ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ರೂಪಾ ಗುರುರಾಜ್

[email protected]

ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ.‌ - ಬೆಂಗಳೂರು ದೂರದರ್ಶನದ ಚಂದನ ವಾಹಿನಿ. - ಆಕಾಶವಾಣಿ ನಿಲಯ. - ಎಫ್.ಎಂ ರೈನ್ ಬೋ ಕಂಪನಾಂಕ. - ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ. ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ. 50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.‌

Articles
Roopa Gururaj Column: ದೇವಶಯನಿ ಏಕಾದಶಿ ಮತ್ತು ಚಾತುರ್ಮಾಸ್ಯದ ಕಥೆಗಳು

ದೇವಶಯನಿ ಏಕಾದಶಿ ಮತ್ತು ಚಾತುರ್ಮಾಸ್ಯದ ಕಥೆಗಳು

ವಾಮನನು ಎರಡು ಹೆಜ್ಜೆಗಳಿಂದ ಇಡೀ ಭೂಮಿ ಮತ್ತು ಆಕಾಶವನ್ನು ಅಳೆದನು. ಮೂರನೇ ಹೆಜ್ಜೆಗೆ ಜಾಗವಿಲ್ಲದಿದ್ದಾಗ, ಬಲಿ ಚಕ್ರವರ್ತಿಯು ತನ್ನ ಶಿರಸ್ಸನ್ನೇ ನೀಡಿದನು. ಬಲಿಯ ಈ ನಿಷ್ಠೆ ಮತ್ತು ಭಕ್ತಿಗೆ ಪ್ರಸನ್ನನಾದ ವಿಷ್ಣುವು, ಆತನಿಗೆ ಪಾತಾಳ ಲೋಕದ ಒಡೆಯನನ್ನಾಗಿ ಮಾಡಿ, ತಾನೂ ಸಹ ಆತನ ಭಕ್ತಿಗೆ ಮೆಚ್ಚಿ ನಿನಗೇನು ವರ ಬೇಕು? ಎಂದು ಕೇಳಿದನು.

Roopa Gururaj Column: ಕುಮಾರವ್ಯಾಸ ಭಾರತ: ಛಲ ಮತ್ತು ಭಕ್ತಿಯ ಅಮರ ಕಥೆ

ಕುಮಾರವ್ಯಾಸ ಭಾರತ: ಛಲ ಮತ್ತು ಭಕ್ತಿಯ ಅಮರ ಕಥೆ

ಭಗವಂತನ ದರ್ಶನದಿಂದ ನಾರಣಪ್ಪ ಧನ್ಯರಾದರು. (ಜನಪದೀಯ ಪ್ರತೀತಿಯ ಪ್ರಕಾರ, ಶರತ್ತು ಮುರಿದ ಕಾರಣಕ್ಕೆ ಅಶ್ವತ್ಥಾಮನ ಕೋಪದ ಬಾಣಕ್ಕೆ ನಾರಣಪ್ಪ ತೀರಿದರೆಂಬ ಮಾತಿದೆ. ಆದರೆ ಸಾಹಿತ್ಯ ಚರಿತ್ರೆಯ ಪ್ರಕಾರ, ಅಶ್ವತ್ಥಾಮ ತನ್ನ ಶರತ್ತಿನಂತೆಯೇ ದುರ್ಯೋಧನನ ಅವಸಾನದ ವರೆಗಿನ (ಸಭಾಪರ್ವ ದಿಂದ ಗದಾಪರ್ವ/ ದಶಪರ್ವ) ಕಥೆಯನ್ನು ಪೂರ್ಣಗೊಳಿಸಿ ಅಲ್ಲಿಗೆ ನಿಲ್ಲಿಸಿದನು.

Roopa Gururaj Column: ಧರ್ಮದ ರಹಸ್ಯ: ಸ್ವಧರ್ಮಾಚರಣೆಯಿಂದ ಪರಮಸಿದ್ಧಿ ಗಳಿಸಿದ ಧರ್ಮವ್ಯಾಧ

ಧರ್ಮದ ರಹಸ್ಯ: ಸ್ವಧರ್ಮಾಚರಣೆಯಿಂದ ಪರಮಸಿದ್ಧಿ ಗಳಿಸಿದ ಧರ್ಮವ್ಯಾಧ

ಒಮ್ಮೆ ಕೌಶಿಕನೆಂಬ ಬ್ರಾಹ್ಮಣನು ಜ್ಞಾನದ ಹಂಬಲದಿಂದ ಹೆತ್ತವರನ್ನು, ಮನೆ-ಮಠಗಳನ್ನು ತೊರೆದು ಕಾಡಿಗೆ ತೆರಳಿ ಕಠಿಣ ತಪಸ್ಸು ಮಾಡತೊ ಡಗಿದನು. ಒಂದು ದಿನ ಮರದ ಕೆಳಗೆ ಆತ ಕುಳಿತಿದ್ದಾಗ, ಮರದ ಮೇಲಿದ್ದ ಹಕ್ಕಿಯೊಂದು ಅವನ ಮೇಲೆ ಹೇಸಿಗೆ ಮಾಡಿತು. ಕೋಪಗೊಂಡ ಕೌಶಿಕನು ಕೆಂಗಣ್ಣಿ ನಿಂದ ನೋಡಿದ್ದೇ ತಡ, ಆ ಪಕ್ಷಿ ಸುಟ್ಟು ಬೂದಿಯಾಯಿತು.

