ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ರೂಪಾ ಗುರುರಾಜ್

[email protected]

ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ.‌ - ಬೆಂಗಳೂರು ದೂರದರ್ಶನದ ಚಂದನ ವಾಹಿನಿ. - ಆಕಾಶವಾಣಿ ನಿಲಯ. - ಎಫ್.ಎಂ ರೈನ್ ಬೋ ಕಂಪನಾಂಕ. - ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ. ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ. 50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.‌

Articles
Roopa Gururaj Column: ಶಂಕರರ ಮಾತೃಭಕ್ತಿಗೊಲಿದು ದಾರಿ ಬದಲಿಸಿದ ಪೂರ್ಣಾ ನದಿ

ಶಂಕರರ ಮಾತೃಭಕ್ತಿಗೊಲಿದು ದಾರಿ ಬದಲಿಸಿದ ಪೂರ್ಣಾ ನದಿ

ಊಟದ ಹೊತ್ತು ಮೀರುತ್ತಾ, ತಾಯಿಯನ್ನು ಕಾಣದೆ ಅವಳನ್ನು ಅರಸುತ್ತಾ ಹೋದ ಬಾಲ ಶಂಕರನಿಗೆ ದಾರಿಯಲ್ಲಿ ಕಂಡ ದೃಶ್ಯ ಆಘಾತ ಉಂಟು ಮಾಡಿತ್ತು. ಈ ಸ್ಥಿತಿಯಲ್ಲಿ ತಾಯಿಯನ್ನು ಕಂಡ ಶಂಕರನ ಪುಟ್ಟ ಹೃದಯ ಕಂಪಿಸಿ ಹೋಗಿತ್ತು. ತಾಯಿಯನ್ನು ಎಚ್ಚರಿಸಿ ಮನೆಗೆ ಕರೆ ತಂದರೂ ಶಂಕರನಿಗೆ ನೆಮ್ಮದಿ ಇಲ್ಲದಾಗಿತ್ತು

Roopa Gururaj Column: ಕ್ಷುದ್ರ ಶಕ್ತಿಗಳನ್ನು ನಾಶಮಾಡುವ ರುದ್ರಾಂಶಸಂಭೂತ ಹನುಮಂತ

ಕ್ಷುದ್ರ ಶಕ್ತಿಗಳನ್ನು ನಾಶಮಾಡುವ ರುದ್ರಾಂಶಸಂಭೂತ ಹನುಮಂತ

ಕತ್ತಲು ಆವರಿಸಿದಾಗ ಬೆಳಕಾಗಿ, ಕರಾಳತೆ ಮುತ್ತಿ ಕೊಂಡಾಗ ರಕ್ಷಕನಾಗಿ ನಿಲ್ಲುವ ಹನುಮಂತನ ಅತ್ಯಂತ ಪ್ರಭಾವಶಾಲಿ ಕಥೆ ತೆರೆದುಕೊಳ್ಳುವುದು ರಾಮಾಯಣದ ಯುದ್ಧದ ಕೊನೆಯ ಘಟ್ಟದಲ್ಲಿ. ಲಂಕೆಯ ಯುದ್ಧಭೂಮಿಯಲ್ಲಿ ರಾವಣನಿಗೆ ಸೋಲಿನ ಸುಳಿವು ಸಿಕ್ಕಿಯಾಗಿತ್ತು. ತನ್ನೆ ಶಕ್ತಿ ಕುಂದಿದಾಗ ಆತ ಕತ್ತಲ ಲೋಕದ ಮೊರೆ ಹೋಗುತ್ತಾನೆ.

Roopa Gururaj Column: ನಂದಿ: ಜ್ಞಾನ, ವಿನಯ, ಸಮರ್ಪಣೆಗಳ ಜೀವಂತ ಸಂಕೇತ

ನಂದಿ: ಜ್ಞಾನ, ವಿನಯ, ಸಮರ್ಪಣೆಗಳ ಜೀವಂತ ಸಂಕೇತ

ನಂದಿಯನ್ನು ನಾವು ಕೇವಲ ‘ಶಿವನ ವಾಹನ’ಎಂದು ಮಾತ್ರ ಭಾವಿಸಿದ್ದರೆ ಅದು ಅಪೂರ್ಣ ವಾಗುತ್ತದೆ. ಶೈವ ಪರಂಪರೆಯಲ್ಲಿ ನಂದಿಯ ಸ್ಥಾನ ಅತ್ಯುನ್ನತವಾದದ್ದು. ಆತ ಕೇವಲ ವಾಹನವಲ್ಲ; ಕೈಲಾಸದ ದ್ವಾರಪಾಲಕ, ಪ್ರಮಥ ಗಣಗಳ ಅಧಿನಾಯಕ, ಅಪ್ರತಿಮ ಯೋಧ, ಶ್ರೇಷ್ಠ ಸಂಗೀತಜ್ಞ ಹಾಗೂ ಪರಮ ಭಕ್ತ

