ವಿಶ್ವರಂಗ
ಭಾರತದಲ್ಲಿ ಎಲ್ಲಾ ವಲಯಗಳು ಏರಿಕೆಯ ಹಂತದಲ್ಲಿವೆ. ಪಾಶ್ಚಾತ್ಯ ಇಕಾನಮಿ ನಿಂತ ನೀರಿನಂತಾಗಿದೆ. ಅವರ ಮುಂದಿನ ಭವಿಷ್ಯ ಮಂಕಾಗಿದೆ. ಇಷ್ಟು ವರ್ಷ ಅಧಿಪತ್ಯದ ರುಚಿ ಕಂಡ ಅವರಿಗೆ ಮುಂದಿನ ಅಧಿಪತ್ಯವನ್ನು ಭಾರತ ಮತ್ತು ಚೀನಾ ಅನುಭವಿಸುತ್ತವೆ ಎನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.
ಯಾವಾಗೆಲ್ಲಾ ಒಂದು ದೇಶವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎನ್ನಿಸು ತ್ತದೋ, ಆಗ ಆ ದೇಶದ ರಾಜನನ್ನು ಕೊಲ್ಲಲಾಗುತ್ತದೆ. ದಕ್ಷಿಣ ಅಮೆರಿಕದ ಅನೇಕ ದೇಶಗಳ ನಾಯಕರು ಅಮೆರಿಕದ ಜತೆಗೆ ಹೆಜ್ಜೆ ಹಾಕಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಅವರನ್ನು ಇಲ್ಲವಾಗಿಸ ಲಾಯಿತು.
ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯನ್ನು ಸೆಪ್ಟೆಂಬರ್ 1947ರಲ್ಲಿ ಸ್ಥಾಪಿಸಲಾಯಿತು. ಇದರ ಮೂಲ ಉದ್ದೇಶ ಅಮೆರಿಕದ ಹಿತಾಸಕ್ತಿಯನ್ನು ನೋಡಿಕೊಳ್ಳುವುದು. ಜಗತ್ತಿನೆಡೆ ಅಮೆರಿಕ ವಿರುದ್ಧದ ನಡೆಯನ್ನು ಹೊಸಕಿ ಹಾಕುವುದು ಮತ್ತು ಅಮೆರಿಕದ ಹಿತಾಸಕ್ತಿಯನ್ನು ಕಾಪಾಡು ವುದು ಈ ಸಂಸ್ಥೆಯ ಮೂಲ ಉದ್ದೇಶ. ಇದಕ್ಕಾಗಿ ಅವರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯ ಬಲ್ಲರು.
ಮೊದಲಿಗೆ ಅವರು ದೇಶದ ಮುಖ್ಯಸ್ಥನನ್ನು ಕೊಳ್ಳಲು ಬಯಸುವುದಿಲ್ಲ. ಅದಕ್ಕೆ ಮುಂಚೆ ಬೇಕಾದಷ್ಟು ಬೇರೆ ಪ್ರಯತ್ನಗಳ ಮೂಲಕ ದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಥವಾ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಲು ಒಪ್ಪಿಸಲು ನೋಡುತ್ತಾರೆ. ಅದು ಸಾಧ್ಯವಿಲ್ಲ ಎಂದಾಗ ಕೊನೆಯ ಅಸವಾಗಿ ನಾಯಕನ ಹತ್ಯೆಯನ್ನು ರೂಪಿಸಲಾಗುತ್ತದೆ.
ಇವತ್ತಿಗೆ ನರೇಂದ್ರ ಮೋದಿಯವರ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎನ್ನುವ ಸುದ್ದಿ ಕಾವು ಪಡೆದು ಕೊಂಡು ಎಡೆ ಹರಿದಾಡುತ್ತಿದೆ. ಅದೆಷ್ಟು ಸತ್ಯ ಎನ್ನುವುದು ಗೊತ್ತಿಲ್ಲದ ಕಾರಣ ಅದನ್ನು ವಿಶ್ಲೇಷಿಸುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ಬೇರೆ ಅಂಶಗಳ ಮೂಲಕ ಹೇಗೆ ಭಾರತವನ್ನು ಕಟ್ಟಿಹಾಕಲು ಅವರು ಪ್ರಯತ್ನಿಸಿದ್ದರು ಎನ್ನುವುದರ ಬಗ್ಗೆ ಸ್ವಲ್ಪ ನೋಡೋಣ.
