ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ರೂಪಾ ಗುರುರಾಜ್

rgururaj628@gmail.com

ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ.‌ - ಬೆಂಗಳೂರು ದೂರದರ್ಶನದ ಚಂದನ ವಾಹಿನಿ. - ಆಕಾಶವಾಣಿ ನಿಲಯ. - ಎಫ್.ಎಂ ರೈನ್ ಬೋ ಕಂಪನಾಂಕ. - ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ. ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ. 50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.‌

Articles
Roopa Gururaj Column: ಮನುಷ್ಯನ ಅತಿಯಾಸೆಗೆ ಬಲಿಯಾಗುವ ಜೀವಿಗಳು

ಮನುಷ್ಯನ ಅತಿಯಾಸೆಗೆ ಬಲಿಯಾಗುವ ಜೀವಿಗಳು

ಮಾರ್ಗರೇಟ್ ವಿಜ್ಞಾನಿಯೇನೂ ಅಲ್ಲ; ಆದರೆ ಅವಳಿಗೆ ಸಂವಹನದ ಕಲೆಯ ಮೇಲೆ ಅಪಾರ ಆಸಕ್ತಿ ಇತ್ತು. ಮನುಷ್ಯರು ಒಂದು ದಿನ ಪ್ರಾಣಿಗಳೊಂದಿಗೆ ನಿಜವಾಗಿ ಮಾತನಾಡ ಬಹುದು ಎಂಬ ಕಲ್ಪನೆಯೇ ಅವಳನ್ನು ಆಕರ್ಷಿಸಿತ್ತು. ತಿಂಗಳುಗಳ ಕಾಲ, ಅವಳು ಆ ಕನಸಿನ ಮುಳುಗಿದ್ದಳು.

Roopa Gururaj Column: ದುಡುಕಿ ಜನ್ಮ ಹಾಳು ಮಾಡಿಕೊಂಡ ಜಯ-ವಿಜಯರು

ದುಡುಕಿ ಜನ್ಮ ಹಾಳು ಮಾಡಿಕೊಂಡ ಜಯ-ವಿಜಯರು

ಭಕ್ತನ ಮೊರೆಯನ್ನು ಆಲಿಸಿದ ಭಗವಂತನು ಗರುಡನ ಹೆಗಲೇರಿ ಬಂದು ತನ್ನ ಸುದರ್ಶನ ಚಕ್ರವನ್ನು ಮೊಸಳೆಯ ಮೇಲೆ ಪ್ರಯೋಗಿಸಿದನು. ಈ ರೀತಿಯಾಗಿ ಗಜೇಂದ್ರನಿಗೆ ಮೋಕ್ಷ ಪ್ರಾಪ್ತಿಯಾಯಿತು. ಅಂದಿನಿಂದ ‘ಗಂಡಕಿ’ ನದಿ ಕ್ಷೇತ್ರವು ಪರಮ ಪಾವನವಾದ ವಿಷ್ಣು ಕ್ಷೇತ್ರ ವಾಯಿತು. ಈ ಗಂಡಕೀ ನದಿಯಲ್ಲಿ ಸಿಗುವ ಶಿಲೆಗಳ ಮೇಲೆ ಚಕ್ರದ ಚಿಹ್ನೆ ಮೂಡಿರುತ್ತದೆ ಅದು ಸಾಲಿಗ್ರಾಮವಾಗಿ ಪೂಜಿಸಲ್ಪಡುತ್ತದೆ.

Roopa Gururaj Column: ಹಂಗಿನರಮನೆಗಿಂತ ವಿಂಗಡದ ಗುಡಿಲೇಸು...

Roopa Gururaj Column: ಹಂಗಿನರಮನೆಗಿಂತ ವಿಂಗಡದ ಗುಡಿಲೇಸು...

ಬದುಕಿನಲ್ಲಿ ವೈಭೋಗಗಳ ಆಸೆಗೆ ನಾವು ಅನೇಕ ಬಾರಿ ಕೆಲವರ ಹಂಗಿನಲ್ಲಿ ಬೀಳುತ್ತೇವೆ. ನೆನಪಿರಲಿ, ಯಾರೂ ನಮಗೆ ಅನಗತ್ಯವಾಗಿ ಸಹಾಯ ಮಾಡುವುದಿಲ್ಲ. ಅವರಿಗೆ ನಮ್ಮಿಂದ ಏನೋ ಅನುಕೂಲವಾಗುತ್ತಿರುತ್ತದೆ. ಆದ್ದರಿಂದಲೇ ಅವರು ನಮ್ಮನ್ನು ಅತಿಯಾಗಿ ಹೊಗಳಿ, ಉಡುಗೊರೆಗಳನ್ನು ನೀಡುತ್ತಾ ನಮಗೆ ವಿಶೇಷ ಮರ್ಯಾದೆ ಕೊಡುತ್ತಾರೆ.