Roopa Gururaj Column: ಕಲ್ಲಿನಲ್ಲಿ ಸಂಗೀತದ ಪ್ರತಿಧ್ವನಿ: ಚೋಳರ ವಾಸ್ತುಶಿಲ್ಪದ ವಿಸ್ಮಯ

ಕಲ್ಲಿನಲ್ಲಿ ಸಂಗೀತದ ಪ್ರತಿಧ್ವನಿ: ಚೋಳರ ವಾಸ್ತುಶಿಲ್ಪದ ವಿಸ್ಮಯ

ದೇವಾಲಯದ ಬಲಿಪೀಠ ಮತ್ತು ನಂದಿ ಮಂಟಪದ ಬಳಿ ಇರುವ ಏಳು ಸುಂದರವಾದ ಮೆಟ್ಟಿಲು ಗಳು ಒಂದು ರೋಮಾಂಚಕಾರಿ ರಹಸ್ಯವನ್ನು ಹೊಂದಿವೆ. ಈ ಮೆಟ್ಟಿಲುಗಳನ್ನು ಮೆಲ್ಲನೆ ತಟ್ಟಿದಾಗ, ಪ್ರತಿ ಯೊಂದು ಮೆಟ್ಟಿಲು ಕರ್ನಾಟಕ ಸಂಗೀತದ ಏಳು ಮೂಲ ಸ್ವರಗಳಾದ ‘ಸ, ರಿ, ಗ, ಮ, ಪ, ದ, ನಿ’ ಎಂಬ ವಿಭಿನ್ನ ನಾದಗಳನ್ನು ಸ್ಪಷ್ಟವಾಗಿ ಹೊರ ಹೊಮ್ಮಿಸುತ್ತದೆ. ಪ್ರಾಚೀನ ಕಾಲದ ಶಿಲ್ಪಿಗಳು ಇದನ್ನು ಹೇಗೆ ಸಾಽಸಿದರು? ಎಂದು ಹುಡುಕಾಡಿದಾಗ ಸಿಗುವ ಉತ್ತರ ಇದು.

Roopa Gururaj Column: ಸ್ಕ್ವಾಡ್ರನ್‌ ಲೀಡರ್‌ ಭಾವನಾ ಕಾಂತ್:‌ ಆಕಾಶವನ್ನೇ ಗೆದ್ದ ಭಾರತದ ಹೆಮ್ಮೆಯ ಪುತ್ರಿ

ಸ್ಕ್ವಾಡ್ರನ್‌ ಲೀಡರ್‌ ಭಾವನಾ ಕಾಂತ್:‌ ಆಕಾಶವನ್ನೇ ಗೆದ್ದ ಹೆಮ್ಮೆಯ ಪುತ್ರಿ

ಬಿಹಾರದ ದರ್ಭಾಂಗದಂತಹ ಒಂದು ಸಣ್ಣ ಪಟ್ಟಣದಿಂದ ಬಂದ ಹುಡುಗಿಯೊಬ್ಬಳು ಆಕಾಶದ ಎತ್ತರವನ್ನು ಮುಟ್ಟುವ ಕನಸು ಕಾಣುವುದು ಮತ್ತು ಆ ಕನಸನ್ನು ಕೇವಲ ನನಸಾಗಿಸುವುದು ಮಾತ್ರ ವಲ್ಲದೆ, ಇಡೀ ದೇಶವೇ ತನ್ನತ್ತ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡುವುದು ನಿಜಕ್ಕೂ ಒಂದು ಅದ್ಭುತ ಹಾಗೂ ರೋಮಾಂಚಕಾರಿ ಕಥೆ. ಈ ಕಥೆಯ ನಾಯಕಿ ಬೇರಾರೂ ಅಲ್ಲ, ಭಾರತೀಯ ವಾಯುಪಡೆಯ ( Indian Air Force ) ಹೆಮ್ಮೆಯ ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್.

Roopa Gururaj Column: ವೇನ ರಾಜನ ವಿನಾಶಕ್ಕೆ ಕಾರಣವಾದ ಅವನ ಅಹಂಕಾರ

ವೇನ ರಾಜನ ವಿನಾಶಕ್ಕೆ ಕಾರಣವಾದ ಅವನ ಅಹಂಕಾರ

ಬಾಲ್ಯದಿಂದಲೇ ಪ್ರಾಣಿಗಳನ್ನು ಹಿಂಸಿಸುವುದು, ಮುಗ್ಧರಿಗೆ ಕಷ್ಟ ಕೊಡುವುದು ಅವನ ಚಾಳಿ ಯಾಗಿತ್ತು. ತನ್ನ ಮಗನ ದುಷ್ಟ ನಡವಳಿಕೆಯನ್ನು ತಿದ್ದಲು ಅಂಗ ರಾಜನು ಎಷ್ಟೇ ಪ್ರಯತ್ನಿಸಿದರೂ ವಿಫಲ ನಾದನು. ಕೊನೆಗೆ ಬೇಸತ್ತ ಅಂಗ ರಾಜನು ರಾಜ್ಯವನ್ನು ತ್ಯಜಿಸಿ ಕಾಡಿಗೆ ತಪಸ್ಸಿಗೆ ತೆರಳಿದನು. ಆಗ ಮಂತ್ರಿಗಳು ಮತ್ತು ಋಷಿಗಳು ಅನಿವಾರ್ಯವಾಗಿ ವೇನನಿಗೆ ಪಟ್ಟಾಭಿಷೇಕ ಮಾಡಿದರು.