ಇದನ್ನೂ ಓದಿ: Rangaswamy Mookanahalli Column: ಬಾಸ್ಟರ್ಡ್ಸ್ ಆಫ್ ಬಾಲಿವುಡ್ ಹುಯಿಲಿನ ಸುತ್ತಮುತ್ತ !
ಮೊದಲಿನ ತ್ರಾಣವಿಲ್ಲದ ಪಾಶ್ಚಾತ್ಯ ದೇಶಗಳ ಒಕ್ಕೂಟವು ಭಾರತದ ಮೇಲೆ ಸದಾ ದಾಳಿ ಮಾಡುತ್ತಲೇ ಇರುತ್ತವೆ. ತಮ್ಮ ಬಳಿ ಇದ್ದ ದೊಡ್ಡ ಅಸ್ತ್ರಗಳನ್ನು ಬಳಸಿ ಅವು ಮುಂದುವರಿ ಯುತ್ತಿರುವ ದೇಶಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತವೆ. ನಾವು ಜಗತ್ತನ್ನು ಕರೋನಾಗಿಂತ ಮುಂಚೆ, ಕರೋನಾ ನಂತರ ಎಂದು ಎರಡು ಭಾಗವಾಗಿ ವಿಭಾಗಿಸಬಹುದು.
ಕರೋನಾ ಜಾಗತಿಕ ಸಂಸ್ಥೆಗಳ ಅದರಲ್ಲೂ ಈ ಪಾಶ್ಚಾತ್ಯರು ಸೇರಿ ಕಟ್ಟಿಕೊಂಡಿರುವ ಅನೇಕ ಸಂಸ್ಥೆಗಳ ನಿಜವಾದ ಬಣ್ಣವನ್ನು ಬಯಲು ಮಾಡಿತು. ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ಎನ್ನುವುದು ಅಮೆರಿಕ ಕೈಲಿದ್ದ, ಕೀ ಕೊಟ್ಟರೆ ಕುಣಿಯುವ ಬೊಂಬೆ; ಅದನ್ನು ಚೀನಾ ಯಾವಾಗ ಕಸಿದು ಕೊಂಡಿತು ಗೊತ್ತೇ ಆಗಿರಲಿಲ್ಲ. ಅವರ ಪ್ಯಾರಾಮೀಟರ್ಗಳು ಜನರ ಆರೋಗ್ಯವನ್ನು ಉತ್ತಮ ಗೊಳಿಸುವುದಕ್ಕಿಂತ ಫಾರ್ಮಗಳ ಜೇಬು ತುಂಬಿಸುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿವೆ ಎನ್ನು ವುದು ಇಂದು ಎಲ್ಲರಿಗೂ ತಿಳಿದಿರುವ ಸತ್ಯ.
