ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ರೂಪಾ ಗುರುರಾಜ್

[email protected]

ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ.‌ - ಬೆಂಗಳೂರು ದೂರದರ್ಶನದ ಚಂದನ ವಾಹಿನಿ. - ಆಕಾಶವಾಣಿ ನಿಲಯ. - ಎಫ್.ಎಂ ರೈನ್ ಬೋ ಕಂಪನಾಂಕ. - ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ. ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ. 50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.‌

Articles
Roopa Gururaj Column: ರಾಮಚರಿತ ಮಾನಸ: ಅಮಲ ಭಕ್ತಿಯ ಅನುಗ್ರಹ

Roopa Gururaj Column: ರಾಮಚರಿತ ಮಾನಸ: ಅಮಲ ಭಕ್ತಿಯ ಅನುಗ್ರಹ

ಕೆವಟನು ಅತ್ಯಂತ ಭಕ್ತಿಯಿಂದ ರಾಮ, ಸೀತೆ, ಲಕ್ಷ್ಮಣರನ್ನು ನದಿ ದಾಟಿಸಿದನು. ಶ್ರೀರಾಮಚಂದ್ರನು ಕೆವಟನ ನಿಷ್ಕಪಟ ಪ್ರೇಮಕ್ಕೆ ಮಾರುಹೋಗಿ ಅವನನ್ನು ಅಪ್ಪಿಕೊಂಡಾಗ, ಕೆವಟನ ಕಣ್ಣುಗಳಿಂದ ಆನಂದಬಾಷ್ಪ ಧಾರೆಧಾರೆಯಾಗಿ ಹರಿಯಿತು. ಆ ಕ್ಷಣ ಭಕ್ತಿಯ ಸಾಮ್ರಾಜ್ಯದಲ್ಲಿ ಕೆವಟನು ಅಧಿಪತಿ ಯಾಗಿದ್ದ. ರಾಮನು ನೀಡಲು ಮುಂದಾದ ರತ್ನದ ಉಂಗುರವನ್ನು ನಿರಾಕರಿಸಿ, ಕೇವಲ ಮುಕ್ತಿಯನ್ನು ಬೇಡಿದ ಆ ಕ್ಷಣ ದೇವಲೋಕವೇ ಹೂಮಳೆಗರೆಯಿತು.

Roopa Gururaj Column: ಗಿಡವೊಂದು ಸುಪುಷ್ಟವಾಗಿ ಬೆಳೆಯಲು ಬೇರು ಗಟ್ಟಿಯಾಗಬೇಕು

ಗಿಡವೊಂದು ಸುಪುಷ್ಟವಾಗಿ ಬೆಳೆಯಲು ಬೇರು ಗಟ್ಟಿಯಾಗಬೇಕು

ಮಾವೋನ ಈ ಮಾತಿಗೆ ನಸುನಕ್ಕ ತಾಯಿ, “ಅಯ್ಯೋ ದಡ್ಡಾ, ಗಿಡಗಳ ಜೀವ ಇರುವುದು ಅವುಗಳ ಹೂವು ಅಥವಾ ಎಲೆಗಳಲ್ಲಿ ಅಲ್ಲ; ಬದಲಿಗೆ ಬುಡದಲ್ಲಿರುವ ಬೇರುಗಳಲ್ಲಿ. ನೀನು ಹೂವನ್ನು ಎಷ್ಟೇ ಪ್ರೀತಿಯಿಂದ ಮುದ್ದಿಸಿ, ಎಲೆಗಳ ಮೇಲಿನ ಧೂಳನ್ನು ತೆಗೆದರೂ, ಗಿಡಗಳ ಬೇರಿನ ಆರೈಕೆ ಮಾಡದಿದ್ದರೆ ಏನೂ ಪ್ರಯೋಜನವಿಲ್ಲ.

Roopa Gururaj Column: ರಾಮಚರಿತ ಮಾನಸ: ಕೆವಟನ ಭಕ್ತಿ ಮತ್ತು ಪಾದಪೂಜೆ

ರಾಮಚರಿತ ಮಾನಸ: ಕೆವಟನ ಭಕ್ತಿ ಮತ್ತು ಪಾದಪೂಜೆ

ಕೆವಟನ ಈ ಪ್ರೇಮಪೂರ್ವಕ ಹಠವನ್ನು ಕಂಡು ಭಕ್ತವತ್ಸಲನಾದ ರಾಮನು ಮಂದಹಾಸ ಬೀರುತ್ತಾನೆ. “ಸರಿ ಕೆವಟ, ನನ್ನ ಪಾದಧೂಳಿನಿಂದ ನಿನ್ನ ದೋಣಿಗೆ ತೊಂದರೆಯಾಗುವುದು ಬೇಡ, ನೀನು ಮೊದಲು ಪಾದಗಳನ್ನು ತೊಳೆ" ಎಂದು ಅನುಮತಿ ನೀಡುತ್ತಾನೆ. ಕೆವಟನು ಒಂದು ಮರದ ಪಾತ್ರೆಯಲ್ಲಿ ನೀರನ್ನು ತಂದು, ಪರಮಾತ್ಮನ ಪಾದಗಳನ್ನು ಭಕ್ತಿಯಿಂದ ತೊಳೆದು, ಆ ಪವಿತ್ರ ಜಲವನ್ನು ತಾನು ಕುಡಿದು ತನ್ನ ಪಿತೃಗಳಿಗೂ ಅರ್ಪಿಸುತ್ತಾನೆ.

