ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Sushmitha Jain

[email protected]

Articles
ಪ್ರಧಾನಿ ನರೇಂದ್ರ ಮೋದಿ ನಾಳೆ ವಡೋದರಾ ಭೇಟಿ: ಮೊದಲ ಬಾರಿಗೆ BookMyShow ಮೂಲಕ ಕಾರ್ಯಕ್ರಮದ ನೋಂದಣಿ; ಗಂಟೆಯಲ್ಲೇ ಎಲ್ಲ ಸೀಟ್ ಭರ್ತಿ

ವಡೋದರದಲ್ಲಿ ನಾಳೆ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಭರ್ಜರಿ ಪ್ರತಿಕ್ರಿಯೆ

BookMyShow: ಸೆಪ್ಟೆಂಬರ್ 8ರಂದು ಗುಜರಾತ್‌ನ ವಡೋದರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ‘NaMo for Viksit Bharat’ ಕಾರ್ಯಕ್ರಮಕ್ಕೆ ಬುಕ್ ಮೈ ಶೋ ಮೂಲಕ ಉಚಿತ ನೋಂದಣಿ ಆರಂಭಿಸಲಾಗಿದ್ದು, ಒಂದು ಗಂಟೆಯಲ್ಲೇ ಎಲ್ಲ ಆಸನಗಳು ಭರ್ತಿಯಾಗಿವೆ. 42,000ಕ್ಕೂ ಹೆಚ್ಚು ಮಂದಿ ವೇಯ್ಟಿಂಗ್ ಲಿಸ್ಟ್‌ಗೆ ಸೇರಿದ್ದಾರೆ. ಕಾರ್ಯಕ್ರಮದ ವೇಳೆ ₹35,000 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ.

Delhi Building Collapse: ಪಿಜಿ ಮಾಫಿಯಾ ತನಿಖೆ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ; ಸರ್ಕಾರದ ಮುಂದೆ 7 ಬೇಡಿಕೆ ಮುಂದಿಟ್ಟ ಸಿಜೆಪಿ

7 ಮಂದಿ ಬಲಿ ಪಡೆದ ಪಿಜಿ ದುರಂತ: ಸಮಗ್ರ ತನಿಖೆಗೆ CJP ಒತ್ತಾಯ

Cockroach Janta Party: ದೆಹಲಿಯ ಪಿಜಿ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ಕಾಕ್ರೋಚ್‌ ಜನತಾ ಪಾರ್ಟಿ ಸರ್ಕಾರದ ಮುಂದೆ ಏಳು ಬೇಡಿಕೆಗಳನ್ನು ಮಂಡಿಸಿದೆ. ಕಟ್ಟಡ ಮಾಲಕನ ವಿರುದ್ಧ ಮಾತ್ರವಲ್ಲದೆ ರಾಜಕಾರಣಿಗಳು ಹಾಗೂ ಇತರರೊಂದಿಗಿನ ಸಂಪರ್ಕ ಒಳಗೊಂಡ ದೊಡ್ಡ ಪಿಜಿ ಮಾಫಿಯಾ ಕುರಿತು ಸ್ವತಂತ್ರ ಕ್ರಿಮಿನಲ್ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ವಿದ್ಯಾರ್ಥಿಗಳ ವಸತಿ ಕಟ್ಟಡಗಳ ಸುರಕ್ಷತಾ ಪರಿಶೀಲನೆ, ಅಕ್ರಮ ನಿರ್ಮಾಣಗಳ ವಿರುದ್ಧ ಕ್ರಮ, ಸರ್ಕಾರಿ ಹಾಸ್ಟೆಲ್‌ಗಳ ನಿರ್ಮಾಣ ಹಾಗೂ ಮೃತರ ಕುಟುಂಬಗಳಿಗೆ ₹1 ಕೋಟಿ ಮತ್ತು ಗಾಯಾಳುಗಳಿಗೆ ₹20 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದೆ.

6 ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆ: ಅಕ್ಟೋಬರ್ 6ರಂದು ಮತದಾನ, 9ರಂದು ಫಲಿತಾಂಶ

6 ಕ್ಷೇತ್ರಗಳಲ್ಲಿ ಮತ್ತೆ ಮತಯುದ್ಧ: ಅಕ್ಟೋಬರ್ 6ಕ್ಕೆ ಉಪಚುನಾವಣೆ

Election Commission: ಚುನಾವಣಾ ಆಯೋಗವು ದೇಶದ ಆರು ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕವನ್ನು ಘೋಷಿಸಿದೆ. ತಮಿಳುನಾಡಿನ ಮದುರಾಂತಕಂ ಮತ್ತು ಧಾರಾಪುರಂ, ಪುದುಚೇರಿಯ ತಟ್ಟಾಂಚಾವಡಿ, ಪಶ್ಚಿಮ ಬಂಗಾಳದ ರೇಜಿನಗರ ಮತ್ತು ನಂದಿಗ್ರಾಮ ವಿಧಾನಸಭಾ ಕ್ಷೇತ್ರಗಳು ಹಾಗೂ ಅಸ್ಸಾಂನ ನಾಗಾಂವ್ ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 6ರಂದು ಮತದಾನ ನಡೆಯಲಿದೆ. ಅಕ್ಟೋಬರ್ 9ರಂದು ಫಲಿತಾಂಶ ಹೊರ ಬೀಳಲಿದೆ.

