ಇಟಲಿ: ಗುರುದ್ವಾರಕ್ಕೆ (Gurdwara) ಹೋಗಿ ಹಿಂದಿರುಗುತ್ತಿದ್ದ ಇಬ್ಬರು ಭಾರತೀಯರ ಮೇಲೆ ಗುಂಡಿನ ದಾಳಿ ನಡೆದ ಘಟನೆ ಇಟಲಿಯಲ್ಲಿ (Italy) ನಡೆದಿದೆ. ಬರ್ಗಾಮೊ ಪ್ರಾಂತ್ಯದ (Bergamo province) ಕೊವೊದಲ್ಲಿ (Covo) ವೈಶಾಖಿ ಹಬ್ಬದ (Vaisakhi festival) ಸಭೆಯ ವೇಳೆ ಸಿಖ್ ಪೂಜಾ ಸ್ಥಳವಾಗಿ ಬಳಸಲಾಗುವ ಗೋದಾಮಿನಿಂದ ಶುಕ್ರವಾರ ಇಬ್ಬರು ಹೋರಾಡುತ್ತಿದ್ದ ವೇಳೆ ಬಂದೂಕುಧಾರಿಗಳು ಕಾರಿನಲ್ಲಿ ಬಂದು ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. ಮೃತರನ್ನು ರಾಗಿಂದರ್ ಸಿಂಗ್ (48), ಗುರ್ಮಿತ್ ಸಿಂಗ್ (48) ಎಂದು ಗುರುತಿಸಲಾಗಿದೆ.
ಕೊವೊ ಪಟ್ಟಣದ ಕೈಗಾರಿಕಾ ಪ್ರದೇಶದ ಗುರುದ್ವಾರ ಮಾತಾ ಸಾಹಿಬ್ ಕೌರ್ ಜಿ ಮುಂಭಾಗದ ಚೌಕದಲ್ಲಿ ಶುಕ್ರವಾರ ಮಧ್ಯರಾತ್ರಿಗಿಂತ ಕೆಲವು ನಿಮಿಷಗಳ ಮೊದಲು ಈ ದಾಳಿ ನಡೆದಿದೆ. ದಾಳಿಕೋರರು ಕೊವೊ ನಿವಾಸಿ ರಾಗಿಂದರ್ ಸಿಂಗ್, ಅಗ್ನಾಡೆಲ್ಲೊದ ಗುರ್ಮಿತ್ ಸಿಂಗ್ ಮೇಲೆ ಹಲವು ಸುತ್ತಿನ ಗುಂಡು ಹಾರಿಸಿದ್ದಾರೆ. ಬಳಿಕ ತಮ್ಮ ಕಾರಿನಲ್ಲಿ ಪರಾರಿಯಾಗಿದ್ದಾರೆ.
Cauvery River Tragedy: ಕೆ.ಆರ್.ನಗರದಲ್ಲಿ ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ದುರ್ಮರಣ
ಈ ದಾಳಿಗೂ ಮುನ್ನ ಅವರ ನಡುವೆ ಯಾವುದೇ ಜಗಳವಾಗಿಲ್ಲ ಎನ್ನಲಾಗಿದೆ. ಇದೊಂದು ಯೋಜಿತ ಹತ್ಯೆಯಾಗಿದೆ. ಅಪರಾಧ ಸ್ಥಳದಲ್ಲಿ ಸುಮಾರು 10 ಶೆಲ್ ಹೊರಕವಚಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಗುಂಡು ಹಾರಿಸಿದ ಒಬ್ಬ ವ್ಯಕ್ತಿ ಇತ್ತೀಚೆಗೆ ಹಲವು ಬಾರಿ ಗುರುದ್ವಾರಕ್ಕೆ ಬಂದು ಹೋಗುತ್ತಿದ್ದ. ಆತ ಕೂಡ ಭಾರತೀಯ. ಮೂರನೇ ವ್ಯಕ್ತಿಯೊಬ್ಬನಿಗೂ ಗುಂಡು ತಗಲಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದು, ಇಲ್ಲಿ ಶನಿವಾರ ವೈಶಾಖಿ ಹಬ್ಬದ ಆಚರಣೆಯ ಸಿದ್ಧತೆ ನಡೆಯುತ್ತಿತ್ತು. ಇದರಲ್ಲಿ ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಭಾಗವಹಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಹೊಸಪೇಟೆಯಲ್ಲಿ ಸರಣಿ ಅಪಘಾತ; ಬೈಕ್, ಕಾರು, ಬಸ್ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ, ನಾಲ್ವರ ಸಾವಿನ ಶಂಕೆ
ಹೆಣ್ಣುಮಕ್ಕಳ ಕತ್ತು ಸೀಳಿ ಕೊಂದ ತಂದೆ
ವ್ಯಕ್ತಿಯೊಬ್ಬ ತನ್ನ 11 ವರ್ಷದ ಅವಳಿ ಹೆಣ್ಣುಮಕ್ಕಳ ಕತ್ತು ಸೀಳಿ ಕೊಲೆ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಆರೋಪಿಯನ್ನು ಬಿಹಾರದ ಶಶಿ ರಂಜನ್ ಮಿಶ್ರಾ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಬಳಿಕ ಆರೋಪಿಯು ಪೊಲೀಸರಿಗೆ ಕರೆ ಮಾಡಿ ತನ್ನ ಹೆಣ್ಣುಮಕ್ಕಳನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ.
ಪತ್ನಿ ರೇಷ್ಮಾ, ಅವಳಿ ಹೆಣ್ಣುಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಹಾಗೂ ಆರು ವರ್ಷದ ಮಗನೊಂದಿಗೆ ಕಾನ್ಪುರದಲ್ಲಿ ವಾಸವಾಗಿದ್ದ ಶಶಿ ರಂಜನ್, ತನ್ನ ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸುತ್ತಿದ್ದನು. ಶಶಿ ಖಿನ್ನತೆಯಿಂದ ಬಳಲುತ್ತಿದ್ದು ಮನೆಯಲ್ಲಿ ಸಿಸಿಟಿವಿ ಕೆಮರಾಗಳನ್ನು ಅಳವಡಿಸಿದ್ದನು ಎನ್ನಲಾಗಿದೆ. ರೇಷ್ಮಾ ಮತ್ತು ಶಶಿಯನ್ನು 2014 ರಲ್ಲಿ ವಿವಾಹವಾಗಿದ್ದರು. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.