ಅದೇ ರೀತಿ ಕ್ರೆಡಿಟ್ ರೇಟಿಂಗ್ ನೀಡುವ ಸಂಸ್ಥೆಗಳು ಕೂಡ ತಮಗೆ ಅನುಕೂಲವಾಗುವ ರೇಟಿಂಗ್ ನೀಡುತ್ತವೆ. ವೈಯಕ್ತಿಕವಾಗಿ ನಿಮ್ಮ ಹಣಕಾಸು ಪರಿಸ್ಥಿತಿ ಹೇಗಿದೆ? ಸಾಲ ಮರುಪಾವತಿ ಸರಿಯಾಗಿ ಮಾಡಿದ್ದೀರಾ? ಹೊಸ ಸಾಲ ಪಡೆಯಲು ಅರ್ಹತೆಯನ್ನು ಉಳಿಸಿಕೊಂಡಿದ್ದೀರಾ? ಇಂಥವುಗಳನ್ನು ಪರಿಶೀಲಿಸಿ ಪ್ರತಿಯೊಬ್ಬರಿಗೂ ಕ್ರೆಡಿಟ್ ಸ್ಕೋರ್ ನೀಡುವ ಸಂಸ್ಥೆಗಳಿವೆ ಅಲ್ಲವೇ, ಹಾಗೆ ಸಂಸ್ಥೆಗಳಿಗೆ, ಅತಿ ದೊಡ್ಡ ಸಂಸ್ಥೆಗಳಿಗೆ ಅದರ ಜತೆಗೆ ದೇಶಕ್ಕೂ ಕ್ರೆಡಿಟ್ ರೇಟಿಂಗ್ ನೀಡುವ ಸಂಸ್ಥೆಗಳಿವೆ.
ಜಾಗತಿಕವಾಗಿ 80 ಪ್ರತಿಶತ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ಮೂಡಿಸ್, ಸ್ಟ್ಯಾಂಡರ್ಡ್ ಆಂಡ್ ಪೂರ್ಸ್ ಮತ್ತು fitch ಎನ್ನುವ ಮೂರು ಸಂಸ್ಥೆಗಳು ಅಮೆರಿಕದ ಪಾರುಪತ್ಯದಲ್ಲಿವೆ. ಈ ಸಂಸ್ಥೆಗಳು ಯಾವ ದೇಶದ ಕ್ರೆಡಿಟ್ ರೇಟಿಂಗ್ ಎಷ್ಟು ಎಂದು ಹೇಳುತ್ತವೆ. ಇದರ ಆಧಾರದ ಮೇಲೆ ಜಗತ್ತಿನ ಬೇರೆ ದೇಶಗಳು ಅಲ್ಲಿ ಹೂಡಿಕೆ ಮಾಡಬೇಕೆ ಬೇಡವೇ ಎನ್ನುವ ನಿರ್ಧಾರವನ್ನು ತೆಗೆದು ಕೊಳ್ಳುತ್ತವೆ.
ಇದೆಲ್ಲವೂ ದಶಕಗಳಿಂದ ಯಾವುದೇ ಅಡ್ಡಿಯಿಲ್ಲದೆ ನಡೆದುಕೊಂಡು ಬರುತ್ತಿವೆ. ಆದರೆ ಗಮನಿಸಿ ನೋಡಿ, ಇವೆಲ್ಲವೂ ಅಮೆರಿಕನ್ ಬಂಡವಾಳಶಾಹಿಗಳನ್ನು ಇನ್ನಷ್ಟು ಬಲಶಾಲಿಯನ್ನಾಗಿಸುವ ಕುತಂತ್ರದ ಕೆಲಸದಲ್ಲಿ ತೊಡಗಿವೆ. ಭಾರತದಂಥ ಬಲಾಢ್ಯ ದೇಶಕ್ಕೆ ಫಿಲಿಫೈನ್ಸ್ ಗಿಂತ ಕಡಿಮೆ ರೇಟಿಂಗ್ ಕೊಡುತ್ತವೆ ಎಂದರೆ ಇವೆಂಥ ಖದೀಮ ಸಂಸ್ಥೆಗಳು ಎನ್ನುವುದರ ಅರಿವು ನಿಮಗಾದೀತು.
