ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನ ಡೇಕೇರ್‌ನಲ್ಲಿ ಪುಟ್ಟ ಕಂದಮ್ಮಗಳ ಮೇಲಿನ ದೌರ್ಜನ್ಯ ಪ್ರಕರಣ: ಕೇಸ್‌ನಲ್ಲಿ ಸಿಕ್ತು ಮತ್ತೊಂದು ಟ್ವಿಸ್ಟ್‌

Bengaluru daycare abuse case: ಡೇಕೇರ್ ಸಂಸ್ಥೆಯಾದ ಲಿಟಲ್ ಸ್ಕಾಲರ್ಸ್ ಮ್ಯಾನೇಜ್‌ಮೆಂಟ್, ಇದು ಮಾಜಿ ಉದ್ಯೋಗಿಗಳು ಹಣ ವಸೂಲಿ ಹಾಗೂ ಸಂಸ್ಥೆಯ ಹೆಸರು ಕೆಡಿಸಲು ನಡೆಸಿರುವ ಬಹಳ ವ್ಯವಸ್ಥಿತವಾದ ಪಿತೂರಿ ಎಂದು ಗಂಭೀರ ಆರೋಪ ಮಾಡಿದೆ. ಇದೊಂದು ಕ್ರಿಮಿನಲ್ ಪಿತೂರಿಯಾಗಿದ್ದು, ಮಕ್ಕಳ ಸುರಕ್ಷತೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.

ಡೇಕೇರ್ ಮಾಜಿ ಸಿಬ್ಬಂದಿ ವಿರುದ್ಧ ಕ್ಯಾಪ್ಜೆಮಿನಿ ಆರೋಪ

ಬೆಂಗಳೂರು, ಜು.15: ನಗರದ ಬ್ರೂಕ್‌ಫೀಲ್ಡ್‌ನಲ್ಲಿರುವ ಐಟಿ ದೈತ್ಯ ಕ್ಯಾಪ್‌ಜೆಮಿನಿ (Capgemini) ಕ್ಯಾಂಪಸ್‌ನಲ್ಲಿ ನಡೆದಿದ್ದ ಮಕ್ಕಳ ಮೇಲಿನ ದೌರ್ಜನ್ಯ (Toddler assault) ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಡೇಕೇರ್ (daycare) ಸಂಸ್ಥೆಯಾದ ಲಿಟಲ್ ಸ್ಕಾಲರ್ಸ್ ಮ್ಯಾನೇಜ್‌ಮೆಂಟ್, ಇದು ಮಾಜಿ ಉದ್ಯೋಗಿಗಳು ಹಣ ವಸೂಲಿ ಹಾಗೂ ಸಂಸ್ಥೆಯ ಹೆಸರು ಕೆಡಿಸಲು ನಡೆಸಿರುವ ಬಹಳ ವ್ಯವಸ್ಥಿತವಾದ ಪಿತೂರಿ ಎಂದು ಗಂಭೀರ ಆರೋಪ ಮಾಡಿದೆ.

ಎರಡು ಮತ್ತು ಮೂರು ವರ್ಷದ ಪುಟ್ಟ ಮಕ್ಕಳನ್ನು ವಾಷಿಂಗ್ ಮೆಷಿನ್ ಡ್ರಮ್ ಒಳಗೆ ಹಾಕಿರುವುದು ಹಾಗೂ ಶೌಚಾಲಯದಲ್ಲಿ ಕೂಡಿಹಾಕುವಂತಹ ಕ್ರೂರ ದೌರ್ಜನ್ಯದ ವಿಡಿಯೊಗಳು ಇತ್ತೀಚೆಗೆ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದವು. ಇಡೀ ವಿವಾದಕ್ಕೆ ಕಾರಣವಾದ ಘಟನೆಗಳ ವಿವರವನ್ನು ಮಕ್ಕಳ ಮೇಲಿನ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಲಿಟಲ್ ಸ್ಕಾಲರ್ಸ್ ಡೇಕೇರ್ ಸಂಸ್ಥೆಯು ಹಂಚಿಕೊಂಡಿದೆ.

ಜೂನ್ 25 ರಂದು, ಇಬ್ಬರು ಲಿಟಲ್ ಸ್ಕಾಲರ್ಸ್ ಉದ್ಯೋಗಿಗಳಾದ ಸುಜಾತಾ ಮತ್ತು ವಿಜಯಲಕ್ಷ್ಮಿ ಆರ್ ಎಂಬವರ ನಡುವೆ ಕೆಲಸದ ಸಮಯದಲ್ಲಿ ದೈಹಿಕ ಮತ್ತು ಮಾತಿನ ಜಗಳ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಸಂಸ್ಥೆಯ ಮಾಲೀಕರಾದ ರಮಣ್‌ದೀಪ್ ಕೌರ್, ಅವರಿಬ್ಬರನ್ನು ತಕ್ಷಣವೇ ಜಾರಿಗೆ ಬರುವಂತೆ ಕೆಲಸದಿಂದ ವಜಾಗೊಳಿಸಲು ನಿರ್ದೇಶನ ನೀಡಿದ್ದರು.