Roopa Gururaj Column: ಗೀತಾ ಕರ್ಮಾಕರ್:‌ ಟೀ ತೋಟಗಳ ದೀದಿ ಮೋನಿ

ಗೀತಾ ಕರ್ಮಾಕರ್:‌ ಟೀ ತೋಟಗಳ ದೀದಿ ಮೋನಿ

ಉತ್ತರ ಬಂಗಾಳದ ದೂರದ ಚಹಾ ತೋಟ ಗಳಲ್ಲಿ ಆಸ್ಪತ್ರೆಗಳಿಗೆ ಹೋಗಿ ಹೆರಿಗೆ ಮಾಡಿಸಿ ಕೊಳ್ಳುವು ದೆಂದರೆ ಜನರಿಗೆ ಹೆದರಿಕೆ. ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೆ ಮನೆಯ ಅಪಾಯಕಾರಿ ರೀತಿ ಯಲ್ಲಿ ಹೆರಿಗೆ ಮಾಡಿಸು ವುದು ಅಲ್ಲಿನ ವಾಡಿಕೆಯಾಗಿತ್ತು. ಈ ಭಯವನ್ನು ಹೊಡೆದೋಡಿಸಲು ಗೀತಾ ಅವರು ಪ್ರತಿದಿನ ತಮ್ಮ ಸೈಕಲ್ ಏರಿ 12ರಿಂದ 14 ಕಿಲೋಮೀಟರ್ ದೂರ ಪ್ರಯಾಣಿಸು ತ್ತಿದ್ದರು

Roopa Gururaj Column: ವೃತಾಸುರ ವಧೆ: ದಧೀಚಿ ಮುನಿಗಳ ತ್ಯಾಗ ಮತ್ತು ಇಂದ್ರನ ಜಯ

ವೃತಾಸುರ ವಧೆ: ದಧೀಚಿ ಮುನಿಗಳ ತ್ಯಾಗ ಮತ್ತು ಇಂದ್ರನ ಜಯ

ಪ್ರಜಾಪತಿ ತ್ವಷ್ಟಾರನ ಮಗನಾದ ವಿಶ್ವರೂಪನನ್ನು ಇಂದ್ರನು ಕೊಂದಾಗ, ಕೋಪಗೊಂಡ ತ್ವಷ್ಟಾರನು ಇಂದ್ರನನ್ನು ನಾಶಮಾಡಬಲ್ಲ ಮಗನನ್ನು ಪಡೆಯಲು ಒಂದು ಮಹಾಯಾಗವನ್ನು ಮಾಡುತ್ತಾನೆ. ಆ ಯಾಗದ ಅಗ್ನಿಕುಂಡದಿಂದ ಹುಟ್ಟಿದ ಮಹಾಕಾಯನೇ ವೃತ್ರಾಸುರ. ಅವನು ಬೆಳೆಯುತ್ತಾ ಇಡೀ ಬ್ರಹ್ಮಾಂಡವನ್ನೇ ಆವರಿಸತೊಡಗಿದನು (‘ವೃತ್’ ಎಂದರೆ ಆವರಿಸುವುದು ಎಂದರ್ಥ). ಭೂಮಿಯ ಮೇಲಿನ ನದಿ, ನೀರುಗಳನ್ನು ಬಂದಿಸಿ ಜಗತ್ತಿಗೆ ಭೀಕರ ಬರಗಾಲ ತಂದೊಡ್ಡಿದನು.

Roopa Gururaj Column: ಸತ್ಯ ಮತ್ತು ಅಸತ್ದದ ನಡುವಿನ ಮಾಯಾಲೋಕ

ಸತ್ಯ ಮತ್ತು ಅಸತ್ದದ ನಡುವಿನ ಮಾಯಾಲೋಕ

ಜಗತ್ತಿನ ಬದಲಾಗುವ ಸ್ವಭಾವವನ್ನು (ಮಿಥ್ಯೆ) ಒಪ್ಪಿಕೊಂಡು, ಅದರ ಹಿಂದಿರುವ ಶಾಶ್ವತ ಚೇತನವನ್ನು ಗುರುತಿಸುವುದೇ ನಿಜವಾದ ಜ್ಞಾನ. ಬದುಕನ್ನು ಒಂದು ಸುಂದರ ನಾಟಕದಂತೆ ನೋಡಿ, ಅದರ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸುವುದರಲ್ಲಿಯೇ ಜೀವನದ ನೆಮ್ಮದಿ ಅಡಗಿದೆ ಎಂದರು ನಗುತ್ತಾ. ಶಿಷ್ಯನಿಗೆ ಆಗ ಮಾಯೆಯ ಸತ್ಯದ ಅರಿವಾಗಿತ್ತು.