R‌oopa Gururaj Column: ಸ್ವಾಭಿಮಾನವನ್ನು ಎಂದಿಗೂ ಬಿಡದ ಡಾಲಿ ಪಾರ್ಟನ್

ಸ್ವಾಭಿಮಾನವನ್ನು ಎಂದಿಗೂ ಬಿಡದ ಡಾಲಿ ಪಾರ್ಟನ್

ಟೆನ್ನೆಸ್ಸೀಯ ಸ್ಮೋಕಿ ಪರ್ವತಗಳ ನಡುವಿನ ಆ ಪುಟ್ಟ ಮರದ ಗುಡಿಸಲು, ವಿದ್ಯುತ್ ನೀರಿನ ಅನುಕೂಲ ವೂ ಅಲ್ಲಿ ಇರಲಿಲ್ಲ. ಚಳಿಗಾಲ ಬಂದರೆ ಬೆಚ್ಚಗಿರಲು ಮನೆಯ ಮೂರ್ನಾಲ್ಕು ಮಕ್ಕಳು ಒಂದೇ ಹಾಸಿಗೆಯಲ್ಲಿ ಮುದುರಿ ಮಲಗಬೇಕಾದಂತಹ ಕಡುಬಡತನ. 1946ರಲ್ಲಿ ಆ ಹೆಣ್ಣುಮಗಳು ಜನಿಸಿದಾಗ, ಅವಳ ತಂದೆಯ ಬಳಿ ವೈದ್ಯರಿಗೆ ಫೀಸ್ ಕಟ್ಟಲು ಹಣವಿರಲಿಲ್ಲ; ಬದಲಾಗಿ ಒಂದು ಚೀಲ ಜೋಳದ ಹಿಟ್ಟನ್ನು ನೀಡಿದ್ದರು. ಆಕೆಯೇ ಮುಂದೆ ಜಗತ್ಪ್ರಸಿದ್ಧ ಗಾಯಕಿಯಾದ ‘ಡಾಲಿ ಪಾರ್ಟನ್.’

Roopa Gururaj Column: ಕ್ಷಮೆಯ ಹಿರಿಮೆ ಸಾರುವ ಗೃಷ್ಣೇಶ್ವರ ಜ್ಯೋತಿರ್ಲಿಂಗದ ಕಥೆ

ಕ್ಷಮೆಯ ಹಿರಿಮೆ ಸಾರುವ ಗೃಷ್ಣೇಶ್ವರ ಜ್ಯೋತಿರ್ಲಿಂಗದ ಕಥೆ

ಘುಷ್ಮಾ ಪರಮ ಶಿವಭಕ್ತೆ. ಅವಳು ಪ್ರತಿದಿನ ಅತ್ಯಂತ ಶ್ರದ್ಧೆಯಿಂದ ಪರಮಶಿವನನ್ನು ಆರಾಧಿಸು ತ್ತಿದಳು. ಅವಳು ಪ್ರತಿದಿನವೂ ಮುಂಜಾನೆ ಎದ್ದು ಸ್ನಾನ ಮಾಡಿ, 101 ಮಣ್ಣಿನ ಶಿವಲಿಂಗಗಳನ್ನು ಮಾಡಿ ನಂತರ ಆ ಲಿಂಗಗಳಿಗೆ ಷೋಡಶೋಪಚಾರ ಪೂಜೆಗಳನ್ನು ಸಲ್ಲಿಸಿ, ಮಧ್ಯಾಹ್ನದ ಸಮಯಕ್ಕೆ ಸಮೀಪ ದಲ್ಲಿದ್ದ ‘ಶಿವಾಲಯದ ಸರೋವರ’ದಲ್ಲಿ ಆ ಲಿಂಗಗಳನ್ನು ಅತ್ಯಂತ ಭಕ್ತಿಯಿಂದ ವಿಸರ್ಜಿಸುತ್ತಿದ್ದಳು. ಇದು ಅವಳ ಕಟ್ಟುನಿಟ್ಟಾದ ದಿನಚರಿಯಾಗಿತ್ತು.

