ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shivraj Singh Chouhan‌ Column: ಗ್ರಾಮೀಣ ಭಾರತದ ಸಬಲೀಕರಣಕ್ಕಾಗಿ ಉದ್ಯೋಗ ಖಾತರಿ

ಭಾರತದ ಗ್ರಾಮೀಣ ಉದ್ಯೋಗ ಚೌಕಟ್ಟಿನ ದೌರ್ಬಲ್ಯವು ಅದರ ಉದ್ದೇಶದಲ್ಲಿ ಇರಲಿಲ್ಲ, ಬದಲಿಗೆ ಅದರ ರಚನಾತ್ಮಕ ನ್ಯೂನತೆಗಳಲ್ಲಿದ್ದವು; ಇವು ಸುಧಾರಣೆಯನ್ನು ಬಯಸುತ್ತಿದ್ದವು. ವಿಕಸಿತ ಭಾರತ- ಜಿ ರಾಮ್ ಜಿ ವಿಧೇಯಕವನ್ನು ಈ ವಾಸ್ತವದ ಹಿನ್ನೆಲೆಯಲ್ಲಿ ಮೌಲ್ಯಮಾಪನ ಮಾಡಬೇಕಾಗಿದೆ. ಇದು ಹಕ್ಕುಗಳನ್ನು ದುರ್ಬಲಗೊಳಿಸುವ ಬದಲು, ‘ಎಂನರೇಗಾ’ ಯೋಜನೆ ಯಲ್ಲಿನ ನ್ಯೂನತೆಗಳನ್ನು ನೇರವಾಗಿ ಪರಿಹರಿಸುತ್ತದೆ.

ಸಮರ್ಥನೆ

ಶಿವರಾಜ್‌ ಸಿಂಗ್‌ ಚೌಹಾಣ್

ಸಾಮಾಜಿಕ ಲೆಕ್ಕಪರಿಶೋಧನೆ ಹಾಗೂ ಕುಂದುಕೊರತೆ ನಿವಾರಣೆಗೆ ಸಂಬಂಧಿಸಿದ ಶಾಸನ ಬದ್ಧ ಜವಾಬ್ದಾರಿಗಳನ್ನು ಬಲಪಡಿಸುವ ಮೂಲಕ, ವಿಕಸಿತ ಭಾರತ- ಜಿ ರಾಮ್ ಜಿ ವಿಧೇಯಕವು ಉದ್ಯೋಗ ಖಾತರಿ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತದೆ. ಬಲವರ್ಧಿತ ಹೊಣೆಗಾರಿಕೆ ಕಾರ್ಯವಿಧಾನಗಳು ಮತ್ತು ಸಮಯಕ್ಕೆ ಬದ್ಧವಾದ ಕುಂದುಕೊರತೆಗಳ ಪರಿಹಾರವು ಕೇವಲ ಮೇಲ್ನೋಟದ ವೈಶಿಷ್ಟ್ಯಗಳಲ್ಲ; ಅವು ಈ ಹಕ್ಕುಗಳನ್ನು ನೆಲಮಟ್ಟದಲ್ಲಿ ಅರ್ಥಪೂರ್ಣವಾಗಿಸುವ ಪ್ರಮುಖ ಅಂಶಗಳಾಗಿವೆ.

ಕಲ್ಯಾಣ ಸುಧಾರಣೆಗಳ ಕುರಿತಾದ ಸಾರ್ವಜನಿಕ ಚರ್ಚೆಯು ಅಗತ್ಯ ಮತ್ತು ಆರೋಗ್ಯಕರವಾದು ದಾಗಿದೆ. ‘ವಿಕಸಿತ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಆಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’ (ವಿಬಿ- ಜಿ ರಾಮ್ ಜಿ) ಕುರಿತು ಕೆಲವು ವಲಯಗಳಲ್ಲಿ ವ್ಯಕ್ತವಾಗುತ್ತಿರುವ ಆತಂಕಗಳು ನ್ಯಾಯಸಮ್ಮತವಾದ ಕಾಳಜಿಯಿಂದ ಉದ್ಭವಿಸಿವೆ: ಅಂದರೆ, ಐತಿಹಾಸಿಕ ಉದ್ಯೋಗ ಖಾತರಿ ಯೋಜನೆಯಲ್ಲಿ ತರುವ ಯಾವುದೇ ಬದಲಾವಣೆಯು ಕಾರ್ಮಿಕರು ಕಷ್ಟಪಟ್ಟು ಗಳಿಸಿದ ಹಕ್ಕು ಗಳನ್ನು ದುರ್ಬಲಗೊಳಿಸಬಹುದು ಎಂಬ ಆತಂಕವದು.