ಬೆಂಗಳೂರಿನ ಡೇ ಕೇರ್ ದೌರ್ಜನ್ಯ ಪ್ರಕರಣ; ಪ್ರಮುಖ ಆರೋಪಿಗಳ ಬಂಧನವಾದದ್ದು ಹೇಗೆ?

ಮರುದಿನ ಬೆಳಗ್ಗೆ ಆ ಇಬ್ಬರು ಉದ್ಯೋಗಿಗಳು ಕ್ಯಾಂಪಸ್‌ಗೆ ಹಿಂತಿರುಗಿ, ಕೇಂದ್ರದ ವ್ಯವಸ್ಥಾಪಕಿ ಮಂಜುಳಾ ಅವರನ್ನು ಕೆಲಸದಿಂದ ತೆಗೆದುಹಾಕದಂತೆ ಬೆದರಿಸಿದರು. ಇಬ್ಬರಿಗೂ ಲಿಖಿತ ಕ್ಷಮೆಯಾಚಿಸಿ ಹೊರಹೋಗುವಂತೆ ಕೇಳಲಾಯಿತು. ಆದರೆ, ಅವರು ಸಂಜೆಯವರೆಗೂ ಅಲೆದಾಡುತ್ತಲೇ ಇದ್ದರು.

ಕೆಲಸದಿಂದ ವಜಾಗೊಂಡಿದ್ದ ಉದ್ಯೋಗಿ ಸುಜಾತಾ ಅವರ ಮಗ ಗೌತಮ್ ಎಂಬಾತ ಸಂಸ್ಥೆಯ ಮ್ಯಾನೇಜರ್ ಮಂಜುಳಾ ಹಾಗೂ ಭದ್ರತಾ ಸಿಬ್ಬಂದಿ ಲಾವಣ್ಯ ಅವರಿಗೆ ಫೋನ್ ಮಾಡಿದ್ದ. ಲಾವಣ್ಯ ಅವರು ಈ ಇಬ್ಬರು ಆರೋಪಿಗಳಿಂದ ಕ್ಷಮಾಪಣಾ ಪತ್ರಗಳನ್ನು ಬರೆಸಿಕೊಳ್ಳುವಾಗ ಸಾಕ್ಷಿಯಾಗಿದ್ದರು.

ಮಾಜಿ ಉದ್ಯೋಗಿಯ ಮಗನಿಂದ ಬಂದ ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಸಂಸ್ಥೆಯ ಮಾಲೀಕ ರಮಣ್‌ದೀಪ್ ಕೌರ್, ಮರುದಿನ ಬೆಳಿಗ್ಗೆಯೇ (ಜೂನ್ 26) ಗೌತಮ್ ವಿರುದ್ಧ ಅಧಿಕೃತವಾಗಿ ಪೊಲೀಸ್ ದೂರು ದಾಖಲಿಸುವಂತೆ ಮ್ಯಾನೇಜರ್ ಮಂಜುಳಾಗೆ ಸೂಚನೆ ನೀಡಿದ್ದರು.

ಜೂನ್ 27 ರಂದು ಮಂಜುಳಾ, ರಮಣದೀಪ್ ಕೌರ್‌ರನ್ನು ಮಹೇಂದರ್ ಎಂಬಾತನಿಗೆ ಪರಿಚಯಿಸಿದಳು. ಅವನು ಪೊಲೀಸ್ ಅಧಿಕಾರಿ ಎಂದು ಸೋಗು ಹಾಕಿ ಕಾನೂನು ಶುಲ್ಕದ ಹೆಸರಿನಲ್ಲಿ 20,000 ರೂ.ಗಳನ್ನು ವಸೂಲಿ ಮಾಡಿದ್ದನು.

ಸುಜಾತ ಮತ್ತು ಲಕ್ಷ್ಮಿ ಕ್ಯಾಪ್ಜೆಮಿನಿ ಕ್ಯಾಂಪಸ್‌ಗೆ ಭೇಟಿ ನೀಡುತ್ತಲೇ ಇದ್ದರು. ತಮ್ಮ ಬಾಕಿ ಸಂಬಳ ಮತ್ತು ಹೆಚ್ಚುವರಿ ಹದಿನೈದು ದಿನಗಳ ಬೇರ್ಪಡಿಕೆ ವೇತನವನ್ನು ನೀಡುವಂತೆ ಒತ್ತಾಯಿಸಿದರು. ಕೌರ್ ಮಾತುಕತೆ ನಡೆಸಿದ ಸಂಪೂರ್ಣ ಮೊತ್ತವನ್ನು ವರ್ಗಾಯಿಸಿದರು. ಆದರೆ ಸುಜಾತ ಯಾವುದೇ ಪಾವತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.

