ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗ್ಯಾಸ್ ಸಂಪರ್ಕ ಕಡಿತಗೊಳಿಸುವುದಾಗಿ ಬೆದರಿಸಿ ವೃದ್ಧೆಗೆ ಬರೋಬ್ಬರಿ 21 ಲಕ್ಷ ರುಪಾಯಿ ವಂಚನೆ

Cyber Crime: ಪಿಎನ್‌ಜಿ ಗ್ಯಾಸ್ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿ ಮಹಿಳೆಯೊಬ್ಬರಿಗೆ 21 ಲಕ್ಷ ರುಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‌ನ ಉದ್ಯೋಗಿಯೆಂದು ಹೇಳಿಕೊಂಡು ಕಿಡಿಗೇಡಿ 61 ವರ್ಷದ ಮಹಿಳೆಗೆ ವಂಚಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಲಖನೌ, ಮಾ. 16: ಎಲ್‌ಪಿಜಿ ಬಿಕ್ಕಟ್ಟಿನ ನಡುವೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ (Noida) ಆಘಾತಕಾರಿ ಸೈಬರ್ ವಂಚನೆ (Cyber Crime) ಪ್ರಕರಣ ಬೆಳಕಿಗೆ ಬಂದಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‌ನ ಉದ್ಯೋಗಿಯೆಂದು ಹೇಳಿಕೊಂಡು 61 ವರ್ಷದ ಮಹಿಳೆಯೊಬ್ಬರಿಗೆ ಕಿಡಿಗೇಡಿ ವಂಚಿಸಿದ್ದಾನೆ. ಪಿಎನ್‌ಜಿ ಗ್ಯಾಸ್ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿ 21 ಲಕ್ಷ ರು. ದೋಚಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ವಂಚಕರು ಮಹಿಳೆಗೆ ಕರೆ ಮಾಡಿ ಅವರ ಗ್ಯಾಸ್ ಬಿಲ್ ಬಾಕಿ ಇದೆ ಎಂದು ಹೇಳಿದ್ದಾರೆ. ಪಾವತಿ ಮಾಡದಿದ್ದರೆ ಅವರ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.

ಗ್ರೇಟರ್ ನೋಯ್ಡಾ ವೆಸ್ಟ್‌ ನಿವಾಸಿ ಗುಜಿಬ್ ಕಲ್ರಾ ವಂಚನೆಗೊಳಗಾದ ಸಂತ್ರಸ್ತೆ. ಅವರಿಗೆ ಕರೆ ಮಾಡಿದವರು ಅನಿಲ ಕಂಪನಿಯ ಅಧಿಕಾರಿ ಎಂದು ಹೇಳಿಕೊಂಡು ತುರ್ತು ಪಾವತಿ ಮಾಡುವಂತೆ ಒತ್ತಡ ಹೇರಿದ್ದಾರೆ.

ಮೆಗಾ ಫ್ಯಾಮಿಲಿ ಸೊಸೆ ಲಾವಣ್ಯ ತ್ರಿಪಾಠಿಗೆ ಸೋಶಿಯಲ್‌ ಮೀಡಿಯಾದಲ್ಲಿ ಕಿರುಕುಳ; ಸೈಬರ್ ಕ್ರೈಮ್ ಪೊಲೀಸರಿಗೆ ದೂರು

ನಂತರ ವಂಚಕನು ಪಾವತಿ ಲಿಂಕ್ ಅನ್ನು ಕಳುಹಿಸಿದನು. ಅದರ ಮೂಲಕ ಬಾಕಿ ಇರುವ ಬಿಲ್ ಪಾವತಿಸುವಂತೆ ಹೇಳಿದ್ದಾನೆ. ಅಡುಗೆ ಅನಿಲ ಕೊರತೆಯ ಭೀತಿಯ ನಡುವೆ ತನ್ನ ಅನಿಲ ಸಂಪರ್ಕ ಕಡಿತಗೊಳ್ಳಬಹುದೆಂಬ ಭಯದಿಂದ, ಮಹಿಳೆ ಲಿಂಕ್ ಅನ್ನು ತೆರೆದು ತನ್ನ ಬ್ಯಾಂಕ್ ಖಾತೆ ಮಾಹಿತಿ ಸೇರಿದಂತೆ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿದ್ದಾರೆ.

