ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Sushmitha Jain

[email protected]

Articles
ಉಕ್ರೇನ್‌ನಲ್ಲಿರುವ ಭಾರತೀಯ ಉದ್ಯಮಿ ಲಕ್ಷ್ಮೀ  ಮಿತ್ತಲ್‌ನ ಉಕ್ಕಿನ ಘಟಕದ ಮೇಲೆ ರಷ್ಯಾ ದಾಳಿ: ಇಬ್ಬರು ಸಾವು, 13 ಮಂದಿಗೆ ಗಾಯ

ಉಕ್ರೇನ್‌ನ ಲಕ್ಷ್ಮೀ ಮಿತ್ತಲ್‌ ಉಕ್ಕಿನ ಕಾರ್ಖಾನೆಗೆ ರಷ್ಯಾ ದಾಳಿ

Lakshmi Mittal: ಉಕ್ರೇನ್‌ನ ಕ್ರಿವಿ ರಿಹ್‌ನಲ್ಲಿರುವ ಭಾರತೀಯ ಉದ್ಯಮಿ ಲಕ್ಷ್ಮೀ ಮಿತ್ತಲ್ ಒಡೆತನದ ಅರ್ಸೆಲರ್‌ಮಿತ್ತಲ್ ಉಕ್ಕಿನ ಘಟಕದ ಮೇಲೆ ರಷ್ಯಾ ನಡೆಸಿದ ದಾಳಿಯಿಂದ ಇಬ್ಬರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ದಾಳಿಯಿಂದ ಘಟಕದ ಇಂಧನ ಪೂರೈಕೆ ಮತ್ತು ಬ್ಲಾಸ್ಟ್ ಫರ್ನೇಸ್ ಸೌಲಭ್ಯಗಳಿಗೆ ಹಾನಿಯಾಗಿದ್ದು, ಕಾರ್ಯಾಚರಣೆ ಭಾಗಶಃ ಸ್ಥಗಿತಗೊಂಡಿದೆ.

ಭಾರಿ ಸಂಚು ಬಯಲು ಮಾಡಿದ ಇನ್‌ಸ್ಟಾಗ್ರಾಮ್‌ ಫೋಟೊ; ಸೋಷಿಯಲ್‌ ಮೀಡಿಯಾದಲ್ಲಿ ಪಿಸ್ತೂಲ್ ಪ್ರದರ್ಶಿಸಿದ ಟ್ಯಾಕ್ಸಿ ಚಾಲಕನ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದು 3 ಕೋಟಿ ರುಪಾಯಿ ನಗದು

ಪಿಸ್ತೂಲ್ ಹುಡುಕಲು ಹೋದ ಪೊಲೀಸರಿಗೆ ಸಿಕ್ಕಿದ್ದು 3 ಕೋಟಿ ರುಪಾಯಿ

Madhya Pradesh News: ಮಧ್ಯ ಪ್ರದೇಶದ ಸಾಗರ್‌ನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಪಿಸ್ತೂಲ್ ಪ್ರದರ್ಶಿಸಿದ ಪ್ರಕರಣದ ತನಿಖೆಗೆ ತೆರಳಿದ ಪೊಲೀಸರಿಗೆ ಯುವಕನ ಮನೆಯಲ್ಲಿ ಸುಮಾರು 3 ಕೋಟಿ ರುಪಾಯಿ ಅಕ್ರಮ ನಗದು ಪತ್ತೆಯಾಗಿದೆ. ಲಾಕ್ ಮಾಡಲಾಗಿದ್ದ ಕಪಾಟಿನಲ್ಲಿ ಹಣದ ಕಂತೆಗಳು ಕಂಡು ಬಂದಿದ್ದು, ಯಾವುದೇ ಪಿಸ್ತೂಲ್ ಸಿಕ್ಕಿಲ್ಲ. ಹಣದ ಮೂಲ ಮತ್ತು ಮಾಲಕತ್ವದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ʼʼಗುಜರಾತ್ ಕೇಂದ್ರಿತ ಅಭಿವೃದ್ಧಿ ಮಾದರಿ ಬದಲಾಗಬೇಕುʼʼ: ಬಿಜೆಪಿ ವಿರುದ್ಧ ತಿರುಗಿಬಿದ್ದ ಅಣ್ಣಾಮಲೈ