ಇನ್ನೊಂದು ‘ಸ್ಯಾಂಕ್ಷನ್’ ಎನ್ನುವ ಅಸ್ತ್ರ ಕೂಡ ಇವರ ಬಳಿಯಿದೆ. ಹಿಂದೆ ನಮ್ಮಲ್ಲಿ ತಪ್ಪು ಮಾಡಿದ ವ್ಯಕ್ತಿಯನ್ನು, ಕುಟುಂಬವನ್ನು ಬಹಿಷ್ಕಾರ ಹಾಕುತ್ತಿರಲಿಲ್ಲವೇ, ಥೇಟ್ ಹಾಗೆ ವಿಶ್ವ ಮಾರುಕಟ್ಟೆ ಯನ್ನು ಅಮೆರಿಕ ಪಂಚಾಯತಿ ಲೆವೆಲ್ನಂತೆ ಇಷ್ಟು ದಿನ ಆಳಿಕೊಂಡು ಬಂದಿದೆ. ಇಲ್ಲಿ ತಪ್ಪು ಮಾಡುವ ಅವಶ್ಯಕತೆಯಿಲ್ಲ. ಯಾರೆ ಅಮೆರಿಕದ ವ್ಯಾಪಾರಿ ನೀತಿಗೆ ಅನುಗುಣವಾಗಿಲ್ಲವೋ ಅವರನ್ನು ಸ್ಯಾಂಕ್ಷನ್ ಹೆಸರಿನ ಮೂಲಕ ಬಲಿಹಾಕಲಾಗುತ್ತದೆ.
ಸಣ್ಣಪುಟ್ಟ ದೇಶಗಳು ಮೇಲಿನ ಎರಡು ಅಸ್ತ್ರಗಳಿಗೆ ಬಸವಳಿದು ಬಿಡುತ್ತವೆ. ಆದರೆ ಭಾರತದಂಥ ಬಲಾಢ್ಯ ಆರ್ಥಿಕ ಶಕ್ತಿಗೆ, ಅದರಲ್ಲೂ ಡೊಮೆಸ್ಟಿಕ್ ಬಳಕೆ ಹೆಚ್ಚಿರುವ ಈ ಸಮಯದಲ್ಲಿ ಇದು ಕೆಲಸ ಮಾಡುವುದಿಲ್ಲ. ಹೀಗಾಗಿ ಇವರ ಬಳಿ ಇರುವ ಮೂರನೇ ಅಸ್ತ್ರ ಒಳಜಗಳ, ಆಂತರಿಕ ಗಲಭೆ ಯನ್ನು ಸೃಷ್ಟಿಸುವುದು. ಮೊದಲ ಎರಡು ಅಸ್ತ್ರಗಳನ್ನು ಅವರು ಸಮಯದಿಂದ ಸಮಯಕ್ಕೆ ಕಳೆದ ಹತ್ತು ವರ್ಷದಿಂದ ಪ್ರಯೋಗಿಸುತ್ತಲೆ ಬಂದಿದ್ದಾರೆ. ಈ ಹಿಂದೆಯೂ ಪ್ರಯೋಗಿಸಿದ್ದರು.
ಆಗ ಕೆಲಸಕ್ಕೆ ಬರುತ್ತಿದ್ದ ಅಸ್ತ್ರ ಇಂದಿಗೆ ಕೆಲಸ ಮಾಡುತ್ತಿಲ್ಲ. ಎಲ್ಲದಕ್ಕಿಂತ ಮುಂಚೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗುತ್ತಿತ್ತು. ಇಂದಿಗೆ ಆ ತಲ್ಲಣಗಳು ಬಹಳಷ್ಟು ಲಯ ವನ್ನು ಕಂಡುಕೊಂಡಿವೆ.
ಹೀಗಾಗಿ ಇವರು ತಮ್ಮ ಮೂರನೇ ಅಸ್ತ್ರ, ಅಂದರೆ ಆಂತರಿಕ ಗಲಭೆಯನ್ನು ಸೃಷ್ಟಿಸುವುದರಲ್ಲಿ ವ್ಯಸ್ತರಾಗಿದ್ದರೆ. ಭಾರತ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ನಿಯಂತ್ರಣ ಸಾಧಿಸು ವುದು ಇವರ ಹುನ್ನಾರ. ದೇಶವನ್ನು ವಿಭಜನೆ ಮಾಡುವುದು, ಕಮ್ಯುನಿಟಿಗಳ ನಡುವೆ ಜಗಳ ಸೃಷ್ಟಿ ಮಾಡುವುದು, ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡುವುದು ಇವರ ಉದ್ದೇಶ.