Roopa Gururaj Column: ಮುಷ್ಟಿಯಲ್ಲಿ ಜೀವನದ ಪಾಠವನ್ನು ತಿಳಿಸಿದ ಗುರು

ಮುಷ್ಟಿಯಲ್ಲಿ ಜೀವನದ ಪಾಠವನ್ನು ತಿಳಿಸಿದ ಗುರು

ಎಷ್ಟೇ ಅಡ್ಡಿಗಳು ಬರಲಿ ಧರ್ಮಮಾರ್ಗದಲ್ಲೇ ನಡೆಯಬೇಕು ಎಂಬ ಸಂಕಲ್ಪವನ್ನು ಶಿಷ್ಯರಲ್ಲಿ ಗಟ್ಟಿ ಮಾಡುತ್ತಾ ಸಾವಿರಾರು ಶಿಷ್ಯರನ್ನು ತಿದ್ದಿ ತೀಡಬೇಕು. ಒಳ್ಳೆಯ ಚಿಂತನೆ ಗಳನ್ನು ಅವರ ಮನದಲ್ಲಿ ಬಿತ್ತಿ, ರಾಷ್ಟ್ರಕ್ಕೆ ಸತ್-ಪ್ರಜೆಗಳನ್ನು ರೂಪಿಸಿ ಕೊಡುಗೆಯಾಗಿ ನೀಡುವ ಅರ್ಪಣಾ ಮನೋಭಾವ ಗುರುಕುಲದ ಗುರುಗಳಿಗೆ ಇದ್ದಾಗ ನಮ್ಮ ದೇಶವು ಧಾರ್ಮಿಕವಾಗಿ, ಸಾಮಾಜಿಕ ವಾಗಿ ಸಂಪೂರ್ಣ ಅಭಿವೃದ್ಧಿಯಾಗುತ್ತದೆ..

Roopa Gururaj Column: ಉಪಕಾರಸ್ಮರಣೆ ಇಲ್ಲದ ಮನುಷ್ಯ

Roopa Gururaj Column: ಉಪಕಾರಸ್ಮರಣೆ ಇಲ್ಲದ ಮನುಷ್ಯ

ಗೋವು ಮಹಿಳೆಗೆ ಕೊಟ್ಟ ಶಾಪದಿಂದಾಗಿ ಮನುಷ್ಯರಿಗೆ ಹುಟ್ಟಿದ ಮಕ್ಕಳು ಎದ್ದು ನಿಲ್ಲಲು 8-10 ತಿಂಗಳು ಬೇಕಾಗುತ್ತದೆ. ಪ್ರಾಣಿಗಳಿಗೆ ಹುಟ್ಟಿದ ಮರಿ-ಕರು ಗಳು, ಕೆಲವೇ ಸಮಯದಲ್ಲಿ ಎದ್ದು ನಿಂತು ಓಡಾಡುತ್ತವೆ. ‘ಹುಟ್ಟಿಸಿದ ದೇವರು ಹುಲ್ಲು ಮೇಯಿಸಿ ಯಾನೆ?’ ಎನ್ನುವಂತೆ, ತಾನು ಸೃಷ್ಟಿಸಿದ ಜೀವಗಳನ್ನು ಭಗವಂತ ತಾನೇ ರಕ್ಷಿಸುತ್ತಾನೆ...

Roopa Gururaj Column: ಸಮುದ್ರಕ್ಕೆ ಬಿದ್ದಾಗ ಬುದ್ಧಿ ಕಲಿತ ವ್ಯಾಪಾರಿ

Roopa Gururaj Column: ಸಮುದ್ರಕ್ಕೆ ಬಿದ್ದಾಗ ಬುದ್ಧಿ ಕಲಿತ ವ್ಯಾಪಾರಿ

ಎಷ್ಟೋ ಬಾರಿ ನಮಗಿಂತ ಹೆಚ್ಚು ಕಷ್ಟ ಪಡುವ ಜನರನ್ನು ನೋಡಿದಾಗ ನಮ್ಮ ಸ್ಥಿತಿಯ ಬಗ್ಗೆ ನಮಗೆ ಸಮಾಧಾನವಾಗುತ್ತದೆ. ಆದ್ದರಿಂದ ಎಂತಹದ್ದೇ ಪರಿಸ್ಥಿತಿಯನ್ನು ಸಮಾಧಾನ ದಿಂದ ಎದುರಿಸುವ , ನಿರ್ಲಿಪ್ತ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಬದುಕನ್ನು ಸಮಚಿತ್ತದಿಂದ ಸ್ವೀಕರಿಸಲು ಸಾಧ್ಯ.

