ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Sushmitha Jain

[email protected]

Articles
Vastu Tips: ಮನೆಯ ಬಣ್ಣ ಆಯ್ಕೆಯಲ್ಲಿ ಎಚ್ಚರ! ಈ 3 ಬಣ್ಣಗಳ ಅತಿಯಾದ ಬಳಕೆ ನಕಾರಾತ್ಮಕ ಶಕ್ತಿ ಹೆಚ್ಚಿಸಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ

ಮನೆಯಲ್ಲಿನ ಈ 3 ಬಣ್ಣಗಳ ಅತಿಯಾದ ಬಳಕೆ ಒಳ್ಳೆಯದಲ್ಲ!

ಫೆಂಗ್ ಶೂಯಿ ಪ್ರಕಾರ ಮನೆಯ ಬಣ್ಣಗಳ ಆಯ್ಕೆ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳನ್ನು ಅತಿಯಾಗಿ ಬಳಸುವುದರಿಂದ ಉದ್ವಿಗ್ನತೆ, ನಿರುತ್ಸಾಹ ಹಾಗೂ ನಿರ್ಜೀವತೆಯ ಭಾವನೆ ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಬಣ್ಣಗಳ ಬಳಕೆಯಲ್ಲಿ ಸಮತೋಲನ ಕಾಪಾಡುವುದು ಮುಖ್ಯ.

ಪಾಗಲ್ ಪ್ರೇಮಿಯ ಅಟ್ಟಹಾಸ: ಬಾಲಕಿ ಮೇಲೆ ಕೊಡಲಿಯಿಂದ ದಾಳಿ, ಛಾವಣಿಯಿಂದ ತಳ್ಳಿದ ದುಷ್ಕರ್ಮಿ

ಬಾಲಕಿಯ ಮೇಲೆ ಅಮಾನುಷ ಹಲ್ಲೆ, ಆರೋಪಿ ಬಂಧನ

ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಪಾಗಲ್‌ ಪ್ರೇಮಿಯೊಬ್ಬ 17 ವರ್ಷದ ಬಾಲಕಿಯ ಮೇಲೆ ಕೊಡಲಿಯಿಂದ ದಾಳಿ ನಡೆಸಿ, ಮನೆಯ ಛಾವಣಿಯಲ್ಲಿ ನೇಣು ಹಾಕಲು ಯತ್ನಿಸಿ ಬಳಿಕ ಕೆಳಗೆ ತಳ್ಳಿದ ಭೀಕರ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ಲಂಬರ್ ಖಾತೆಗೆ ಏಕಾಏಕಿ 294 ಕೋಟಿ ರುಪಾಯಿ ಜಮೆ; ಬ್ಯಾಂಕ್‌ ಬ್ಯಾಲೆನ್ಸ್ ನೋಡಿ ಬೆಚ್ಚಿಬಿದ್ದ ಯುವಕ: ಹಣ ಬಂದಿದೆಲ್ಲಿಂದ?

ಪ್ಲಂಬರ್ ಖಾತೆಗೆ ಏಕಾಏಕಿ 294 ಕೋಟಿ ರುಪಾಯಿ ಜಮೆ

ಬಿಹಾರದ ಗಯಾ ಜಿಲ್ಲೆಯ ಬೋಧಗಯಾ ಸಮೀಪದ ಮಸ್ತಪುರ ಗ್ರಾಮದ ಪ್ಲಂಬರ್‌ ವಿಕಾಶ್ ಕುಮಾರ್ ಅವರ ಬ್ಯಾಂಕ್ ಖಾತೆಯಲ್ಲಿ ಏಕಾಏಕಿ 294 ಕೋಟಿ ರುಪಾಯಿ ಜಮೆಯಾಗಿರುವ ಘಟನೆ ಸಂಚಲನ ಮೂಡಿಸಿದೆ. ಖಾತೆಯಲ್ಲಿ ಕೇವಲ 113 ರುಪಾಯಿ ಉಳಿದಿದ್ದ ವೇಳೆ ಗುರುವಾರ ಬೆಳಗ್ಗೆ ಬ್ಯಾಲೆನ್ಸ್ ಪರಿಶೀಲಿಸಿದಾಗ 94 ಕೋಟಿ ರುಪಾಯಿ ಕಾಣಿಸಿಕೊಂಡಿದ್ದು, ಸಂಜೆ ವೇಳೆಗೆ ಅದು 294 ಕೋಟಿ ರುಪಾಯಿಗೆ ಏರಿದೆ. ಅಚ್ಚರಿಗೊಂಡ ವಿಕಾಶ್ ಕುಮಾರ್ ಗ್ರಾಮ ಮುಖಂಡರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ದಾಖಲೆಗಳು, ಸರ್ವರ್ ಲಾಗ್‌ಗಳು ಮತ್ತು ವಹಿವಾಟು ವಿವರಗಳನ್ನು ಪರಿಶೀಲಿಸಲಾಗುತ್ತಿದ್ದು, ಇದು ಬ್ಯಾಂಕಿನ ತಾಂತ್ರಿಕ ದೋಷವೇ, ಸಾಫ್ಟ್‌ವೇರ್ ಸಮಸ್ಯೆಯೇ ಅಥವಾ ವಂಚನೆಗೆ ಸಂಬಂಧಿಸಿದ ಪ್ರಕರಣವೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಅಂಡಮಾನ್ ಸಮುದ್ರದಲ್ಲಿ ಬೃಹತ್‌ ಪ್ರಮಾಣದ ನೈಸರ್ಗಿಕ ಅನಿಲ ಪತ್ತೆ; ಭಾರತದ ಇಂಧನ ಕ್ಷೇತ್ರಕ್ಕೆ ಭಾರಿ ಬಲ

