ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Sushmitha Jain

[email protected]

Articles
ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗು ಹೊಡೆದುರುಳಿಸಲು ಡೊನಾಲ್ಡ್‌ ಟ್ರಂಪ್ ಆದೇಶ

ಹೊರ್ಮುಜ್‌ನಲ್ಲಿ ಇರಾನ್ ದೋಣಿಗಳಿಗೆ ಶೂಟ್‌ ಮಾಡಲು ಟ್ರಂಪ್‌ ಆದೇಶ

ಹೊರ್ಮುಜ್ ಜಲಸಂಧಿಯಲ್ಲಿ ಬಾಂಬ್‌ ಇಡುತ್ತಿರುವ ಇರಾನ್‌ ಹಡಗು ಕಂಡ ತಕ್ಷಣ ಗುಂಡಿಕ್ಕಿ ಹೊಡೆದುರುಳಿಸಲು ಅಮೆರಿಕ ನೌಕಾಪಡೆಗೆ ಡೊನಾಲ್ಡ್‌ ಟ್ರಂಪ್ ಆದೇಶ ನೀಡಿದ್ದಾರೆ. ಇದರಿಂದ ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ವಿಶ್ವದ ಒಟ್ಟು ತೈಲ ವ್ಯಾಪಾರದ ಸುಮಾರು ಐದನೇ ಒಂದು ಭಾಗದಷ್ಟು ಸಾಗಣೆಯಾಗುವ ಈ ಆಯಕಟ್ಟಿನ ಜಲಮಾರ್ಗದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿದೆ.

"ನನ್ನಲ್ಲಿ ದೈವಿಕ ಶಕ್ತಿಯಿದೆ, ನೀನು ವಿರೋಧಿಸಲು ಸಾಧ್ಯವಿಲ್ಲ": ನಾಸಿಕ್‌ನ ಮತ್ತೊಬ್ಬ ಸ್ವಘೋಷಿತ ದೇವ ಮಾನವ ಭೋಂದು ಬಾಬಾ ವಿರುದ್ಧ ಅತ್ಯಾಚಾರ ಪ್ರಕರಣ

ಭೋಂದು ಬಾಬಾ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಆಧ್ಯಾತ್ಮಿಕ ಚಿಕಿತ್ಸೆಯ ಹೆಸರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಮಹಾರಾಷ್ಟ್ರದ ನಾಸಿಕ್‌ನ ಸ್ವಯಂಘೋಷಿತ ದೇವಮಾನವನ ಭೋಂದು ಬಾಬಾ ವಿರುದ್ಧ ಪ್ರಕರಣ ದಾಖಲಾಗಿದೆ. ಮಹೇಶ್‌ಗಿರಿ ಬಾಬಾ ಅಲಿಯಾಸ್ ಮಹೇಶ್ ದಿಲೀಪ್ ಕಾಕ್ಡೆ ಎಂದೂ ಕರೆಯಲ್ಪಡುವ ಈತನ ವಿರುದ್ಧ ರಾಜ್ಯದ ಮಾಟಮಂತ್ರ ವಿರೋಧಿ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.

ಮರಿ ಕಳೆದುಕೊಂಡು ದುಃಖದಲ್ಲಿ 3 ತಿಂಗಳ ಹಸುಗೂಸನ್ನು ಒತ್ತೆ ಇರಿಸಿಕೊಂಡ ಮಂಗ!

ಮರಿ ಕಳೆದುಕೊಂಡು ದುಃಖದಲ್ಲಿ 3 ತಿಂಗಳ ಹಸುಗೂಸನ್ನು ಒತ್ತೆ ಇರಿಸಿಕೊಂಡ ಮಂಗ

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಚಾರ್ತಾವಾಲ್ ಪಟ್ಟಣದಲ್ಲಿ ಹೆಣ್ಣು ಮಂಗವೊಂದು 3 ತಿಂಗಳ ಹಸುಗೂಸನ್ನು ಸುಮಾರು ಎರಡು ಗಂಟೆಗಳ ಕಾಲ ಮನೆಯೊಳಗೆ ಒತ್ತೆ ಇಟ್ಟುಕೊಂಡ ಘಟನೆ ಆತಂಕ ಹುಟ್ಟಿಸಿತು. ಮಂಗ ದಾಳಿ ಮಾಡದೆ ಮಗುವಿನೊಂದಿಗೆ ಮಮತೆಯಿಂದ ವರ್ತಿಸಿತು. ಸ್ಥಳೀಯರು ಪ್ರಯತ್ನಿಸಿದರೂ ಮಂಗ ಮಗುವನ್ನು ಬಿಡಲಿಲ್ಲ.