ಮಾಹಿತಿಯನ್ನು ನಮೂದಿಸಿದ ಕೆಲವೇ ನಿಮಿಷಗಳಲ್ಲಿ, ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗಲು ಪ್ರಾರಂಭಿಸಿತು. ದೂರಿನ ಪ್ರಕಾರ, ವಂಚಕ 11 ಪ್ರತ್ಯೇಕ ವಹಿವಾಟುಗಳಲ್ಲಿ 21 ಲಕ್ಷ ರು. ಪಡೆದಿದ್ದಾನೆ. ಪದೇ ಪದೆ ಹಣ ಹಿಂಪಡೆಯುತ್ತಿರುವ ಬಗ್ಗೆ ತನ್ನ ಮೊಬೈಲ್ ಫೋನ್‌ಗೆ ಬ್ಯಾಂಕ್ ಎಚ್ಚರಿಕೆಯ ಮೆಸೇಜ್‌ ಬಂದ ನಂತರವೇ ಸಂತ್ರಸ್ತೆಗೆ ವಂಚನೆಯ ಅರಿವಾಯಿತು. ಅವರು ತಕ್ಷಣ ಪೊಲೀಸರನ್ನು ಸಂಪರ್ಕಿಸಿ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರು.

ಸೈಬರ್ ಸೆಲ್‌ನ ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದೂರು ಸ್ವೀಕರಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ಸೆಲ್ ಸ್ಟೇಷನ್ ಹೌಸ್ ಅಧಿಕಾರಿ ವಿಜಯ್ ರಾಣಾ ದೃಢಪಡಿಸಿದ್ದಾರೆ.

ಸಿಜೆ ರಾಯ್‌ ಅಂತಿಮ ಕ್ಷಣದಲ್ಲಿ ಯಾರ ಜತೆ ಮಾತಾಡಿದ್ರು? ಪತ್ತೆಗೆ ಮೊಬೈಲ್‌ ಸಿಐಡಿ ಸೈಬರ್ ಸೆಲ್‌ಗೆ

ಸೈಬರ್ ಅಪರಾಧಿಗಳು ಆನ್‌ಲೈನ್‌ನಲ್ಲಿ ಜನರನ್ನು ವಂಚಿಸಲು ನಿರಂತರವಾಗಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳಲು ಸಂತ್ರಸ್ತರ ಮೇಲೆ ಒತ್ತಡ ಹೇರುವ ಸಲುವಾಗಿ ಭಯ ಅಥವಾ ತುರ್ತುಸ್ಥಿತಿಯನ್ನು ಬಳಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.

ನಾಗರಿಕರು ಅಪರಿಚಿತ ಕರೆಗಳು, ಅನುಮಾನಾಸ್ಪದ ಪಾವತಿ ಲಿಂಕ್‌ಗಳು ಮತ್ತು ಬ್ಯಾಂಕ್ ವಿವರಗಳಿಗಾಗಿ ಆನ್‌ಲೈನ್ ವಿನಂತಿಗಳ ಬಗ್ಗೆ ಜಾಗರೂಕರಾಗಿರಲು ಒತ್ತಾಯಿಸಿದ್ದಾರೆ. ಸೈಬರ್ ವಂಚನೆಯ ಸಂದರ್ಭದಲ್ಲಿ, ತಕ್ಷಣವೇ ಘಟನೆಯನ್ನು ಈ ಕೆಳಗೆ ನೀಡಿರುವ ಸಂಖ್ಯೆಗೆ ವರದಿ ಮಾಡಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ:

  • ರಾಷ್ಟ್ರೀಯ ಸೈಬರ್ ಸಹಾಯವಾಣಿ 1930ಗೆ ಕರೆ ಮಾಡಿ.
  • cybercrime.gov.inನಲ್ಲಿ ದೂರು ದಾಖಲಿಸಿ.

ತ್ವರಿತ ವರದಿ ಮಾಡುವುದರಿಂದ ವಹಿವಾಟುಗಳನ್ನು ಸ್ಥಗಿತಗೊಳಿಸುವ ಮತ್ತು ಹಣವನ್ನು ಮರುಪಡೆಯುವ ಸಾಧ್ಯತೆ ಹೆಚ್ಚು ಎಂದು ಪೊಲೀಸರು ತಿಳಿಸಿದ್ದಾರೆ.