲ್ಲಿ ವಾಹನ ಪೂಜೆಗೆ ವಿಶೇಷ ಮಹತ್ವವಿದೆ. ಹೊಸ ವಾಹನ ಖರೀದಿಸಿದವರು ಹಾಗೂ ತಮ್ಮ ವಾಹನಗಳಿಗೆ ಶನಿಮಹಾತ್ಮನ ಆಶೀರ್ವಾದ ದೊರೆಯಲಿ, ಪ್ರಯಾಣಗಳು ಸುರಕ್ಷಿತವಾಗಿರಲಿ ಎಂಬ ನಂಬಿಕೆಯಿಂದ ಭಕ್ತರು ಇಲ್ಲಿ ವಾಹನ ಪೂಜೆ ಮಾಡಿಸುತ್ತಾರೆ.

ದ್ರಾವಿಡ ವಾಸ್ತುಶಿಲ್ಪದ ಸೊಬಗು

ಚಿಕ್ಕಮಧುರೆ ಶನಿಮಹಾತ್ಮ ದೇವಾಲಯವು ಧಾರ್ಮಿಕ ಕ್ಷೇತ್ರ ಮಾತ್ರವಲ್ಲ; ವಾಸ್ತುಶಿಲ್ಪದ ದೃಷ್ಟಿಯಿಂದಲೂ ಗಮನ ಸೆಳೆಯುತ್ತದೆ. ದಕ್ಷಿಣ ಭಾರತದ ದ್ರಾವಿಡ ದೇವಾಲಯಗಳ ಮಾದರಿಯಲ್ಲಿ ನಿರ್ಮಾಣಗೊಂಡಿರುವ ದೇವಾಲಯದ ಗೋಪುರದ ಮೇಲೆ ವಿವಿಧ ಶಿಲ್ಪಗಳು ಮತ್ತು ಕೆತ್ತನೆಗಳು ಕಾಣಸಿಗುತ್ತವೆ. ಗೋಪುರದ ಕಲಾತ್ಮಕ ವಿನ್ಯಾಸ ಹಾಗೂ ಅದರ ಮೇಲಿನ ಶಿಲ್ಪಕಲೆಯು ದೇವಾಲಯದ ಪ್ರಮುಖ ಆಕರ್ಷಣೆಗಳಾಗಿವೆ.

Chikka Madhure Shani Kshetra

ಶನಿವಾರ ಎಂದರೆ ಚಿಕ್ಕಮಧುರೆಯಲ್ಲಿ ಹಬ್ಬದ ವಾತಾವರಣ

ಚಿಕ್ಕಮಧುರೆಯ ನಿಜವಾದ ಜನಜಂಗುಳಿ ಶನಿವಾರ ಕಾಣಿಸುತ್ತದೆ. ವಿಶೇಷವಾಗಿ ಶ್ರಾವಣ ಮಾಸದ ಶನಿವಾರಗಳಲ್ಲಿ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತದೆ. ಶ್ರಾವಣ ಶನಿವಾರಗಳಲ್ಲಿ, ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಶನಿಮಹಾತ್ಮಸ್ವಾಮಿ ಮತ್ತು ಜೇಷ್ಠಾದೇವಿಯ ದರ್ಶನ ಪಡೆಯುತ್ತಾರೆ. ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯೂ ಇರುತ್ತದೆ. ಅಂದರೆ ಇದು ಕೇವಲ ಒಂದು ಗಂಟೆ-ಎರಡು ಗಂಟೆಯ ಪೂಜಾ ಕೇಂದ್ರವಲ್ಲ. ಒಂದು ದಿನದ ಆಧ್ಯಾತ್ಮಿಕ ಪ್ರವಾಸದ ಅನುಭವ ನೀಡುವ ಕ್ಷೇತ್ರ.