ಆ ಕಾಳಜಿಯು ಗೌರವಕ್ಕೆ ಅರ್ಹವಾಗಿದೆ. ಆದರೆ, ಇದು ಕೇವಲ ಊಹೆಗಳ ಬದಲಿಗೆ ‘ವಿಕಸಿತ ಭಾರತ- ಜಿ ರಾಮ್ ಜಿ’ ವಿಧೇಯಕವು ವಾಸ್ತವವಾಗಿ ಏನನ್ನು ಒದಗಿಸುತ್ತದೆ ಎಂಬುದರ ಬಗ್ಗೆ ಎಚ್ಚರಿಕೆಯ ಓದನ್ನು ಬಯಸುತ್ತದೆ. ಈ ವಿಧೇಯಕದ ಅತ್ಯಂತ ಪ್ರಮುಖ ಲಕ್ಷಣವೆಂದರೆ, ಇದು ಪ್ರತಿ ಗ್ರಾಮೀಣ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ವೇತನ ಸಹಿತ ಉದ್ಯೋಗದ ಕಾನೂನು ಖಾತರಿ ಯನ್ನು ನೀಡುತ್ತದೆ.

ಅಷ್ಟೇ ಅಲ್ಲದೆ, ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಉದ್ಯೋಗ ನೀಡದಿದ್ದಲ್ಲಿ, ಈ ವಿಧೇಯಕವು ನಿರುದ್ಯೋಗ ಭತ್ಯೆಯನ್ನು ನೀಡಲು ಅವಕಾಶ ಕಲ್ಪಿಸುತ್ತದೆ. ಇದಕ್ಕಾಗಿ ‘ಎಂ-ನರೇಗಾ’ ಕಾಲದ ಹಕ್ಕು ನಿರಾಕರಣೆಯ ನಿಬಂಧನೆಗಳನ್ನು ತೆಗೆದು ಹಾಕಲಾಗಿದೆ.

ಇದನ್ನೂ ಓದಿ: Shivraj Singh Chauhan: ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಎನ್.ಚಲುವರಾಯಸ್ವಾಮಿ ಮನವಿ: ಕೇಂದ್ರದ ಸಮ್ಮತಿ

ಭಾರತದ ಗ್ರಾಮೀಣ ಉದ್ಯೋಗ ಚೌಕಟ್ಟಿನ ದೌರ್ಬಲ್ಯವು ಅದರ ಉದ್ದೇಶದಲ್ಲಿ ಇರಲಿಲ್ಲ, ಬದಲಿಗೆ ಅದರ ರಚನಾತ್ಮಕ ನ್ಯೂನತೆಗಳಲ್ಲಿದ್ದವು; ಇವು ಸುಧಾರಣೆಯನ್ನು ಬಯಸುತ್ತಿದ್ದವು. ವಿಕಸಿತ ಭಾರತ- ಜಿ ರಾಮ್ ಜಿ ವಿಧೇಯಕವನ್ನು ಈ ವಾಸ್ತವದ ಹಿನ್ನೆಲೆಯಲ್ಲಿ ಮೌಲ್ಯಮಾಪನ ಮಾಡಬೇಕಾಗಿದೆ. ಇದು ಹಕ್ಕುಗಳನ್ನು ದುರ್ಬಲಗೊಳಿಸುವ ಬದಲು, ‘ಎಂನರೇಗಾ’ ಯೋಜನೆ ಯಲ್ಲಿನ ನ್ಯೂನತೆಗಳನ್ನು ನೇರವಾಗಿ ಪರಿಹರಿಸುತ್ತದೆ. ಕಾರ್ಮಿಕರಿಗೆ ಸಲ್ಲಬೇಕಾದ ಹಕ್ಕುಗಳನ್ನು ನಿರಾಕರಿಸುತ್ತಿದ್ದ ‘ಹಕ್ಕು ನಿರಾಕರಣೆ’ ನಿಬಂಧನೆಗಳನ್ನು ತೆಗೆದು ಹಾಕುವ ಮೂಲಕ ಮತ್ತು ಪಾರದರ್ಶಕತೆ, ಸಾಮಾಜಿಕ ಲೆಕ್ಕಪರಿಶೋಧನೆ ಹಾಗೂ ಕುಂದುಕೊರತೆ ನಿವಾರಣೆಗೆ ಸಂಬಂಧಿಸಿದ ಶಾಸನಬದ್ಧ ಜವಾಬ್ದಾರಿಗಳನ್ನು ಬಲಪಡಿಸುವ ಮೂಲಕ, ಈ ವಿಧೇಯಕವು ಉದ್ಯೋಗ ಖಾತರಿ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತದೆ.