Roopa Gururaj Column: ಬಾಸ್ಕೆಟ್‌ ಬಾಲ್‌ ಆಟದ ಮೂಲಕ ಪ್ರದ್ಯೋತ್‌ ವೊಲೇಟಿ ಶಿಕ್ಷಣ ಯಜ್ಞ

ಬಾಸ್ಕೆಟ್‌ ಬಾಲ್‌ ಆಟದ ಮೂಲಕ ಪ್ರದ್ಯೋತ್‌ ವೊಲೇಟಿ ಶಿಕ್ಷಣ ಯಜ್ಞ

ನೋಯ್ಡಾದ ಗೆಝಾ ಗ್ರಾಮದ ಧೂಳು ತುಂಬಿದ ಮೈದಾನದಲ್ಲಿ ಕೇವಲ ನಾಲ್ಕು ಮಕ್ಕಳೊಂದಿಗೆ ಆರಂಭವಾದ ಒಂದು ಸಣ್ಣ ಪ್ರಯತ್ನ, ಇಂದು ಸಾವಿರಾರು ಬಡ ಮಕ್ಕಳ ಬದುಕಿನಲ್ಲಿ ದೊಡ್ಡ ಬೆಳಕಾಗಿದೆ. ಇದು ‘ಡ್ರಿಬಲ್ ಅಕಾಡೆಮಿ’ಯ (Dribble Academy) ಸಂಸ್ಥಾಪಕ ಮತ್ತು ಬಾಸ್ಕೆಟ್ ಬಾಲ್ ತರಬೇತುದಾರ ಪ್ರದ್ಯೋತ್ ವೊಲೇಟಿ ಅವರ ಸ್ಪೂರ್ತಿದಾಯಕ ಕಥೆ.

Roopa Gururaj Column: ಮುತ್ತು ಎತ್ತಿಕೊಟ್ಟ ಹನುಮಂತನಿಂದ ಬಂತು ʼಮುತ್ತೆತ್ತಿʼ ಹೆಸರು

ಮುತ್ತು ಎತ್ತಿಕೊಟ್ಟ ಹನುಮಂತನಿಂದ ಬಂತು ʼಮುತ್ತೆತ್ತಿʼ ಹೆಸರು

ಹನುಮಂತನು ಅತ್ಯಂತ ಜಾಗರೂಕತೆಯಿಂದ ಬಾಲವನ್ನು ಮೇಲಕ್ಕೆ ಎತ್ತಿ, ಮೂಗುತಿಯನ್ನು ಸೀತಾ ಮಾತೆಯ ಚರಣಗಳಿಗೆ ಅರ್ಪಿಸಿದನು. ನದಿಯ ಆಳದಿಂದ ಮುತ್ತಿನ ಮೂಗುತಿಯನ್ನು ತನ್ನ ಬಾಲದ ಮೂಲಕ ‘ಎತ್ತಿ’ ತಂದ ಕಾರಣ, ಪುರಾಣದ ಪ್ರಕಾರ ಈ ಪವಿತ್ರ ಸ್ಥಳಕ್ಕೆ ‘ಮುತ್ತೆತ್ತಿ’ (ಕಾಲಕ್ರಮೇಣ ಮುತ್ತತ್ತಿ) ಎಂಬ ಹೆಸರು ಬಂದಿತು.

Roopa Gururaj Column: ಬುದ್ಧನ ಜಾತಕ ಕಥೆಗಳಲ್ಲಿ ಸಿಗುವ ಜೀವನ ಪಾಠ

Roopa Gururaj Column: ಬುದ್ಧನ ಜಾತಕ ಕಥೆಗಳಲ್ಲಿ ಸಿಗುವ ಜೀವನ ಪಾಠ

ಇಲಿಯ ಮಾತಿನಿಂದ ಪ್ರೇರಿತನಾದ ಬಾಲಕನು ತನ್ನ ಹಣೆಬರಹವನ್ನು ಬದಲಿಸಿಕೊಳ್ಳುವ ಆಸೆಯಿಂದ ಬುದ್ಧರನ್ನು ಹುಡುಕುತ್ತಾ ಹೊರಟನು. ದಾರಿಯಲ್ಲಿ ಅವನಿಗೆ ಮೂರು ವಿಭಿನ್ನ ಪಾತ್ರಗಳು ಮತ್ತು ಅವರ ಸಮಸ್ಯೆಗಳು ಎದುರಾದವು. ಮೊದಲ ರಾತ್ರಿ ತಂಗಲು ಆಶ್ರಯ ನೀಡಿದ ಶ್ರೀಮಂತ ಯಜಮಾನ ನು, ತನಗಿರುವ 16 ವರ್ಷದ ನೀವೂ ಬರೆಯಬಹುದು ಮೂಕ ಮಗಳಿಗೆ ಯಾವಾಗ ಮಾತು ಬರುತ್ತದೆ ಎಂದು ಬುದ್ಧರಲ್ಲಿ ಕೇಳಲು ವಿನಂತಿಸಿದನು.