ಅರಾಜಕ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಸುಲಭ. ಇವರು ಭಾರತದ ಮೇಲೆ ಹಿಡಿತ ಹೊಂದಲು ಏಕೆ ಬಯಸುತ್ತಾರೆ ಗೊತ್ತೇ? ಲೆಕ್ಕಕ್ಕೆ ಇಲ್ಲದ ಚೀನಾ ಎನ್ನುವ ದೇಶ ಕೇವಲ ಎರಡು ದಶಕದಲ್ಲಿ ಬೆಳೆದು ನಿಂತ ಪರಿಯನ್ನು ಅವರು ಕಂಡಿದ್ದಾರೆ.
ಭಾರತೀಯರು ಜಾಗತಿಕ ಲೆಕ್ಕಾಚಾರದಲ್ಲಿ ನೋಡಿದರೆ ಹೆಚ್ಚು ಬುದ್ದಿವಂತರು. ಚೀನಾ ಉತ್ಪಾದನೆ ಯಿಂದ ಸಂಪತ್ತು ಗಳಿಸಿಕೊಂಡರೆ ಭಾರತ ಅದನ್ನು ಬುದ್ದಿ ಶಕ್ತಿಯಿಂದ ಗಳಿಸಿಕೊಳ್ಳುತ್ತಿದೆ. ಮುಂದಿನ ಎರಡು ದಶಕದಲ್ಲಿ ಭಾರತ ಮೊದಲ ಸ್ಥಾನದಲ್ಲಿ ಕುಳಿತುಬಿಟ್ಟರೆ ಅದನ್ನು ಆ ಸ್ಥಾನ ದಿಂದ ಅಲುಗಾಡಿಸುವುದು ಸಾಧ್ಯವಿಲ್ಲದ ಮಾತು ಎನ್ನುವುದು ಅವರಿಗೆ ಗೊತ್ತಿದೆ. ಹೀಗಾಗಿ ಅವರು ಭಾರತವನ್ನು ನಿಯಂತ್ರಿಸಲು ಬಯಸುತ್ತಾರೆ. ಅವರಿಗೆ ಭಾರತದ ಕುಸಿತ ಬೇಕಿಲ್ಲ. ಅವರಿಗೆ ತನ್ನ ಅಧೀನದಲ್ಲಿರುವ ಭಾರತ ಬೇಕಿದೆ.
ಭಾರತವು ಜಿಡಿಪಿ ಲೆಕ್ಕಾಚಾರದಲ್ಲಿ ಸದ್ಯಕ್ಕೆ ವಿಶ್ವದ ಐದನೇ ಸ್ಥಾನದಲ್ಲಿದೆ. ಆದರೆ ನಿಜಕ್ಕೂ ನೋಡುವುದಾದರೆ ಭಾರತದ ಜಿಡಿಪಿ ೧೦ ಟ್ರಿಲಿಯನ್ಗಿಂತ ಹೆಚ್ಚಿದೆ. ಅದು ಅವರಿಗೆ ಗೊತ್ತಿದೆ. ಒಂದು ಸಣ್ಣ ಉದಾಹರಣೆ ನೋಡೋಣ. ಭಾರತದಲ್ಲಿರುವ ಜನಸಂಖ್ಯೆ 140 ಕೋಟಿ. ಐದು ಕೋಟಿ ಹೆಚ್ಚೇ ಇರುತ್ತಾರೆ. ಆದರೂ ಲೆಕ್ಕಕ್ಕೆ 140 ಕೋಟಿ ಎಂದುಕೊಳ್ಳೋಣ.