Roopa Gururaj Column: ಭಗವದ್ಗೀತೆಯ ಸಾರ ತಿಳಿದವರು

Roopa Gururaj Column: ಭಗವದ್ಗೀತೆಯ ಸಾರ ತಿಳಿದವರು

ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ, ಕಷ್ಟದಲ್ಲಿರುವವರನ್ನು ನೋಡಿದಾಗ ಅವರಿಗೆ ಏನಾದರೂ ಮಾಡಬೇಕು ಅನ್ನುವ ತುಡಿತ, ಮಾನವೀಯ ಮೌಲ್ಯ, ವೈಚಾರಿಕತೆ ಇವೆಲ್ಲವನ್ನೂ ರೂಢಿಸಿಕೊಂಡಾಗ ನಾವು ಗಳಿಸಿದ ವಿದ್ಯೆಗೂ ಒಂದು ಮೌಲ್ಯ. ಅದಿಲ್ಲದೆ ‘ನಾನು ಮಾತ್ರ ಉದ್ಧಾರವಾಗ ಬೇಕು, ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು, ನಾನು ನನ್ನದು’ ಎನ್ನುವ ಸ್ವಾರ್ಥದ ಆಲೋಚನೆಗಳ ಬಂದಿಯಾದವರು ಸಮಾಜಕ್ಕೆ ಒಂದು ಹೊರೆ ಎಂತಲೇ ಹೇಳಬೇಕು.

Roopa Gururaj Column: ಬದುಕಿರುವ ಕೊನೆಯ ಕ್ಷಣದವರೆಗೂ ಕಲಿಕೆ ನಿಲ್ಲುವುದಿಲ್ಲ

ಬದುಕಿರುವ ಕೊನೆಯ ಕ್ಷಣದವರೆಗೂ ಕಲಿಕೆ ನಿಲ್ಲುವುದಿಲ್ಲ

ಕಲಿಕೆಗೆ ಕೊನೆಯೆಂಬುದು ಇಲ್ಲವೇ ಇಲ್ಲ. ಬದುಕಿನುದ್ದಕ್ಕೂ ಹೊಸ ಹೊಸ ವಿಷಯಗಳನ್ನು, ಬದುಕನ್ನು ಅರ್ಥಪೂರ್ಣವಾಗಿ ಬದುಕುವ ಕೌಶಲವನ್ನು ನಾವು ಕಲಿಯುತ್ತಲೇ ಇರಬಹುದು. ಆದ್ದರಿಂದಲೇ ಎನಗಿಂತ ಕಿರಿಯರಿಲ್ಲ ಎನ್ನುವ ಬಸವಣ್ಣನವರ ವಚನದಂತೆ ಸದಾ ವಿನಯದಿಂದ, ಏನನ್ನಾದರೂ ಕಲಿಯುವ ಉತ್ಸಾಹದಿಂದ ಪ್ರತಿ ದಿನವನ್ನು ಸ್ವಾಗತಿಸೋಣ.

Roopa Gururaj Column: ಬಯಸಿದ್ದು ದೊರೆಯಬೇಕಾದರೆ ನಾವು ಅರ್ಹರಾಗಬೇಕು

ಬಯಸಿದ್ದು ದೊರೆಯಬೇಕಾದರೆ ನಾವು ಅರ್ಹರಾಗಬೇಕು

ನಮಗೆ ಜೀವನದಲ್ಲಿ ಏನು ಬೇಕು ಎಂದು ನಾವು ಒಮ್ಮೆ ಮನಸ್ಸು ಮಾಡಿದರೆ, ಅದಕ್ಕಾಗಿ ಪರಿಶ್ರಮ ವಹಿಸತೊಡಗಿದರೆ ಅದರ ಬಗೆಗಿನ ಸಂಪೂರ್ಣ ಮಾಹಿತಿ ನಮ್ಮ ಕಣ್ಣ ಮುಂದೆ ಬರಲು ಪ್ರಾರಂಭ ವಾಗುತ್ತದೆ. ನಾವು ಮಾನಸಿಕವಾಗಿ ದೈಹಿಕವಾಗಿ ಸಿದ್ಧವಾದಾಗ ಮಾತ್ರ ನಮಗೆ ಏನು ಬೇಕೋ ಅದು ಲಭಿಸಲು ಸಾಧ್ಯ. ಎಲ್ಲವೂ ನಮ್ಮೊಳಗೇ ಇದೆ. ಏನು ಬೇಕು? ಏಕೆ ಬೇಕು? ಎಂದು ನಿರ್ಧರಿಸುವ ಮನಸ್ಸನ್ನು ನಾವು ಮಾಡಬೇಕು ಅಷ್ಟೇ...