Roopa Gururaj Column: ರಾಮಚರಿತ ಮಾನಸ: ಶಬರಿಗೆ ಶ್ರೀರಾಮನ ದರ್ಶನ

Roopa Gururaj Column: ರಾಮಚರಿತ ಮಾನಸ: ಶಬರಿಗೆ ಶ್ರೀರಾಮನ ದರ್ಶನ

ಒಂದು ದಿನ ಕಾಡಿನ ಹಾದಿಯಲ್ಲಿ ದಿವ್ಯ ತೇಜಸ್ಸಿನ ಇಬ್ಬರು ರಾಜಕುಮಾರರು ಬರುತ್ತಿರುವುದು ಅವಳಿಗೆ ಕಂಡಿತು. ನೀಲಮೇಘಶ್ಯಾಮನಾದ ರಾಮನನ್ನು ಕಂಡೊಡನೆ ಅವಳಿಗೆ ಗುರುಗಳ ಮಾತು ನೆನಪಾ ಯಿತು. ಆನಂದಬಾಷ್ಪ ಸುರಿಸುತ್ತಾ ಓಡಿಹೋಗಿ ಅವರ ಪಾದಗಳಿಗೆ ಎರಗಿದಳು. ಮಾತು ಹೊರಡುತ್ತಿರ ಲಿಲ್ಲ, ಕೇವಲ ಭಾವವಷ್ಟೇ ಮೈವೆತ್ತಿತ್ತು.

Roopa Gururaj Column: ರಾಮಚರಿತ ಮಾನಸ: ಚೂಡಾಮಣಿ ಸ್ವೀಕಾರ, ರಾಮನೆಡೆಗೆ ಹಾರಿದ ಹನುಮಂತ

ರಾಮಚರಿತ ಮಾನಸ: ಚೂಡಾಮಣಿ ಸ್ವೀಕಾರ, ರಾಮನೆಡೆಗೆ ಹಾರಿದ ಹನುಮಂತ

“ಹೇ ಹನುಮಂತನೇ, ಈ ಚೂಡಾಮಣಿಯನ್ನು ಕಂಡು ಪ್ರಭುವು ನನ್ನನ್ನು ನೆನೆಯಲಿ. ಅವರಿಗೆ ತಿಳಿಸು- ನಿನ್ನ ಸೀತೆಯು ಪ್ರತಿ ಕ್ಷಣವೂ ನಿನ್ನ ನಾಮವನ್ನೇ ಉಸಿರಾಡುತ್ತಿದ್ದಾಳೆ. ಆದರೆ ಕಾತರಕ್ಕೂ ಒಂದು ಮಿತಿಯಿದೆ. ಒಂದು ತಿಂಗಳೊಳಗೆ ನನ್ನನ್ನು ಈ ಕಾರಾಗೃಹದಿಂದ ಮುಕ್ತಗೊಳಿಸದಿದ್ದರೆ, ಈ ಸೀತೆ ಜೀವಂತವಾಗಿರುವುದಿಲ್ಲ" ಎಂದು ಅಳುತ್ತಾ ಸಂದೇಶ ನೀಡಿದಳು.

Roopa Gururaj Column: ರಾಮಚರಿತ ಮಾನಸ: ಲಂಕಾದಹನ-ಅಧರ್ಮದ ಸೌಧಕ್ಕೆ ಬಿದ್ದ ಕಿಚ್ಚು

ರಾಮಚರಿತ ಮಾನಸ: ಲಂಕಾದಹನ-ಅಧರ್ಮದ ಸೌಧಕ್ಕೆ ಬಿದ್ದ ಕಿಚ್ಚು

ಹನುಮಂತನಿಗೆ ಈ ಲಂಕಾದಹನವು ಕೇವಲ ಸೇಡಿನ ಕ್ರಮವಾಗಿರಲಿಲ್ಲ, ಅದು ಸೀತೆಯ ಕಣ್ಣೀರಿಗೆ ನೀಡಿದ ಉತ್ತರವಾಗಿತ್ತು. ಕೊನೆಗೆ ಹನುಮಂತನು ಸಮುದ್ರಕ್ಕೆ ಹಾರಿ ತನ್ನ ಬಾಲವನ್ನು ಆರಿಸಿ ಕೊಂಡನು. ಸುಟ್ಟು ಕರಕಲಾದ ಲಂಕೆಯನ್ನು ನೋಡಿದಾಗ ಅವನಿಗೆ ಮರುಕ ಉಂಟಾಗಲಿಲ್ಲ, ಬದಲಾಗಿ ಅಹಂಕಾರದ ಅಂತ್ಯ ಹೀಗೆಯೇ ಇರುತ್ತದೆ ಎಂಬ ಸತ್ಯದ ದರ್ಶನವಾಯಿತು.

