ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಮಹಾತಾಯಿ ಯುಲಿಯಾನಾಳ ಮಹಾ ಪಯಣ

ಮಿಲಿಟರಿ ಅಧಿಕಾರಿಗಳು ಕೂಡ, ಅಲ್ಲಿಗೆ ಹೋಗುವುದು ಆತ್ಮಹತ್ಯೆಗೆ ಸಮಾನ, ಶತ್ರುಗಳ ರೇಖೆಯನ್ನು ದಾಟಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದರು. ಆದರೆ, ಒಬ್ಬ ತಾಯಿಯ ಹೃದಯಕ್ಕೆ ಆ ಮಾತುಗಳು ಕೇಳಿಸುವುದು ಹೇಗೆ ಸಾಧ್ಯ? ಲೋಕವೇ ಉರಿದು ಬೂದಿಯಾಗುತ್ತಿದ್ದರೂ, ತನ್ನ ಮಗ ಅ ಹಸಿದು, ಭಯದಿಂದ ಅಳುತ್ತಾ ತನ್ನನ್ನು ಕರೆಯುತ್ತಿದ್ದಾನೆ ಎಂಬ ಧ್ವನಿ ಮಾತ್ರ ಆಕೆಗೆ ಕೇಳಿಸುತ್ತಿತ್ತು.

ಒಂದೊಳ್ಳೆ ಮಾತು

ಇದು 1941ರ ಕಡು ಬೇಸಿಗೆಯ ಸಮಯ. ಇಡೀ ಜಗತ್ತೇ ಎರಡನೇ ಮಹಾಯುದ್ಧದ ಕ್ರೌರ್ಯಕ್ಕೆ ತಲ್ಲಣಿಸಿ ಹೋಗಿತ್ತು. ನಾಜಿ ಸೈನಿಕರು ರಷ್ಯಾ ದೇಶದ ಮೇಲೆ ದಿಢೀರ್ ದಾಳಿ ಮಾಡಿದ್ದರು. ಆಕಾಶ ದಿಂದ ಸುರಿಯುತ್ತಿದ್ದ ಬಾಂಬ್‌ಗಳು, ಕಿವಿಗೆ ಅಪ್ಪಳಿಸುತ್ತಿದ್ದ ಸೈನಿಕರ ಬೂಟುಗಳ ಸದ್ದು, ಎಲ್ಲಿ ನೋಡಿದರೂ ಸಾವು ಮತ್ತು ರಕ್ತದ ಆಕ್ರಂದನ... ಕ್ಷಣಾರ್ಧದಲ್ಲಿ ಹಸಿರು ಹಳ್ಳಿಗಳು ಸ್ಮಶಾನಗಳಾಗಿ ಬದಲಾಗುತ್ತಿದ್ದವು.

ಲಕ್ಷಾಂತರ ಕುಟುಂಬಗಳು ದಿಕ್ಕಾಪಾಲಾಗಿ ಓಡುತ್ತಿದ್ದವು. ಆ ಭೀಕರ ಯುದ್ಧದ ಸುಳಿಗೆ ಸಿಲುಕಿದ್ದು ‘ಯುಲಿಯಾನಾ ಶೋಖೋವಾ’ ಎಂಬ ಒಬ್ಬ ಸಾಮಾನ್ಯ ತಾಯಿ ಮತ್ತು ಅವಳ ಮುದ್ದಿನ ಮಗ ಅಲೆಕ್ಸಿ. ಅಲೆಕ್ಸಿ ಆಗಿನ್ನೂ ಹದಿಹರೆಯದ ಹುಡುಗ. ರಜೆಯಲ್ಲಿದ್ದಾಗ ತನ್ನ ಬಡ ಕುಟುಂಬಕ್ಕೆ ಆಸರೆಯಾಗಲೆಂದು, ತಾಯಿಯಿಂದ ನೂರಾರು ಮೈಲಿ ದೂರದಲ್ಲಿದ್ದ ಒಂದು ಹಳ್ಳಿಯಲ್ಲಿ ಕೃಷಿ ಕೆಲಸಕ್ಕೆ ಸೇರಿದ್ದ. ಆದರೆ, ದುರದೃಷ್ಟವಶಾತ್ ನಾಜಿ ಸೈನಿಕರ ಮೊದಲ ದಾಳಿ ನಡೆದಿದ್ದೇ ಆ ಭಾಗದ ಮೇಲೆ!