ಅಂಡಮಾನ್ ಸಮುದ್ರದಲ್ಲಿ ನೈಸರ್ಗಿಕ ಅನಿಲ ಪತ್ತೆ

ಅಂಡಮಾನ್ ಸಮುದ್ರದ ಶ್ರೀ ವಿಜಯಪುರಂ-3 ಅನ್ವೇಷಣಾ ಬಾವಿಯಲ್ಲಿ ನೈಸರ್ಗಿಕ ಅನಿಲ ಪತ್ತೆಯಾಗಿದೆ. ಆಯಿಲ್ ಇಂಡಿಯಾ ನಡೆಸಿದ ಪರೀಕ್ಷೆಯಲ್ಲಿ ಅನಿಲದ ಅಸ್ತಿತ್ವ ದೃಢಪಟ್ಟಿದ್ದು, ಇದು ಅಂಡಮಾನ್ ಬೇಸಿನ್‌ನಲ್ಲಿ ಸತತ ಎರಡನೇ ಯಶಸ್ವಿ ಪತ್ತೆಯಾಗಿದೆ. ಈ ಬೆಳವಣಿಗೆ ಭಾರತದ ಇಂಧನ ಭದ್ರತೆ ಮತ್ತು ದೇಶೀಯ ಉತ್ಪಾದನೆ ಹೆಚ್ಚಿಸುವ ಪ್ರಯತ್ನಗಳಿಗೆ ಮಹತ್ವದ ಉತ್ತೇಜನ ನೀಡಲಿದೆ.

ಪ್ರತಿಭಟನೆಯ ಕೇಂದ್ರ ದೆಹಲಿಯ ಜಂತರ್ ಮಂತರ್: ಖಗೋಳ ವೀಕ್ಷಣಾಲಯ ಜನಾಂದೋಲನಗಳ ವೇದಿಕೆ ಆಗಿದ್ದೇಗೆ?

ಪ್ರತಿಭಟನೆಗಳ ಕೇಂದ್ರಬಿಂದು ದೆಹಲಿಯ ಜಂತರ್ ಮಂತರ್

ದೆಹಲಿ ನಗರದ ಜಂತರ್ ಮಂತರ್ ಇಂದು ಭಾರತದ ಪ್ರಮುಖ ಪ್ರತಿಭಟನಾ ಕೇಂದ್ರವಾಗಿ ಗುರುತಿಸಿಕೊಂಡಿದ್ದರೂ, ಅದರ ಮೂಲ ಇತಿಹಾಸ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದೆ. 1724ರಲ್ಲಿ ಮಹಾರಾಜ ಸವಾಯಿ ಜೈ ಸಿಂಗ್ II ನಿರ್ಮಿಸಿದ ಈ ವೀಕ್ಷಣಾಲಯವು ಸಮಯ ಮತ್ತು ಖಗೋಳ ಚಲನೆಗಳನ್ನು ಅಳೆಯಲು ಬಳಸಲಾಗುತ್ತಿತ್ತು. 1993ರಿಂದ ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳವಾಗಿ ಘೋಷಿಸಲಾಯಿತು. ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಹೋರಾಟ, ನಿರ್ಭಯಾ ಪ್ರತಿಭಟನೆ ಸೇರಿ ಹಲವು ಐತಿಹಾಸಿಕ ಚಳವಳಿಗಳಿಗೆ ಇದು ಸಾಕ್ಷಿಯಾಗಿದೆ. ಇತ್ತೀಚಿನ ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆಗಳೊಂದಿಗೆ ಜಂತರ್ ಮಂತರ್ ಮತ್ತೆ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ.

ಸಿಂಧು ಜಲ ಒಪ್ಪಂದ ಅಮಾನತು ಮುಂದುವರಿಕೆ; ಪಾಕ್‌ಗೆ ಭಾರತದ ಖಡಕ್ ಎಚ್ಚರಿಕೆ

ಪಾಕ್ ಉಗ್ರ ಬೆಂಬಲಕ್ಕೆ ಬ್ರೇಕ್ ಬೀಳುವವರೆಗೆ ಸಿಂಧು ಜಲ ಒಪ್ಪಂದ ಸ್ಥಗಿತ..!