ಗೌಡಗೆರೆ ಚಾಮುಂಡೇಶ್ವರಿ ಸನ್ನಿಧಿಯ ದರ್ಶನ

ರಥೋತ್ಸವದ ವೈಭವ

ಚಿಕ್ಕಮಧುರೆ ಕ್ಷೇತ್ರದ ಪ್ರಮುಖ ವಾರ್ಷಿಕ ಆಚರಣೆಗಳಲ್ಲಿ ಬ್ರಹ್ಮರಥೋತ್ಸವ ಪ್ರಮುಖವಾದದ್ದು. ಶನಿಮಹಾತ್ಮನ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ನಡೆಸುವ ಸಂಪ್ರದಾಯ ಇಲ್ಲಿ ನಡೆಯುತ್ತದೆ. ವಾರ್ಷಿಕ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ ಮತ್ತು ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರಗೆ ಕರೆತಂದು ಸುತ್ತಮುತ್ತಲ ಪ್ರದೇಶದಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ದ್ರಾವಿಡ ವಾಸ್ತುಶಿಲ್ಪದ ಸೊಬಗು

ಚಿಕ್ಕಮಧುರೆ ಶನಿಮಹಾತ್ಮ ದೇವಾಲಯವು ಧಾರ್ಮಿಕ ಕ್ಷೇತ್ರ ಮಾತ್ರವಲ್ಲ; ವಾಸ್ತುಶಿಲ್ಪದ ದೃಷ್ಟಿಯಿಂದಲೂ ಗಮನ ಸೆಳೆಯುತ್ತದೆ. ದಕ್ಷಿಣ ಭಾರತದ ದ್ರಾವಿಡ ದೇವಾಲಯಗಳ ಮಾದರಿಯಲ್ಲಿ ನಿರ್ಮಾಣಗೊಂಡಿರುವ ದೇವಾಲಯದ ಗೋಪುರದ ಮೇಲೆ ವಿವಿಧ ಶಿಲ್ಪಗಳು ಮತ್ತು ಕೆತ್ತನೆಗಳು ಕಾಣಸಿಗುತ್ತವೆ. ಗೋಪುರದ ಕಲಾತ್ಮಕ ವಿನ್ಯಾಸ ಹಾಗೂ ಅದರ ಮೇಲಿನ ಶಿಲ್ಪಕಲೆಯು ದೇವಾಲಯದ ಪ್ರಮುಖ ಆಕರ್ಷಣೆಗಳಾಗಿವೆ.

Chikka Madhure Shani Mahathma Kshetra

ಅನ್ನದಾನ: ದರ್ಶನದ ನಂತರ ದಾಸೋಹ

ದೇವಾಲಯದ ಧಾರ್ಮಿಕ ಚಟುವಟಿಕೆಗಳಲ್ಲಿ ಅನ್ನಸಂತರ್ಪಣೆಗೂ ಮಹತ್ವವಿದೆ. ವಿಶೇಷ ದಿನಗಳಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ವಿಶೇಷ ಅನ್ನದಾನ ವ್ಯವಸ್ಥೆ ಮಾಡಲಾಗುತ್ತದೆ. ಅದಲ್ಲದೇ ಪ್ರತಿ ದಿನವೂ ದೇವಸ್ಥಾನಕ್ಕೆ ಬರುವ ಭಕ್ತವೃಂದಕ್ಕೆ ಹಾಗೂ ಸ್ಥಳೀಯ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ ತಿಂಡಿ ಹಾಗೂ ಊಟ ನೀಡಲಾಗುತ್ತಿದೆ.

"ದೇವರ ದರ್ಶನಕ್ಕೆ ಬರುವ ಯಾವ ಭಕ್ತನೂ ಹಸಿವಿನಿಂದ ಹಿಂತಿರುಗಬಾರದು ಎಂಬುದು ನಮ್ಮ ಸಂಕಲ್ಪ" ಎಂದು ಆಡಳಿತ ಮಂಡಳಿ ಹೇಳುತ್ತದೆ. ಹಬ್ಬದ ದಿನಗಳಲ್ಲಿ ಈ ಸಂಖ್ಯೆ 10 ಸಾವಿರಕ್ಕೂ ಮೀರುತ್ತದೆ.