ಮಗನಿದ್ದ ವಲಯ ಸಂಪೂರ್ಣವಾಗಿ ಶತ್ರುಗಳ ವಶವಾಯಿತು. ಮನೆಯಲ್ಲಿದ್ದ ಯುಲಿಯಾನಾಳಿಗೆ ಮಗನ ಕಡೆಯಿಂದ ಬರುತ್ತಿದ್ದ ಸಂದೇಶಗಳು ಸಂಪೂರ್ಣವಾಗಿ ನಿಂತುಹೋದವು. ಸುತ್ತಮುತ್ತಲಿನ ಜನರೆಲ್ಲಾ ಪ್ರಾಣಭಯದಿಂದ ಊರು ಬಿಡುತ್ತಿದ್ದರು. ವೈರಿಗಳು ಆ ಭಾಗದಲ್ಲಿ ಯಾರನ್ನೂ ಬದುಕಲು ಬಿಡುತ್ತಿಲ್ಲ, ಅಲ್ಲಿಗೆ ಹೋದವರು ಸಾಯುವುದು ಖಂಡಿತ! ಎಂದು ಆತಂಕದಿಂದ ಆಕೆಯನ್ನು ತಡೆಯಲು ನೋಡಿದರು.

ಇದನ್ನೂ ಓದಿ: Roopa Gururaj Column: ಭಕ್ತ ಮಾರ್ಕಂಡೇಯ ಮತ್ತು ನಂಬಿಕೆಯ ಶಕ್ತಿ

ಮಿಲಿಟರಿ ಅಧಿಕಾರಿಗಳು ಕೂಡ, ಅಲ್ಲಿಗೆ ಹೋಗುವುದು ಆತ್ಮಹತ್ಯೆಗೆ ಸಮಾನ, ಶತ್ರುಗಳ ರೇಖೆಯನ್ನು ದಾಟಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದರು. ಆದರೆ, ಒಬ್ಬ ತಾಯಿಯ ಹೃದಯಕ್ಕೆ ಆ ಮಾತುಗಳು ಕೇಳಿಸುವುದು ಹೇಗೆ ಸಾಧ್ಯ? ಲೋಕವೇ ಉರಿದು ಬೂದಿಯಾಗುತ್ತಿದ್ದರೂ, ತನ್ನ ಮಗ ಅ ಹಸಿದು, ಭಯದಿಂದ ಅಳುತ್ತಾ ತನ್ನನ್ನು ಕರೆಯುತ್ತಿದ್ದಾನೆ ಎಂಬ ಧ್ವನಿ ಮಾತ್ರ ಆಕೆಗೆ ಕೇಳಿಸು ತ್ತಿತ್ತು.

ಶತ್ರುಗಳ ಗುಂಡು ನನ್ನ ಎದೆ ಸೀಳುವ ಮುನ್ನ, ನನ್ನ ಮಗನನ್ನು ನಾನು ನೋಡಲೇಬೇಕು ಎಂದು ಕೆ ಸಂಕಲ್ಪ ಮಾಡಿದಳು. ಆಕೆಯ ಬಳಿ ಹಣವಿರಲಿಲ್ಲ, ಹೋಗಲು ಯಾವುದೇ ವಾಹನವಿರಲಿಲ್ಲ, ಜತೆಗೆ ಬರಲು ಯಾರೂ ಇರಲಿಲ್ಲ. ಇದ್ದದ್ದು ಕೇವಲ ಒಂದು ಹರಿದ ಜತೆ ಚಪ್ಪಲಿ, ಚೀಲದಲ್ಲಿ ಸ್ವಲ್ಪ ಒಣ ರೊಟ್ಟಿ ಮತ್ತು ಎದೆಯಲ್ಲಿದ್ದ ತಾಯ್ತನದ ಮಮಕಾರ ಮಾತ್ರ. ಆಕೆ ಸಾವಿನ ರಸ್ತೆಯ ಒಂಟಿ ಯಾಗಿ ಹೆಜ್ಜೆ ಇಟ್ಟಳು.

