ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿದ್ಯಾ ಇರ್ವತ್ತೂರು

vidyaIrvathur@gmail.com

Articles
Virat Kohli: ವಿರಾಟ್ ಕೊಹ್ಲಿ, ಅನುಷ್ಕಾ  ಲಂಡನ್‌ನಲ್ಲಿ ವಾಸಿಸಲು ಕಾರಣ ಬಹಿರಂಗ

ವಿರುಷ್ಕಾ ಜೋಡಿ ಲಂಡನ್‌ಗೆ ಹಾರಿದ್ದು ಏಕೆ?

ಸೆಲೆಬ್ರಿಟಿ ಜೋಡಿಗಳಲ್ಲಿ ಒಂದಾಗಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ 2024ರಿಂದ ಲಂಡನ್‌ನಲ್ಲಿ ವಾಸವಾಗಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದ ಮೂಲಕ ಅವರ ಅಭಿಮಾನಿಗಳು ಸಾಕಷ್ಟು ಬೇಸರವನ್ನೂ ಹೊರಹಾಕಿದ್ದರು. ಆದರೆ ಈಗ ಅವರು ಲಂಡನ್‌ಗೆ ಯಾಕೆ ತೆರಳಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ಪತಿ, ಖ್ಯಾತ ವೈದ್ಯರೂ ಆಗಿರುವ ಡಾ. ಶ್ರೀರಾಮ್ ನೆನೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Supreme Court: ಷರಿಯಾ ತೀರ್ಪಿಗೆ ಕಾನೂನಿನ ಮಾನ್ಯತೆ ಇಲ್ಲ: ಸುಪ್ರೀಂ ಕೋರ್ಟ್‌

ಖಾಜಿ, ಕಾಜಿಯತ್, ಷರಿಯಾ ನ್ಯಾಯಾಲಯಗಳಿಗೆ ಕಾನೂನಿನ ಮಾನ್ಯತೆ ಇಲ್ಲ

ಮುಸ್ಲಿಂ ಮಹಿಳೆಯ ಜೀವನಾಂಶ ಅರ್ಜಿಯನ್ನು ಸ್ವೀಕರಿಸಿರುವ ಸುಪ್ರೀಂ ಕೋರ್ಟ್, ಖಾಜಿ (ದಾರುಲ್ ಕಾಜಾ), ಕಾಜಿಯತ್, ಷರಿಯಾ ನ್ಯಾಯಾಲಯಗಳಿಗೆ ಕಾನೂನಿನ ಮಾನ್ಯತೆ ಇಲ್ಲ. ನ್ಯಾಯಾಲಯದ ಕಾರ್ಯವನ್ನು ನಿರ್ವಹಿಸಿದರೂ ಇವುಗಳು ನೀಡುವ ತೀರ್ಪನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ಪೀಠವು ಮುಸ್ಲಿಂ ಮಹಿಳೆಯ ಜೀವನಾಂಶ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

Pahalgam Attack: ಉಗ್ರರ ದಾಳಿಯಿಂದ ಪ್ರವಾಸಿಗರನ್ನು ರಕ್ಷಿಸಿದ ಸಹೋದರಿಯರು

ಪಹಲ್ಗಾಮ್‌ನಲ್ಲಿ ಕೇಳುತ್ತಿದೆ ಈಗ ಸಹೋದರಿಯರ ಸಾಹಸಗಾಥೆ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯಲ್ಪಡುವ ಬೈಸರನ್ ಕಣಿವೆಯಲ್ಲಿ ಉಗ್ರರ ಎದುರು ದಿಟ್ಟವಾಗಿ ನಿಂತ ಸಹೋದರಿಯರಾದ ರುಬೀನಾ (14) ಮತ್ತು ಮುಮ್ತಾಜಾ (16) ಅನೇಕ ಪ್ರವಾಸಿಗರ ಪ್ರಾಣ ರಕ್ಷಿಸಿದ್ದಾರೆ. ಸದ್ಯ ಅವರ ಈ ಸಾಹಸಗಾಥೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