ಗ್ರಾಮೀಣ ಪ್ರದೇಶದದಲ್ಲಿ  LPG ಸಿಲಿಂಡರ್ ಬುಕಿಂಗ್‌ ಅಂತರ 45 ದಿನಗಳಿಂದ 25 ದಿನಗಳಿಗೆ ಇಳಿಕೆ: ಕೇಂದ್ರದಿಂದ ಮಹತ್ವದ ನಿರ್ಧಾರ ಪ್ರಕಟ

LPG ಸಿಲಿಂಡರ್ ಬುಕಿಂಗ್‌ ನಿಯಮ ಸಡಿಲಿಕೆ

LPG Refill: ಎಲ್‌ಪಿಜಿ ಪೂರೈಕೆ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ LPG ರಿಫಿಲ್ ಬುಕಿಂಗ್‌ ಅಂತರವನ್ನು 45 ದಿನಗಳಿಂದ 25 ದಿನಗಳಿಗೆ ಇಳಿಸಿದೆ. ಇನ್ಮುಂದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಎಲ್ಲ ಗೃಹಬಳಕೆ LPG ಗ್ರಾಹಕರು 25 ದಿನಗಳ ಅಂತರದಲ್ಲಿ ಸಿಲಿಂಡರ್ ಬುಕ್ ಮಾಡಬಹುದು.

ʼʼಮಹಿಳೆಯರ ಅವಹೇಳನ ಸರಿಯಲ್ಲʼʼ: ವಿಧಾನಸಭೆಯಲ್ಲಿ ತ್ರಿಷಾ ಪರ ಸಿಎಂ ವಿಜಯ್ ಬ್ಯಾಟಿಂಗ್; ಉದಯನಿಧಿ ಸ್ಟಾಲಿನ್‌ ವಿರುದ್ಧ ಗುಡುಗು

ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಮಹಿಳೆಯರ ಅವಹೇಳನ ಸಲ್ಲದು: ವಿಜಯ್

Tamil Nadu CM Joseph Vijay: ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಹಾಗೂ ಟಿವಿಕೆ ನಾಯಕ ವಿಜಯ್, ವಾಕ್ ಸ್ವಾತಂತ್ರ್ಯವನ್ನು ರಾಜಕೀಯ ಟೀಕೆಗೆ ಬಳಸಬಹುದು. ಆದರೆ ಮಹಿಳೆಯರನ್ನು ಅವಹೇಳನ ಮಾಡುವ ಅಥವಾ ದ್ವಂದ್ವಾರ್ಥದ ಹೇಳಿಕೆಗಳಿಗೆ ಬಳಸುವುದು ಸರಿಯಲ್ಲ ಎಂದು ಹೇಳಿದರು. ನಟಿ ತ್ರಿಷಾ ಕುರಿತ ಉದಯನಿಧಿ ಸ್ಟಾಲಿನ್ ಹೇಳಿಕೆಗಳ ವಿವಾದದ ಹಿನ್ನೆಲೆಯಲ್ಲಿ ವಿಜಯ್ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಡಿಎಂಕೆ ವಿರುದ್ಧ ಭ್ರಷ್ಟಾಚಾರ ಮತ್ತು ಪಕ್ಷದ ನಿಧಿ ಸಂಗ್ರಹದ ಆರೋಪಗಳನ್ನೂ ಅವರು ಪ್ರಸ್ತಾಪಿಸಿದರು.

ದೆಹಲಿಯ ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿತ: 6 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ದುರಸ್ತಿ ಕಾಮಗಾರಿ ವೇಳೆ ಕುಸಿದ ಕಟ್ಟಡ: ದೆಹಲಿಯಲ್ಲಿ 6 ಮಂದಿ ಬಲಿ

Delhi Building Collapse: ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಐದು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಭೀಕರ ದುರಂತ ಸಂಭವಿಸಿದೆ. ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿಕೊಂಡಿದ್ದು, NDRF, ಅಗ್ನಿಶಾಮಕ ದಳ ಹಾಗೂ ದೆಹಲಿ ಪೊಲೀಸರ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಉಚಿತ ಲ್ಯಾಪ್‌ಟಾಪ್ ಯೋಜನೆ ಹೆಸರಿನಲ್ಲಿ ವಂಚನೆ: ವಿದ್ಯಾರ್ಥಿಗಳಿಗೆ PIB ಎಚ್ಚರಿಕೆ

