ಬೆಂಗಳೂರು: ಇ-ಖಾತಾ (E khata) ಮಾಡಿಕೊಡಲು ಅಧಿಕಾರಿಗಳು ಲಂಚ ಸ್ವೀಕರಿಸುತ್ತಿರುವ ಬಗ್ಗೆ ಸದನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಮಂಗಳವಾರ ಆಕ್ರೋಶ ಹೊರಹಾಕಿದರು. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮೌನವಾಗಿರುವುದನ್ನು ಕಂಡ ಶಾಸಕ ವಿ. ಸುನೀಲ್ ಕುಮಾರ್, ಕೆಲವು ಬಾರಿ ಮೌನವು ಸಮ್ಮತಿ ಸೂಚಿಸುತ್ತದೆ ಎಂದು ಟೀಕಿಸಿದರು. ನಿಮ್ಮ ಆಡಳಿತ ಉತ್ತಮವಾಗಿದ್ದಲ್ಲಿ ಅಧಿಕಾರಿಗಳ ಭಷ್ಟಾಚಾರದ ಬಗ್ಗೆ ದಾಖಲೆ ಸಮೇತ ಸಾಕ್ಷ್ಯ ನೀಡಿದಾಗ ನೀವು ಕೂಡಲೇ ಸಸ್ಪೆಂಡ್ ಮಾಡ್ತೀರಿ ಅನ್ಕೊಂಡೆ. ಆದರೆ ನೀವು ಏನು ಮಾಡುತ್ತಿಲ್ಲ ಎಂದರೆ ಇದಕ್ಕೆ ನಿಮ್ಮ ಸಮ್ಮತಿ ಇದೆಯಾ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಇದಕ್ಕೆ ನಿಮ್ಮ ಸಮ್ಮತಿ ಇರಬೇಕು ಅಷ್ಟೇ ನಮ್ಮ ಸಮ್ಮತಿ ಇಲ್ಲ ಎಂದು ಹೇಳಿದರು.