ಲಖನೌ: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರಿತು ಇದೀಗ (Ghaziabad sisters self harming) ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಂದೆ ಚೇತನ್ ಕುಮಾರ್ ತಮ್ಮ ಮೊಬೈಲ್ ಫೋನ್ಗಳನ್ನು ತೆಗೆದುಕೊಂಡು ಹೋಗಿ ವಿದ್ಯುತ್ ಬಿಲ್ ಪಾವತಿಸಲು ಅವುಗಳನ್ನು ಮಾರಿದ ನಂತರ ಮೂವರು ಸಹೋದರರು ತೀವ್ರ ಮಾನಸಿಕ ಒತ್ತಡವನ್ನು ಅನುಭವಿಸಿದರು ಎಂದು ತಿಳಿದು ಬಂದಿದೆ. ಅತೀಯಾಗಿ ಕೊರಿಯಲ್ ಡ್ರಾಮಾ ಹಾಗೂ ಗೇಮ್ಗಳಿಗೆ ವ್ಯಸನರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಷೇರು ದಲ್ಲಾಳಿಯಾಗಿದ್ದ ಚೇತನ್ ಕುಮಾರ್, 2 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದು, ಕುಟುಂಬವನ್ನು ಬಹಳ ಕಷ್ಟದಿಂದ ನಡೆಸುತ್ತಿದ್ದರು. ಕೊರಿಯನ್ ಗೇಮ್ ಹುಚ್ಚಿಗೆ ಬಿದ್ದಿದ್ದ ಮೂವರು ಸಹೋದರಿಯರು ತಂದೆ ತಮ್ಮ ಫೋನ್ ತೆಗೆದುಕೊಂಡು ಹೋದ ಬಳಿಕ ತಮ್ಮ ತಾಯಿಯ ಫೋನ್ ತೆಗೆದುಕೊಂಡಿದ್ದರು. ಆದರೆ ಅದರದಲ್ಲಿ ತಮ್ಮ ಗೇಮ್ಗೆ ಲಾಗಿನ್ ಆಗಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಮೂವರು ಹುಡುಗಿಯರು ತಮ್ಮ ತಂದೆಯೊಂದಿಗೆ ಹೆಚ್ಚು ಬಾಂಧವ್ಯ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅದಕ್ಕಾಗಿಯೇ ಅವರು ಆತ್ಮಹತ್ಯೆ ಪತ್ರದಲ್ಲಿ ತಮ್ಮ ತಂದೆಯನ್ನು ಉಲ್ಲೇಖಿಸಿದ್ದಾರೆ ಮತ್ತು ಎಲ್ಲಿಯೂ ತಮ್ಮ ತಾಯಿಯ ಹೆಸರನ್ನು ಉಲ್ಲೇಖಿಸಿಲ್ಲ. ಸಾವಿಗೂ ಮುನ್ನ ಅವರು ಡೆತ್ ನೋಟ್ ಬರೆದಿದ್ದು, ಅದರದಲ್ಲಿ ಪಪ್ಪಾ, ಕ್ಷಮಿಸಿ. ನಾವು ಕೊರಿಯಾವನ್ನು ಬಿಡಲು ಸಾಧ್ಯವಿಲ್ಲ. ಕೊರಿಯಾ ನಮ್ಮ ಜೀವನ, ಕೊರಿಯಾ ನಮ್ಮ ಆತ್ಮ, ಮತ್ತು ನೀವು ಅದರಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಕ್ಷಮಿಸಿ, ನಾವು ನಮ್ಮ ಜೀವನವನ್ನು ತ್ಯಜಿಸುತ್ತಿದ್ದೇವೆ ಎಂದು ಬರೆದಿದ್ದರು. ಕೈಬರಹದ ಆತ್ಮಹತ್ಯೆ ಪತ್ರ ಮತ್ತು ಸಂದೇಶಗಳು ಸೇರಿದಂತೆ ಬೆರಳಚ್ಚುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ; ವರದಿಗಾಗಿ ಕಾಯಲಾಗುತ್ತಿದೆ.
ಸೈಬರ್ ಅಪರಾಧ ತಂಡಗಳು, IMEI ಸಂಖ್ಯೆಗಳನ್ನು ಬಳಸಿಕೊಂಡು, ಮೊಬೈಲ್ ಫೋನ್ಗಳನ್ನು ಖರೀದಿಸಿದ ಖರೀದಿದಾರರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ, ಇದರಿಂದಾಗಿ ಕೊರಿಯನ್ ಅಪ್ಲಿಕೇಶನ್ಗಳ ಡೇಟಾವನ್ನು ಹಿಂಪಡೆಯಬಹುದು. ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.