Roopa Gururaj Column: ಉದ್ಧವನಿಗೆ ಜೀವನದ ಪಾಠವನ್ನು ಹೇಳಿದ ಕೃಷ್ಣ

Roopa Gururaj Column: ಉದ್ಧವನಿಗೆ ಜೀವನದ ಪಾಠವನ್ನು ಹೇಳಿದ ಕೃಷ್ಣ

ಹಂಕಾರ ದಿಂದ ಅವಿವೇಕದಿಂದ ಮನುಷ್ಯ ನನ್ನನ್ನು ಮರೆತರೆ ತಪ್ಪು ಮಾಡುತ್ತಾನೆ, ಅಡ್ಡದಾರಿ ಹಿಡಿಯು ತ್ತಾನೆ. ಅಲ್ಲದೆ ಭಗವಂತ ನಮ್ಮ ಆತ್ಮದೊಳಗೆ ಇದ್ದಾನೆ ಎಂಬುದನ್ನು ಗಮನಿಸದೆ ಅವಿವೇಕ ದಿಂದ ವರ್ತಿಸಿದರೆ ನಾನೂ ಸಹಾಯಮಾಡಲು ಸಾಧ್ಯವಿಲ್ಲ" ಎಂದನು. ಪರಮಾತ್ಮನ ಬಗೆಗೆ ಸಮರ್ಪಣಾ ಭಾವ ಇದ್ದಾಗ, ಅವನಲ್ಲಿ ಸಂಪೂರ್ಣ ನಂಬಿಕೆ ಇದ್ದಾಗ ಮಾತ್ರ ಅವನ ಕೃಪೆಗೆ ನಾವು ಪಾತ್ರರಾಗಲು ಸಾಧ್ಯ.

Roopa Gururaj Column: ಕತ್ತಲಿನತ್ತ ಸಾಗಿ, ಕತ್ತಲನ್ನು ನಿವಾರಿಸುವ ಬೆಳಕು

Roopa Gururaj Column: ಕತ್ತಲಿನತ್ತ ಸಾಗಿ, ಕತ್ತಲನ್ನು ನಿವಾರಿಸುವ ಬೆಳಕು

ಬೆಳೆಯುತ್ತಾ ಮಕ್ಕಳು ಗುಣಾವಗುಣಗಳನ್ನು ಅಳವಡಿಸಿಕೊಳ್ಳುತ್ತಾ ಕೆಲವೊಮ್ಮೆ ಹಾದಿ ತಪ್ಪುತ್ತಾರೆ. ತಂದೆ-ತಾಯಿಯಾಗಿ ಪ್ರತಿ ಬಾರಿಯೂ ಅವರನ್ನು ಗಟ್ಟಿಸಿ ಸರಿಪಡಿಸಲು ಆತ್ಮ ಗೌರವ ಅಡ್ಡ ಬರುತ್ತದೆ. ಕೆಲವೊಮ್ಮೆ ಮಕ್ಕಳಂತೂ ಉದ್ಧಟತನದಿಂದ ಉತ್ತರಿಸಿ ನಮ್ಮ ಆತ್ಮಭಿಮಾನಕ್ಕೆ ಪೆಟ್ಟು ಕೂಡ ಕೊಡು ತ್ತಾರೆ, ಹಾಗೆಂದು ತಂದೆ-ತಾಯಿಗಳಾಗಿ ನಾವು ಕೈಚೆಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ.

Roopa Gururaj Column: ಕಾರ್ತಿಕ ಮಾಸದಲ್ಲಿ ದೀಪ ಬೆಳಗಿಸುವುದರ ಫಲ

Roopa Gururaj Column: ಕಾರ್ತಿಕ ಮಾಸದಲ್ಲಿ ದೀಪ ಬೆಳಗಿಸುವುದರ ಫಲ

ನಿನ್ನಿಂದ ಮೋಕ್ಷ ಪಡೆದ ಈ ‘ಕಲಹಾ’ ಸ್ತ್ರೀಯು ಆಗ ಕೈಕೇಯಿಯಾಗಿ ಜನ್ಮತಾಳಿ, ದೇವಕಾರ್ಯಾ ರ್ಥವಾಗಿ ರಾವಣ ಸಂಹಾರಕ್ಕೆ ಕಾರಣಳಾಗುತ್ತಾಳೆ. ನಿನ್ನ ಕಾರ್ತಿಕ ಮಾಸದ ವ್ರತದ ಅರ್ಧಪುಣ್ಯ ದಿಂದಲೇ ಇಷ್ಟೊಂದು ಫಲ ಪಡೆದ ನೀನು, ಪೂರ್ತಿ ಕಾರ್ತಿಕ ಮಾಸದ ಪುಣ್ಯದ ಮಹಿಮೆಯಿಂದ ಎಷ್ಟು ಫಲ ಗಳಿಸುವೆ ಎಂದು ಊಹಿಸಲು ಸಾಧ್ಯವಿಲ್ಲ" ಎಂದು ಶ್ಲಾಘಿಸಿದರು.