ಲ್ಯಾಪ್‌ಟಾಪ್ ಆಸೆ ತೋರಿಸಿ ಡೇಟಾ ಕಳ್ಳತನಕ್ಕೆ ಯತ್ನ: PIB ಎಚ್ಚರಿಕೆ

‘Students Laptop Scheme 2026’ ಹೆಸರಿನಲ್ಲಿ ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಉಚಿತ ಲ್ಯಾಪ್‌ಟಾಪ್‌ ಕುರಿತ ಸಂದೇಶ ನಕಲಿ ಎಂದು PIB Fact Check ಎಚ್ಚರಿಸಿದೆ. ಅಪರಿಚಿತ ಲಿಂಕ್‌ ಕ್ಲಿಕ್ ಮಾಡದಂತೆ ಹಾಗೂ ವೈಯಕ್ತಿಕ, ಶೈಕ್ಷಣಿಕ ಮತ್ತು ಬ್ಯಾಂಕಿಂಗ್ ಮಾಹಿತಿ ಹಂಚಿಕೊಳ್ಳದಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸೂಚಿಸಲಾಗಿದೆ.

ಉದ್ಯಮಿ ಕೇತನ್‌ ಅಗರ್ವಾಲ್‌ ಹತ್ಯೆ ತನಿಖೆಯಲ್ಲಿ ಮಹತ್ವದ ಬೆಳವಣಿಗೆ; ಭಾವಿ ಪತ್ನಿ, ಆಕೆಯ ಪ್ರಿಯಕರನ ಜತೆ ಇದೀಗ 3ನೇ ಆರೋಪಿಯ ಬಂಧನ

ಕೇತನ್ ಅಗರ್ವಾಲ್ ಕೊಲೆ: ಮೂರನೇ ಆರೋಪಿ ಅರೆಸ್ಟ್

Pune Fort Murder: ಮಹಾರಾಷ್ಟ್ರದ ಪುಣೆಯ ಲೋಹಗಢ ಕೋಟೆಯಿಂದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ತ‍ಳ್ಳಿ ಹತ್ಯೆಗೈದ ಪ್ರಕರಣದಲ್ಲಿ ಮೂರನೇ ಆರೋಪಿ ರಿತೇಶ್ ಹಂಗೆನನ್ನು ಪೊಲೀಸರು ಬಂಧಿಸಿದ್ದಾರೆ. ಕೇತನ್ ಹತ್ಯೆಯ ಸಂಚಿನ ಬಗ್ಗೆ ರಿತೇಶ್‌ಗೆ ಮೊದಲೇ ಮಾಹಿತಿ ಇತ್ತು ಎಂದು ಪೊಲೀಸರು ಆರೋಪಿಸಿದ್ದಾರೆ. ಮೊಬೈಲ್ ಚಾಟ್‌ಗಳ ಫೊರೆನ್ಸಿಕ್ ಪರಿಶೀಲನೆಯಲ್ಲಿ ಕೇತನ್‌ನನ್ನು ಕೋಟೆಯಿಂದ ತಳ್ಳುವ ಹಾಗೂ ಸಾಕ್ಷ್ಯ ನಾಶಪಡಿಸುವ ಕುರಿತು ರಿತೇಶ್‌ ಜತೆ ನಡೆಸಿದ ಚರ್ಚೆ ಪತ್ತೆಯಾಗಿದೆ. ಹೀಗಾಗಿ ರಿತೇಶ್‌ನನ್ನು ಸೆಪ್ಟೆಂಬರ್ 12ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಮೆಟ್ರೋದಲ್ಲಿ ಎಸ್‌ಆರ್‌ಸಿಸಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ; ಜೆನ್‌ ಝೀ ಮಕ್ಕಳೊಂದಿಗೆ ಮುಕ್ತ ಮಾತು, ಹರಟೆ: ವಿಡಿಯೊ ಇಲ್ಲಿದೆ

ಮೆಟ್ರೋ ಏರಿ ಎಸ್‌ಆರ್‌ಸಿಸಿಗೆ ಮೋದಿ ಪಯಣ

SRCC's 100 Year Celebrations: ಎಸ್‌ಆರ್‌ಸಿಸಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಮೆಟ್ರೋ ಕಾರ್ಡ್ ಹಿಡಿದು ವಿದ್ಯಾರ್ಥಿಗಳು ಹಾಗೂ ಸಹಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ಮೋದಿ, 13 ವರ್ಷಗಳ ಬಳಿಕ ಎಸ್‌ಆರ್‌ಸಿಸಿಗೆ ಭೇಟಿ ನೀಡಿದರು.