ಭಾರತದ ಅಭಿವೃದ್ಧಿ ಒಂದೇ ರಾಜ್ಯಕ್ಕೆ ಸೀಮಿತವಾಗಬಾರದು: ಅಣ್ಣಾಮಲೈ

Annamalai: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಮಾದರಿ ಗುಜರಾತ್ ಕೇಂದ್ರಿತವಾಗುತ್ತಿದೆ ಎಂದು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಟೀಕಿಸಿದ್ದಾರೆ. ಎಐ, ಸೆಮಿಕಂಡಕ್ಟರ್ ಯೋಜನೆಗಳು ಹಾಗೂ ಪ್ರಮುಖ ಕ್ರೀಡಾಕೂಟಗಳಂತಹ ಅವಕಾಶಗಳು ಒಂದೇ ರಾಜ್ಯಕ್ಕೆ ಕೇಂದ್ರೀಕೃತವಾಗಬಾರದು ಎಂದು ಅವರು ಹೇಳಿದ್ದಾರೆ. ಬಿಜೆಪಿ ನಿರ್ಧಾರಗಳು ದೆಹಲಿ ಕೇಂದ್ರಿತವಾಗುತ್ತಿದ್ದು, ರಾಜ್ಯ ನಾಯಕರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದೂ ಅಣ್ಣಾಮಲೈ ಆಗ್ರಹಿಸಿದ್ದಾರೆ.

ಚಾಮರಾಜನಗರದಲ್ಲಿ ಶೂಟೌಟ್‌; ಕರ್ನಾಟಕ-ತಮಿಳುನಾಡು ನಡುವೆ ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ಕಾರಣವಾಯ್ತು ಮೂವರು ತಮಿಳರ ಸಾವು

ಚಾಮರಾಜನಗರ ಗುಂಡಿನ ದಾಳಿ; ತಮಿಳುನಾಡು ಸಿಎಂ ವಿಜಯ್‌ ಕಿಡಿ

Tamil Nadu CM C Joseph Vijay: ಚಾಮರಾಜನಗರದ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಶಂಕಿತ ಬೇಟೆಗಾರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ತಮಿಳರು ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ ಎಂದು ಹೇಳಿದರೆ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಘಟನೆಯನ್ನು ಹತ್ಯಾಕಾಂಡ ಎಂದು ಆರೋಪಿಸಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. ಕರ್ನಾಟಕ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದು, ಪ್ರಕರಣದ ಕುರಿತು ಪ್ರತಿಭಟನೆಗಳೂ ನಡೆದಿವೆ.

ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ: ಏನಿದರ ವೈಶಿಷ್ಟ್ಯ? ಆಚರಣೆ ಹೇಗೆ? ಇಲ್ಲಿದೆ ಸಂಪೂರ್ಣ ವಿವರ

ನಾಗರ ಪಂಚಮಿ: ಶ್ರಾವಣದ ಶುಭಾರಂಭಕ್ಕೆ ಮುನ್ನುಡಿ

Nagara Panchami: ಶ್ರಾವಣ ಶುದ್ಧ ಪಂಚಮಿಯಂದು ಆಚರಿಸುವ ನಾಗರ ಪಂಚಮಿ ಧಾರ್ಮಿಕ ನಂಬಿಕೆ, ಪೌರಾಣಿಕ ಕಥೆಗಳು, ಪ್ರಕೃತಿ ಆರಾಧನೆ ಮತ್ತು ಜನಪದ ಸಂಪ್ರದಾಯಗಳ ಸಮ್ಮಿಲನದ ಹಬ್ಬ. ಕರ್ನಾಟಕದಲ್ಲಿ ಹೆಣ್ಣುಮಕ್ಕಳ ಹಬ್ಬವಾಗಿಯೂ ವಿಶೇಷವಾಗಿ ಆಚರಿಸಲಾಗುವ ಈ ದಿನ ನಾಗದೇವತೆಯ ಪೂಜೆ, ಸಹೋದರನ ಒಳಿತಿಗಾಗಿ ಪ್ರಾರ್ಥನೆ ಹಾಗೂ ತವರು ಸಂಭ್ರಮಕ್ಕೆ ಮಹತ್ವವಿದೆ.

ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಗೀತೆಗೆ ಸೋನಿಯಾ ಗಾಂಧಿ ಆಕ್ಷೇಪ? ಬಿಜೆಪಿ ಆರೋಪ, ಕಾಂಗ್ರೆಸ್ ಸ್ಪಷ್ಟನೆ

ವಂದೇ ಮಾತರಂ ವಿವಾದ: ಸೋನಿಯಾ ಗಾಂಧಿ ಗೀತೆ ನಿಲ್ಲಿಸಲು ಯತ್ನಿಸಿದರೇ?

ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಂದೇ ಮಾತರಂ ಪೂರ್ಣ ಆವೃತ್ತಿ ಹಾಡಿದ ವಿಚಾರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಸೋನಿಯಾ ಗಾಂಧಿ ಗೀತೆಯನ್ನು ನಿಲ್ಲಿಸಲು ಯತ್ನಿಸಿದರು ಎಂದು ಬಿಜೆಪಿ ಆರೋಪಿಸಿದ್ದು, ಖರ್ಗೆ ಅವರಿಗೆ ಕುಳಿತುಕೊಳ್ಳಲು ಕುರ್ಚಿ ತರಲು ಅವರು ಸೂಚಿಸುತ್ತಿದ್ದರು ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.

ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಹೊಡೆದುರುಳಿಸಿದ ಪಾಕ್ ಸೇನೆ? ವೈರಲ್ ವಿಡಿಯೋದ ಅಸಲಿ ಕತೆ ಬಯಲಿಗೆಳೆದ ಪಿಐಬಿ!

ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಹೊಡೆದುರುಳಿಸಿದ ಪಾಕ್ ಸೇನೆ?

ಬುಡ್ಗಾಂವ್ ಬಳಿ ಪಾಕಿಸ್ತಾನ ಸೇನೆ ಭಾರತೀಯ ವಾಯುಪಡೆಯ Mi-17 ಹೆಲಿಕಾಪ್ಟರ್ ಹೊಡೆದುರುಳಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಸುಳ್ಳು ಎಂದು PIB ಫ್ಯಾಕ್ಟ್‌ಚೆಕ್ ಸ್ಪಷ್ಟಪಡಿಸಿದೆ. ವೈರಲ್ ಆಗಿರುವ ವಿಡಿಯೋ 2019ರ ಘಟನೆಗೆ ಸಂಬಂಧಿಸಿದ್ದು, ಪಾಕಿಸ್ತಾನ ದಾಳಿಯಿಂದ ಹೆಲಿಕಾಪ್ಟರ್ ಪತನವಾಗಿಲ್ಲ ಎಂದು ತಿಳಿಸಲಾಗಿದೆ. ಹಳೆಯ ವಿಡಿಯೋವನ್ನು ಪ್ರಸ್ತುತ ಘಟನೆಗೆ ತಳಕು ಹಾಕಿ ಹರಡಲಾಗುತ್ತಿದೆ ಎಂದು ಎಚ್ಚರಿಸಲಾಗಿದೆ.

ಜಾರ್ಖಂಡ್‌ನಲ್ಲಿ ಕಂಟೈನರ್ ಲಾರಿಗೆ ಆಟೋ ಡಿಕ್ಕಿ: 7 ಮಂದಿ ದುರ್ಮರಣ, ಹಲವರಿಗೆ ಗಂಭೀರ ಗಾಯ

ಜಾರ್ಖಂಡ್‌ನಲ್ಲಿ ಭೀಕರ ರಸ್ತೆ ಅಪಘಾತ: 7 ಮಂದಿ ಸಾವು

Road Accident: ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯ ಚಾಂದ್ವಾ ಪ್ರದೇಶದ ಡೇರ್ಹ್ ತಂಗ್ವಾ ಘಾಟ್‌ನಲ್ಲಿ ಕಂಟೈನರ್ ಲಾರಿ ಮತ್ತು ಆಟೋರಿಕ್ಷಾ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತಕ್ಕೆ ಅತಿವೇಗ ಅಥವಾ ಚಾಲಕನ ನಿರ್ಲಕ್ಷ್ಯ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ʼʼತಂದೆ ಯಾರೆಂದು ತಾಯಿ ಬಳಿ ಕೇಳಿʼʼ: ತಮಿಳುನಾಡು ಸಿಎಂ ವಿಜಯ್‌ ಟೀಕಿಸುವ ಭರದಲ್ಲಿ ನಾಲಗೆ ಹರಿಯಬಿಟ್ಟ ಬಿಜೆಪಿ ನಾಯಕ; ಭುಗಿಲೆದ್ದ ವಿವಾದ