Roopa Gururaj Column: ಹೀಗೊಬ್ಬ ಅಪರೂಪದ ರಾಜಕಾರಣಿ ಕಥೆ !

Roopa Gururaj Column: ಹೀಗೊಬ್ಬ ಅಪರೂಪದ ರಾಜಕಾರಣಿ ಕಥೆ !

ಅಧಿಕಾರಿಗಳು ಹಾಗೂ ಅವರ ವಾಹನಗಳ ದಂಡನ್ನು ನೋಡಿ ಮನೆಯ ಮಾಲೀಕ ಅವಾಕ್ಕಾದ. ತನ್ನ ಮನೆಯಲ್ಲಿ ಬಾಡಿಗೆಗೆ ಇರುವ ವೃದ್ಧರು ಬೇರಾರೂ ಅಲ್ಲ, ಅವರೇ ಮಾಜಿ ಪ್ರಧಾನಿ ಗುಲ್ಜಾರಿ ಲಾಲ್ ನಂದಾ ಎಂಬುದು ಅರಿವಾಗಿ ತನ್ನನ್ನು ಕ್ಷಮಿಸುವಂತೆ ಆತ ನಂದಾ ಅವರ ಕಾಲು ಹಿಡಿದ. ಸರಕಾರಿ ನಿವಾಸ ಮತ್ತು ಅನ್ವಯವಾಗುವ ಸವಲತ್ತುಗಳನ್ನು ಪಡೆಯುವಂತೆ ಅಧಿಕಾರಿಗಳು ಗುಲ್ಜಾರಿಲಾಲ್ ನಂದಾ ಅವರನ್ನು ವಿನಂತಿಸಿಕೊಂಡರು.

Roopa Gururaj Column: ಮೂರು ಉಳಿಸುವ ಸ್ವಾರ್ಥದಿಂದ ಆರು ನಷ್ಟ

ಮೂರು ಉಳಿಸುವ ಸ್ವಾರ್ಥದಿಂದ ಆರು ನಷ್ಟ

“ಅಯ್ಯೋ! ಎಂಥ ಮನೆಹಾಳು ಕೆಲಸವಾಯಿತು. ಅನ್ಯಾಯವಾಗಿ ಚಿನ್ನದ ಸರ ಕೈ ಬಿಟ್ಟು ಹೋಯಿ ತಲ್ಲಾ" ಎಂದು ಪಾಪಯ್ಯ ಮಮ್ಮಲ ಮರುಗಿದ. ಅತಿಯಾದ ಬುದ್ಧಿವಂತಿಕೆ ಉಪಯೋಗಿಸಿ ಹಣ ಉಳಿಸಲು ವಾಮಮಾರ್ಗಕ್ಕೆ ಇಳಿದರೆ, ಅದರ ಎರಡರಷ್ಟು ಖರ್ಚಾಗಿರುತ್ತದೆ. ಹಣದ ಮೋಹ ಒಳ್ಳೆಯದಲ್ಲ, ಸಂಬಂಧಗಳಿಗೆ ಬೆಲೆ ಕೊಡಬೇಕು. ಅಲ್ಲವೇ ?

Roopa Gururaj Column: ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಶಂಕರಾಚಾರ್ಯರು

ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಶಂಕರಾಚಾರ್ಯರು

ಶಂಕರ ಬದುಕಿದ. ಅವನಿಗೆ ಎಂಟನೇ ವರ್ಷದಲ್ಲಿದ್ದ ಮೃತ್ಯುಯೋಗ ಭಗವಂತನ ಕೃಪೆಯಿಂದ ನಿವಾರಣೆಯಾಗಿತ್ತು. ನಂತರ ವೇದವ್ಯಾಸರನ್ನು ಕೇದಾರದಲ್ಲಿ ಭೇಟಿಯಾಗಿ ಬ್ರಹ್ಮಸೂತ್ರಗಳಿಗೆ ಅವರು ಬರೆದ ಭಾಷ್ಯವನ್ನು ತೋರಿಸಿ ಅವರೊಂದಿಗೆ ಚರ್ಚೆಯನ್ನು ನಡೆಸಿದಾಗ ಅವರು ೧೬ ವರುಷಗಳ ಆಯಸ್ಸನ್ನು ಕರುಣಿಸಿ ಜಗತ್ತಿನಲ್ಲಿ ಮಿಥ್ಯಾವಾದವನ್ನು ಖಂಡಿಸಿ ಅದ್ವೈತ ಸಿದ್ಧಾಂತವನ್ನು ಆಚಂದ್ರಾರ್ಕವಾಗಿಸುವಂತೆ ಆದೇಶಿಸಿದರು.