Roopa Gururaj Column: ರಾಮಚರಿತ ಮಾನಸ: ರಾವಣನ ಸಭೆಯಲ್ಲಿ ರಾಮ ಭಕ್ತ ಹನುಮಂತ

ರಾಮಚರಿತ ಮಾನಸ: ರಾವಣನ ಸಭೆಯಲ್ಲಿ ರಾಮ ಭಕ್ತ ಹನುಮಂತ

ಸೀತೆಯ ಅಪ್ಪಣೆ ಪಡೆದು ಹಣ್ಣುಗಳನ್ನು ತಿನ್ನಲು ಆರಂಭಿಸಿದ ಹನುಮಂತನು, ನೋಡ ನೋಡು ತ್ತಿದ್ದಂತೆಯೇ ಅಶೋಕವನವನ್ನೇ ರಣರಂಗವನ್ನಾಗಿ ಬದಲಿಸಿದನು. ದೊಡ್ಡ ದೊಡ್ಡ ಮರಗಳನ್ನು ಕಿತ್ತೆಸೆದು, ರಾವಣನ ಹೆಮ್ಮೆಯ ವನವನ್ನು ಧ್ವಂಸಗೊಳಿಸಿದನು. ಇದನ್ನು ತಡೆಯಲು ಬಂದ ಸಾವಿರಾರು ಕಿಂಕರರು ಮತ್ತು ಪ್ರಹಸ್ತನ ಪುತ್ರ ಜಾಂಬುಮಾಲಿಯನ್ನು ಹನುಮಂತನು ಕ್ಷಣಾರ್ಧ ದಲ್ಲಿ ಮಣ್ಣು ಮುಕ್ಕಿಸಿದನು.

Roopa Gururaj Column: ರಾಮಚರಿತ ಮಾನಸ: ಹನುಮನಿಗೆ ಆಶೋಕವನದಲ್ಲಿ ಸೀತೆಯ ದರ್ಶನ

ರಾಮಚರಿತ ಮಾನಸ: ಹನುಮನಿಗೆ ಆಶೋಕವನದಲ್ಲಿ ಸೀತೆಯ ದರ್ಶನ

ಜಗತ್ತನ್ನೇ ಸಲಹುವ ತಾಯಿ ಇಂದು ಒಂಟಿಯಾಗಿ ಕುಳಿತು, ಮಿಣುಕು ದೀಪದಂತೆ ಕೇವಲ ‘ರಾಮ.. ರಾಮ’ ಎಂದು ಜಪಿಸುತ್ತಿರುವುದನ್ನು ಕಂಡು ಹನುಮಂತನು ಮರದ ಎಲೆಗಳ ಮರೆಯಲ್ಲಿ ಅಡಗಿ ಕಣ್ಣೀರು ಹಾಕಿದನು. ಅಷ್ಟರಲ್ಲಿ, ಹತ್ತು ತಲೆಗಳ ಅಹಂಕಾರದ ಸಾಕಾರ ರೂಪದಂತಿದ್ದ ರಾವಣನು ಅಲ್ಲಿಗೆ ಬಂದನು. ಅವನು ಸೀತೆಯನ್ನು ನಾನಾ ರೀತಿಯಲ್ಲಿ ಬೆದರಿಸಿ, ತನ್ನ ಪಟ್ಟದ ರಾಣಿಯಾಗು ವಂತೆ ಒತ್ತಾಯಿಸಿದನು

Roopa Gururaj Column: ರಾಮಚರಿತ ಮಾನಸ: ಹನುಮಂತ- ವಿಭೀಷಣರ ಹೃದಯಸ್ಪರ್ಶಿ ಭೇಟಿ

ರಾಮಚರಿತ ಮಾನಸ: ಹನುಮಂತ- ವಿಭೀಷಣರ ಹೃದಯಸ್ಪರ್ಶಿ ಭೇಟಿ

ಬ್ರಾಹ್ಮಿ ಮುಹೂರ್ತದ ಆ ಸಮಯದಲ್ಲಿ, ವಿಭೀಷಣನು ಎಚ್ಚರಗೊಂಡು ಭಕ್ತಿ ಪರವಶನಾಗಿ ‘ರಾಮ.. ರಾಮ’ ಎಂದು ನಾಮಸ್ಮರಣೆ ಮಾಡುತ್ತಿದ್ದನು. ಆ ಧ್ವನಿಯಲ್ಲಿ ಆರ್ತತೆ ಇತ್ತು, ರಾಮನ ಮೇಲಿನ ಅಚಲವಾದ ಶ್ರದ್ಧೆಯಿತ್ತು. ಇದನ್ನು ಕೇಳಿದ ಹನುಮಂತನ ಹೃದಯ ಹಗುರವಾಯಿತು. ಒಬ್ಬ ಭಕ್ತನಿಗೆ ಇನ್ನೊಬ್ಬ ಭಕ್ತನ ಭೇಟಿಯಾದಾಗ ಸಿಗುವ ಆನಂದಕ್ಕೆ ಬೆಲೆ ಕಟ್ಟಲಾಗದು.

Roopa Gururaj Column: ರಾಮಚರಿತ ಮಾನಸ: ಹನುಮಂತ - ಲಂಕಿಣಿಯ ಪ್ರಸಂಗ

Roopa Gururaj Column: ರಾಮಚರಿತ ಮಾನಸ: ಹನುಮಂತ - ಲಂಕಿಣಿಯ ಪ್ರಸಂಗ

ಹನುಮಂತ ಶಾಂತನಾಗಿದ್ದರೂ ತನ್ನ ಕಾರ್ಯಕ್ಕೆ ಅಡ್ಡಿಯಾದವರನ್ನು ಸುಮ್ಮನೆ ಬಿಡುವವನಲ್ಲ. ಅವಳು ಒಬ್ಬ ಸ್ತ್ರೀ ಎಂಬ ಕಾರಣಕ್ಕೆ ಹನುಮಂತನು ತನ್ನ ಸಂಪೂರ್ಣ ಬಲವನ್ನು ಬಳಸಲಿಲ್ಲ. ಕೇವಲ ತನ್ನ ಎಡಗೈ ಮುಷ್ಟಿಯಿಂದ ಅವಳಿಗೆ ಒಂದು ಸಣ್ಣ ಏಟನ್ನು ನೀಡಿದನು. ಆ ವಜ್ರಸಮಾನ ವಾದ ಏಟಿನ ತೀವ್ರತೆಗೆ ಲಂಕಿಣಿಯು ರಕ್ತವನ್ನು ಕಾರುತ್ತಾ ಮೂರ್ಛೆ ಹೋಗಿ ಕೆಳಗೆ ಬಿದ್ದಳು. ಕ್ಷಣಾರ್ಧದಲ್ಲಿ ಅವಳ ಅಹಂಕಾರವೆಲ್ಲ ಮಣ್ಣು ಪಾಲಾಯಿತು.

Roopa Gururaj Column: ರಾಮಚರಿತ ಮಾನಸ: ಹನುಮಂತನಿಗೆ ಸುರಸಾ ಪರೀಕ್ಷೆ

Roopa Gururaj Column: ರಾಮಚರಿತ ಮಾನಸ: ಹನುಮಂತನಿಗೆ ಸುರಸಾ ಪರೀಕ್ಷೆ

ಕೊನೆಗೆ ಸುರಸೆಯು ಅಹಂಕಾರದಿಂದ ತನ್ನ ಬಾಯಿಯನ್ನು ನೂರು ಯೋಜನಗಳಷ್ಟು ಭೀಕರವಾಗಿ ಹರಡುತ್ತಾಳೆ. ಆ ವಿಶಾಲವಾದ ಬಾಯಿ ಸಾಗರವನ್ನೇ ನುಂಗುವಂತೆ ಕಾಣುತ್ತಿರುತ್ತದೆ. ಆಗ ಹನುಮಂತ ನು ತನ್ನ ಬಲಪ್ರದರ್ಶನದಿಂದ ಪ್ರಯೋಜನವಿಲ್ಲವೆಂದು ಅರಿತುಕೊಳ್ಳುತ್ತಾನೆ. ಆ ಕ್ಷಣದ ತನ್ನ ಬೃಹತ್ ರೂಪವನ್ನು ಸಂಕುಚಿತಗೊಳಿಸಿ, ಒಂದು ಸಣ್ಣ ಸೊಳ್ಳೆಯಷ್ಟು (ಅತಿ ಲಘುರೂಪ) ರೂಪವನ್ನು ಧರಿಸುತ್ತಾನೆ. ಸುರಸೆಯು ಕಣ್ಣು ಮಿಟುಕಿಸುವಷ್ಟರಲ್ಲಿ ಅವಳ ಅಗಾಧವಾದ ಬಾಯಿಯೊಳಗೆ ಪ್ರವೇಶಿಸಿ, ಹಾಗೆಯೇ ಹೊರ ಬಂದು ಆಕೆಯ ಮುಂದೆ ವಿನಯದಿಂದ ನಿಲ್ಲುತ್ತಾನೆ.

Roopa Gururaj Column: ರಾಮಚರಿತ ಮಾನಸ: ಹನುಮಂತ ಮತ್ತು ಮೈನಾಕ ಪರ್ವತ

ರಾಮಚರಿತ ಮಾನಸ: ಹನುಮಂತ ಮತ್ತು ಮೈನಾಕ ಪರ್ವತ

ಶ್ರೀರಾಮನ ಪೂರ್ವಜರಾದ ಸಗರ ಚಕ್ರವರ್ತಿಗಳಿಂದಲೇ ತನಗೆ ಅಸ್ತಿತ್ವ ಸಿಕ್ಕಿದೆ ಎಂಬ ಕೃತಜ್ಞತೆ ಸಮುದ್ರರಾಜನಿಗಿತ್ತು. ರಾಮಕಾರ್ಯಕ್ಕಾಗಿ ಹೊರಟಿರುವ ಈ ಮಹಾವೀರ ಹನುಮಂತನಿಗೆ ಏನಾದರೂ ಸಹಾಯ ಮಾಡಬೇಕು, ಇಷ್ಟು ದೂರದ ಪಯಣದಲ್ಲಿ ಅವನಿಗೆ ದಣಿವಾರಿಸಿಕೊಳ್ಳಲು ಒಂದು ಆಸರೆ ನೀಡಬೇಕು ಎಂದು ಸಮುದ್ರರಾಜನು ಬಯಸಿದನು.

Roopa Gururaj Column: ರಾಮಚರಿತ ಮಾನಸ: ಮರಳಿದ ಹನುಮಂತನ ಆತ್ಮವಿಶ್ವಾಸ

ರಾಮಚರಿತ ಮಾನಸ: ಮರಳಿದ ಹನುಮಂತನ ಆತ್ಮವಿಶ್ವಾಸ

ಜಾಂಬವಂತನು “ನನಗೆ ಮುಪ್ಪು ಬಂದಿದೆ, ಹಳೆಯ ಶಕ್ತಿ ಈಗ ಉಳಿದಿಲ್ಲ" ಎಂದು ಗೊಣಗಿದನು. ಹೀಗೆ ಪ್ರತಿಯೊಬ್ಬರೂ ತಮ್ಮ ಮಿತಿಯನ್ನು ಹೇಳುತ್ತಾ ಅಸಹಾಯಕತೆಯಿಂದ ಮೌನವಾದಾಗ, ಇಡೀ ವಾತಾವರಣದಲ್ಲಿ ನಿರಾಶೆ ಮನೆ ಮಾಡಿತ್ತು. ಆದರೆ ಅಲ್ಲಿ ಒಬ್ಬ ವೀರ ಮಾತ್ರ ಸಮುದ್ರದ ಅಲೆಗಳನ್ನು ನೋಡುತ್ತಾ ಶಾಂತನಾಗಿ ಕುಳಿತಿದ್ದ. ಅವನೇ ಪವನಪುತ್ರ ಹನುಮಂತ.

Roopa Gururaj Column: ರಾಮಚರಿತ ಮಾನಸ: ವಾಲಿಯ ಮುಕ್ತಿಪಥ

Roopa Gururaj Column: ರಾಮಚರಿತ ಮಾನಸ: ವಾಲಿಯ ಮುಕ್ತಿಪಥ

ಒಬ್ಬ ರಾಕ್ಷಸ ಪ್ರವೃತ್ತಿಯ ವ್ಯಕ್ತಿ ತನ್ನ ದೃಷ್ಟಿ ಕೋನವನ್ನು ಬದಲಿಸಿಕೊಂಡು ಅಂತಿಮವಾಗಿ ಮಹಾನ್ ಭಕ್ತನಾಗಿ ಉದ್ಧಾರವಾದನು. ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದಕ್ಕಿಂತ, ಆ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದು ದೊಡ್ಡತನ. ನಮ್ಮ ಅಧಿಕಾರ ಅಥವಾ ಶಕ್ತಿ ನಮಗೆ ಅಧರ್ಮ ಮಾಡುವ ಪರವಾನಗಿ ನೀಡುವುದಿಲ್ಲ. ಸತ್ಯವನ್ನು ಅರಿತು ಶರಣಾದರೆ ಭಗವಂತನ ಕೃಪೆ ನಮಗೆ ದಕ್ಕುತ್ತದೆ.

Roopa Gururaj Column: ರಾಮಚರಿತ ಮಾನಸ: ರಾಮ ಮತ್ತು ಸುಗ್ರೀವನ ಸ್ನೇಹದ ವಾತಾವರಣ

ರಾಮಚರಿತ ಮಾನಸ: ರಾಮ ಮತ್ತು ಸುಗ್ರೀವನ ಸ್ನೇಹದ ವಾತಾವರಣ

ಯಾರು ತನ್ನ ಮಿತ್ರನ ದುಃಖವನ್ನು ಕಂಡು ದುಃಖಿತರಾಗುವುದಿಲ್ಲವೋ, ಅಂಥವರ ಮುಖ ನೋಡು ವುದು ಕೂಡ ಪಾಪದ ಕೆಲಸ. ತನ್ನ ಬೆಟ್ಟದಂಥ ದೊಡ್ಡ ಕಷ್ಟವನ್ನೂ ಧೂಳಿನ ಕಣದಂತೆ ಭಾವಿಸಿ, ಮಿತ್ರನ ಸಣ್ಣ ಕಷ್ಟವನ್ನೂ ಮೇರುಪರ್ವತದಂತೆ ಅತಿ ದೊಡ್ಡದೆಂದು ಭಾವಿಸಿ ಸಹಾಯ ಮಾಡುವವನೇ ಶ್ರೇಷ್ಠ ಮಿತ್ರ ಎಂದರ್ಥ.

Roopa Gururaj Column: ರಾಮಚರಿತ ಮಾನಸ: ರಾಮ ಮತ್ತು ಹನುಮರ ಭೇಟಿ

ರಾಮಚರಿತ ಮಾನಸ: ರಾಮ ಮತ್ತು ಹನುಮರ ಭೇಟಿ

ನನ್ನನ್ನು ಸುಗ್ರೀವನ ಮಂತ್ರಿ ಎಂದು ತಿಳಿಯಿರಿ". ಹನುಮಂತನ ಸಂಸ್ಕಾರಯುತವಾದ ಮಾತುಗಳನ್ನು ಕೇಳಿದ ರಾಮನು ಲಕ್ಷ್ಮಣನ ಕಡೆ ತಿರುಗಿ, “ಲಕ್ಷ್ಮಣಾ, ಈತನ ಮಾತುಗಳನ್ನು ಕೇಳಿದೆಯಾ? ವೇದಗಳನ್ನು ಪೂರ್ಣವಾಗಿ ಅಭ್ಯಾಸ ಮಾಡಿದವರಿಗೆ ಮಾತ್ರ ಇಂಥ ಶುದ್ಧವಾದ ಮತ್ತು ಸ್ಪಷ್ಟವಾದ ಭಾಷೆ ಸಿದ್ಧಿಸಲು ಸಾಧ್ಯ. ಈತನ ಮಾತುಗಳಲ್ಲಿ ಅಹಂಕಾರವಿಲ್ಲ, ಕೇವಲ ವಿನಯವಿದೆ" ಎಂದು ಪ್ರಶಂಸಿಸಿದನು.

Roopa Gururaj Column: ರಾಮಚರಿತ ಮಾನಸ ವಿವರಿಸುವ ಕಾಕಭುಶುಂಡಿ-ಗರುಡ ಸಂವಾದ

ರಾಮಚರಿತ ಮಾನಸ ವಿವರಿಸುವ ಕಾಕಭುಶುಂಡಿ-ಗರುಡ ಸಂವಾದ

ಅಹಂಕಾರವನ್ನು ಬಿಟ್ಟು ನೋಡಿದರೆ, ಪ್ರಕೃತಿಯ ಪ್ರತಿಯೊಂದು ಕಣದಲ್ಲೂ ನಮಗೆ ಗುರು ವಿನ ದರ್ಶನವಾಗುತ್ತದೆ. ನಂಬಿಕೆಯ ದಾರಿಯಲ್ಲಿ ನಡೆದಾಗ ಮಾತ್ರ ಅತೀಂದ್ರಿಯ ಸತ್ಯಗಳು ನಮಗೆ ಅರ್ಥವಾಗುತ್ತವೆ. ನಮಗೆ ಎದುರಾಗುವ ಕಷ್ಟಗಳನ್ನು ಕೇವಲ ಬುದ್ಧಿಯಿಂದ ಎದುರಿಸಲು ಹೋದಾಗ ನಾವು ಸೋಲಬಹುದು. ಆದರೆ, ಆ ಕಷ್ಟಗಳ ನಡುವೆ ಯೂ ಒಂದು ದಿವ್ಯಶಕ್ತಿಯ ಮೇಲೆ ನಂಬಿಕೆಯಿಟ್ಟರೆ, ನಮಗೆ ಅನಿರೀಕ್ಷಿತವಾದ ದಾರಿಗಳು ತೆರೆದುಕೊಳ್ಳುತ್ತವೆ.

Roopa Gururaj Column: ರಾಮಚರಿತ ಮಾನಸ: ಹನುಮ- ಭರತ ಸಂವಾದ

ರಾಮಚರಿತ ಮಾನಸ: ಹನುಮ- ಭರತ ಸಂವಾದ

ಭರತನ ಕಣ್ಣೀರು ಹನುಮಂತನ ಶಕ್ತಿಯ ಅಹಂಕಾರವನ್ನು ತೊಳೆದು ಹಾಕಿತು". ನಂತರ ಶಿವನು ಪಾರ್ವತಿಗೆ ಹೀಗೆ ಹೇಳಿದನು, “ನೋಡು ದೇವೀ, ಹನುಮಂತನು ಸಾಕ್ಷಾತ್ ಜ್ಞಾನದ ಸ್ವರೂಪ (ಜ್ಞಾನಿನಾಮಗ್ರಗಣ್ಯಮ). ಆದರೂ ಅವನು ಭರತನ ಶರಣಾಗತಿಯನ್ನು ಕಂಡು ತಾನು ಸಣ್ಣವನಾದನು. ಅಧಿಕಾರ ಅಥವಾ ಶಕ್ತಿಯ ಮದ ತಲೆಗೇರಿದಾಗ ಅಂತರಂಗದ ರಾಮ ದೂರವಾಗುತ್ತಾನೆ. ಯಾವಾಗ ನಾವು ಶರಣಾಗುತ್ತೇವೋ ಆಗ ರಾಮ ನಮ್ಮೊಳಗೆ ನೆಲೆಸುತ್ತಾನೆ.

Roopa Gururaj Column: ಶರಣಾಗತಿಯ ಶಕ್ತಿಯ ಕುರಿತು ವಿವರಿಸುವ ರಾಮಚರಿತ ಮಾನಸ

ಶರಣಾಗತಿಯ ಶಕ್ತಿಯ ಕುರಿತು ವಿವರಿಸುವ ರಾಮಚರಿತ ಮಾನಸ

ಪಾರ್ವತಿಯ ಕಣ್ಣುಗಳಲ್ಲಿ ಭಕ್ತಿ ತುಂಬಿ ಬಂತು. “ಹಾಗಾದರೆ ಶರಣಾಗತಿ ಎಂದರೆ ಸೋಲ ಲ್ಲವೇ?" ಎಂದು ಕೇಳಿದಳು. ಶಿವ ಗಂಭೀರವಾಗಿ ಹೇಳಿದನು, “ಖಂಡಿತ ಇಲ್ಲ ಪಾರ್ವತಿ. ಶರಣಾ ಗತಿ ಎಂದರೆ ಸೋಲಲ್ಲ, ಅದು ವಿಜಯದ ಆರಂಭ. ಅಹಂಕಾರವನ್ನು ಸೋಲಿಸುವುದೇ ಅತಿ ದೊಡ್ಡ ವಿಜಯ.

Roopa Gururaj Column: ರಾಮಚರಿತ ಮಾನಸ: ಸತ್ಯದ ಅರಿವಿನ ಶಿವ-ಪಾರ್ವತಿ ಸಂವಾದ

ರಾಮಚರಿತ ಮಾನಸ: ಸತ್ಯದ ಅರಿವಿನ ಶಿವ-ಪಾರ್ವತಿ ಸಂವಾದ

ಪಾರ್ವತಿಗೆ ಆಶ್ಚರ್ಯವಾಯಿತು. ‘ರಾಮ ಎಂದರೆ ಅಯೋಧ್ಯೆಯ ರಾಜಕುಮಾರನೇ? ಒಬ್ಬ ಮಾನವನನ್ನು ಮಹಾದೇವ ಧ್ಯಾನಿಸುವುದೇ?’ ಶಿವ ನಸುನಗುತ್ತಾ ಹೇಳಿದ, ‘ದೇವೀ, ರಾಮ ಎಂದರೆ ಕೇವಲ ದಶರಥನ ಮಗನಲ್ಲ. ‘ರಮಂತೇ ಯೋಗಿನೋ ಅಸ್ಮಿನ್ ಇತಿ ರಾಮಃ’ -ಯಾರಲ್ಲಿ ಯೋಗಿಗಳು ರಮಿಸುತ್ತಾರೋ, ಯಾರಲ್ಲಿ ಆನಂದದ ಅನುಭೂತಿಯಾಗು ತ್ತದೋ ಅವನೇ ರಾಮ.

Roopa Gururaj Column: ಶ್ರೀರಾಮಚರಿತ ಮಾನಸದ ನಾಲ್ಕು ಸಂವಾದಗಳು

ಶ್ರೀರಾಮಚರಿತ ಮಾನಸದ ನಾಲ್ಕು ಸಂವಾದಗಳು

ಶ್ರೀ ರಾಮಚರಿತ ಮಾನಸವು ಕೇವಲ ಒಬ್ಬ ರಾಜನ ಕಥೆಯಲ್ಲ, ಅದು ಮನುಷ್ಯನ ಅಂತರಂಗದ ಪಯಣ. ತುಳಸೀದಾಸರು ಈ ಮಹಾಕಾವ್ಯವನ್ನು ನಾಲ್ಕು ಪ್ರಮುಖ ಸಂವಾದಗಳ ಮೂಲಕ ಹರಿಸಿದ್ದಾರೆ. ನದಿಗೆ ಇಳಿಯಲು ಹೇಗೆ ನಾಲ್ಕು ದಿಕ್ಕುಗಳಲ್ಲಿ ಘಾಟ್‌ಗಳಿರುತ್ತವೆಯೋ, ಹಾಗೆಯೇ ರಾಮನೆಂಬ ಸಾಗರವನ್ನು ಸೇರಲು ಈ ನಾಲ್ಕು ಸಂವಾದಗಳು ನಮಗೆ ದಾರಿದೀಪಗಳಾಗಿವೆ.

Roopa Gururaj Column: ತುಳಸೀದಾಸರ ರಾಮಚರಿತ ಮಾನಸ

Roopa Gururaj Column: ತುಳಸೀದಾಸರ ರಾಮಚರಿತ ಮಾನಸ

ತುಳಸೀದಾಸರು ಕಾಶಿಯ ಪಂಡಿತರ ತೀವ್ರ ವಿರೋಧದ ನಡುವೆಯೂ, ಸಂಸ್ಕೃತದ ಬದಲು ಅಂದಿನ ಆಡುಭಾಷೆಯಾದ ‘ಅವಧಿ’ಯಲ್ಲಿ ರಾಮಾಯಣವನ್ನು ಬರೆದರು. ನೀರಡಿಕೆ ಯಾದವ ನಿಗೆ ಬಾಯಾರಿಕೆ ನೀಗಲು ನೀರು ಮುಖ್ಯವೇ ಹೊರತು ಅದು ಚಿನ್ನದ ಪಾತ್ರೆಯಲ್ಲಿದೆಯೇ ಅಥವಾ ಮಣ್ಣಿನ ಪಾತ್ರೆಯಲ್ಲಿದೆಯೇ ಎಂಬುದು ಮುಖ್ಯವಲ್ಲ ಎನ್ನುವುದು ತುಳಸೀದಾಸರ ತರ್ಕವಾಗಿತ್ತು.

Roopa Gururaj Column: ಸಂಬಂಧಗಳ ಒರೆಗಲ್ಲು: ಎಲ್ಲರ ಕಣ್ಣು ತೆರೆಸಿದ ಅಷ್ಟಾವಕ್ರರ ದಿವ್ಯ ದೃಷ್ಟಿ

ಸಂಬಂಧಗಳ ಒರೆಗಲ್ಲು: ಎಲ್ಲರ ಕಣ್ಣು ತೆರೆಸಿದ ಅಷ್ಟಾವಕ್ರರ ದಿವ್ಯ ದೃಷ್ಟಿ

ಅಷ್ಟಾವಕ್ರರ ಪ್ರಕಾರ, ಒಬ್ಬ ವ್ಯಕ್ತಿಯನ್ನು ಅವರು ಹೇಗಿದ್ದಾರೋ ಹಾಗೆಯೇ ಪ್ರೀತಿಸುವುದು ಮತ್ತು ಅವರ ಬೆಳವಣಿಗೆಗೆ ಪೂರಕವಾಗಿರುವುದು ಶ್ರೇಷ್ಠ ಸಂಬಂಧ. ನಿಮ್ಮ ತಪ್ಪುಗಳನ್ನು ಪ್ರೀತಿಯಿಂದ ತಿದ್ದುವ ಮತ್ತು ನಿಮ್ಮ ಅಹಂಕಾರವನ್ನು ಅಳಿಸಿ ಹಾಕುವ ವ್ಯಕ್ತಿಯೇ ನಿಮ್ಮ ಶ್ರೇಷ್ಠ ಸಂಬಂಽ. ಜನಕನು ಅಷ್ಟಾವಕ್ರರನ್ನು ಆರಿಸಿಕೊಂಡಿದ್ದು ಅವರ ರೂಪಕ್ಕಲ್ಲ, ಬದಲಾಗಿ ಅವರು ನೀಡುವ ಜ್ಞಾನಕ್ಕಾಗಿ.

Roopa Gururaj Column: ಮಾಯೆ ಎಂದರೇನು ? ಅಷ್ಟಾವಕ್ರ ಗೀತೆಯಲ್ಲಿ ಸಿಗುವ ಉತ್ತರ

ಮಾಯೆ ಎಂದರೇನು ? ಅಷ್ಟಾವಕ್ರ ಗೀತೆಯಲ್ಲಿ ಸಿಗುವ ಉತ್ತರ

ಈ ಸಂದರ್ಭಕ್ಕೆ ಅಷ್ಟಾವಕ್ರ ಗೀತೆಯ ಈ ಸಾಲು ಅತ್ಯಂತ ಸೂಕ್ತ: ‘ನ ಪ್ರಹೃಷ್ಯತಿ ಸಮ್ಮಾನೇ ನೈವ ಖಿದ್ಯತ್ಯಸನ್ಮನೇ | ಯಥಾ ಗಚ್ಛೇತ್ ಪ್ರಸನ್ನಾತ್ಮಾ ಸ ಏವ ಜ್ಞಾನವಿತ್ತಮಃ’, ಅಂದರೆ ಸನ್ಮಾನ ಸಿಕ್ಕಾಗ ಅತಿಯಾಗಿ ಹರ್ಷಪಡದವನು ಮತ್ತು ಅಪಮಾನವಾದಾಗ ಕುಗ್ಗದವನು, ಯಾವಾಗಲೂ ಪ್ರಸನ್ನವಾಗಿರುವವನೇ ನಿಜವಾದ ಜ್ಞಾನಿ.

Loading...