ಬಲವರ್ಧಿತ ಹೊಣೆಗಾರಿಕೆ ಕಾರ್ಯವಿಧಾನಗಳು ಮತ್ತು ಸಮಯಕ್ಕೆ ಬದ್ಧವಾದ ಕುಂದುಕೊರತೆಗಳ ಪರಿಹಾರವು ಕೇವಲ ಮೇಲ್ನೋಟದ ವೈಶಿಷ್ಟ್ಯಗಳಲ್ಲ; ಅವು ಈ ಹಕ್ಕುಗಳನ್ನು ನೆಲಮಟ್ಟದಲ್ಲಿ ಅರ್ಥಪೂರ್ಣವಾಗಿಸುವ ಪ್ರಮುಖ ಅಂಶಗಳಾಗಿವೆ. ಈ ದೃಷ್ಟಿಕೋನದಿಂದ ನೋಡಿದರೆ, ‘ವಿಕಸಿತ ಭಾರತ- ಜಿ ರಾಮ್ ಜಿ’ ಸಾಮಾಜಿಕ ರಕ್ಷಣೆಯಿಂದ ಹಿಂದೆ ಸರಿಯುತ್ತಿಲ್ಲ. ಬದಲಿಗೆ, ಇದು ಆಗಾಗ್ಗೆ ವಿಫಲಗೊಳ್ಳುತ್ತಿದ್ದ ಹಕ್ಕನ್ನು ನೈಜ ಮತ್ತು ಜಾರಿಗೊಳಿಸಬಹುದಾದ ಗ್ಯಾರಂಟಿಯನ್ನಾಗಿ ಪರಿವರ್ತಿ ಸಲು ಪ್ರಯತ್ನಿಸುತ್ತದೆ.

ಕಾಗದದಲ್ಲಿನ ಹಕ್ಕಿನಿಂದ ನಿಜವಾದ ಸಬಲೀಕರಣದವರೆಗೆ

ಗ್ರಾಮೀಣ ಉದ್ಯೋಗದ ‘ಬೇಡಿಕೆ ಆಧಾರಿತ’ ಸ್ವರೂಪವನ್ನು ‘ವಿಕಸಿತ ಭಾರತ- ಜಿ ರಾಮ್ ಜಿ’ ದುರ್ಬಲಗೊಳಿಸುತ್ತದೆ ಎಂಬುದು ಅತ್ಯಂತ ಸಾಮಾನ್ಯವಾದ ಟೀಕೆಯಾಗಿದೆ. ಆದರೆ, ಈ ವಿಧೇಯಕ ವನ್ನು ಸರಿಯಾಗಿ ಓದಿದಾಗ ಈ ವಾದವು ನಿಲ್ಲುವುದಿಲ್ಲ. ವಿಧೇಯಕದ ಕಲಮು 5(1) ರ ಅಡಿಯಲ್ಲಿ, ಕೌಶಲರಹಿತ ದೈಹಿಕ ಕೆಲಸ ಮಾಡಲು ಮುಂದೆ ಬರುವ ಯಾವುದೇ ಗ್ರಾಮೀಣ ಕುಟುಂಬದ ವಯಸ್ಕ ಸದಸ್ಯರಿಗೆ ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 125 ದಿನಗಳ ಖಾತರಿ ಉದ್ಯೋಗವನ್ನು ಒದಗಿಸುವುದು ಸರಕಾರದ ಸ್ಪಷ್ಟ ಶಾಸನಬದ್ಧ ಜವಾಬ್ದಾರಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.