Indian Air Force: ವಾಯುಪಡೆ ವಿಮಾನದಿಂದ ಲೋಹದ ವಸ್ತು ಬಿದ್ದು ಮನೆಗೆ ಹಾನಿ

ಭಾರತೀಯ ವಾಯುಪಡೆಯ ವಿಮಾನದಿಂದ ಮನೆ ಮೇಲೆ ಬಿದ್ದ ವಸ್ತು

ಭಾರತೀಯ ವಾಯುಪಡೆಯ (Indian Air Force) ವಿಮಾನದಿಂದ ಲೋಹದ ವಸ್ತುವೊಂದು ಆಕಾಶದಿಂದ ಕೆಳಗೆ ಬಿದ್ದಿದ್ದು, ಇದರಿಂದ ಮನೆಯೊಂದಕ್ಕೆ ಹಾನಿಯಾಗಿರುವ ಘಟನೆ ಶುಕ್ರವಾರ ಮಧ್ಯಪ್ರದೇಶದ (Madhya pradesh) ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯೊಂದಕ್ಕೆ ಬಹುತೇಕ ಹಾನಿಯಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇದೊಂದು ಆಕಸ್ಮಿಕ ಘಟನೆಯಾಗಿದೆ. ಈ ಕುರಿತು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿರುವ ಭಾರತೀಯ ವಾಯುಪಡೆ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ತಿಳಿಸಿದೆ.

Pahalgam Terror Attack: ಪಹಲ್ಗಾಮ್ ದಾಳಿಗೆ ಕಾರಣರಾದವರನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿ- ವಿಶ್ವಸಂಸ್ಥೆ

ಪಹಲ್ಗಾಮ್ ದಾಳಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ತೀವ್ರ ಖಂಡನೆ

15 ರಾಷ್ಟ್ರಗಳನ್ನೊಳಗೊಂಡ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡುವಂತೆ ತಿಳಿಸಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ(Pahalgam Terror Attack) ಏಪ್ರಿಲ್ 22ರಂದು ಭಯೋತ್ಪಾದಕ ದಾಳಿಯಲ್ಲಿ ಸುಮಾರು 26 ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದರು. ಈ ಭಯೋತ್ಪಾದನಾ ಕೃತ್ಯದ ಅಪರಾಧಿಗಳು, ಸಂಘಟಕರು, ಹಣಕಾಸು ಪೂರೈಸಿರುವವರನ್ನು ಹೊಣೆಗಾರರನ್ನಾಗಿ ಮಾಡಿ ಅವರನ್ನು ನ್ಯಾಯದ ಕಟಕಟೆಗೆ ತರಬೇಕಿದೆ ಎಂದು ವಿಶ್ವ ಸಂಸ್ಥೆ ಭದ್ರತಾ ಮಂಡಳಿಯು ತಿಳಿಸಿದೆ.

Pahalgam Terror Attack: ಭಾರತದಲ್ಲಿ ನೆಲೆಯಾಗುವ ಕನಸಿನೊಂದಿಗೆ ಬಂದಿದ್ದ ಪಾಕ್ ಹಿಂದೂ ಕುಟುಂಬಗಳು ಈಗ ಅತಂತ್ರ

ದೇಶ ತೊರೆಯಲು ಗಡುವು- ಪಾಕ್ ಮೂಲದ ಹಿಂದೂಗಳಿಗೂ ಸಂಕಷ್ಟ

ಪಹಲ್ಗಾಮ್‌ನಲ್ಲಿ (Pahalgam Terror Attack) ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ಬಳಿಕ ಕೇಂದ್ರ ಸರ್ಕಾರ ಗುರುವಾರ ಪಾಕಿಸ್ತಾನಿ ಪ್ರಜೆಗಳಿಗೆ ಎಲ್ಲಾ ರೀತಿಯ ವೀಸಾಗಳನ್ನು ರದ್ದು ಮಾಡಿ ದೇಶ ತೊರೆಯುವಂತೆ ಆದೇಶಿಸಿತ್ತು. ಮಾತ್ರವಲ್ಲದೆ ಅವರಿಗೆ ದೇಶ ತೊರೆಯಲು 48 ಗಂಟೆಗಳ ಕಾಲಾವಕಾಶ ನೀಡಿತ್ತು. ಆದರೆ ಕೆಲವು ದಿನಗಳ ಹಿಂದೆಯಷ್ಟೇ ದೆಹಲಿಗೆ ಬಂದು ವಾಸವಾಗಿರುವ ಅನೇಕ ಪಾಕಿಸ್ತಾನಿ ಹಿಂದೂಗಳ ಭವಿಷ್ಯ ಈಗ ಅತಂತ್ರವಾಗಿದೆ.

Vastu Tips: ಈ ವಸ್ತುಗಳನ್ನು  ಪರ್ಸ್‌ನಲ್ಲಿ ಎಂದಿಗೂ  ಇಡಬೇಡಿ

ಪರ್ಸ್‌ನಲ್ಲಿ ಇಡಲೇಬಾರದ ವಸ್ತುಗಳು ಯಾವುದು ಗೊತ್ತೇ?