ಅದರಲ್ಲಿ 50 ಕೋಟಿ ಜನ ಯಾವುದೇ ಹಣವನ್ನು ಖರ್ಚು ಮಾಡುವುದಿಲ್ಲ ಎಂದುಕೊಳ್ಳೋಣ. ಉಳಿದ ೯೦ ಕೋಟಿ ಜನರಲ್ಲಿ ಒಬ್ಬರು ದಿನಕ್ಕೆ ೩ ಕಾಫಿ, ಎರಡು ಊಟ ಎಂದುಕೊಂಡರೂ ಕನಿಷ್ಠ ೧೦೦ ರುಪಾಯಿ ಖರ್ಚು ಮಾಡಬೇಕು. ಈಗ ನೀವು ೯೦ ಕೋಟಿ X 100 ರೂಪಾಯಿ ಲೆಕ್ಕ ಹಾಕಿ!
ಇದರ ಜತೆಗೆ ಗುಟ್ಕಾ, ಸಿಗರೇಟು, ಪಾನ್ ಇತ್ಯಾದಿಗಳ ಲೆಕ್ಕ ಮಾಡಿ. ಇವತ್ತಿಗೆ ಸಣ್ಣ ಪುಟ್ಟ ದರ್ಶಿನಿ ಗಳಲ್ಲಿ ಕೂಡ ಕಾಫಿ ೨೦ ರುಪಾಯಿ ಆಗಿದೆ. ಆ ಲೆಕ್ಕಾಚಾರದಲ್ಲಿ ಮಧ್ಯಮವರ್ಗದ ಜನ ಕೇವಲ ಕಾಫಿಗೆ ೧೦೦ ರುಪಾಯಿ ಸುಲಭವಾಗಿ ವ್ಯಯಿಸುತ್ತಾರೆ. ಇದೆಲ್ಲವೂ ನಿತ್ಯದ ಖರ್ಚು. ಇದನ್ನು ತಿಂಗಳಿಗೆ, ವರ್ಷಕ್ಕೆ ಲೆಕ್ಕ ಹಾಕಿ!
ಭಾರತದಲ್ಲಿ ಒಂದಲ್ಲ ಎಲ್ಲಾ ವಲಯಗಳು ಕೂಡ ಏರಿಕೆಯ ಹಂತದಲ್ಲಿವೆ. ಪಾಶ್ಚಾತ್ಯ ಇಕಾನಮಿ ನಿಂತ ನೀರಿನಂತಾಗಿದೆ. ಅವರ ಮುಂದಿನ ಭವಿಷ್ಯ ಮಂಕಾಗಿದೆ. ಇಷ್ಟು ವರ್ಷ ಅಧಿಪತ್ಯದ ರುಚಿ ಕಂಡ ಅವರಿಗೆ ಮುಂದಿನ ಅಧಿಪತ್ಯವನ್ನು ಭಾರತ ಮತ್ತು ಚೀನಾ ಅನುಭವಿಸುತ್ತವೆ ಎನ್ನುವು ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಭಾರತವನ್ನು ಅತಂತ್ರಗೊಳಿಸುವ ಇನ್ನಷ್ಟು ಪ್ರಯತ್ನಗಳಾಗುವುದು ಮಾತ್ರ ನಿಲ್ಲುವುದಿಲ್ಲ.
ಅಮೆರಿಕ ದೇಶದಲ್ಲಿ ಮೊದಲಿನ ಶಕ್ತಿ ಉಳಿದುಕೊಂಡಿಲ್ಲ. ಅದೊಂದು ಹಲ್ಲುಕಿತ್ತ ಹಾವು. ಹೀಗಾಗಿ ಅದು ಭಾರತದ ಮೇಲೆ ಬುಸುಗುಡುವುದರ ಜತೆಗೆ ರಾಜಿ ಸಂಧಾನಕ್ಕೂ ಕರೆಯುತ್ತಿರುತ್ತದೆ. ರಷ್ಯಾದ ಜತೆಗೆ ಒಂದಷ್ಟು ತೈಲ ಕೊಳ್ಳುವಿಕೆ ಕಡಿಮೆ ಮಾಡುತ್ತೇನೆ ಎಂದು ಹೇಳಿದ ತಕ್ಷಣ ತೆರಿಗೆಯನ್ನು ಕಡಿಮೆ ಮಾಡುವುದಾಗಿ ಹೇಳುತ್ತಾರೆ. ಇದರರ್ಥ ಅವರಿಗೆ ಭಾರತದ ಅವಶ್ಯಕತೆ ಬಹಳ ಹೆಚ್ಚಾಗಿದೆ.