ಇರಾನ್ ವಿರುದ್ಧ ಯುದ್ಧ ಮಾಡಲು ಮೂವರು ಅಮೆರಿಕ ಮಾಜಿ ಅಧ್ಯಕ್ಷರ ಬಳಿ ಬೇಡಿಕೆ ಇಟ್ಟಿದ್ದ ನೆತನ್ಯಾಹು!  ಅಧಿಕಾರಿ ಹೇಳಿದ್ದೇನು?

ಇರಾನ್ ವಿರುದ್ಧ ಯುದ್ಧ ಮಾಡಲು ಅಮೆರಿಕ ಮಾಜಿ ಅಧ್ಯಕ್ಷರ ಬಳಿ ಬೇಡಿಕೆ?

ಜಾನ್ ಕೆರ್ರಿ ಹೇಳುವಂತೆ, ನೆತನ್ಯಾಹು ಇರಾನ್ ವಿರುದ್ಧ ಯುದ್ಧ ಪ್ರಸ್ತಾಪವನ್ನು ಹಿಂದಿನ ಅಮೆರಿಕ ಅಧ್ಯಕ್ಷರಾದ ಒಬಾಮಾ, ಬುಷ್ ಮತ್ತು ಬೈಡನ್ ಎದುರು ಇಟ್ಟರೂ, ಶಾಂತಿಯುತ ಮಾರ್ಗಗಳಿಗೆ ಆದ್ಯತೆ ನೀಡಿ ಅವರು ತಿರಸ್ಕರಿಸಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಕಾಲದಲ್ಲಿ ಈ ವಿಚಾರಕ್ಕೆ ಹಸಿರು ನಿಶಾನೆ ಸಿಕ್ಕಿದ್ದಾಗಿ ವರದಿಗಳು ಹೇಳುತ್ತವೆ. ಇತ್ತೀಚೆಗೆ ಜೆಡಿ ವ್ಯಾನ್ಸ್ ಮತ್ತು ನೆತನ್ಯಾಹು ನಡುವೆ ಯುದ್ಧದ ಬಗ್ಗೆ ತೀವ್ರ ಭಿನ್ನಾಭಿಪ್ರಾಯವೂ ಹೊರಬಂದಿದೆ.

ಐಆರ್‌ಎಸ್ ಅಧಿಕಾರಿಯ ಪುತ್ರಿ ಅತ್ಯಾಚಾರ, ಕೊಲೆ;  2.5 ಲಕ್ಷ ರೂ. ದೋಚಿದ ಆರೋಪಿ, ತನಿಖೆಯಲ್ಲಿ ಬಯಲಾಗಿದ್ದೇನು?

ದಕ್ಷಿಣ ದೆಹಲಿಯಲ್ಲಿ ಭೀಕರ ಕೃತ್ಯ; ಐಆರ್‌ಎಸ್ ಅಧಿಕಾರಿ ಪುತ್ರಿಯ ಹತ್ಯೆ

ದಕ್ಷಿಣ ದೆಹಲಿಯಲ್ಲಿ 19 ವರ್ಷದ ಹಳೆಯ ಮನೆ ಕೆಲಸಗಾರ ರಾಹುಲ್ ಮೀನಾ, ಐಆರ್‌ಎಸ್ ಅಧಿಕಾರಿಯ 22 ವರ್ಷದ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿ ₹2.5 ಲಕ್ಷ ಹಣ ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ. ಆನ್‌ಲೈನ್ ಗೇಮ್ ವ್ಯಸನದಿಂದ ಸಾಲ ಮಾಡಿದ್ದ ಕಾರಣದಿಂದ ಕೆಲಸದಿಂದ ವಜಾಗೊಂಡಿದ್ದ ಎಂದು ಇತರೆ ಸಿಬ್ಬಂದಿಗಳು ಪೊಲೀಸರಿಗೆ ತಿಳಿಸಿದ್ದಾರೆ.

Vastu tips: ಶೌಚಾಲಯ ಮನೆಯ ಯಾವ ದಿಕ್ಕಿನಲ್ಲಿ ಇರಬೇಕು? ವಾಸ್ತು ನಿಯಮ ತಪ್ಪಿದ್ರೆ ಸಮಸ್ಯೆಗಳು ಕಾಡೋದು ಖಂಡಿತಾ!

ಶೌಚಾಲಯ ಮನೆಯ ಈ ದಿಕ್ಕಿನಲ್ಲಿ ಇದ್ದರೆ ಶುಭ!