ಸ್ವಚ್ಛ ವಿಶಾಲ ಪ್ರಾಂಗಣ

ಒಂದು ದೇವಾಲಯ ಸಾವಿರಾರು ಭಕ್ತರನ್ನು ಸೆಳೆಯಲು ಆರಂಭಿಸಿದಾಗ ಅದರ ಜವಾಬ್ದಾರಿಯೂ ಹೆಚ್ಚುತ್ತದೆ. ಪಾರ್ಕಿಂಗ್, ಸರತಿ ವ್ಯವಸ್ಥೆ, ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ಭದ್ರತೆ, ಅನ್ನಸಂತರ್ಪಣೆ, ಉತ್ಸವ ನಿರ್ವಹಣೆ ಎಲ್ಲವೂ ವ್ಯವಸ್ಥಿತವಾಗಬೇಕಾಗುತ್ತದೆ. ಚಿಕ್ಕಮಧುರೆ ಕ್ಷೇತ್ರದ ಜನಪ್ರಿಯತೆಗೆ ಇಲ್ಲಿನ ಮೂಲಸೌಕರ್ಯಗಳೂ ಕಾರಣ. ದೇವಾಲಯವೂ ಅತ್ಯಂತ ಸ್ವಚ್ಛತೆಯಿಂದ ಕೂಡಿದೆ. ಅದೇ ರೀತಿ ಇಲ್ಲಿನ ಭೋಜನಶಾಲೆಯು ತನ್ನ ಶುಚಿಯಿಂದಾಗಿ ಹಾಗೂ ಆಹಾರದ ರುಚಿಯಿಂದಾಗಿ ಹೆಸರು ಮಾಡಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿಂದಾಗಿ ಪ್ರವಾಸಿಗರಿಗೆ ಇಲ್ಲಿ ಯಾವುದೇ ಅನಾನುಕೂಲವಾಗುವುದಿಲ್ಲ.

ದೇವಾಲಯದ ಟ್ರಸ್ಟ್ ಹಾಗೂ ಸ್ಥಳೀಯ ವ್ಯವಸ್ಥಾಪಕರು ಪಾರಂಪರಿಕ ದೇವಾಲಯದ ಸ್ವರೂಪವನ್ನು ಉಳಿಸಿಕೊಂಡು, ಭಕ್ತರಿಗೆ ಆಧುನಿಕ ಸೌಲಭ್ಯ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

Chikka Madhure Shani Mahathma Kshetra Bengaluru

ಒಂದು ಕ್ಷೇತ್ರ… ಹಲವು ಅನುಭವಗಳು

ಚಿಕ್ಕಮಧುರೆಯ ಮತ್ತೊಂದು ವಿಶೇಷವೆಂದರೆ ಅದರ ಸುತ್ತಲಿನ ಭೌಗೋಳಿಕ ಪರಿಸರ. ಮಧುರೆ ಕೆರೆಯ ದಡದಲ್ಲಿರುವುದರಿಂದ ದೇವಾಲಯದ ಭೇಟಿಯನ್ನು ಪ್ರಕೃತಿ ಅನುಭವದೊಂದಿಗೆ ಜೋಡಿಸಬಹುದು. ನಗರದ ಗದ್ದಲದಿಂದ ಹೊರಬಂದು ಗ್ರಾಮೀಣ ವಾತಾವರಣದಲ್ಲಿ ಕೆಲ ಗಂಟೆ ಕಳೆಯಲು ಬಯಸುವವರಿಗೆ ಇದು ಸಮೀಪದ ತಾಣ. ಪ್ರವಾಸಿ ದೃಷ್ಟಿಯಿಂದ ನೋಡಿದರೆ, ಚಿಕ್ಕಮಧುರೆ–ದೊಡ್ಡಬಳ್ಳಾಪುರ–ಘಾಟಿ ಸುಬ್ರಹ್ಮಣ್ಯ–ಇತರೆ ಸುತ್ತಮುತ್ತಲಿನ ದೇವಾಲಯಗಳನ್ನು ಒಳಗೊಂಡ ಒಂದು ದಿನದ ಧಾರ್ಮಿಕ ಪ್ರವಾಸ ವಲಯ ರೂಪಿಸುವ ಅವಕಾಶವೂ ಇದೆ.