ವಿಜಯ್‌ ತಾಯಿಯ ಬಗ್ಗೆ ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

CM Vijay: ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ವಿವಾದ ಮೈಮೇಲೆ ಎಳದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಟೀಕಿಸುವ ವೇಳೆ ತಾಯಿಯ ಬಗ್ಗೆ ವೈಯಕ್ತಿಕ ಹೇಳಿಕೆ ನೀಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಸೇರಿ ಹಲವು ನಾಯಕರು ಹೇಳಿಕೆಯನ್ನು ಖಂಡಿಸಿ, ರಾಜಕೀಯದಲ್ಲಿ ಸಭ್ಯತೆ ಕಾಪಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಡೋನೇಷ್ಯಾವನ್ನೇ ನಲುಗಿಸಿದ 7.7 ತೀವ್ರತೆಯ ಭೂಕಂಪ: 38 ಮಂದಿ ಸಾವು

7.7 ತೀವ್ರತೆಯ ಭೂಕಂಪಕ್ಕೆ ಇಂಡೋನೇಷ್ಯಾ ತತ್ತರ

Indonesia Earthquake: ಇಂಡೋನೇಷ್ಯಾದ ಪೂರ್ವ ಕರಾವಳಿಯ ಸಮುದ್ರದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 38 ಮಂದಿ ಮೃತಪಟ್ಟಿದ್ದಾರೆ. ಭೂಕಂಪದ ಬಳಿಕ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಮೌಮೆರೆ ಸೇರಿ ಹಲವು ಪ್ರದೇಶಗಳಲ್ಲಿ ಕಟ್ಟಡಗಳಿಗೆ ಹಾನಿಯಾಗಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

ಆಧುನಿಕ ಭದ್ರತಾ ಸವಾಲು ಎದುರಿಸಲು ಬೃಹತ್ ಸಿವಿಲ್ ಡಿಫೆನ್ಸ್ ಪಡೆ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಜಾಗತಿಕ ರಕ್ಷಣಾ ಶಕ್ತಿಯಾಗಲು ಭಾರತಕ್ಕೆ ಮೋದಿ ಕರೆ

Narendra Modi: ಆಧುನಿಕ ಭದ್ರತಾ ಸವಾಲುಗಳು ಮತ್ತು ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಬೃಹತ್ ಸಿವಿಲ್ ಡಿಫೆನ್ಸ್ ಸ್ವಯಂಸೇವಕರ ಪಡೆಯನ್ನು ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಆಧುನಿಕ ತಂತ್ರಜ್ಞಾನ, ತರಬೇತಿ ಮತ್ತು ತುರ್ತು ಪ್ರತಿಕ್ರಿಯ ವ್ಯವಸ್ಥೆಗಳ ಮೂಲಕ ನಾಗರಿಕರ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಇದೇ ವೇಳೆ, ‘ಸುದರ್ಶನ ಚಕ್ರ’ ವ್ಯವಸ್ಥೆ ಹಾಗೂ ದೇಶೀಯ ರಕ್ಷಣಾ ಉತ್ಪಾದನೆಯನ್ನು ಮತ್ತಷ್ಟು ಬಲಪಡಿಸುವುದಾಗಿ ಮೋದಿ ಹೇಳಿದ್ದಾರೆ.

ಸತತ 2ನೇ ವರ್ಷ ಕೆಂಪುಕೋಟೆ ಸ್ವಾತಂತ್ರ್ಯೋತ್ಸವಕ್ಕೆ ಖರ್ಗೆ, ರಾಹುಲ್ ಗಾಂಧಿ ಗೈರು

ಸ್ವಾತಂತ್ರ್ಯೋತ್ಸವಕ್ಕೆ ಖರ್ಗೆ, ರಾಹುಲ್ ಗೈರು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸತತ ಎರಡನೇ ವರ್ಷವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೆಂಪುಕೋಟೆಯಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಮೋದಿ ‘ಹಗ್’ ರಾಜತಾಂತ್ರಿಕತೆಗೆ ರಾಹುಲ್ ಗಾಂಧಿ ವ್ಯಂಗ್ಯ: ಇಂದಿರಾ ಗಾಂಧಿ ಫೋಟೋ ಶೇರ್‌ ಮಾಡಿ ಬಿಜೆಪಿ ತಿರುಗೇಟು

ರಾಹುಲ್ ಗಾಂಧಿ ಹೇಳಿಕೆಗೆ ನಿಶಿಕಾಂತ್ ದುಬೆ ಕೌಂಟರ್..!