Roopa Gururaj Column: ಚಿರಂಜೀವಿ, ಮಹಾತಪಸ್ವಿ ಶ್ರೀ ಪರಶುರಾಮರ ದಿವ್ಯ ಚರಿತ್ರೆ

ಚಿರಂಜೀವಿ, ಮಹಾತಪಸ್ವಿ ಶ್ರೀ ಪರಶುರಾಮರ ದಿವ್ಯ ಚರಿತ್ರೆ

ಅಂದಿನಿಂದ ಇವರು ‘ಪರಶುರಾಮ’ರೆಂದು ಜಗತ್ಪ್ರಸಿದ್ಧರಾದರು. ಒಮ್ಮೆ ತಂದೆಯ ಆಜ್ಞೆಯಂತೆ ತಾಯಿಯ ಶಿರಚ್ಛೇದ ಮಾಡಿ, ಬಳಿಕ ತಂದೆಯಿಂದ ವರ ಪಡೆದು ತಾಯಿ ಮತ್ತು ಸಹೋದರರನ್ನು ಮರಳಿ ಬದುಕಿಸುವ ಮೂಲಕ ಅಪ್ರತಿಮ ಮಾತೃ ಮತ್ತು ಪಿತೃ ಭಕ್ತಿಯನ್ನು ಜಗತ್ತಿಗೆ ಸಾರಿದರು. ಆ ಕಾಲದಲ್ಲಿ ಹೈಹಯ ವಂಶದ ಕಾರ್ತ ವೀರ್ಯಾರ್ಜುನ ಎಂಬ ದುಷ್ಟ ದೊರೆ ಸಾವಿರ ತೋಳುಗಳ ಬಲದಿಂದ ಅಹಂಕಾರಿಯಾಗಿದ್ದ

Roopa Gururaj Column: ದೇವಕಿ ಅಮ್ಮ: ಕೇರಳದ ವನಮಾತೆಯ ಸ್ಪೂರ್ತಿದಾಯಕ ಕಥೆ

ದೇವಕಿ ಅಮ್ಮ: ಕೇರಳದ ವನಮಾತೆಯ ಸ್ಪೂರ್ತಿದಾಯಕ ಕಥೆ

ಕೃಷಿ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ದೇವಕಿ ಅಮ್ಮನಿಗೆ ಬಾಲ್ಯದಿಂದಲೇ ಗಿಡಮರಗಳ ಬಗ್ಗೆ ಅಪಾರ ಒಲವಿತ್ತು. ಆದರೆ ಕಾಲಿಗೆ ತೀವ್ರವಾಗಿ ಪೆಟ್ಟಾದ ಕಾರಣ ಅವರಿಗೆ ಕೃಷಿ ಕೆಲಸಗಳಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಈ ನಿರಾಶೆಯನ್ನು ಮೆಟ್ಟಿ ನಿಲ್ಲಲು, ಅವರು 1980ರ ದಶಕ ದಲ್ಲಿ ತಮ್ಮ ಮನೆಯ ಹಿತ್ತಲಿನಲ್ಲಿದ್ದ ಐದು ಎಕರೆ ಬಂಜರು ಭೂಮಿಯಲ್ಲಿ ಒಂದೊಂದೇ ಸಸಿಗಳನ್ನು ನೆಡಲು ಪ್ರಾರಂಭಿಸಿದರು.

Roopa Gururaj Column: ಕರ್ಣನ ದ್ವಿಮುಖ ವ್ಯಕ್ತಿತ್ವ, ದಾನಮುಖ ಮತ್ತು ದಾನವ ಗುಣದ ವೈರುಧ್ಯ

ಕರ್ಣನ ದ್ವಿಮುಖ ವ್ಯಕ್ತಿತ್ವ, ದಾನಮುಖ ಮತ್ತು ದಾನವ ಗುಣದ ವೈರುಧ್ಯ

ಕರ್ಣ ಕೇವಲ ಕುಂತಿಯ ಮಗನಷ್ಟೇ ಅಲ್ಲ; ಆತನ ಹುಟ್ಟಿನ ಹಿಂದೆ ಸಾವಿರ ವರ್ಷಗಳಷ್ಟು ಹಳೆಯ ದಾದ ಶಾಪ ಮತ್ತು ಪ್ರತೀಕಾರದ ರಹಸ್ಯವಿತ್ತು. ಧಂಭೋಧ್ಭವನು ಸೂರ್ಯದೇವನ ತೀವ್ರ ಆರಾಧಕ. ಸೂರ್ಯನನ್ನು ಮೆಚ್ಚಿಸಿ ಆತ ಪಡೆದ ವರವೇ ವಿಚಿತ್ರವಾಗಿತ್ತು. ತನ್ನ ದೇಹದ ಮೇಲೆ 1000 ಅಭೇದ್ಯ ಕವಚಗಳಿರಬೇಕು.

Roopa Gururaj Column: ಮೌರ್ಯ ಸಾಮ್ರಾಜ್ಯದ ಕಲಿಗಳಾಗಿದ್ದ ವೀರ ಅಂಗರಕ್ಷಕಿಯರು

ಮೌರ್ಯ ಸಾಮ್ರಾಜ್ಯದ ಕಲಿಗಳಾಗಿದ್ದ ವೀರ ಅಂಗರಕ್ಷಕಿಯರು

ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ ಮೆಗಾಸ್ತನೀಸ್ ಬರೆದ ‘ಇಂಡಿ ಕಾ’ ಗ್ರಂಥ ದಲ್ಲಿ ಈ ಬಗ್ಗೆ ವಿವರವಾಗಿ ದಾಖಲಿಸಿದ್ದಾನೆ. ಚಕ್ರವರ್ತಿಯು ರಾಜಪ್ರಸಾದದಿಂದ ಹೊರ ಬಂದು ಬೇಟೆಗೆ ತೆರಳುವಾಗ ಅಥವಾ ರಾಜಕಾರ್ಯಗಳಿಗೆ ಸಾಗುವಾಗ, ಆತನ ಸುತ್ತಲೂ ಬಿಲ್ಲು, ಬಾಣ, ಖಡ್ಗಗಳನ್ನು ಹಿಡಿದ ಮಹಿಳಾ ಯೋಧರ ದಂಡು ಕಾವಲು ಕಾಯುತ್ತಿತ್ತು.