ಗಡಿ ದಾಟಿ ನಡೆಯುವ ಭಯೋತ್ಪಾದನೆಗೆ ಪಾಕಿಸ್ತಾನ ಸಂಪೂರ್ಣವಾಗಿ ಅಂತ್ಯ ಹಾಡುವವರೆಗೆ ಸಿಂಧು ಜಲ ಒಪ್ಪಂದ ಅಮಾನತಿನಲ್ಲೇ ಮುಂದುವರಿಯಲಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಪಾಕಿಸ್ತಾನದ ಆರೋಪಗಳನ್ನು ತಳ್ಳಿಹಾಕಿರುವ ಭಾರತ, ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು ಯಾವುದೇ ವಿದೇಶಿ ರಾಯಭಾರಿಗಳು ಅಲ್ಲಿಗೆ ಭೇಟಿ ನೀಡಬಹುದು ಎಂದು ತಿಳಿಸಿದೆ.

ವಿಶ್ವ ಪರಿಸರ ದಿನ ಕಾರ್ಯಕ್ರಮ; ಸ್ವಚ್ಛತೆ, ಹಸಿರು ಅಭಿವೃದ್ಧಿ ಹಾಗೂ ಆತ್ಮನಿರ್ಭರ ಭಾರತದ ಮಹತ್ವ ಒತ್ತಿಹೇಳಿದ ಪ್ರಧಾನಿ

ಯುದ್ಧ, ಇಂಧನ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಕೆ

ವಿಶ್ವ ಪರಿಸರ ದಿನದ ಅಂಗವಾಗಿ ಸೂರತ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಸ್ತುತ ದಶಕವು "ವಿಪತ್ತುಗಳ ದಶಕ"ವಾಗಿ ಪರಿಣಮಿಸುತ್ತಿದೆ ಎಂದು ಎಚ್ಚರಿಸಿದರು. ಕೋವಿಡ್-19 ಮಹಾಮಾರಿ, ವಿವಿಧ ದೇಶಗಳಲ್ಲಿನ ಯುದ್ಧಗಳು ಹಾಗೂ ಜಾಗತಿಕ ಇಂಧನ ಬಿಕ್ಕಟ್ಟು ವಿಶ್ವದ ಆರ್ಥಿಕತೆ ಮತ್ತು ಪೂರೈಕೆ ವ್ಯವಸ್ಥೆಗಳಿಗೆ ತೀವ್ರ ಪರಿಣಾಮ ಬೀರಿವೆ ಎಂದು ಹೇಳಿದರು. ಇಂತಹ ಸವಾಲುಗಳ ನಡುವೆಯೂ 140 ಕೋಟಿ ಭಾರತೀಯರ ಒಗ್ಗಟ್ಟಿನ ಪ್ರಯತ್ನದಿಂದ ಭಾರತ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಮೋದಿ ತಿಳಿಸಿದರು. ಜೊತೆಗೆ ಇಂಧನ ಸ್ವಾವಲಂಬನೆ, ಹಸಿರು ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದರು.

Astro Tips: ಶನಿವಾರ ಈ ವಸ್ತುಗಳನ್ನು ಖರೀದಿಸುತ್ತೀರಾ?; ಹಾಗಾದರೆ ಶನಿದೋಷಕ್ಕೆ ತುತ್ತಾಗಬಹುದು ಎಚ್ಚರಿಕೆ!

ಶನಿವಾರ ಈ ತಪ್ಪು ಮಾಡಬೇಡಿ..!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಸಾಸಿವೆ ಎಣ್ಣೆ, ಕಬ್ಬಿಣ, ಉಪ್ಪು, ಕಪ್ಪು ಬೂಟು, ಕತ್ತರಿ ಸೇರಿದಂತೆ ಕೆಲವು ವಸ್ತುಗಳನ್ನು ಖರೀದಿಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಶನಿದೇವನ ಕೋಪಕ್ಕೆ ಗುರಿಯಾಗದಂತೆ ಕೆಲವು ಆಹಾರ ಹಾಗೂ ಅಭ್ಯಾಸಗಳನ್ನು ಕೂಡ ತಪ್ಪಿಸುವಂತೆ ಸಲಹೆ ನೀಡಲಾಗುತ್ತದೆ.