ನಂಬಿಕೆಯೇ ಈ ಕ್ಷೇತ್ರದ ದೊಡ್ಡ ಶಕ್ತಿ

ಚಿಕ್ಕಮಧುರೆ ಶನಿಮಹಾತ್ಮ ಕ್ಷೇತ್ರದ ಕಥೆಯಲ್ಲಿ ದೊಡ್ಡ ಅರಮನೆಗಳಿಲ್ಲ. ರಾಜರ ಇತಿಹಾಸವೂ ಇಲ್ಲ. ಆದರೆ ಒಬ್ಬ ಬಡರೈತನ ಭಕ್ತಿ ಇದೆ. ಆ ಭಕ್ತಿಯಿಂದ ಹುಟ್ಟಿದ ದೇವಾಲಯ ಇಂದು ಸಾವಿರಾರು ಜನರ ನಂಬಿಕೆಯ ತಾಣವಾಗಿದೆ.

ಯಾರೋ ಉದ್ಯೋಗಕ್ಕಾಗಿ ಪ್ರಾರ್ಥಿಸುತ್ತಾರೆ. ಯಾರೋ ವ್ಯವಹಾರದಲ್ಲಿ ಯಶಸ್ಸಿಗಾಗಿ. ಯಾರೋ ಕುಟುಂಬದ ನೆಮ್ಮದಿಗಾಗಿ, ಆರೋಗ್ಯಕ್ಕಾಗಿ ಇಲ್ಲಿಗೆ ಬರುತ್ತಾರೆ. ಬದುಕಿನ ಸಂಕಷ್ಟಗಳಿಂದ ಮುಕ್ತಿ ಕೋರಿಯೂ ಬರುತ್ತಾರೆ. ಅವರೆಲ್ಲರ ಪ್ರಾರ್ಥನೆಗಳು ಫಲಿಸಿವೆ. ಪವಾಡವೆಂಬಂತೆ ಭಕ್ತರ ಆಶೋತ್ತರಗಳು ಈಡೇರಿವೆ. ಬಹುಶಃ ಅದಕ್ಕೆ ಚಿಕ್ಕಮಧುರೆ ಇಂದಿಗೂ ಜನರನ್ನು ತನ್ನತ್ತ ಸೆಳೆಯುತ್ತಿದೆ.

ಧರ್ಮದೊಂದಿಗೆ ಜ್ಞಾನ-ವಿಜ್ಞಾನದ ಬೆಳಕು

ಚಿಕ್ಕಮಧುರೆಗೆ ಹೋಗುವ ಮುನ್ನ

ದರ್ಶನಕ್ಕೆ ಉತ್ತಮ ಸಮಯ: ಶನಿವಾರ; ಶ್ರಾವಣ ಶನಿವಾರಗಳಲ್ಲಿ ವಿಶೇಷ ಭಕ್ತಸಂದಣಿ.

ಬೆಳಗಿನ ದರ್ಶನ: ವಿಶೇಷವಾಗಿ ಶನಿವಾರದಂದು ಮುಂಜಾನೆಯೇ ಆಗಮಿಸಿದರೆ ಹೆಚ್ಚಿನ ಜನಸಂದಣಿಯನ್ನು ತಪ್ಪಿಸಬಹುದು. 2026ರ ಶ್ರಾವಣ ಶನಿವಾರದ ವರದಿಯಲ್ಲಿ ಮುಂಜಾನೆ 3 ಗಂಟೆಯಿಂದಲೇ ಭಕ್ತರು ಸರತಿಯಲ್ಲಿ ನಿಲ್ಲುತ್ತಾರೆ.

Gangahanumayya

ತಲುಪುವುದು ಹೇಗೆ?

ಬೆಂಗಳೂರಿನಿಂದ 45 ಕಿ.ಮೀ. ಬೆಂಗಳೂರು–ನೆಲಮಂಗಲ–ಚಿಕ್ಕಮಧುರೆ ಮಾರ್ಗವಾಗಿ ದೇವಾಲಯವನ್ನು ತಲುಪಬಹುದು. ಬೆಂಗಳೂರಿನಿಂದ ನೆಲಮಂಗಲ-ದೊಡ್ಡಬಳ್ಳಾಪುರ ರಸ್ತೆಯಲ್ಲಿ 14 ಕಿ.ಮೀ ದೂರದಲ್ಲಿ ಈ ಕ್ಷೇತ್ರವಿದೆ. ಬೆಂಗಳೂರಿನಿಂದ ಕೆಎಸ್ಆರ್‌ಟಿಸಿ ಬಸ್ಸುಗಳು ನೆಲಮಂಗಲಕ್ಕೆ ಸಿಗುತ್ತವೆ. ಅಲ್ಲಿಂದ ಖಾಸಗಿ ವಾಹನ ಅಥವಾ ಆಟೋ ಮೂಲಕ ತಲುಪಬಹುದು.