ಪ್ರಧಾನಿ ನರೇಂದ್ರ ಮೋದಿ ಅವರ ‘ಹಗ್ ಡಿಪ್ಲೊಮಸಿ’ ಕುರಿತು ರಾಹುಲ್ ಗಾಂಧಿ ವ್ಯಂಗ್ಯವಾಡಿದ ಬೆನ್ನಲ್ಲೇ ಬಿಜೆಪಿ ಸಂಸದ ನಿಶಿಕಾಂತ್ ದುಬೆ ತಿರುಗೇಟು ನೀಡಿದ್ದಾರೆ. ಇಂದಿರಾ ಗಾಂಧಿ ಅವರ ವಿದೇಶಿ ನಾಯಕರೊಂದಿಗಿನ ಹಳೆಯ ಫೋಟೋಗಳು ಹಾಗೂ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮೋದಿ ಅವರನ್ನು ಅಪ್ಪಿಕೊಂಡಿದ್ದ ಚಿತ್ರವನ್ನು ಹಂಚಿಕೊಂಡು ದುಬೆ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಹೇಳಿಕೆ ವಿರುದ್ಧ ಹಲವು ಬಿಜೆಪಿ ನಾಯಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

80ನೇ ಸ್ವಾತಂತ್ರ್ಯೋತ್ಸವಕ್ಕೆ ದೆಹಲಿ ಸಜ್ಜು: ಕೆಂಪುಕೋಟೆಯಲ್ಲಿ ಅದ್ಧೂರಿ ಸಮಾರಂಭ

ಕೆಂಪುಕೋಟೆಯಲ್ಲಿ ರಾಷ್ಟ್ರದ ಸಂಭ್ರಮಕ್ಕೆ ಸಜ್ಜಾದ ದೆಹಲಿ

ಆಗಸ್ಟ್ 15ರಂದು ನಡೆಯಲಿರುವ 80ನೇ ಸ್ವಾತಂತ್ರ್ಯೋತ್ಸವದ ಪ್ರಮುಖ ಸಮಾರಂಭಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಸಜ್ಜಾಗಿದೆ. ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಬಾರಿ ಸಂಪೂರ್ಣ ‘ವಂದೇ ಮಾತರಂ’ ಗಾಯನವೂ ವಿಶೇಷ ಆಕರ್ಷಣೆಯಾಗಲಿದೆ.

ಆನ್‌ಲೈನ್‌ ಗೇಮಿಂಗ್‌ನಲ್ಲಿ 3 ಲಕ್ಷ ರೂ. ಕಳೆದುಕೊಂಡ  ಬಾಲಕ: ಮುಂದೆ ನಡೆದಿದ್ದು ಕೇಳಿದ್ರೆ ಶಾಕ್‌ ಆಗ್ತೀರಾ!

ಗೇಮಿಂಗ್ ಸಾಲಕ್ಕೆ ಬಾಲಕನ ಹೈಟೆಕ್ ನಾಟಕ..!

ಆನ್‌ಲೈನ್ ಗೇಮಿಂಗ್‌ನಲ್ಲಿ ಸುಮಾರು ₹3 ಲಕ್ಷ ಕಳೆದುಕೊಂಡ 11ನೇ ತರಗತಿಯ ವಿದ್ಯಾರ್ಥಿಯೊಬ್ಬ ಸಾಲ ತೀರಿಸಲು ತನ್ನದೇ ಅಪಹರಣದ ನಕಲಿ ಕಥೆ ಸೃಷ್ಟಿಸಿ ತಂದೆಯಿಂದ ₹2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ಎಐ ತಂತ್ರಜ್ಞಾನ ಬಳಸಿ ಗಾಯಗೊಂಡಿರುವಂತೆ ನಕಲಿ ಫೋಟೋ ಸೃಷ್ಟಿಸಿ ತಂದೆಗೆ ಕಳುಹಿಸಿದ್ದ ಬಾಲಕ, ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬಾಲಕನನ್ನು ಸ್ನೇಹಿತನ ಮನೆಯಲ್ಲಿ ಪತ್ತೆಹಚ್ಚಿದ್ದಾರೆ.

ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ವೀಕ್ಷಿಸಬೇಕೆ? ಟಿಕೆಟ್‌ ಬುಕ್‌ ಮಾಡೋದು ಹೇಗೆ? ಇಲ್ಲಿದೆ ಡಿಟೇಲ್ಸ್‌