ವಾಸ್ತುಶಾಸ್ತ್ರದ ಪ್ರಕಾರ ಶೌಚಾಲಯದ ಸರಿಯಾದ ದಿಕ್ಕು ಮತ್ತು ವಿನ್ಯಾಸವು ಮನೆಯ ಧನಾತ್ಮಕ ಶಕ್ತಿ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗೆ ಪರಿಣಾಮ ಬೀರುತ್ತದೆ. ಪಶ್ಚಿಮ ಅಥವಾ ವಾಯುವ್ಯ ದಿಕ್ಕು ಉತ್ತಮವಾಗಿದ್ದು, ತಪ್ಪಾದ ದಿಕ್ಕಿನಲ್ಲಿ ನಿರ್ಮಿಸಿದರೆ ನಕಾರಾತ್ಮಕ ಶಕ್ತಿ, ಅನಾರೋಗ್ಯ ಮತ್ತು ಅಶಾಂತಿ ಹೆಚ್ಚಾಗಬಹುದು.

ಸುತ್ತುಗೋಡೆ ಇಲ್ಲ, ಶೌಚಾಲಯವಿಲ್ಲ: ಕಾರಣ ನೀಡಿ ಶಾಲೆಗೆ ವಿದ್ಯಾರ್ಥಿನಿಯರ ಪ್ರವೇಶ ನಿರಾಕರಣೆ; ಲಿಂಗ ತಾರತಮ್ಯದ ಬಗ್ಗೆ ಆಕ್ರೋಶ

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಶೌಚಾಲಯವೇ ಅಡ್ಡಿ!

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಸರ್ಕಾರಿ ಅನುದಾನಿತ ಕಾಲೇಜಿನಲ್ಲಿ ಶೌಚಾಲಯ ಮತ್ತು ಸುತ್ತುಗೋಡೆ ಇಲ್ಲ ಎಂಬ ಕಾರಣ ನೀಡಿ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿದೆ. ಈ ಕ್ರಮ ಲಿಂಗ ತಾರತಮ್ಯ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಣದ ಹಕ್ಕು ಉಲ್ಲಂಘನೆ ಆರೋಪದಡಿ ತನಿಖೆ ಆರಂಭವಾಗಿದೆ.

ʼ'ಇಲ್ಲಿಂದ ಟ್ರಾಫಿಕ್ ತೆರವುಗೊಳಿಸಿʼ': ಮುಂಬೈ ರಸ್ತೆಯಲ್ಲಿ ಸಚಿವ ಗಿರೀಶ್ ಮಹಾಜನ್ ವಿರುದ್ಧ ಗುಡುಗಿದ ಮಹಿಳೆ

“ಮೊದಲು ಟ್ರಾಫಿಕ್ ಕ್ಲಿಯರ್ ಮಾಡಿ”: ಸಚಿವರ ವಿರುದ್ಧ ಮಹಿಳೆಯ ಆಕ್ರೋಶ

Viral Video: ಮಹಾರಾಷ್ಟ್ರದ ಮುಂಬೈಯ ವರ್ಲಿಯಲ್ಲಿ ರಾಜಕೀಯ ರ‍್ಯಾಲಿಯಿಂದ ಉಂಟಾದ ಭೀಕರ ಟ್ರಾಫಿಕ್ ಜಾಮ್‌ನಿಂದ ಬೇಸತ್ತ ಮಹಿಳೆಯೊಬ್ಬರು ಸಚಿವ ಗಿರೀಶ್ ಮಹಾಜನ್ ಅವರನ್ನು ರಸ್ತೆಯಲ್ಲೇ ತರಾಟೆಗೆ ತೆಗೆದುಕೊಂಡ ವಿಡಿಯೊ ವೈರಲ್ ಆಗಿದೆ. ಸಾಮಾನ್ಯ ನಾಗರಿಕರ ಪರವಾಗಿ ಧ್ವನಿ ಎತ್ತಿದ ಮಹಿಳೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಶಾಂತಿ ಮಾತುಕತೆ ಇರಾನ್ ಅಸಹಕಾರ: ಇಸ್ಲಾಮಾಬಾದ್ ಪ್ರವಾಸ ಮುಂದೂಡಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್