Roopa Gururaj Column: ಜಂಬೂ ದ್ವೀಪದ ರಹಸ್ಯ: ಖಗೋಳ ವಿಜ್ಞಾನ, ಕಾಲಚಕ್ರದ ಅರಿವು

ಜಂಬೂ ದ್ವೀಪದ ರಹಸ್ಯ: ಖಗೋಳ ವಿಜ್ಞಾನ, ಕಾಲಚಕ್ರದ ಅರಿವು

ಪುರಾಣಗಳಲ್ಲಿ ಜಂಬೂದ್ವೀಪವನ್ನು ಕೇವಲ ಭೌಗೋಳಿಕ ಭೂಮಿಯಾಗಿ ಮಾತ್ರ ವಲ್ಲದೆ, ಇಡೀ ಖಗೋಳ ವ್ಯವಸ್ಥೆ (Cosmology) ಮತ್ತು ಸೂಕ್ಷ ಜಗತ್ತಿನ ಸಂಕೇತವಾಗಿ ವಿವರಿಸಲಾಗಿದೆ. ಸಪ್ತ ದ್ವೀಪಗಳು ಮತ್ತು ಸಪ್ತ ಸಮುದ್ರಗಳ ವಿವರಣೆಯು ಭೂಮಿಯ ವಿವಿಧ ಸ್ತರಗಳನ್ನು ಹಾಗೂ ಸೌರಮಂಡಲದ ವಿನ್ಯಾಸ ವನ್ನು ಪ್ರತಿಬಿಂಬಿಸುತ್ತದೆ.

Roopa Gururaj Column: ಜಂಬೂದ್ವೀಪ ಮತ್ತು ಭರತವರ್ಷ: ಆಧ್ಯಾತ್ಮಿಕ ಮಹತ್ವ ಹಾಗೂ ಸಂಕಲ್ಪದ ರಹಸ್ಯ

ಜಂಬೂದ್ವೀಪ ಮತ್ತು ಭರತವರ್ಷ: ಆಧ್ಯಾತ್ಮಿಕ ಮಹತ್ವ ಹಾಗೂ ಸಂಕಲ್ಪದ ರಹಸ್ಯ

ಜಂಬೂದ್ವೀಪದಲ್ಲಿರುವ ಒಂಬತ್ತು ವರ್ಷಗಳಲ್ಲಿ (ವಿಭಾಗಗಳಲ್ಲಿ) ‘ಭರತವರ್ಷ’ ಅತ್ಯಂತ ಪವಿತ್ರವಾದದ್ದು ಎಂದು ಪುರಾಣಗಳು ಬಣ್ಣಿಸುತ್ತವೆ. ವಿಷ್ಣು ಪುರಾಣದ ಎರಡನೇ ಅಧ್ಯಾಯದ ಪ್ರಕಾರ, ಉಳಿದ ಎಂಟು ವರ್ಷಗಳು ಸ್ವರ್ಗಸಮಾನವಾದ ‘ಭೋಗಭೂಮಿ’ಗಳಾಗಿದ್ದು, ಅಲ್ಲಿನ ಜನರು ಕೇವಲ ಸುಖ-ಭೋಗಗಳನ್ನು ಅನುಭವಿಸುತ್ತಾರೆ. ಆದರೆ, ಭರತವರ್ಷ ಮಾತ್ರ ‘ಕರ್ಮ ಭೂಮಿ’.

Roopa Gururaj Column: ಜಂಬೂದ್ವೀಪದ ಆಂತರಿಕ ದರ್ಶನ: ಪಿಂಡಾಂಡದಿಂದ ಬ್ರಹ್ಮಾಂಡದತ್ತ

ಜಂಬೂದ್ವೀಪದ ಆಂತರಿಕ ದರ್ಶನ: ಪಿಂಡಾಂಡದಿಂದ ಬ್ರಹ್ಮಾಂಡದತ್ತ

ನಮ್ಮ ದೇಹದಲ್ಲಿರುವ ‘ಸಪ್ತ ಚಕ್ರಗಳು’ (ಮೂಲಾಧಾರ ದಿಂದ ಸಹಸ್ರಾರದವರೆಗೆ). ದೇಹದಲ್ಲಿ ಹರಿಯುವ ಇಡಾ, ಪಿಂಗಳ ಮತ್ತು ಸುಷುಮ್ನಾ ನಾಡಿಗಳೇ ಗಂಗಾ, ಯಮುನಾ ಮತ್ತು ಸರಸ್ವತಿ. ಆದ್ದರಿಂದ, ಜಂಬೂದ್ವೀಪದ ಯಾತ್ರೆ ಎಂದರೆ ಕೇವಲ ಹೊರಗಿನ ಪ್ರಪಂಚವನ್ನು ಸುತ್ತುವುದಲ್ಲ; ಬದಲಿಗೆ ಯೋಗ ಮತ್ತು ಧ್ಯಾನದ ಮೂಲಕ ನಮ್ಮೊಳಗಿನ ಆತ್ಮದರ್ಶನವನ್ನು ಮಾಡಿಕೊಳ್ಳುವುದು ಎಂದರ್ಥ.