Screenshot_3 R

ಉದ್ಯೋಗಕ್ಕಾಗಿ ಬೇಡಿಕೆ ಇಡುವ ಹಕ್ಕನ್ನು ದುರ್ಬಲಗೊಳಿಸುವ ಬದಲು, ಈ ವಿಧೇಯಕವು ಖಾತರಿ ಉದ್ಯೋಗದ ಅವಧಿಯನ್ನು 125 ದಿನಗಳಿಗೆ ವಿಸ್ತರಿಸುವ ಮೂಲಕ ಮತ್ತು ‘ಎಂನರೇಗಾ’ ಕಾಲದ ‘ಹಕ್ಕು ನಿರಾಕರಣೆ’ ನಿಬಂಧನೆಗಳನ್ನು ತೆಗೆದು ಹಾಕುವ ಮೂಲಕ ಅದನ್ನು ಮತ್ತಷ್ಟು ಬಲಪಡಿಸು ತ್ತದೆ. ಈ ಮೂಲಕ ನಿರುದ್ಯೋಗ ಭತ್ಯೆಯನ್ನು ಒಂದು ನೈಜ ಶಾಸನಬದ್ಧ ಸುರಕ್ಷತೆಯನ್ನಾಗಿ ಪುನಃಸ್ಥಾಪಿಸುತ್ತದೆ.

ಶಾಸನಬದ್ಧ ಗ್ಯಾರಂಟಿಗಳು ಮತ್ತು ಜಾರಿಗೊಳಿಸಬಹುದಾದ ಹೊಣೆಗಾರಿಕೆಯ ಕಾರ್ಯ ವಿಧಾನ ಗಳಲ್ಲಿ ಅಡಕವಾಗಿರುವ ಹಕ್ಕು ಸಹಜವಾಗಿಯೇ ಪ್ರಬಲವಾಗಿರುತ್ತದೆ ಮತ್ತು ‘ವಿಕಸಿತ ಭಾರತ ಜಿ ರಾಮ್ ಜಿ’ ಈ ಕೆಲಸವನ್ನು ವಾಸ್ತವದಲ್ಲಿ ಮಾಡುತ್ತದೆ.

ಜೀವನೋಪಾಯ ಖಾತರಿಯನ್ನು ಬಲಪಡಿಸುವುದು

ಈ ಸುಧಾರಣೆಯು ಉದ್ಯೋಗಕ್ಕಿಂತ ಹೆಚ್ಚಾಗಿ ಆಸ್ತಿ ಸೃಜನೆಗೆ ಆದ್ಯತೆ ನೀಡುತ್ತದೆ ಎಂಬುದು ಮತ್ತೊಂದು ಟೀಕೆಯಾಗಿದೆ. ಆದರೆ, ಈ ವಿಧೇಯಕವು ಕಾನೂನುಬದ್ಧ ಜೀವನೋಪಾಯದ ಗ್ಯಾರಂಟಿಯನ್ನು ಎತ್ತಿಹಿಡಿಯುವುದರ ಜತೆಗೆ, ಉದ್ಯೋಗ ವನ್ನು ಉತ್ಪಾದಕ ಮತ್ತು ಸುಸ್ಥಿರ ಸಾರ್ವಜನಿಕ ಆಸ್ತಿಗಳ ನಿರ್ಮಾಣದೊಂದಿಗೆ ಸ್ಪಷ್ಟವಾಗಿ ಬೆಸೆದಿದೆ.

ಅನುಸೂಚಿ-1ರ ಕಲಮು 4(2) ನಾಲ್ಕು ಪ್ರಮುಖ ವಿಷಯಾಧಾರಿತ ಕ್ಷೇತ್ರಗಳನ್ನು ಗುರುತಿಸುತ್ತದೆ: ಜಲ ಭದ್ರತೆ, ಪ್ರಮುಖ ಗ್ರಾಮೀಣ ಮೂಲಸೌಕರ್ಯಗಳು, ಜೀವನೋಪಾಯಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳು ಮತ್ತು ತೀವ್ರ ಹವಾಮಾನ ವೈಪರೀತ್ಯಗಳ ಪರಿಣಾಮ ತಗ್ಗಿಸುವ ಕಾಮಗಾರಿ ಗಳು.