ಆದರೆ ಭಾರತ ದೇಶದ ಸುಕೃತ ನೋಡಿ, ಮೋದಿಯವರಂಥ ವ್ಯಾಪಾರ ಅರ್ಥವಾಗುವ ವ್ಯಕ್ತಿ ನಮ್ಮ ದೇಶದ ಮುಖ್ಯಸ್ಥರಾಗಿದ್ದಾರೆ. ಅಮೆರಿಕ ಹೇಳಿದ್ದಕ್ಕೆ ಅವರು ಅಷ್ಟು ಸುಲಭವಾಗಿ ತಲೆ ಆಡಿಸುವು ದಿಲ್ಲ. ಅವರು ಇಂದಿಗೆ ಅವಳಿ ದೋಣಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅತ್ತ ಅಮೆರಿಕವನ್ನು ಕೂಡ ಪೂರ್ಣವಾಗಿ ಬಿಟ್ಟಿಲ್ಲ. ಇತ್ತ ಚೀನಾ ಮತ್ತು ರಷ್ಯಾಗಳಿಗೂ ಇಲ್ಲವೆಂದಿಲ್ಲ. ಈ ರೀತಿಯ ಬ್ಯಾಲೆ ಮಾಡುವುದು ಬಹಳ ಕಷ್ಟ.
ಚೂರು ಅತ್ತಿತ್ತ ಆದರೂ ಅಪಾಯ ಕಟ್ಟಿಟ್ಟಬುತ್ತಿ. ಚೀನಾದ ನೆಲದಲ್ಲಿ ಮೋದಿಯವರ ಹತ್ಯೆ ಮಾಡಿಬಿಟ್ಟರೆ ಆಗ ಚೀನಾಗೂ, ರಷ್ಯಾಗೂ ಮುಖಭಂಗವಾಗುತ್ತಿತ್ತು. ಜತೆಗೆ ಭಾರತವೂ ಸುಲಭ ತುತ್ತಾಗುತ್ತಿತ್ತು. ಚೀನಾ, ರಷ್ಯಾ ಮತ್ತು ಭಾರತದ ಬೇಹುಗಾರಿಕಾ ಸಂಸ್ಥೆಗಳು ಜತೆಯಾಗಿ ಕಾರ್ಯ ನಿರ್ವಹಿಸಿ ಎದುರಾಗಿದ್ದ ಆತಂಕವನ್ನು ನಿವಾರಿಸಿವೆ.
ಆದರೆ ಈ ರೀತಿಯ ದಾಳಿ ಮತ್ತೆ ಆಗುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಅಮೆರಿಕದಂಥ ಬಲಿಷ್ಠ ರಾಷ್ಟ್ರ ಈ ಮಟ್ಟಕ್ಕೆ ಕುಸಿಯಲು ಕಾರಣವೇನು? ಚೀನಾದ ಅಭಿವೃದ್ಧಿ ಎಂದಾಕ್ಷಣ ಅದು ಅಮೆರಿಕ ಕುಸಿತಕ್ಕೆ ಕಾರಣವಾಗಬೇಕು ಎಂದಿಲ್ಲ ಅಲ್ಲವೇ? ಒಂದು ಊರಿನಲ್ಲಿ ಇಬ್ಬರು ಅಥವಾ ಮೂವರು ಸಾಹುಕಾರರು ಇರಬಹುದು ಅಲ್ಲವೇ? ಅಲ್ಲದೆ ಈ ರೀತಿಯ ರಾಜಕೀಯದಾಟಗಳು ‘ಸಬ್ ಜೀರೋ, ಸಮ್ ಗೇಮ್’ ಆಗಬೇಕು ಎಂದಿಲ್ಲ.