ಶಾಂತಿ ಮಾತುಕತೆಗೆ ಬ್ರೇಕ್: ಅಮೆರಿಕ–ಇರಾನ್ ಉದ್ವಿಗ್ನತೆ ಮತ್ತಷ್ಟು ತೀವ್ರ

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ತಗ್ಗಿಸಲು ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಶಾಂತಿ ಮಾತುಕತೆ ಅನಿಶ್ಚಿತವಾಗಿ ಮುಂದುವರಿದಿದೆ. ಇರಾನ್ ಸ್ಪಷ್ಟ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಇಸ್ಲಾಮಾಬಾದ್ ಪ್ರವಾಸ ಮುಂದೂಡಲಾಗಿದೆ. ಅಮೆರಿಕದ ನಿಲುವನ್ನು ಇರಾನ್ ಟೀಕಿಸಿದ್ದು, ಹೊರ್ಮುಜ್ ಜಲಸಂಧಿಯ ನೌಕಾ ಚಟುವಟಿಕೆಗಳನ್ನು ಗಂಭೀರವಾಗಿ ವಿರೋಧಿಸಿದೆ. ಗಡುವು ಸಮೀಪಿಸುತ್ತಿದ್ದರೂ ಮಾತುಕತೆ ಸ್ಪಷ್ಟತೆ ಇಲ್ಲದಿರುವುದು ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಪಹಲ್ಗಾಮ್ ದಾಳಿಗೆ 1 ವರ್ಷ: ಕಣಿವೆಯನ್ನು ಬೆಚ್ಚಿ ಬೀಳಿಸಿದ ಆ ಕರಾಳ ದಿನದ ನೆನಪು

ಪಹಲ್ಗಾಮ್ ಹತ್ಯಾಕಾಂಡಕ್ಕೆ ಒಂದು ವರ್ಷ

Pahalgam Attack: ಮಿನಿ ಸ್ವಿಟ್ಜರ್ಲೆಂಡ್ ಎಂದೇ ಕರೆಯಲ್ಪಡುವ ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ನಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಇಂದು ಒಂದು ವರ್ಷ. 26 ಅಮಾಯಕರು ಬಲಿಯಾದ ಈ ದಾಳಿಯು ದೇಶವನ್ನು ನಡುಗಿಸಿತ್ತು. ನಂತರ ಭದ್ರತಾ ಪಡೆಗಳು ಉಗ್ರರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಗಳನ್ನು ಹೊಡೆದುರುಳಿಸಲಾಗಿದೆ. ಈಗ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳುತ್ತಿದ್ದರೂ ಬಲಿಯಾದವರ ಕುಟುಂಬಗಳ ನೋವು ಇನ್ನೂ ಮಸುಕಾಗಿಲ್ಲ.

Pahalgam Attack: ಪ್ರಾಣ ಒತ್ತೆ ಇಟ್ಟು 11 ಪ್ರವಾಸಿಗರ ಜೀವ ಉಳಿಸಿದ ಕಾಶ್ಮೀರಿ ಯುವಕನ ಶೌರ್ಯದ ಕಥೆ ಇದು

ಪಹಲ್ಗಾಮ್ ದಾಳಿ: 11 ಪ್ರವಾಸಿಗರ ಜೀವ ಉಳಿಸಿದ ನಜಾಕತ್ ಅಲಿ

ಪಹಲ್ಗಾಮ್ ದಾಳಿಯ ಸಮಯದಲ್ಲಿ ನಜಾಕತ್ ಅಲಿ ಎಂಬ ಯುವಕ ತನ್ನ ಪ್ರಾಣವನ್ನು ಪಣಕ್ಕಿಟ್ಟು ಛತ್ತೀಸ್‌ಗಢದಿಂದ ಬಂದಿದ್ದ 11 ಪ್ರವಾಸಿಗರನ್ನು ರಕ್ಷಿಸಿ ನಿಜವಾದ ಹೀರೋ ಎನಿಸಿಕೊಂಡಿದ್ದಾರೆ. ದಟ್ಟ ಅರಣ್ಯದ ಮೂಲಕ ಸುಮಾರು 7 ಕಿ.ಮೀ. ನಡೆದು ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದ ನಜಾಕತ್ ಅಲಿ ಮತ್ತೆ ಸಾವಿನ ಅಪಾಯವನ್ನು ಲೆಕ್ಕಿಸದೆ ಕಾಡಿನಲ್ಲಿ ಉಳಿದಿದ್ದ ಇಬ್ಬರು ಮಹಿಳೆಯರನ್ನೂ ರಕ್ಷಿಸಿದರು. ಈ ಮಾನವೀಯ ಕೃತ್ಯಕ್ಕಾಗಿ ಅವರನ್ನು ಛತ್ತೀಸ್‌ಗಢ ಸರ್ಕಾರ ಗೌರವಿಸಿದ್ದು, ಅವರ ಧೈರ್ಯ ಕಾಶ್ಮೀರದಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಭರವಸೆ ನೀಡಿದೆ.

ಪಹಲ್ಗಾಮ್ ದಾಳಿಗೆ 1 ವರ್ಷ: ಯಾವುದೇ ರೀತಿಯ ಭಯೋತ್ಪಾದನೆಗೆ ಭಾರತ ತಲೆಬಾಗಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ

ಪಹಲ್ಗಾಮ್ ದಾಳಿಗೆ ವರ್ಷ: ಭಯೋತ್ಪಾದನೆಗೆ ಭಾರತ ತಲೆಬಾಗಲ್ಲ ಎಂದ ಮೋದಿ

ಪಹಲ್ಗಾಮ್ ಭಯೋತ್ಪಾದನ ದಾಳಿಗೆ 1 ವರ್ಷವಾದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಭಾರತವು ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡ ಹಿನ್ನೆಲೆ, ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ತಾಣಗಳ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಸಂತ್ರಸ್ತರ ಸ್ಮರಣಾರ್ಥ ಸ್ಮಾರಕ ನಿರ್ಮಾಣವಾಗಿದೆ.