ಜೂನ್ 10ರಂದು ಮತ್ತೊಂದು ಇತಿಹಾಸ ಬರೆಯಲಿದೆ ಬಿಜೆಪಿ: ನೆಹರೂ ದಾಖಲೆ ಹಿಂದಿಕ್ಕಲಿದ್ದಾರೆ ನರೇಂದ್ರ ಮೋದಿ

ನೆಹರೂ ದಾಖಲೆ ಮುರಿಯಲಿರುವ ಮೋದಿ

Narendra Modi: 2026ರ ಜೂನ್ 10ರಂದು ಪ್ರಧಾನಿ ನರೇಂದ್ರ ಮೋದಿ 4,399 ದಿನಗಳ ಸತತ ಪ್ರಧಾನಿತ್ವ ಪೂರ್ಣಗೊಳಿಸಿ, ಜವಾಹರಲಾಲ್ ನೆಹರೂ ಅವರ 4,398 ದಿನಗಳ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಇದರೊಂದಿಗೆ ಅವರು ಭಾರತದ ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ.

ಪ್ರೇಯಸಿಯರ ಐಫೋನ್ ಆಸೆಗೆ ಖದೀಮರಾದ ಅಪ್ರಾಪ್ತ ಬಾಲಕರು; 6.5 ಲಕ್ಷ ರುಪಾಯಿ ಮೌಲ್ಯದ ಐಷಾರಾಮಿ ಟ್ಯಾಪ್‌ ಕಳವು!

ಪ್ರೇಯಸಿಯರಿಗೆ ಐಫೋನ್ ಕೊಡಲು 6.5 ಲಕ್ಷ ರು. ಮೌಲ್ಯದ ಟ್ಯಾಪ್ ಕಳವು

ಮಹಾರಾಷ್ಟ್ರದ ನಾಗ್ಪುರದಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ತಮ್ಮ ಪ್ರೇಯಸಿಯರಿಗೆ ಐಫೋನ್ ಉಡುಗೊರೆ ನೀಡುವ ಉದ್ದೇಶದಿಂದ 6.5 ಲಕ್ಷ ರುಪಾಯಿ ಮೌಲ್ಯದ ಐಷಾರಾಮಿ ಟ್ಯಾಪ್‌ಗಳು ಮತ್ತು ಸ್ಯಾನಿಟರಿ ವಸ್ತುಗಳನ್ನು ಕಳವು ಮಾಡಿದ್ದಾರೆ. ಬಳಿಕ ಕಳವು ಮಾಡಿದ ವಸ್ತುಗಳನ್ನು ಕೇವಲ 20 ಸಾವಿರ ರುಪಾಯಿಗೆ ಕಬ್ಬಿಣದ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿಯ ನೆರವಿನಿಂದ ಪೊಲೀಸರು ಕೇವಲ 12 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ರಸ್ತೆ ಕಾಮಗಾರಿ ಸ್ಥಳದಲ್ಲಿ ಮಲಗಿದ ಕಾರ್ಮಿಕ ಮಣ್ಣಿನ ರಾಶಿಗೆ ಸಿಲುಕಿ ಸಾವು; ಕೈ ಹೊರ ಬಂದಿದ್ದರಿಂದ ಬಯಲಾಯ್ತು ಘಟನೆ

ಡಿವೈಡರ್ ಮೇಲೆ ಮಲಗಿದ್ದ ಕಾರ್ಮಿಕನ ದಾರುಣ ಅಂತ್ಯ

ಉತ್ತರ ಪ್ರದೇಶ ಗೋರಖ್‌ಪುರದ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಮಣ್ಣಿನ ರಾಶಿಯಡಿ ಸಿಲುಕಿ ಕಾರ್ಮಿಕ ಮಿಂತು ಮೃತಪಟ್ಟಿದ್ದಾರೆ. ಡಿವೈಡರ್ ಸಮತಟ್ಟು ಮಾಡುವ ವೇಳೆ ಮಣ್ಣಿನಿಂದ ಕೈ ಹೊರಬಂದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಡಂಪರ್‌ಗಳಿಂದ ಮಣ್ಣು ಸುರಿದಾಗ ಆತ ಮಣ್ಣಿನಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮದುವೆ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ ಡೆಪ್ಯುಟಿ ಕಲೆಕ್ಟರ್! ಮಧ್ಯ ಪ್ರದೇಶದಲ್ಲಿ ಅಮಾನುಷ ಘಟನೆ

ಲೈಂಗಿಕ ದೌರ್ಜನ್ಯ ಎಸಗಿದ ಡೆಪ್ಯುಟಿ ಕಲೆಕ್ಟರ್ ಅರೆಸ್ಟ್‌

Physical Abuse: ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಆರೋಪದಡಿ ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯ ಡೆಪ್ಯುಟಿ ಕಲೆಕ್ಟರ್ ಅರವಿಂದ್ ಮಹೋರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿ ಹಲವು ಬಾರಿ ದೈಹಿಕ ಸಂಬಂಧ ಬೆಳೆಸಿದ್ದು, ಬಳಿಕ ಮದುವೆಗೆ ನಿರಾಕರಿಸಿ ಬೆದರಿಕೆ ಹಾಕಿದ್ದಾರೆ ಎಂದು 32 ವರ್ಷದ ಮಹಿಳೆ ದೂರಿದ್ದಾರೆ. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಮಹೋರ್ ಅವರನ್ನು ಅಮಾನತುಗೊಳಿಸಲಾಗಿದೆ. ಪೊಲೀಸರು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.