Roopa Gururaj Column: ನೆಸ್ಲೆ ಕಂಪನಿಯ ಕೋಟಿ ರೂಪಾಯಿಗಳ ಸೋಲು

ನೆಸ್ಲೆ ಕಂಪನಿಯ ಕೋಟಿ ರೂಪಾಯಿಗಳ ಸೋಲು

ಇಂದಿನ ಅನುಭವ ನಾಳೆಗೆ ಸಿಹಿಯಾದ ನೆನಪಾಗುತ್ತದೆ. ಇಂದು ನೀವೇನೂ ಮಾಡುವುದು ಬೇಡ. ನಾಳೆ ಗಳು ಆಗ ನಿಮ್ಮವಾಗುತ್ತವೆ. ನೆಸ್ಲೆ ಕಂಪನಿ ದೊಡ್ಡ ರಿಸ್ಕ್ ತಗೆದುಕೊಂಡಿತು. ಅವರು ಕಾಫಿ ಪುಡಿ ಮಾರುವುದನ್ನು ನಿಲ್ಲಿಸಿ, ಜಪಾನಿನ ಮಕ್ಕಳಿಗಾಗಿ ಕಾಫಿ ಫ್ಲೆವರ್ ಹೊಂದಿದ್ದ ಚಾಕೊಲೇಟ್, ಕ್ಯಾಂಡಿ ಹಾಗೂ ಜೆಲ್ಲಿಗಳನ್ನು ಮಾರುಕಟ್ಟೆಗೆ ಲಗ್ಗೆ ಇಡಿಸಿದರು.

Roopa Gururaj Column: ತಿರುಪತಿಯ ತಿಮ್ಮಪ್ಪನಿಗೆ ಕೂದಲು ಕೊಡುವ ಪದ್ದತಿ

ತಿರುಪತಿಯ ತಿಮ್ಮಪ್ಪನಿಗೆ ಕೂದಲು ಕೊಡುವ ಪದ್ದತಿ

ಅಂದಿನಿಂದ ತಿರುಮಲದ ಈ ಬೆಟ್ಟಕ್ಕೆ ‘ನೀಲಾದ್ರಿ’ ಎಂಬ ಹೆಸರು ಬಂತು, ಮತ್ತು ಇಲ್ಲಿ ಮುಡಿ ಕೊಡುವ ನಮ್ಮ ವಿಳಾಸ ಕೂದಲು ನೀಲಾದೇವಿಯ ತ್ಯಾಗದ ಸ್ಮರಣೆಯಾಗಿದೆ. ಪುರಾಣಗಳ ಪ್ರಕಾರ, ಈ ಮುಂಡನ ಪ್ರಕ್ರಿ ಯೆಯು ಕೇವಲ ಬಾಹ್ಯ ಸೌಂದರ್ಯದ ತ್ಯಾಗವಲ್ಲ; ಇದು ಮನುಷ್ಯನ ಅಹಂಕಾರದ ಸಂಕೇತವಾಗಿದೆ.

Roopa Gururaj Column: ನಮ್ಮ ವೇದ ಪುರಾಣಗಳ ದಿವ್ಯದರ್ಶನ

Roopa Gururaj Column: ನಮ್ಮ ವೇದ ಪುರಾಣಗಳ ದಿವ್ಯದರ್ಶನ

ಆ ಜಿಜ್ಞಾಸು ವಿನಯದಿಂದಲೇ, ‘ಗುರುದೇವ, ನೀವು ವೇದಗಳನ್ನು ಸುಲಭವಾಗಿ ವಿಂಗಡಿಸಿಕೊಟ್ಟರಿ. ಆದರೂ ನನ್ನಂತಹ ಸಾಮಾನ್ಯ ಮನುಷ್ಯನಿಗೆ ಈ ಗೂಢವಾದ ಮಂತ್ರಗಳ ತತ್ವಗಳು ನೇರವಾಗಿ ಅರ್ಥವಾಗುವುದು ಕಷ್ಟವಲ್ಲವೇ?’ ಎಂದು ಕೈ ಮುಗಿದ. ಆಗ ವೇದವ್ಯಾಸರು, ‘ನಿನ್ನ ಆತಂಕ ನಿಜವಾ ದದ್ದು. ಅದಕ್ಕಾಗಿಯೇ ವೇದಗಳನ್ನು ಕೇವಲ ವಿಂಗಡಿಸದೆ ಅವುಗಳ ಕಠಿಣ ತತ್ವಗಳನ್ನು ಸಾಮಾನ್ಯ ಜನರಿಗೂ ತಲುಪಿಸಲು ಕಥೆಗಳ ರೂಪದಲ್ಲಿ ಒಂದು ಹೊಸ ಸಾಹಿತ್ಯವನ್ನೇ ಸ್ವತಃ ರಚಿಸಿದ್ದೇನೆ