ಪ್ರತಿಯೊಬ್ಬರೂ ತಮ್ಮ ಜೇಬು ಖಾಲಿಯಾಗದಿರಲಿ ಎಂದು ಬಯಸುತ್ತಾರೆ. ಖಾಲಿ ಪರ್ಸ್ ನೋಡುವುದು ಎಲ್ಲರಿಗೂ ಬೇಸರವನ್ನುಂಟು ಮಾಡುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ಹೆಣಗಾಡುತ್ತಾರೆ. ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟು ಹಣ ಸಂಪಾದಿಸಿದರೂ ಹಣವೆಲ್ಲ ನೀರಿನಂತೆ ಖರ್ಚಾಗಿ ಹೋಗುತ್ತದೆ. ಇದಕ್ಕೆ ಸಾಕಷ್ಟು ಕಾರಣವೂ ಇದೆ. ಪರ್ಸ್ ನಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ವಾಸ್ತು ತಜ್ಞರು.

Longest Road: 14 ದೇಶಗಳ ಮೂಲಕ ಹಾದು ಹೋಗುವ ವಿಶ್ವದ ಅತ್ಯಂತ ಉದ್ದದ ರಸ್ತೆ; 30,600 ಕಿ.ಮೀ. ನೋ ಯೂ ಟರ್ನ್‌!

ವಿಶ್ವದ ಅತಿ ಉದ್ದ ರಸ್ತೆ ಇದು-30,600 ಕಿ.ಮೀ. ನೋ ಯೂ ಟರ್ನ್‌!

ದೇಶದ ಅತೀ ಉದ್ದದ ರಸ್ತೆ(Longest Road) ನಿರ್ಮಿಸಿ ದಾಖಲೆ ಬರೆದಿರುವ ಭಾರತದ ರಾಷ್ಟ್ರೀಯ ಹೆದ್ದಾರಿ 44 (National Highway 44)ಕ್ಕಿಂತಲೂ ಉದ್ದದ ರಸ್ತೆಯೊಂದು ವಿಶ್ವದಲ್ಲಿದೆ. ಇದನ್ನು ಹಲವು ದಶಕಗಳ ಹಿಂದೆಯೇ ನಿರ್ಮಿಸಲಾಗಿದೆ. 30,600 ಕಿ.ಮೀ. ಉದ್ದ ಹೊಂದಿರುವ ಈ ರಸ್ತೆ 14 ದೇಶಗಳ ಮೂಲಕ ಹಾದು ಹೋಗುತ್ತದೆ. ಆ ದೇಶಗಳು ಯಾವುವು? ಆ ರಸ್ತೆ ಎಲ್ಲಿದೆ ಗೊತ್ತೆ?

Pahalgam Terror Attack: ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನಿಯರು ಗೂಗಲ್‌ನಲ್ಲಿ ಹುಡುಕಿದ್ದು ಏನು ಗೊತ್ತೇ ?

ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದಲ್ಲಿ ಗೂಗಲ್ ಟ್ರೆಂಡ್ ಹೇಗಿದೆ ಗೊತ್ತೇ?

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯ ಬಳಿಕ ವಿಶ್ವದಾದ್ಯಂತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪಾಕಿಸ್ತಾನವೂ ಸೇರಿದಂತೆ ಹಲವಾರು ದೇಶಗಳು ಇದರ ಬೆಳವಣಿಗೆಯ ಬಗ್ಗೆ ಭಾರತದತ್ತ ಕುತೂಹಲದಿಂದ ನೋಡುತ್ತಿದ್ದಾರೆ. ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನಕ್ಕೆ ಯಾವ ರೀತಿಯಲ್ಲಿ ಚಾಟಿ ಬೀಸುತ್ತದೆ, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಏನು ಮಾಡುತ್ತದೆ ಎನ್ನುವ ಕುತೂಹಲ ಈಗ ಎಲ್ಲರಲ್ಲೂ ಇದೆ. ಈ ನಡುವೆ ಪಾಕಿಸ್ತಾನಿಯರು ಆನ್‌ಲೈನ್ ಮೂಲಕ ಹೆಚ್ಚಾಗಿ ಏನು ಹುಡುಕುತ್ತಿದ್ದಾರೆ ಗೊತ್ತೇ?