World Environment Day 2026: ವಿಶ್ವ ಪರಿಸರ ದಿನದ ಇತಿಹಾಸ, ಮಹತ್ವ ಮತ್ತು ಈ ವರ್ಷದ ಥೀಮ್‌ ಏನು?

ವಿಶ್ವ ಪರಿಸರ ದಿನ 2026: ಪ್ರಕೃತಿ ಉಳಿಸಿ, ಭವಿಷ್ಯ ಬೆಳೆಸಿ

ಉತ್ತಮ ಪರಿಸರವು ಮಾನವನ ಆರೋಗ್ಯ, ಜೀವನಮಟ್ಟ ಮತ್ತು ಭವಿಷ್ಯದ ಅಭಿವೃದ್ಧಿಗೆ ಅತ್ಯಗತ್ಯವಾಗಿದೆ. ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. 1972ರಲ್ಲಿ ವಿಶ್ವಸಂಸ್ಥೆ ಆರಂಭಿಸಿದ ಈ ದಿನವು ಮಾಲಿನ್ಯ ನಿಯಂತ್ರಣ, ಹವಾಮಾನ ಬದಲಾವಣೆ, ಜೈವಿಕ ವೈವಿಧ್ಯತೆ ಸಂರಕ್ಷಣೆ ಮತ್ತು ಸುಸ್ಥಿರ ಜೀವನಶೈಲಿಯ ಕುರಿತು ಜನರಲ್ಲಿ ಅರಿವು ಮೂಡಿಸುವ ಪ್ರಮುಖ ವೇದಿಕೆಯಾಗಿದೆ.

Astro Tips: ದೇವರಿಗೆ ನೈವೇದ್ಯ ಅರ್ಪಿಸುವಾಗ ಈ ತಪ್ಪುಗಳನ್ನು ಮಾಡಬೇಡಿ; ಪೂಜೆ ಸಂಪೂರ್ಣವಾಗುವುದಿಲ್ಲ!

ದೇವರಿಗೆ ನೈವೇದ್ಯ ಅರ್ಪಿಸುವಾಗ ಈ ಪಾತ್ರೆಗಳನ್ನು ಬಳಸಬೇಡಿ!

ದೇವರಿಗೆ ನೈವೇದ್ಯ ಅರ್ಪಿಸುವಾಗ ಪಾತ್ರೆಯ ಆಯ್ಕೆ, ಆಹಾರದ ಶುದ್ಧತೆ ಹಾಗೂ ಶಾಸ್ತ್ರೋಕ್ತ ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯ. ನೈವೇದ್ಯಕ್ಕೆ ಸಂಬಂಧಿಸಿದ ಕೆಲವು ಸಾಮಾನ್ಯ ತಪ್ಪುಗಳು ಪೂಜೆಯ ಫಲವನ್ನು ಕಡಿಮೆ ಮಾಡಬಹುದು ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ. ದೇವರು ಮತ್ತು ದೇವತೆಗಳಿಗೆ ನೈವೇದ್ಯ ಅರ್ಪಿಸುವ ಸರಿಯಾದ ವಿಧಾನ ಹಾಗೂ ಗಮನಿಸಬೇಕಾದ ಪ್ರಮುಖ ವಿಷಯಗಳ ಬಗ್ಗೆ ತಿಳಿಯಿರಿ.

Vastu Tips: ನಿಮ್ಮ ಆದಾಯ ಹೆಚ್ಚಾಗಿ ಕೋಟ್ಯಾಧಿಪತಿ ಆಗಬೇಕಾ? ಹಾಗಾದ್ರೆ ಈ ವಸ್ತುವನ್ನು ಜೇಬಿನಲ್ಲಿರಿಸಿ!