ವ್ಯಾಟ್ಸ್‌ಆ್ಯಪ್‌ ಬಳಕೆದಾರರಿಗೆ ಗುಡ್‌ನ್ಯೂಸ್‌; ಕರೆಂಟ್‌ನಿಂದ ಫಾಸ್ಟ್‌ಟ್ಯಾಗ್‌ವರೆಗೆ 30 ವಿಭಾಗಗಳ ಬಿಲ್ ಪಾವತಿ ಸೇವೆ ಆರಂಭ

ಕರೆಂಟ್‌ನಿಂದ ಫಾಸ್ಟ್‌ಟ್ಯಾಗ್‌: ವ್ಯಾಟ್ಸ್‌ಆ್ಯಪ್‌ನಲ್ಲೇ ಬಿಲ್‌ ಪಾವತಿಸಿ

WhatsApp Bill Payments: ಭಾರತದಲ್ಲಿ ವ್ಯಾಟ್ಸ್‌ಆ್ಯಪ್‌ ಬಿಲ್ ಪಾವತಿ ಸೇವೆಯನ್ನು ಆರಂಭಿಸಿದ್ದು, ವಿದ್ಯುತ್, ಗ್ಯಾಸ್, ನೀರು, ಫಾಸ್ಟ್‌ಟ್ಯಾಗ್, ವಿಮೆ, ಕ್ರೆಡಿಟ್ ಕಾರ್ಡ್ ಮತ್ತು ಸಾಲದ ಬಿಲ್‌ಗಳನ್ನು ನೇರವಾಗಿ ವ್ಯಾಟ್ಸ್‌ಆ್ಯಪ್‌ನಲ್ಲೇ ಪಾವತಿಸಲು ಬಳಕೆದಾರರಿಗೆ ಅವಕಾಶ ಕಲ್ಪಿಸಿದೆ. 30 ವಿಭಾಗಗಳ 22,722 ಬಿಲ್‌ದಾರರು ಈ ಸೇವೆಯಲ್ಲಿ ಲಭ್ಯ.

ದೆಹಲಿ ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಹಲ್ಲೆ; ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಪ್ರತಿಭಟನಾಕಾರರ ಮೇಲಿನ ಪೊಲೀಸ್ ಹಲ್ಲೆಗೆ ನ್ಯಾಯಮೂರ್ತಿ ಕಳವಳ

Ujjal Bhuyan: ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರು ಅತಿಯಾದ ಬಲ ಪ್ರಯೋಗ ಮಾಡಿರುವ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮೇಲೆ ನೇರವಾಗಿ ಹಲ್ಲೆ ನಡೆಸುವುದು ಅತ್ಯಂತ ಬೇಸರದ ಸಂಗತಿ ಎಂದ ಅವರು, ಕಾನೂನು ಪಾಲನೆಯೊಂದಿಗೆ ಮಾನವ ಹಕ್ಕುಗಳನ್ನು ರಕ್ಷಿಸುವುದು ಪೊಲೀಸರ ಕರ್ತವ್ಯ ಎಂದು ಹೇಳಿದ್ದಾರೆ. ‘ಫೇಕ್ ಎನ್‌ಕೌಂಟರ್’ ಪೊಲೀಸ್ ವ್ಯವಸ್ಥೆಯ ಭಾಗವಾಗಲು ಸಾಧ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಭಾರತವನ್ನು ನಂಬರ್ ಒನ್ ಪಾಲುದಾರ ಎಂದು ಬಣ್ಣಿಸಿದ ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೀವರ್

ಭಾರತವೇ ಯುರೋಪ್‌ನ ನಂಬರ್ ಒನ್ ಪಾಲುದಾರ

Bart De Wever: ಆರ್ಥಿಕ ಅವಲಂಬನೆಗಳ ಅಪಾಯದ ಬಗ್ಗೆ ಭಾರತ ಬಹಳ ಹಿಂದೆಯೇ ಯುರೋಪ್‌ಗೆ ಎಚ್ಚರಿಕೆ ನೀಡಿತ್ತು, ಆದರೆ ಆಗ ಅದನ್ನು ನಿರ್ಲಕ್ಷಿಸಲಾಗಿತ್ತು ಎಂದು ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೀವರ್ ಹೇಳಿದ್ದಾರೆ. ಭಾರತ ಮತ್ತು ಯುರೋಪ್‌ ಒಂದೇ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದು, ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಬೇಕು ಎಂದಿದ್ದಾರೆ.

ಭಾರೀ ಮಳೆಗೆ ತತ್ತರಿಸಿದ ದೆಹಲಿ; ಹೊಳೆಯಂತಾದ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ!