ಸಾವಿರಾರು ಜನ ಪ್ರಾಣ ಉಳಿಸಿಕೊಳ್ಳಲು ಯುದ್ಧ ಭೂಮಿಯಿಂದ ಹಿಂದಕ್ಕೆ ಓಡಿ ಬರುತ್ತಿದ್ದರೆ, ಈ ಒಂಟಿ ತಾಯಿ ಮಾತ್ರ ಆ ಜನಪ್ರವಾಹಕ್ಕೆ ಎದೆಯೊಡ್ಡಿ, ಶತ್ರುಗಳು ನುಗ್ಗುತ್ತಿದ್ದ ದಿಕ್ಕಿನತ್ತಲೇ ಮುನ್ನಡೆದಳು. ಆಕೆ ಕ್ರಮಿಸಬೇಕಾಗಿದ್ದ ದೂರ ಬರೋಬ್ಬರಿ 400 ಮೈಲಿಗಳು (ಸುಮಾರು 640 ಕಿಲೋಮೀಟರ್).. ದಿನಗಳು ಉರುಳಿದಂತೆ ಚೀಲದಲ್ಲಿದ್ದ ರೊಟ್ಟಿ ಖಾಲಿಯಾಯಿತು.

ಹಸಿವಿನಿಂದ ಹೊಟ್ಟೆ ಒಣಗಿದಾಗ ಗಿಡಗಳ ಎಲೆಗಳನ್ನು ಅಗಿದು, ಹಳ್ಳದ ನೀರು ಕುಡಿದು ಪ್ರಾಣ ಉಳಿಸಿಕೊಂಡಳು. ಮೈ ನಡುಗಿಸುವ ಚಳಿ, ಸುರಿಯುವ ಮಳೆಯಲ್ಲಿ ನೆನೆದು ಆಕೆಯ ದೇಹ ಜರ್ಜರಿತವಾಯಿತು. ಕಾಲುಗಳು ಸುಸ್ತಾಗಿ, ಮೈಯೆಲ್ಲಾ ನಡುಗುತ್ತಿದ್ದರೂ ಆಕೆ ನಿಲ್ಲಲಿಲ್ಲ. ನನ್ನ ಮಗ ನನಗಾಗಿ ಕಾಯುತ್ತಿದ್ದಾನೆ, ನಾನು ಆಯಾಸಗೊಂಡರೆ ಅವನು ಅನಾಥನಾಗುತ್ತಾನೆ ಎಂಬ ಒಂದೇ ಒಂದು ಆಶಾಕಿರಣ ಆಕೆಯ ಕಣ್ಣುಗಳಲ್ಲಿ ಜೀವಂತವಾಗಿತ್ತು.

ಕೊನೆಗೂ, ಒಂದು ತಿಂಗಳ ಕಠಿಣ ನಡಿಗೆಯ ನಂತರ, ಸಾಕ್ಷಾತ್ ಯಮನ ಸಾಮ್ರಾಜ್ಯದಂತಿದ್ದ ಶತ್ರುಗಳ ವಲಯವನ್ನು ಯುಲಿಯಾನಾ ತಲುಪಿಯೇ ಬಿಟ್ಟಳು. ಹಾಳಾಗಿದ್ದ ಮನೆಗಳು, ಸುಟ್ಟು ಕರಕಲಾಗಿದ್ದ ಹೊಲಗಳ ನಡುವೆ ಆಕೆ ಮಗನಿಗಾಗಿ ಹುಚ್ಚಿಯಂತೆ ಹುಡುಕಾಡಿದಳು. ಮತ್ತು... ಆ ತಾಯಿಯ ತಪಸ್ಸಿಗೆ ಜಗತ್ತೇ ತಲೆಬಾಗುವಂತೆ ಆ ಪವಾಡ ಸಂಭವಿಸಿತು!