ಹಣ ಕೈಯಲ್ಲಿ ನಿಲ್ಲುತ್ತಿಲ್ಲವೇ..? ; ಈ ವಸ್ತು ನಿಯಮ ಪಾಲಿಸಿ

ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಸರಳ ಉಪಾಯಗಳನ್ನು ಅನುಸರಿಸುವುದರಿಂದ ಆರ್ಥಿಕ ಸ್ಥಿರತೆ ಮತ್ತು ಧನಸಂಪತ್ತು ಹೆಚ್ಚಬಹುದು ಎಂದು ನಂಬಲಾಗಿದೆ. ವಿಶೇಷವಾಗಿ ಬೆಳ್ಳಿಯ ಗೋಲಿಯನ್ನು ಕೇಸರಿಯೊಂದಿಗೆ ಹಳದಿ ಬಟ್ಟೆಯಲ್ಲಿ ಸುತ್ತಿ ಜೇಬಿನಲ್ಲಿ ಇಟ್ಟುಕೊಳ್ಳುವುದು ಆದಾಯ ವೃದ್ಧಿಗೆ ಸಹಕಾರಿ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಮನೆಯ ಸ್ವಚ್ಛತೆ, ಉತ್ತರ ದಿಕ್ಕಿನಲ್ಲಿ ಹಣ ಇಡುವುದು ಮತ್ತು ಮುಖ್ಯ ಬಾಗಿಲ ಬಳಿ ದೀಪ ಹಚ್ಚುವುದು ಕೂಡ ಶುಭಕರವೆಂದು ಪರಿಗಣಿಸಲಾಗಿದೆ.

ರಾಜ್ಯಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ತರುಣ್ ಚುಗ್‌ಗೆ ಮಧ್ಯ ಪ್ರದೇಶದಿಂದ ಟಿಕೆಟ್

ರಾಜ್ಯಸಭೆ ಚುನಾವಣೆ: ಬಿಜೆಪಿ ಪಟ್ಟಿ ಬಿಡುಗಡೆ

2026ರ ರಾಜ್ಯಸಭೆ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಮಧ್ಯ ಪ್ರದೇಶದಿಂದ ತರುಣ್ ಚುಗ್ ಹಾಗೂ ರಾಜನೀಶ್ ಅಗ್ರವಾಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಅರುಣಾಚಲ ಪ್ರದೇಶ, ಮಣಿಪುರ, ಗುಜರಾತ್ ಮತ್ತು ರಾಜಸ್ಥಾನ ಸೇರಿ ಹಲವು ರಾಜ್ಯಗಳ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ, ರಾಜ್ಯಸಭೆಯಲ್ಲಿ ತನ್ನ ಬಲವನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಹೆಜ್ಜೆ ಇಟ್ಟಿದೆ.

"ಇಸ್ಲಾಂ ಸ್ನೇಹಿ ಜಿಮ್":  ಕೇರಳದಲ್ಲಿ ಭುಗಿಲೆದ್ದ  ಭಾರಿ ವಿವಾದ

ಪಾಲಕ್ಕಾಡಿನಲ್ಲಿ ‘ಇಸ್ಲಾಮಿಕ್ ಸ್ನೇಹಿ ಜಿಮ್’ ವಿವಾದ

ಕೇರಳದ ಪಾಲಕ್ಕಾಡಿನಲ್ಲಿ 'ಇಸ್ಲಾಮಿಕ್ ಸ್ನೇಹಿ ಜಿಮ್' ಎಂಬ ಹೆಸರಿನ ಫಿಟ್ನೆಸ್ ಕೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಮಯ, ಜೋರಾದ ಸಂಗೀತವಿಲ್ಲದ ವ್ಯವಸ್ಥೆ ಇರುವುದಾಗಿ ಮಾಲೀಕ ನವಾಜ್ ತಿಳಿಸಿದ್ದಾರೆ. ಇದು ಮುಸ್ಲಿಮರಿಗಷ್ಟೇ ಅಲ್ಲ, ಎಲ್ಲ ಧರ್ಮದವರಿಗೂ ಮುಕ್ತವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ದುರ್ಬಲ‌ ಟಿಎಂಸಿಯನ್ನು ಬಯಸುವ ಬಿಜೆಪಿಗೆ ಸಂಪೂರ್ಣ ಪತನ ಇಷ್ಟವಿಲ್ಲ; ಏನಿದು ಹೊಸ ರಾಜಕೀಯ ಲೆಕ್ಕಾಚಾರ?