ದೆಹಲಿಯಲ್ಲಿ ಭಾರೀ ಮಳೆ: ವಿಮಾನ ನಿಲ್ದಾಣ ಜಲಾವೃತ

ಭಾರೀ ಮಳೆಯಿಂದ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ದ್ವಾರಗಳ ಬಳಿ ನೀರು ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ನೀರಿನಲ್ಲೇ ಲಗೇಜ್ ಟ್ರಾಲಿಗಳನ್ನು ತಳ್ಳಿಕೊಂಡು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯ ಪರಿಣಾಮ ದೆಹಲಿಗೆ ಬರಬೇಕಿದ್ದ ಐದು ವಿಮಾನಗಳನ್ನು ಲಖನೌಗೆ ತಿರುಗಿಸಲಾಗಿದೆ. IMD ದೆಹಲಿಗೆ ಹಳದಿ ಎಚ್ಚರಿಕೆ ನೀಡಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ಮಳೆ, ಗುಡುಗು-ಮಿಂಚು ಹಾಗೂ ಬಲವಾದ ಗಾಳಿ ಬೀಸುವ ಸಾಧ್ಯತೆಯನ್ನು ತಿಳಿಸಿದೆ.

ಅಮ್ಮನ ದೋಸೆ ರೆಸಿಪಿಯಿಂದ ತಿಂಗಳಿಗೆ 12 ಲಕ್ಷ ರೂ. ಗಳಿಕೆ: ಥಾಣೆಯ ಸಹೋದರ-ಸಹೋದರಿಯ ಯಶೋಗಾಥೆ ಇದು

ಅಮ್ಮನ ದೋಸೆಯಿಂದ ₹12 ಲಕ್ಷದ ಉದ್ಯಮ!

CA ಆಗುವ ಕನಸನ್ನು ಬದಿಗಿಟ್ಟು ತಾಯಿಯ ಬೆಣ್ಣೆ ದೋಸೆ ರೆಸಿಪಿಯನ್ನು ಉದ್ಯಮವನ್ನಾಗಿ ಮಾಡಿದ ಥಾಣೆಯ ಗಣೇಶ್ ಸಾಥೆ ಮತ್ತು ಅವರ ಸಹೋದರಿ ಸಪ್ನಾ, ಆರಂಭಿಕ ನಷ್ಟಗಳ ನಡುವೆಯೂ ಪ್ರಯತ್ನ ಕೈಬಿಡಲಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ದೋಸೆಯ ಪಯಣವನ್ನು ಹಂಚಿಕೊಂಡ ಬಳಿಕ ವ್ಯಾಪಾರಕ್ಕೆ ಭರ್ಜರಿ ಸ್ಪಂದನೆ ದೊರೆತಿದ್ದು, ಇದೀಗ ದಿನಕ್ಕೆ ಸುಮಾರು 400 ಗ್ರಾಹಕರು ಭೇಟಿ ನೀಡುತ್ತಿದ್ದಾರೆ. ಹಳೆಯ ದೋಸೆ ಗಾಡಿಯಿಂದ ಆರಂಭವಾದ ಉದ್ಯಮ ಇಂದು ತಿಂಗಳಿಗೆ ಸುಮಾರು ₹12 ಲಕ್ಷ ಆದಾಯ ಗಳಿಸುವ ಮಟ್ಟಕ್ಕೆ ಬೆಳೆದಿದೆ.

ನೇಪಾಳದ ಸುರಂಗದಲ್ಲಿ 9 ದಿನ ಸಿಲುಕಿದ್ದ ಇಬ್ಬರು ಕಾರ್ಮಿಕರು ಜೀವಂತ ಪಾರು; 170 ಮೀಟರ್ ಆಳದಲ್ಲಿ ರೋಚಕ ರಕ್ಷಣೆ

170 ಮೀಟರ್ ಆಳದ ಸುರಂಗದಲ್ಲಿ ಸಿಲುಕಿದ್ದ 2 ಕಾರ್ಮಿಕರು ಜೀವಂತ ಪಾರು

ನೇಪಾಳದಲ್ಲಿ ಭೀಕರ ಪ್ರವಾಹದ ಬಳಿಕ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ 170 ಮೀಟರ್ ಆಳದಲ್ಲಿ 9 ದಿನಗಳಿಂದ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಸಂಜಯ್ ಶಾ ಮತ್ತು ಕಬೀರ್ ಮಹರ್ಜನ್ ಅವರನ್ನು ರಕ್ಷಣಾ ತಂಡಗಳು ಶ್ರವಣ ಸಾಧನಗಳು ಹಾಗೂ ಕೊರೆಯುವ ಯಂತ್ರಗಳ ನೆರವಿನಿಂದ ಪತ್ತೆಹಚ್ಚಿವೆ. ಸುರಂಗದೊಳಗಿಂದ ಕೇಳಿಬಂದ ಕ್ಷೀಣ ಧ್ವನಿಯೇ ಅವರ ಇರುವಿಕೆಯನ್ನು ಪತ್ತೆಹಚ್ಚಲು ಪ್ರಮುಖ ಸುಳಿವಾಯಿತು.