Roopa Gururaj Column: ದೇವಶಯನಿ ಏಕಾದಶಿ ಮತ್ತು ಚಾತುರ್ಮಾಸ್ಯದ ಕಥೆಗಳು

ದೇವಶಯನಿ ಏಕಾದಶಿ ಮತ್ತು ಚಾತುರ್ಮಾಸ್ಯದ ಕಥೆಗಳು

ವಾಮನನು ಎರಡು ಹೆಜ್ಜೆಗಳಿಂದ ಇಡೀ ಭೂಮಿ ಮತ್ತು ಆಕಾಶವನ್ನು ಅಳೆದನು. ಮೂರನೇ ಹೆಜ್ಜೆಗೆ ಜಾಗವಿಲ್ಲದಿದ್ದಾಗ, ಬಲಿ ಚಕ್ರವರ್ತಿಯು ತನ್ನ ಶಿರಸ್ಸನ್ನೇ ನೀಡಿದನು. ಬಲಿಯ ಈ ನಿಷ್ಠೆ ಮತ್ತು ಭಕ್ತಿಗೆ ಪ್ರಸನ್ನನಾದ ವಿಷ್ಣುವು, ಆತನಿಗೆ ಪಾತಾಳ ಲೋಕದ ಒಡೆಯನನ್ನಾಗಿ ಮಾಡಿ, ತಾನೂ ಸಹ ಆತನ ಭಕ್ತಿಗೆ ಮೆಚ್ಚಿ ನಿನಗೇನು ವರ ಬೇಕು? ಎಂದು ಕೇಳಿದನು.

Roopa Gururaj Column: ಕುಮಾರವ್ಯಾಸ ಭಾರತ: ಛಲ ಮತ್ತು ಭಕ್ತಿಯ ಅಮರ ಕಥೆ

ಕುಮಾರವ್ಯಾಸ ಭಾರತ: ಛಲ ಮತ್ತು ಭಕ್ತಿಯ ಅಮರ ಕಥೆ

ಭಗವಂತನ ದರ್ಶನದಿಂದ ನಾರಣಪ್ಪ ಧನ್ಯರಾದರು. (ಜನಪದೀಯ ಪ್ರತೀತಿಯ ಪ್ರಕಾರ, ಶರತ್ತು ಮುರಿದ ಕಾರಣಕ್ಕೆ ಅಶ್ವತ್ಥಾಮನ ಕೋಪದ ಬಾಣಕ್ಕೆ ನಾರಣಪ್ಪ ತೀರಿದರೆಂಬ ಮಾತಿದೆ. ಆದರೆ ಸಾಹಿತ್ಯ ಚರಿತ್ರೆಯ ಪ್ರಕಾರ, ಅಶ್ವತ್ಥಾಮ ತನ್ನ ಶರತ್ತಿನಂತೆಯೇ ದುರ್ಯೋಧನನ ಅವಸಾನದ ವರೆಗಿನ (ಸಭಾಪರ್ವ ದಿಂದ ಗದಾಪರ್ವ/ ದಶಪರ್ವ) ಕಥೆಯನ್ನು ಪೂರ್ಣಗೊಳಿಸಿ ಅಲ್ಲಿಗೆ ನಿಲ್ಲಿಸಿದನು.

Roopa Gururaj Column: ಧರ್ಮದ ರಹಸ್ಯ: ಸ್ವಧರ್ಮಾಚರಣೆಯಿಂದ ಪರಮಸಿದ್ಧಿ ಗಳಿಸಿದ ಧರ್ಮವ್ಯಾಧ

ಧರ್ಮದ ರಹಸ್ಯ: ಸ್ವಧರ್ಮಾಚರಣೆಯಿಂದ ಪರಮಸಿದ್ಧಿ ಗಳಿಸಿದ ಧರ್ಮವ್ಯಾಧ

ಒಮ್ಮೆ ಕೌಶಿಕನೆಂಬ ಬ್ರಾಹ್ಮಣನು ಜ್ಞಾನದ ಹಂಬಲದಿಂದ ಹೆತ್ತವರನ್ನು, ಮನೆ-ಮಠಗಳನ್ನು ತೊರೆದು ಕಾಡಿಗೆ ತೆರಳಿ ಕಠಿಣ ತಪಸ್ಸು ಮಾಡತೊ ಡಗಿದನು. ಒಂದು ದಿನ ಮರದ ಕೆಳಗೆ ಆತ ಕುಳಿತಿದ್ದಾಗ, ಮರದ ಮೇಲಿದ್ದ ಹಕ್ಕಿಯೊಂದು ಅವನ ಮೇಲೆ ಹೇಸಿಗೆ ಮಾಡಿತು. ಕೋಪಗೊಂಡ ಕೌಶಿಕನು ಕೆಂಗಣ್ಣಿ ನಿಂದ ನೋಡಿದ್ದೇ ತಡ, ಆ ಪಕ್ಷಿ ಸುಟ್ಟು ಬೂದಿಯಾಯಿತು.