Ramanathaswamy Temple: ರಾಮೇಶ್ವರಂ ದೇಗುಲದ ಹುಂಡಿಯಲ್ಲಿ 1.47 ಕೋಟಿ ರೂ. ನಗದು, 98 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ, 162 ವಿದೇಶಿ ಕರೆನ್ಸಿಗಳು

ರಾಮೇಶ್ವರಂ ದೇಗುಲದ ಹುಂಡಿಯಲ್ಲಿ 1.47 ಕೋಟಿ ರೂ. ನಗದು, 98 ಗ್ರಾಂ ಚಿನ್ನ

ತಮಿಳುನಾಡಿನ (Tamilnadu temple) ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ ದೇವಾಲಯದ ಸಿಬ್ಬಂದಿ ಮತ್ತು ಸ್ವಯಂಸೇವಕರ ಸಹಾಯದಿಂದ ಹುಂಡಿ ಎಣಿಕೆ ಕಾರ್ಯವನ್ನು ನಡೆಸಲಾಯಿತು. ಈ ವೇಳೆ ಹುಂಡಿಯಲ್ಲಿ ಸಂಗ್ರಹವಾದ ಒಟ್ಟು ಮೊತ್ತ 1,47,42,943 ರೂ. ಇದರೊಂದಿಗೆ 98 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಮತ್ತು 162 ವಿದೇಶಿ ಕರೆನ್ಸಿಗಳು ಕೂಡ ಸಿಕ್ಕಿವೆ. ದೇವಾಲಯದ ಹುಂಡಿ ಎಣಿಕೆ ಕಾರ್ಯವು ಈ ಬಾರಿ ಒಂದೇ ದಿನದಲ್ಲಿ ಪೂರ್ಣಗೊಂಡಿದೆ.

Pahalgam Attack: ಪಹಲ್ಗಾಮ್ ದಾಳಿಕೋರರು ಸ್ವಾತಂತ್ರ್ಯ ಹೋರಾಟಗಾರರಂತೆ! ನಾಚಿಗೆ ಬಿಟ್ಟು ಉಗ್ರರನ್ನು ಹಾಡಿ ಹೊಗಳಿದ ಪಾಕ್

ಉಗ್ರರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದ ಪಾಕ್ ಉಪ ಪ್ರಧಾನಿ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಸುಮಾರು 26 ಮಂದಿ ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದ್ದು, ಈ ನಡುವೆಯೇ ಇಸ್ಲಾಮಾಬಾದ್‌ನ ವಿದೇಶಾಂಗ ಸಚಿವ, ದೇಶದ ಉಪ ಪ್ರಧಾನ ಮಂತ್ರಿಯೂ ಆಗಿರುವ ಇಶಾಕ್ ದಾರ್ ದುಷ್ಕರ್ಮಿಗಳನ್ನು "ಸ್ವಾತಂತ್ರ್ಯ ಹೋರಾಟಗಾರರು" ಎಂದು ಬಣ್ಣಿಸಿದ್ದಾರೆ.

Pahalgam Terror Attack: ಪಹಲ್ಗಾಮ್ ದಾಳಿಯ ಹಿಂದಿನ ಮಾಸ್ಟರ್ ಮೈಂಡ್  ಹಫೀಜ್ ಸಯೀದ್?

ಪಹಲ್ಗಾಮ್ ಘಟನೆಯ ಹಿಂದೆ 26/11 ದಾಳಿಯ ಮಾಸ್ಟರ್ ಮೈಂಡ್

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26/11 ದಾಳಿಯ ಮಾಸ್ಟರ್ ಮೈಂಡ್ ಮತ್ತು ನಿಷೇಧಿತ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಮುಖ್ಯಸ್ಥ ಹಫೀಜ್ ಸಯೀದ್ (Hafiz Saeed) ಪ್ರಮುಖ ಪಾತ್ರವಹಿಸಿದ್ದಾನೆ ಎನ್ನಲಾಗಿದೆ. ಪಹಲ್ಗಾಮ್ ದಾಳಿಯ ಬಳಿಕ ನಿಷೇಧಿತ ಲಷ್ಕರ್-ಎ-ತೈಬಾದೊಂದಿಗೆ ಸಂಬಂಧವಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಇದನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದೆ. ಈ ಗುಂಪಿನಲ್ಲಿ ಹೆಚ್ಚಾಗಿ ವಿದೇಶಿ ಭಯೋತ್ಪಾದಕರು ಸೇರಿದ್ದು, ಇದಕ್ಕೆ ಸ್ಥಳೀಯ ಉಗ್ರಗಾಮಿಗಳ ಬೆಂಬಲವೂ ಇದೆ.