ಅಂದರೆ ಒಬ್ಬರು ಗೆಲ್ಲಲು ಇನ್ನೊಬ್ಬರು ಸೋಲಲೇಬೇಕು ಎನ್ನುವುದು ‘ಸಬ್ ಜೀರೋ, ಸಮ್ ಗೇಮ್’ ನಿಯಮ. ಅದನ್ನು ಮೀರಿ ವಿನ್-ವಿನ್ ಸನ್ನಿವೇಶ ಸೃಷ್ಟಿಸಿಕೊಳ್ಳಲು ಸಾಧ್ಯವಿಲ್ಲವೇ? ಖಂಡಿತ ಅದು ಸಾಧ್ಯವಿತ್ತು. ಆದರೆ ಅಮೆರಿಕ ಇವತ್ತಿಗೆ ತೀರಿಸಲಾಗದ ಸಾಲವನ್ನು ಮಾಡಿಕೊಂಡು ಕುಳಿತಿದೆ. ಆ ಸಾಲವನ್ನು ಮರುಪಾವತಿಸಲು ಆಗದ ಕಾರಣ ಅದು ಈ ರೀತಿಯ ಕೆಟ್ಟ ಆಟಕ್ಕೆ ಮುಂದಾಗಿದೆ.
ನಾನು ಉತ್ತಮವಾಗಿ ಬದುಕಲು ಸಾಧ್ಯವಿಲ್ಲ ಎಂದ ಮೇಲೆ, ಎಲ್ಲರ ನೆಮ್ಮದಿಗೂ ಭಂಗ ತರುತ್ತೇನೆ ಎನ್ನುವ ಮನಸ್ಥಿತಿಯನ್ನು ಅಮೆರಿಕ ಹೊಂದಿದೆ. ಒಟ್ಟಾರೆ, ಮುಂದಿನ ಒಂದೆರಡು ವರ್ಷ ಜಾಗತಿಕ ಮಟ್ಟದಲ್ಲಿ ಈ ರೀತಿಯ ಇನ್ನಷ್ಟು ಹೊಡೆದಾಟಗಳಿಗೆ ನಾವು ಸಾಕ್ಷಿಯಾಗಲಿದ್ದೇವೆ.
ಭಾರತದ ಜಿಎಸ್ಟಿ ಸಂಗ್ರಹಣೆಯೊಂದು ಸಾಕು ಭಾರತ ಸಾಗುತ್ತಿರುವ ಹಾದಿಯನ್ನು ಹೇಳಲು. ದಶಕದ ತಪಸ್ಸಿನ ಫಲ, ಜನರ ನಂಬಿಕೆ ಮತ್ತು ಬಲಿದಾನ ಮಣ್ಣಾಗದಂತೆ ಕಾಪಾಡುವ ದೊಡ್ಡ ಹೊಣೆಗಾರಿಕೆ ಕೇಂದ್ರ ಸರಕಾರದ ಮೇಲಿದೆ. ಸಮಾಜದ ಭಾಗವಾಗಿ, ಈ ದೇಶದ ನಾಗರಿಕರಾಗಿ ನಾವು ಹೆಚ್ಚೇನೂ ಮಾಡುವುದು ಬೇಕಿಲ್ಲ. ಸ್ಪೆಕ್ಯುಲೇಷನ್ಗಳಿಗೆ ಕಿವಿಯಾಗದೆ ತಾಳ್ಮೆಯಿಂದ ಇದ್ದರೆ ಸಾಕು. ವಿಭಜಕ ಶಕ್ತಿಗಳು ಇನ್ನಷ್ಟು ಸಂಘಟಿತರಾಗಿ ಹೋರಾಟಕ್ಕೆ ಬರುತ್ತಾರೆ. ಅವರಿಗೆ ತಮ್ಮ ಪಾರುಪತ್ಯ ಉಳಿಸಿಕೊಳ್ಳುವ ದರ್ದು ಹೆಚ್ಚಾಗಿದೆ.