ಪಹಲ್ಗಾಮ್ ದಾಳಿಗೆ ಒಂದು ವರ್ಷ: ಇಡೀ ದೇಶವನ್ನೇ ಭಾವುಕವನ್ನಾಗಿಸಿದ ಆ ಒಂದು ಭಾವಚಿತ್ರ

ಪಹಲ್ಗಾಮ್ ದಾಳಿಗೆ ಒಂದು ವರ್ಷ; ಈಗಲೂ ಕಾಡುತ್ತಿದೆ ಆ ಫೋಟೊ

ಪಹಲ್ಗಾಮ್‌ನ ಬೈಸರನ್‌ನಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಇಂದು ಒಂದು ವರ್ಷ. 26 ಅಮಾಯಕರು ಬಲಿಯಾದ ಈ ಘಟನೆಯಲ್ಲಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿಯ ಭಾವಚಿತ್ರ ಇಡೀ ದೇಶದ ದುಃಖದ ಸಂಕೇತವಾಗಿ ಉಳಿದಿದೆ. ನಂತರ ಭಾರತ ಆಪರೇಷನ್ ಸಿಂದೂರ್ ಮತ್ತು ಆಪರೇಷನ್ ಮಹದೇವ್ ಮೂಲಕ ಕಠಿಣ ಪ್ರತಿಕ್ರಿಯೆ ನೀಡಿದೆ. ಈಗಲೂ ಉಗ್ರರ ವಿರುದ್ಧದ ದಾಳಿ ಮುಂದುವರಿದಿದೆ.

ಪಹಲ್ಗಾಮ್‌ ದಾಳಿಗೆ ಪ್ರತೀಕಾರ; 250 ಕಿಲೋ ಮೀಟರ್ ಬೆನ್ನಟ್ಟಿ ಉಗ್ರರ ಬೇಟೆಯಾಡಿದ ಭಾರತೀಯ ಸೇನೆ

ಆಪರೇಷನ್ ಮಹದೇವ್ ಸಕ್ಸಸ್

ಪಹಲ್ಗಾಮ್ ದಾಳಿಯಲ್ಲಿ 26 ಅಮಾಯಕರನ್ನು ಹತ್ಯೆಗೈದ ಮೂವರು ಉಗ್ರರನ್ನು ಭಾರತೀಯ ಸೇನೆ 93 ದಿನಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಹೊಡೆದುರುಳಿಸಿದೆ. ಆಪರೇಷನ್ ಮಹದೇವ್ ಕಾರ್ಯಾಚರಣೆಯ ಮೂಲಕ 250 ಕಿಲೋ ಮೀಟರ್‌ಗಳಷ್ಟು ಬೆನ್ನಟ್ಟಿ ಉಗ್ರರ ಅಡಗುತಾಣ ಪತ್ತೆಹಚ್ಚಿ ಎನ್‌ಕೌಂಟರ್ ನಡೆಸಲಾಗಿದೆ.

ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ನಾಗಾ-ಕುಕಿ ಗುಂಪುಗಳ ನಡುವೆ ಭೀಕರ ಸಂಘರ್ಷ

ಮಣಿಪುರದಲ್ಲಿ ಮತ್ತೆ ಜನಾಂಗೀಯ ಸಂಘರ್ಷ

ಮಣಿಪುರದ ಸೇನಾಪತಿ ಜಿಲ್ಲೆಯ ಟಿ.ಖುಲ್ಲೆನ್ ಗ್ರಾಮದಲ್ಲಿ ನಾಗಾ ಮತ್ತು ಕುಕಿ ಸಶಸ್ತ್ರ ಗುಂಪುಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಇಬ್ಬರು ನಾಗಾ ನಾಗರಿಕರ ಹತ್ಯೆಯ ನಂತರ ಉದ್ವಿಗ್ನತೆ ಹೆಚ್ಚಿದ್ದು, ಬಂದ್, ರಸ್ತೆ ತಡೆ ಮತ್ತು ಪ್ರತಿಭಟನೆಗಳಿಂದ ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದೆ.