Pahalgam Terror Attack: ಉಗ್ರರಿಗೆ ಬೆಂಬಲ ನೀಡುತ್ತಿರುವುದು ಹೌದು... ಸಂದರ್ಶನದಲ್ಲಿ ಒಪ್ಪಿಕೊಂಡ ಪಾಕಿಸ್ತಾನ ರಕ್ಷಣಾ ಸಚಿವ

ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದು ಹೌದು ಎಂದ ಪಾಕ್

Pakistan Defense Minister: ಸಂದರ್ಶನವೊಂದರಲ್ಲಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ತಮ್ಮ ದೇಶದ ಕುಕೃತ್ಯಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ಮೂಲಕ ಪಾಕಿಸ್ತಾನವು ಜಾಗತಿಕ ವೇದಿಕೆಗಳಲ್ಲಿ ಭಾರತದ ದೀರ್ಘಕಾಲೀನ ನಿಲುವನ್ನು ಸಮರ್ಥಿಸಿಕೊಂಡಿದೆ.

Indian Airlines: ವಾಯುಮಾರ್ಗ ಮುಚ್ಚಿದ ಪಾಕ್‌; ಏರ್‌ಇಂಡಿಯಾ, ಇಂಡಿಗೋ ವಿಮಾನಗಳು ಡೈವರ್ಟ್‌

ಭಾರತೀಯ ವಿಮಾನಗಳಿಗೆ ವಾಯುಪ್ರದೇಶ ಮುಚ್ಚಿದ ಪಾಕ್

ಪಹಲ್ಗಾಮ್‌ ದುರಂತ (Pahalgam attack) ನಂತರ ಭಾರತ ಸರ್ಕಾರ ಕೈಗೊಂಡ ಕ್ರಮಗಳಿಗೆ ಪ್ರತಿಯಾಗಿ ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಹೀಗಾಗಿ ಸೇವೆಯಲ್ಲಿ ಅಡಚಣೆ ಉಂಟಾಗಲಿದೆ ಎಂದು ಇಂಡಿಗೋ ಮತ್ತು ಏರ್ ಇಂಡಿಯಾ ಪ್ರಯಾಣಿಕರಿಗೆ ತಿಳಿಸಿದೆ. ವಿಮಾನ ಮಾರ್ಗಗಳನ್ನು ಬದಲಾಯಿಸಬೇಕಾಗಿರುವುದರಿಂದ "ಪರ್ಯಾಯ ವಿಸ್ತೃತ ಮಾರ್ಗ" ಕ್ಕೆ ಕಾರಣವಾಗುವ ಕೆಲವು ಅಂತಾರಾಷ್ಟ್ರೀಯ ವಿಮಾನಗಳ ವೇಳಾಪಟ್ಟಿಯ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

Shimla Agreement: ಶಿಮ್ಲಾ ಒಪ್ಪಂದ ಮುರಿಯುವ ಬೆದರಿಕೆ-ಯುದ್ಧಕ್ಕೆ ಅಹ್ವಾನ ನೀಡಿತೇ ಪಾಕ್ ?

ಭಾರತಕ್ಕೆ ಪಾಕ್‌ನಿಂದ ಶಿಮ್ಲಾ ಒಪ್ಪಂದ ಮುರಿಯುವ ಬೆದರಿಕೆ

ದಕ್ಷಿಣ ಕಶ್ಮೀರ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರವು ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಶಿಮ್ಲಾ ಒಪ್ಪಂದವನ್ನು ಮುರಿಯುವುದಾಗಿ ಬೆದರಿಕೆ ಒಡ್ಡುತ್ತಿದೆ. ಈ ಮೂಲಕ ಪಾಕಿಸ್ತಾನವು ಯುದ್ಧ ನಡೆಸಲು ಭಾರತಕ್ಕೆ ಬಹಿರಂಗವಾಗಿಯೇ ಅಹ್ವಾನ ನೀಡುತ್ತಿದೆ. ಒಂದು ವೇಳೆ ಪಾಕಿಸ್ತಾನ ಈ ಒಪ್ಪಂದ ಮುರಿದರೆ ಮತ್ತೊಮ್ಮೆ ಎರಡು ದೇಶಗಳ ನಡುವೆ ಯುದ್ಧ ಪ್ರಾರಂಭವಾಗುವುದರಲ್ಲಿ ಸಂದೇಹವಿಲ್ಲ.

Vastu Tips: ಅದೃಷ್ಟ ಹೊತ್ತು ತರುತ್ತಾನೆ ನಗುವ ಬುದ್ಧ

ಬುದ್ಧನ ಪ್ರತಿಮೆ ಮನೆಯಲ್ಲಿ ಎಲ್ಲಿ ಇಡಬೇಕು?