80ನೇ ಸ್ವಾತಂತ್ರ್ಯೋತ್ಸವಕ್ಕೆ ಕ್ಷಣಗಣನೆ: ಅಲಂಕೃತಗೊಂಡ ಕೆಂಪುಕೋಟೆ

Independence Day 2026: ಆಗಸ್ಟ್ 15ರಂದು ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ದೇಶದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ರಾಷ್ಟ್ರಧ್ವಜಾರೋಹಣ, ಪ್ರಧಾನಮಂತ್ರಿಯವರ ಭಾಷಣ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳು ನಡೆಯಲಿದ್ದು, ಈ ಬಾರಿ ‘ವಂದೇ ಮಾತರಂ’ ಅನ್ನು ಸಂಪೂರ್ಣವಾಗಿ ಹಾಡುವುದು ವಿಶೇಷ ಆಕರ್ಷಣೆಯಾಗಲಿದೆ. ಸಮಾರಂಭದಲ್ಲಿ ಭಾಗವಹಿಸಲು ಬಯಸುವವರಿಗೆ ಪರೇಡ್ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ, ಟಿಕೆಟ್ ದರ, ಪ್ರವೇಶಕ್ಕೆ ಅಗತ್ಯವಿರುವ ಗುರುತಿನ ದಾಖಲೆಗಳು, ಭದ್ರತಾ ನಿಯಮಗಳು, ನಿಷೇಧಿತ ವಸ್ತುಗಳು ಹಾಗೂ ಆಗಸ್ಟ್ 15ರಂದು ದೆಹಲಿ ಮೆಟ್ರೋ ಸಂಚಾರದ ಸಮಯ ಸೇರಿದಂತೆ ಹಲವು ಪ್ರಮುಖ ಮಾಹಿತಿಗಳು ಇಲ್ಲಿವೆ.

ಉತ್ತರಾಖಂಡದಲ್ಲಿ ಜಲವಿದ್ಯುತ್ ಸುರಂಗ ಕುಸಿತ: 16 ಕಾರ್ಮಿಕರ ರಕ್ಷಣೆ, ಇನ್ನೂ ಕೆಲವರು ಸಿಲುಕಿರುವ ಶಂಕೆ

ಉತ್ತರಾಖಂಡದಲ್ಲಿ ಜಲವಿದ್ಯುತ್ ಸುರಂಗ ಕುಸಿದು ಭಾರಿ ದುರಂತ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಯಾಪುರ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಟಿಹೆಚ್‌ಡಿಸಿ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಮಣ್ಣು, ಕಲ್ಲು ಮತ್ತು ನೀರು ನುಗ್ಗಿ ಅವಘಡ ಸಂಭವಿಸಿದೆ. ಸುರಂಗದಲ್ಲಿದ್ದ 16 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಇನ್ನೂ ಇಬ್ಬರು-ಮೂವರು ಕಾರ್ಮಿಕರು ಸಿಲುಕಿರುವ ಶಂಕೆ ಇದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನೆ, ಐಟಿಬಿಪಿ, ಸಿಐಎಸ್‌ಎಫ್ ಹಾಗೂ ಸ್ಥಳೀಯ ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪರಿಸ್ಥಿತಿಯನ್ನು ನಿಗಾ ವಹಿಸಿದ್ದು, ಸಿಲುಕಿರುವವರನ್ನು ಸುರಕ್ಷಿತವಾಗಿ ರಕ್ಷಿಸುವುದು ಸರ್ಕಾರದ ಮೊದಲ ಆದ್ಯತೆ ಎಂದಿದ್ದಾರೆ.

ಎಐಯ ಕರಾಳ ಮುಖ ಡೀಪ್‌ಫೇಕ್: ಬಲಿಯಾಗದಿರಲು ಈ ಟಿಪ್ಸ್‌ ಫಾಲೋ ಮಾಡಿ

ಎಐ ಡೀಪ್‌ಫೇಕ್‌ಗಳ ಬಗ್ಗೆ ಎಚ್ಚರ

Deepfakes: ಎಐ ತಂತ್ರಜ್ಞಾನದ ದುರ್ಬಳಕೆಯಿಂದ ಡೀಪ್‌ಫೇಕ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಡಿಯೊ, ಆಡಿಯೊ ಮತ್ತು ಫೋಟೊಗಳನ್ನು ಪರಿಶೀಲಿಸದೆ ನಂಬಬಾರದು ಎಂದು ಸಿಬಿಐ ಹಾಗೂ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಎಚ್ಚರಿಸಿದೆ. ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು, ತುರ್ತು ಹಣ ವರ್ಗಾವಣೆ ತಪ್ಪಿಸುವುದು ಹಾಗೂ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಪರಿಶೀಲಿಸುವುದು ಅಗತ್ಯ. ವಂಚನೆಗೆ ಒಳಗಾದರೆ ತಕ್ಷಣ 1930ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು.