ಅಮೆರಿಕ-ಇರಾನ್ ಕದನ ವಿರಾಮ ನಾಳೆಗೆ ಅಂತ್ಯ: ಡೊನಾಲ್ಡ್‌ ಟ್ರಂಪ್ ಗಡುವು ವಿಸ್ತರಿಸುವರೇ ಅಥವಾ ಬಾಂಬ್ ಮಳೆ ಸುರಿಸುವರೇ? ಆತಂಕದಲ್ಲಿ ಜಗತ್ತು

ಅಮೆರಿಕ-ಇರಾನ್ ಕದನ ವಿರಾಮಕ್ಕೆ ನಾಳೆ ಅಂತ್ಯ; ಮುಂದೇನಾಗಲಿದೆ?

ಅಮೆರಿಕ-ಇರಾನ್ ಕದನ ವಿರಾಮವು ಏಪ್ರಿಲ್ 22ಕ್ಕೆ ಅಂದರೆ ನಾಳೆ ಅಂತ್ಯಗೊಳ್ಳಲಿದ್ದು, ಟ್ರಂಪ್ ಗಡುವು ವಿಸ್ತರಿಸುವ ಬದಲು ಬಾಂಬ್ ದಾಳಿ ಪುನರಾರಂಭಿಸುವ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆ ಜಾಗತಿಕ ರಾಜಕೀಯದ ಗಮನ ಸೆಳೆದಿದೆ.

ಹಾರ್ಮೊಜ್‌ನಲ್ಲಿ ಅಮೆರಿಕ ನೌಕಾ ದಿಗ್ಬಂಧನ: ಹಡಗುಗಳಿಗೆ ಗುಂಡಿನ ಎಚ್ಚರಿಕೆ ನೀಡುತ್ತಿರುವ ವಿಡಿಯೋ ಬಿಡುಗಡೆ

ಇರಾನ್ ಸುತ್ತ ಅಮೆರಿಕ ಕಠಿಣ ದಿಗ್ಬಂಧನ: ಹಡಗುಗಳ ಮೇಲೆ ಕಣ್ಗಾವಲು

ಅಮೆರಿಕವು ಇರಾನ್ ಸುತ್ತ ನೌಕಾ ದಿಗ್ಬಂಧನವನ್ನು ಇನ್ನಷ್ಟು ಕಠಿಣಗೊಳಿಸಿ, ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಸರಕು ನೌಕೆಗಳಿಗೆ ಮೆಷಿನ್ ಗನ್ ತೋರಿಸಿ ಎಚ್ಚರಿಕೆ ನೀಡುತ್ತಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹೆಲಿಕಾಪ್ಟರ್‌ನಿಂದ ಹಡಗುಗಳನ್ನು ತಪಾಸಣೆ ಮಾಡುವ ದೃಶ್ಯಗಳು ಕಾಣಿಸಿಕೊಂಡಿವೆ.

'ʼನಿಮ್ಮ ಮನೆ ತುಂಬೆಲ್ಲ ಸಗಣಿ ತುಂಬಿಸುತ್ತೇನೆʼ': ಮಗನ ಥಾರ್ ಅಪಘಾತದ ಬೆನ್ನಲ್ಲೇ ಪೊಲೀಸರಿಗೆ ಬಿಜೆಪಿ ಶಾಸಕನ ಬೆದರಿಕೆ

ಪೊಲೀಸರಿಗೆ ಬಿಜೆಪಿ ಶಾಸಕನ ಬೆದರಿಕೆ

ಮಧ್ಯ ಪ್ರದೇಶದ ಬಿಜೆಪಿ ಶಾಸಕ ಪ್ರೀತಮ್ ಲೋಧಿ ತಮ್ಮ ಮಗನ ಥಾರ್ ಅಪಘಾತ ಪ್ರಕರಣದ ತನಿಖೆಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗೆ 15 ದಿನಗಳಲ್ಲಿ ಸ್ಪಷ್ಟನೆ ನೀಡದಿದ್ದರೆ ಮನೆಗೆ ಸಗಣಿ ತುಂಬಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ನಾಸಿಕ್ ಟಿಸಿಎಸ್ ಪ್ರಕರಣ: ನಿದಾ ಖಾನ್‌ಗೆ ಮಧ್ಯಂತರ ಜಾಮೀನು ನಿರಾಕರಿಸಿದ ಕೋರ್ಟ್; ಏಪ್ರಿಲ್‌ 27ಕ್ಕೆ ವಿಚಾರಣೆ ಮುಂದೂಡಿಕೆ