Viral video: ಉಚಿತ ಪ್ರಯಾಣ ನಿರಾಕರಿಸಿದ ಆಟೋ ಚಾಲಕನನ್ನು ನಿಂದಿಸಿದ ಹೋಮ್ ಗಾರ್ಡ್ ಸಿಬ್ಬಂದಿ ಅಮಾನತು

ಮಹೇಂದರ್ 2.5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ನಿರಾಕರಿಸಿದಾಗ, ತಮ್ಮ ಸಂಚು ವಿಫಲವಾಗುತ್ತದೆ ಎಂದು ತಿಳಿದ ತಕ್ಷಣ, ಕೆಲಸದಿಂದ ವಜಾಗೊಂಡಿದ್ದ ಇಬ್ಬರು ಮಾಜಿ ಉದ್ಯೋಗಿಗಳಾದ ಸುಜಾತಾ ಮತ್ತು ಲಕ್ಷ್ಮಿ ವೇಷ ಬದಲಿಸಿದರು. ಮಾತನಾಡಲು ಬಾರದ ಚಿಕ್ಕ ಹಾಗೂ ಅಸಹಾಯಕ ಮಕ್ಕಳನ್ನು ಸಂಸ್ಥೆಯ ಸಂಪೂರ್ಣ ಸಿಸಿಟಿವಿ ವ್ಯಾಪ್ತಿಗೆ ಸಿಗದ ಕತ್ತಲೆ ಅಥವಾ ರಹಸ್ಯ ಜಾಗಗಳಿಗೆ ಕರೆದೊಯ್ದಿದ್ದಾರೆ. ಮಕ್ಕಳು ತೀವ್ರವಾಗಿ ಕಿರುಚಾಡುವಂತೆ ಮತ್ತು ಭಯ ಪಡುವಂತೆ ಉದ್ದೇಶಪೂರ್ವಕವಾಗಿ ಪ್ರಚೋದಿಸಿದ್ದಾರೆ. ಆ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು, ನಂತರ ಅದನ್ನೇ ದೌರ್ಜನ್ಯದ ವಿಡಿಯೊ ಎಂಬಂತೆ ಬಿಂಬಿಸಿದ್ದಾರೆ ಎಂದು ಸಂಸ್ಥೆ ಗಂಭೀರವಾಗಿ ಆರೋಪಿಸಿದೆ.

ಕ್ಯಾಪ್ಜೆಮಿನಿಯು ಆವರಣ ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದಕ್ಕೆ ಸೀಮಿತವಾಗಿದೆ ಎಂದು ಕಂಪನಿಯು ವಾದಿಸಿತು. ಆದರೆ ಎಲ್ಲಾ ಡೇಕೇರ್ ಕಾರ್ಯಾಚರಣೆಗಳನ್ನು ಲಿಟಲ್ ಸ್ಕಾಲರ್ಸ್ ನಿರ್ವಹಿಸುತ್ತಿತ್ತು. ಲಿಟಲ್ ಸ್ಕಾಲರ್ಸ್ ಕಂಪನಿಯು ಪೊಲೀಸ್ ತನಿಖೆ ಮತ್ತು ಕ್ಯಾಪ್ಜೆಮಿನಿಯ ಆಂತರಿಕ ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸುತ್ತಿದೆ ಎಂದು ಹೇಳಿದೆ. ಇದರಲ್ಲಿ ಕರೆ ದಾಖಲೆಗಳು, ವಹಿವಾಟು ರಶೀದಿಗಳು ಮತ್ತು ವಿಡಿಯೊಗಳು ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳನ್ನು ಒದಗಿಸಲಾಗುತ್ತಿದೆ. ಇದೊಂದು ಕ್ರಿಮಿನಲ್ ಪಿತೂರಿಯಾಗಿದ್ದು, ಮಕ್ಕಳ ಸುರಕ್ಷತೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.

ಇನ್ನು ಪ್ರಕರಣ ಸಂಬಂಧ ತನಿಖೆ ಮುಂದುವರೆದಿದ್ದು, ವಿಜಯಲಕ್ಷ್ಮಿ ಮತ್ತು ಮಂಜುಳಾ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇನ್ನಷ್ಟು ಬಂಧನಗಳು ನಡೆಯಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.