ಇದು ವೇತನ ಸಹಿತ ಉದ್ಯೋಗವು ಕೇವಲ ತಕ್ಷಣದ ಆದಾಯದ ಬೆಂಬಲವನ್ನು ನೀಡುವುದು ಮಾತ್ರವಲ್ಲದೆ, ದೀರ್ಘಕಾಲದ ಗ್ರಾಮೀಣ ಸ್ಥಿತಿಸ್ಥಾಪಕತ್ವ ಮತ್ತು ಉತ್ಪಾದಕತೆಗೂ ಕೊಡುಗೆ ನೀಡುವುದನ್ನು ಖಚಿತಪಡಿಸುತ್ತದೆ. ಆದ್ದರಿಂದ, ಉದ್ಯೋಗ ಮತ್ತು ಆಸ್ತಿ ಸೃಜನೆಗಳು ಪರಸ್ಪರ ಪೈಪೋಟಿ ನೀಡುವ ಉದ್ದೇಶಗಳಲ್ಲ; ಬದಲಿಗೆ ಅವು ಸಮೃದ್ಧ ಮತ್ತು ಸದೃಢ ಗ್ರಾಮೀಣ ಭಾರತಕ್ಕೆ ಅಡಿಪಾಯ ಹಾಕುವ ಪರಸ್ಪರ ಪೂರಕ ಅಂಶಗಳಾಗಿವೆ.

ಕೇಂದ್ರೀಕರಣವಲ್ಲ, ಸಮನ್ವಯದ ಮೂಲಕ ವಿಕೇಂದ್ರೀಕರಣ

ಕೇಂದ್ರೀಕರಣದ ಆತಂಕಗಳಿಗೆ ವ್ಯತಿರಿಕ್ತವಾಗಿ, ಕಲಮು 4(1) ರಿಂದ 4(3) ವರೆಗಿನ ನಿಬಂಧನೆಗಳು ಎಲ್ಲಾ ಕಾಮಗಾರಿಗಳನ್ನು ಗ್ರಾಮ ಮಟ್ಟದಲ್ಲಿ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಸಿದ್ಧಪಡಿಸ ಲಾದ ಮತ್ತು ಗ್ರಾಮ ಸಭೆಯಿಂದ ಅನುಮೋದಿಸಲ್ಪಟ್ಟ ‘ವಿಕಸಿತ ಗ್ರಾಮ ಪಂಚಾಯತ್ ಯೋಜನೆ’ ಗಳ (ವಿಜಿಪಿಪಿ) ಅಡಿಯಲ್ಲಿ ಕಾರ್ಯಗತಗೊಳಿಸಲು ಸೂಚಿಸುತ್ತವೆ.

ಹಳೆಯ ಚೌಕಟ್ಟಿನಲ್ಲಿದ್ದ ಪ್ರಮುಖ ರಚನಾತ್ಮಕ ದೋಷವಾದ ‘ವಿಘಟನೆ’ಯನ್ನು ಸರಿಪಡಿಸಲು, ಈ ವಿಧೇಯಕವು ಎಲ್ಲಾ ಕಾಮಗಾರಿಗಳನ್ನು ‘ವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲ ಸೌಕರ್ಯ ಸ್ಟ್ಯಾಕ್’ ಅಡಿಯಲ್ಲಿ ಕ್ರೋಡೀಕರಿಸಲು ನಿರ್ದೇಶಿಸುತ್ತದೆ. ಇದು ಏಕೀಕೃತ ಯೋಜನೆ ಮತ್ತು ಪಾರದರ್ಶಕ ಚೌಕಟ್ಟನ್ನು ಸೃಷ್ಟಿಸುತ್ತದೆ.

ಇದು ಕೇವಲ ಕಟ್ಟಳೆಯ ಮೂಲಕ ಹೇರಿದ ಕೇಂದ್ರೀಕರಣವಲ್ಲ. ಕಲಮು 16, 17, 18 ಮತ್ತು 19ರ ಅಡಿಯಲ್ಲಿ ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಅಧಿಕಾರವನ್ನು ಪಂಚಾಯತ್‌ಗಳು, ಕಾರ್ಯಕ್ರಮ ಅಧಿಕಾರಿಗಳು ಮತ್ತು ಆಯಾ ಹಂತದ ಜಿಲ್ಲಾ ಅಧಿಕಾರಿಗಳಿಗೆ ನೀಡಲಾಗಿದೆ. ಈ ವಿಧೇಯಕವು ಕೇವಲ ಯೋಜನೆಗಳ ಸ್ಪಷ್ಟತೆ, ಸಮನ್ವಯ ಮತ್ತು ಸುಸಂಬದ್ಧತೆಯನ್ನು ಸುಲಭ ಗೊಳಿಸುತ್ತದೆಯೇ ಹೊರತು, ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕೇಂದ್ರದ ಕೈಗೆ ನೀಡುವು ದಿಲ್ಲ. ಸ್ಥಳೀಯ ಆದ್ಯತೆಗಳ ಆಧಾರದ ಮೇಲೆ ಗ್ರಾಮ ಸಭೆಗಳೇ ಯೋಜನೆಯ ಚಾಲನಾ ಶಕ್ತಿಯಾಗಿ ಮುಂದುವರಿಯಲಿವೆ.