Roopa Gururaj Column: ಬಲಿಪಾಡ್ಯಮಿಯ ವೈಶಿಷ್ಟ್ಯ

Roopa Gururaj Column: ಬಲಿಪಾಡ್ಯಮಿಯ ವೈಶಿಷ್ಟ್ಯ

ಬಲಿಯ ನೂರನೇ ಅಶ್ವಮೇಧ ಯಾಗ ಮುಕ್ತಾಯ ಹಂತದಲ್ಲಿದ್ದಾಗ ವಾಮನ ರೂಪಿ ಪರಮಾತ್ಮನು ಯಾಗಮಂಟಪ ಪ್ರವೇಶಿಸಿದನು. ಅತಿ ಸುಂದರ ಬ್ರಹ್ಮಚಾರಿಯ ದರ್ಶನದಿಂದ ಪುಳಕಿತನಾದ ಬಲಿಯು ಅವನಿಗೆ ನಮಸ್ಕರಿಸಿ, ಪಾದಪ್ರಕ್ಷಾಲನೆ ಮಾಡಿ, ನಿನಗೆ ಏನು ಬೇಕೆಂದು ಕೇಳಿದನು.

Roopa Gururaj Column: ಧನತ್ರಯೋದಶಿಯ ಮಹತ್ವ

Roopa Gururaj Column: ಧನತ್ರಯೋದಶಿಯ ಮಹತ್ವ

ಒಳ್ಳೆಯ ಮನಸ್ಸಿನಿಂದ ಮನೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುತ್ತಾ, ಕಾಲಕಾಲಕ್ಕೆ ಬೇಕಾದ ದಾನ ಧರ್ಮಗಳನ್ನು ಮಾಡುತ್ತಾ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದಾಗ ಪ್ರತಿದಿನವೂ ಹಬ್ಬವೇ. ಯಾರ ಮನೆಯಲ್ಲಿ ಅನಗತ್ಯವಾಗಿ ವಸ್ತುಗಳನ್ನು ತುಂಬಿಕೊಂಡಿರುವುದಿಲ್ಲವೋ, ಹಣ ಪೋಲಾ ಗುವುದಿಲ್ಲವೋ, ಪ್ರಾಮಾಣಿಕತೆಯಿಂದ ಬದುಕುತ್ತಾರೋ ಅಲ್ಲಿ ಲಕ್ಷ್ಮಿ-ಸರಸ್ವತಿ ಇಬ್ಬರ ಕೃಪೆಯೂ ಇರುತ್ತದೆ.

Roopa Gururaj Column: ನರಕ ಚತುರ್ದಶಿಯ ಕಥೆ

Roopa Gururaj Column: ನರಕ ಚತುರ್ದಶಿಯ ಕಥೆ

ಸಾರು ವರ್ಷಗಳ ಹಿಂದೆ ಕೃತಯುಗದಲ್ಲಿ ಹಿರಣ್ಯಾಕ್ಷ ಅನ್ನುವ ರಾಕ್ಷಸನಿದ್ದ. ಅವನು ಇಡೀ ಭೂಮಿ ಯನ್ನು ಸಮುದ್ರದ ನೀರಿನಲ್ಲಿ ಮುಳುಗಿಸಿಬಿಟ್ಟ. ಆಗ ಮಹಾವಿಷ್ಣು ವರಾಹಾವತಾರವನ್ನು ತಾಳಿ, ನೀರಿನ ದ್ವಂದ್ವ ಯುದ್ಧ ಮಾಡಿ ಹಿರಣ್ಯಾಕ್ಷನನ್ನು ಕೊಂದು ಭೂದೇವಿಯನ್ನು ಸಂರಕ್ಷಿಸಿದ ಮತ್ತು ಭೂದೇವಿಗೆ ತನ್ನ ಹಳೆಯ ಸ್ಥಾನ ಸಿಗೋ ಹಾಗೆ ಮಾಡಿದ.

