ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Byrathi Basavaraj: ರೌಡಿಶೀಟರ್‌ ಹತ್ಯೆ, ಶಾಸಕ ಬೈರತಿ ಬಸವರಾಜ್‌ಗೆ ಪೊಲೀಸ್‌ ನೋಟಿಸ್‌, ಐವರ ಬಂಧನ

Byrathi Basavaraj: ಹೆಣ್ಣೂರು ಸಮೀಪದ ಬೈರತಿಯಲ್ಲಿರುವ ಬೈರತಿ ಬಸವರಾಜ್ ನಿವಾಸಕ್ಕೆ ಪೊಲೀಸರು ತೆರಳಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ. ಎರಡು ದಿನಗಳ ಒಳಗೆ ವಿಚಾರಣೆಗೆ ಆಗಮಿಸುವಂತೆ ಬೈರತಿ ಬಸವರಾಜ್ ಪುತ್ರ ನೀರಜ್ ಅವರ ಕೈಗೆ ನೋಟಿಸ್ ನೀಡಿ ತೆರಳಿದ್ದಾರೆ.

ಬಿಕ್ಲು ಶಿವ, ಬೈರತಿ ಬಸವರಾಜ್

ಬೆಂಗಳೂರು: ನಗರದಲ್ಲಿ ನಡೆದ ರೌಡಿಶೀಟರ್ ಬಿಕ್ಲು ಶಿವನ ಹತ್ಯೆ ಪ್ರಕರಣಕ್ಕೆ (rowdy sheeter Murder Case) ಸಂಬಂಧಿಸಿದಂತೆ ಹಂತಕರು ಸಿಕ್ಕಿಬಿದ್ದಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣದ ಐದನೇ ಆರೋಪಿಯಾಗಿರುವ ಕೆ.ಆರ್ ಪುರಂ ಬಿಜೆಪಿ ಶಾಸಕ ಬೈರತಿ ಬಸವರಾಜ್ (Byrathi Basavaraj) ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಪುಲಿಕೇಶಿನಗರ (pulakeshinagar Police) ಇನ್ಸ್ ಪೆಕ್ಟರ್ ಗೋವಿಂದರಾಜು ಅವರು ಹೆಣ್ಣೂರು ಸಮೀಪದ ಬೈರತಿಯಲ್ಲಿರುವ ಬೈರತಿ ಬಸವರಾಜ್ ನಿವಾಸಕ್ಕೆ ತೆರಳಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ. ಎರಡು ದಿನಗಳ ಒಳಗೆ ವಿಚಾರಣೆಗೆ ಆಗಮಿಸುವಂತೆ ಬೈರತಿ ಬಸವರಾಜ್ ಪುತ್ರ ನೀರಜ್ ಅವರ ಕೈಗೆ ನೋಟಿಸ್ ನೀಡಿ ತೆರಳಿದ್ದಾರೆ.

ಜುಲೈ 16ರಂದು ಮೃತ ಬಿಕ್ಲು ಶಿವನ ತಾಯಿಯ ದೂರಿನ ಅನ್ವಯ ಕೇಸ್ ದಾಖಲಾಗಿತ್ತು. ಆದರೆ ಇದೀಗ ದೂರು ಕೊಟ್ಟ ತಾಯಿ ವಿಜಯಲಕ್ಷ್ಮೀ ಅವರು, ನಾನು ಬೈರತಿ ಬಸವರಾಜ್ ವಿರುದ್ಧ ದೂರು ಕೊಟ್ಟಿಲ್ಲ. ಪೊಲೀಸರೇ ಹೆಸರು ಹಾಕಿಕೊಂಡಿದ್ದಾರೆ ಎಂದು ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೊದಲೇ ರಾಜಕೀಯ ದುರುದ್ದೇಶ ಇದೆ ಅಂತಿದ್ದ ಬಿಜೆಪಿಗೆ ಮೃತನ ತಾಯಿಯ ಮಾತು ಅಸ್ತ್ರವಾಗಿ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಬಿಜೆಪಿ ನಾಯಕ ಪಿ. ರಾಜೀವ್, ಫೋಟೋ ಹಿಡಿದುಕೊಂಡು, ಕೊಲೆಯ ಮೋಟಿವ್ ಹೇಗೆ ಪ್ರೂವ್ ಮಾಡ್ತೀರಾ ಎಂದು ಪೊಲೀಸರಿಗೆ ಪ್ರಶ್ನಿಸಿದ್ದಾರೆ. ಮತ್ತೊಂದು ಕಡೆ ಬಸನಗೌಡ ಪಾಟೀಲ್ ಯತ್ನಾಳ್, ಇದು ದ್ವೇಷದ ಕಾರಣಕ್ಕೆ ಟಾರ್ಗೆಟ್ ಮಾಡಿರುವ ಕೇಸ್ ಎಂದಿದ್ದಾರೆ.

ಆರೋಪಿ ಜೊತೆ ಬೈರತಿ ಬಸವರಾಜ್ ಇರುವ ವಿಡಿಯೋ ಫೋಟೋಗಳು ವೈರಲ್ ಆಗಿವೆ. ಬೈರತಿಗೆ ಬೆಳ್ಳಿ ಕಿರೀಟ ಮತ್ತು ಕೇಕ್ ಕಟಿಂಗ್ ಮಾಡಿಸಿ ಇದೇ ಜಗದೀಶ್ ಸನ್ಮಾನ ಮಾಡಿದ್ದನಂತೆ. ಅಲ್ಲದೇ ಕಾಲ್ ಹಿಸ್ಟರಿಯಲ್ಲಿ ಬೈರತಿ ಬಸವರಾಜ್, ಜಗ್ಗನನ್ನು ಸಂಪರ್ಕ ಮಾಡಿರುವುದು ಬಯಲಾಗಿದೆ. ಅಲ್ಲದೇ ಬೈರತಿ ಬಸವರಾಜ್ ಸಚಿವರಾಗಿದ್ದಾಗ ಜಗದೀಶ್‌ನನ್ನು ರೌಡಿಶೀಟ್ ಪಟ್ಟಿಯಿಂದ ತೆಗೆಸಿದ್ದರು ಎನ್ನಲಾಗಿದೆ.

ಪೊಲೀಸರು ಮತ್ತಷ್ಟು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ. ಬಂಧಿಸಿರುವ ಐವರು ಆರೋಪಿಗಳನ್ನು 10 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. 2 ದಿನಕ್ಕೊಮ್ಮೆ ಬೆಳಗ್ಗೆ 2 ಗಂಟೆಗಳ ಕಾಲ ವಕೀಲರ ಭೇಟಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Byrathi Basavaraj: ರೌಡಿಶೀಟರ್‌ ಕೊಲೆ ಕೇಸ್‌; ಬಂಧನ ಭೀತಿಯಿಂದ ಕೋರ್ಟ್‌ ಮೊರೆ ಹೋದ ಶಾಸಕ ಭೈರತಿ ಬಸವರಾಜ್

ಹರೀಶ್‌ ಕೇರ

View all posts by this author