Roopa Gururaj Column: ಅಕ್ಷರ ಸಂತ ಹರೇಕಳ ಹಾಜಬ್ಬ

Roopa Gururaj Column: ಅಕ್ಷರ ಸಂತ ಹರೇಕಳ ಹಾಜಬ್ಬ

ಹಾಜಬ್ಬನವರ ಬದುಕು ಎಂದೂ ಸುಲಭವಾಗಿರಲಿಲ್ಲ. ಬಡತನದ ಬೇಗೆಯಲ್ಲಿ ಬೆಂದ ಅವರಿಗೆ ಅಕ್ಷರ ಕಲಿಯುವ ಅದೃಷ್ಟ ಸಿಗಲಿಲ್ಲ. ತಲೆ ಮೇಲೆ ಕಿತ್ತಳೆ ಹಣ್ಣಿನ ಬುಟ್ಟಿ ಹೊತ್ತು ದಿನವಿಡೀ ಮಂಗಳೂರಿನ ಬೀದಿಗಳಲ್ಲಿ ಸುತ್ತಿ, ಬರುವ ಕೆಲವೇ ರೂಪಾಯಿಗಳಲ್ಲಿ ಸಂಸಾರ ನಿಭಾಯಿಸುತ್ತಿದ್ದರು. ಹೀಗಿರುವಾಗ ಒಂದು ದಿನ ಅವರ ಬದುಕನ್ನೇ ಬದಲಾಯಿಸುವ ಘಟನೆಯೊಂದು ನಡೆಯಿತು.

Roopa Gururaj Column: ಕಾಶಿಯ ಅವಿಮುಕ್ತ ಕ್ಷೇತ್ರ ಮತ್ತು ಡುಂಢಿ ಗಣೇಶನ ರಹಸ್ಯ

ಕಾಶಿಯ ಅವಿಮುಕ್ತ ಕ್ಷೇತ್ರ ಮತ್ತು ಡುಂಢಿ ಗಣೇಶನ ರಹಸ್ಯ

ಕಾಶಿ ಎಂದರೆ ಕೇವಲ ಒಂದು ಧಾರ್ಮಿಕ ತಾಣವಲ್ಲ; ಅದು ದಿವ್ಯ ಲೀಲೆಗಳ ಮತ್ತು ಮುಕ್ತಿಯ ಮಹಾ ಕ್ಷೇತ್ರ. ಕಾಶಿ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬ ಭಕ್ತನೂ ವಿಶ್ವನಾಥನ ಸನ್ನಿಧಿಗೆ ಮುನ್ನ ಡುಂಢಿ ಗಣೇಶನ ದರ್ಶನ ಮಾಡಬೇಕು ಎಂಬ ನಿಯಮವಿದೆ. ಇದಕ್ಕೆ ಶಿವಪುರಾಣ ಮತ್ತು ಕಾಶಿ ಖಂಡದಲ್ಲಿ ಒಂದು ಪೌರಾಣಿಕ ಕಥೆಯಿದೆ.

Roopa Gururaj Column: ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ದೇವರಿಲ್ಲ

ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ದೇವರಿಲ್ಲ

ಪಶ್ಚಿಮ ಘಟ್ಟಗಳ ಮಡಿಲಲ್ಲಿ, ಪ್ರತಿ 12 ವರ್ಷಗಳಿಗೊಮ್ಮೆ ಮಾತ್ರ ಭೂಮಿಗೆ ನಡುಹಗಲಿನ ನಕ್ಷತ್ರ ಗಳಂತೆ ಅರಳುವ ‘ನೀಲಕುರುಂಜಿ’ ಹೂವುಗಳ ನೇರಳೆ ಸಾಗರವನ್ನು ಒಮ್ಮೆಯಾದರೂ ಕಣ್ಣುಂಬಿಕೊಳ್ಳ ಬೇಕು ಎನ್ನುವುದು ಆಕೆಯ ಆಸೆಯಾಗಿತ್ತು. ಆದರೆ, ಸಂಸಾರದ ಜಂಜಾಟ ಅದೆಲ್ಲ ಮುಗಿಯುವ ಹೊತ್ತಿಗೆ ಮುಪ್ಪು ಆವರಿಸಿಯಾಗಿತ್ತು. ಈಗಂತೂ ಆಕೆ ಸಂಪೂರ್ಣ ಮೆತ್ತಗಾಗಿದ್ದಳು.