Roopa Gururaj Column: ಚಿಂತೆಯ ಚೀಲ

Roopa Gururaj Column: ಚಿಂತೆಯ ಚೀಲ

ಕೆಲಸ ಮುಗಿದ ಹಾಗೆ ಇಡೀ ದಿನದ ಚಿಂತೆಗಳನ್ನು ಆ ಚೀಲದಲ್ಲಿ ತುಂಬಿಸುತ್ತೇನೆ. ಮನೆಗೆ ಬರುವಾಗ ಚಿಂತೆಯ ಭಾರದಿಂದ ತುಂಬಿರುವ ಚೀಲವನ್ನು ಮರಕ್ಕೆ ನೇತುಹಾಕಿ ಮನೆಯೊಳಗೆ ಸಂತೋಷ ದಿಂದ ಹೋಗುತ್ತೇನೆ. ಹೆಂಡತಿ-ಮಕ್ಕಳೊಂದಿಗೆ ನಗುನಗುತ್ತಾ ಕಳೆಯುತ್ತೇನೆ. ರಾತ್ರಿ ಮಲಗಿ ಬೆಳಗ್ಗೆ ಹೊರಡು ವಾಗ ಕೈಚೀಲ ತೆಗೆದುಕೊಂಡರೆ ಚಿಂತೆಗಳೆಲ್ಲ ಕರಗಿ ಚೀಲ ಹಗುರವಾಗಿರುತ್ತದೆ

Roopa Gururaj Column: ತಂದೆ-ತಾಯಿಯರ ಸೇವೆಗಿಂತ ಮಿಗಿಲಾದ ಪುಣ್ಯ ಯಾವುದೂ ಇಲ್ಲ

ತಂದೆ-ತಾಯಿಯರ ಸೇವೆಗಿಂತ ಮಿಗಿಲಾದ ಪುಣ್ಯ ಯಾವುದೂ ಇಲ್ಲ

ಭಕ್ತನ ಮಾತಿನಂತೆ ಕೃಷ್ಣನು ಪತ್ನಿ ರುಕ್ಮಿಣಿ ಸಮೇತ ‘ಪಂಢರಿನಾಥ ಪಾಂಡುರಂಗ’ ಎಂಬ ಹೆಸರಿ ನೊಂದಿಗೆ ಅಲ್ಲೇ ನೆಲೆಸಿದನು. ಇದೇ ಮುಂದೆ ’ಪಂಢರಾಪುರ’ ಎಂಬ ಪುಣ್ಯಕ್ಷೇತ್ರವಾಗಿ ಬೆಳೆಯಿತು. ತಮ್ಮ ಆಯಸ್ಸನ್ನು ಎಲ್ಲಾ ಮಕ್ಕಳ ಶ್ರೇಯಸ್ಸಿಗೆ, ಅಭಿವೃದ್ಧಿಗೆ ವ್ಯಯಿಸಿ ಕೇವಲ ಅವರ ಸುಖಕ್ಕಾಗಿ ಬದುಕುವ ತಂದೆ ತಾಯಿಗಳು, ವೃದ್ಧಾಪ್ಯದಲ್ಲಿದ್ದಾಗ ಮತ್ತೆ ಪುಟ್ಟ ಮಕ್ಕಳಂತಾಗುತ್ತಾರೆ.

Roopa Gururaj Column: ಸೀತೆಯ ಶಾಪಕ್ಕೆ ಗುರಿಯಾದ ನಾಲ್ವರು

Roopa Gururaj Column: ಸೀತೆಯ ಶಾಪಕ್ಕೆ ಗುರಿಯಾದ ನಾಲ್ವರು

ಕೆಲವೊಮ್ಮೆ ಸತ್ಯದ ಪರ ನಿಲ್ಲಲು ನಮಗೆ ಧೈರ್ಯವೇ ಸಾಲದಾಗುತ್ತದೆ.. ಇದರಿಂದ ಮತ್ತೇನೋ ಅವಘಡವಾಗುತ್ತದೆ ಎನ್ನುವ ಆತಂಕ ನಮ್ಮನ್ನು ಕಾಡುತ್ತದೆ. ಆದರೆ ಒಬ್ಬರಿಗೆ ಒಳ್ಳೆಯದಾಗುತ್ತದೆ ಎಂದಾದರೆ ಸತ್ಯ ನುಡಿಯುವುದರಲ್ಲಿ ಅವರನ್ನು ಕೆಟ್ಟವರಿಂದ ರಕ್ಷಿಸುವಲ್ಲಿ ನಾವು ಧೈರ್ಯ ತಂದು ಕೊಳ್ಳಬೇಕು, ಸತ್ಯವಂತರೊಡನೆ ಭಗವಂತನೂ ಇರುತ್ತಾನೆ.