57 ವರ್ಷಗಳ ಹಿಂದೂ-ಮುಸ್ಲಿಂ ಜಂಟಿ ಜನ್ಮಾಷ್ಟಮಿ ಆಚರಣೆಗೆ ಬಂಗಾಳದಲ್ಲಿ ಬ್ರೇಕ್; ಈ ಬಾರಿ ಹಿಂದೂಗಳಷ್ಟೇ ಭಾಗಿ!

ಹಿಂದೂ-ಮುಸ್ಲಿಂ ಒಗ್ಗಟ್ಟಿನ ಜನ್ಮಾಷ್ಟಮಿ ಆಚರಣೆಗೆ ಬಂಗಾಳದಲ್ಲಿ ಬ್ರೇಕ್

ಕೋಲ್ಕತ್ತಾದ ಮೊಮಿನ್‌ಪುರದಲ್ಲಿ ಕಳೆದ 57 ವರ್ಷಗಳಿಂದ ಹಿಂದೂ-ಮುಸ್ಲಿಂ ಸಮುದಾಯದವರು ಒಟ್ಟಾಗಿ ಆಯೋಜಿಸುತ್ತಿದ್ದ ಜನ್ಮಾಷ್ಟಮಿ ಆಚರಣೆಯಲ್ಲಿ ಈ ಬಾರಿ ಬದಲಾವಣೆ ಮಾಡಲಾಗಿದೆ. ಬಿಜೆಪಿ ನಾಯಕ ರಾಕೇಶ್ ಸಿಂಗ್ ನೇತೃತ್ವದಲ್ಲಿ ಹಿಂದೂ ಸದಸ್ಯರನ್ನು ಒಳಗೊಂಡ ಹೊಸ ಸಮಿತಿ ರಚಿಸಲಾಗಿದ್ದು, ಮುಸ್ಲಿಮರನ್ನು ಸಮಿತಿಯಲ್ಲಿ ಸೇರಿಸದಿರುವುದು ವಿವಾದಕ್ಕೆ ಕಾರಣವಾಗಿದೆ.

ಶ್ರೀಕೃಷ್ಣ ಜನ್ಮಾಷ್ಟಮಿ 2026: ಪೂಜೆ, ಮಹತ್ವ ಮತ್ತು ವಿಶೇಷ ಮಂತ್ರಗಳು ಇಲ್ಲಿವೆ

ಶ್ರೀಕೃಷ್ಣನ ಜನ್ಮದಿನದಂದು ಏನು ಮಾಡಬೇಕು?

ಶ್ರೀಕೃಷ್ಣ ಜನ್ಮಾಷ್ಟಮಿ ಹಿಂದೂಗಳ ಪ್ರಮುಖ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ ಈ ದಿನ ವ್ರತ, ಮಧ್ಯರಾತ್ರಿ ಪೂಜೆ, ಅಭಿಷೇಕ, ಬಾಲಕೃಷ್ಣನನ್ನು ತೊಟ್ಟಿಲಿನಲ್ಲಿ ಕೂರಿಸಿ ಆರಾಧಿಸುವುದು ಹಾಗೂ ವಿಶೇಷ ನೈವೇದ್ಯ ಅರ್ಪಿಸುವ ಪದ್ಧತಿ ಇದೆ. ಅಷ್ಟಮಿ ತಿಥಿ ಮತ್ತು ರೋಹಿಣಿ ನಕ್ಷತ್ರದ ಮಹತ್ವದ ಜೊತೆಗೆ ಜನ್ಮಾಷ್ಟಮಿಯ ಶುಭ ಮುಹೂರ್ತ, ಪೂಜಾ ವಿಧಾನ, ವ್ರತಾಚರಣೆ ಮತ್ತು ಶ್ರೀಕೃಷ್ಣನ ವಿವಿಧ ಮಂತ್ರಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

11 ತಿಂಗಳ ಬಳಿಕ ಕ್ಲೈಮ್ಯಾಕ್ಸ್‌ನತ್ತ ಶಬರಿಮಲೆ ಚಿನ್ನ ಕಳವು ತನಿಖೆ: ಸೆಪ್ಟೆಂಬರ್‌ 25ರೊಳಗೆ ಅಂತಿಮ ವರದಿ ಸಲ್ಲಿಕೆ

ಶಬರಿಮಲೆ ಚಿನ್ನ ಕಳವು ಕೇಸ್‌ಗೆ ಶೀಘ್ರ ತೆರೆ

Sabarimala Gold Theft Probe: ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ಸೆಪ್ಟೆಂಬರ್ 25ರೊಳಗೆ ಅಂತಿಮ ವರದಿ ಸಲ್ಲಿಸುವುದಾಗಿ SIT ಕೇರಳಂ ಹೈಕೋರ್ಟ್‌ಗೆ ತಿಳಿಸಿದೆ. ಕಟ್ಟಿಲಪ್ಪಳಿ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ದ್ವಾರಪಾಲಕ ವಿಗ್ರಹ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದೆ. ಈತನ್ಮಧ್ಯೆ, ತಿರುವಾಂಕೂರು ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್‌ಗೆ ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಜಾಮೀನು ಮಂಜೂರಾಗಿದೆ.

