ಬೆಳಗಾವಿ, ಮಾ. 24: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮುಂದುವರಿದಿದೆ. ಕೇಂದ್ರ ದೇಶದಲ್ಲಿ ತೈಲಕ್ಕೆ ಯಾವುದೇ ಕೊರತೆ ಇಲ್ಲ ಎಂದು ಪದೆ ಪದೇ ಹೇಳುತ್ತಿದ್ದರೂ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಮಧ್ಯೆ ಬೆಳಗಾವಿಯಲ್ಲಿ ತೈಲ ಕೊರತೆಯಾಗಿದೆ ಎನ್ನುವ ವದಂತಿ ಹರಡಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತು (Belagavi News). ಕೆಲವರು ಮನೆಯಲ್ಲಿರುವ ನೀರು ಸಂಗ್ರಹಿಸುವ ಬ್ಯಾರೆಲ್, ಕ್ಯಾನ್ಗಳನ್ನು ತಂದು ಪೆಟ್ರೋಲ್, ಡಿಸೇಲ್ ತುಂಬಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ನಗರದ ಆಜಂನಗರ, ಬಾಕ್ಸೆಟ್ ರಸ್ತೆ, ವಿನಾಯಕ ನಗರ, ಮಹಾಂತೇಶ ನಗರ, ಶ್ರೀನಗರ ಸೇರಿ ಬಹುತೇಕ ಪ್ರದೇಶಗಳಲ್ಲಿ ಗ್ರಾಹಕರು ಸಾಲು ಗಟ್ಟಿ ಪೆಟ್ರೋಲ್ ಮತ್ತು ಡಿಸೇಲ್ ಖರೀದಿಸಲು ಹರಸಾಹಸ ಪಟ್ಟರು. ಪೆಟ್ರೋಲ್ ಮತ್ತು ಡಿಸೇಲ್ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಬಂಕ್ ಮಾಲಕರು ಹೇಳಿದರೂ ಯಾರೂ ಪರಿಸ್ಥಿತಿಯಲ್ಲಿ ಇಲ್ಲ.