ಹೆಚ್ಚಿನವರು ಮನೆ, ಕಚೇರಿಯಲ್ಲಿ ನಗುವ ಬುದ್ಧನ ಪ್ರತಿಮೆ ಅಥವಾ ಚಿತ್ರವನ್ನು ಇಟ್ಟುಕೊಳ್ಳುತ್ತಾರೆ. ಇದು ಯಾಕೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ನಗುವ ಬುದ್ಧನ ಪ್ರತಿಮೆ ಅಥವಾ ಚಿತ್ರವನ್ನು ಇಟ್ಟುಕೊಳ್ಳುವುದು ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಇದು ಸರಿಯೇ, ಬುದ್ಧನ ಪ್ರತಿಮೆ ಅಥವಾ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದೇ, ಯಾವ ರೀತಿಯ ಬುದ್ಧನ ಪ್ರತಿಮೆ ಇಟ್ಟುಕೊಳ್ಳಬೇಕು ? ಈ ಬಗ್ಗೆ ವಾಸ್ತು ಶಾಸ್ತ್ರ (Vastushastra) ಏನು ಹೇಳಿದೆ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Pahalgam terror attack: ಪಹಲ್ಗಾಮ್ ಉಗ್ರರ ದಾಳಿಗೆ ಪಾಕ್‌ ಸೆಲೆಬ್ರಿಟಿಗಳಿಂದ ಖಂಡನೆ

ಭಯೋತ್ಪಾದಕ ದಾಳಿಗೆ ಪಾಕಿಸ್ತಾನಿ ಸೆಲೆಬ್ರಿಟಿಗಳಿಂದ ಖಂಡನೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ನಟ ಫವಾದ್ ಖಾನ್ (Fawad Khan), ನಟಿಯರಾದ ಹನಿಯಾ ಆಮಿರ್ (Hania Aamir)ಮತ್ತು ಮೌರಾ ಹೊಕೇನ್ (Mawra Hocane) ಸೇರಿದಂತೆ ಹಲವು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲಿಯಾದರೂ ದುರಂತ ಸಂಭವಿಸಿದರೆ ಅದು ನಮಗೆಲ್ಲರಿಗೂ ದುರಂತವೇ ಆಗಿದೆ ಎಂದು ಹೇಳಿದ್ದು, ಅವರೆಲ್ಲ ಭಯೋತ್ಪಾದಕ ದಾಳಿಯ ವಿರುದ್ಧ ಧ್ವನಿಗೂಡಿಸಿದ್ದಾರೆ ಮತ್ತು ಮೃತರಿಗೆ ಸಂತಾಪ ಸೂಚಿಸಿದ್ದಾರೆ.

Pahalgam Attack: ಎಲ್‌ಇಟಿಯ ತರಬೇತಿ ಶಿಬಿರಗಳು ಎಲ್ಲಿವೆ? ಅವುಗಳನ್ನು ನಾಶ ಮಾಡಲು ಭಾರತಕ್ಕೆ ಸಾಧ್ಯವೇ?

ಎಲ್‌ಇಟಿಯ ತರಬೇತಿ ಶಿಬಿರಗಳು ಎಲ್ಲಿವೆ? ಅದರ ಧ್ವಂಸ ಸಾಧ್ಯವೇ?

ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಶಿಬಿರ ಮತ್ತು ಉಡಾವಣಾ ಪ್ಯಾಡ್‌ಗಳನ್ನು ಲಷ್ಕರ್ ತರಬೇತುದಾರರು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಮಾರ್ಗದರ್ಶನದಲ್ಲಿ ನಡೆಸುತ್ತಿದ್ದಾರೆ ಎನ್ನುತ್ತದೆ ಗುಪ್ತಚರ ಮಾಹಿತಿಗಳು. ಹಾಗಾದರೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎಲ್‌ಇಟಿಯ ತರಬೇತಿ ಶಿಬಿರಗಳು ಎಲ್ಲಿವೆ, ಇಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Pahalgam Attack: 5 ಹಂತಕರು, 3 ಜಾಗ, 10 ನಿಮಿಷಗಳಲ್ಲಿ ಘನಘೋರ ದುರಂತ!

ಹತ್ತು ನಿಮಿಷ.. ಐದಾರು ಉಗ್ರರು.. ಮುಂದೆ ನಡೆದಿದ್ದು ಭೀಕರ!