image

ಚಿಕ್ಕಮಧುರೆ ಶನಿಮಹಾತ್ಮ ಕ್ಷೇತ್ರ ಇಂದು ಕೇವಲ ಒಂದು ದೇವಾಲಯವಾಗಿ ಉಳಿದಿಲ್ಲ. ಸಾವಿರಾರು ಭಕ್ತರ ನಂಬಿಕೆಯ ಕೇಂದ್ರವಾಗಿ ಬೆಳೆದಿದೆ. ಭಕ್ತರಿಗೆ ಉತ್ತಮ ದರ್ಶನ, ಪೂಜೆ, ಅನ್ನದಾಸೋಹ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ನಮ್ಮ ಪ್ರಮುಖ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪಾರಂಪರಿಕ ಸ್ವರೂಪವನ್ನು ಉಳಿಸಿಕೊಂಡೇ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶವಿದೆ. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತನಿಗೂ ನೆಮ್ಮದಿಯ ಅನುಭವ ಸಿಗಬೇಕು ಎನ್ನುವುದೇ ನಮ್ಮ ಆಶಯ.

ಪ್ರಕಾಶ್, ಧರ್ಮದರ್ಶಿಗಳು
image

ಶನಿಮಹಾತ್ಮನ ಕ್ಷೇತ್ರಕ್ಕೆ ಬರುವ ಭಕ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಾರೆ; ಆದರೆ ದರ್ಶನದ ನಂತರ ಒಂದು ರೀತಿಯ ನೆಮ್ಮದಿಯೊಂದಿಗೆ ಹಿಂದಿರುಗುತ್ತಾರೆ. ಆ ನಂಬಿಕೆಯೇ ಈ ಕ್ಷೇತ್ರದ ದೊಡ್ಡ ಶಕ್ತಿ. ಭಕ್ತರಿಂದ ಭಕ್ತಿಯ ಹೊರತಾಗಿ ಯಾವ ನಿರೀಕ್ಷೆಯೂ ದೇವಾಲಯಕ್ಕಿಲ್ಲ. ನಂಬಿಕೆ ಮತ್ತು ಭಕ್ತಿಯಿಂದ ಬಂದು ಹೋಗಲಿ. ಅವರ ಹರಕೆಗಳು ಫಲಿಸುತ್ತವೆ.

ರಾಜ್ ಕುಮಾರ್, ಅಧ್ಯಕ್ಷರು
image

ಎಪ್ಪತ್ತೈದು ವರ್ಷದ ಹಿಂದೆ ಗಂಗಹನುಮಯ್ಯನವರಿಗೆ ದೈವ ಪ್ರೇರಣೆಯಾದಾಗ ಕಟ್ಟಲ್ಪಟ್ಟ ದೇವಾಲಯ ಇದೀಗ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿ ಬೆಳೆದು ನಿಂತಿದೆ. ಜೇಷ್ಠಾದೇವಿಯ ದೇವಾಲಯವೂ ಇಲ್ಲಿಯೇ ಇದೆ. ದಕ್ಷಿಣ ಭಾರತದಲ್ಲೇ ಅತ್ಯಂತ ಮಹಿಮೆಯುಳ್ಳ ಶನಿದೇವಸ್ಥಾನ ಇದಾಗಿದ್ದು, ಭಕ್ತರು ಇಲ್ಲಿ ನಂಬಲಸಾಧ್ಯವಾದ ಪವಾಡಗಳನ್ನು ಕಂಡಿದ್ದಾರೆ, ಅನುಭವಿಸಿದ್ದಾರೆ. ನಂಬಿಕೆ ಇಟ್ಟು ಬಂದ ಭಕ್ತರನ್ನು ಇಲ್ಲಿನ ದೇವರು ನಿರಾಶೆಗೊಳಿಸಿಲ್ಲ.

ಸತ್ಯನಾರಾಯಣ, ಪ್ರಧಾನ ಅರ್ಚಕರು

Ramesh Ballamoole

View all posts by this author