ಕಾರ್ಮಿಕರ ಭದ್ರತೆ ಮತ್ತು ಕೃಷಿ ಉತ್ಪಾದಕತೆಯ ನಡುವಿನ ಸಮತೋಲನ

ಕೃಷಿಯ ಬಿಡುವಿಲ್ಲದ ಅವಧಿಯಲ್ಲಿ ಎದುರಾಗುವ ಕಾರ್ಮಿಕರ ಕೊರತೆಯ ಕಾಳಜಿಗಳನ್ನು ಈ ವಿಧೇಯಕದಲ್ಲಿ ಸ್ಪಷ್ಟ ವಾಗಿ ಪರಿಹರಿಸಲಾಗಿದೆ. ಕಲಮು 6ರ ಅಡಿಯಲ್ಲಿ, ಬಿತ್ತನೆ ಮತ್ತು ಕೊಯ್ಲಿ ನಂಥ ಬಿಡುವಿಲ್ಲದ ಸಮಯಗಳನ್ನು ಗುರುತಿಸಿ, ಒಂದು ಹಣಕಾಸು ವರ್ಷದಲ್ಲಿ ಒಟ್ಟು ಅರವತ್ತು ದಿನಗಳವರೆಗೆ ಈ ಯೋಜನೆಯಡಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಮುಂಚಿತವಾಗಿಯೇ ಅಧಿಸೂಚನೆ ಹೊರಡಿಸಲು ರಾಜ್ಯ ಸರಕಾರಗಳಿಗೆ ಅಧಿಕಾರ ನೀಡಲಾಗಿದೆ.

ಮುಖ್ಯವಾಗಿ, ಕಲಮು 6(3) ರ ಪ್ರಕಾರ, ರಾಜ್ಯಗಳು ಹವಾಮಾನ ಮತ್ತು ಕೃಷಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಜಿಲ್ಲೆ, ತಾಲೂಕು ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಭಿನ್ನ ಅಧಿಸೂಚನೆ ಗಳನ್ನು ಹೊರಡಿಸಲು ಅವಕಾಶ ನೀಡುತ್ತದೆ. ಈ ಅಂತರ್ಗತ ನಮ್ಯತೆಯು, ಹೆಚ್ಚುವರಿ ಉದ್ಯೋಗ ಖಾತರಿಯು ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಬದಲು ಅವುಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸುತ್ತದೆ.

ಇದು ಕಲ್ಯಾಣ ಕಾನೂನುಗಳಲ್ಲಿ ಬಹಳ ಅಪರೂಪವಾಗಿ ಕಂಡುಬರುವ ಸಮತೋಲಿತ ಕ್ರಮ ವಾಗಿದೆ. ನಿಯಮಾಧಾರಿತ ಹಂಚಿಕೆಯ ಮೂಲಕ ಸಮಾನತೆ ಹಣಕಾಸಿನ ಹಂಚಿಕೆಯಲ್ಲಿ ಬಿಗಿ ಯಾದ ನಿಯಮಗಳನ್ನು ಹೇರಬಹುದು ಎಂಬ ಆತಂಕಗಳನ್ನು ಟೀಕಾಕಾರರು ವ್ಯಕ್ತಪಡಿಸಿದ್ದಾರೆ.

ಆದರೆ, ಕಲಮು 4(5) ಮತ್ತು ಕಲಮು 22(4) ರ ಪ್ರಕಾರ, ರಾಜ್ಯವಾರು ಅನುದಾನದ ಹಂಚಿಕೆಯನ್ನು ನಿಯಮಗಳಲ್ಲಿ ಸೂಚಿಸಲಾದ ವಸ್ತುನಿಷ್ಠ ನಿಯತಾಂಕಗಳ ಆಧಾರದ ಮೇಲೆ ನಿರ್ಧರಿಸುವುದು ಕಡ್ಡಾಯವಾಗಿದೆ. ಅದೇ ಸಮಯದಲ್ಲಿ, ಈ ಚೌಕಟ್ಟು ರಾಜ್ಯಗಳನ್ನು ಕೇವಲ ಅನುಷ್ಠಾನ ಗೊಳಿಸುವ ಸಂಸ್ಥೆಗಳಾಗಿ ನೋಡದೆ, ಅಭಿವೃದ್ಧಿಯ ಪಾಲುದಾರರನ್ನಾಗಿ ಪರಿಗಣಿಸುತ್ತದೆ.