ಕೇರಳಂ ಪಿಎಸ್‌ಸಿಯಲ್ಲಿಯೂ ಭಾರಿ ಅಕ್ರಮ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಸತೀಶನ್

ಕೇರಳಂ ಪಿಎಸ್‌ಸಿಯಲ್ಲಿ ಗಂಭೀರ ಅಕ್ರಮ

VD Satheesan: ಕೇರಳಂ ಪಿಎಸ್‌ಸಿ ಪರೀಕ್ಷೆ ಮತ್ತು ಸರ್ಕಾರಿ ನೇಮಕಾತಿಗಳಲ್ಲಿನ ಅಕ್ರಮಗಳ ಕುರಿತು ಕ್ರೈಂ ಬ್ರಾಂಚ್ ತನಿಖೆ ನಡೆಯುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ವಿ.ಡಿ. ಸತೀಶನ್ ಎಚ್ಚರಿಸಿದ್ದಾರೆ. ಎಲ್‌ಪಿಎಸ್‌ಟಿ ನೇಮಕಾತಿ, ಶಬರಿಮಲೆ ತುಪ್ಪ ಪೂರೈಕೆ ಅಕ್ರಮ ಹಾಗೂ ಮೆಡಿಸೆಪ್ ಯೋಜನೆ ಕುರಿತೂ ಅವರು ಪ್ರತಿಕ್ರಿಯಿಸಿದ್ದಾರೆ.

ಇರಾನ್-ಅಮೆರಿಕ ಯುದ್ಧದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ: ನರೇಂದ್ರ ಮೋದಿ ಸರ್ಕಾರಕ್ಕೆ ರಾಜತಾಂತ್ರಿಕ ಹಿನ್ನಡೆ ಎಂದ ರಾಹುಲ್ ಗಾಂಧಿ

ಇರಾನ್-ಅಮೆರಿಕ ಸಂಘರ್ಷದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ

Rahul Gandhi: ಇರಾನ್-ಅಮೆರಿಕ ಸಂಘರ್ಷದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿರುವುದನ್ನು ಉಲ್ಲೇಖಿಸಿ, ಮೋದಿ ಸರ್ಕಾರದ ವಿದೇಶಾಂಗ ನೀತಿ ವಿಫಲವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪಿಸುವ ಅವಕಾಶವಿದ್ದರೂ ಅದನ್ನು ಕಳೆದುಕೊಂಡಿದೆ ಎಂದು ಅವರು ಟೀಕಿಸಿದ್ದಾರೆ. ಚೀನಾ ಗಡಿ ವಿವಾದ, ಜಿಎಸ್‌ಟಿ, ನೋಟು ರದ್ದತಿ ಹಾಗೂ ಕೇಂದ್ರ ಸರ್ಕಾರದ ಆಂತರಿಕ ನೀತಿಗಳ ಬಗ್ಗೆಯೂ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ರ‍್ಯಾಲಿ ಬಳಿಕ ರಾಮಲೀಲಾ ಮೈದಾನ 'ಶುದ್ಧೀಕರಣ': ಸಂಸತ್‌ ಅಂಗಳಕ್ಕೆ ತಲುಪಿದ ವಿವಾದ

ರಾಮಲೀಲಾ ಮೈದಾನ ‘ಶುದ್ಧೀಕರಣ’ ವಿವಾದ: ಖರ್ಗೆ ಕೆಂಡಾಮಂಡಲ

Mallikarjun Kharge: ಉತ್ತರಾಖಂಡದ ಹಲ್ದ್ವಾನಿ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ರ‍್ಯಾಲಿಯ ಬಳಿಕ ನಡೆದ ‘ಶುದ್ಧೀಕರಣ’ ಹವನ ವಿವಾದಕ್ಕೆ ಕಾರಣವಾಗಿದೆ. ಘಟನೆ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ, ಇದರಿಂದ ಅಸ್ಪೃಶ್ಯತೆಯ ನೋವು ಮತ್ತು ಅವಮಾನ ಅನುಭವವಾಗಿದೆ ಎಂದು ಆರೋಪಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದರಲ್ಲಿ ಬಿಜೆಪಿ ಸದಸ್ಯರು ಪಾಲ್ಗೊಂಡಿಲ್ಲ ಎಂದು ಪಕ್ಷ ಸ್ಪಷ್ಟಪಡಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ.