ಲೈಸೆನ್ಸ್‌ ವಿಚಾರ ಮುಂದಿಟ್ಟು ವಾಹನ ವಿಮಾ ಕ್ಲೇಮ್‌ ತಿರಸ್ಕರಿಸುವಂತಿಲ್ಲ: ಗ್ರಾಹಕ ಆಯೋಗ ಮಹತ್ವದ ತೀರ್ಪು

ವಿಮಾ ಕ್ಲೇಮ್‌ ತಿರಸ್ಕರಿಸುವ ಮುನ್ನ ಎಚ್ಚರ

Motor Insurance Claim: ಚಾಲಕನ ಡ್ರೈವಿಂಗ್ ಲೈಸೆನ್ಸ್‌ಗೆ ಸಂಬಂಧಿಸಿದ ಸಮಸ್ಯೆ ಇದೆ ಎಂಬ ಒಂದೇ ಕಾರಣಕ್ಕೆ ವಾಹನ ವಿಮಾ ಕ್ಲೇಮ್‌ ಸಂಪೂರ್ಣವಾಗಿ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸ್ಪಷ್ಟಪಡಿಸಿದೆ. ಎಚ್‌ಡಿಎಫ್‌ಸಿ ಜನರಲ್ ಇನ್ಶೂರೆನ್ಸ್ ಕಂಪನಿಯ ಮೇಲ್ಮನವಿಯನ್ನು ವಜಾಗೊಳಿಸಿದ ಆಯೋಗ, ಪಾಲಿಸಿದಾರರಿಗೆ 3.5 ಲಕ್ಷ ರೂಪಾಯಿ ಪರಿಹಾರ, ಮಾನಸಿಕ ಸಂಕಟಕ್ಕೆ 1 ಲಕ್ಷ ರೂಪಾಯಿ ಹಾಗೂ ಬಡ್ಡಿ ಪಾವತಿಸುವಂತೆ ಆದೇಶಿಸಿದೆ.

ತರಬೇತಿ ವೇಳೆ ಮುಳುಗಿದ ದೋಣಿ; ಇಬ್ಬರು ಸೈನಿಕರ ಮೃತದೇಹ 2 ದಿನಗಳ ಬಳಿಕ ನೂರಾರು ಕಿಲೋ ಮೀಟರ್‌ ದೂರದಲ್ಲಿ ಪತ್ತೆ

ಸೇನಾ ತರಬೇತಿ ವೇಳೆ ದೋಣಿ ಮುಳುಗಿ ಸೈನಿಕರಿಬ್ಬರು ಜಲ ಸಮಾಧಿ

Hathnikund Barrage Tragedy: ಹರಿಯಾಣದ ಹಥ್ನಿಕುಂಡ್ ಬ್ಯಾರೇಜ್‌ನಲ್ಲಿ ತರಬೇತಿ ವೇಳೆ ದೋಣಿ ಮಗುಚಿ ನಾಪತ್ತೆಯಾಗಿದ್ದ ಇಬ್ಬರು ಸೈನಿಕರ ಮೃತದೇಹಗಳು ಪತ್ತೆಯಾಗಿವೆ. ಮೊದಲ ಸೈನಿಕನ ಮೃತದೇಹ ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ಹಾಗೂ ಎರಡನೇ ಸೈನಿಕನ ಮೃತದೇಹ ಸುಮಾರು 200 ಕಿ.ಮೀ. ದೂರದ ಜಿಂದ್ ಬಳಿ ಪತ್ತೆಯಾಗಿದೆ. ಇಬ್ಬರ ಗುರುತನ್ನು ಸೇನೆ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.

ಶಿಕ್ಷಕರ ದಿನಾಚರಣೆ ಸಂಭ್ರಮ: ಸೆಪ್ಟೆಂಬರ್ 5ರಂದು 82 ಸಾಧಕ ಗುರುಗಳಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಿರುವ ರಾಷ್ಟ್ರಪತಿ!

82 ಸಾಧಕ ಗುರುಗಳಿಗೆ ರಾಷ್ಟ್ರಮಟ್ಟದ ಮನ್ನಣೆ; ಸೆ.5ರಂದು ಪ್ರಶಸ್ತಿ ಪ್ರದಾನ

ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 82 ಸಾಧಕ ಶಿಕ್ಷಕರಿಗೆ 2026ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 48 ಶಾಲಾ ಶಿಕ್ಷಕರು, 21 ಉನ್ನತ ಶಿಕ್ಷಣ ಕ್ಷೇತ್ರದ ಶಿಕ್ಷಕರು ಹಾಗೂ 13 ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಗಳ ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಗುರುವಾರ ಈ 5 ಕೆಲಸ ಮಾಡಿ: ವಿಷ್ಣು-ಲಕ್ಷ್ಮಿ ಕೃಪೆಯಿಂದ ಅದೃಷ್ಟ, ಐಶ್ವರ್ಯ ವೃದ್ಧಿಯಾಗುತ್ತೆ

ವಿಷ್ಣುವಿನ ಅನುಗ್ರಹ ಪಡೆಯಲು ಗುರುವಾರ ಹೀಗೆ ಮಾಡಿ!