ಟಿಸಿಎಸ್ ಮತಾಂತರ ಪ್ರಕರಣ: ನಿದಾ ಖಾನ್‌ಗೆ ಜಾಮೀನು ನಿರಾಕರಣೆ

ನಾಸಿಕ್ ಟಿಸಿಎಸ್ ಬಿಪಿಒ ಘಟಕದಲ್ಲಿ ನಡೆದ ಕಿರುಕುಳ ಮತ್ತು ಮತಾಂತರ ಆರೋಪದ ಪ್ರಕರಣದಲ್ಲಿ ಪ್ರಮುಖ ಆರೋಪಿ ನಿದಾ ಖಾನ್‌ಗೆ ನ್ಯಾಯಾಲಯ ಮಧ್ಯಂತರ ಜಾಮೀನು ನಿರಾಕರಿಸಿದೆ. ಅರ್ಜಿಯ ಬಗ್ಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸಲು ದೂರುದಾರರ ಪರ ವಕೀಲರಿಗೆ ಕಾಲಾವಕಾಶ ನೀಡಲಾಗಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 27ಕ್ಕೆ ನಿಗದಿಪಡಿಸಲಾಗಿದೆ.

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತ ಚಾಣಕ್ಯ ನಡೆ: ಆರ್ಥಿಕ ಸಂಬಂಧ ವೃದ್ಧಿಗೆ ದಕ್ಷಿಣ ಕೊರಿಯಾದೊಂದಿಗೆ ಮಾತುಕತೆ

ಭಾರತ–ದಕ್ಷಿಣ ಕೊರಿಯಾ ಆರ್ಥಿಕ ಸಹಕಾರಕ್ಕೆ ಹೊಸ ದಿಕ್ಕು

ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ ಮ್ಯುಂಗ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ವಾಣಿಜ್ಯ ಸಹಕಾರವನ್ನು ವಿಸ್ತರಿಸುವತ್ತ ಗಮನ ಹರಿಸಲಿದ್ದಾರೆ. ಎಂಟು ವರ್ಷಗಳ ನಂತರ ನಡೆಯುತ್ತಿರುವ ಈ ಭೇಟಿ ಮಹತ್ವ ಪಡೆದಿದೆ. ದ್ವಿಪಕ್ಷೀಯ ವ್ಯಾಪಾರವನ್ನು 2030ರೊಳಗೆ 50 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹಡಗು ನಿರ್ಮಾಣ, ಕೃತಕ ಬುದ್ಧಿಮತ್ತೆ, ಹಣಕಾಸು ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಸಾಧ್ಯತೆಗಳಿವೆ. ಮಧ್ಯಪ್ರಾಚ್ಯದ ಅಸ್ಥಿರತೆಯ ಹಿನ್ನೆಲೆಯಲ್ಲಿ ಭಾರತದಿಂದ ನ್ಯಾಫ್ತಾ ಪೂರೈಕೆಯನ್ನು ಹೆಚ್ಚಿಸಲು ಕೊರಿಯಾ ಕೋರಿದೆ.

ಅಮರಾವತಿ ಲೈಂಗಿಕ ಹಗರಣ: ಆರೋಪಿ ಅಯಾನ್ ಅಹ್ಮದ್‌ನ ಅಕ್ರಮ ಸಂಪತ್ತಿನ ಮೇಲೆ ತನಿಖಾ ಸಂಸ್ಥೆಗಳ ಕಣ್ಣು

ವೈರಲ್ ವಿಡಿಯೊದಿಂದ ಬಯಲಾಯ್ತು ಅಯಾನ್ ಬಂಡವಾಳ

ಮಹಾರಾಷ್ಟ್ರದ ಪರತ್ವಾಡಾದಲ್ಲಿ ನಡೆದ ಅಪ್ರಾಪ್ತ ಬಾಲಕಿಯರ ಲೈಂಗಿಕ ಶೋಷಣೆ ಪ್ರಕರಣದಲ್ಲಿ ಹೊಸ ಅಂಶಗಳು ಬೆಳಕಿಗೆ ಬರುತ್ತಿವೆ. ಈ ಜಾಲದ ಮುಖ್ಯ ಆರೋಪಿಯಾಗಿರುವ 19 ವರ್ಷದ ಅಯಾನ್ ಅಹ್ಮದ್‌ನ ಐಷಾರಾಮಿ ಜೀವನಶೈಲಿ ತನಿಖಾಧಿಕಾರಿಗಳ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ ಆತ ದುಬಾರಿ ಕಾರುಗಳು, ನಗದು ಮೊತ್ತಗಳು ಹಾಗೂ ಗ್ಯಾಜೆಟ್‌ಗಳನ್ನು ಪ್ರದರ್ಶಿಸಿರುವುದು ಕಂಡುಬಂದಿದೆ. ಇಷ್ಟು ಕಡಿಮೆ ವಯಸ್ಸಿನಲ್ಲಿ ಈ ಸಂಪತ್ತು ಹೇಗೆ ಬಂದಿದೆ ಎಂಬುದು ಪೊಲೀಸರ ಪ್ರಮುಖ ಪ್ರಶ್ನೆ. ಅಮರಾವತಿಯ ಫ್ಲಾಟ್ ಒಂದರಲ್ಲಿ ವಿಡಿಯೊ ಚಿತ್ರೀಕರಣ ನಡೆದಿರುವ ಶಂಕೆಯಿದೆ. ಸುಮಾರು 200ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರನ್ನು ಶೋಷಿಸಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.