ವಿಧೇಯಕದಲ್ಲಿ ನಿಗದಿಪಡಿಸಲಾದ ಕನಿಷ್ಠ ಶಾಸನಬದ್ಧ ಚೌಕಟ್ಟಿಗೆ ಅನುಗುಣವಾಗಿ, ರಾಜ್ಯ ಸರಕಾರಗಳು ತಮ್ಮದೇ ಆದ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಅಧಿಕಾರ ನೀಡಲಾಗಿದೆ. ಇದು ಅನುದಾನದ ಹಂಚಿಕೆಯು ನಿಯಮಾಧಾರಿತ ಮತ್ತು ಸಮಾನ ವಾಗಿರುವುದನ್ನು ಖಚಿತಪಡಿಸಿಕೊಳ್ಳುವುದರ ಜತೆಗೆ, ಅನುಷ್ಠಾನದಲ್ಲಿ ನಮ್ಯತೆಯನ್ನು ಉಳಿಸಿ ಕೊಳ್ಳುತ್ತದೆ- ಇದು ಪ್ರಾಯೋಗಿಕವಾಗಿ ‘ಸಹಕಾರ ಒಕ್ಕೂಟ ವ್ಯವಸ್ಥೆ’ಯನ್ನು ಪ್ರತಿಬಿಂಬಿಸುತ್ತದೆ.

ತಂತ್ರಜ್ಞಾನವು ಸಬಲೀಕರಣಕ್ಕಾಗಿ, ಹೊರಗಿಡುವುದಕ್ಕಲ್ಲ ತಂತ್ರಜ್ಞಾನದ ಬಳಕೆಯಿಂದ ಕಾರ್ಮಿ ಕರು ಯೋಜನೆಯಿಂದ ಹೊರಗುಳಿಯಬಹುದು ಎಂಬ ಆತಂಕಗಳು, ವಿಧೇಯಕದಲ್ಲಿ ಅಳವಡಿಸ ಲಾಗಿರುವ ಸುರಕ್ಷತಾ ಕ್ರಮಗಳನ್ನು ಗಮನಿಸದೆ ವ್ಯಕ್ತಪಡಿಸಿದವುಗಳಾಗಿವೆ. ಕಲಮು 23 ಮತ್ತು 24 ತಂತ್ರಜ್ಞಾನ ಆಧಾರಿತ ಪಾರದರ್ಶಕತೆಯನ್ನು ಕಡ್ಡಾಯಗೊಳಿಸುತ್ತವೆ.

ಬಯೋಮೆಟ್ರಿಕ್ ದೃಢೀಕರಣ, ಕಾಮಗಾರಿಗಳ ಜಿಯೋ-ಟ್ಯಾಗಿಂಗ್, ನೈಜ-ಸಮಯದ ಡ್ಯಾಶ್ ಬೋರ್ಡ್‌ಗಳು ಮತ್ತು ನಿಯಮಿತ ಸಾರ್ವಜನಿಕ ಪ್ರಕಟಣೆಗಳ ಮೂಲಕ ನಕಲಿ ಹಾಜರಾತಿ, ಅಸ್ತಿತ್ವದಲ್ಲಿಲ್ಲದ ಕಾರ್ಮಿಕರು ಮತ್ತು ಪರಿಶೀಲಿಸಲಾಗದ ದಾಖಲೆಗಳಂಥ ಸಮಸ್ಯೆಗಳನ್ನು ಇದು ಪರಿಹರಿಸುತ್ತದೆ.