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಲ್ಲಿ ಭಿನ್ನಮತ ಸ್ಫೋಟ

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಶಾಸಕರ ಬಂಡಾಯದಿಂದ ಪಕ್ಷದ ಸ್ಥಿರತೆ ಪ್ರಶ್ನಾರ್ಹವಾಗಿದೆ. ಟಿಎಂಸಿ ದುರ್ಬಲವಾದರೆ ಅದರ ರಾಜಕೀಯ ಜಾಗವನ್ನು ಸಿಪಿಐ(ಎಂ) ನೇತೃತ್ವದ ಎಡಪಕ್ಷಗಳು ಹಾಗೂ ಕಾಂಗ್ರೆಸ್ ಮೈತ್ರಿ ಭರ್ತಿ ಮಾಡುವ ಸಾಧ್ಯತೆಯ ಬಗ್ಗೆ ಬಿಜೆಪಿಯ ಒಂದು ವಲಯ ಆತಂಕ ವ್ಯಕ್ತಪಡಿಸಿದೆ. ಡೊಂಕಲ್ ಕ್ಷೇತ್ರದಲ್ಲಿ ಸಿಪಿಐ(ಎಂ) ಗೆಲುವು ಹಾಗೂ ಫಾಲ್ಟಾ ಮರುಮತದಾನದಲ್ಲಿ ಉತ್ತಮ ಪ್ರದರ್ಶನದೊಂದಿಗೆ ಎಡಪಕ್ಷಗಳು ಪುನರುತ್ಥಾನದ ಲಕ್ಷಣಗಳನ್ನು ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಟಿಎಂಸಿ ನಾಯಕರನ್ನು ಬಿಜೆಪಿಗೆ ಸೆಳೆಯುವ ಬದಲು, ಪಕ್ಷವನ್ನು ಸಂಪೂರ್ಣ ಕುಸಿಯದಂತೆ ಉಳಿಸುವ ತಂತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ವಿದೇಶಿ ಹೂಡಿಕೆ ಸೆಳೆಯಲು ಕೇಂದ್ರದ ಮಹತ್ವದ ನಿರ್ಧಾರ; ಎಫ್‌ಪಿಐಗಳಿಗೆ LTCG ತೆರಿಗೆ ವಿನಾಯಿತಿ ಸಾಧ್ಯತೆ

LTCG ವಿನಾಯಿತಿಗೆ ಸಚಿವ ಸಂಪುಟ ಒಪ್ಪಿಗೆ

ಭಾರತಕ್ಕೆ ಹೆಚ್ಚಿನ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರು (FPI) ಸರ್ಕಾರಿ ಭದ್ರತಾ ಪತ್ರಗಳಲ್ಲಿ ಮಾಡುವ ಹೂಡಿಕೆಗಳ ಮೇಲಿನ ದೀರ್ಘಾವಧಿ ಬಂಡವಾಳ ಲಾಭ ತೆರಿಗೆಯನ್ನು (LTCG) ರದ್ದುಪಡಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎನ್ನಲಾಗಿದೆ. ಈ ಕ್ರಮದಿಂದ ವಿದೇಶಿ ಬಂಡವಾಳ ಹರಿವು ಹೆಚ್ಚುವ ನಿರೀಕ್ಷೆಯಿದೆ.

ದೇಶವ್ಯಾಪಿ ಕಾಂಗ್ರೆಸ್ ಪುನರ್‌ರಚನೆಗೆ ಚಾಲನೆ: ಹಲವು ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆ

ಕಾಂಗ್ರೆಸ್‌ನಲ್ಲಿ ಭಾರೀ ಸಂಘಟನಾ ಬದಲಾವಣೆ..!

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕ ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿರುವ ಕಾಂಗ್ರೆಸ್, ದೇಶವ್ಯಾಪಿ ಸಂಘಟನಾ ಪುನರ್‌ರಚನೆಗೆ ಸಜ್ಜಾಗಿದೆ. ಮುಂದಿನ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹಲವು ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರು ಹಾಗೂ ಉಸ್ತುವಾರಿಗಳ ಬದಲಾವಣೆ ಸಾಧ್ಯತೆ ಇದೆ. ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾಮಾಜಿಕ ಸಮತೋಲನ ಮತ್ತು ಚುನಾವಣಾ ತಂತ್ರದ ಆಧಾರದಲ್ಲಿ ಹೊಸ ನೇಮಕಾತಿಗಳ ಕುರಿತು ಚರ್ಚೆ ನಡೆಯುತ್ತಿದೆ.

Astro Tips: ದೇವರ ಕೋಣೆಯಲ್ಲಿ ಈ ವಸ್ತುಗಳಿವೆಯೇ? ತಕ್ಷಣ ತೆಗೆದುಹಾಕಿ, ಇಲ್ಲದಿದ್ದರೆ ಕಷ್ಟಗಳು ತಪ್ಪುವುದಿಲ್ಲ

ದೇವರ ಕೋಣೆಯಲ್ಲಿ ಈ ವಸ್ತುಗಳಿದ್ದರೆ ಮನೆಯ ಶಾಂತಿ ಹಾಳಾಗಬಹುದು..!

ಹಿಂದೂ ಧರ್ಮದಲ್ಲಿ ದೇವರ ಕೋಣೆಯನ್ನು ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಆದರೆ ದೇವರ ಕೋಣೆಯಲ್ಲಿ ಮುರಿದ ವಿಗ್ರಹಗಳು, ಬಾಡಿದ ಹೂವುಗಳು, ಬಳಸಿದ ಬೆಂಕಿಕಡ್ಡಿಗಳು, ಅಗರಬತ್ತಿಯ ಬೂದಿ ಹಾಗೂ ಅನಗತ್ಯ ವಸ್ತುಗಳನ್ನು ಇಡುವುದು ಅಶುಭವೆಂದು ಶಾಸ್ತ್ರಗಳು ಹೇಳುತ್ತವೆ. ಇಂತಹ ವಸ್ತುಗಳನ್ನು ದೇವರ ಕೋಣೆಯಿಂದ ತೆಗೆದುಹಾಕುವುದರಿಂದ ಪೂಜಾ ಸ್ಥಳದ ಪಾವಿತ್ರ್ಯ ಕಾಪಾಡಿಕೊಳ್ಳಬಹುದು ಹಾಗೂ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂಬ ನಂಬಿಕೆಯಿದೆ.