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ಉಗ್ರರು ಇಲ್ಲಿಗೆ ಬರುತ್ತಾರೆ ಎನ್ನುವ ಸಂದೇಹವೇ ಇಲ್ಲದ ಪ್ರವಾಸಿಗರ ಗುಂಪು ಅಲ್ಲಿತ್ತು. ಐದಾರು ಮಂದಿ ಹಂತಕರು ಅಲ್ಲಿಗೆ ಬಂದಿದ್ದಾರೆ. ಮೂರು ಸ್ಥಳಗಳಲ್ಲಿ 10 ನಿಮಿಷಗಳ ಭಾರೀ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಗೆ 26 ಮಂದಿ ಸಾವನ್ನಪ್ಪಿದ್ದಾರೆ.ಇದೆಲ್ಲವೂ ಬೆಳಕಿಗೆ ಬಂದಿದ್ದು ಭಯೋತ್ಪಾದಕ ದಾಳಿಯ ತನಿಖೆಯ ವೇಳೆ.

Indian Army: ಬಲಿಷ್ಠ ಸೇನೆ ಹೊಂದಿರುವ ವಿಶ್ವದ ಹತ್ತು ಶಕ್ತಿಶಾಲಿ ದೇಶಗಳು ಯಾವುವು ಗೊತ್ತೆ? ಭಾರತಕ್ಕೆ ಎಷ್ಟನೇ ಸ್ಥಾನ?

ಬಲಿಷ್ಠ ಸೇನೆ ಹೊಂದಿರುವ ವಿಶ್ವದ ಹತ್ತು ಶಕ್ತಿಶಾಲಿ ದೇಶಗಳು ಯಾವುವು ಗೊತ್ತೆ?

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ಸರ್ಕಾರವು ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನವನ್ನು ಮಣಿಸಲು ಕೆಲವೊಂದು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದೆ. ಇದು ಎರಡು ರಾಷ್ಟ್ರಗಳ ನಡುವೆ ಯುದ್ಧ ಸನ್ನಿವೇಶವನ್ನೂ ಸೃಷ್ಟಿಸಿದೆ. ಒಂದು ವೇಳೆ ಯುದ್ಧವಾದರೆ ಭಾರತದ ಸೇನೆಯ ಮುಂದೆ ಪಾಕಿಸ್ತಾನ ಮಂಡಿಯೂರುವುದರಲ್ಲಿ ಸಂದೇಹವಿಲ್ಲ. ವಿಶ್ವವಾದ ಅತ್ಯಂತ ಹತ್ತು ಶಕ್ತಿಶಾಲಿ ಸೇನೆಯಲ್ಲಿ ಒಂದಾಗಿ ಭಾರತೀಯ ಸೇನೆಯು ಗುರುತಿಸಿಕೊಂಡಿದೆ. ಇದರಲ್ಲಿ ಭಾರತಕ್ಕೆ ಯಾವ ಸ್ಥಾನವಿದೆ. ಉಳಿದ ಒಂಬತ್ತು ದೇಶಗಳು ಯಾವುದು ? ಇಲ್ಲಿದೆ ಸಂಪೂರ್ಣ ಮಾಹಿತಿ.

Indus Waters Treaty: ಸಿಂಧೂ ನದಿ ನೀರು ಒಪ್ಪಂದ ಮುರಿಯುವುದರಿಂದ ಪಾಕಿಸ್ತಾನಕ್ಕೆ ಬೀಳುತ್ತಾ ದೊಡ್ಡ ಹೊಡೆತ? ಇಲ್ಲಿದೆ ಡಿಟೇಲ್ಸ್‌?

ಏನಿದು ಸಿಂಧೂ ನದಿ ನೀರು ಒಪ್ಪಂದ? ಇಲ್ಲಿದೆ ಡಿಟೇಲ್ಸ್‌

ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಬಳಿ ಮಂಗಳವಾರ ನಡೆದ ಉಗ್ರರ ದಾಳಿ(Pahalgam terror attack)ಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ ಬಳಿಕ ಪಾಕಿಸ್ತಾನಕ್ಕೆ ಭಾರತ ಬಹುದೊಡ್ಡ ಶಾಕ್ ನೀಡಿದೆ. ಇದರಲ್ಲಿ ಸಿಂಧೂ ನದಿ ನೀರು ಒಪ್ಪಂದ ರದ್ದು ಕೂಡ ಒಂದಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವು ದಶಕಗಳಿಂದ ಇದ್ದ ಈ ಒಪ್ಪಂದ ರದ್ದಾಗಿರುವುದರಿಂದ ಪಾಕಿಸ್ತಾನದಲ್ಲಿ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