Roopa Gururaj Column: ಕಾಶ್ಮೀರದ ಕಣವೆಯಲ್ಲಿ ಅಮಾಯಕ ಹೆಣ್ಣು ಮಕ್ಕಳ ಆಪದ್ಭಾಂಧವ

ಕಾಶ್ಮೀರದ ಕಣವೆಯಲ್ಲಿ ಅಮಾಯಕ ಹೆಣ್ಣು ಮಕ್ಕಳ ಆಪದ್ಭಾಂಧವ

ಗಡಿ ನಿಯಂತ್ರಣ ರೇಖೆಯ (LoC) ಅತ್ಯಂತ ಸೂಕ್ಷ ಪ್ರದೇಶವಾದ ಕುಪ್ವಾರದಲ್ಲಿ ಇವರು ಕೆಲಸ ಮಾಡಲು ಆರಂಭಿಸಿದಾಗ, ಉಗ್ರರು ಇವರನ್ನು ಗುಪ್ತಚರ ಏಜೆಂಟ್ ಎಂದು ಶಂಕಿಸಿ 19 ಬಾರಿ ಅಪಹರಿಸಿದ್ದರು. ಆದರೆ ಅಧಿಕ್ ಅವರ ನಿಷ್ಕಲ್ಮಶ ಸೇವೆಯನ್ನು ಕಂಡಿದ್ದ ಸ್ಥಳೀಯ ಕಾಶ್ಮೀರಿ ಬಾಂಧವರೇ ಉಗ್ರರ ಎದುರು ನಿಂತು ಇವರನ್ನು ಪ್ರತಿ ಬಾರಿಯೂ ಜೀವಂತವಾಗಿ ಬಿಡಿಸಿಕೊಂಡು ಬರುತ್ತಿದ್ದರು. ಜೀವಕ್ಕೆ ಕಂಟಕವಿದ್ದರೂ ಅಧಿಕ್ ಹೆದರಿ ಓಡಲಿಲ್ಲ

Roopa Gururaj Column: ಶಕುನಿ ಮತ್ತು ಪವಿತ್ರೇಶ್ವರಂನ ನೈಜ ಜನಪದ ಕಥೆ

Roopa Gururaj Column: ಶಕುನಿ ಮತ್ತು ಪವಿತ್ರೇಶ್ವರಂನ ನೈಜ ಜನಪದ ಕಥೆ

ಕುರುಕ್ಷೇತ್ರ ಯುದ್ಧದಲ್ಲಿ ತಾನು ಮಾಡಿದ ತಂತ್ರಗಳು ಇಷ್ಟೊಂದು ಜನರ ಭೀಕರ ನಾಶಕ್ಕೆ ಕಾರಣವಾಯಿ ತಲ್ಲ ಎಂದು ಶಕುನಿ ಕೊನೆಯ ದಿನಗಳಲ್ಲಿ ತೀವ್ರ ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದನು. ತನ್ನ ಪಾಪ ಪ್ರಕ್ಷಾಳನೆಗಾಗಿ ಮತ್ತು ಆತ್ಮದ ಶಾಂತಿಗಾಗಿ ದಕ್ಷಿಣದತ್ತ ಯಾತ್ರೆ ಬೆಳೆಸಿದ ಅವನು, ಪವಿತ್ರೇಶ್ವರಂನ ಈ ಪ್ರಶಾಂತ ಬೆಟ್ಟದ ಪ್ರದೇಶಕ್ಕೆ ಬಂದು ಶಿವನನ್ನು ಕುರಿತು ಕಠಿಣ ತಪಸ್ಸು ಆಚರಿಸಿದನು

Roopa Gururaj Column: ಠಾಣಾ ರಾಮ್‌ ಕಡ್ವಾಸರ ಅವರ ಇಪ್ಪತ್ತೊಂದು ವರ್ಷಗಳ ನಿಸ್ವಾರ್ಥ ಸೇವೆ

ಠಾಣಾ ರಾಮ್‌ ಕಡ್ವಾಸರ ಅವರ ಇಪ್ಪತ್ತೊಂದು ವರ್ಷಗಳ ನಿಸ್ವಾರ್ಥ ಸೇವೆ

ರಾಜಸ್ಥಾನದ ಧಗಧಗಿಸುವ ಬಿಸಿಲು, ಮೈ ಸುಡುವ ಮರಳುಗಾಡು, ಬಾಯಾರಿಕೆಯಿಂದ ಒಣಗುವ ಗಂಟಲು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೇವಲ ಒಂದು ಲೋಟ ತಣ್ಣೀರು ಸಿಕ್ಕರೆ ಅದು ಅಮೃತಕ್ಕೆ ಸಮಾನ. ಇಂತಹ ಅಮೃತವನ್ನು ಕಳೆದ 21 ವರ್ಷಗಳಿಂದ ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ಪ್ರತಿಯೊಬ್ಬ ಹಾದಿಹೋಕರಿಗೂ ಉಣಿಸುತ್ತಿರುವ ಅಪರೂಪದ ಮಾನವತಾವಾದಿ, 77 ವರ್ಷದ ವೃದ್ಧ ಠಾಣಾ ರಾಮ್ ಕಡ್ವಾಸರ.