Vastu Tips: ಮನೆಯಲ್ಲಿ ನೀರಿನ ಟ್ಯಾಂಕ್ ಅನ್ನು ಯಾವ ದಿಕ್ಕಿನಲ್ಲಿಡಬೇಕು? ಈ ಕುರಿತು ಪಾಲಿಸಬೇಕಾದ ವಾಸ್ತು ನಿಯಮಗಳು ಇವು

ಮನೆಯಲ್ಲಿ ನೀರನ್ನು ಈ ದಿಕ್ಕಿನಲ್ಲಿ ಇಟ್ಟರೆ ಸಮೃದ್ಧಿ ಹೆಚ್ಚುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನೀರಿನ ಟ್ಯಾಂಕ್, ಬಾವಿ ಅಥವಾ ಕುಡಿಯುವ ನೀರಿನ ವ್ಯವಸ್ಥೆಯನ್ನು ಈಶಾನ್ಯ ದಿಕ್ಕಿನಲ್ಲಿ ಇಡುವುದು ಶುಭಕರವೆಂದು ಪರಿಗಣಿಸಲಾಗಿದೆ. ಸರಿಯಾದ ದಿಕ್ಕಿನಲ್ಲಿ ನೀರಿನ ವ್ಯವಸ್ಥೆ ಇದ್ದರೆ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎನ್ನಲಾಗುತ್ತದೆ. ಅದೇ ಸಮಯದಲ್ಲಿ ನೈಋತ್ಯ, ಆಗ್ನೇಯ ಅಥವಾ ಮನೆಯ ಮಧ್ಯಭಾಗದಲ್ಲಿ ನೀರಿನ ವ್ಯವಸ್ಥೆ ಮಾಡುವುದು ಅಶುಭವೆಂದು ವಾಸ್ತು ತಜ್ಞರು ಸೂಚಿಸುತ್ತಾರೆ.

ಅಮೆರಿಕ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ; ಕುವೈತ್‌, ಬಹ್ರೇನ್‌ನಲ್ಲಿ ಹೈ ಅಲರ್ಟ್

ಕ್ವೆಶ್ಮ್ ದ್ವೀಪದ ಮೇಲಿನ ಅಮೆರಿಕ ದಾಳಿಗೆ ಇರಾನ್ ಪ್ರತೀಕಾರ

ಕ್ವೆಶ್ಮ್ ದ್ವೀಪದ ಮೇಲಿನ ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಘೋಷಿಸಿದೆ. ಕುವೈತ್ ತನ್ನ ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ದಾಳಿಯನ್ನು ತಡೆದಿರುವುದಾಗಿ ತಿಳಿಸಿದ್ದು, ಬಹ್ರೇನ್‌ನಲ್ಲಿ ಸೈರನ್ ಮೊಳಗಿಸಲಾಗಿದೆ. ಈ ಬೆಳವಣಿಗೆಯಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ಶಿವಸೇನೆ ಮಾದರಿಯಲ್ಲಿ ವಿಭಜನೆಯತ್ತ ಟಿಎಂಸಿ? 59 ಶಾಸಕರ ಬೆಂಬಲದೊಂದಿಗೆ ವಿಧಾನಸಭೆಗೆ ರಿತಬ್ರತ ಬ್ಯಾನರ್ಜಿ ಆಗಮನ

ಟಿಎಂಸಿಯ ‘ಹೊಸ ಶಿಂಧೆ’ ರಿತಬ್ರತ ಬ್ಯಾನರ್ಜಿ

TMC: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷದೊಳಗೆ ಭಾರಿ ಬಂಡಾಯ ಭುಗಿಲೆದ್ದಿದೆ. ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಶಾಸಕ ರಿತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಹಲವು ಶಾಸಕರು ಪಕ್ಷದ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಬೆಳವಣಿಗೆ ಟಿಎಂಸಿ ವಿಭಜನೆಗೆ ಕಾರಣವಾಗುವ ಸಾಧ್ಯತೆ ಇದ್ದು, ಮಹಾರಾಷ್ಟ್ರದ ಶಿವಸೇನೆ ಬಂಡಾಯದ ಮಾದರಿಯನ್ನು ನೆನಪಿಸುತ್ತಿದೆ.

Loading...