Pahalgam Terror Attack: ಉಗ್ರ ಹಣೆ ಮೇಲೆ ಬಂದೂಕು ಇಟ್ಟಾಗ ಕಲಿಮಾ ಪಠಿಸಿ ಪಾರಾದ ಪ್ರೊಫೆಸರ್

ಉಗ್ರರೆದುರು ಕಲಿಮಾ ಪಠಿಸಿ ಜೀವ ಉಳಿಸಿಕೊಂಡ ಪ್ರೊಫೆಸರ್

ಬಂದೂಕುಧಾರಿಯಾಗಿ ಉಗ್ರ (Terrorist) ಎದುರು ಬಂದು ನಿಂತಾಗ ಎಂತವರ ಗುಂಡಿಗೆಯು ಒಮ್ಮೆ ನಿಂತು ಹೋಗುತ್ತದೆ. ಆದರೆ ಅಸ್ಸಾಂ ಪ್ರೊಫೆಸರ್ ಮಾತ್ರ ಉಗ್ರನೆದುರು ಕಲ್ಮಾ ಪಠಣ ಮಾಡಿ ತನ್ನ ಮತ್ತು ಪತ್ನಿಯ ಜೀವ ಉಳಿಸಿಕೊಂಡಿದ್ದಾರೆ. ಈ ಘಟನೆ ಮಂಗಳವಾರ ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ನಡೆದಿದೆ.

Pahalgam Terror Attack: ಪಾಕಿಸ್ತಾನಿ ಸೇನಾ ಮುಖ್ಯಸ್ಥರಿಂದಲೇ ಪಹಲ್ಗಾಮ್‌ ದಾಳಿಗೆ ಪ್ರಚೋದನೆ ?

ಉಗ್ರರಿಗೆ ಪ್ರಚೋದನೆ ನೀಡಿದ ಪಾಕಿಸ್ತಾನಿ ಸೇನಾ ಮುಖ್ಯಸ್ಥ

ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ದಾಳಿಗೆ ಪಾಕಿಸ್ತಾನಿ ಸೇನಾ ಮುಖ್ಯಸ್ಥರೇ ಪ್ರಚೋದನೆ ನೀಡಿರುವುದಾಗಿ ಭಾರತೀಯ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಅಹ್ಮದ್ ಶಾ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಶ್ಮೀರವನ್ನು ಪಾಕಿಸ್ತಾನದ ಕುತ್ತಿಗೆಯ ರಕ್ತನಾಳ ಎಂದಿರುವುದು ಮಾತ್ರವಲ್ಲ ಕಾಶ್ಮೀರ, ದ್ವಿರಾಷ್ಟ್ರ ಸಿದ್ಧಾಂತ, ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ವಿಭಜನೆಯ ಕುರಿತು ಹೇಳಿಕೆಗಳನ್ನು ನೀಡಿದ್ದಾರೆ. ಇದು ಉಗ್ರರಿಗೆ ಪ್ರಚೋದನೆ ನೀಡಿದಂತಾಗಿದೆ ಎನ್ನಲಾಗಿದೆ.

Vastu Tips: ಮಹಡಿ ಮೇಲಿನ ಶೌಚಾಲಯದಿಂದ ಎಷ್ಟೆಲ್ಲ ಸಮಸ್ಯೆ ಇದೆ ಗೊತ್ತೇ?

ಮಹಡಿ ಮೇಲೆ ಶೌಚಾಲಯ ನಿರ್ಮಾಣ ಸರಿಯೇ ?

ಮನೆಯ ಶೌಚಾಲಯದಿಂದಲೇ ಹೆಚ್ಚಿನ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಹೀಗಾಗಿ ಮನೆಯ ಶೌಚಾಲಯಕ್ಕೆ ಸಂಬಂಧಿಸಿ ವಾಸ್ತು ನಿಯಮಗಳನ್ನು (vastu Tips) ಪಾಲಿಸುವುದು ಅತ್ಯಗತ್ಯ. ಒಂದು ವೇಳೆ ಈ ನಿಯಮಗಳನ್ನು ಪಾಲಿಸದಿದ್ದರೆ ಮನೆಯಲ್ಲಿ ಕೆಟ್ಟ ಪರಿಣಾಮಗಳು ಗೋಚರವಾಗತೊಡಗುತ್ತದೆ. ಇದರಿಂದ ಏನೆಲ್ಲಾ ಸಮಸ್ಯೆಗಳು ಉದ್ಭವಾಗುತ್ತದೆ ಗೊತ್ತೇ? ಈ ಬಗ್ಗೆ ವಾಸ್ತು ತಜ್ಞರು ಹೇಳುವುದು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.