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಗುರುವಾರ ಭಗವಾನ್ ವಿಷ್ಣುವಿಗೆ ಸಮರ್ಪಿತ ದಿನ. ಈ ದಿನ ಉಪವಾಸ, ಬಾಳೆಗಿಡ ಪೂಜೆ, ಹಳದಿ ವಸ್ತುಗಳ ದಾನ, ಶಂಖನಾದ ಹಾಗೂ ತುಪ್ಪದ ದೀಪ ಬೆಳಗಿಸುವುದರಿಂದ ವಿಷ್ಣು-ಲಕ್ಷ್ಮಿ ಅನುಗ್ರಹ ದೊರೆತು ಜೀವನದಲ್ಲಿ ಶುಭಫಲ, ಸಮೃದ್ಧಿ ಮತ್ತು ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆಯಿದೆ.

ಕೊಳಕು ಶೌಚಾಲಯದ ಫೋಟೋ ಕಳುಹಿಸಿ 1,000 ರೂಪಾಯಿ ಪಡೆಯಿರಿ: NHAI ಅಭಿಯಾನ 2027ರ ಜೂನ್‌ 30ರವರೆಗೆ ವಿಸ್ತರಣೆ

ಹೆದ್ದಾರಿ ಶೌಚಾಲಯದ ಅವ್ಯವಸ್ಥೆ ವರದಿ ಮಾಡಿ 1,000 ರುಪಾಯಿ ಗೆಲ್ಲಿ

Clean Toilet Picture Challenge: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭಿಸಿರುವ ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್ ಅಭಿಯಾನವನ್ನು 2027ರ ಜೂನ್‌ 30ರವರೆಗೆ ವಿಸ್ತರಿಸಲಾಗಿದೆ. NHAI ವ್ಯಾಪ್ತಿಯ ಟೋಲ್ ಪ್ಲಾಜಾಗಳಲ್ಲಿರುವ ಕೊಳಕು ಶೌಚಾಲಯಗಳ ಫೋಟೊವನ್ನು ‘ರಾಜಮಾರ್ಗಯಾತ್ರಾ’ ಆ್ಯಪ್ ಮೂಲಕ ಸಲ್ಲಿಸಿದರೆ, ಪರಿಶೀಲನೆಯ ಬಳಿಕ 1,000 ರೂಪಾಯಿಯನ್ನು ಸಂಬಂಧಿತ ವಾಹನದ FASTag ಖಾತೆಗೆ ರೀಚಾರ್ಜ್ ಮಾಡಲಾಗುತ್ತದೆ.

ಕಡ್ಡಾಯ ಸುರಕ್ಷತಾ ನಿಯಮ ಗಾಳಿಗೆ ತೂರಿ ಸ್ಫೋಟಕ ಮಾರಾಟ: ಡಯಲ್4ಟ್ರೇಡ್‌ಗೆ 10 ಲಕ್ಷ ರೂಪಾಯಿ ದಂಡ

ಸ್ಫೋಟಕ ವಸ್ತುಗಳ ಆನ್‌ಲೈನ್ ಮಾರಾಟಕ್ಕೆ ಕಡಿವಾಣ

Dial4Trade: ಕಡ್ಡಾಯ ಸುರಕ್ಷತಾ ನಿಯಮಗಳನ್ನು ಪಾಲಿಸದೆ ತನ್ನ ಇ-ಕಾಮರ್ಸ್ ವೇದಿಕೆಯಲ್ಲಿ ಅಮೋನಿಯಂ ನೈಟ್ರೇಟ್ ಅನ್ನು ಪಟ್ಟಿ ಮಾಡಿ ಮಾರಾಟಕ್ಕೆ ಅವಕಾಶ ನೀಡಿದ ಆರೋಪದ ಹಿನ್ನೆಲೆಯಲ್ಲಿ ಡಯಲ್4ಟ್ರೇಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಸೂಕ್ತ ಪರವಾನಗಿ ಹಾಗೂ ಖರೀದಿದಾರರ ಅರ್ಹತೆ ಪರಿಶೀಲಿಸದೆ ಅಪಾಯಕಾರಿ ವಸ್ತುವಿನ ಮಾರಾಟಕ್ಕೆ ಅವಕಾಶ ನೀಡಿರುವುದನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ.

Loading...