Roopa Gururaj Column: ಪವಿತ್ರ ಗಂಡಕೀ ನದಿ ಮತ್ತು ದಿವ್ಯ ಸಾಲಿಗ್ರಾಮಗಳ ಪುರಾಣ ಕಥೆ

ಪವಿತ್ರ ಗಂಡಕೀ ನದಿ ಮತ್ತು ದಿವ್ಯ ಸಾಲಿಗ್ರಾಮಗಳ ಪುರಾಣ ಕಥೆ

ಪರಮ ಪತಿವ್ರತೆಯಾದ ಬೃಂದಾಳ ಪತಿ ಶಂಖಚೂಡ (ಜಲಂಧರ) ಎಂಬ ಅಸುರ. ಆಕೆಯ ಪಾತಿವ್ರತ್ಯದ ಬಲದಿಂದಾಗಿ ಆತನಿಗೆ ಯಾವುದೇ ಮರಣವಿರಲಿಲ್ಲ. ದೇವತೆಗಳ ರಕ್ಷಣೆಗಾಗಿ ಮತ್ತು ಅಧರ್ಮದ ನಾಶಕ್ಕಾಗಿ ಶಂಖಚೂಡನ ಸಂಹಾರ ಮಾಡುವುದು ದೇವತೆಗಳಿಗೆ ಅನಿವಾರ್ಯವಾಗಿತ್ತು. ಇದಕ್ಕಾಗಿ ಮಹಾವಿಷ್ಣುವು ಶಂಖಚೂಡನ ರೂಪವನ್ನು ಧರಿಸಿ ಬೃಂದಾಳ ಅರಮನೆಗೆ ಬರಬೇಕಾಯಿತು.

Roopa Gururaj Column: ಈಶ್ವರನ ಕೃಪೆಗೆ ಪಾತ್ರರಾದ ಶಿವಗಣಗಳ‌ ಮಹತ್ವ

ಈಶ್ವರನ ಕೃಪೆಗೆ ಪಾತ್ರರಾದ ಶಿವಗಣಗಳ‌ ಮಹತ್ವ

'ಗಣ' ಎಂದರೆ ದೇವಸೇನೆ ಅಥವಾ ದೈವಿಕ ಶಕ್ತಿಗಳ ಗುಂಪು. ಪುರಾಣಗಳ ಪ್ರಕಾರ, ಈ ಗಣಗಳು ಸೃಷ್ಟಿಯ ಆದಿಯಲ್ಲಿ ಶಿವನ ವಿಭಿನ್ನ ಶಕ್ತಿಗಳಿಂದ ಮತ್ತು ಅವನ ದಿವ್ಯ ಸಂಕಲ್ಪದಿಂದ ಜನಿಸಿದವು. ಇತರ ದೇವತೆ ಗಳು ದೇವಲೋಕದಲ್ಲಿ ಯಕ್ಷ-ಗಂಧರ್ವರೊಂದಿಗೆ ವಾಸಿಸಿದರೆ, ಬ್ರಹ್ಮಾಂಡದ ಲಯಕಾರಕನಾದ ಶಿವನು ಮಾತ್ರ ಸ್ಮಶಾನವಾಸಿ, ನಿಶಾಚರ ಹಾಗೂ ಸಮಾಜದಿಂದ ಅಪವಿತ್ರರೆಂದು ಪರಿಗಣಿಸಲ್ಪಟ್ಟ ಭೂತ, ಪ್ರೇತ, ಪಿಶಾಚಿ, ಬೇತಾಳ ಮತ್ತು ಬ್ರಹ್ಮರಾಕ್ಷಸರನ್ನು ತನ್ನ ಗಣಗಳನ್ನಾಗಿ ಸ್ವೀಕರಿಸಿದ್ದಾನೆ

Roopa Gururaj Column: ಹರಿಭಕ್ತಿಸಾರ: ಲೋಕದ ನಿಂದನೆಗೆ ಕುಗ್ಗದ ಕನಕರ ಅಪರಿಮಿತ ಭಕ್ತಿ

ಹರಿಭಕ್ತಿಸಾರ: ಲೋಕದ ನಿಂದನೆಗೆ ಕುಗ್ಗದ ಕನಕರ ಅಪರಿಮಿತ ಭಕ್ತಿ

ಕಾಗಿನೆಲೆಯಲ್ಲಿ ಆದಿಕೇಶವನ ಮೂರ್ತಿಯೇ ಭಕ್ತನಿಗಾಗಿ ನಡೆದು ಬಂದಾಗ, ಅಲ್ಲಿ ನೆರೆದಿದ್ದ ಇಡೀ ಜನಸಮೂಹ ಮೂಕವಿಸ್ಮಿತರಾಗಿ ನಿಂತರು. ಜಾತಿ ಮತ್ತು ಬಾಹ್ಯ ಆಚರಣೆಗಳನ್ನೇ ಧರ್ಮವೆಂದು ನಂಬಿದ್ದ ಅಹಂಕಾರಿಗಳ ಕಣ್ಣುಗಳು ಅಂದು ತೆರೆದವು. ದಾಸರನ್ನು ನಿಂದಿಸಿದವರೆಲ್ಲಾ ತಾವೇ ಮೈಲಿಗೆ ಯ ಮನಸ್ಸಿನವರೆಂಬುದನ್ನು ಅರಿತು ಅವರ ಕಾಲಿಗೆ ಬಿದ್ದರು.