ಇಲ್ಲಿ ತಂತ್ರಜ್ಞಾನವನ್ನು ಕೇವಲ ಪ್ರವೇಶ ನಿರ್ಬಂಧಿಸುವ ಕಠಿಣ ವ್ಯವಸ್ಥೆಯನ್ನಾಗಿ ರೂಪಿಸಿಲ್ಲ, ಬದಲಿಗೆ ಅದೊಂದು ಸಬಲೀಕರಣದ ಸಾಧನವಾಗಿದೆ. ತಾಂತ್ರಿಕ ದೋಷಗಳು ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ವಿನಾಯಿತಿ ನೀಡುವ ‘ಎಕ್ಸೆಪ್ಷನ್ ಹ್ಯಾಂಡ್ಲಿಂಗ್’ ವ್ಯವಸ್ಥೆಯನ್ನು ಇದರ ಪ್ರಮುಖ ವಿನ್ಯಾಸವನ್ನಾಗಿ ಮಾಡಲಾಗಿದೆ.

ಕಲಮು 20 ಗ್ರಾಮ ಸಭೆಗಳ ಮೂಲಕ ನಡೆಸುವ ಸಾಮಾಜಿಕ ಲೆಕ್ಕಪರಿಶೋಧನೆ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಇದು ಸಮುದಾಯದ ಮೇಲ್ವಿಚಾರಣೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಇಲ್ಲಿ ತಂತ್ರeನವು ಹೊಣೆಗಾರಿಕೆಯನ್ನು ತಪ್ಪಿಸುವುದಿಲ್ಲ; ಬದಲಿಗೆ ಅದಕ್ಕೆ ಭದ್ರವಾದ ಅಡಿಪಾಯವನ್ನು ಒದಗಿಸುತ್ತದೆ.

ನವೀಕರಣದ ರೂಪದಲ್ಲಿ ಸುಧಾರಣೆ

ಉದ್ಯೋಗ ಖಾತರಿಯನ್ನು ಹೆಚ್ಚಿಸುವ ಮೂಲಕ, ಸ್ಥಳೀಯ ಯೋಜನಾ ಕ್ರಮಗಳನ್ನು ಅಳವಡಿ ಸುವ ಮೂಲಕ, ಕಾರ್ಮಿಕರಭದ್ರತೆ ಮತ್ತು ಕೃಷಿ ಉತ್ಪಾದಕತೆಯ ನಡುವೆ ಸಮತೋಲನ ಸಾಧಿಸುವ ಮೂಲಕ, ವಿವಿಧ ಯೋಜನೆಗಳನ್ನು ಸಮನ್ವಯಗೊಳಿಸುವ ಮೂಲಕ, ಸುಧಾರಿತ ಆಡಳಿತಾತ್ಮಕ ಬೆಂಬಲದೊಂದಿಗೆ ಮುಂಚೂಣಿ ಸಾಮರ್ಥ್ಯವನ್ನು ಬಲಪಡಿಸುವ ಮೂಲಕ ಮತ್ತು ಆಡಳಿತವನ್ನು ಆಧುನೀಕರಿಸುವ ಮೂಲಕ, ಈ ವಿಧೇಯಕವು ಪ್ರಾಯೋಗಿಕವಾಗಿ ಆಗಾಗ್ಗೆ ವಿಫಲ ಗೊಳ್ಳುತ್ತಿದ್ದ ಭರವಸೆಗೆ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತದೆ.

ಆಯ್ಕೆಯು ಸುಧಾರಣೆ ಮತ್ತು ಸಹಾನುಭೂತಿಯ ನಡುವೆ ಅಲ್ಲ; ಬದಲಿಗೆ, ನಿರೀಕ್ಷಿತ ಫಲಿತಾಂಶ ನೀಡದ ಸ್ಥಗಿತಗೊಂಡ ಹಕ್ಕು ಮತ್ತು ಘನತೆ, ನಿರೀಕ್ಷಿತ ಹಾಗೂ ಉದ್ದೇಶದೊಂದಿಗೆ ಫಲಿತಾಂಶ ನೀಡುವ ಆಧುನಿಕ ಚೌಕಟ್ಟಿನ ನಡುವೆ ಇದೆ. ಈ ದೃಷ್ಟಿಕೋನದಲ್ಲಿ ನೋಡಿದಾಗ, ‘ವಿಕಸಿತ ಭಾರತ ಜಿ ರಾಮ್ ಜಿ’ ಸಾಮಾಜಿಕ ರಕ್ಷಣೆಯಿಂದ ಹಿಂದೆ ಸರಿಯುತ್ತಿಲ್ಲ- ಬದಲಿಗೆ ಇದು ಅದರ ನವೀಕರಣವಾಗಿದೆ.

(ಲೇಖಕರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು)