ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಥಳೀಯ ಮಾರುಕಟ್ಟೆಯಿಂದ ಜಾಗತಿಕ ವೇದಿಕೆವರೆಗೆ: ಕರಕುಶಲಕರ್ಮಿಗಳಿಗೆ ಯೋಗಿ ಆದಿತ್ಯನಾಥನ್‌ ಸರ್ಕಾರದಿಂದ ಉತ್ತೇಜನ; 3 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

Yogi Adityanath Government: ಉತ್ತರ ಪ್ರದೇಶ ಸರ್ಕಾರದ 'ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್' (ODOP) ಯೋಜನೆಯು ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಉತ್ತೇಜನ ನೀಡಿ, 3 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿದೆ. ಜತೆಗೆ ರಾಜ್ಯವನ್ನು ಪ್ರಮುಖ ಉತ್ಪಾದನೆ ಮತ್ತು ರಫ್ತು ಕೇಂದ್ರವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)

ಲಖನೌ, ಜು. 11: ಉತ್ತರ ಪ್ರದೇಶದ (Uttar Pradesh) ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರದ ಮಹತ್ವಾಕಾಂಕ್ಷಿ ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ (One District One Product - ODOP) ಯೋಜನೆಯು ರಾಜ್ಯದ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಹೊಸ ಚೈತನ್ಯ ನೀಡಿದೆ. ಉತ್ತರ ಪ್ರದೇಶವನ್ನು ಒಂದು ಕಾಲದಲ್ಲಿ ಬಿಮಾರು (BIMARU) ರಾಜ್ಯವೆಂದು ಕರೆಯಲಾಗುತ್ತಿದ್ದ ಸ್ಥಿತಿಯಿಂದ ದೇಶದ ಪ್ರಮುಖ ಉತ್ಪಾದನೆ ಮತ್ತು ರಫ್ತು ಕೇಂದ್ರವಾಗಿ ರೂಪಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಿದೆ.

2018ರಲ್ಲಿ ಆರಂಭವಾದ ಈ ಯೋಜನೆಯಡಿ ಪ್ರತಿಯೊಂದು ಜಿಲ್ಲೆಗೆ ಅದರ ವಿಶಿಷ್ಟ ಉತ್ಪನ್ನವನ್ನು ಗುರುತಿಸಿ ಉತ್ತೇಜನ ನೀಡಲಾಗುತ್ತಿದೆ. ಕರಕುಶಲಗಾರರು ಹಾಗೂ ಉದ್ಯಮಿಗಳಿಗೆ ಕೌಶಲ್ಯ ತರಬೇತಿ, ಉಚಿತ ಟೂಲ್‌ಕಿಟ್‌ಗಳು, ಹಣಕಾಸು ನೆರವು, ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಾಂಪ್ರದಾಯಿಕ ಉದ್ಯಮಗಳನ್ನು ಬಲಪಡಿಸಲಾಗುತ್ತಿದೆ.

ಸರ್ಕಾರದ ಮಾಹಿತಿ ಪ್ರಕಾರ, ಕಳೆದ ಒಂಬತ್ತು ವರ್ಷಗಳಲ್ಲಿ 1.46 ಲಕ್ಷಕ್ಕೂ ಹೆಚ್ಚು ಕರಕುಶಲಗಾರರಿಗೆ ತರಬೇತಿ ನೀಡಲಾಗಿದ್ದು, 20 ಸಾವಿರಕ್ಕೂ ಹೆಚ್ಚು ಉದ್ಯಮಿಗಳು ನೇರವಾಗಿ ಯೋಜನೆಯ ಲಾಭ ಪಡೆದಿದ್ದಾರೆ. ಅಲ್ಲದೆ, 3.16 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ.
2026-27ರ ಬಜೆಟ್ ಅಧಿವೇಶನದಲ್ಲಿ ಉತ್ತರ ಪ್ರದೇಶದ ಎಂಎಸ್‌ಎಂಇ ಸಚಿವ ರಾಕೇಶ್ ಸಚಾನ್ ಮಾತನಾಡಿ, ಒಡಿಒಪಿ ಯೋಜನೆಯು ಕೇವಲ ಉತ್ಪನ್ನಗಳ ಬ್ರ್ಯಾಂಡಿಂಗ್‌ಗೆ ಸೀಮಿತವಾಗದೆ, ಕರಕುಶಲಗಾರರ ಸಾಮಾಜಿಕ ಹಾಗೂ ಆರ್ಥಿಕ ಪುನರುಜ್ಜೀವನಕ್ಕೆ ಬುನಾದಿಯಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಪ್ರಕಾರ, 2017-18ರಲ್ಲಿ ₹86,000 ಕೋಟಿ ಇದ್ದ ಉತ್ತರ ಪ್ರದೇಶದ ರಫ್ತು ಮೌಲ್ಯವು ₹1.84 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ಸುಮಾರು 50% ರಫ್ತು ಒಡಿಒಪಿ ಹಾಗೂ ಕರಕುಶಲ ಉತ್ಪನ್ನಗಳಿಂದಲೇ ಬಂದಿದೆ ಎಂದು ತಿಳಿಸಲಾಗಿದೆ.

ಯೋಗಿ ಆದಿತ್ಯನಾಥ್ ಆಗಮನಕ್ಕೆ ಕೆಲವೇ ನಿಮಿಷಗಳ ಮೊದಲು ಅಯೋಧ್ಯೆ ಹೆಲಿಪ್ಯಾಡ್ ಬಳಿ ಅಗ್ನಿ ಅವಘಡ

ಈ ಯೋಜನೆಯಡಿ ಆಗ್ರಾದ ಚರ್ಮ ಮತ್ತು ಮಾರ್ಬಲ್ ಉತ್ಪನ್ನಗಳು, ಅಲಿಗಢದ ಬೀಗಗಳು, ಆಜಂಘಢದ ಕಪ್ಪು ಮಣ್ಣಿನ ಕುಂಬಾರಿಕೆ, ಅಯೋಧ್ಯೆಯ ಬೆಲ್ಲ, ಕನ್ನೌಜ್‌ನ ಸುಗಂಧ ದ್ರವ್ಯಗಳು, ವಾರಾಣಸಿಯ ರೇಷ್ಮೆ ಸೀರೆಗಳು, ಮೊರಾದಾಬಾದ್‌ನ ಲೋಹದ ಕರಕುಶಲ ವಸ್ತುಗಳು ಹಾಗೂ ಸಹಾರನ್‌ಪುರದ ಮರದ ಪೀಠೋಪಕರಣಗಳಿಗೆ ವಿಶೇಷ ಉತ್ತೇಜನ ನೀಡಲಾಗಿದೆ.
ಅಧಿಕಾರಿಗಳ ಪ್ರಕಾರ, ಸುಧಾರಿತ ಪ್ಯಾಕೇಜಿಂಗ್, ಬ್ರ್ಯಾಂಡಿಂಗ್, ಇ-ಕಾಮರ್ಸ್ ವೇದಿಕೆಗಳು, ಪ್ರದರ್ಶನಗಳು ಮತ್ತು ವ್ಯಾಪಾರ ಮೇಳಗಳ ಮೂಲಕ ಗ್ರಾಮೀಣ ಪ್ರದೇಶಗಳ ಕರಕುಶಲಗಾರರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪಲು ಸಾಧ್ಯವಾಗಿದೆ.

ಇದಲ್ಲದೆ, ಉತ್ತರ ಪ್ರದೇಶದ 79 ಉತ್ಪನ್ನಗಳಿಗೆ ಭೌಗೋಳಿಕ ಸೂಚ್ಯಂಕ (GI) ಟ್ಯಾಗ್ ಲಭಿಸಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಅವುಗಳ ಗುರುತನ್ನು ಮತ್ತಷ್ಟು ಬಲಪಡಿಸಿದೆ. GI ಉತ್ಪನ್ನಗಳ ಪ್ರೋತ್ಸಾಹಕ್ಕಾಗಿ ಸರ್ಕಾರವು ಅನುದಾನವನ್ನು ₹145 ಕೋಟಿಯಿಂದ ₹200 ಕೋಟಿಗೆ ಹೆಚ್ಚಿಸಿದೆ.

ಮೊರಾದಾಬಾದ್‌ನ ಪದ್ಮಶ್ರೀ ಪುರಸ್ಕೃತ ದಿಲ್‌ಶಾದ್ ಹುಸೇನ್, ಅಮ್ರೋಹಾದ ಕರಕುಶಲಗಾರ ಜಿತೇಂದ್ರ ಸೈನಿ ಸೇರಿ ಹಲವು ಉದ್ಯಮಿಗಳು, ಒಡಿಒಪಿ ಯೋಜನೆಯಿಂದ ಉತ್ಪನ್ನಗಳಿಗೆ ದೇಶ-ವಿದೇಶಗಳಲ್ಲಿ ಬೇಡಿಕೆ ಹೆಚ್ಚಿದ್ದು, ಆದಾಯದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.