Roopa Gururaj Column: ಮನಸ್ಸು ಒಮ್ಮೆ ನಿರ್ಧಾರ ಮಾಡಿದರೆ ದೇಹ ಬಾಗಲೇಬೇಕು

ಮನಸ್ಸು ಒಮ್ಮೆ ನಿರ್ಧಾರ ಮಾಡಿದರೆ ದೇಹ ಬಾಗಲೇಬೇಕು

ದಿನವೂ ನಮ್ಮ ದೇಹಕ್ಕೆ ವ್ಯಾಯಾಮ ಬೇಕು, ಅಂದುಕೊಂಡದ್ದನ್ನು ಸಾಧಿಸಲು ಪರಿಶ್ರಮ ಪಡಬೇಕು ಎಂದು ಗೊತ್ತಿದ್ದರೂ ನೆಪಗಳನ್ನು ಹೂಡುತ್ತಾ ಅದನ್ನು ಮುಂದೂಡುತ್ತಾ ಹೋಗುತ್ತೇವೆ. ಕಾರಣ ಮನಸ್ಸು ‘ಇದು ಆಗುವುದಿಲ್ಲ’ ಎಂದು ಆಗಲೇ ನಿರ್ಧರಿಸಿರುತ್ತದೆ. ಆದರೆ ಬೆಳಗ್ಗೆ ಎದ್ದ ಕೂಡಲೇ ‘ಇಂದು ಇಷ್ಟು ಕೆಲಸಗಳನ್ನು ನಾನು ಮಾಡಲೇಬೇಕು’ ಎಂದು ಗಟ್ಟಿಯಾಗಿ ನಿರ್ಧಾರ ಮಾಡಿ ಒಂದು ಕಡೆ ಬರೆದಿಡಿ.

Roopa Gururaj Column: ವರ್ಷದಲ್ಲಿ ಎರಡೇ ಬಾರಿ ದರ್ಶನ ಕೊಡುವ ಹಾಸನಾಂಬೆ ದೇವಿ

ವರ್ಷದಲ್ಲಿ ಎರಡೇ ಬಾರಿ ದರ್ಶನ ಕೊಡುವ ಹಾಸನಾಂಬೆ ದೇವಿ

ಇಲ್ಲಿನ ಸೊಬಗಿಗೆ ಬೆರಗಾಗಿ ಈ ಕ್ಷೇತ್ರದ ನೆಲೆಸಿದರು ಎನ್ನುವ ಪುರಾಣವಿದೆ. ವೈಷ್ಣವಿ, ಕೌಮಾರಿ, ಮಾಹೇಶ್ವರಿ ದೇವಿ ಇವರು ನಗುವ ದೇವತೆಗಳಾದ ‘ಹಸನಾಂಬೆಯರು’ (ಹಸನ- ನಗು, ಅಂಬೆ- ತಾಯಿ). ಈ ಮೂವರೂ ದೇವಿಯರು ಹುತ್ತದ ರಚನೆಯಲ್ಲಿ ನೆಲೆಸಿದರು. ಈ ದೇವಿಯರು ನೆಲೆಸಿದ ಕ್ಷೇತ್ರ ‘ಹಾಸನಾಂಬೆ’ಯೇ ಆಡುಮಾತಿನಲ್ಲಿ ‘ಹಾಸನ’ ವಾಯಿತು.

Roopa Gururaj Column: ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು

ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು

ನಮ್ಮ ಆಂತರಿಕ ಕಲಹವು ನೂರು ಜನರಿಗೆ ನೂರು ರೀತಿಯ ಪ್ರೇರಣೆಯನ್ನು ನೀಡುತ್ತದೆ. ಇದನ್ನೇ ಹಿರಿಯರು ಮತ್ತೊಂದು ರೀತಿಯಲ್ಲಿ ಹೇಳಿದ್ದಾರೆ- ‘ಬಾವಿಯನ್ನು ತೋಡಬೇಕು ಎಂದರೆ, ನೂರು ಕಡೆ ಹಳ್ಳಗಳನ್ನು ಇಷ್ಟಿಷ್ಟೇ ಆಳಕ್ಕೆ ತೋಡಿ ಬಿಟ್ಟುಬಿಡುವುದಲ್ಲ, ಬದಲಿಗೆ ಒಂದೇ ಜಾಗದಲ್ಲಿ 100 ಅಡಿ ಯನ್ನು ತೋಡುವುದು’ ಅಂತ. ಆಗ ಶ್ರಮವೂ ಕಡಿಮೆಯಾಗುತ್ತದೆ ಮತ್ತು ಪ್ರಯೋಜನವೂ ದಕ್ಕುತ್ತದೆ.

Loading...