ಹೊರ್ಮುಜ್‌ನಲ್ಲಿ ಭಾರತೀಯ ಹಡಗುಗಳ ಮೇಲೆ ಇರಾನ್ ಪಡೆಗಳಿಂದ ದಾಳಿ: ಆತಂಕದ ನಡುವೆಯೂ ಜಲಸಂಧಿ ದಾಟಿದ ನಮ್ಮ ದೇಶದ 'ದೇಶ್ ಗರಿಮಾ' ನೌಕೆ

ಹೊರ್ಮುಜ್ ಜಲಸಂಧಿ ದಾಟಿದ ಭಾರತದ ಹಡಗು

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಯುದ್ಧೋನ್ಮಾದದ ನಡುವೆ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಭಾರತೀಯ ವ್ಯಾಪಾರಿ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆಯೂ ‘ದೇಶ್ ಗರಿಮಾ’ ಎಂಬ ದೇಶದ ತೈಲ ಟ್ಯಾಂಕರ್ ಯಾವುದೇ ಅಡಚಣೆ ಇಲ್ಲದೆ ಸುರಕ್ಷಿತವಾಗಿ ಜಲಸಂಧಿ ದಾಟಿ ಭಾರತದತ್ತ ಹೊರಟಿದೆ. ಜಾಗತಿಕ ತೈಲ ಸಾಗಣೆಗೆ ಪ್ರಮುಖ ಮಾರ್ಗವಾದ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿರುವುದು ಇಂಧನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ.

Astro Tips: ಸೋಮವಾರ ಶಿವನ ಜೊತೆ ಈ ದೇವರನ್ನು ಪೂಜಿಸಿದರೆ ಸಿಗುತ್ತದೆ ವಿಶೇಷ ಫಲ!

ಸೋಮವಾರ ಶಿವನ ಜೊತೆ ಈ ದೇವರ ಪೂಜೆ ಶುಭ ತರುತ್ತದೆ

ಸೋಮವಾರ ಶಿವನ ಆರಾಧನೆಗೆ ಅತ್ಯಂತ ಪವಿತ್ರ ದಿನ. ಶಿವನೊಂದಿಗೆ ಚಂದ್ರದೇವ, ಗಂಗಾಮಾತೆ, ನಂದಿ, ಬಿಲ್ವಪತ್ರೆ ಮತ್ತು ಪಾರ್ವತಿ ದೇವಿಯನ್ನು ಪೂಜಿಸಿದರೆ ಮಾನಸಿಕ ಶಾಂತಿ, ದಾಂಪತ್ಯ ಸುಖ ಹಾಗೂ ಇಷ್ಟಾರ್ಥ ಸಿದ್ಧಿ ಲಭಿಸುತ್ತದೆ. ಹಾಗಾದ್ರೆ ಸೋಮವಾರ ಶಿವನೊಂದಿಗೆ ಯಾವ ದೇವರುಗಳನ್ನು ಪೂಜಿಸಬೇಕು..? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ ಸಲಹೆ ಏನು..? ಇಲ್ಲಿದೆ ಮಾಹಿತಿ

Vastu Tips; ಕರ್ಪೂರದಿಂದ ಮನೆಯ ವಾಸ್ತು ದೋಷ ನಿವಾರಣೆ: ಆರ್ಥಿಕ ಸಮಸ್ಯೆ, ಕಲಹಗಳಿಗೆ ಇಲ್ಲಿದೆ ಪರಿಹಾರ

ಕರ್ಪೂರದಿಂದ ವಾಸ್ತು ದೋಷ ನಿವಾರಣೆ..!

ಕರ್ಪೂರವನ್ನು ಬಳಸಿ ಮನೆಯ ವಾಸ್ತು ದೋಷಗಳನ್ನು ನಿವಾರಿಸಿ, ಆರ್ಥಿಕ ಸಮಸ್ಯೆಗಳು, ಕುಟುಂಬದ ಕಲಹಗಳು ಹಾಗೂ ದಾಂಪತ್ಯ ವೈಮನಸ್ಯವನ್ನು ಕಡಿಮೆ ಮಾಡಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹಾಗಾದರೆ, ಕರ್ಪೂರವನ್ನು ಬಳಸಿ ಮನೆಯ ವಾಸ್ತು ದೋಷಗಳನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ನೋಡೋಣ.

Loading...