Roopa Gururaj Column: ಗೀತಾ ಕರ್ಮಾಕರ್:‌ ಟೀ ತೋಟಗಳ ದೀದಿ ಮೋನಿ

ಗೀತಾ ಕರ್ಮಾಕರ್:‌ ಟೀ ತೋಟಗಳ ದೀದಿ ಮೋನಿ

ಉತ್ತರ ಬಂಗಾಳದ ದೂರದ ಚಹಾ ತೋಟ ಗಳಲ್ಲಿ ಆಸ್ಪತ್ರೆಗಳಿಗೆ ಹೋಗಿ ಹೆರಿಗೆ ಮಾಡಿಸಿ ಕೊಳ್ಳುವು ದೆಂದರೆ ಜನರಿಗೆ ಹೆದರಿಕೆ. ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೆ ಮನೆಯ ಅಪಾಯಕಾರಿ ರೀತಿ ಯಲ್ಲಿ ಹೆರಿಗೆ ಮಾಡಿಸು ವುದು ಅಲ್ಲಿನ ವಾಡಿಕೆಯಾಗಿತ್ತು. ಈ ಭಯವನ್ನು ಹೊಡೆದೋಡಿಸಲು ಗೀತಾ ಅವರು ಪ್ರತಿದಿನ ತಮ್ಮ ಸೈಕಲ್ ಏರಿ 12ರಿಂದ 14 ಕಿಲೋಮೀಟರ್ ದೂರ ಪ್ರಯಾಣಿಸು ತ್ತಿದ್ದರು

Roopa Gururaj Column: ವೃತಾಸುರ ವಧೆ: ದಧೀಚಿ ಮುನಿಗಳ ತ್ಯಾಗ ಮತ್ತು ಇಂದ್ರನ ಜಯ

ವೃತಾಸುರ ವಧೆ: ದಧೀಚಿ ಮುನಿಗಳ ತ್ಯಾಗ ಮತ್ತು ಇಂದ್ರನ ಜಯ

ಪ್ರಜಾಪತಿ ತ್ವಷ್ಟಾರನ ಮಗನಾದ ವಿಶ್ವರೂಪನನ್ನು ಇಂದ್ರನು ಕೊಂದಾಗ, ಕೋಪಗೊಂಡ ತ್ವಷ್ಟಾರನು ಇಂದ್ರನನ್ನು ನಾಶಮಾಡಬಲ್ಲ ಮಗನನ್ನು ಪಡೆಯಲು ಒಂದು ಮಹಾಯಾಗವನ್ನು ಮಾಡುತ್ತಾನೆ. ಆ ಯಾಗದ ಅಗ್ನಿಕುಂಡದಿಂದ ಹುಟ್ಟಿದ ಮಹಾಕಾಯನೇ ವೃತ್ರಾಸುರ. ಅವನು ಬೆಳೆಯುತ್ತಾ ಇಡೀ ಬ್ರಹ್ಮಾಂಡವನ್ನೇ ಆವರಿಸತೊಡಗಿದನು (‘ವೃತ್’ ಎಂದರೆ ಆವರಿಸುವುದು ಎಂದರ್ಥ). ಭೂಮಿಯ ಮೇಲಿನ ನದಿ, ನೀರುಗಳನ್ನು ಬಂದಿಸಿ ಜಗತ್ತಿಗೆ ಭೀಕರ ಬರಗಾಲ ತಂದೊಡ್ಡಿದನು.

Roopa Gururaj Column: ಸತ್ಯ ಮತ್ತು ಅಸತ್ದದ ನಡುವಿನ ಮಾಯಾಲೋಕ

ಸತ್ಯ ಮತ್ತು ಅಸತ್ದದ ನಡುವಿನ ಮಾಯಾಲೋಕ

ಜಗತ್ತಿನ ಬದಲಾಗುವ ಸ್ವಭಾವವನ್ನು (ಮಿಥ್ಯೆ) ಒಪ್ಪಿಕೊಂಡು, ಅದರ ಹಿಂದಿರುವ ಶಾಶ್ವತ ಚೇತನವನ್ನು ಗುರುತಿಸುವುದೇ ನಿಜವಾದ ಜ್ಞಾನ. ಬದುಕನ್ನು ಒಂದು ಸುಂದರ ನಾಟಕದಂತೆ ನೋಡಿ, ಅದರ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸುವುದರಲ್ಲಿಯೇ ಜೀವನದ ನೆಮ್ಮದಿ ಅಡಗಿದೆ ಎಂದರು ನಗುತ್ತಾ. ಶಿಷ್ಯನಿಗೆ ಆಗ ಮಾಯೆಯ ಸತ್ಯದ ಅರಿವಾಗಿತ್ತು.