Roopa Gururaj Column: ಹರಿಭಕ್ತಿಸಾರ: ಕಾಗಿನೆಲೆಯ ಆದಿಕೇಶವನ ಸಾಕ್ಷಾತ್ಕಾರ

ಹರಿಭಕ್ತಿಸಾರ: ಕಾಗಿನೆಲೆಯ ಆದಿಕೇಶವನ ಸಾಕ್ಷಾತ್ಕಾರ

ಇಡೀ ಸಭೆಯು ಕಣ್ಣಿಕ್ಕಿ ನೋಡುತ್ತಿರುವಾಗಲೇ, ಆ ದಿವ್ಯ ಮೂರ್ತಿಯು ಕನಕದಾಸರು ತೋರಿದ ಪೀಠದ ಕಡೆಗೆ ತಾನಾಗಿಯೇ ನಡೆದು ಬಂದು ಪ್ರತಿಷ್ಠಾಪಿತವಾಯಿತು! ಆ ಕ್ಷಣದಲ್ಲಿ ಇಡೀ ಕಾಗಿನೆಲೆಯಲ್ಲಿ ದಿವ್ಯ ಬೆಳಕು ಮೂಡಿ, ಹೂವಿನ ಮಳೆಯಾಯಿತು. ದಾಸರನ್ನು ನಿಂದಿಸಿದವರೆ ಆ ದೃಶ್ಯವನ್ನು ಕಂಡು ಪ್ರಜ್ಞೆ ತಪ್ಪಿದವರಂತೆ ನಿಂತರು. ಅವರ ಕಣ್ಣೆದುರೇ ಒಬ್ಬ ಪರಮ ಭಕ್ತನಿಗಾಗಿ ಭಗವಂತನು ಕಲ್ಲಿನ ಮೂರ್ತಿ ಯಿಂದ ಚೇತನ ರೂಪಿಯಾಗಿ ಎದ್ದು ಬಂದಿದ್ದನು.

Roopa Gururaj Column: ಹರಿಭಕ್ತಿಸಾರ: ಕಾಗಿನೆಲೆಯ ಪಯಣ, ದೇಗುಲ ನಿರ್ಮಾಣ

ಹರಿಭಕ್ತಿಸಾರ: ಕಾಗಿನೆಲೆಯ ಪಯಣ, ದೇಗುಲ ನಿರ್ಮಾಣ

ಕಾಗಿನೆಲೆಗೆ ಬಂದ ದಾಸರು ಅಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಆದಿಕೇಶವನ ದೇವಸ್ಥಾನವನ್ನು ಜೀರ್ಣೋ ದ್ಧಾರ ಮಾಡಲು ಸಂಕಲ್ಪಿಸಿದರು. ಅರಮನೆಯ ವೈಭವ, ದಂಡನಾಯಕನ ಅಧಿಕಾರವನ್ನು ಅನುಭವಿಸಿ ದ್ದ ಅದೇ ಕೈಗಳು ಈಗ ಕಾಗಿನೆಲೆಯಲ್ಲಿ ಕಲ್ಲು, ಮಣ್ಣುಗಳನ್ನು ಹೊತ್ತು ದೇವಸ್ಥಾನ ಕಟ್ಟುವ ಕಾಯಕ ದಲ್ಲಿ ತೊಡಗಿದವು.

Roopa Gururaj Column: ಹರಿಭಕ್ತಿಸಾರ: ಸರ್ವಸಮರ್ಪಣಾ ಭಾವವೇ ಪರಮೋಚ್ಚ ಜ್ಞಾನ

ಹರಿಭಕ್ತಿಸಾರ: ಸರ್ವಸಮರ್ಪಣಾ ಭಾವವೇ ಪರಮೋಚ್ಚ ಜ್ಞಾನ

ಉಡುಪಿಯ ಶ್ರೀಕೃಷ್ಣನೇ ಗೋಡೆಯನ್ನು ಸೀಳಿ ದರ್ಶನ ನೀಡಿದ ಮೇಲೆ, ಕನಕದಾಸರ ಕೀರ್ತಿ ನಾಡಿ ನಾದ್ಯಂತ ಹರಡಿತು. ಅವರನ್ನು ಕೀಳಾಗಿ ಕಂಡಿದ್ದ ಸಮಾಜಕ್ಕೆ ತಮ್ಮ ತಪ್ಪಿನ ಅರಿವಾಗಿ ಕನಕದಾಸರ ಕಾಲಿಗೆ ಬಿದ್ದರು. ಸಮಾಜವು ಅವರನ್ನು ಅತ್ಯುನ್ನತ ಸ್ಥಾನದಲ್ಲಿಟ್ಟು ಪೂಜಿಸಲು ಆರಂಭಿಸಿತು.

Loading...