ಇಂದಿನಿಂದ ಶ್ರಾವಣ ಮಾಸ: ನಾಗರ ಪಂಚಮಿಯಿಂದ ಜನ್ಮಾಷ್ಟಮಿವರೆಗೆ, ಈ ತಿಂಗಳಲ್ಲಿ ಬರುವ ಹಬ್ಬಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಇಂದಿನಿಂದ ಶ್ರಾವಣ ವೈಭವ: ಮನೆ-ಮನೆಗಳಲ್ಲಿ ಹಬ್ಬದ ಸಂಭ್ರಮ

Shravana Masam 2026: ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗುವ ಶ್ರಾವಣ ಮಾಸಕ್ಕೆ ಇಂದು ಚಾಲನೆ ದೊರೆತಿದೆ. ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಈ ಮಾಸದಲ್ಲಿ ಶಿವಪೂಜೆ, ನಾಗರ ಪಂಚಮಿ, ವರಮಹಾಲಕ್ಷ್ಮೀ ವ್ರತ, ರಕ್ಷಾ ಬಂಧನ, ಶ್ರೀಕೃಷ್ಣ ಜನ್ಮಾಷ್ಟಮಿ ಸೇರಿಹಲವು ಪ್ರಮುಖ ಹಬ್ಬಗಳು ಹಾಗೂ ವ್ರತಗಳನ್ನು ಈ ತಿಂಗಳಲ್ಲಿ ಆಚರಿಸಲಾಗುತ್ತದೆ.

ಪಾಕ್ ಸೇನೆಯಿಂದ ಬಲೂಚಿಸ್ತಾನದ ಮೇಲೆ  ಭೀಕರ ಏರ್‌ಸ್ಟ್ರೈಕ್: 9 ಮಕ್ಕಳು ಸೇರಿ 28 ಜನ ದುರ್ಮರಣ

ಪಾಕ್ ಸೇನೆಯಿಂದ ಬಲೂಚಿಸ್ತಾನದ ಮೇಲೆ ಭೀಕರ ಏರ್‌ಸ್ಟ್ರೈಕ್

ಪಾಕಿಸ್ತಾನದ ಬಲೂಚಿಸ್ತಾನದ ಸುರಾಬ್ ಜಿಲ್ಲೆಯಲ್ಲಿ ಪಾಕ್ ಸೇನೆ ನಡೆಸಿದೆ ಎನ್ನಲಾದ ವೈಮಾನಿಕ ದಾಳಿಯಲ್ಲಿ 9 ಮಕ್ಕಳು ಹಾಗೂ 7 ಮಹಿಳೆಯರು ಸೇರಿದಂತೆ 28 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ವರದಿಗಳು ಆರೋಪಿಸಿವೆ. 17 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಘಟನೆಯ ಕುರಿತು ಸ್ವತಂತ್ರವಾಗಿ ಪರಿಶೀಲಿಸಬಹುದಾದ ಮಾಹಿತಿ ಸದ್ಯ ಸೀಮಿತವಾಗಿದೆ

ಜಂತರ್ ಮಂತರ್‌ನಲ್ಲಿ ಸೀಸನ್ 2 ಹೋರಾಟ ಶೀಘ್ರದಲ್ಲೇ ಪ್ರಾರಂಭ: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಸುಳಿವು

ಜಂತರ್ ಮಂತರ್‌ನಲ್ಲಿ ಸೀಸನ್ 2 ಹೋರಾಟ ಶೀಘ್ರದಲ್ಲೇ ಆರಂಭ

ನೀಟ್ ಪೇಪರ್ ಲೀಕ್ ಪ್ರಕರಣದ ವಿರುದ್ಧ 36 ದಿನಗಳ ಜಂತರ್ ಮಂತರ್ ಪ್ರತಿಭಟನೆ ನಡೆಸಿದ್ದ ಕಾಕ್ರೋಚ್ ಜನತಾ ಪಾರ್ಟಿ ಇದೀಗ ‘ಜಂತರ್ ಮಂತರ್ ಸೀಸನ್ 2’ ಆರಂಭಿಸುವುದಾಗಿ ಘೋಷಿಸಿದೆ. ದೆಹಲಿಯಲ್ಲಿ ಕಾರ್ಯಕರ್ತರ ಸಭೆಗೆ ಹಾಲ್ ನೀಡದಿರುವುದಕ್ಕೆ ಬಿಜೆಪಿ ಒತ್ತಡ ಕಾರಣ ಎಂದು ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ. ಆಗಸ್ಟ್‌ 15ರಿಂದ ದೇಶಾದ್ಯಂತ ಜನಪ್ರಿಯ ಆಲಿಕೆ ಪ್ರವಾಸ ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದಾಗಿ ತಿಳಿಸಿದ್ದಾರೆ.

Loading...