Roopa Gururaj Column: ಬಾಸ್ಕೆಟ್‌ ಬಾಲ್‌ ಆಟದ ಮೂಲಕ ಪ್ರದ್ಯೋತ್‌ ವೊಲೇಟಿ ಶಿಕ್ಷಣ ಯಜ್ಞ

ಬಾಸ್ಕೆಟ್‌ ಬಾಲ್‌ ಆಟದ ಮೂಲಕ ಪ್ರದ್ಯೋತ್‌ ವೊಲೇಟಿ ಶಿಕ್ಷಣ ಯಜ್ಞ

ನೋಯ್ಡಾದ ಗೆಝಾ ಗ್ರಾಮದ ಧೂಳು ತುಂಬಿದ ಮೈದಾನದಲ್ಲಿ ಕೇವಲ ನಾಲ್ಕು ಮಕ್ಕಳೊಂದಿಗೆ ಆರಂಭವಾದ ಒಂದು ಸಣ್ಣ ಪ್ರಯತ್ನ, ಇಂದು ಸಾವಿರಾರು ಬಡ ಮಕ್ಕಳ ಬದುಕಿನಲ್ಲಿ ದೊಡ್ಡ ಬೆಳಕಾಗಿದೆ. ಇದು ‘ಡ್ರಿಬಲ್ ಅಕಾಡೆಮಿ’ಯ (Dribble Academy) ಸಂಸ್ಥಾಪಕ ಮತ್ತು ಬಾಸ್ಕೆಟ್ ಬಾಲ್ ತರಬೇತುದಾರ ಪ್ರದ್ಯೋತ್ ವೊಲೇಟಿ ಅವರ ಸ್ಪೂರ್ತಿದಾಯಕ ಕಥೆ.

Roopa Gururaj Column: ಮುತ್ತು ಎತ್ತಿಕೊಟ್ಟ ಹನುಮಂತನಿಂದ ಬಂತು ʼಮುತ್ತೆತ್ತಿʼ ಹೆಸರು

ಮುತ್ತು ಎತ್ತಿಕೊಟ್ಟ ಹನುಮಂತನಿಂದ ಬಂತು ʼಮುತ್ತೆತ್ತಿʼ ಹೆಸರು

ಹನುಮಂತನು ಅತ್ಯಂತ ಜಾಗರೂಕತೆಯಿಂದ ಬಾಲವನ್ನು ಮೇಲಕ್ಕೆ ಎತ್ತಿ, ಮೂಗುತಿಯನ್ನು ಸೀತಾ ಮಾತೆಯ ಚರಣಗಳಿಗೆ ಅರ್ಪಿಸಿದನು. ನದಿಯ ಆಳದಿಂದ ಮುತ್ತಿನ ಮೂಗುತಿಯನ್ನು ತನ್ನ ಬಾಲದ ಮೂಲಕ ‘ಎತ್ತಿ’ ತಂದ ಕಾರಣ, ಪುರಾಣದ ಪ್ರಕಾರ ಈ ಪವಿತ್ರ ಸ್ಥಳಕ್ಕೆ ‘ಮುತ್ತೆತ್ತಿ’ (ಕಾಲಕ್ರಮೇಣ ಮುತ್ತತ್ತಿ) ಎಂಬ ಹೆಸರು ಬಂದಿತು.

Roopa Gururaj Column: ಬುದ್ಧನ ಜಾತಕ ಕಥೆಗಳಲ್ಲಿ ಸಿಗುವ ಜೀವನ ಪಾಠ

Roopa Gururaj Column: ಬುದ್ಧನ ಜಾತಕ ಕಥೆಗಳಲ್ಲಿ ಸಿಗುವ ಜೀವನ ಪಾಠ

ಇಲಿಯ ಮಾತಿನಿಂದ ಪ್ರೇರಿತನಾದ ಬಾಲಕನು ತನ್ನ ಹಣೆಬರಹವನ್ನು ಬದಲಿಸಿಕೊಳ್ಳುವ ಆಸೆಯಿಂದ ಬುದ್ಧರನ್ನು ಹುಡುಕುತ್ತಾ ಹೊರಟನು. ದಾರಿಯಲ್ಲಿ ಅವನಿಗೆ ಮೂರು ವಿಭಿನ್ನ ಪಾತ್ರಗಳು ಮತ್ತು ಅವರ ಸಮಸ್ಯೆಗಳು ಎದುರಾದವು. ಮೊದಲ ರಾತ್ರಿ ತಂಗಲು ಆಶ್ರಯ ನೀಡಿದ ಶ್ರೀಮಂತ ಯಜಮಾನ ನು, ತನಗಿರುವ 16 ವರ್ಷದ ನೀವೂ ಬರೆಯಬಹುದು ಮೂಕ ಮಗಳಿಗೆ ಯಾವಾಗ ಮಾತು ಬರುತ್ತದೆ ಎಂದು ಬುದ್ಧರಲ್ಲಿ ಕೇಳಲು ವಿನಂತಿಸಿದನು.

Loading...