ಒಂದು ಹಳೆಯ ಶಿಥಿಲವಾದ ಕಟ್ಟಡದ ಮೂಲೆಯಲ್ಲಿ, ಹಸಿವಿನಿಂದ ಸೊರಗಿ, ದಿಕ್ಕಿಲ್ಲದೆ ನಡುಗು ತ್ತಿದ್ದ ಮಗ ಅಲೆಕ್ಸಿ ಆಕೆಗೆ ಕಾಣಿಸಿದ. ಮಗನನ್ನು ಕಂಡೊಡನೆ ಆ ತಾಯಿಯ ಒಣಗಿದ ಕಣ್ಣು ಗಳಿಂದ ಆನಂದಭಾಷ್ಪ ಧಾರೆಯಾಗಿ ಹರಿಯಿತು. ಅಲೆಕ್ಸಿಗೆ ತನ್ನ ಕಣ್ಣುಗಳನ್ನು ತಾನೇ ನಂಬಲಾಗ ಲಿಲ್ಲ. ಈ ಯುದ್ಧದ ನರಕದಲ್ಲೂ ತನ್ನ ತಾಯಿ ತನ್ನನ್ನು ಹುಡುಕಿಕೊಂಡು ಬಂದಿದ್ದಾಳೆ ಎನ್ನುವು ದನ್ನು ಕಂಡು ಅವನು ಅವಳನ್ನು ಗಟ್ಟಿಯಾಗಿ ಅಪ್ಪಿ ಬಿಕ್ಕಿ ಬಿಕ್ಕಿ ಅತ್ತನು. ಆ ಒಂದು ಅಪ್ಪುವಿಕೆ ಯಲ್ಲಿ ತಿಂಗಳುಗಳ ಹಸಿವು, ನೋವು ಎಲ್ಲವೂ ಕರಗಿ ಹೋಗಿದ್ದವು. ಮರಳಿ ಮತ್ತೆ ಅದೇ ಕಾಡು-ಮೇಡು ಗಳನ್ನು ದಾಟಿ ಕೊನೆಗೂ ತನ್ನ ಸುರಕ್ಷಿತ ಮನೆಗೆ ಮಗನನ್ನು ಕರೆತಂದಳು. ಅವರು ತಮ್ಮ ಗ್ರಾಮವನ್ನು ತಲುಪಿದಾಗ, ಯುಲಿಯಾನಾಳ ಕಾಲಲ್ಲಿದ್ದ ಚಪ್ಪಲಿಗಳು ಸಂಪೂರ್ಣ ವಾಗಿ ಹರಿದು ಹೋಗಿ ಪಾದಗಳು ರಕ್ತಸಿಕ್ತವಾಗಿದ್ದವು.

ಆಕೆಯ ದೇಹದಲ್ಲಿ ಜೀವ ಉಳಿದಿದೆಯೇ ಎಂಬಷ್ಟು ಆಕೆ ಕೃಶವಾಗಿದ್ದಳು. ಆದರೆ, ಅವಳ ಮುಖ ದಲ್ಲಿ ಮಗನನ್ನು ಸಾವಿನ ದವಡೆಯಿಂದ ಗೆದ್ದು ತಂದ ಹೆಮ್ಮೆಯ ನಗು ಇತ್ತು. ಮುಂದೆ ಅಲೆಕ್ಸಿ ದೊಡ್ಡವನಾಗಿ, ಮಕ್ಕಳು-ಮೊಮ್ಮಕ್ಕಳನ್ನು ಪಡೆದಾಗಲೂ, ಪ್ರತಿವರ್ಷ ಈ ಕಥೆಯನ್ನು ಕಣ್ಣೀರು ತುಂಬಿದ ಕಣ್ಣುಗಳಿಂದ ಹೇಳುತ್ತಿದ್ದ. ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ತಾಯಿಯ ಪ್ರೀತಿಗೆ ಸಮನಾವುದೂ ಇಲ್ಲ. ಮಾತೃ ದೇವೋಭವ!

ರೂಪಾ ಗುರುರಾಜ್

View all posts by this author